POLICE BHAVAN KALABURAGI

POLICE BHAVAN KALABURAGI

22 October 2014

Gulbarga District Reported Crimes

ಕೊಲೆ ಪ್ರಕರಣ :
ಸೇಡಂ ಠಾಣೆ : ಶ್ರೀ ಸಾಬಣ್ಣ ತಂದೆ ಅಮೃತಪ್ಪ ತೊಟ್ನಳ್ಳಿ  : ಅಗಸಿ ಸೇಡಂ ತಾ: ಸೇಡಂ ಜಿ: ಗುಲಬರ್ಗಾ  ರವರ ತಮ್ಮನಾದ ಮಲ್ಲಿನಾಥ  ಇವರ ಹೆಸರಿನಲ್ಲಿದ್ದ ಮೈನೊದ್ದಿನ್ ಹೊಲದ ಹತ್ತಿರ ರಸ್ತೆಯ ಮೇಲೆ ಜನರು ನಿಂತ್ತಿರುವುದನ್ನು ಕಂಡು ಹತ್ತಿರ ಬಂದು ನೋಡಿದಾಗ ನಮ್ಮ ಹೊಲದ ಬಂಡಿದಾರಿಯ ಪಕ್ಕದಲ್ಲಿ ಆರೀಫ್ ಇವರ ಬೀಳು ಹೊಲದ  ದಂಡೆಗೆ ಹೊಂದಿಕೊಂಡಿರುವ ಕಡ್ಲಿ ಹೊಲದಲ್ಲಿ ಒಬ್ಬ ಅಪರಿಚಿತ ಹೆಣ್ಣು ಮಗಳು  ಸತ್ತು ಬಿದ್ದಿದ್ದು ಹತ್ತಿರ ಹೋಗಿ ನೋಡಲಾಗಿ ಅಂದಾಜ 30 ವರ್ಷದ ಅಪರಿಚಿತ ಹೆಣ್ಣು ಮಗಳ ಶವವಿದ್ದು  ಶವದ ಮೈಮೇಲೆ  ಹಸಿರು ಬಣ್ಣದ ಗೆರಯುಳ್ಳ ಚಮಕಿ ಸೀರೆ ಮತ್ತು ಅದೇ ಬಣ್ಣದ  ಜಂಪರ ಹಾಕಿದ್ದು ಅವಳ ಎಡಗೈ ಮೇಲೆ ರಕ್ತಗಾಯವಾಗಿದ್ದು ಹೊಟ್ಟೆಯ ಮೇಲೆ ಕಂದುಗಟ್ಟಿದ್ದು ಬಲಮೊಳಕೈಗೆ ತರಚಿದ ಗಾಯ ಮತ್ತು ಎಡಗಾಲಿನ ಪಾದದ ಮೇಲೆ ತರಚಿದ ಗಾಯ , ಎಡಗೈ ಮುಂಗೈ ಮೇಲೆ ಇಂಗ್ಲೀಷಿನಲ್ಲಿ SUNITA  ಅದರ ಕೇಳಗಡೆ ಕನ್ನಡದಲ್ಲಿ ಶಂಕ್ರಮ್ಮ ಅಂತಾ ಹಣಚೆಬಟ್ಟು ಬರೆದಿದ್ದು  ಇರುತ್ತದೆ  ಎಡಗೈ ಮೇಲೆ ಗಾಯದ ಗುರುತುಗಳು ಇರುತ್ತವೆ , ಕುತ್ತಿಗೆಯ ಸುತ್ತಲೂ ರಕ್ತ ಕಂದುಗಟ್ಟಿದ ಗಾಯ ಕಂಡು ಬರುತ್ತದೆ  ಕುತ್ತಿಗೆಯ ಮೇಲೆ ಬಲಗೈ ಬಿದ್ದಿದ್ದು ಇರುತ್ತದೆ  ಕಾರಣ ಯಾರೋ ದುಷ್ಕರ್ಮಿಗಳು ದಿನಾಂಕ: 20/10/14 ರ ಸಾಯಾಂಕಾಲ 1800 ಗಂಟೆಯಿಂದ  ದಿನಾಂಕ: 21/10/14ರ  ಬೆಳಿಗ್ಗೆ 1000 ಗಂಟೆಯ ಮಧ್ಯದ ಸಮಯದಲ್ಲಿ  ಸದರಿ ಹೆಣ್ಣು ಮಗಳಿಗೆ ಯಾವುದೋ ಕಾರಣಕ್ಕಾಗಿ ಇಲ್ಲಿಗೆ ಕರೆತಂದು ಕುತ್ತಿಗೆ ಹಿಚುಕಿ ಹೊಡೆಬಡೆ ಮಾಡಿ ಕೊಲೆ ಮಾಡಿ ಹೋಗಿರಬಹುದು ಅಂತಾ ಶವ ನೋಡಿಗಾದ ಕಂಡು ಬರುತ್ತದೆ  ಕಾರಣ ಸದರಿ ಕೃತ್ಯ ಮಾಡಿದ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಅಲ್ಲದೆ ಕೊಲೆಯಾದ ಹೆಣ್ಣುಮಗಳ  ಬಗ್ಗೆ  ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ ಅಕ್ಬರ ಭಾಷಾ  ತಂದೆ ಶೇಖ ಲಾಡ್ಲೇ ಸಾ : ಖಾಜಾ ಕಾಲೋನಿ ಗುಲಬರ್ಗಾ ರವರ ಮಗ ಮಹಮ್ಮದ ಆರೀಫ  ಇವನು ದಿನಾಂಕ  21.10.14 ರಂದು ಮಧ್ಯಾನ 3.00 ಗಂಟೆ ಸುಮಾರಿಗೆ ಮಾರ್ಕೆಟನಲ್ಲಿ ಕೆಲಸ ಇದೆ ಹೋಗಿ ಬರುತ್ತೇನೆ ಅಂತ ನನ್ನ ಮಗ ನನ್ನ ಮೋಟಾರ ಸೈಕಲ ನಂ ಕೆಎ 32 ಎಸ್.2402 ನೇದ್ದನು  ತೆಗೆದುಕೊಂಡು ಹೋದನು ಅಂದಾಜ 5.30 ಪಿಎಮ್ ಸುಮಾರಿಗೆ ವಿಶ್ವವಿದ್ಯಾಲುಯ ಪೊಲೀಸ ಠಾಣೆಯ ಸಿಬ್ಬಂದಿಯವರು ನಿಮ್ಮ ಮಗ ಹಾಗರಗಾ ಮತ್ತು ಖಾಜಾ ಕೋಟನೂರ ಮಧ್ಯದಲ್ಲಿ ರಸ್ತೆಯ ಮೆಲೆ ಅತೀ ವೇಗದಿಂದ ಮತ್ತು ಅಲಕ್ಷತನದಿಂದ ತನ್ನ ದ್ವಿಚಕ್ರ ವಾಹನ ನಡೆಸಿ ವೇಗದ ನಿಯಂತ್ರಣ ತಪ್ಪಿ ರಸ್ತೆಯ ಎಡಗಡೆ ತೆಗ್ಗಿನಲ್ಲಿ ಬಿದ್ದು ತಲೆ ಕಲ್ಲಿಗೆ ತಾಗಿ ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ನೀವು ಕೂಡಲೆ ಬನ್ನಿ ಅಂತ ತಿಳಿಸಿದ ಪ್ರಯುಕ್ತ ನಾನು ಬಂದು ನೋಡಲು ನನ್ನ ಮಗನಿಗೆ ತಲೆಗೆ ಕಲ್ಲು ತಾಗಿ ಭಾರಿ ರಕ್ತಗಾಯವಾಗಿ ಮೃತಪಟ್ಟಿದ್ದು ನಿಜವಿದ್ದು ಈ ಘಟನೆಯು ಅಂದಾಜು 4.30 ರಿಂದ 5.00 ಗಂಟೆ ಅವಧಿಯಲ್ಲಿ ಜರುಗಿರುತ್ತದೆ,  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ದೊಡ್ಡಪ್ಪ ತಂದೆ ಮಲ್ಲಪ್ಪ ಪೂಜಾರಿ ಸಾ: ಗುಡೂರ .ಎಸ್.ಎ. ಇವರು ದಿನಾಂಕ 20-10-2014 ರಂದು ರಾತ್ರಿ 8-00 ಗಂಟೆಗೆ ನಮ್ಮೂರಲ್ಲಿ ಶ್ರೀ ರಾಮಸೇನೆಯ ಕಟ್ಟೆಯ ಉದ್ಥಾಟನೆಯ ಕಾರ್ಯಕ್ರಮದಲ್ಲಿ ಸಿದ್ದಲಿಂಗಯ್ಯಾ ಸ್ವಾಮಿ ಮತ್ತು ಶ್ರೀ ರಾಮ ಸೇನೆಯ ಕಾರ್ಯಕರ್ತರು ನನಗೆ ನೀನು ಮುಸ್ಲಿಂ ಸಮುದಾಯಕ್ಕೆ ಸಪೋರ್ಟ ಮಾಡುತ್ತಿ ಈ ಕಾರ್ಯಕ್ರದಲ್ಲಿ ಯಾಕೇ ಬಂದಿದ್ದಿ ಅಂತ ಅಚಾಚ್ಯವಾಗಿ ಬೈದು ಖುರ್ಚಿಯಿಂದ ಹೊಡೆದು ಮೈಮೇಲಿನ ದೋತ್ರ ಹರಿದು ಮುಂದಕ್ಕೆ ಹೋಗದಂತೆ ನಡೆದು ನಿಲ್ಲಿಸಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರೆಕರಣ ದಾಖಲಾಗಿದೆ.