POLICE BHAVAN KALABURAGI

POLICE BHAVAN KALABURAGI

19 January 2018

KALABURAGI DISTRICT REPORTED CRIMES

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ  ವಿರೇಶ ತಂದೆ ವೀರುಪಾಕ್ಷಪ್ಪ ಸರಡಗಿ ಸಾ;ಹರಸೂರ ತಾ:ಜಿ:ಕಲಬುರಗಿ ಇವರು ಭಾರತ ಪೈನಾನ್ಸ ಇನಕ್ಲೂಶನ ಲಿಮಿಟೆಡ್‌‌ (ಎಸ್.ಕೆ.ಎಸ್.ಮೈಕ್ರೋ ಪೈನಾನ್ಸ ಲಿಮಿಟೆಡ್) ಸ್ವಾಮಿ ವಿವೇಕಾನಂದ ನಗರದಲ್ಲಿ ಸುಮಾರು 5 ವರ್ಷದಿಂದ ಇದ್ದು ಸದರಿ ನಮ್ಮ ಕಛೇರಿಯನ್ನು ದಿನಾಂಕ:13/01/2018 ರಂದು ಮಧ್ಯಾನ 3.30 ಗಂಟೆಗೆ ಬಂದ ಮಾಡಿಕೊಂಡು ಕಛೇರಿಗೆ ಕೀಲಿ ಹಾಕಿಕೊಂಡು ನಾವು ಹೋಗಿದ್ದು ಇರುತ್ತದೆ. ದಿನಾಂಕ:14/01/2018 ರಂದು ರಾತ್ರಿ 8.00 ಗಂಟೆಗೆ ನಮ್ಮ ಫೀಲ್ಡ ಸಹಾಯಕರಾದ ಶ್ರೀ ಆನಂದ ಗಂಜಗೋಳ ಮತ್ತು ಕ್ಯಾಶಿಯರಾದ ಅನೀಲ ಶೇರಿಕಾರ ಇವರು ನಮ್ಮ ಕಛೇರಿಗೆ ಬಂದು ನೋಡಿದಾಗ ನಮ್ಮ ಕಛೇರಿಯ ಬಾಗಿಲಕ್ಕೆ ಹಾಕಿರು ಕೀಲಿ ಮೂರಿದಿದ್ದು ಆಗ ಸದರಿ ಆನಂದ ಇವರು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದು ಆಗ ನಾನು ಅವರಿಗೆ ನನಗೆ ಸಧ್ಯ ಬರುವದು ಆಗುವದಿಲ್ಲ ನಾನು ನಮ್ಮ ಗ್ರಾಮದಲ್ಲಿ ಇದ್ದೇನೆ ನೀವು ಕಛೇರಿಗೆ ಒಳಗಡೆ ಹೋಗಿ ನೋಡಿರಿ ಅಂತ ಹೇಳಿದ್ದು ಆಗ ಆನಂದ ಮತ್ತು ಅನೀಲ ಇಬ್ಬರೂ ಕಛೇರಿಯ ಒಳಗಡೆ ಹೋಗಿ ನೋಡಿ ನನಗೆ ಮತ್ತೆ ಪೋನ ಮಾಡಿ ತಿಳಿಸಿದ್ದೆನೆಂದರೆ, ನಮ್ಮ ಕಛೇರಿಯಲ್ಲಿದ್ದ 1) 3 ಸ್ಯಾಮಸಂಗ್ ಗ್ಯಾಲಕ್ಷಿ ಟ್ಯಾಬ್ಗಳು ಒಂದರ ಅಂದಾಜ ಕಿಮ್ಮತ್ತು 7000/-ರೂ 2)ಒಂದು ಸ್ಯಾಮಸಂಗ್ ಮೊಬೈಲ್ ಮೌಲ್ಯ ರೂ.1000/-ರೂ ಹಾಗೂ ನಗದು ಚಿಲ್ಲರೆ ಹಣ 400/-ರೂ ಹೀಗೆ ಒಟ್ಟು 22400/- ರೂ ಕಿಮ್ಮತ್ತಿನ ವಸ್ತುಗಳು ಕಳ್ಳತನವಾಗಿರುತ್ತವೆ ಅಂತಾ ತಿಳಿಸಿದ್ದು ಇರುತ್ತದೆ. ದಿನಾಂಕ:15/01/2018 ರಂದು ನಾನು ನಮ್ಮ ಕಛೇರಿಗೆ ಬಂದು ನೋಡಲು ಕಳ್ಳತನವಾಗಿರುವದು ನಿಜವಾಗಿದ್ದು ನಂತರ ನಾನು ನಮ್ಮ ಮೇಲಾಧಿಕಾರಿಗಳಿಗೆ ನಮ್ಮ ಕಛೇರಿ ಕಳ್ಳತನವಾದ ಬಗ್ಗೆ ಮಾತನಾಡಿ ದಿನಾಂಕ:18/01/2018/ ರಂದು ಠಾಣೆಗೆ ಬಂದಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನಂಬಿಕೆ ದ್ರೋಹ ಮಾಡಿ ಮೋಸ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ  ಮಹ್ಮದ ಕರೀಮ್ ತಂದೆ ಜೈನೊದ್ದಿನ್ ಮಂಗಲಗಿರಿ ಸಾ|| ಮಣೂರ ಇವರು ತಮ್ಮೂರಿನ ವ್ಯೆವಸಾಹ ಸೇವಾ ಸಹಕಾರ ಸಂಘ ಇದರ ಮೂಖಾಂತರ ತಮ್ಮ ಹೊಲದಲ್ಲಿ ಪೈಪಲೈನ್ ಕೋಳವೆ ಹಾಗೂ ವಿದ್ಯೂತ್ ಮೋಟಾರ ಹಾಗೂ ಅದರ ಉಪಕರಣಗಳ ಖರೀದಿಗಾಗಿ ಸಾಲಕ್ಕಾಗಿ ಅರ್ಜಿಸಲ್ಲಿಸಿದ ಮೇರೆಗೆ, ನನಗೆ ದಿನಾಂಕ 25-09-2012 ರಂದು 4,33,000/- ರೂ ಸಾಲ ಮಂಜೂರಾಗಿದ್ದು, ಮಂಜೂರಾತಿ ಆದೇಶ ದಿನಾಂಕ 09-04-2013 ರಂದು ನಿಡಲಾಗಿರುತ್ತದೆ.  ನನಗೆ ಮಂಜೂರಾದ ಒಟ್ಟು 4,33,000/- ರೂಪಾಯಿಗಳಲ್ಲಿ 1,56,000/- ರೂಪಾಯಿಗಳನ್ನು ಗುಲಬರ್ಗಾ ಮತ್ತು ಯಾದಗಿರ ಜಿಲ್ಲಾ ಸಹಕಾರಿ ಕೆಂದ್ರ ಬ್ಯಾಂಕ ನಿ. ಕಲಬುರಗಿಯ ನನ್ನ ಬ್ಯಾಂಕ ಖಾತೆ ನಂಬರ 697050023999 ನೇದ್ದಕ್ಕೆ ಜಮಾ ಮಾಡಿರುತ್ತಾನೆ. ಸದರಿ ಜಮಾ ಮಾಡಿದ ಹಣವನ್ನು ನಾನು ಬಿಡಿಸಿಕೊಂಡು ಕೃಷಿ ಕಾರ್ಯಕ್ಕೆ ಉಪಯೋಗಿಸಿಕೊಂಡಿರುತ್ತೇನೆ. ಉಳಿದ 3,53,000/- ರೂ ಸಾಲದ ಹಣವನ್ನು ವಿದ್ಯೂತ್ ಉಪಕರಣ, ಪೈಪುಗಳು ಒದಗಿಸುವಂತೆ ಮೇ: ಡೆಕ್ಕನ್ ಇರಿಗೇಷನ್ ಸಿಸ್ಟಂ ಅಫಜಲಪೂರ ಅಂಗಡಿಯವರಿಗೆ, ಮಣೂರ ಸಹಕಾರ ಸಂಘದ (ಸೋಸೈ         ಟಿ) ಯ ಕಾರ್ಯದರ್ಶಿಗಳಾದ 1) ಬಸವರಾಜ ತಂದೆ ಬುದ್ದಪ್ಪ ಬೇನೂರ 2) ಜಗು ತಂದೆ ಬಸವರಾಜ ಬೇನೂರ ಸಾ|| ಇಬ್ಬರು ಮಣೂರ ಇವರಿಬ್ಬರೂ ಕೂಡಿ ನನಗೆ ವಿದ್ಯೂತ್ ಉಕರಣಗಳನ್ನು ಹಾಗೂ ಪೈಪುಗಳನ್ನು ಒದಗಿಸುವಂತೆ ನನಗೆ ಮಂಜೂರಾದ ಸಾಲದ ಹಣದಲ್ಲಿ 3,53,000/- ರೂ ಹಣವನ್ನು ಸಂದಾಯ ಮಾಡುತ್ತೇವೆ ಅಂತಾ ತಿಳಿಸಿರುತ್ತಾರೆ. ಆದರೆ ಸದರಿ ಅಂಗಡಿಯವರು ನನಗೆ ಯಾವುದೆ ರೀತಿ ಉಪಕರಣಗಳನ್ನು ಕೊಟ್ಟಿರುವುದಿಲ್ಲ. ಸದರಿ ಮಣೂರ ವ್ಯೆವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿಗಳಾದ 1) ಬಸವರಾಜ ತಂದೆ ಬುದ್ದಪ್ಪ ಬೇನೂರ 2) ಜಗು ತಂದೆ ಬಸವರಾಜ ಬೇನೂರ ಸಾ|| ಇಬ್ಬರು ಮಣೂರ ಇವರು ನನಗೆ ಮಂಜೂರಾದ ಸಾಲದ ಹಣದಲ್ಲಿ 1,56,000/- ರೂ ಹಣವನ್ನು ನನ್ನ ಖಾತೆಗೆ ಜಮಾ ಮಾಡಿ ಉಳಿದ 3,53,000/- ರೂ ಹಣವನ್ನು ತಮ್ಮ ಸ್ವಂತಕ್ಕೆ ಉಯೋಗಿಸಿಕೊಂಡು ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿರುತ್ತಾರೆ. ಸದರಿ ಸೋಸೈಟಿ ಕಾರ್ಯದರ್ಶೀಗಳಾದ ಬಸವರಾಜ ಮತ್ತು ಜಗು ಇವರು ನನಗೆ ಮೋಸ ಮಾಡಿದ ಹಾಗೆ ಸಿದ್ದಪ್ಪ ತಂದೆ ಶಂಕ್ರೇಪ್ಪ ರಾವಳೆ ಸಾ|| ಮಣೂರ ಹಾಗೂ ರೇವಣಸಿದ್ದ ತಂದೆ ಪರಶೆಟ್ಟೆಪ್ಪ ನಾಗೂರ ಸಾ|| ಹೈದ್ರಾ ಇವರಿಗೂ ಸಹ ಮೋಸ ಮಾಡಿ ಅವರ ಸಾಲದ ಹಣವನ್ನು ಸಹ ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡಿರುತ್ತಾರೆ. ಈ ವಿಷಯವಾಗಿ ನಾವು ಮೂರು ಜನರು ಕೂಡಿ ಸದರಿ ಬಸವರಾಜ ಮತ್ತು ಜಗು ಇವರಿಬ್ಬರ ಮೇಲೆ ಲೋಕಾಯುಕ್ತ ರವರಿಗೆ ಅರ್ಜಿ ಸಲ್ಲಿಸಿರುತ್ತೇವೆ. ದಿನಾಂಕ 18-01-2018 ರಂದು ತಾವುಗಳು ನನ್ನನ್ನು ಪೊಲೀಸ್ ಠಾಣೆಗೆ ಕರೆಸಿ, ನಾನು ಈಗಾಗಲೆ ಲೋಕಾಯುಕ್ತ ರವರಲ್ಲಿ ಸಲ್ಲಿಸಿದ ಅರ್ಜಿಯ ಬಗ್ಗೆ ವಿಚಾರಿಸಿದ್ದು, ಲೋಕಾಯುಕ್ತ ಬೆಂಗಳೂರ ರವರಿಂದ ಸದರಿ ವಿಷಯದ ದಾಖಲಾತಿಗಳು ಬಂದಿರುತ್ತವೆ. ಮಣೂರ ವ್ಯೆವಸಾಹ ಸೇವಾ ಸಹಕಾರ ಸಂಘದ ಕಾರ್ಯದರ್ಶಿಗಳಾದ 1) ಬಸವರಾಜ ತಂದೆ ಬುದ್ದಪ್ಪ ಬೇನೂರ 2) ಜಗು ತಂದೆ ಬಸವರಾಜ ಬೇನೂರ ಸಾ|| ಇಬ್ಬರು ಮಣೂರ ಇವರು ನನಗೆ ಮಂಜೂರಾದ ಸಾಲದ ಹಣದಲ್ಲಿ 1,56,000/- ರೂ ಹಣವನ್ನು ನನ್ನ ಖಾತೆಗೆ ಜಮಾ ಮಾಡಿ ಉಳಿದ 3,53,000/- ರೂ ಹಣವನ್ನು ತಮ್ಮ ಸ್ವಂತಕ್ಕೆ ಉಯೋಗಿಸಿಕೊಂಡಿರುತ್ತಾರೆ. ನನ್ನಂತೆ ಸಿದ್ದಪ್ಪ ತಂದೆ ಶಂಕ್ರೇಪ್ಪ ರಾವಳೆ ಸಾ|| ಮಣೂರ ಹಾಗೂ ರೇವಣಸಿದ್ದ ತಂದೆ ಪರಶೆಟ್ಟೆಪ್ಪ ನಾಗೂರ ಸಾ|| ಹೈದ್ರಾ ಇವರಿಗೂ ಸಹ ಸೋಸೈಟಿಯಲ್ಲಿ ಮಂಜೂರಾದ ಹಣವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡು ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ-17/01/2018 ರಂದು 7-30 ಗಂಟೆ ಸುಮಾರಿಗೆ ಶ್ರೀಮತಿ ಮಮ್ತಾಜ ಬೇಗಂ ಗಂಡ ಹಸನ ಪಟೇಲ ಸಾ ಸಿದ್ದೇಶ್ವರ ನಗರ ಗಾಜಿಪೂರ ಕಲಬುರಗಿ ರವರ ಗಂಡನಾದ ಹಸನ ಪಟೇಲ್ ಈತನು ಕೆ.ಜಿ.ಎನ್ ಕಾಂಪ್ಲೇಕ್ಸ್ ಕಡೆಯಿಂದ ನ್ಯಾಶನಲ್ ಕಾಲೇಜ ಗೇಟ ಕಡೆಗೆ ನಡೆದುಕೊಂಡು ರಸ್ತೆ ದಾಟುತ್ತಿರುವಾಗ ಮೋಟಾರ ಸೈಕಲ ನಂ: ಕೆಎ-32 ಇಎಂ-4064 ನೇದ್ದರ ಸವಾರ ಗೌಸ್ ಪಟೇಲ್ ಈತನು ತನ್ನ ಮೋಟಾರ ಸೈಕಲ ಮೇಲೆ ಹಿಂದುಗಡೆ ಅಲ್ಲಾವುದ್ದೀನ ಪಟೇಲ್ ಈತನಿಗೆ ಕೂಡಿಸಿಕೊಂಡು ತನ್ನ ಮೋಟಾರ ಸೈಕಲನ್ನು ಸಂತ್ರಾಸವಾಡಿ ರೋಡ ಕಡೆಯಿಂದ ಅತಿವೇಗವಾಗಿ & ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಸನ ಪಟೇಲ್ ಈತನಿಗೆ ಡಿಕ್ಕಿ ಪಡಿಸಿ ಮೋಟಾರ ಸೈಕಲ ಸಮೇತ ಕೆಳಗೆ ಬಿಳಿಸಿದ್ದರಿಂದ  ಅಲ್ಲಾವುದ್ದೀನ ಪಟೇಲ್ ಈತನಿಗೆ ರಕ್ತಗಾಯಗೊಳಿಸಿ  ಹಸನ ಪಟೇಲ್ ಈತನ ತಲೆಗೆ ಭಾರಿ ಪೆಟ್ಟುಗೊಳಿಸಿ ತಾನು ಕೂಡ ಭಾರಿ ಗಾಯಹೊಂದಿದ್ದು ಇರುತ್ತದೆ. ಹಸನ ಪಟೇಲ್ ಈತನು ದಿನಾಂಕ 17/01/2018 ರಂದು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಉಪಚಾರ ಹೊಂದುತ್ತಾ ರಸ್ತೆ ಅಪಘಾತದಲ್ಲಿ  ಆದ ಗಾಯ ವಾಸಿಯಾಗದೆ ಇಂದು ದಿನಾಂಕ  18/01/2018 ರಂದು ಬೆಳಿಗ್ಗೆ ಮೃತಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.