POLICE BHAVAN KALABURAGI

POLICE BHAVAN KALABURAGI

24 February 2013

GULBARGA DISTRICT REPORTED CRIMES


ಬಂಗಾರದ ಆಭರಣ ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ:22/02/2013 ರಂದು ಮಧ್ಯಾಹ್ನ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗುವ ಕುರಿತು ನನ್ನ ತಾಯಿಯವರು ತಯ್ಯಾರಾಗುವ ಕುರಿತು ಬಂಗಾರದ ಆಭರಗಣಗಳು  ಟೇಬಲ್ ಮೇಲಿಟ್ಟಿದ್ದು, ನಮ್ಮ ಮನೆಯಲ್ಲಿ ಕೆಲಸ ಮಾಡುವ ಪಾರ್ವತಿ ಗಂಡ ರೇವಣಸಿದ್ದಪ್ಪಾ ಇವಳ ಮಗಳಾದ ಸಿದ್ದಮ್ಮಾ  ಇವರು ಮನೆಗೆ ಬಂದಿದ್ದಳು. ನನ್ನ ತಾಯಿಯವರದ ಬಂಗಾರದ ಮಂಗಳಸೂತ್ರ  7.5 ತೊಲೆ ಅ:ಕಿ: 2,25,000/-  ರೂ., ಒಂದು ಉಂಗುರ 0.5 ತೊಲೆ ಅ:ಕಿ: 15000/- ರೂ. ಒಂದು ಹರಳಿನ ಉಂಗುರ 0.5 ತೊಲೆ ಅ:ಕಿ: 15,000/- ರೂ. ಮತ್ತು ನಗದು ಹಣ 1700/- ರೂಪಾ ಇರುವ ಪಾಕೇಟ ಹೀಗೆ ಒಟ್ಟು 2,56,700/- ರೂಪಾ ಮೌಲ್ಯದ ಬಂಗಾರದ ಆಭರಣಗಳು ಮತ್ತು ಟೇಬಲ್ ಮೇಲಿಟ್ಟಿರುವವು  ಕಳ್ಳತನವಾಗಿರುತ್ತವೆ. ಮನೆ ಕೆಲಸದವಳಾದ ಪಾರ್ವತಿ ಗಂಡ ರೇವಣಸಿದ್ದಪ್ಪಾ ಮತ್ತು ಅವಳ ಮಗಳಾದ ಸಿದ್ದಮ್ಮಾ ರವರ ಮೇಲೆ ಸಂಶಯ ಇರುತ್ತದೆ. ನಾವು ಅವರಿಗೆ ವಿಚಾರಣೆ ಮಾಡಿದಾಗ ಕಲ್ಲಿನಲ್ಲಿ ಮುಚ್ಚಿಟ್ಟಿರುವುದಾಗಿ ತಿಳಿಸಿದ್ದರಿಂದ ನಾವು ಅವರಿಗೆ ಕರೆದುಕೊಂಡು ಹುಡುಕಿದರು ಸಹ ಸಿಕ್ಕಿರುವುದಿಲ್ಲಾ ಅಂತಾ ಶ್ರೀ, ಸೊಮನಾಥ ತಂದೆ ಬಾಬುರಾವ ಮಾಲಿ ಪಾಟೀಲ ಉ: ಉಪನ್ಯಾಸಕ ಸಾ:ನೇತಾಜಿ ನಗರ ನವಣೆ ಲೇಔಟ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.28/2013 ಕಲಂ 381 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ಶ್ರೀಮತಿ ಖೈರೂನಾ ತಿಜ್ವಾನ ಗಂಡ ಸೈಯದ್ ಅಯೂಬ್ ಸಾ: ಧಖನ ಮಹೊಲ್ಲಾ  ಶೋರಾಪೂರ ಹಾ:ವ:ಮಿಜಗುರಿ ರೋಜಾ ಗುಲಬರ್ಗಾ ರವರು ನಮ್ಮ ಸ್ವಂತ ಊರು ಸುರಪೂರ ಪಟ್ಟಣವಾಗಿದ್ದು ನನ್ನ ಗಂಡನಾದ ಸೈಯದ್ ಅಯೂಬ್ ಇತನು ಸುರಪೂರದ ತಾಲೂಕಾ ಮುನ್ಸಿಪಾಲ ಕಛೇರಿಯಲ್ಲಿ ಫೀಟರ ಅಂತಾ ಕೆಲಸ ಮಾಡುತ್ತಿದ್ದು, ದಿನಾಂಕ:23/2/2013 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ನನ್ನ ಗಂಡನ ಮೊಬೈಯಲ್‌‌ದಿಂದ ಯಾರೋ ಪೋನ ಮಾಡಿ ಈ ಪೋನ ಯಾರದು ಎಂದು ಕೇಳಿದಾಗ ಇದು ನನ್ನ ಗಂಡ ಸೈಯದ್ ಅಯೂಬ್ ಇತನದು ಇದ್ದು, ಇವನು ಸುರಪೂರದಲ್ಲಿ ಮುನ್ಸಿಪಾಲ ಕಛೆರಿಯಲ್ಲಿ ಕೆಲಸ ಮಾಡುತ್ತಾನೆ ಏನಾಗಿದೆ ಅಂತಾ ಕೇಳಿದಾಗ ಅವರು ಹಿರೋಹೊಂಡಾ ನಂಬರ ಕೆಎ-33 ಜೆ-571 ನೇದ್ದರ ಮೇಲೆ ಫಿರೋಜಾಬಾದ ದರ್ಗಾದ ಹತ್ತಿರ ಜೇವರ್ಗಿ ಕಡೆಯಿಂದ ಅತಿವೇಗ ಹಾಗೂ ನಿಷ್ಕಾಳಿಜಿತನದಿಂದ ನಡೆಯಿಸಿಕೊಂಡು ಎದುರಿಗೆ ಬರುತ್ತಿದ್ದ ಎತ್ತಿನ ಬಂಡಿಗೆ ಡಿಕ್ಕಿ ಪಡಿಸಿ ಕೆಳಗೆ ಬಿದ್ದಿದರಿಂದ ತಲೆಗೆ ಹಾಗೂ ಮೆಲಿಕಿನ ಹತ್ತಿರ ಭಾರಿ ಪೆಟ್ಟಾಗಿದ್ದು, ಉಪಚಾರ ಕುರಿತು 108  ವಾಹನದಲ್ಲಿ ಉಪಚಾರಕ್ಕೆ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಗಾಬರಿಗೊಂಡು ನನ್ನ ಭಾವ ಸೈಯದ ಯೂನಸ ಹಾಗೂ ಇತರರು ಕೂಡಿಕೊಂಡು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಗಂಡ ಸೈಯದ ಅಯೂಬ್ ಇತನಿಗೆ ಪರೀಕ್ಷಿಸಿದ ವೈಧ್ಯಾಧಿಕಾರಿಗಳು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ನನ್ನ ಗಂಡನಿಗೆ ಬಲಭಾಗದ ಮೆಲಕಿನ ಹತ್ತಿರ ಹಣೆಗೆ ತೆರಚಿದ ಗಾಯವಾಗಿದ್ದು ಎದೆಯ ಮಧ್ಯ ಭಾಗದಲ್ಲಿ ಭಾರಿ ಗುಪ್ತಗಾಯವಾಗಿ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಖೈರೂನಾ ತಿಜ್ವಾನ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:24/2013 ಕಲಂ, 279, 304 (ಎ) ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಸಂಜೀವಕುಮಾರ ತಂದೆ ಅಪ್ಪಾರಾವ ಚಾಮನಳ್ಳಿ ಸಾ:ದೇವನತೆಗನೂರ ರವರು ನಾನು ನನ್ನ ಡಿಸ್ಕವರಿ ಮೋಟಾರ ಸೈಕಲ ನಂ.ಕೆಎ-32/ವಾಯ-7736 ನೇದ್ದರ ಮೇಲೆ ನನ್ನ ಗೆಳೆಯನಾದ ಮಲ್ಲಿಕಾರ್ಜುನ ಕೂಡಿಕೊಂಡು ಗುಲಬರ್ಗಾಕ್ಕೆ ಹೋಗುವ ಸಲುವಾಗಿ ಹೋರಟಾಗ ದೇವನ ತೆಗನೂರ ಸಮೀಪ ಹೋಗುತ್ತಿದ್ದಾಗ ಗುಲಬರ್ಗಾ ಕಡೆಯಿಂದ ಲಾರಿ ನಂ.ಎಮ್‌ಹೆಚ್‌-25/ಯು-1671 ನೇದ್ದರ ಚಾಲಕನಾದ ದತ್ತಾತ್ರಯ ತಂದೆ ಪಾರಪ್ಪಾ ಸಾ:ಕಸಗಿ ತಾ:ಉರ್ಮಗಾ ಇತನು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದಿದ್ದರಿಂದ ರಕ್ತಗಾಯವಾಗಿದೆ ಮತ್ತು ಮಲ್ಲಿಕಾರ್ಜುನನಿಗೆ ಭಾರಿ ಒಳಪೆಟ್ಟಾಗಿರುತ್ತದೆ ಅಂತಾ ಸಂಜೀವಕುಮಾರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:26/2013 ಕಲಂ:279,337,338 ಐಪಿಸಿ ಸಂ;187 ಐಎಮ್‌ವಿ ಆಕ್ಟ್‌  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಆಸ್ತಿಗಾಗಿ ಕೊಲೆಗೆ ಪ್ರಯತ್ನ :
ಮಹಾಗಾಂವ ಪೊಲೀಸ್ ಠಾಣೆ: ಶಿವಲಾಲ ತಂದೆ ಕಲ್ಯಾಣಸಿಂಗ ಠಾಕೂರ ವ|| 75 ಸಾ|| ಚೆಟ್ನಳಿ ತಾ||ಜಿ|| ಬೀದರ ರವರು ಶಿರಗಾಪೂರ ಗ್ರಾಮದಲ್ಲಿರುವ ನನ್ನ ಮಗಳಾದ ಚಂದ್ರಕಲಾ ಇವಳಿಗೆ ಅವಳ ಅತ್ತೆ ಸುಂದರಬಾಯಿ ನಾದನಿ ಲಲಿತಾ ಮೈದುನ ರಾಜು @ ರಾಜೇಂದ್ರ ಇವರು ಅಸ್ತಿ ವಿಷಯದ ಸಂಬಂ ಕೊಲೆ ಕೋಲೆ ಮಾಡುವ ಉದ್ದೇಶದಿಂದ ದಿ||22/02/13 ರಂದು ಸಾಯಂಕಾಲ 4-30 ಗಂಟೆಗೆ ಮೈಮೇಲೆ ಸೀಮೆ ಎಣ್ಣಿ ಸುರಿದು ಬೆಂಕಿ ಹಚ್ಚಿದರಿಂದ ಅವಳ ಹೊಟ್ಟೆ,ಎದೆ, ಬೆನ್ನು ಕೈಕಾಲುಗಳು ಸುಟ್ಟು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾಗಿರುತ್ತಾಳೆ. ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:25/2013 ಕಲಂ, 307 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.