POLICE BHAVAN KALABURAGI

POLICE BHAVAN KALABURAGI

03 September 2013


ಮಾರಣಾಂತಿಕ ಹಲ್ಲೆ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ. ಸುಭದ್ರ ಗಂಡ ಚನ್ನಬಸಪ್ಪ ಬುಸಣ್ಣೊರ ಸಾ:ನಾಚವಾರ ಇವರ ಸುಮಾರು 15, 20 ವರ್ಷಗಳ ಹಿಂದೆ ನನ್ನ ಗಂಡನ ಅಣ್ಣತಮ್ಮಕಿಯವರಾದ ಜಗದೇವಪ್ಪ ತಂದೆ ಸಂಗಣ್ಣ ಬುಸಣ್ಣೊರ ರವರೊಂದಿಗೆ ವೈಶಮ್ಯ ಬೆಳೆದಿದ್ದರಿಂದ ನಾವು ಅವರೊಂದಿಗೆ ಮಾತಾಡುತ್ತಿರಲಿಲ್ಲ. ಹೀಗಿದ್ದು ದಿ:02-09-2013 ರಂದು ಮದ್ಯಾಹ್ನ ನನ್ನ ಗಂಡ, ಮನೆಯಿಂದ ಹೋರಗೆ ಹೋದ ಸ್ವಲ್ಪ ಹೊತ್ತಿಗೆ ಚೀರಾಡುವ ಶಬ್ದ ಕೇಳಿ ನಾನು ಹೊರಗೆ ಬಂದು ನೋಡಲು, ಮೊನಪ್ಪ ಬಡಿಗೇರ ಇವರ ಮನೆಯ ಹತ್ತಿರ ಸಿ.ಸಿ ರೋಡಿನ ಮೇಲೆ ಹೋಗಿ ನೋಡಲು ನನ್ನ ಗಂಡನಾದ ಚನ್ನಬಸಪ್ಪ ಇತನಿಗೆ ನಮ್ಮ ಅಣ್ಣತಮ್ಮಕಿಯವರಾದ 1] ಜಗದೇವಪ್ಪ 2] ಶರಣಪ್ಪ ಹಾಗು 3] ನಾಗಮ್ಮ ಗಂಡ ಜಗದೇವಪ್ಪ ಬುಸಣ್ಣೊರ 3 ಜನರು ಕೂಡಿಕೊಂಡು ಈ ಮಗನಿಗೀ ಬಿಡಬಾರದು ಖಲಾಸ ಮಾಡಬೇಕು ಅಂತಾ ಬೈಯುತ್ತಾ,  ಜಗದೇವಪ್ಪ ಇತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನ್ನ ಗಂಡನಿಗೆ ಈ ರಂಡೀ ಮಗನಿಗ ಬಿಡಬ್ಯಾಡದು, ಅಂತ ಕೊಲೆ ಮಾಡುವ  ಉದ್ದೇಶದಿಂದ ಕೊಡಲಿಯಿಂದ ತಲೆಯ ಮೇಲೆ ಹೊಡೆದು, ಭಾರಿ ರಕ್ತ ಗಾಯ ಮಾಡಿದನು. ಆಗ ಅಲ್ಲಿಯೇ ಇದ್ದ ಆತನ ತಮ್ಮ ಶರಣಪ್ಪ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಗಂಡನ ಎರಡು ಕೈಗಳ ಬೆರಳುಗಳ ಮೇಲೆ ಮತ್ತು ಎರಡು ಮೊಳಕಾಲುಗಳ ಮೇಲೆ , ಬೆನ್ನಿಗೆ ಹೊಡೆಯುತ್ತಾ, ಕೊಲೆ ಮಾಡಿ ಮುಗಸಬೇಕು ಅನ್ನುತ್ತಿದ್ದನು. ಆಗ ನನ್ನ ಗಂಡ ಚೀರಾಡಿದ್ದರಿಂದ ಈ ಸಪ್ಪಳ ಕೇಳಿ ಭೀಮಣ್ಣ ತಂದೆ ಶರಣಪ್ಪ ಸಿಮೇರ, ಮತ್ತು ನರಸರೆಡ್ಡಿ ತಂದೆ ಸಾಬರೆಡ್ಡಿ ಕೊನಾಪುರ ಹಾಗು ನಾನು ಮತ್ತು ನನ್ನ ಮಗ ಕೂಡಿ ಜಗಳ ಬೀಡಿಸಿದೇವು. ಇವರ ಹೊಡೆತಕ್ಕೆ ನನ್ನ ಗಂಡ ಮೂರ್ಚೆ ಹೋದನು ಅದನ್ನು ನೋಡಿ ಅವರು ಅವರು ಅಲ್ಲಿಂದ ಹೋಗಿದ್ದು ನನಗೆ ತಡೆದು ನಿಲ್ಲಿಸಿ ಹಿಂದಿನ ಜಗಳದ ವೈಮನಸ್ಸು ಇಟ್ಟುಕೊಂಡು ಅದೇ ದ್ವೇಶದಿಂದ ನನಗೆ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಕೊಡಲಿ ಹಾಗು ಬಡಿಗೆಯಿಂದ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.