POLICE BHAVAN KALABURAGI

POLICE BHAVAN KALABURAGI

23 August 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಯಡ್ರಾಮಿ ಠಾಣೆ : ದಿನಾಂಕ 22-08-2016 ರಂದು ಬೆಳಿಗ್ಗೆ ನನ್ನ ಹಿರಿ ಮಗ ಮಂಜುನಾಥ ಈತನು ಖಾಸಗಿ ಕೆಲಸದ ನಿಮಿತ್ಯ ನಮ್ಮ ಮೋಟರ ಸೈಕಲ ಹಿರೋ ಸ್ಪ್ಲೇಂಡರ ಪ್ರೋ ಮೋಟರ ಸೈಕಲ್ ನಂ ಕೆ.ಎ-32/ಇ.ಎಫ್-3610 ನೇ ತೆಗೆದುಕೊಂಡು ಚಿಗರಳ್ಳಿಗೆ ಹೋಗಿರುತ್ತಾನೆ, ನಂತರ ಸಾಯಂಕಾಲ 4;15 ಗಂಟೆ ಸುಮಾರಿಗೆ ಯಾರೋ ಅಪರಿಚತರು ನನ್ನ ಮಗನ ಮೂಬೈಲನಿಂದ ನಮಗೆ ಫೋನ ಮಾಡಿ ಹೇಳಿದ್ದೇನೆಂದರೆ, ಇದೀಗ 4;00 ಗಂಟೆ ಸುಮಾರಿಗೆ ನಿಮ್ಮ ಮಗ ಆಲೂರ ದಾಟಿ ಮಹಿಬೂಬಸುಬಾನಿ ದರ್ಗಾ ಸಮೀಪ ಬರುತ್ತಿದ್ದಾಗ ಎದುರುಗಡೆಯಿಂದ ಯಾವುದೋ ವಾಹನದ ಚಾಲಕ ಡಿಕ್ಕಿ ಪಡಿಸಿ ಹೋಗಿದ್ದು, ನಿಮ್ಮ ಮಗನ ತಲೆಗೆ ಮತ್ತು ಹಣೆಯ ಮೇಲೆ ಭಾರಿ ರಕ್ತಗಾಯವಾಗಿದ್ದು, ಇತರೆ ಮೈ ಕೈಗೆ ತರಚಿದ ಗಾಯಗಳಾಗಿರುತ್ತವೆ ಅಂತಾ ತಿಳಿಸಿದ ಕೂಡಲೆ ನಾನು ಮತ್ತು ನನ್ನ ಹೆಂಡತಿ ಸುಮಿತ್ರಾ, ನನ್ನ  ಕಿರಿ ಮಗ ಯಮನಪ್ಪ, ನಮ್ಮ ಅಣ್ಣತಮ್ಮಕಿಯ ಸಕ್ರೆಪ್ಪ ತಂದೆ ಮುರಗೆಪ್ಪ ಬಂಕಲಗಿ, ಹಾಗು ನಮ್ಮೂರ ಸಿದ್ದಯ್ಯ ತಂದೆ ಮಲ್ಲಯ್ಯ ಗುತ್ತೇದಾರ ರವರು ಸೇರಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗ ರಸ್ತೆಯ ಎಡಗಡೆ ಬಿದ್ದಿದ್ದು ಅವನ ಹಣೆಯ ಮೆಲೆ ಮತ್ತು ಬಲಗಡೆ ತಲೆಗೆ ಭಾರಿ ರಕ್ತಗಾಯ ವಾಗಿದ್ದು, ಬಲ ಮುಂಡಿಗೆ, ಬಲ ಗಲ್ಲದ ಮೇಲೆ, ಬಲಗೈ ಹಸ್ತದ ಮೇಲ್ಭಾಗ, ತರಚಿದ ಗಾಯಗಳಾಗಿರುತ್ತವೆ, ಆಗ ನನ್ನ ಮಗ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ನಂತರ ನಾವೆಲ್ಲರು ಸೇರಿಕೊಂಡು ನನ್ನ ಮಗನಿಗೆ ಉಪಚಾರ ಕುರಿತು ಒಂದು ಖಾಸಗ ವಾಹನದಲ್ಲಿ ಹಾಕಿಕೊಂಡು ಕಲಬುರಗಿ ವಾತ್ಸಲ್ಯ ಲೈಫ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ. ಇಂದು ದಿನಾಂಕ 23-08-2016 ರಂದು 12;25 ಎ.ಎಂ ಸುಮಾರಿಗೆ ನನ್ನ ಮಗ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ಉಪಚಾರ ಫಲಿಸದೆ ಮೃತ ಪಟ್ಟಿರುತ್ತಾನೆ. ಅಂತಾ ಶ್ರೀ ಸಕ್ರೆಪ್ಪ ರಂದೆ ಯಮನಪ್ಪ ಬಂಕಲಗಿ ಸಾ|| ಕರಕಿಹಳ್ಳಿ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲೋಗಿ ಠಾಣೆ : ದಿನಾಂಕ: 22-08-2016 ರಂದು ಮುಂಜಾನೆ ನಾನು ಮತ್ತು ನಮ್ಮೂರ ಗುರುದೇವ ಇಂಗಳಗಿ ಇಬ್ಬರು ಕೂಡಿ ಮೋಟಾರ್ ಸೈಕಲ್ ನಂ ಕೆಎ-32 ಇಎ-3795 ನೇದ್ದರ ಮೇಲೆ ನಮ್ಮೂರಿನಿಂದ ಕೆಲಸದ ಸಲುವಾಗಿ  ಜೇವರಗಿಗೆ ಬಂದು ಕೆಲಸ ಮುಗಿಸಿದ ಬಳಿಕ ಮತ್ತು ನಾವಿಬ್ಬರು ಅದೇ ಮೋಟಾರು ಸೈಕಲ್ ಮೇಲೆ ಜೇವರಗಿಯಿಂದ ನಾರಾಯಣಪೂರಕ್ಕೆ ಹೊರಟೆವು. ಮೋಟಾರು ಸೈಕಲ್ ಗರುರದೇವ ನಡೆಯಿಸುತ್ತಿದ್ದನು. ನಾನು ಹಿಂದೆ ಕುಳಿತಿದ್ದೇನು. ಮಧ್ಯಾಹ್ನ 3:00 ಗಂಟೆಯ ಸುಮಾರಿಗೆ ನಾವು ಮಂದೇವಾಲ ದಾಟಿ ಕೇನಾಲ್ ಹತ್ತೀರ ಜೇವರಗಿ-ಸಿಂದಗಿ ರೋಡ ಮುಖಾಂತರ ಹೋಗುತ್ತಿರುವಾಗ ಅದೇ ವೇಳೆಗೆ ಎದರಿನಿಂದ ಒಂದು ಕಾರು ಚಾಲಕನು ಕಾರನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲ್ ಗೆ ಎದುರಿನಿಂದ ಜೋರಾಗಿ ಡಿಕ್ಕಿ ಹೊಡೆದನು. ನಾವು ಮೋಟಾರು ಸೈಕಲ್ ಸಮೇತ ರೋಡಿನ ಬಾಜು ಬಿಳಲು ಕಾರಿನ ಟೈರ ಗುರುದೇವನ ತಲೆಯ ಮೇಲೆ ಹಾಯ್ದು ಹೋಗಿ ಕಾರ ಕ್ಯಾನಲದಲ್ಲಿ ಪಲ್ಟಿಯಾಗಿ ಬಿದ್ದಿತ್ತು. ಇದರಿಂದ ನನಗೆ ಎಡಗೈ ಮುಂಗೈಗೆ,ಎಡ ಮೊಳಕಾಲಿಗೆ ರಕ್ತಗಾಯ, ಎದೆಗೆ ಗುಪ್ತ ಪೆಟ್ಟಾಗಿದ್ದವು. ಗುರುದೇವನಿಗೆ ತಲೆ ಒಡೆದದು ಮೆದಳು ಹೊರ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು. ಸ್ಥಳಕ್ಕೆ ಜನರು ಬಂದಾಗ ಕಾರ ಚಾಲಕ ಅಲ್ಲಿಂದ ಓಡಿ ಹೋದನು. ಅವನ  ಹೆಸರು ಗೊತ್ತಿಲ್ಲಾ. ಕಾರಿನ ನಂ ಜೆಎ-08 ಇ-8864 ಅಂತಾ ಇರುತ್ತದೆ ಅಂತಾ ಶ್ರೀ ಯಲ್ಲಪ್ಪ ತಂದೆ ಜೆಟ್ಟೆಪ್ಪ ಯಲಬಾ ಸಾ : ನಾರಾಯಣಪೂರ ತಾ : ಜೇವರಗಿ   ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ಶ್ರೀ ಮಿರಾಜೋದ್ದಿನ್ ತಂದೆ ಖಾಜಾಮೈನೊದ್ದಿನ್ ಸಾ. ಹಾಗರಗಾ ರೋಡ್ ಕಲಬುರಗಿ ರವರು  ದಿನಾಂಕ 21-08-2016 ರಂದು ಸೇಡಂ ಪಟ್ಟಣದ ವಾಸವದತ್ತಾ ಸಿಮೇಂಟ್ ಕಂಪನಿಗೆ ಸಿಮೇಂಟ್ ತುಂಬಲು ಬಂದಿದ್ದು ದಿನಾಂಕ 22-08-2016 ರಂದು ಸಿಮೇಂಟ್ ತುಂಬಿಕೊಂಡು ಕಲಬುರಗಿ ಕಡೆಗೆ ಹೋರೆಟ್ಟದು ಎದರುಗಡೆಯಿಂದ ಒಂದು ಟ್ರೈಲರ ಲಾರಿ ನಂ ಎಂಎಚ್ 24 ಜೆ 4422 ನೇದ್ದರ ಚಾಲಕ ನನ್ನ ಲಾರಿ ನಂ ಕೆಎ. 56 / 0070 ನೇದ್ದಕೆ ಡಿಕ್ಕಿ ಪಡೆಸಿ ಅಪಘಾತ ಪಡೆಸಿ ಡ್ಯಾಮೇಜ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಸುನಿತಾ ಗಂಡ ಸಂಜುಕುಮಾರ ಹೊಸಮನಿ ಇವರ ಮದುವೆಯು 09-10 ವರ್ಷ ಗತಿಸಿದ್ದು, ಅವಳ ಗಂಡ ಸಂಜುಕುಮಾರ ಇತನು ಕುಡಿಯಲಿಕ್ಕೆ ಹಣ ಕೊಡದೇ ಇದ್ದುದರಿಂದ ಅವಳಿಗೆ ಹೊಡೆ ಬಡಿ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟು ಹೊಡೆ ಬಡಿ ಮಾಡುತ್ತಾ ಹೊರಟಿದ್ದು, ಅಲ್ಲದೇ ದಿನಾಂಕ 22/08/16 ರಂದು ರಾತ್ರಿ 09-00 ಗಂಟೆ ಸುಮರಿಗೆ ಕುಡಿಯಲಿಕ್ಕೆ ಹಣ ಕೊಡದೆ ಇರುವುದರಿಂದ ಅವಳ ಮೈಮೇಲೆ ಸೀಮೆಎಣ್ಣೆ ಹಾಕಿ ಕಡ್ಡಿ ಕೊರೆದು ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ.ಇದರಿಂದಾಗಿ ಅವಳ ತಲೆ ಕೂದಲು, ಮುಖ, ಎದೆ, ಹೊಟ್ಟೆ, ಎರಡು ಕೈಗಳಿಗೆ ಮತ್ತು ಎರಡು ಕಾಲು ತೊಡೆಯ ಹತ್ತಿರ ಅಲ್ಲಲ್ಲಿ ಸುಟ್ಟಗಾಯಗಳಾಗಿ ಚರ್ಮ ಸುಲಿದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಫರತಾಬಾದ ಠಾಣೆ : ದಿನಾಂಕ: 21-08-2016 ರಂದು ರಾತ್ರಿ  2 -00 ಗಂಟೆಯ ಸುಮಾರಿಗೆ ಅಫಜಲಪೂರ ಕಲಬುರಗಿ ಮುಖ್ಯ ರೋಡಿನ ಮುಖುಂತಾರ ಚೌಡಾಪೂರ ಕಡೆಯಿಂದ ಟಿಪ್ಪರಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು (ಉಸುಕು) ಸಾಗಾಣೆ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಶ್ರೀ ಪಿ, ಎಸ್‌, ವನಂಜಕರ್‌‌  ಪಿಎಸ್‌ಐ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹಡಗಿಲ ಹಾರುತಿ ಗ್ರಾಮದ ಕ್ರಾಸ್  ಕಡೆಗೆ ಹೊರಟು ಹಡಗಿಲ ಹಾರುತಿ ಗ್ರಾಮದ ಕ್ರಾಸ್ ತಲುಪಿದ ನಂತರ ಅಫಜಲಪೂರ ಕಲಬುರಗಿ ಮುಖ್ಯ ರಸ್ತೆಯಲ್ಲಿ ನಾವೆಲ್ಲರೂ ವಾಚ (ಕಾಯುತ್ತಾ) ಮಾಡುತ್ತಾ ಕ್ರಾಸದಲ್ಲಿ  ಮರೆಯಲ್ಲಿ ನಿಂತಾಗ ಅಂದಾಜು ಬೆಳಗಿನ ಜಾವ 03-15 ಗಂಟೆಯ ಸುಮಾರಿಗೆ ಚೌಡಾಪೂರ ಕಡೆಯಿಂದ 4 ಟಿಪ್ಪರಗಳು ಒಂದರ ಹಿಂದೆ ಒಂದು ಬರುತ್ತಿದ್ದು ಅವುಗಳ ಮೇಲೆ ನಮಗೆ ಸಂಶಯ ಬಂದು ಅವುಗಳನ್ನು ನಿಲ್ಲಿಸಲು ಚಾಲಕರಿಗೆ ಸೂಚಿಸಿದಾಗ ಈ 4 ಟಿಪ್ಪರಗಳ ಚಾಲಕರು ತಮ್ಮ, ತಮ್ಮ ಟಿಪ್ಪರಗಳನ್ನು ನಿಲ್ಲಿಸಿ ಕತ್ತಲಲ್ಲಿ ಓಡಿ ಹೋದರು. ನಂತರ ಸದರಿ ಟಿಪ್ಪರಗಳಲ್ಲಿ ಮರಳು ಇರುವುದನ್ನು ಖಚಿತಪಡಿಸಿಕೊಂಡು ಈ ಟಿಪ್ಪರಗಳ ನಂಬರ ನೋಡಲಾಗಿ  1) ಟಿಪ್ಪರ ನಂ ಕೆಎ-33,ಎ-4427 2) ಟಿಪ್ಪರ ನಂ ಕೆಎ-33 ಎ- 4396 ಇದ್ದು 3) ಟಿಪ್ಪರ  ನಂ ಕೆಎ-32 , ಸಿ- 1416 ಇದ್ದು 4) ಟಿಪ್ಪರ  ನಂ ಕೆಎ-32, ಸಿ- 5093  ಇದ್ದು  ಸದರಿ ಟಿಪ್ಪರಗಳಲ್ಲಿ ಮರಳನ್ನು ಸಾಗಾಣಿಕೆಗೆ ಸಂಬಂದಪಟ್ಟಂತೆ ದಾಖಲಾತಿಗಳನ್ನು ಹುಡುಕಾಡಲಾಗಿ ಯಾವುದೇ ದಾಖಲಾತಿಗಳು ಕಂಡು ಬಂದಿರುವು ದಿಲ್ಲಾ ಈ ಮರಳನ್ನು ಕಳ್ಳತನದಿಂದ ಸರಕಾರಕ್ಕೆ ರಾಜಸ್ವ ಹಣವನ್ನು ಭರಿಸದೆ ತುಂಬಿಕೊಂಡು ಬರುತ್ತಿದ್ದಾರೆ  ಅಂತಾ ಕಂಡು ಬಂದಿರುತ್ತದೆ, ಸದರಿ ಸ್ಥಳದಲ್ಲಿ ವಾಹನಗಳ ಜಪ್ತಿ ಮಾಡಿಕೊಂಡಿದ್ದು ಪ್ರತಿಯೊಂದು ಟಿಪ್ಪರಗಳ ಅ.ಕಿ. 5,00,000/-ರೂ  ಹೀಗೆ ಒಟ್ಟು 20 ಲಕ್ಷ ಮತ್ತು ಇವುಗಳಲ್ಲಿ ತುಂಬಿರುವ ಮರಳಿನ (ಉಸುಕಿನ) ತಲಾ ಟಿಪ್ಪರ ಅ.ಕಿ. 8000/- ರೂ ಗಳಂತೆ ಹೀಗೆ ಒಟ್ಟು 32 ಸಾವಿರ ರೂಪಾಯಿಗಳು ಆಗುತ್ತಿದ್ದು, ಜಪ್ತಿಪಡಿಸಿಕೊಂಡ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಫರತಾಬಾದ ಠಾಣೆ : ಶ್ರೀ ಶಂಕರಗೌಡ ತಂದೆ ಮಲಕಣಗೌಡ ಬಿರಾದಾರ ಸಾ : ಹಂಗರಗಾ(ಬಿ) ತಾ : ಜೇವರ್ಗಿ ಇವರ ಕಾರ ನಂ ಕೆಎ-56 ಎನ್-0170 ನೇದ್ದರಲ್ಲ್ಲಿ ಸೈಟ ಕೆಲಸ ಮುಗಿಸಿಕೊಂಡು  ನನ್ನೋಂದಿಗೆ ಶರಣಗೌಡ ಬಿರಾದಾರ ಹಾಂತೇಶ,ನಂದಿಕೋಲ ಹಾಗೂ ಚಾಲಕ ಸುರೇಶ ರವರೊಂದಿಗೆ ಕಲಬುರಗಿ ಕಡೆಗೆ ಬರುವಾಗ ಫಿರೋಜಾಬಾದ ದರ್ಗಾದ ಮುಂದಿನ ರೋಡಿನಲ್ಲಿ ಬಂದಾಗ ಕಲಬುರಗಿ ಕಡೆಯಿಂದ ಕಾರ ನಂ ಕೆಎ-28 ಎನ್-5420 ನೇದ್ದರ ಚಾಲಕ ಅತೀ ವೇಗ ಮತ್ತು ಅಲಕ್ಷ್ಯತನದಿಂದ ಓಡಿಸುತ್ತಾ ಬಂದು ನಮ್ಮ ಕಾರಿನ ಬಲಭಾಗಕ್ಕೆ ಡಿಕ್ಕಿ ಪಡಿಸಿದ್ದು ಆಗ ಸಮಯ ಮದ್ಯಾನ್ಹ 4-10 ಗಂಟೆಯಾಗಿದ್ದು ಅಪಗಾತದಿಂದ ನಮ್ಮ ಚಾಲಕನಿಗೆ ಬಿಟ್ಟು ನಮ್ಮ ಮೂರು ಜನರಿಗೆ  ಸಾದಾ ಗಾಯವಾಗಿದ್ದು ಅಪಗಾತ ಪಡಿಸಿದ್ದ ಕಾರಿನಲ್ಲಿದ್ದವರಿಗೆ ಸಾದಾ ಮತ್ತು ಭಾರಿ ಗಾಯವಾಗಿದ್ದು ಇಂಡಿಕಾ ಕಾರ ಚಾಲಕನು ವಹಾನ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಾತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಶಾರದಾ ಗಂಡ ಪ್ರಭು ಮಾಳಗಿ ಕಿರಿಯ ತರಬೇತಿ ಅಧಿಕಾರಿ ಡಾ :ಬಿ.ಆರ್. ಅಂಬೇಡ್ಕರ ಐಟಿಐ ಕಮಲಾಪೂರ ರವರು ಕಮಲಾಪೂರದಲ್ಲಿರುವ ಕಿರಿಯ ತರಬೇತಿ ಅಧಿಕಾರಿ ಡಾ :. ಬಿ.ಆರ್. ಅಂಬೇಡ್ಕರ ಐಟಿಐ ಅಂತ ಕರ್ತವ್ಯ ನಿರ್ವಹಿಸುತ್ತಿದ್ದು. ಕಮಲಾಪೂರ ಕೆನರಾ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಸಂ. 0459101024941 ನೇದ್ದು ಹೊಂದಿದ್ದು ದಿನಾಂಕ 10-08-2016 ರಂದು 12-00 ಗಂಟೆ ಸುಮಾರಿಗೆ ಪಿರ್ಯಾದಿಯ ಮೋಬೈಲ್ ನಂ. 9900421244 ನೇದಕ್ಕೆ, ಮೋಬೈಲ್ ನಂ ಗಳಾದ 7797511013 ಮತ್ತು 8051330203 ನೇದ್ದವುಗಳಿಂದ ಕರೆ ಮಾಡಿ ನಾವು ಬ್ಯಾಂಕಿನಿಂದ ಮಾತನಾಡುತ್ತಿದ್ದು, ನಿಮ್ಮ ಎ.ಟಿ.ಎಮ್ ಕಾರ್ಡ ಬ್ಲಾಕ ಆಗಿದೆ ಅದನ್ನು ಪ್ರಾರಂಭಿಸಲು ನಿಮ್ಮ ಎ.ಟಿ.ಎಮ್ ಕಾರ್ಡನ 16 ಸಂಖ್ಯೆಗಳನ್ನು ನಂಬರ ಹೇಳಿರಿ ಅಂತ ಕೇಳಿದಾಗ ತನ್ನ ಎ.ಟಿ.ಎಮ್ ಕಾರ್ಡ ನಂ ಹೇಳಿದ್ದರಿಂದ ನಂಬರ ಕೇಳಿದ 15 ನಿಮಿಷಗಳ ನಂತರ ಪಿರ್ಯಾದಿಯ ಬ್ಯಾಂಕ ಖಾತೆಯಿಂದ ಒಟ್ಟು 1,04,736 ರೂ ಗಳನ್ನು ಡ್ರಾ ಮಾಡಿಕೊಂಡು ಮೋಸ ಮಾಡಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.