POLICE BHAVAN KALABURAGI

POLICE BHAVAN KALABURAGI

31 October 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 29-10-2018 ರಂದು ಅಫಜಲಪೂರ ಪಟ್ಟಣದ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ. ಹಾಗೂ ಮಟಕಾದಲ್ಲಿ ಗೆದ್ದ ಜನರಿಗೆ ಯಾವುದೆ ಹಣ ಕೊಡದೆ ಮೋಸ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಲ್ಲಿಕಾರ್ಜುನ ಚೌಕದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಮಲ್ಲಿಕಾರ್ಜುನ ಚೌಕದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಹಾಗೂ ಮಟಕಾದಲ್ಲಿ ಹಣ ಗೆದ್ದಂತ ಜನರು ಸದರಿ ವ್ಯಕ್ತಿಗೆ ಹಣ ಕೇಳುತ್ತಿದ್ದರು, ಆಗ ಸದರಿ ವ್ಯಕ್ತಿ ಯಾವ ಹಣ ನೀನು ಬರೆಸಿದ ನಂಬರ ಬಂದಿಲ್ಲ ಎಂದು ಜನರಿಗೆ ಗೆದ್ದಂತ ಹಣ ಕೊಡದೆ ಮೋಸ ಮಾಡುತ್ತಿದ್ದನು. ಆಗ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಇಮಾಮ ತಂದೆ ಅಮೀನಸಾಬ ಶೇಖ್ ಸಾ|| ವಿಕೆಜಿ ನಗರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2450/-  ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ಹಾಗೂ ಕಾರ್ಬನ್ ಕೆ9 ಮೊಬೈಲ ಪೋನ್ ಅಕಿ-100/- ರೂ ದೊರೆತವು  ಸದರಿಯವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಾಗಿಸಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಅಣವೀರ ತಂದೆ ಪ್ರಕಾಶ ಹರಸೂರ ಸಾ:ಚಿಂಚನಸೂರ ತಾ:ಆಳಂದ ಹಾ:ವ:ಮಲ್ಲಿಕಾರ್ಜುನ ಅರಳಗುಂಡಗಿರವರ ಮನೆಯಲ್ಲಿ ಬಾಡಿಗೆ ವಾಸ ಕೈಲಾಸ ನಗರ ಕಲಬುರಗಿರವರು ದಿನಾಂಕ:29/10/2018 ರಂದು 10.30 ಪಿ.ಎಂ ಸುಮಾರಿಗೆ ನಾನು ಹಾಗೂ ನನ್ನ ತಾಯಿ ಶ್ರೀಮತಿ ರಾಜೇಶ್ವರಿ ಇಬ್ಬರೂ ಕೂಡಿಕೊಂಡು ಸಂಜನಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವ ನಮ್ಮ ಅಕ್ಕಳಾದ ಪ್ರಿಯಾಂಕಾ ಇವರಿಗೆ ಊಟ ತೆಗೆದುಕೊಂಡು ಮನೆಗೆ ಕೀಲಿ ಹಾಕಿಕೊಂಡು ಹೋಗಿದ್ದು ದಿನಾಂಕ:30/10/2018 ರಂದು 7.30 ಎ.ಎಂಗೆ ಮರಳಿ ಮನೆಗೆ ಬಂದು ನೋಡಲಾಗಿ ಬಾಗಿಲ ಕೀಲಿ ಮುರಿದಿದ್ದು ಅಲಮಾರಿಯಲ್ಲಿ ಇಟ್ಟಿದ್ದ ಬಂಗಾರದ ಆಭರಣ ಮತ್ತು  ನಗದು ಹಣ ಹೀಗೆ ಒಟ್ಟು 1,80,000/-ರೂ ಕಿಮ್ಮತ್ತಿನ ಬಂಗಾರ ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿ ಗರ್ಭಿಣಿಯಾಗಿಸಿದ ಪ್ರಕರಣ :
ಯಡ್ರಾಮಿ ಠಾಣೆ : ಕುಮಾರಿ ರವರ ತಂದೆ ತಾಯಿಯವರು ಎಲ್ಲಿ ಕೆಸಲ ಸಿಗುತ್ತದೆಯೋ ಆ ಊರಿಗೆ ಹೋಗಿ ಕೆಲಸ ಮಾಡುತ್ತಾರೆ. ದಿ: 19-10-18 ರಂದು ನಾನು ನನ್ನ ತಾಯಿ ತಂದೆಯೊಂದಿಗೆ ಕೆಲಸಕ್ಕಾಗಿ ಕರಡಕ್ಕೆ ಹೋರಟಾಗ ನನಗೆ ರಸ್ತೆಯ ಮಧ್ಯ ವಾಂತಿಯಾಗತೊಡಗಿತ್ತು. ನಾವು ಕರಾಡ ಮುಟ್ಟಿದಾಗ ನಮ್ಮ ತಂದೆ ತಾಯಿಯವರು ಪೆಟ್ರೊಲ ಪಂಪ ಹತ್ತಿರವಿದ್ದ ವೈಧ್ಯರ ಶ್ರೀ ಜಾಧವ ಇವರ ಹತ್ತಿರ ಕರೆದುಕೊಂಡು ಹೋಗಿ ವಾಂತಿ ಆಗುತ್ತಿರುವ ಬಗ್ಗೆ ತಿಳಿಸಿದೇವು. ಅವರು ನನಗೆ ತಪಾಸಣೆ ಮಾಡಿ ಡಾ: ಜಾಧವ ರವರು ಅವರು ನಮಗೆ ವಾಂತಿ ಬಗ್ಗೆ ಔಷಧಿ ಕೊಟ್ಟರು ಕಾರಣ ನಾವು ಝಂಡಾ ಚೌಕ ಕರಾಡ ಎಂಬಲ್ಲಿ ಮುಕ್ಕಾಮ ಮಾಡಿದೇವು. ಆದರೆ ನನಗೆ ವಾಂತಿಯ ಬಗ್ಗೆ ತ್ರಾಸ ನಿಲ್ಲಲಿಲ್ಲ. ಪುನ ಎರಡನೆ ದಿನ ದಿ: 20-10-18 ರಂದು ಡಾ: ಜಾಧವ ಇವರ ಹತ್ತಿರ ಉಪಚಾರ ಕುರಿತು ನನ್ನ ತಂದೆ ತಾಯಿ ಕರೆದುಕೊಂಡು ಹೋದರು. ವೈಧ್ಯರು ನನ್ನ ಮೂತ್ರ ತಪಾಸಣೆ ಮಾಡಿಸುವ ಕುರಿತು ದತ್ತಾ ಲ್ಯಾಬರೇಟರಿ ಎಂಬಲ್ಲಿಗೆ ಕಳುಹಿಸಿದರು ದತ್ತಾ ಲ್ಯಾಬರೇಟರಿಯಲ್ಲಿ ನನ್ನ ಮೂತ್ರ ತಪಾಸಣೆ ಮಾಡಿ ವರದಿ ಕೊಟ್ಟರು . ಅದನ್ನು ನಾವು ಡಾ: ಜಾಧವ ಇವರಿಗೆ ತೋರಿಸಿದೇವು. ಅವರು ನಾನು ಗರ್ಭಿಣಿಯಾದ ಬಗ್ಗೆ ನನ್ನ ತಂದೆ ತಾಯಿಗೆ ಮಾಹಿತಿ ನೀಡಿದರು. ಮತ್ತು ಮುಂದಿನ ಉಪಚಾರ ಕುರಿತು ಕೃಷ್ಣಾ ಆಸ್ಪತ್ರೆ ಕರಾಡ ಎಂಬಲ್ಲಿಗೆ ಹೋಗಲು ಸೂಚಿಸಿದರು. ಇಂದು ದಿ: 23-10-18 ರಂದು ಬೆಳಿಗ್ಗೆ ಕೃಷ್ಣಾ ಆಸ್ಪತ್ರೆ ಮಲ್ಕಾಪೂರ ಕರಾಡ ಎಂಬಲ್ಲಿಗೆ ನನ್ನ ತಂದೆ ತಾಯಿ ಕರೆದುಕೊಂಡು ಬಂದರು. ಅಲ್ಲಿಯ ವೈಧ್ಯರು ನನ್ನ ವರದಿ ನೋಡಿ ಕೃಷ್ಣಾ ಆಸ್ಪತ್ರೆಯವರು ಉಪಚಾರ ಕುರಿತು ಪ್ರಸೂತಿ ವಾರ್ಡ ನಂ:12 ರಲ್ಲಿ ದಾಖಲೆ ಮಾಡಿದರು. ನಾನು ಎರಡು ತಿಂಗಳು ಗರ್ಭಿಣಿ ಎಂದು ತಿಳಿಸಿದರು. ಆ ಬಗ್ಗೆ ನಾನು ಹೇಳುವುದೆನೇಂದರೆ, ನಾನು ವಾಸವಾಗಿರುವ ಅರಳಗುಂಡಗಿ ಗ್ರಾಮದಲ್ಲಿ ನಮ್ಮ ನೆರೆಯ ಮನೆಯ ಸುನೀಲ ತಂ ಮರಳಪ್ಪ ಕಡಿ ಈತನು ವಾಸವಾಗಿರುವನು. ಆತನು ನನಗೆ ಪರಿಚಯದವನಿದ್ದ ಕಾರಣ ಸುಮಾರು 2 ವರ್ಷಗಳಿಂದ ಒಂದಿಲ್ಲ ಒಂದು ಕಾರಣದಿಂದ ನನ್ನ ಸಮೀಪಕ್ಕೆ ಬರತೊಡಗಿದನು. ಮತ್ತು ನನ್ನ ಶರಿರಕ್ಕೆ ತನ್ನ ಅಂಗಗಳನ್ನು ಹಚ್ಚತೊಡಗಿದನು. ನನ್ನ ಶರೀರಕ್ಕೆ ಆತನು ಆಗಾಗ ಬೇಡವಾದ ಅಂಗಗಳಿಗೆ ಸ್ಪರ್ಶ ಮಾಡುತ್ತಿದ್ದನು. ಸಪ್ಟೇಂಬರ 2018 ಎರಡನೆ ವಾರದಲ್ಲಿ ( ನಿಖರವಾದ ದಿನಾಂಕ ಸಮಯ ಗೊತ್ತಿಲ್ಲ ) ನಾನು ನಮ್ಮ ಮನೆಯಲ್ಲಿ ಒಬ್ಬಳೆ ಇದ್ದಾಗ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸುನೀಲ ಮರಳಪ್ಪ ಕಡಿ ಇತನು ನನ್ನ ಮನೆಗೆ ಬಂದು ಬಾಗೀಲನ್ನು ಒಳಗಿನಿಂದ ಕೊಂಡಿ ಹಾಕಿಕೊಂಡು ನಂತರ ಆತನು ನನಗೆ ಹಿಂದಿನಿಂದ ಬಂದು ಹಿಡಿದುಕೊಂಡು ನನಗೆ ಬಲಪೂರ್ವಕ ಮುತ್ತುಕೊಟ್ಟನು. ನಾನು ಅದಕ್ಕೆ ವಿರೋಧ ಮಾಡಿದೇನು ಆದರೆ ಆತನು ನನ್ನ ಸಹಮತ ಇಲ್ಲದೆ ಬಲಪೂರ್ವಕ ನನ್ನೊಂದಿಗೆ ಶರೀರ ಸಂಬಂಧ ಬೆಳಿಸಿದನು. ನಂತರ ಆತನು ನನಗೆ ನೀನು ಯಾರಿಗೂ ಹೇಳಬೇಡ ಇಲ್ಲವಾದರೆ ನಿನ್ನ ಹೆಸರನ್ನು ಗ್ರಾಮಸ್ಥರಲ್ಲಿ ಸಮ್ಮುಖದಲ್ಲಿ ಅಪವಾದ ಮಾಡುತ್ತೇನೆ ಎಂದು ಬೆದರಿಕೆ ಹಾಕಿದನು ಆದ್ದರಿಂದ ನಾನು ನನ್ನ ಮರಿಯಾದಿಗೆ ಅಂಜಿ ಯಾರಿಗೂ ಹೇಳಲಿಲ್ಲ. ತದ ನಂತರ ಎರಡನೆ ಮತ್ತು ಮೂರನೆ ದಿವಸವು ಕೂಡಾ ನಾನು ಮನೆಯಲ್ಲಿ ಒಂಟಿಯಾಗಿದ್ದಾಗ ಆತನು ಇದೆ ಪದ್ದತ್ತಿಯಲ್ಲಿ ನನ್ನ ಜೋತೆಗೆ ಶರೀರ ಸಂಬಂದ ಬೆಳಿಸಿದನು. ಆದರೆ ನಾನು ಅಂಜಿಕೆಯಿಂದಾಗಿ ಯಾರಿಗೂ ಏನು ಹೆಳಲಿಲ್ಲ. ಸಪ್ಟೇಂಬರ 2018 ರ ಎರಡನೆ ವಾರದಲ್ಲಿ ( ನಿಖರ ದಿನಾಂಕ ಸಮಯ ನೆನಪಿಲ್ಲ ) ಮತ್ತು ಅನುಕ್ರಮವಾಗಿ ಮುಂದಿನ ಎರಡನೆ ಮತ್ತು ಮೂರನೆ ದಿವಸವು ಕೂಡಾ ಮಧ್ಯಾಹ್ನ ಸುಮಾರ 1 ಗಂಟೆಗೆ ಅರಳಗುಂಡಗಿ ಗ್ರಾಮ ತಾ:ಜೇವರಗಿ ಜಿ: ಕಲಬುರಗಿ ಕರ್ನಾಟಕ ಎಂಬಲ್ಲಿ ನಮ್ಮ ಮನೆಯಲ್ಲಿ ನಾನು ಒಬ್ಬಂಟಿಯಾಗಿದ್ದಾಗ ಆತನು ನನ್ನ ಮನೆಗೆ ಬಂದು ಒಳಗಿನಿಂದ ಬಾಗಿಲ ಕೊಂಡಿ ಹಾಕಿಕೊಂಡು ನನಗೆ ಹಿಂದಿನಿಂದ ಹಿಡಿದುಕೊಂಡು ನನಗೆ ಮುತ್ತುಕೊಡುತ್ತಾ ಬಲಪೂರ್ವಕವಾಗಿ ನಾನು ವಿರೋಧ ವ್ಯಕ್ತಪಡಿಸಿದರು ಕೂಡಾ ನನ್ನ ಸಮ್ಮತಿ ಇಲ್ಲದೆ ಆತನು ಮೇಲಿಂದ ಮೇಲೆ ನನ್ನ ಜೋತೆಗೆ ಶರೀರ ಸಂಬಂಧ ಬೆಳಿಸಿದನು. ಮತ್ತು ನನಗೆ 8 ವಾರಗಳ ಗರ್ಭೀಣಿಯಾಗುವದಕ್ಕೆ ಆತನೇ ಕಾರಣ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

29 October 2018

KALABURGI DISTRICT REPORTED CRIMES

ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 26-10-2018 ರಂದು ಬಳೂರ್ಗಿ ಗ್ರಾಮದ ಹೊರವಲಯದಲ್ಲಿ ದುಧನಿ ರೋಡಿಗೆ ಇರುವ ಡಾಬಾದ ಮುಂದೆ ಒಬ್ಬ ವ್ಯೆಕ್ತಿ ಅನದಿಕೃತವಾಗಿ ಮದ್ಯವನ್ನು ಮಾರಾಟ ಮಾಡಿ,  ಡಾಬಾದಲ್ಲಿ ಮದ್ಯವನ್ನು ಸೆವನೆ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿದ್ದಾನೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬಳೂರ್ಗಿ ಗ್ರಾಮದ ಹೊರವಲಯದಲ್ಲಿ ದುಧನಿ ರೋಡಿಗೆ ಇರುವ ಡಾಬಾದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ನೋಡಲು ಡಾಬಾದ ಮುಂದೆ ಒಬ್ಬ ವ್ಯೆಕ್ತಿ ಜನರಿಂದ ಹಣವನ್ನು ಪಡೆದು ತನ್ನ ಹತ್ತಿರವಿದ್ದ ಚೀಲದಲ್ಲಿ ಕೈ ಹಾಕಿ ಜನರಿಗೆ ಮದ್ಯ ವನ್ನು ಮಾರಾಟ ಮಾಡಿ ಮದ್ಯ ಖರಿದಿ ಮಾಡಿದ ಜನರಿಗೆ ಡಾಬಾದ ಒಳಗೆ ಕುಳಿತುಕೊಂಡು ಕುಡಿಯಿರಿ ಎಂದು ಜನರಿಗೆ ಹೇಳುತ್ತಿದ್ದನು. ಆಗ ನಾವು ಡಾಬಾದ ಕಡೆಗೆ ಹೋಗುತ್ತಿದ್ದಾಗ ಸದರಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯೆಕ್ತಿ ಡಾಬಾದ ಮುಂದಿನ ಬೆಳಕಿನಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಡಾಬಾದ ಹಿಂದಿನ ಹೊಲದಲ್ಲಿ ಕತ್ತಲಲ್ಲಿ ಓಡಿ ಹೊದನು, ಆಗ ನಾವು ಸದರಿ ವ್ಯೆಕ್ತಿಯನ್ನು ಬೆನ್ನಟ್ಟಿದರೂ ನಮ್ಮಿಂದ ತಪ್ಪಿಸಿಕೊಂಡು ಹೋಗಿರುತ್ತಾನೆ. ಡಾಬಾದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಜನರು ಸಹ ನಮ್ಮನ್ನು ನೋಡಿ ಓಡಿ ಹೋಗಿರುತ್ತಾರೆ. ಸದರಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯೆಕ್ತಿ ಸ್ಥಳದಲ್ಲಿ ಬಿಟ್ಟು ಹೋದ ಚೀಲವನ್ನು ಪರಿಶೀಲಿಸಿ ನೋಡಲು ಚೀಲದಲ್ಲಿ 1) 180 ಎಮ್ ಎಲ್ ಅಳತೆಯ BAGPIPER WHISKY  ಕಂಪನಿಯ ಒಟ್ಟು 13 ಪೌಚಗಳು ಇದ್ದವು, ಅಂದಾಜು ಕಿಮ್ಮತ್ತು 1170/- ರೂ 2)  180 ಎಮ್ ಎಲ್ ಅಳತೆಯ OLD  TAVERN  WHISKY ಕಂಪನಿಯ ಒಟ್ಟು 09 ಪೌಚಗಳು ಇದ್ದವು, ಅಂದಾಜು ಕಿಮ್ಮತ್ತು 666/- ರೂ 3) 180 ಎಮ್ ಎಲ್ ಅಳತೆಯ Officers Choice Special Whisky  ಕಂಪನಿಯ ಒಟ್ಟು 09 ಬಾಟಲಗಳು ಇದ್ದವು, ಅಂದಾಜು ಕಿಮ್ಮತ್ತು 810/- ರೂ ನಂತರ ಬಾತ್ಮಿದಾರರಿಗೆ ಮದ್ಯ ಮಾರಾಟ ಮಾಡುತ್ತಿದ್ದ ಮತ್ತು ಡಾಬಾದ ಮಾಲಿಕನ ಹೆಸರು ವಿಳಾಸ ವಿಚಾರಿಸಲು, ಮದ್ಯ ಮಾರಾಟ ಮಾಡುತ್ತಿದ್ದವನ ಹೆಸರು ವಿಳಾಸ 1) ಪ್ರಕಾಶ ತಂದೆ ಶರಣಪ್ಪ ದೋಡ್ಡಮನಿ ಸಾ|| ಬಳೂರ್ಗಿ ತಾ|| ಅಫಜಲಪೂರ ಅಂತಾ ಹಾಗೂ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಂತಹ ಡಾಬಾದ ಮಾಲಿಕನ ಹೆಸರು ವಿಳಾಸ 2) ಜೈಭೀಮ ತಂದೆ ಶರಣಪ್ಪ ದೋಡ್ಡಮನಿ ಸಾ|| ಬಳೂರ್ಗಿ ತಾ|| ಅಫಜಲಪೂರ ಎಂದು ಗೊತ್ತಾಗಿರುತ್ತದೆ.  ನಂತರ ಸದರಿ ಒಟ್ಟು 2646/- ರೂ ಕಿಮ್ಮತ್ತಿನ ಒಟ್ಟು 31 ಮದ್ಯದ ಪೌಚಗಳನ್ನು / ಬಾಟಲಗಳನ್ನು ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಫರತಾಬಾದ ಠಾಣೆ : ದಿನಾಂಕ 27/10/18 ರಂದು ಟಿಪ್ಪರ ಮೂಲಕ ಆಕ್ರಮವಾಗಿ ಮರಳು ಸಾಗಿಸುತ್ತಿದ್ದು ಶ್ರೀ ಸೂರ್ಯಕಾಂತ ಎ.ಎಸ್.ಐ ಫರಹತಾಬಾದ ಪೊಲೀಸ ಠಾಣೆ ಟಿಪ್ಪರ ನಂ ಕೆಎ-35 ಬಿ-6364 ನೇದ್ದರ ಮಾಲಿಕ & ಚಾಲಕರು ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮರಳು ಕಳ್ಳತನ ಮಾಡಿ ಸಾಗಾಣೆ ಮಾಡುವ ಕಾಲಕ್ಕೆ ಜಪ್ತಿ ಟಿಪ್ಪರ & ಮರಳು ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮ ಜರೂಗಿಸುವ ಕುರಿತು ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ತಸ್ಲೀಮ್‌ ಆರೀಫ ತಂದೆ ಶೇಖ ಯೂಸುಫ ಸಾ:ಮನೆ.ನಂ.1041/9/3/8 ಇಕ್ಬಾಲ್‌ ಕಾಲೋನಿ ಎಂ.ಎಸ್‌‌.ಕೆ ಮೀಲ್‌ ಕಲಬುರಗಿ ರವರ ತಂದೆ-ತಾಯಿಯವರು ಮೈಸೂರಿಗೆ ಹೋಗಿದ್ದು ನಾನು ದಿನಾಂಕ:23/10/2018 ರಂದು ಉಸ್ಮಾನಾಬಾದಕ್ಕೆ ಹೋಗಿದ್ದು ದಿನಾಂಕ:25/10/2018 ರಂದು 4.00 ಪಿ.ಎಂಕ್ಕೆ ನಮ್ಮ ಸಹೋದರಿಯಾದ ಶ್ರೀಮತಿ ಸಲ್ಮಾ ಬೇಗಂ ಗಂಡ ಅಬ್ದುಲ ಹಮೀದ್‌ ಇವರು ನಮ್ಮ ಮನೆಯಲ್ಲಿ ಇದ್ದು ಕೀಲಿ ಹಾಕಿಕೊಂಡು ಹೋಗಿದ್ದು ನಾನು ದಿನಾಂಕ:26/10/2018 ರಂದು 12.00 ಪಿ.ಎಂ ಸುಮಾರಿಗೆ ನನ್ನ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲ ಕೀಲಿ ಮುರಿದಿದ್ದು ನಾನು ಮನೆಯಲ್ಲಿ ಹೋಗಿ ಪರಿಶೀಲಿಸಿ ನೋಡಲಾಗಿ ಮನೆಯ ಅಲಮಾರಿದಲ್ಲಿದ್ದ ಬಂಗಾರದ ಆಭರಣಗಳು ಮತ್ತು ನಗದು ಹಣ  ಒಟ್ಟು 93000/-ರೂ ಬೆಲೆ ಬಾಳುವ ಚಿನ್ನದ ಆಭರಣ, ಮೊಬೈಲ್‌, ನಗದು ಹಣ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುರಿ ಕಳವು ಪ್ರಕರಣ :
ನರೋಣಾ ಠಾಣೆ : ದಿನಾಂಕ:27/10/2018 ರಂದು ಶ್ರೀಗುರುಶರಣ ತಂದೆ ಧರ್ಮರಾವ ಮಾಲಿಪಾಟೀಲ್ ಸಾ||ದಣ್ಣೂರ ಗ್ರಾಮ ರವರು ತಮ್ಮ ಕುರಿ ಕಾಯಲು ನಮ್ಮೂರಿನ ಯಲ್ಲಪ್ಪ ತಂದೆ ದಸರತ ಕಾಂಬಳೆ ಇವರಿಗೆ ಕೆಲಸಕ್ಕೆ ಇಟ್ಟಿಕೊಂಡಿದ್ದು ಪ್ರತಿ ದಿವಸ ಮುಂಜಾನೆ ನಮ್ಮ ದೊಡ್ಡಿಯಿಂದ ಕುರಿಗಳನ್ನು ಹೊಡೆದುಕೊಂಡು ಸಯಂಕಾಲ 6-00 ಗಂಟೆ ಸುಮಾರಿಗೆ ವಾಪಸ್ಸು ಮನೆಗೆ ತಂದು ಕಟ್ಟುತ್ತಾನೆ. ದಿನಾಂಕ: 26/10/2018 ರಂದು ಮುಂಜಾನೆ 08-00 ಗಂಟೆ ಸುಮಾರಿಗೆ ಯಲ್ಲಪ್ಪಾ ತಂದೆ ದಶರಥ ಕಾಂಬಳೆ ಈತನು ನಮ್ಮ 12 ಕುರಿಗಳನ್ನು ಮೆಯಸಿಕೊಂಡು ಬರಲು ಮನೆಯಿಂದ ಹೊಡೆದುಕೊಂಡು ಹೋಗಿ ವಾಪಸ್ಸು ಸಂಜೆ 6-00 ಗಂಟೆಗೆ ಬಂದು ಕುರಿಗಳನ್ನು ನಮ್ಮ ಹೊಸ ಮನೆಯ ಪಕ್ಕದಲ್ಲಿ ಕಟ್ಟಿ ಮನೆಗೆ ಹೊಗಿರುತ್ತಾನೆ. ನಾನು ಹಳೆ ಮನೆಯಲ್ಲಿ ಮಲಗಿರುವಾಗ ಮದ್ಯರಾತ್ರಿ 1-30 ಗಂಟೆ ಸುಮಾರಿಗೆ ನಮ್ಮ ಹೊಸಮನೆಯ ಪಕ್ಕದಲ್ಲಿ ವಾಸವಿರುವ ನಮ್ಮೂರಿನ ಕಮಲಾಕರ ತಂದೆ ಶಿವಲಿಂಗಪ್ಪ ಮೂಲಗೆ ಇವರು ಬಂದು ನಮ್ಮ ಹೊಸಮನೆಯ ಪಕ್ಕದಲ್ಲಿ ಕಟ್ಟಿರುವ 12 ಕುರಿಗಳಲ್ಲಿ 11 ಕುರಿಗಳನ್ನು  ಯಾರೋ ಕಳವು ಮಾಡಕೊಂಡು ಹೋಗಿರುತ್ತಾರೆ ಎಂದು ತಿಳಿಸಿದ ಮೇರೆಗೆ ನಾನು ತಕ್ಷಣವೆ ಹೊಸಮನೆಗೆ ಬಂದು ನನ್ನ ತಾಯಿಗೆ ವಿಚಾರಿಸಲು ರಾತ್ರಿ 10 ಗಂಟೆಗೆ ಕೊನೆಯದಾಗಿ ಕುರಿಗಳಿಗೆ ನೀರು ಕುಡಿಸಿ ಮನೆಯಲ್ಲಿ ಮಲಗಿದ್ದು, ಆನಂತರ ಮದ್ಯರಾತ್ರಿ 01-00 ಗಂಟೆ ಸುಮಾರಿಗೆ ಕುರಿ ವಳ್ಳುವ ಶಬ್ದಕೇಳಿ ಹೊರೆಗೆ ಬಂದು ನೋಡಲಾಗಿ 11 ಕುರಿಗಳನ್ನು ಯಾರೋ ಕಳ್ಳರು ಕಳುವುಮಾಡಿಕೊಂಡು ಹೋಗಿದ್ದು ಒಂದು ಕುರಿ ಮಾತ್ರ ಇರುವ ಬಗ್ಗೆ ತಿಳಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 26/10/18 ರಂದು ರಾಷ್ಟ್ರೀಯ ಹೇದ್ದಾರಿ 218ರ ಬ್ಲೂ ಸ್ಟಾರ ದಾಬಾದ ಹತ್ತಿರ ಟವೇರಾ ನಂ ಕೆಎ-32 ಎನ್-5628 ನೇದ್ದರ ಚಾಲಕ ವೀರಯ್ಯಾ ಹೆರೇಮಠ ಇವನು ತನ್ನ ಟವೇರಾ ವಾಹನವನ್ನು  ಅಲಕ್ಷ್ಯತನದಿಂದ ಚಲಾಯಿಸಿ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ವಾಹನ ಪಲ್ಟಿ ಆಗಿ ಶ್ರೀ  ಚಂದ್ರಕಾಂತ ತಂದೆ ಗುರುಬಸಪ್ಪ ಸಾಃ ಜೇವರಗಿ ಮತ್ತು  ಮಗಳಿಗೆ & ಹೆಂಡತಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 October 2018

KALABURAGI DISTRICT REPORTED CRIMES

ಕೊಲೆ ಮಾಡಿ ದರೋಡೆ ಮಾಡಿದ ಪ್ರಕರಣ :
ಮುಧೋಳ ಠಾಣೆ : ಶ್ರೀ ವೆಂಕಟೇಶ ತಂದೆ ಬಸವರಾಜ ತಲ್ಕಾಪಲ್ಲಿ ಸಾ|| ಮುನಕನಪಲ್ಲಿ ಗ್ರಾಮ ತಾ|| ಸೇಡಂ, ರವರ ತಂದೆಯಾದ ಬಸವರಾಜ ಇವರು ಈಗ 7-8 ವರ್ಷಗಳ ಹಿಂದೆ ಬೆಂಗಳೂರಿನಿಂದ ನಮ್ಮೂರಿಗೆ ಬಂದು ನಮ್ಮೂರ ಊರ ಹೊರಗಡೆ ನಮ್ಮ ಹೊಲದಲ್ಲಿ ಒಂದು ಮನೆಯ ಕಟ್ಟಿಸಿ, ಒಕ್ಕಲುತನ ಕೆಲಸ ಮಾಡಿಕೊಂಡಿದ್ದರು. ನಾನು ನಮ್ಮ ತಾಯಿಯಾದ ದೇವಕ್ಕಮ್ಮ ಮತ್ತು ನಮ್ಮ ತಮ್ಮ ಹಾಗು ತಂಗಿ ನಾವು 04 ಜನರು ಬೆಂಗಳೂರಿನಲ್ಲಿ ಇದ್ದೇವು. ನನಗೆ ಈಗ 2 ವರ್ಷಗಳ ಹಿಂದೆ ನಮ್ಮ ತಂದೆ ತಾಯಿಯವರು ತೆಲಂಗಾಣಾದ ಪರಗಿ ಹತ್ತಿರ ಇರುವ ರೂಪಕಾನಪೇಟ ಗ್ರಾಮದ ಸವಿತಾ ತಂದೆ ಕಿಷ್ಟಪ್ಪ ಇವರೊಂದಿಗೆ ಮದುವೆ ಮಾಡಿದ್ದು, ನಾನು ನನ್ನ ಹೆಂಡತಿಯೊಂದಿಗೆ ನಮ್ಮೂರಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡು ಇದ್ದೇನು. ನಮ್ಮ ತಾಯಿ ದೇವಕ್ಕಮ್ಮ ಮತ್ತು ನಮ್ಮ ತಮ್ಮ ಅಶೋಕ ನಮ್ಮ ತಂಗಿ ಸವಿತಾ ಇವರು ತಲಘಟಪೂರ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿರುತ್ತಾರೆ. ಇಲ್ಲಿ ನಮ್ಮೂರಲ್ಲಿ ನಾನು ಹಾಗು ನನ್ನ ಹೆಂಡತಿ ಸವಿತಾ ಮತ್ತು ನಮ್ಮ ತಂದೆ ಬಸವರಾಜ ಹಾಗು ತಂದೆಯ ತಾಯಿ(ಅಜ್ಜಿ) ಬಾಲಮ್ಮ ಗಂಡ ಆಶಪ್ಪ ನಾವು 4 ಜನರು ಇರುತ್ತೇವೆ. ದಿನಾಂಕ: 24-10-2018 ರಂದು ರಾತ್ರಿ ನಾನು ನಮ್ಮ ತಂದೆ ಎಲ್ಲರೂ ಮನೆಯಲ್ಲಿ ಊಟ ಮಾಡಿ ನಾನು ಹಾಗು ನನ್ನ ಹೆಂಡತಿಯಾದ ಸವಿತಾ ಇಬ್ಬರು ಮನೆಯೋಳಗೆ ಬೇಡ ರೂಮನಲ್ಲಿ ಮಲಗಿಕೊಂಡಿದ್ದು, ನಮ್ಮ ಅಜ್ಜಿಯಾದ ಬಾಲಮ್ಮ ಮತ್ತು ನಮ್ಮ ಚಿಕ್ಕಪ್ಪನ ಮಗನಾದ ರವಿ ತಂದೆ ಹಣಮಂತು ಮುನಕನಪಲ್ಲಿ ಇವರಿಬ್ಬರು ನಮ್ಮ ಮನೆಯ ಹಾಲನಲ್ಲಿ ಮಲಗಿಕೊಂಡಿದ್ದು, ನಮ್ಮ ಬಂದೆ ಬಸವರಾಜ ತಂದೆ ಆಶಪ್ಪ ಇವರು ನಮ್ಮ ಮನೆಯ ಮುಂದುಗಡೆ ಮಂಚದ ಮೇಲೆ ಮಲಗಿಕೊಂಡಿದ್ದರು, ನಾವು ಮನೆಯಲ್ಲಿ ಮಲಗಿಕೊಂಡಿದ್ದಾಗ ರಾತ್ರಿ ದಿನಾಂಕ: 25-10-2018 ರಂದು 1200 ಗಂಟೆ ಸುಮಾರಿಗೆ ಹೊರಗಡೆ ನಮ್ಮ ತಂದೆ ಚೀರಿದ ಸಪ್ಪಳ ಕೇಳಿಬಂದು ಆಗ ಮನೆಯ ಹಾಲನಲ್ಲಿ ಮಲಗಿಕೊಂಡಿದ್ದ ನಮ್ಮ ಚಿಕ್ಕಪ್ಪನ ಮಗನಾದ ರವಿ ಇತನು ಮನೆಯ ಬಾಗಿಲು ತೆರೆದಾಗ, ಹೊರಗಡೆಯಿಂದ ಯಾರೋ 3 ಜನ ಕೈಯಲ್ಲಿ ಬಡಿಗೆ ಹಿಡಿದುಕೊಂಡು, ತಲೆಗೆ ಹಾಗು ಮುಖಕ್ಕೆ ಟೋಪಿ ಹಾಕಿಕೊಂಡು, ಮನೆಯೋಳಗೆ ಬಂದು, ನಮಗೆ ಏನು ಮಾತನಾಡದೆ, ಓಮ್ಮೇಲೆ ನಮ್ಮ ತಮ್ಮನಾದ ರವಿ ಇತನಿಗೆ ಬಡಿಗೆಯಿಂದ ಹೊಡೆಯ ಹತ್ತಿದರು, ಆಗ ನಾನು ಮತ್ತು ನಮ್ಮ ಅಜ್ಜಿಯಾದ ಬಾಲಮ್ಮ ಬಿಡಿಸಲು ಹೋದಾಗ ಈ 3  ಜನರು ನನಗು ಹಾಗು ನಮ್ಮ ಅಜ್ಜಿಯಾದ ಬಾಲಮ್ಮ ಇವರಿಗೆ ಕಟ್ಟಿಗೆಯಿಂದ ಹೊಡೆದು, ಅವಳ ಕೊರಳಲ್ಲಿದ್ದ ಒಂದು ತೊಲೆ ಬಂಗಾರ ಸಣ್ಣ ಗುಂಡಿನ ಸರವನ್ನು ಕಿತ್ತಿಕೊಂಡಿದ್ದು, ಇದು ಅರ್ದ ತುಂಡಾಗಿ ಮನೆಯಲ್ಲಿ ಬಿದಿದ್ದು ಇರುತ್ತದೆ. ನಂತರ ಇವರು ಮನೆಯಲ್ಲಿದ್ದ ನನ್ನ ಹೆಂಡತಿಯಾದ ಸವಿತಾ ಇವಳ ಹತ್ತಿರ ಹೋಗಿ ನನ್ನ 07 ತಿಂಗಳ ಗಂಡು ಮಗುವಿಗೆ ಕಸಿದುಕೊಳ್ಳಲು ಹೋದಾಗ, ನನ್ನ ಹೆಂಡತಿಯು ನನ್ನ ಮಗುವಿಗೆ ಏನು ಮಾಡಬೇಡಿರಿ ಕಾಲು ಬಿಳುತ್ತೇನೆ ಅಂತಾ ಬೇಡಿಕೊಂಡಳು, ಆಗ ನಾವು ಚೀರಾಡುತ್ತಿದ್ದಾಗ, ಸದರಿಯವರು ಮನೆಯಿಂದ ಹೊರೆ ಬಂದರು, ನಂತರ ನಾವು ಹೊರಗಡೆ ಬಂದು ನೋಡಲಾಗಿ ಅವರ ಜೋತೆಯಲ್ಲಿ ಬಂದಿದ್ದ ಇನ್ನು ಇಬ್ಬರು ವ್ಯಕ್ತಿಗಳು ಹೊರಗಡೆಯಿಂದ ಯಾರು ಬರದಂತೆ ನೋಡುತ್ತಾ ನಿಂತಿದ್ದರು. ನಾನು ಹೇದರಿಕೊಂಡು ಮನೆಯಿಂದ ಊರೋಳಗೆ ಓಡಿ ಹೋಗಿ ಅಲ್ಲೇ ಮನೆಯ ಸಮೀಪದಲ್ಲಿರುವ ದಯಾನಂದ ಸ್ವಾಮಿ, ರಾಜಾ ಅಹೇಮದ್ ತಂದೆ ಲಾಲ ಅಹೇಮದ್ ಇತರರಿಗೆ ಕರೆದುಕೊಂಡು ಬಂದಿದ್ದು, ಅಷ್ಟರಲ್ಲಿ ಅವರು ಮನೆಯಿಂದ ಓಡಿಹೋಗಿದ್ದು ಇರುತ್ತದೆ. ನಂತರ ನೋಡಲಾಗಿ ಮನೆಯ ಹೊರಗಡೆ ಮಲಗಿದ ನಮ್ಮ ತಂದೆ ಬಸವರಾಜ ಇತನಿಗೆ ಬಲಗಡೆ ಕಿವಿಯ ಹತ್ತಿರ ರಕ್ತಗಾಯವಾಗಿ ಇವರು ಮಲಗಿದಲ್ಲೇ ಮೃತ ಪಟ್ಟಿದ್ದು ಇರುತ್ತದೆ. ನನಗೆ ಸದರಿಯವರು ಕಟ್ಟಿಗೆಯಿಂದ ಹೊಡದಿದ್ದರಿಂದ ನನ್ನ ತಲೆಗೆ ಮುಂದುಗಡೆ ಹಣೆಗೆ ಹಾಗು ಸೊಂಟಕ್ಕೆ, ಎಡಗೈ ಮೊಣಕೈ ಹತ್ತಿರ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದು, ನಮ್ಮ ಅಜ್ಜಿಯಾದ ಬಾಲಮ್ಮ ಇವಳಿಗೆ ಹಣೆಗೆ ಹಾಗು ಕಣ್ಣಿಗೆ ಹಾಗು ಮುಖಕ್ಕೆ ಇತರೆ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದು, ಮತ್ತು ನಮ್ಮ ಚಿಕ್ಕಪ್ಪನ ಮಗನಾದ ರವಿ ಇತನ ಮುಖಕ್ಕೆ, ಕಣ್ಣಿನ ಹತ್ತಿರ ಹಾಗು ಇತರೆ ಕಟ್ಟಿಗೆಯಿಂದ ಹೊಡೆದು ಭಾರಿಗಾಯ ಪಡಿಸಿದ್ದು ಇದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 25.10.2018 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ನ್ಯೂ ರಾಘವೇಂದ್ರ ಕಾಲೋನಿಯ ಮೊರೆ ಕಾಂಪ್ಲೇಕ್ಸ ಹತ್ತಿರ ಇರುವ ಅಟೊ ಸ್ಟಾಂಡದಲ್ಲಿ ಇಬ್ಬರು ವ್ಯಕ್ತಿಗಳು ಕುಳಿತು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮೊರೆ ಕಾಂಪ್ಲೇಕ್ಸ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತುಕೊಂಡು ನೋಡಲು ಮೊರೆ ಕಾಂಪ್ಲೇಕ್ಸ ಮುಂದಿ ಅಟೊ ಸ್ಟಾಂಡದಲ್ಲಿ ಇಬ್ಬರು ವ್ಯಕ್ತಿಗಳು ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವರನ್ನು ನಾನು ಮತ್ತು ಸಿಬ್ಬಂದಿಯವರು ಕೂಡಿ ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯರು ತಮ್ಮ ಹೆಸರು 1. ಯಲ್ಲಾಲಿಂಗ ತಂದೆ ಸುಭಾಷ ಚಿನ್ನಪಳ್ಳಿ ಸಾ: ಗಂಗಾನಗರ ಹನುಮಾನ ದೇವರ ಗುಡಿ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಅವನ ಹತ್ತಿರ ನಗದು ಹಣ 650/-ರೂ 1 ಮಟಕಾ ಚೀಟಿ ಮತ್ತು ಒಂದು ಬಾಲ ಪೇನ್ ದೊರೆತಿದ್ದು. 2. ಬಾಬು ತಂದೆ ದತ್ತು ಗಾಣಗಾಪೂರ ಸಾ: ಯಲ್ಲಮ್ಮ ಗುಡಿ ಹತ್ತಿರ ಗಂಗಾನಗರ ಕಲಬುರಗಿ ಇತನ ಹತ್ತಿರ ನಗದು ಹಣ 550/- ರೂ 1 ಮಟಕಾ ಚೀಟಿ ಮತ್ತು ಒಂದು ಬಾಲ ಪೇನ್ ದೊರೆತಿದ್ದು ಒಟ್ಟು ನಗದು ಹಣ 1200/- ರೂಪಾಯಿ 2 ಮಟಕಾ ಚೀಟಿ ಮತ್ತು 2 ಬಾಲ ಪೇನ್ನುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ದ್ವಿಚಕ್ರ ವಾಹನ ಕಳವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ನಾಗರಾಜ ತಂದೆ ಹಣಮಂತಪ್ಪ ಹಡಪದ ಮು:ಕಮಲಾಪೂರ ತಾ:ಜಿ:ಕಲಬುರಗಿ ರವರು ದಿನಾಂಕ:22.10.2018 ರಂದು ಮದ್ಯಾಹ್ನದ ವೇಳೆಯಲ್ಲಿ ಕಮಲಾಪೂರನಲ್ಲಿರುವ ಮಾಣಿಕೇಶ್ವರ ಶೋರೂಮನಿಂದ ಹೋಸದಾಗಿ ಕಪ್ಪು ಬಣ್ಣದ ಹಿರೊ ಸ್ಪ್ಲೆಂಡರ ಪ್ಲಸ್ ಮೋಟರಸೈಕಲ ನೇದ್ದು ಖರಿದಿ ಮಾಡಿದ್ದು. ಅದರ ಟಿ.ಪಿ. ನಂಬರ- KA/32TMP/2018/10299 ಮತ್ತು ಅದರ ಇಂಜಿನ ನಂಬರ HA10AGJHH11308 ಹಾಗೂ ಅದರ ಚೆಸ್ಸಿ ನಂಬರ- MBLHAR086JHH03621 ಇದ್ದು. ಇನ್ನೂ ನನ್ನ ಹೆಸರಿಗೆ ಕಾಗದ ಪತ್ರಗಳು ನೊಂದಣಿ ಆಗಿರುವುದಿಲ್ಲ. ಹೀಗಿದ್ದು ದಿನಾಂಕ:22-10-2018 ರಂದು ಸಾಯಂಕಾಲ 07.15 ಗಂಟೆಯ ಸೂಮಾರಿಗೆ ನಾನು ಮೇಲ್ಕಂಡ ನನ್ನ ಮೋಟರ ಸೈಕಲ ಮೇಲೆ ಕಮಲಾಪೂರನ ಕೃಷ್ಣಾ ಗ್ರಾಮೀಣ ಬ್ಯಾಂಕನ ಪಕ್ಕದಲ್ಲಿರುವ ಬಸವೇಶ್ವರ ಫೈನಾನ್ಸಲ್ಲಿ ಕೆಲಸ ಮಾಡುತ್ತಿರುವ ನನ್ನ ಹಿರಿಯ ಮಗನಾದ ಆಕಾಶ ಹಡಪದ ಈತನಿಗೆ ಭೇಟಿಯಾಗಲು ಹೋಗಿದ್ದು. ಮೋಟರ ಸೈಕಲನ್ನು ಫೈನಾನ್ಸನ ಹೋರಗಡೆ ನಿಲ್ಲಿಸಿ ನಾನು ಫೈನಾನ್ಸನ ಒಳಗಡೆ ನನ್ನ ಮಗನಿಗೆ ಭೇಟಿಯಾಗಲು ಹೋಗಿ ವಾಪಸ್ಸ ಅಂದೇ 07.30 ಪಿ.ಎಮ್.ಕ್ಕೆ ನಾನು ಫೈನಾನ್ಸ ಒಳಗಿನಿಂದ ಹೋರಗಡೆ ಬಂದು ನೋಡಲು ಮೇಲ್ಕಂಡ ನನ್ನ ಮೋಟರೆಸೈಕಲ ನಾನು ಇಟ್ಟ ಜಾಗದಲ್ಲಿ ಇರಲಿಲ್ಲ. ನಂತರ ನಾನು ಗಾಬರಿಗೊಂಡು ಸದರಿ ವಿಷಯವನ್ನು ನನ್ನ ಮಗ ಆಕಾಶ ಹಡಪದ ಮತ್ತು ಶಿವಕುಮಾರ ತಂದೆ ಗುಂಡಪ್ಪ ಟೆಂಗಳಿ ಇವರಿಗೆ ತಿಳಿಸಿದು. ನಂತರ ನಾವೇಲ್ಲರೂ ಕೂಡಿ ಅಂದಿನಿಂದ ಇಂದಿನ ವರೆಗೆ ಕಮಲಾಪೂರ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹೋಗಿ ಮೇಲ್ಕಂಡ ನನ್ನ ಮೋಟರ ಸೈಕಲನ್ನು ಹುಡುಕಾಡಿದರು ನನ್ನ ಮೋಟರಸೈಕಲ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.