POLICE BHAVAN KALABURAGI

POLICE BHAVAN KALABURAGI

26 November 2012

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಮಹ್ಮದ ಸಾಜೀದ ಅಹ್ಮದ ತಂದೆ ಅಬ್ದುಲ ಸುಕ್ಕುರ ವ|| 21 ವರ್ಷ ಉ|| ಕೂಲಿ ಕೆಲಸ ಸಾ|| ಹೊಸ ರಾಘವೇಂದ್ರ ಕಾಲೋನಿ ಬ್ರಹ್ಮಪೂರ ಗುಲಬರ್ಗಾ ನಾನು ದಿನಾಂಕ:26-11-12 ರಂದು ರಾತ್ರಿ 00-30 ಗಂಟೆ ಸುಮಾರಿಗೆ ನನ್ನ ಗೆಳೆಯನ ಜೊತೆ ದ್ವಿ-ಚಕ್ರ ವಾಹನದ ಮೇಲೆ ಹಿಂದೆ ಕುಳಿತುಕೊಂಡು ಡಾಲಫೀನ ಶಾಲೆ ಹತ್ತಿರ ಹೋರಟಾಗ ಅಲ್ಲಿ ಆರೀಪ ಇತನು ನಿಂತಿದ್ದು ನಮ್ಮನ್ನು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ತನ್ನ ಬಳಿ ಇರುವ ಚಾಕುವಿನಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:86/2012 ಕಲಂ 341, 323, 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಜೇವರಗಿ ಪೊಲೀಸ್ ಠಾಣೆ:ಶ್ರೀ ಮಾನಪ್ಪ ತಂದೆ ಈರಣ್ಣಾ ದೊಡ್ಡಮನಿ  ಸಾ: ಬಿರಾಳ ಬಿ ತಾ: ಜೇವರ್ಗಿ ನಮ್ಮೂರ ಯಲ್ಲಾಲಿಂಗ ತಂದೆ ಭೀಮರಾಯ ಟಣಕೇದಾರ ಮತ್ತು ಅವರ ಜನಾಂಗದವರು ಅಲ್ಲದೇ ಇತರೆ ಜನರೊಂದಿಗೆ ಕೂಡಿಕೊಂಡು ದಿನಾಂಕ:30-7-2012 ರಂದು ಬಿರಾಳ (ಬಿ) ಗ್ರಾಮದ ಬಸವೇಶ್ವರ ಕಟ್ಟೆಯನ್ನು ದ್ವಂಶಗೊಳಿಸಿ, ಅದೇ ವಿಷಯದಲ್ಲಿ ನಮ್ಮ ಮತ್ತು ಲಿಂಗಾಯತ ಜನರೊಂದಿಗೆ ದ್ವೇಶ ಸಾಧಿಸುತ್ತಾ ಬಂದಿದ್ದಿಲ್ಲದೇ ಒಂದಿಲ್ಲ ಒಂದು ದಿವಸ ನಮ್ಮಗೆ ಖಲಾಸ ಮಾಡಿಯೇ ಬಿಡುತ್ತೇವೆ ಅಂತ ಊರಲ್ಲಿ ಬೈದಾಡುತ್ತಾ ಬಂದಿದ್ದು, ದಿನಾಂಕ: 25-11-2012 ರಂದು ಸಾಯಂಕಾಲ 5-00 ಗಂಟೆಗೆ ಬಿರಾಳ (ಬಿ) ಗ್ರಾಮದ ಗ್ರಾಮ ಪಂಚಯತ ಎದರು ಖುಲ್ಲಾ ಜಾಗೆಯಲ್ಲಿ ಯಲ್ಲಾಲಿಂಗ ತಂದೆ ಭೀಮರಾಯ ಟಣಕೇದಾರ ಸಂಗಡ 71   ಜನರು ಸಾ:ಎಲ್ಲರೂ ಬಿರಾಳ (ಬಿ ಗ್ರಾಮದವರು ಕೊಲೆ ಮಾಡು ಉದ್ದೇಶದಿಂದ ಗುಂಪು ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ )ರಾಡು, ಕೊಡಲಿ, ಕಲ್ಲು ಬಡಿಗೆ ಹಿಡಿದುಕೊಂಡು ಬಂದು ನನಗೆ ಮತ್ತು ಗ್ರಾಮದ ಇತರ ಜನರಿಗೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:175/12 ಕಲಂ 143. 147. 148. 323. 324. 336. 307 ಸಂಗಡ 147 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀ ಅಯ್ಯಪ್ಪ ತಂದೆ ಸಿದ್ದಪ್ಪ ನಾಗನಟಗಿ ಬೇಡರ ಸಾ:ಬಿರಾಳ (ಬಿ) ರವರು ನಮ್ಮೂರ ನಿಂಗನಗೌಡ ತಂದೆ ಅಯ್ಯನಗೌಡ  ಮತ್ತು ಅವರ ಜನಾಂಗದವರು ನಿರ್ಮಿಸಿದ ಬಸವೇಶ್ವರ ಕಟ್ಟೆಯನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಇತರರು ಕೂಡಿಕೊಂಡು ನ್ಯಾಯಾಲಯದ ಆದೇಶದ ಪ್ರಕಾರ ಕಾನೂನು ರೀತಿ ದಿನಾಂಕ:30/07/2012 ರಂದು ಕಟ್ಟೆಯನ್ನು ತೆರುವಗೊಳಿಸಿದ್ದು ಇರುತ್ತದೆ. ಅದೇ ವೈಶ್ಯಮ್ಯದಿಂದ ಲಿಂಗಾಯತ ಜನಾಂಗದವರು ಮತ್ತು ಇತರ ಜನಾಂಗದವರು ಕೂಡಿಕೊಂಡು ನಮ್ಮ ಸಮಾಜದ ಮೇಲೆ ಹಲ್ಲೇ ಮಾಡುತ್ತಾ ಬಂದಿದಲ್ಲದೇ ದಿನಾಂಕ:25-11-2012 ರಂದು ಸಾಯಾಂಕಾಲ 5-00 ಗಂಟೆಗೆ ಗ್ರಾಮ ಪಂಚಾಯತಿ ಕಾರ್ಯಾಲಯದ ಖುಲ್ಲಾ ಜಾಗದಲ್ಲಿ ನಿಂಗಣ್ಣಾ ಗೌಡ ತಂದೆ ಅಯ್ಯಣಗೌಡ ಮಾಲಿ ಪಾಟೀಲ ಸಂಗಡ 24 ಜನರು ಅಲ್ಲದೇ ಗ್ರಾಮದ ಇತರರು ಸಾ:ಬಿರಾಳ (ಬಿ) ಗುಂಪು ಕಟ್ಟಿಕೊಂಡು ಬಂದು ನನಗೆ ಮತ್ತು ನಮ್ಮ ಜನಾಂಗದವರಿಗೆ ಕೊಲೆ ಮಾಡುವ ಉದ್ದೇಶದಿಂದ ಅವರಲ್ಲಿಯ ಕೆಲವು ಜನರು ಕೈಯಲ್ಲಿ ಬಡಿಗೆ, ಕಲ್ಲುಗಳು ಹಿಡಿದುಕೊಂಡು,ನಾವು ಕಟ್ಟಿದ ಬಸವೇಶ್ವರ ಕಟ್ಟೆ ದ್ವಂಶ ಮಾಡಿರುತ್ತಾರೆ. ಶರಣಬಸಪ್ಪ ತಂದೆ ಕರಣಪ್ಪ ಆಂದೊಲಾ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ  ನನ್ನ ತಲೆಗೆ ಹೊಡೆದು ರಕ್ತಗಾಯಗೊಳಿಸಿದನು. ನಿಂಗಣ್ಣಗೌಡ ತಂದೆ ಅಯ್ಯಣಗೌಡ ಪಾಟೀಲ  ಇತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯಗೊಳಿಸಿದನು.  ಅಲ್ಲದೆ ಅವರಲ್ಲಿಯ ಕೆಲವು ಜನರು ಒಮ್ಮೇಲೆ ಅವರ ಕೈಯಲ್ಲಿದ ಬಡಿಗೆಗಳಿಂದ ನಮ್ಮ ಜನಾಂಗದವರಿಗೆ  ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು ಗುಪ್ತಪೆಟ್ಟು ಮಾಡಿರುತ್ತಾರೆ, ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:176/12 ಕಲಂ 143.147.148.323.324.504.506.336.307 ಐ.ಪಿ.ಸಿ ಸಂ 3(1) (10) ಎಸ.ಸಿ/ಎಸ.ಟಿ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರುಯತ್ನ:
ಮುಧೋಳ ಪೊಲೀಸ್ ಠಾಣೆ:ಶ್ರೀ ಮೋಹನರಡ್ಡಿ ತಂದೆ ವೆಂಕಟರಡ್ಡಿ ನಾಯಕಿನ್ ಸಾ|| ಆಡಕಿ ಗ್ರಾಮ ತಾ|| ಸೇಡಂ ರವರು ನಮ್ಮ ಹೊಲ ಹಾಗೂ ನಮ್ಮ ಪಕ್ಕದ ಮನೆಯವರಾದ ನಮ್ಮ ಜಾತಿಯ ಸಾಯಿರಡ್ಡಿ ಇವರ ಹೊಲ ಅಕ್ಕಪಕ್ಕದಲ್ಲಿದ್ದು ನಮ್ಮ ಹೊಲಕ್ಕೆ ಹೋಗಬೇಕಾದರೆ ಸಾಯಿರಡ್ಡಿ ಇವರ ಹೊಲದಿಂದ ಹೋಗಲು ದಾರಿ ಇದ್ದು ಸಾಯಿರಡ್ಡಿ ಇತನು ನಮಗೆ ತನ್ನ ಹೊಲದಿಂದ ನಮ್ಮ ಹೊಲಕ್ಕೆ ಹೋಗದಂತೆ ಒಂದು ವರ್ಷದಿಂದ ತಕರಾರು ಮಾಡುತ್ತಿದ್ದು ನಮ್ಮ ಮೇಲೆ ವೈಮನಸ್ಸು ಹೊಂದಿರುತ್ತಾರೆ. ದಿನಾಂಕ:25-11-2012 ರಂದು ರಾತ್ರಿ 9-00 ಗಂಟೆಗೆ ನಾನು ಹಾಗೂ ನಮ್ಮ ಅಣ್ಣ-ತಮ್ಮಕಿಯವರಾದ  ಶ್ರೀನಿವಾಸರಡ್ಡಿ ತಂದೆ ಮಾಸರಡ್ಡಿ ನಾಯಕಿನ್, ಮೋಹನರಡ್ಡಿ ತಂದೆ ನರಸಿಂಹಲು ಮನ್ನೆ  ನರಸಿಂಹಲು ತಂದೆ ನಾಗಪ್ಪಾ, ಮನ್ನೆ ಕೃಷ್ಣಾ ತಂದೆ ನರಸಿಂಹಲು ಮನ್ನೆ, ಅನಿಲ ತಂದೆ ಕೃಷ್ಣಾ ಮನ್ನೆ, ಶ್ರೀಕಾಂತ ತಂದೆ ಮೋಹನರಡ್ಡಿ ಮನ್ನೆ ಎಲ್ಲರೂ ಕೂಡಿ ಮೋಹರಂ ನೋಡಿ ಮನೆಗೆ ಬರುತ್ತಿದ್ದಾಗ ದಾರಿಯಲ್ಲಿ ನೀರಿನ ಟ್ಯಾಂಕಿನ ಹತ್ತಿರ ಸಾಯಿರಡ್ಡಿ, ರಘುಪತಿರಡ್ಡಿ,ನಾಗರಡ್ಡಿ,ಲಾಲಪ್ಪಾ ತಂದೆ ಬಸಪ್ಪಾ ಮನ್ನೆ,ಶಾಣಪ್ಪಾ ತಂದೆ ಶಾಮಪ್ಪಾ ಮನ್ನೆ ಮತ್ತು ಶ್ರೀನಿವಾಸರಡ್ಡಿ ತಂದೆ ತಿಪ್ಪಣ್ಣ ಮನ್ನೆ ಸಾ|| ಎಲ್ಲರೂ ಆಡಕಿ ಗ್ರಾಮ ರವರು ಕೈಯಲ್ಲಿ ರಾಡು, ಕಲ್ಲು ಕೊಡಲಿ, ಬಡಿಗೆ ಹಿಡಿದುಕೊಂಡು ಬಂದು ನಮಗೆ ನಿಲ್ಲಿಸಿ ಅವಾಚ್ಯವಾಗಿ ಬೈದು ನೀವು ನಮ್ಮ ಹೊಲದಿಂದ ಹೋಗಬೇಡಿರಿ ಅಂದರೂ ಕೂಡಾ ಯಾಕೆ ಹೋಗುತ್ತೀರಿ ಅಂತಾ ಜಗಳ ತಗೆದು ಕೊಲೆ ಮಾಡುವ ಉದ್ಯೇಶದಿಂದ ಕೊಡಲಿಯಿಂದ .ರಾಡಿನಿಂದ ,ಬಡಿಗೆಯಿಂದ ,ಕಲ್ಲಿನಿಂದ ಹೊಡೆಬಡೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:150/2012 ಕಲಂ- 143,147,148,341, 324,307504, 506 ಸಂ. 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಅಪಹರಣ ಪ್ರಕರಣ:
ಮಹಾಗಾಂವ ಪೊಲೀಸ ಠಾಣೆ: ದಿನಾಂಕ: 24-11-2012 ರಂದು ನಾನು ಹೊರಗಡೆ ಬಂದಾಗ ಅರೀಫ ತಂದೆ ಬಾಷಾಸಾಬ  ಸಾ:ನಾಗೂರ  ಮತ್ತು ಅಂಬ್ರೀಷ ಸಾ: ತಡಕಲ್ ಇವರು  ಬಂದು 18 ವರ್ಷದ ಹುಡಗಿಯೊಂದಿಗೆ  ಅರೀಫ ತಂದೆ ಬಾಷಾಸಾಬ  ಸಾ:ನಾಗೂರ  ಹಾ:ವ: ತಡಕಲ್  ಇತನೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದು, ನನಗೆ ಮೋಟಾರ ಸೈಕಲ ಮೇಲೆ ಕರೆದುಕೊಂಡು ಅರೀಪ ಇತನ ಹೋಲದ ಕೊಂಪೆಯಲ್ಲಿ ನಿನಗೆ ಮದುವೆಯಾಗುತ್ತೆನೆ ಅಂತಾ ಪುಸಲಾಯಿಸಿ ಜಭರಿ ಸಂಭೋಗ ಮಾಡಿರುತ್ತಾನೆ. ಬೆಳಿಗ್ಗೆ 8-00 ಗಂಟೆಗೆ ನಾಗೂರ ಗ್ರಾಮದಲ್ಲಿ ತಂದು ಬಿಟ್ಟಿರುತ್ತಾನೆ ಜಬರಿ ಸಂಭೋಗ ಮಾಡಿದ ಅರೀಪ ಮತ್ತು ಇದಕ್ಕೆ ಸಹಕರಿಸಿದ ಅಂಬರೀಷ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 106/2012 ಕಲಂ, 366, 376 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.




ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ತಾಹೇರಾಬೀ ಗಂಡ ಸರದಾರಮಿಯ್ಯಾ  ವಾಡಿ ಸಾ|| ಭೀಮಳ್ಳಿ ಗ್ರಾಮ ರವರು ನಾನು ದಿನಾಂಕ 25-11-12 ರಂದು ಮೂಂಜಾನೆ 7:30 ಗಂಟೆ ಸುಮಾರಿಗೆ  ನನ್ನ ಮನೆಯ ಮುಂದಿನ ಕಟ್ಟೆಯ ಮೇಲಿನ ಕಸಗೂಡಿಸುತ್ತಾ ಇದ್ದಾಗ, ಸಲೀಮ ತಂದೆ ಬಾಬುಮಿಯ್ಯಾ ವಾಡಿ,ಮಹೆಬೂಬ ತಂದೆ ಬಾಬುಮಿಯ್ಯಾ ವಾಡಿ, ಗುಡುಮಾಬೀ, ಗಂಡ ಬಾಬುಮಿಯ್ಯಾ ವಾಡಿ ಸಾ|| ಎಲ್ಲರೂ ಬೀಮ್ಮಳ್ಳಿ ಗ್ರಾಮದವರು ಕೂಡಿಕೊಂಡು ಬಂದವರೇ ಪ್ಲಾಟದಲ್ಲಿ ನಿನಗೆ ಪಾಲು ಬೇಕು ಅಂತಾ ಕೇಳುತ್ತೀ  ಅಂತಾ ಅವಾಚ್ಯವಾಗಿ ಬೈಯುತ್ತಾ ಕೈ ಮುಷ್ಟಿ ಮಾಡಿ ಬೆನ್ನ ಮೇಲೆ ಹೊಡೆಯುತ್ತಿದ್ದಾಗ ಅಲ್ಲೇ ಇದ್ದ ನನ್ನ ಅತ್ತೆ ಗುಡುಮಾಬೀ, ಪ್ರಚೋದನೆ ಮಾಡುತ್ತಿದ್ದಳು. ಆಗ ಅಲ್ಲೇ ಇದ್ದ ಸಲೀಮ ಈತನು ಪಾಲು ಬೇಕು ಅಂತಾ ಕೇಳುತ್ತೀ ಅನ್ನುತ್ತಾ ತನ್ನ ಹತ್ತಿರ ವಿದ್ದ ಚಾಕು ತೆಗೆದು ನನ್ನ ಬಲ ರಟ್ಟೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿದನು. ಅದೇ ಚಾಕುವಿನಿಂದ ನನ್ನ ಎಡ ಕಿವಿಯ ಹಿಂದೆ ಹೊಡೆದಿದ್ದು ಇದರಿಂದಾಗಿ ಗದ್ದದ ವರೆಗೆ ಹರಿದಂತೆ ಭಾರಿ ರಕ್ತಗಾಯವಾಗಿರುತ್ತದೆ. ಸಲೀಮ ಈತನು ತನ್ನ ಹತ್ತಿರ ಚಾಕು ತೋರಿಸಿ ಇನ್ನೊಮ್ಮೆ ಪ್ಲಾಟನಲ್ಲಿ ಪಾಲು ಕೇಳಲು ಬಂದರೆ ಇದೇ ಚಾಕುವಿನಿಂದ ಹೊಡೆದು ಖಲಾಷ ಮಾಡುತ್ತೇನೆ ಅಂತಾ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 384/2012 ಕಲಂ, 323, 324, 114, 504, 506 (2) ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.
ಅಪಘಾತ ಪ್ರರಕಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ನರಸಪ್ಪ ತಂದೆ ಲಕ್ಕಪ್ಪ ಹೊಸಮನಿ ಸಾ: ಬೋರಗಿ ತಾ:ಇಂಡಿ ಹಾ||ವ||ಘಟಗೆ ಲೇಜೌಟ ಗುಲ್ಬರ್ಗಾ ರವರು ನಾನು ದಿನಾಂಕ:25/11/2012 ರಂದು ಮುಂಜಾನೆ 6:45 ಗಂಟೆಯ ಸುಮಾರಿಗೆ ರೇಲ್ವೆ ಗೇಟ ಹತ್ತಿರದ ಚಾಹ ಕುಡಿಯಲು ಹೋಟೆಲ ಮುಂದೆ ನಿಂತಾಗ ಹೈಕೋರ್ಟ ಕಡೆಯಿಂದ ಒಂದು ಆಟೋ ಚಾಲಕನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೊಡೆದು  ಆಟೋ ನಿಲ್ಲಿಸಿದಂತೆ ಮಾಡಿ ಆಟೋವನ್ನು ಹಾಗೇ ಒಡಿಸಿಕೊಂಡು ಹೋಗಿದ್ದು ಆಟೋ ನಂ ಕೆಎ 32 8757 ನೇದ್ದು ಇರುತ್ತದೆ  ಆಟೋ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 385/2012 ಕಲಂ, 279, 337 ಐಪಿಸಿ ಸಮಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.
ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀಮತಿ ಕಾಶಿಬಾಯಿ ಗಂಡ ಗುಂಡಪ್ಪ ಕಾಂಬಳೆ ಸಾK|ಅವರಾದ(ಬಿ) ತಾ: ಜಿ: ಗುಲಬರ್ಗಾರವರು ನಾವು ದಿನಾಂ:24-11-2012 ರಂದು ರಾತ್ರಿ 9 ಗಂಟೆಗೆ  ಊಟ ಮಾಡಿ ಪಕ್ಕದ ಮನೆಯಲ್ಲಿ ಮಲಗಿದ್ದು ಬೆಳ್ಳಿಗೆ 6-00  ಗಂಟೆಗೆ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲು ಕೀಲಿ ಮುರಿದಿತ್ತು, ಒಳಗೆ ಹೋಗಿ ನೋಡಲಾಗಿ ಮನೆಯಲ್ಲಿಟ್ಟಿದ್ದ  ಬಂಗಾರದ ಅಭರಣ ಹಾಗೂ ನಗದು ಹಣ 2000/- ಹೀಗೆ ಒಟ್ಟು 18500/- ಮೌಲ್ಯದ್ದು ಕಳ್ಳತನವಾಗಿದ್ದು, ಹಾಗು ನಮ್ಮ ಮನೆಯಲ್ಲಿ ಭಾಡಿಗೆಯಿಂದ ಇರುವ ಅಂಬಾರಾಯ  ತಂದೆ ಲಕ್ಷ್ಮಣ ತಳಕೇರಿ ಇವನ ಮನೆಯ ಬೀಗ ಮುರಿದು  ಕಬ್ಬಿಣದ ಪೆಟ್ಟಿಗೆಯಲ್ಲಿಟ ಬಟ್ಟೆ ಸಾಮಾನುಗಳನ್ನು  ಚಲ್ಲಾ ಪಲ್ಲೆ ಮಾಡಿ ಪೆಟ್ಟಿಗೆಯಲ್ಲಿ ಇಟ್ಟಿರುವ ನಗದು ಹಣ 1000/- ಕಳವು ಮಾಡಿಕೊಂಡು ಹೋಗಿರುತ್ತಾರೆ.ನಮ್ಮ ಓಣೆಯ  ಬಸವರಾಜ ತಂದೆ ಲಾಲಪ್ಪಾ ಖೇಳಗಿ ಕೃಷ್ಣ ತಂದೆ ಪರಮಣ್ಣ ಮದನಕರ ಹಾಗೂ ಕಲಾವತಿ ಗಂಡ ಭೀಮಾಶಂಕರ ಇವರ ಮನೆಗಳಿಗೆ ಹೋಗಿ ಬಾಗಿಲಿನ ಕೊಂಡಿ ಮುರಿದು ಕಳವು ಮಾಡಲು  ಪ್ರಯತ್ನ ಪಟ್ಟಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 386/2012 ಕಲಂ, 380, 457 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ದಿನಾಂಕ:25/11/2012 ರಂದು ಸಾಯಂಕಾಲ ಕಪನೂರ ಗ್ರಾಮದ ಮರಗಮ್ಮ ದೇವಿ ಗುಡಿಯ ಮುಂದಿನ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಜೂಜಾಟವಾಡುತ್ತಿದ್ದಾರೆ ಅಂತ ಬಂದ ಬಾತ್ಮಿ ಮೇರೆಗೆ ಶ್ರೀ ಆನಂದರಾವ ಎಸ್.ಎನ್. ಪಿ.ಎಸ್.ಐ. (ಕಾ.ಸು.) ಗ್ರಾಮೀಣ ಠಾಣೆ ಗುಲ್ಬರ್ಗಾ ರವರು ಮತ್ತು ಅವರ ಸಿಬ್ಭಂದಿಯವರು  ದಾಳಿ ಮಾಡಿ  6 ಜನ ಆರೋಪಿತರಾದ ವಿಜಯಕುಮಾರ ತಂದೆ ಅಣ್ಣರಾಯ ಇಟಗಾ ಸಾ|| ಕಪನೂರ,ಅನೀಲ ತಂದೆ ಅರ್ಜುನ ಇಟಗಾ ಸಾ||ಕಪನೂ,ಸುಭಾಶ ತಂದೆ ತುಳಜಪ್ಪಾ ಹಂಗರಗಿ,ಅಬ್ದುಲ ರಶೀದ ತಂದೆ ಮೀರಾಸಾಬ ಪಟ್ಟಣ,ಶರಣು @ ಶರಣಬಸ್ಸಪ್ಪಾ ತಂದೆ ಅಣ್ಣರಾಯ ನೆಲ್ಲೂರ, ನಾಗರಾಜ ತಂದೆ ಹಾಲಪ್ಪಾ ದೊಡ್ಡಮನಿ ಸಾ||ಕಪನೂರ ರವರನ್ನು ವಸಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 2820/- ರೂ ಮತ್ತು ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ: 387/2012 ಕಲಂ 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.