POLICE BHAVAN KALABURAGI

POLICE BHAVAN KALABURAGI

29 March 2019

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 28-03-2019 ರಂದು ಸೋನ್ನ ಗ್ರಾಮದ ಭೀಮಾನದಿಯಿಂದ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಬಳೂಂಡಗಿ  ಮಾರ್ಗವಾಗಿ ಕ್ಯಾನಾಲ ರೋಡಿಗೆ ಹಾದುಕೊಂಡು ಬಳೂರ್ಗಿ ರೋಡಿಗೆ ಹೊಗುತ್ತದೆ ಅಂತಾ ಮಾಹಿತಿ ಬಂದ ಮೇರೆಗೆ, ಸಿ.ಪಿ. ಅಫಜಲಪೂರ ವೃತ್ತ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ - ಬಳೂರ್ಗಿ ರೋಡಿಗೆ ಹಳ್ಯಾಳ ಕ್ರಾಸ ಹತ್ತಿರ ಹೋಗುತ್ತಿದ್ದಾಗ ನಮ್ಮ ಮುಂದಿನಿಂದ ಒಂದು ಮರಳು ತುಂಬಿದ ಟ್ರ್ಯಾಕ್ಟರ ಹೋಗುತಿತ್ತು , ಆಗ ನಾವು ಟ್ಯಾಕ್ಟರ ಹಿಂದೆ ಹಾಕಿ ಸದರಿ ಟ್ರ್ಯಾಕ್ಟರನ್ನು ನಿಲ್ಲಿಸುವಂತೆ ಟ್ರ್ಯಾಕ್ಟರ ಚಾಲಕನಿಗೆ ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು Mahindra Arjun ಕಂಪನಿಯ ಟ್ರ್ಯಾಕ್ಟರ ಇದ್ದು  ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ  ನಂ ಕೆಎ-32 ಟಿಎ-8397 , ಇಂಜೆನ ನಂ NSCA01085 ಅಂತಾ ಇದ್ದು. ಸದರಿ ಟ್ಯಾಕ್ಟರ ಟ್ರೈಲಿ ನಂ ಕೆಎ-32 ಟಿ-7865 ಇದ್ದು, ಸದರಿ ಟ್ರೈಲಿಯಲ್ಲಿ ಮರಳು ತುಂಬಿದ್ದು ಇತ್ತು. ಸದರಿ ಟ್ರ್ಯಾಕ್ಟರ .ಕಿ 5,00,000/-ರೂ  ಇರಬಹುದು. ಸದರಿ ಟ್ರ್ಯಾಕ್ಟರ ಟ್ರೈಲಿಯಲಿದ್ದ  ಮರಳಿನ .ಕಿ 3000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ.ಶ್ರೀಪಾದ ತಂದೆ ಅಂಬಾರಾವ ಕುಲಕರ್ಣಿ ರವರು  ಕೆಲವು ದಿವಸಗಳ ಹಿಂದೆ ನಮ್ಮೂರಿನ ಪುತಳಬಾಯಿ ಗಂಡ ವಿಠಲ್ ಮಾದಗೊಂಡ ಇವರ ಖುಲ್ಲಾ ಪ್ಲಾಟನ್ನು 5,11,000/- ರೂಪಾಯಿಗಳಿಗೆ ಖರಿದಿಸಿ ಹಣ ಕೊಟ್ಟಿರುತ್ತೇನೆ. ಇದಕ್ಕೆ ಸಂಬಂಧಿಸಿದ ಶೇಲ್ಡೀಡ್ ಹಾಗೂ ರಜಿಸ್ಟ್ಟೇಷನ ಪತ್ರಗಳನ್ನು ನಮ್ಮೂರಿನ ಗ್ರಾಮ ಪಂಚಾಯಿತಿ ಕಾರ್ಯಲಯಕ್ಕೆ ಮೊಟೆಷನ ಸಲುವಾಗಿ ಸುಮಾರು ಒಂದುವರಿ ತಿಂಗಳ ಹಿಂದೆ ಸಲ್ಲಿಸಿರುತ್ತೇನೆ. ಸದರಿ ಪುತಳಬಾಯಿ ಇವರಿಂದ ನಾನು ಖರಿದಿಸದ ಪ್ಲಾಟಿನ ಪಕ್ಕದಲ್ಲಿ ಪುತಳಬಾಯಿ ಇವರ ಸಂಬಂಧಿಕರಾದ ಶಾಂತಪ್ಪಾ ತಂದೆ ಶ್ರೀಮಂತ ಇವರು ಪ್ಲಾಟ್ ಇರುತ್ತದೆ. ದಿನಾಂಕ:31/03/2019 ರಂದು ನನ್ನ ಅಣ್ಣನಾದ ಹಣಮಂತರಾವ ಇವರ ಮಗನ ಮದುವೆ ಇದ್ದ ಪ್ರಯುಕ್ತ ನಾನು ಖದಿರಿದಿಸಿದ ಪ್ಲಾಟಿನಲ್ಲಿ ರಿಶಫಶನ ಕಾರ್ಯಕ್ರಮ ಇಟ್ಟಿಕೊಳ್ಳುವ ಸಂಬಂಧ ನಾನು ಸದರಿ ಪ್ಲಾಟಿನಲ್ಲಿ ಕಟ್ಟಿಗೆ ಕುಳ್ಳ ಹಾಕಿರುವ ಶಾಂತಪ್ಪಾ ಇವರಿಗೆ ದಿನಾಂಕ:27/03/2019 ರಂದು ಸಾಯಂಕಾಲ 4-45 ಅವರ ಮನೆಗೆ ಹೋಗಿ ತಗೆದುಕೊಳ್ಳಲು ಹೇಳಿದ್ದಕ್ಕೆ ಶಾಂತಪ್ಪಾ ಇವನು ನಿಮ್ಮೌನ್ ಬೋಳಮಗನೆ ನೀಯಾರು ನಮಗ ಹೇಳವ ಅಂತಾ ಬೈದು ನನಗೆ ಎದೆಯ ಮೇಲಿನ ಅಂಗಿಹಿಡಿದು ಎಳೆದಾಡಿ ಕೈಯಿಂದ ಹೊಟ್ಟೆ ಮುಖಕ್ಕೆ ಹೊಡೆದು ನಂತರ ಒಂದು ಕಟ್ಟಿಗೆಯಿಂದ ನನ್ನ ನಡುತೆಲೆಗೆ ಹೊಡೆದನು ಕರಬಸಪ್ಪಾ ಈತನು ಒಂದು ಕಲ್ಲಿನಿಂದ ಜೋರಾಗಿ ನನ್ನ ತಲೆಗೆ ಹೊಡೆದನು ಘಟನೆಯನ್ನು ನೋಡಿ ಬಿಡಿಸಲು ಬಂದ ನನ್ನ ಅಣ್ಣ ಹಣಮಂತರಾವ ಈತನಿಗೆ ಕರಬಸಪ್ಪಾ ಈತನು ತನ್ನ ಮನೆಯಿಂದ ಒಂದು ಕಬ್ಬಿಣದ ರಾಡತಂದು ನಿನಗೆ ಜೀವ ಸಹೀತ ಬಿಡಂಗಿಲ್ಲಾ ಅಂತಾ ಹೇಳಿ ಕೊಲೆಮಾಡುವ ಉದ್ದೇಶದಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು ಆಗ ನಾನು ಬಿಡಿಸಲು ಹೋದಾಗ ಜೋತಿ ಗಂಡ ಕರಬಸಪ್ಪಾ ಮಹಾನಂದ ಗಂಡ ಶಾಂತಪ್ಪಾ ಇವರು ನನಗೆ ಮುಂದೆ ಹೊಗದಂತೆ ತಡೆದು ಘಟ್ಟಿಯಾಗಿ ಹಿಡಿದರು ಇವರಿಗೆ ಬಿಡಬೇಡಿ ಖಲಾಸ ಮಾಡ್ರೀ ಅಂತಾ ಹೇಳುತ್ತಾ ಬಿಡಿಸಲು ಬಂದ ನನ್ನ ಅಣ್ಣನ ಹೆಂಡತಿ ಚಂದಮ್ಮಾ ಇವಳಿಗೆ ಶಾಂತಪ್ಪನು ಕಟ್ಟಿಗೆಯಿಂದ ಕುತ್ತಿಗೆ ಮೇಲೆ ಹೊಡೆದನು. ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,