POLICE BHAVAN KALABURAGI

POLICE BHAVAN KALABURAGI

19 September 2016

Kalaburagi District Reported Crimes

ಅಪಘಾತ  ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 18-9-2016 ರಂದು ಸಂಜೆ 6-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗೆಳೆಯ ಗುಂಡಪ್ಪಾ ತಂದೆ ಗುರಣ್ಣ ಮರಗುತ್ತಿ ಇಬ್ಬರು ಕೂಡಿಕೊಂಡು  ಶಿರಗಾಪೂರ ಕ್ರಾಸವರಗೆ ನನ್ನ ಮೋಟಾರ ಸೈಕಲ್ ಮೇಲೆ ಹೋಗುವಾಗ ನಮ್ಮ ಗ್ರಾಮದ ಈರಣ್ಣಾ ತಂದೆ ಗುರುಶಾಂತ ಚೌಡಶಟ್ಟಿ ಇವರ ಹೊಲದ ಎದರುಗಡೆ ಹುಮನಾಬಾದ ರೋಡಿಗೆ ಸದರಿ ಮಾನಸಿಕ ಅಶ್ವಸ್ಥ  ಹುಚ್ಚ ಮಹಿಳೆ ವಯಸ್ಸು ಅಂದಾಜು 60-65 ವರ್ಷದವಳು ನಿಂತಿದ್ದಳು ರೋಡಿಗೆ ನಿಲ್ಲಬೇಡ ಪಕ್ಕದಲ್ಲಿ ರೋಡಿನ ಸೈಡಿಗೆ ನಿಲ್ಲು ಅಂತಾ ಹೇಳಿ ಹೋಗಿದ್ದು, ಕೆಲಸಮುಗಿಸಿಕೊಂಡು ಮರಳಿಊರಿಗೆ ಬರುತ್ತಿರುವಾಗ ಸದರಿ ಈರಣ್ಣಾ ಚೌಡಶಟ್ಟಿ ಹತ್ತಿರ ನಿಂತಿದ್ದ ಸದರಿ ಭಿಕ್ಷುಕಿ ಮಹಿಳೆಗೆ ಯಾವುದೋ ಭಾರಿ ವಾಹನವು ವೇಗವಾಗಿ ಬಂದು ನಿಸ್ಕಾಳಜಿ ತನದಿಂದ ಓಡಿಸಿಕೊಂಡು ಬಂದು ಅವಳಿಗೆ ಡಿಕ್ಕಿ ಹೊಡೆದು ಅವಳ ಮೈ ಮೇಲಿಂದ ಹಾಯಿಸಿಕೊಂಡು ಹೊಗಿದ್ದು ಅಲ್ಲದೆರೋಡಿಗೆ ಹೋಗುವ ವಾಹನಗಳು ಅವಳಮೈಮೆಲಿಂದ ಹೋಗಿದ್ದರಿಂದತಲೆಪೂರ್ತಿ ಚಚ್ಚಿ ಹೊಗಿದ್ದು ಮಾಂಸಖಂಡಗಳು ಕಾಣುತಿದ್ದು,ಎದೆಕಾಣುತಿದ್ದು  ಎಡಗಲುಸಾಬಿತಿದು ,ಬಲಗಾಲು ಪಾದ ಮಾತ್ರ ಕಾಣುತಿದೆ. ಉಳಿದೆ ಲ್ಲಾಬಾಗಗಳು ಮಾಸಖಂಡಗಳು ಹೊರಬಂದು ಪೂರ್ತಿ ಜಜ್ಜಿ ಹೋಗಿದ್ದು ಇರುತ್ತದೆ. ಈ ಘಟನೆಯು ರಾತ್ರಿ 8-30 ಪಿ.ಎಂ.ಕ್ಕೆ. ಸಂಭವಿಸಿರಬಹುದು. ಆದುದರಿಂದ ಸದರಿ ಮಾನಸಿಕ ಅಶ್ವಸ್ಥ,ಭಿಕ್ಷುಕಿ ಮಹಿಳೆ ವಯಸ್ಸು ಅಂದಾಜು 60-65 ವರ್ಷದವಳು ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ,ಇವಳು ಸೋಮನಾಧ ತಂದೆ ರೇವಣಸಿದ್ದಪ್ಪಾ ಹತ್ತಕಂಕಣ ಪೂಜಾರಿ  ಹೊಲದ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಕಲಬುರಗಿ ಕಡೆಯಿಂದ ಯಾವುದೋಭಾರಿವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿ ತನದಿಂದ ನಡೆಯಿಸಿ ಕೊಂಡು ಬಂದು ಅವಳ ಮೈಮೇಲೆ ಹಾಯಿಸಿಕೊಂಡು ಹೋಗಿದ್ದು ಅವಳು ಸ್ಥಳದಲ್ಲಿ ಮೃತ ಪಟ್ಟಿದ್ದು ಅವಳ ಮೈ ಮೇಲೆ  ರೋಡಿಗೆ ಹೋಗುವ ವಾಹನಗಳು ಹೋಗಿದ್ದರಿಂದ ದೇಹವು ಪೂರ್ತಿ ಜಜ್ಜಿ ಹೋಗಿ ಮಾಂಸ ಖಂಡಗಳು ಹೋರ ಬಂದು ಮೃತಪಟ್ಟಿರುತ್ತಾಳೆ ಅಂತಾ  ಶ್ರೀ ಸೂರ್ಯಕಾಂತ ತಂದೆ ರೇವಣಸಿದ್ದಪ್ಪಾ ತೆಗನೂರ  ಸಾ;ಅವರಾಧ (ಬಿ) ತಾ;ಜಿ;ಕಲುಬರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.