POLICE BHAVAN KALABURAGI

POLICE BHAVAN KALABURAGI

29 February 2012

Gulbarga Dist Reported Crimes

ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ಶ್ರೀಮತಿ ಸೈಯದಾ ಪರದ ಗಂಡ ಅಬ್ದುಲ ಖದೀರ ಖದೀಫ ಉ: ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಸಾಮಜೀದ ಚೌಕ ಶಹಾಬಾದ ರವರು ನನ್ನ ಮಗನಾದ ಅಬ್ದುಲ ರಹಿಮಾನ ಇತನ ಮೊಬೈಲ (9686966304) ನೇದ್ದು ಕಳ್ಳತನವಾಗಿದ್ದು ಸದರಿ ಮೊಬೈಲ ಅಲ್ಲಾಭಕ್ಷನ ಮಗನಾದ ನವಾಜ ಇತನು ತೆಗೆದುಕೊಂಡಿರಬಹುದು ಅಂತಾ ತಿಳಿದು ನನ್ನ ಗಂಡನಾದ ಅಬ್ದುಲ ಖದೀರ ಇತನು ಮಜೀದ ಚೌಕ ಹತ್ತಿರ ಇರುವ ಜಾಮಿಯಾ ಮಜೀದ ಹತ್ತಿರ ಕೇಳಲು ಹೋದಾಗ ಅಲ್ಲಾಭಕ್ಷ ಇತನು ನನ್ನ ಮಗ ಮೊಬೈಲ ಕಳ್ಳತನ ಮಾಡಿರುವದಿಲ್ಲಾ ಆತನ ಮೇಲೆ ಸುಳ್ಳು ಆರೋಪ ಮಾಡುತ್ತಿಯಾ ಮಗನೆ ಅಂತಾ ಬೈದು ಕೈಮುಷ್ಟಿ ಮಾಡಿ ಜೊರಾಗಿ ಎಡ ಕಪಾಳ ಮೇಲೆ ಮೆಲಕಿಗೆ ಮತ್ತು ಎದೆಯ ಮೇಲೆ ಒದ್ದಿದ್ದು ಅಷ್ಟರಲ್ಲಿ ಅಲ್ಲಾಭಕ್ಷನ ಮಗನಾದ ನವಾಜ ಇತನು ನಾನು ಮೊಬೈಲ ತೆಗೆದುಕೊಂಡಿರುವದಿಲ್ಲಾ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿ ಮಗನೆ ಅಂಥಾ ಅವ್ಯಾಚ ಬೈದಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 23/2012 ಕಲಂ: 323 324 504 506 307 ಸಂ; 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಧ್ಯದ ಭಾಟಲಿಗಳು ವಶಪಡಿಸಿಕೊಂಡ ಬಗ್ಗೆ:
ಆಳಂದ ಪೊಲೀಸ ಠಾಣೆ:
ಶ್ರೀ ವಿಜಯಕುಮಾರ ಪಿ.ಎಸ್.ಐ ಸಾಹೇಬರು ಆಳಂದ ಪೊಲೀಸ ಠಾಣೆಯ ರವರು ಖಜೂರಿ ಗ್ರಾಮದ ಹರಿಜನ್ ಓಣಿಯ ಹತ್ತಿರ ಪಾನ್ ಡಬ್ಬದಲ್ಲಿ ಸರಕಾರದಿಂದ ಯಾವುದೇ ಪರವಾನಿಗೆ ಪಡೆಯದೆ ಸರಾಯಿ [ಮದ್ಯದ] ಬಾಟಲಗಳನಿಟ್ಟು ಅನಧೀಕೃತ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿವರಾದ ವಸಂತ ಹೆಚ್.ಟಿ ಪ್ರೋಬೊಸನರಿ ಪಿ.ಎಸ್.ಐ, ಸಿದ್ದರಾಮ, ರಾಜಶೇಖರ ಸಿಪಿಸಿ ರವರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ನಿಜವಿದ್ದಿದ್ದು, ಆತನ ಹೆಸರು ಮಲ್ಲಿನಾಥ ತಂದೆ ನಾಗಿಂದ್ರಪ್ಪ ಕುಂಬಾರ ಸಾಖಜೂರಿ ಆತನ ಪಾನ ಶಾಪದಲ್ಲಿ ಮಧ್ಯದ ಬಾಟಲಿಗಳು ಅಂದಾಜು ಕಿಮ್ಮತ್ತು 2500 ರೂ ಕಿಮತ್ತಿನ ಸರಾಯಿ [ಮದ್ಯದ] ಬಾಟಲಿಗಳುನ್ನು ಜಪ್ತಿ ಪಡಿಸಿಕೊಂಡು ಆತನ ವಿರುದ್ದ ಠಾಣೆ ಗುನ್ನೆ ನಂ: 44/2012 ಕಲಂ 32.34 ಕೆ.ಎ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಸರಗಳ್ಳರ ಬಂಧನ, ಸುಮಾರು 2.5 ಲಕ್ಷ ರೂ ಬೆಲೆಬಾಳುವ ಬಂಗಾರದ ಆಭರಣಗಳು, ಎರಡು ಅಟೋ ರೀಕ್ಷಾಗಳು ವಶ :
ಖಚಿತ ಮಾಹಿತಿ ಆಧಾರ ಅನ್ವಯ ಇತ್ತಿಚಿಗೆ ಗುಲಬರ್ಗಾ ನಗರದ ಗುಬ್ಬಿ ಕಾಲೋನಿ ಹಾಗೂ ಶಹಾಬಾದ ರಿಂಗ್ ರೋಡ ಹತ್ತಿರದ ಓವರ ಬ್ರಿಡ್ಜ ಹತ್ತಿರ ಜರುಗಿದ ಸರಗಳ್ಳತನ ಪ್ರಕರಣಗಳ ಪತ್ತೆಗಾಗಿ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು ಸರಗಳ್ಳತನ ಮಾಡಿದ ೫ ಜನ ಸರಗಳ್ಳರನ್ನು ಬಂಧಿಸಿರುತ್ತಾರೆ. ಸದರಿಯವರಿಂದ ಬಂಗಾರದ ಆಭರಣಗಳು, ಸರಗಳ್ಳತನ ಮಾಡಲು ಬಳಸುತ್ತಿದ್ದ ಎರಡು ಅಟೋ ರೀಕ್ಷಾಗಳು, ಮೊಬಾಯಿಲ್ ಪೊನಗಳು, ಬಂಗಾರದ ಮಂಗಳ ಸೂತ್ರ, ನಗದು ಹಣ ವಗೈರೆ ಸುಮಾರು 2.5 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿರುತ್ತಾರೆ. ಫರಾರಿ ಇರುವ ಇನ್ನೋಬ್ಬ ಆರೊಪಿ ಕಲೀಂ ಸಾ// ಸೊನಿಯಾ ಗಾಂಧಿ ಕಾಲೋನಿ ಗುಲಬರ್ಗಾ ಇತನ ಪತ್ತೆಗಾಗಿ ವ್ಯಾಪಕ ಬಲೆ ಬಿಸಿ ಇಂದು ಗುಲಬರ್ಗಾ ನಗರದ ಟಿಪ್ಪು ಸುಲ್ತಾನ ಚೌಕದಲ್ಲಿ ಬಂಧಿಸಿದ್ದು ವಿಶೇಷ ತನಿಖಾ ತಂಡದವರು ತನಿಖೆ ಮುಂದುವರೆಯಿಸಿರುತ್ತಾರೆ. ಗುಲಬರ್ಗಾ ನಗರದಲ್ಲಿ ಇತ್ತಿಚಿಗೆ ಘಟಿಸಿದ ಸ್ವತ್ತಿನ ಪ್ರಕರಣಗಳಲ್ಲಿನ ಆರೊಪಿತ ಪತ್ತೆ ಕುರಿತು ಮಾನ್ಯ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ಮತ್ತು ಶ್ರೀ ಹೆಚ್. ತಿಮ್ಮಪ್ಪಾ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡದ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಮ್.ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ 1) ಶ್ರೀ ಪಂಡಿತ ಸಗರ ಪಿ.ಎಸ್.ಐ (ಕಾಸು) ವಿವಿ ಠಾಣೆ 2) ಸಂಜೀವಕುಮಾರ ಪಿ.ಎಸ್.ಐ (ಕಾಸು) ಎಮ್.ಬಿ ನಗರ, 3) ಶ್ರೀ ಪ್ರದೀಪ ಕೊಳ್ಳಾ ಪಿ.ಎಸ್.ಐ (ಅವಿ) ವಿವಿ ಠಾಣೆ ಮತ್ತು ಸಿಬ್ಬಂದಿಯವರಾದ ಗಂಗಾಧರ ಸ್ವಾಮಿ , ರಮೇಶ , ಹಣಮಂತ ಪ್ರಭಾಕರ , ಅಶೋಕ ಮಶಾಕ ಪಿಸಿ ಪಿಸಿಗಳು , ಮತ್ತು ಹೆಚಸಿಗಳಾದ ಸಿದ್ರಾಮ , ಶಿವಪುತ್ರ ಸ್ವಾಮಿ , , ಅರ್ಜುನ ಎಪಿಸಿ, ರವರು ಖಚಿತ ಭಾತ್ಮಿ ಮೇರೆಗೆ ಗುಲಬರ್ಗಾ ಕೇಂದ್ರ ಬಸ್ಸ ನಿಲ್ದಾಣ ಹತ್ತಿರ, ಹಾಗೂ ಸೊನಿಯಾ ಗಾಂಧಿ ಕಾಲೋನಿ ಮತ್ತು ಟಿಪ್ಪು ಸುಲ್ತಾನ ಚೌಕದಲ್ಲಿ ಮಿಂಚಿನ ದಾಳಿ ಮಾಡಿ ಸರಗಳ್ಳತನ ಮಾಡುವ ಸಯ್ಯದ ಫಾಜೀಲ ತಂದೆ ಸಯ್ಯದ ಸಿರಾಜ ಸಾ// ಉಮರ ಕಾಲೋನಿ, ಕಲೀಂ ತಂದೆ ಅಬ್ದುಲ ರಶೀಧ ಸಾ// ಸೊನಿಯಾ ಗಾಂಧಿ ಕಾಲೋನಿ,ಅರವಿಂದ ತಂದೆ ಶಾಹೀರ ಉಪಾಧ್ಯಯ ಸಾ// ಬಾಪು ನಗರ, ಚರಣ ತಂದೆ ಶ್ರವಣ ಉಪಾಧ್ಯಯ ಸಾ// ಬಾಪು ನಗರ, ಗುಂಗುರು ತಂದೆ ರವಿದಾಸ ಉಪಾಧ್ಯಯ ಸಾ// ಬಾಪು ನಗರ, ಮೇಲ್ಕಂಡ ಆರೊಪಿತರು ಇತ್ತಿಚಿಗೆ ಗುಲಬರ್ಗಾ ನಗರದ ಗುಬ್ಬಿ ಕಾಲೋನಿ ಹಾಗೂ ಶಹಾಬಾದ ರಿಂಗ ರೋಡಿನ ಓವರ ಬ್ರಿಡ್ಜ ಹತ್ತಿರ ಸುಲಿಗೆ ಮಾಡಿಕೊಂಡು ಹೋದ ಬಗ್ಗೆ ತನಿಖೆ ಹಾಗೂ ವಿಚಾರಣೆ ಕಾಲಕ್ಕೆ ಒಪ್ಪಿಕೊಂಡಿದ್ದರಿಂದ ಆರೊಪಿತರಿಂದ ಈ ಮೇಲ್ಕಂಡ ಎರಡು ಪ್ರಕರಣಗಳಲ್ಲಿ ಸುಮಾರು 2.5 ಲಕ್ಷ ರೂಪಾಯಿ ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿ ಆಭರಣಗಳು ಹಾಗೂ ಎರಡು ಅಟೋ ರಿಕ್ಷಾಗಳು ಮತ್ತು ವಗೈರೆ ವಸ್ತುಗಳನ್ನು ಜಪ್ತು ಪಡಿಸಿಕೊಂಡು ತನಿಖೆ ಮುಂದುವರೆಯಿಸಿರುತ್ತಾರೆ. ಈ ಎರಡು ಮಹತ್ವದ ಸರಗಳ್ಳತನ ಪ್ರಕರಣಗಳನ್ನು ಭೇಧಿಸಿದ ವಿಶೇಷ ತನಿಖಾ ತಂಡದ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಿ ಮಾನ್ಯ ಎಸ್.ಪಿ ಸಾಹೇಬರು ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಭಾಗ್ಯವಂತ ತಂದೆ ಶಿವಶರಣಪ್ಪ ಸಾ ಶಾಂತವೀರ ನಗರ ಬ್ರಹ್ಮಪೂರ ಗುಲಬರ್ಗಾರವರು ನಾನು ದಿ: 27.02.11 ರಂದು ರಾತ್ರಿ10-00 ಗಂಟೆಗೆ ಪಲ್ಲವಿ ಹೋಟೆಲ ಮುಂದೆ ನನ್ನ ಹಿರೊಹೊಂಡಾ ಸ್ಪೆಲೆಂಡರ್ + ನಂ ಕೆ 32 ವಿ 3061 ಅಕಿ 30000/- ನೇದ್ದು ನಿಲ್ಲಿಸಿದ್ದು ಕೆಲಸ ಮಗಿಸಿಕೊಂಡು ಮರಳಿ 10-30 ಗಂಟೆಗೆ ಬಂದು ನೋಡಲಾಗಿ ನಿಲ್ಲಿಸಿದ ಸ್ಥಳದಲ್ಲಿ ತಮ್ಮ ವಾಹನ ಇರಲಿಲ್ಲಾ ಯಾರೋ ಕಳ್ಳರೂ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 19/12 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ :
ಶ್ರೀ ರಾಚಣ್ಣಾ ತಂದೆ ಬಸಣ್ಣಾ ಸಮಗಾರ ಉದ್ಯೋಗ: ಸಮಾಜ ಸೇವಕ ಸಾ:ಹೊನ್ನಕಿರಣಗಿ ತಾ:ಜಿ: ಗುಲಬರ್ಗಾ ರವರು ನನ್ನ ಮೇಲೆ ಈಗ ಒಂದು ವರ್ಷದಿಂದ ನಮ್ಮೂರಿನ ಶಿವಪ್ಪಾ ಜುಲ್ಪಿ ಹಾಗೂ ಸಂಗಡಿಗರಿಗೆ ಹೋದ ಗ್ರಾಮ ಪಂಚಾಯತ ಚುನಾವಣೆ ಪ್ರಯುಕ್ತ ವಿನಾಃಕಾರಣ ಹಳೆಯ ದ್ವೇಷ ಇರುತ್ತದೆ. ಸದರಿಯವರು ಈ ಮುಂಚೆ ನನಗೆ ಎರಡು ಸಲಾ ತೊಂದರೆ ಕೊಟ್ಟಿದ್ದು ಆದರು ನಾನು ಸಹಿಸಿಕೊಂಡು ಬಂದಿರುತ್ತೆನೆ. ದಿನಾಂಕ 25/2/2012 ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ನಾನು ನಮ್ಮೂರಿನ ಕಾಬಾ ಕಾಂಪ್ಲೆಕ್ಸದಿಂದ ನಮ್ಮ ಮನೆಯ ಕಡೆಗೆ ರಸ್ತೆಯ ಮೇಲೆ ಹೋಗುತ್ತಿರುವಾಗ ನಮ್ಮೂರಿನವರಾದ ಶಿವಪ್ಪಾ ತಂದೆ ಶಿವಸರಣಪ್ಪಾ ಜುಲ್ಪಿ ಶಿವಕುಮಾರ ತಂದೆ ಹುಲಸಿದ್ದಪ್ಪಾ ಕೌಲಗಿ, ಮಲ್ಲಪ್ಪಾ ತಂದೆ ಫಕಿರಪ್ಪಾ ಅಲ್ಲೋಳಿ, ದೊಡಪ್ಪಾ ತಂದೆ ಭೀಮರಾಯ ಇಟಗಾ, ಭಗವಂತ ತಂದೆ ಶ್ರೀಮಂತ ಇರಬಾ, ಜಗಪ್ಪಾ ತಂದೆ ಶಿವಯೊಗಪ್ಪಾ ರಜಾಪೂರ, ಶಿವಲಿಂಗಪ್ಪಾ ತಂದೆ ಭೀಮರಾಯ ಇಟಗಾ ಇವರೆಲ್ಲರೂ ಕೂಡಿ ಗುಂಪು ಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಜಾತಿ ಎತ್ತಿ ಬೈದು ಕೈಯಲ್ಲಿದ ಕಬ್ಬಿಣದ ರಾಡಿನಿಂದ ಬೆನ್ನಿಗೆ, ಎಡಗೈಗೆ,ಎಡಗಾಲಿನ ಮೊಳಕಾಲಿಗೆ ಹೋಡೆದು ಗುಪ್ತಗಾಯ ಮತ್ತು ರಕ್ತಗಾಯ ಮಾಡಿದರು ಉಳಿದವರು ಎಲ್ಲರು ಸೇರಿಕೊಂಡು ನನಗೆ ಕೈಯಿಂದ ಮತ್ತು ಕಾಲಿನಿಂದ ನೇಲಕ್ಕೆ ಹಾಕಿ ಹೋಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 28/2012 ಕಲಂ, 143, 147, 148, 341, 324, 504, 506, ಸಂಗಡ 149 ಐಪಿಸಿ ಮತ್ತು 3 (1) (10) ಎಸ.ಸಿ ಮತ್ತು ಎಸ.ಟಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ
:ಶ್ರೀ ಯಲ್ಲಪ್ಪಾ ತಂದೆ ಯಲ್ಲಪ್ಪಾ ಅಲಕುಂಟಿ ಸಾ;ಚಕ್ಕಿವಡ್ಡರಗಲ್ಲಿ ಭಂಕಟಚಾಳ ಶಹಾಬಾದ ರವರು ನಾನು ದಿನಾಂಕ 10/02/2012 ರಂದು ಸಾಯಂಕಾಲ4-30 ಗಂಟೆ ಸುಮಾರಿಗೆ ನನ್ನ ಕೆಲಸ ನಿಮಿತ್ಯ ಬಸ್ಸ ನಿಲ್ದಾಣ ಎದುರಗಡೆ ರೋಡಿನ ಪಕ್ಕದಲ್ಲಿ ನನ್ನ ಹೀರೋಹೋಡಾ ಪ್ಲಸ ನಂ ಕೆಎ. 37 ಕ್ಯೂ 0621 ನೇದ್ದ ನಿಲ್ಲಿಸಿ ಒಳಗೆ ಹೋಗಿ ಬರುವಷ್ಟರಲ್ಲಿ ಯಾರೋ ನನ್ನ ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 21/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

28 February 2012

GULBARGA DIST REPORTED CRIMES

ಕೊಲೆ ಪ್ರಕರಣ:
ಗ್ರಾಮೀಣ ಠಾಣೆ:
ಶ್ರೀ ಆನಂದ ತಂದೆ ತಿಪ್ಪಣ್ಣಾ ಗುಡೂರ ಸಾ: ಕೌವಲಗಿ (ಬಿ) ಗ್ರಾಮ ತಾ:ಜಿ: ಗುಲಬರ್ಗಾ ಸಧ್ಯ ಮನೆ ನಂ. 373, 374 ಆಶ್ರಯ ಕಾಲನಿ ರಾಣೇಶಪೀರ ದರ್ಗಾ ಹತ್ತಿರ ಗುಲಬರ್ಗಾ ರವರು ನಾವು ಸುಮಾರು 9 ವರ್ಷಗಳಿಂದ ಆಶ್ರಯ ಕಾಲನಿ ಗುಲಬರ್ಗಾದಲ್ಲಿ ವಾಸವಾಗಿರುತ್ತೇವೆ. ನಮ್ಮ ತಂದೆ ತಿಪ್ಪಣ್ಣಾ ಇವರು 8-9 ವರ್ಷಗಳ ಹಿಂದೆ ಆಟೋ ನಡೆಸುತ್ತಿದ್ದು, ಆಟೋ ಮಾರಾಟ ಮಾಡಿ ಬಂದ ಹಣದಿಂದ ಕುರಿ ಖರೀದಿಸಿ, ಕುರಿ ಕಾಯುವ ಕೆಲಸ ಮಾಡುತ್ತಾ ಬಂದಿರುತ್ತಾರೆ. ದಿನಾಂಕ 24-02-12 ರಂದು ಸಾಯಂಕಾಲ ಸುಪರ ಮಾರ್ಕೆಟಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವನು. ಮರಳಿ ಮನೆಗೆ ಬರಲಿಲ್ಲಾ. ನಾವು ಹುಡುಕಾಡಿದರೂ ಸಿಗಲಿಲ್ಲಾ. ದಿನಾಂಕ 28-02-12 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನಾವು ಹುಡುಕಾಡುತ್ತಾ ಸ್ವಾಮಿ ಸಮರ್ಥ ಗುಡಿಗೆ ಹೋದಾಗ ರೋಡಿನ ಬದಿಯಲ್ಲಿ ಒಬ್ಬ ವ್ಯಕ್ತಿಯ ಹೆಣ ಬಿದ್ದಿದ್ದೆ ಮೃತ ದೇಹ ನೋಡಲಾಗಿ ತಲೆಯ ಪೂರ್ತಿ ಜಜ್ಜಿದಂತಾಗಿದ್ದು, ಮುಖ ಗುರುತು ಸಿಗದಂತೆ ಆಗಿದ್ದು, ಅವರ ಎದೆಯ ಮೇಲೆ ದೊಡ್ಡದಾದ ಕಲ್ಲು ಬಿದ್ದಿದ್ದು, ದೇಹವೆಲ್ಲಾ ಊಬ್ಬಿ ಕೊಳೆತು ಹುಳಗಳು ಇರುತ್ತದೆ. ನಮ್ಮ ತಂದೆ ಮೈಮೇಲಿದ್ದ ಕಪ್ಪು ಮತ್ತು ಬೂದಿ ಬಣ್ಣದ ಮಫಲರ ಮತ್ತು ಅವರ ಉದ್ದನೆಯ ಕೂದಲು, ಹಾಗೂ ಧರಿಸಿದ ಬಟ್ಟೆಗಳು ನೋಡಿ ಮೃತ ದೇಹ ಗುರುತಿಸಿದ್ದು, ನಮ್ಮ ತಂದೆಗೆ ಆಗದ ಇರುವ ಯಾರೋ ಜನರು ಯಾವುದೋ ದುರುದ್ದೇಶದಿಂದ ದೊಡ್ಡದಾದ ಕಲ್ಲು ತಲೆಯ ಮೇಲೆ ಎತ್ತಿ ಹಾಕಿ ಮುಖ ಗುರುತು ಸಿಗದಂತೆ ಕೊಲೆ ಮಾಡಿರುತ್ತಾರೆ. ಈ ಕೊಲೆಯು ದಿನಾಂಕ 24-02-12 ರಂದು ಸಂಜೆ 6-00 ಗಂಟೆಯಿಂದ ದಿನಾಂಕ 28-02-12 ರಂದು ಬೆಳಿಗ್ಗೆ 11-30 ಗಂಟೆಯ ಮಧ್ಯದ ಅವಧಿಯಲ್ಲಿ ನಡೆದಿರಬಹುದು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 62/2012 ಕಲಂ 302, 201 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಠಾಣೆ:
ಶ್ರೀ ಮಹ್ಮದ ಮೂಸಾ ತಂದೆ ಮಹ್ಮದ ಅಲ್ಲಾವುದ್ದಿನ ಉ: ಕೆ.ಎಸ್.ಆರ್.ಟಿ.ಸಿ ಕಂಟ್ರೋಲರ್ ಸಾ: ಪ್ಲಾಟ ನಂ. 101 ಸಿಐಬಿ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ 28/02/2012 ರಂದು ಬೆಳಿಗ್ಗೆ 9 ಗಂಟೆಗೆ ಕರ್ತವ್ಯಕ್ಕೆ ಹೋಗಿದ್ದು ನನಗೆ ಪೋನ ಮುಖಾಂತರ ಮಾಹಿತಿ ಸಿಕ್ಕಿದ್ದೆನೆಂದರೆ, ಯಾರೋ ಕಳ್ಳರು ನಮ್ಮ ಮನೆಯ ಒಳಗಡೆ ಬಂದು ಅಲಮಾರಿ ಮುರಿದು ಕಳವು ಮಾಡಲು ಯತ್ನಿಸುತ್ತಿದ್ದಾಗ ಕಾಲೋನಿಯ ಜನರು ಹಿಡಿದಿದ್ದು ನನಗೆ ಬರಲು ಹೇಳಿದ್ದರಿಂದ ನಾನು ಮನೆಗೆ ಬಂದು ನೋಡಿ ಹೆಸರು ವಿಚಾರಿಸಲಾಗಿ ಸಾಯಿಬಣ್ಣ ತಂದೆ ಅಬ್ದುಲಪ್ಪ ಸಾ: ರಾವೂರ ಅಂತಾ ಗೊತ್ತಾಗಿದ್ದು ನಾವು ಮತ್ತು ಪೊಲೀಸ್ ವಿಚಾರಿಸಲಾಗಿ ಆತನು ನಮ್ಮ ಮನೆಯ ಒಳಗೆ ಬಂದು ನನ್ನ ಹೆಂಡತಿ ಅಲ್ಲೆ ಇದ್ದರೂ ಸಹ ಅಲಮಾರಿಯನ್ನು ತೆರೆದು ಕಳವು ಮಾಡಲು ಯತ್ನಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 17/2012 ಕಲಂ. 380, 511 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಕಳ್ಳತನ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ:
ದಿನಾಂಕ 25,26,27-02-2012 ರ ಅವಧಿಯಲ್ಲಿ ಶಾಲೆಯ ಕಾರ್ಯಲಯದ ಕೋಣೆಯಲ್ಲಿ ಇಟ್ಟಿದ್ದ ಝರಾಕ್ಷ ಮಸೀನ್, ಬ್ಯಾಟರಿ ಹಾಗೂ ಬಿಸಿ ಊಟ ಧಾನ್ಯಗಳನ್ನು ಬಾಗಿಲ ಕೊಂಡಿ ಮುರಿದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಅಶೋಕ ತಂದೆ ಯಲ್ಲಪ್ಪ ನಾಯಿಕೊಡಿ ಸಾ: ಕಡಕೋಳ ತಾ: ಜೇವರ್ಗಿ ಮುಖ್ಯ ಗುರುಗಳು ಸರಕಾರಿ ಪ್ರೌಡ ಶಾಲೆ ಕಡಕೋಳ ರವರು ದೂರು ಸಲ್ಲಿಸಿದ್ದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 20/2012 ಕಲಂ 457,380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ :
ಶ್ರೀ ಅಬ್ದಲ್ ಹಮೀದ್ ತಂದೆ ಅಬ್ದುಲ್ ರಬ್ ಸಾ: ಸುಮಾ ಹೋಟೆಲ್ ಹತ್ತಿರ ಬಿಲಾಲಾಬಾದ ಗುಲಬರ್ಗಾ ರವರು ನಾನು ಮತ್ತು ನನ್ನ ಮಗನಾದ ಮಹ್ಮದ ಅಮನ ಕೂಡಿಕೊಂಡು ದಿನಾಂಕ: 26-02-12 ರಂದು 8-00 ಪಿ.ಎಮ.ಕ್ಕೆ ಅಂಗಡಿಗೆ ಹೋಗಲು ರೋಡ ದಾಟುತ್ತಿದ್ದಾಗ ಮೋಟಾರ ಸೈಕಲ ನಂ : ಕೆಎ 32/ ಡಬ್ಲೂ 6261 ನೇದ್ದರ ಸವಾರ ತನ್ನ ವಾಹನ ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ಮಗನಿಗೆ ಡಿಕ್ಕಿ ಪಡಿಸಿ ಭಾರಿಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 09/2012 ಕಲಂ 279, 337, ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

27 February 2012

GULBARGA DIST REPORTED CRIMES

ಕಳ್ಳತನ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ :
ಶ್ರೀ ಕುಪ್ಪಣ್ಣಾ ತಂದೆ ರಾಯಪ್ಪಾ ಧನ್ನಾ ಸಾ:ಭಂಕೂರ ರವರು ನಾನು ದಿನಾಂಕ 26/02/12 ರಂದು ರಾತ್ರಿ 10-00 ಘಂಟೆಗೆ ನಮ್ಮ ಮನೆಗೆ ಬೀಗ್ ಹಾಕಿ ಪಕ್ಕದ ಕೋಣೆಗೆ ಮಲಗಿಕೊಂಡಾಗ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲ ಕೀಲಿ ಮುರಿದು ನಗದು ಹಣ 10,000/- ರೂ. ಬಂಗಾರ ಮತ್ತು ಬೆಳ್ಳಿಯ ಆಭರಣ ಹೀಗೆ ಒಟ್ಟು 46,400/- ರೂ ಬೆಲೆ ಬಾಳುವುದಗಳನ್ನು ಯಾರೋ ಕಳ್ಳರು ಕಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 20/2012 ಕಲಂ: 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಸುಲೆಪೇಟ ಪೊಲೀಸ್ ಠಾಣೆ :
ಶ್ರೀಮತಿ ಮಲ್ಲಮ್ಮ @ ಲಕ್ಷ್ಮೀಬಾಯಿ ಗಂಡ ಹುಸನಪ್ಪ ಅರ್ಗೆನೋರ ಸಾಃ ಜಟ್ಟೂರ ರವರು ನನಗೆ 15 ವರ್ಷಗಳ ಹಿಂದೆ ಹುಸನಪ್ಪ ತಂದೆ ಮಲ್ಲಪ್ಪ ಆರ್ಗೆನೋರ ಸಾಃ ಜಟ್ಟೂರ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾಗಿ 3-4 ವರ್ಷಗಳ ನಂತರ ನನ್ನ ಗಂಡನಾದ ಹುಸನಪ್ಪನು ಆಗಾಗೆ ಜಗಳ ಮಾಡುತ್ತಾ ತವರು ಮನೆಯಿಂದ ಬಂಗಾರ ತೆಗೆದುಕೊಂಡು ಬಾ ಅಂತಾ ಹೊಡೆ ಬಡೆ ಮಾಡಿ ಮಾನಸೀಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಬಂದಿದ್ದು ನನ್ನ ತಾಯಿ ಮತ್ತು ಅಣ್ಣ ಇಬ್ಬರೂ ತನ್ನ ಗಂಡನಿಗೆ ಬುದ್ದಿವಾದ ಹೇಳಿದ್ದರು ದಿನಾಂಕಃ 27/02/2012 ರಂದು ಮುಂಜಾನೆ ಸುಮಾರಿಗೆ ನನ್ನ ಗಂಡನಾದ ಹುಸನಪ್ಪನು ಇತನು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ಕಡ್ಚಿಯಿಂದ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯ ಗೊಳಿಸಿ ಕೊಡಲಿ ಕಾವು ತೆಗೆದುಕೊಂಡು ಎಡಗೈ ಮೊಳಕೈಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 20/2012 ಕಲಂ. 498 [ಎ], 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.

GULBARGA DIST REPORTED CRIMES

ಬಾವಿಯಲ್ಲಿ ಟ್ರಾಕ್ಟರ ನುಗ್ಗಿಸಿ ಮೃತನಾದ ಟ್ರಾಕ್ಟರ ಚಾಲಕ :

ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ದಿನಾಂಕ: 26/02/2012 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನನ್ನ ಗಂಡನಾದ ಶರಣಬಸಪ್ಪ ಧಲ್ಲು ಇತನು ಟ್ರ್ಯಾಕ್ಟರ ನಂ ಕೆಎ:32 ಟಿ:5922 23 ನೇದ್ದರಲ್ಲಿ ಮುರುಮ ಹೊಡೆಯಲು ಹೋಗಿದ್ದು, ಇಬ್ರಾಹಿಂಪೂರ ರೋಡಿಗೆ ಟ್ರ್ಯಾಕ್ಟರದಲ್ಲಿ ಮುರಮು ತುಂಬಿಕೊಂಡು ಹೋಗುತ್ತಿದ್ದಾಗ ನಮ್ಮ ಗ್ರಾಮದ ವರದ ಶಂಕರ ಇವರ ಹೊಲದಲ್ಲಿರುವ ಬಾವಿಯಲ್ಲಿ ಟ್ರ್ಯಾಕ್ಟರ ಸಮೇತ ನೀರಿನಲ್ಲಿ ಬಿದ್ದು ಟ್ರ್ಯಾಕ್ಟರ ಇವರ ಮೆಲೆ ಬಿದ್ದಿದ್ದರಿಂದ ಮೃತಪಟ್ಟಿರುತ್ತಾನೆ. ಶ್ರೀಮತಿ ಲಕ್ಷ್ಮೀಬಾಯಿ ಗಂಡ ಶರಣಬಸಪ್ಪಾ ಧಲ್ಲು ಸಾ:ಚಲಗೇರಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 6/2012 ಕಲಂ 279, 304(ಎ) ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕೊಲೆ ಪ್ರಯತ್ನ:

ಚೌಕ ಪೊಲೀಸ್ ಠಾಣೆ: ಶ್ರೀ ವಿಕ್ರಮ ತಂದೆ ಚಿತಂಬರಾಯ ಪಾಟೀಲ ಸಾ||ಮುದ್ದಡಗಾ ಹಾ||ವ||ಸರಾಫ ಬಜಾರ ಗುಲಬರ್ಗಾ ರವರು ನಾನು ಮತ್ತು ನನ್ನ ಗೆಳೆಯರಾದ ಕುಮಾರ, ಅಭೀಷೆಕ ಕೂಡಿಕೊಂಡು ಶಾಂತು ಅಗ್ಗಿ ರವರ ಕಾರಬಾಡಿಗೆಯಿಂದ ಪಡೆದುಕೊಂಡು ಅಬ್ಬೆತುಮಕೂರಿಗೆ ಹೋಗಿ ಮರಳಿ ಗುಲಬರ್ಗಾಕ್ಕೆ ಬಂದು, ಊಟ ಮಾಡಲು ಪಲ್ಲವಿ ಹೋಟೆಲಕ್ಕೆ ಹೋಗಿರುತ್ತೆವೆ. ಇನ್ನೂ ನನ್ನ ಗೆಳೆಯರಾದ ಯಶ್ವಂತ , ಜಗದೀಶ ರವರಿಗೆ ಊಟಕ್ಕೆ ಕರೆಯಿಸಿ ನಾನು ಹೊಟೇಲ ಮ್ಯಾನೇಜರ ಸಂಗಡ ಹೊಟೇಲ ಮುಂದೆ ಮಾತನಾಡುತ್ತ ಇದ್ದಾಗ ನಮ್ಮೂರ ಅನಿಲ ತಂದೆ ಹಣಮಂತ ಮತ್ತು ಅವನ ಗೆಳೆಯ ದತ್ತು ಪೂಜಾರಿ ಇವರು ಕೂಡಿ ಹೊಟೇಲಕ್ಕೆ ಬಂದು ನನ್ನನ್ನು ನೋಡಿ ಅವಾಚ್ಯವಾಗಿ ನಿಂದನೆ ಮಾಡಿ ಅನಿಲ ಇತನು ತನ್ನ ಹತ್ತಿರ ಇದ್ದ ಜಂಬ್ಯಾ ತೆಗೆದು ನನ್ನ ತಲೆಯ ಎಡಭಾಗಕ್ಕೆ, ಎಡಕಪಾಳಕ್ಕೆ ಹೊಡೆದು ಭಾರಿ ರಕ್ತಗಾಯ ಪಡಿಸಿ ಎಡಗೈ ಮುಂಗೈ ಮೇಲೆ ಹೊಡೆದು ರಕ್ತಗಾಯ ಪಡಿಸಿದನು, ನಾನು ಕುಸಿದು ಬಿದ್ದಾಗ ಓಡಿ ಹೋಗಿರುತ್ತಾರೆ. ನನ್ನ ಗೆಳೆಯರು ನನಗೆ ಆಸ್ಪತ್ರೆಗೆ ತೆಗೆದುಕೊಂಡು ಉಪಚಾರ ಕುರಿತು ಸೇರಿಕೆ ಮಾಡಿರುತ್ತಾರೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 26/2012 ಕಲಂ 504 307 ಸಂ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಮತಿ ಮಾಳು ಗಂಡ ಶಂಕರ ಪಾಟೀಲ ಸಾ: ಸುಂದರ ಗುಲಬರ್ಗಾ ರವರು ನಾನು ದಿನಾಂಕ 25-02-12 ರಂದು ರಾತ್ರಿ 20=00 ಗಂಟೆಯ ಸುಮಾರಿಗೆ ಆರ್.ಟಿ.ಓ.ಕ್ರಾಸ್ ದಿಂದ ಜಿ.ಜಿ.ಹೆಚ್.ಸರ್ಕಲ್ ಮೇನ ರೋಡಿನಲ್ಲಿ ಬರುವ ಗುಮ್ಮಜ ಹತ್ತಿರದ ಸುಂದರ ನಗರ ರೋಡ ಮೇಲೆ ಹೊರಟಾಗ ಮೋಟಾರ ಸೈಕಲ್ ನಂ:ಕೆಎ 32 ವಾಯ-3074 ನೆದ್ದರ ಚಾಲಕ ಬಾಪು ನಗರ ಸುಂದರ ನಗರ ರೋಡ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಭಾರಿಗಾಯ ಗೊಳಿಸಿ ಮೋಟಾರ ಸೈಕಲ್ ಸಮೇತ ಹೋರಟು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 28/2012 ಕಲಂ 279, 338, ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

26 February 2012

GULBARGA DIST REPORTED CRIMES

ಕಳ್ಳತನ ಪ್ರಕರಣ:
ಸ್ಟೇಶನ ಬಜಾರ ಠಾಣೆ:
ಶ್ರೀಮತಿ ಸರಸ್ವತಿ ಗಂಡ ಗೀರಿಶ ನಾರಾಯಣ ಹೆಬ್ಬಾರ ಸಾ: ಪ್ಲಾಟ ನಂ 4 ಚೆನ್ನಕೇಶವ ನಿಲಯ ಬ್ಯಾಂಕ ಕಾಲೋನಿ ಗುಲಬರ್ಗಾ ರವರು ನನ್ನ ಗಂಡ ಕೃಷ್ಣ ಗ್ರಾಮೀಣ ಬ್ಯಾಂಕ ಕೇಂದ್ರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾನು ಸ್ವದೇಶಿ ಕೈ ಕಸಬು ಮಾಡುತ್ತಿದ್ದನೆ. ನಮಗೆ ಸುಮಾರು 7 ವರ್ಷಗಳಿಂದ ಮಂಜುನಾಥ ತಂದೆ ಗುರುನಾಥ ಕಣಜೆ ಎಂಬುವವರು ಪರಿಚಯವಿದ್ದು ಇವರು ಸಹ ಕೈ ಕಸಬು ಮಾಡುತ್ತಾ ನಮಗೆ ವ್ಯವಹಾರದಲ್ಲಿ ಸಹಾಯ ಮಾಡುತ್ತಿದ್ದನು ಹೀಗಾಗಿ ನಾವು ಊರಿಗೆ ಹೋಗುವಾಗ ಮಂಜುನಾಥ ಇವರನ್ನು ನಮ್ಮ ಮನೆಯಲ್ಲಿ ಇರುವಂತೆ ಹೇಳಿ ಹೋಗುತ್ತಿದ್ದೇವು.ನಾನು ದಿನಾಂಕ 23/02/2012 ರಂದು ಗುಲಬರ್ಗಾದಿಂದ ಹುಬ್ಬಳ್ಳಿಗೆ ಹೋದೇನು ದಿನಾಂಕ 24/02/2012 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಗುಲಬರ್ಗಾ ದಿಂದ ನನ್ನ ಗಂಡ ಹೈದ್ರಾಬಾದಗೆ ಖಾಸಗಿ ಕೆಲಸದ ನಿಮಿತ್ಯವಾಗಿ ಹೋಗುವದಾಗಿ ಹೇಳಿದ್ದು ಅಲ್ಲದೆ ಮಂಜುನಾಥ ಇವರನ್ನು ಮನೆಯಲ್ಲಿ ಬಿಟ್ಟು ಹೋಗುವದಾಗಿ ನನ್ನೊಂದಿಗೆ ಮೊಬೈಲನಲ್ಲಿ ಮಾತಾಡಿ ತಿಳಿಸಿ ಹೋಗಿರುತ್ತಾರೆ. ದಿನಾಂಕ 25/02/2012 ರಂದು ಬೆಳಿಗ್ಗೆ 5-10 ಗಂಟೆಗೆ ಮಂಜುನಾಥ ಇತನು ನನ್ನ ಮೋಬಾಯಿಲ್ ಗೆ ಕರೆ ಮಾಡಿ ಗಿರೀಶ ಅಣ್ಣ ಇವರನ್ನು ದಿನಾಂಕ 24/02/2012 ರಂದು ರಾತ್ರಿ 10-30 ಕ್ಕೆ ಗುಲಬರ್ಗಾ ಕೇಂದ್ರ ಬಸ ನಿಲ್ದಾಣಕ್ಕೆ ಬಿಟ್ಟು ದ್ವೀ ಚಕ್ರ ವಾಹನದಲ್ಲಿ ನಮ್ಮ ಮನೆಗೆ ಹೋಗಿ ಊಟ ಮಾಡಿ ಸ್ವಲ್ಪ ವಿಶ್ರಾಂತಿ ಪಡೆಯುವಾಗ ನನಗೆ ನಿದ್ದೆ ಹತ್ತಿ ದ್ದು ನಿಮ್ಮ ಮನೆ ಕಡೆಗೆ ಹೋಗುವದಕ್ಕೆ ಆಗಿರುವದಿಲ್ಲ ದಿನಾಂಕ 25/02/2012ರ ಬೆಳಿಗ್ಗೆ 5-10 ಗಂಟೆಗೆ ಬಂದು ನೋಡಿದಾಗ ಮನೆಯ ಮುಖ್ಯ ದ್ವಾರದ ಸೆಂಟ್ರಲ್ ಲಾಕ ಯಾರೋ ಕಳ್ಳರು ಮುರಿದು ಮನೆ ಒಳಗೆ ಹೋಗಿ ಮನೆಯಲ್ಲಿರುವ ಆಲ್ಮಾರಿಯ ಕೀಲಿಯನ್ನು ಮುರಿದು ಆಲ್ಮಾರದಲ್ಲಿದ್ದ ಬಟ್ಟೆ ಮತ್ತು ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಕೆಳಗಡೆ ಹಾಕಿರುತ್ತಾರೆ. ಅಲ್ಲದೆ ಮತ್ತೊಂದು ರೂಮಿನಲ್ಲಿ ವಸ್ತುಗಳನ್ನು ಎಸೆದಿರುತ್ತಾರೆ ಹಾಗೂ ದೆವರ ಕೋಣೆಯಲ್ಲಿರುವ ಸಾಮಾನುಗಳು ಸಹ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ತಿಳಿಸಿದ್ದರಿಂದ ನಾನು ಹುಬ್ಬಳಿಯಿಂದ ಗುಲಬರ್ಗಾದ ನಮ್ಮ ಮನೆಗೆ ಬಂದು ನೋಡಲಾಗಿ ಬಂಗಾರದ ಆಭರಣಗಳು ಮತ್ತು ನಗದು ಹಣ 2000=00 ರೂ ಹೀಗೆ ಓಟ್ಟು 2,20,000=00 ರೂಪಾಯಿಗಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 18/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಪಿ.ಡಿ.ಓ ಅಧಿಕಾರಿಯ ಮೇಲೆ ಹಲ್ಲೆ :
ಕಮಲಾಪೂರ ಠಾಣೆ:
ಶ್ರೀ ಅರವಿಂದ ತಂದೆ ಶಂಕರ ಚವ್ವಾಣ ಪಿ.ಡಿ.ಓ ಮತ್ತು ಕಾರ್ಯದರ್ಸಿ ಕಲ್ಮೂಡ ಗ್ರಾಮ ಪಂಚಾಯತ ಕಾರ್ಯಲಯ ಸಾ ಕಾಳನೂರ ಗುಲಬರ್ಗಾ ರವರು ನಾನು ದಿನಾಂಕ: 25/02/2012 ರಂದು ಕಲ್ಮೂಡ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ 2012 -13 ನೇ ಸಾಲಿನ ಇಂದಿರಾ ಆವಾಸ ಯೋಜನೆ ಅಡಿಯಲ್ಲಿ ಗ್ರಾಮ ಆಯ್ಕೆ ಕುರಿತು ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರನ್ನು ಕರೆದು ಸಾಮಾನ್ಯ ಸಭೆ ಕೈಕೊಂಡಿದ್ದು, ಐ.ಎ.ವೈ ಅಡಿಯಲ್ಲಿ ಗ್ರಾಮ ಆಯ್ಕೆ ಮಾಡುವ ವಿಷಯದಲ್ಲಿ ಚರ್ಚೆ ಮಾಡುತ್ತಿದ್ದಾಗ ಕಲ್ಮೂಡ ಗ್ರಾಮ ಪಂಚಾಯತಿ ನಾಮು ನಾಯಕ ತಾಂಡಾದ ಗ್ರಾಮ ಪಂಚಾಯತ ಸದಸ್ಯನಾದ ಶ್ರೀ.ಗೋಪಾಲ ತಂದೆ ದೇವಲಾ ರಾಠೋಡ ಸಾ: ಲಿಂಬು ನಾಯಕ ತಾಂಡಾ ಕಲ್ಮೂಡ ಈತನು ಸಭೆಯಲ್ಲಿ ಎದ್ದು ನಿಂತು ನನಗೆ ಅವಾಚ್ಯವಾಗಿ ಬೈದು ಇಂದಿರಾ ಆವಾಸ ಯೋಜನೆ ಅಡಿಯಲ್ಲಿ ಮಂಜೂರಾದ ಹೆಚ್ಚುವರಿ 11 ಮನೆಗಳನ್ನು ನಾನು ಹೇಳಿದ ನಮ್ಮ ಜನರಿಗೆ ಕೊಡು ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನಾನು ಈ ವಿಷಯದಲ್ಲಿ ಗ್ರಾಮ ಸಭೆ ಮಾಡದೇ ಹೊರತು ಮನೆ ಹಂಚಿಕೆ ಮಾಡುವುದಿಲ್ಲ ಅಂತಾ ಅಂದಾಗ ಗೋಪಾಲ ರಾಠೋಡ ಈತನು ಎದ್ದು ಬಂದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ಕೈಯಿಂದ ಕಪಾಳಕ್ಕೆ ಹೊಡೆದು ಗುಪ್ತಗಾಯ ಪಡಿಸಿ ಕೈ ಮುಷ್ಟಿ ಮಾಡಿ ನನ್ನ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿದನು. ಆಗ ನಾನು ಸಭೆಯನ್ನು ಅರ್ಧಕ್ಕೆ ಮುಕ್ತಾಯ ಮಾಡಿ ಅಲ್ಲಿಂದ ಹೊರಗೆ ಹೋಗುತ್ತಿದ್ದಾಗ ಮತ್ತೆ ಬಂದು ನನಗೆ ಅಡ್ಡಗಟ್ಟಿ ನಿಲ್ಲಿಸಿ ನನ್ನೊಂದಿಗೆ ತೆಕ್ಕಿಮುಸ್ತಿ ಮಾಡಿ ನೆಲಕ್ಕೆ ಬಿಳಿಸಿರುತ್ತಾನೆ ನನ್ನನ್ನು ಕರ್ತವ್ಯ ನಿರ್ವಹಿಸಲು ಅಡೆ ತಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿದವರ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 21/2012 ಕಲಂ 341.323.324.353.504 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಆಳಂದ ಪೊಲೀಸ ಠಾಣೆ:
ಶ್ರೀ ಸುರೇಶ ತಂದೆ ಕರಬಸಪ್ಪ ಸೇರಿ ಸಾಃ ಖಜೂರಿ ಗ್ರಾಮ ರವರು ನನ್ನ ಹೆಸರಿಗೆ ನಮ್ಮೂರಿನ ಸಿಮಾಂತರದಲ್ಲಿ 13 ಎಕರೆ ಜಮೀನು ಹೊಲ ಇದ್ದು ಅಳಂದ ದಿಂದ ಉಮರ್ಗಾಕ್ಕೆ ಹೋಗಿ ಬರುವ ರೋಡಿಗೆ ಹತ್ತಿ ಕೊಂಡು ಇರುತ್ತದೆ. ನನ್ನಂತೆ ನಮ್ಮೂರಿನ ದಯಾನಂದ ತಂದೆ ವಿಠೋಬಾ ಬಂಡೆ ಮತ್ತು ಮಹೆತಾಬ ತಂದೆ ಮಹ್ಮದಅಲಿ ನಿಂಬಾಳಕಾರ ಇವರು ಸಹ ನನ್ನಂತೆ ಅವರ ಜಮೀನು ಸಾಗುವಳಿ ಮಾಡಲು ತಲಾ ಎರಡೆರಡು ಎತ್ತುಗಳು ಇಟ್ಟುಕೊಂಡು ಸಾಗುವಳಿ ಮಾಡಿಕೊಂಡಿರುತ್ತಾರೆ ನಾವು ದಿನಾಲು ಪ್ರತಿ ದಿನ ಮುಂಜಾನೆಯಿಂದ ಸಾಯಂಕಾಲದವರೆಗೆ ಹೊಲದಲ್ಲಿದ್ದು ಒಕ್ಕುಲುತನ ಕೆಲಸ ಮಾಡಿ ಸಾಯಂಕಾಲ ಹೊಲದಲ್ಲಿ ಎತ್ತುಗಳು ಕಟ್ಟಿ ಹಾಕಿ ಅವುಗಳಿಗೆ ಮೇವು ಹಾಕಿ ಮನೆಗೆ ಹೋಗಿ ಬರುವುದು ಮಾಡುತ್ತೇವೆ. ದಿನಾಂಕ 20/02/2012 ರಂದು ಮುಂಜಾನೆ ಹೊಲದಲಿ ನೇಗಿಲು ಹೊಡೆಯುವ ಕೆಲಸ ಬಹಳಷ್ಟು ಇರುವುದರಿಂದ ದಯಾನಂದ ಬಂಡೆ ಇವರ 2 ಎತ್ತುಗಳು ಮತ್ತು ಮಹೆತಾಬ ನಿಂಬಾಳಕರ ಇವರ 2 ಎತ್ತುಗಳು ಮತ್ತು ಪರಿಚಯದ ತೆಲಾಕುಣಿ ಗ್ರಾಮದ ಎಕನಾಥ ತಂದೆ ಲಕ್ಷ್ಮಣ ಎಟೆ ಇವರ 2 ಎತ್ತುಗಳು ನಮ್ಮ ಹೊಲಕ್ಕೆ ತರೆಸಿಕೊಂಡು ನಾಲ್ಕು ನೇಗಿಲುಗಳು ಹೂಡಿ ಹೊಲದಲ್ಲಯೇ ಕಟ್ಟಿಹಾಕಿ ಊಟಕ್ಕೆ ಮನೆಗೆ ಹೋಗಿದ್ದು ರಾತ್ರಿ ಮನೆಯಲ್ಲಿ ಇದ್ದು ಮುಂಜಾನೆ ದಿನಾಂಕ 21/02/2012 ರಂದು ಬೆಳಗಿನ ಜಾವ 5-00 ಗಂಟೆ ಸುಮಾರಿಗೆ ನಾನು ಹೊಲಕ್ಕೆ ಬಂದು ನೊಡಲಾಗಿ ಮಹೆತಾಬ ನಿಂಬಾಳಕಾರ ಇವರ ಒಂದು ಎತ್ತು ಹೊರತು ಪಡಿಸಿ ಉಳಿದ 7 ಎತ್ತುಗಳು ಹೊಲದಲ್ಲಿ ಇರಲಿಲ್ಲ ಅವಗಳಿಗೆ ಕಟ್ಟಿ ಹಾಕಿದ ಹಗ್ಗ ನೋಡಲಾಗಿ ಅದು ಕೂಯಿದಾ ಹಾಗೆ ಕಂಡು ಬಂದಿತ್ತು ಇದರಿಂದ ನನಗೆ ನಮ್ಮ ಎಲ್ಲರ ಎಲ್ಲಾ ಎತ್ತುಗಳು ಯಾರೂ ಕಳ್ಳರು ಕಳುವು ಮಾಡಿಕೊಂಡು ಹೋಗಿ ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 42/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸುಲೇಪೇಟ ಠಾಣೆ:
ಶ್ರೀ ಪಾಂಡು ತಂದೆ ವಿಠ್ಠಲರಾವ ಸಿಂಧೆ ಸಾಃ ಜಟ್ಟೂರ ಹಾ ವ ಹೈದ್ರಾಬಾದ ರವರು ನಾನು ಮತ್ತು ಜಟ್ಟೂರ ಗ್ರಾಮದ ಸಂತೋಷ ತಂದೆ ಅರ್ಜುನಪ್ಪ ಸಿಂಧೆ ಕೂಡಿಕೊಂಡು ಹಿರೋ ಹೋಂಡಾ ಪ್ಯಾಶನ್ ಮೋಟಾರ್ ಸೈಕಲ್ ನಂ. ಎಪಿ-28 ಡಿ.ಜೆ-9660 ನೇದ್ದರ ಮೇಲೆ ಕೆಲಸದ ನಿಮಿತ್ಯ ಉಮರ್ಗಾಕ್ಕೆ ಹೋಗಿ ಚಿಂಚೋಳಿ ಸುಲೇಪೇಟ ಮಾರ್ಗವಾಗಿ ವಾಪಾಸ ಜಟ್ಟೂರ ಗ್ರಾಮಕ್ಕೆ ಹೋಗುತ್ತಿರುವಾಗ ರಾತ್ರಿ 8:00 ಗಂಟೆಯ ಸುಮಾರಿಗೆ ನಿಡಗುಂದಾ ಗ್ರಾಮದ ಸೀಮಾಂತರದಲ್ಲಿರುವ ರೋಡಿನ ಮೇಲೆ ಎದುರಿನಿಂದ ಒಬ್ಬ ಆಟೋ ಚಾಲಕನು ತನ್ನ ಆಟೋ ವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಓಡಿಸುತ್ತಾ ಬಂದು ಮೋಟಾರ್ ಸೈಕಲಕ್ಕೆ ಡಿಕ್ಕಿ ಹೊಡೆದಿದ್ದರಿಂದ ಹಿಂದೆ ಕುಳಿತಿದ್ದ ನಾನು ಸಿಡಿದು ಕೆಳಗೆ ಬಿದ್ದು ಎಡಗಾಲು ಕಿರು ಬೆರಳಿಗೆ, ಎಡ ಮೊಳಕಾಲಿಗೆ ಮತ್ತು ತಲೆಯ ಮುಂಭಾಗಕ್ಕೆ ರಕ್ತ ಗಾಯವಾಗಿ ಎಡ ಮೊಳಕೈಗೆ ತೆರೆಚಿದ ಮತ್ತು ಗುಪ್ತಘಾಯವಾಗಿದ್ದು ಮೋಟಾರ ಸೈಕಲ ಚಲಾಯಿಸುತ್ತಿದ್ದ ಸಂತೋಷನ ತಲೆಯ ಎಡಭಾಗದ ಮುಂಭಾಗಕ್ಕೆ ಭಾರಿ ರಕ್ತಘಾಯವಾಗಿ ಮತ್ತು ಇತರೆ ಕಡೆಯಲ್ಲಿ ರಕ್ತಘಾಯ ಮತ್ತು ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಅಪಘಾತದ ಪಡಿಸಿದ ಆಟೋ ಚಾಲಕನು ತನ್ನ ಆಟೋ ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 19/2012 ಕಲಂ. 279, 337, 304 [ಎ] ಸಂ. 187 ಐ.ಎಮ್.ವಿ ಆಕ್ಟ್ ಪ್ರಕಾರ ಪ್ರಕರಣದ ದಾಖಲು ಮಾಡಿಕೊಂಡಿರುತ್ತಾರೆ.

25 February 2012

GULBARGA DIST REPORTED CRIME

ಕಳ್ಳತನ ಪ್ರಕರಣ:
ವಾಡಿ ಪೊಲೀಸ್ ಠಾಣೆ:
ಶ್ರಿ ವಿನೊದ ತಂದೆ ಪಾಂಡು ಪವಾರ ಉ ಎಸಿಸಿ ನ್ಯೂಪ್ಲಾಂಟದಲ್ಲಿ ಪ್ಯಾಕಿಂಗ ಹೌಸದಲ್ಲಿ ಲೋಡರ ಕೆಲಸ ಸಾ ಸೇವಾಲಾಲ ನಗರ ವಾಡಿ ರವರು ನನಗೆ ಗೌತಮ ಅಂತಾ ತಮ್ಮನಿದ್ದು ಆತನಿಗೆ ಸುಹಾಸಿನಿ ಅಂತಾ ಹೆಂಡತಿ ಇರುತ್ತಾಳೆ ಅವರಿಬ್ಬರು ಬಿ.ಬಿ.ಎಮ್ ವರೆಗೆ ವಿದ್ಯಾಭ್ಯಾಸ ಮಾಡಿರುತ್ತಾರೆ.ಅವರು ಬೆಂಗಳೂರ ಇಸ್ರೊ ಕಂಪನಿಯಲ್ಲಿ ನೌಕರಿ ಸಲುವಾಗಿ ಅರ್ಜಿಯನ್ನು ಹಾಕಿದ್ದು ದಿನಾಂಕ:26-02-2012 ರಂದು ಸಂದರ್ಶನಕ್ಕೆ ಹೋಗಬೇಕಾಗಿದ್ದರಿಂದ ನಿನ್ನೆ ದಿನಾಂಕ 24-02-2012 ರಂದು ರಾತ್ರಿ 7-00 ಗಂಟೆ ಸುಮಾರಿಗೆ ತಮ್ಮ ಮನೆಗೆ ಕೀಲಿ ಹಾಕಿಕೊಂಡು ತಮ್ಮ ಮತ್ತು ತಮ್ಮನ ಹೆಂಡತಿ ಬೆಂಗಳೂರಿಗೆ ಹೋರಟು ಹೋಗಿದ್ದು ನಾನು ರಾತ್ರಿ 11-30 ಗಂಟೆಯ ಸುಮಾರು ನನ್ನ ಕರ್ತವ್ಯಕ್ಕೆ ನಾನು ಹೋರಟು ಹೋದೆನು. ಬೆಳಿಗ್ಗೆ 6 ಗಂಟೆಯ ಸುಮಾರು ನನ್ನ ಹೆಂಡತಿ ನನಗೆ ಪೋನಮಾಡಿ ಗೌತಮ ಇವರ ಮನೆಯ ಬಾಗಿಲು ತೆರೆದಿರುತ್ತದೆ ಕೀಲಿ ಹೊರಗಡೆ ಬಿದ್ದಿರುತ್ತದೆ ಅಂತಾ ತಿಳಿಸಿದಾಗ ನಾನು ಬಂದು ನೋಡಲಾಗಿ ಅಲಮಾರಾ ತೆರೆದಿದ್ದು ಸಾಮಾನುಗಳು ಚೆಲ್ಲಾಪಿಲ್ಲಿಯಾಗಿದ್ದು ಇರುತ್ತದೆ. ಮನೆಯಲ್ಲಿ ವಸ್ತುಗಳ ಬಗ್ಗೆ ನನ್ನ ತಮ್ಮನಿಗೆ ಪೋನ ಮೂಲಕ ವಿಚಾರಿಸಿದಾಗ ಬಂಗಾರ ಬೆಳ್ಳಿಯ ಆಭರಣಗಳು ಮತ್ತು ನಗದು ಹಣದ ಬಗ್ಗೆ ತಿಳಿದಿರುತ್ತದೆ. ಮಧ್ಯರಾತ್ರಿ ವೇಳೆಯಲ್ಲಿ ಯಾರೊ ಕಳ್ಳರು ನಮ್ಮ ತಮ್ಮನ ಮನೆಯ ಬಾಗಿಲ ಕೀಲಿ ಮುರಿದು ಬಂಗಾರ ,ಬೆಳ್ಳಿಯ ಆಭರಣಗಳು, ಮತ್ತು ನಗದು ಹಣ 15,000/- ರೂ ಹೀಗೆ ಒಟ್ಟು 92,050/- ರೂ ಬೆಲೆಬಾಳುವ ಬಂಗಾರದ ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 30/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಅಕ್ಕಿ ಮೂಟೆಗಳು ದರೋಡೆ ಮಾಡಿದ ಬಗ್ಗೆ ಪ್ರಕರಣ:
ಕಮಲಾಪೂರ ಠಾಣೆ :
ಶ್ರೀ. ರಾಮ ತಂದೆ ಮಾಧವ ಡಂಡರೆ ಉ: ಲಾರಿ ನಂ: ಎಂ.ಹೆಚ್: 25-ಬಿ-9854 ನೇದ್ದರ ಚಾಲಕ ಸಾ: ಬಲಸೂರ ಗ್ರಾಮ ತಾ:ಉಮ್ಮರ್ಗಾ ಜಿ:ಉಸ್ಮಾನಾಬಾದ ಮಹಾರಾಷ್ಟ್ರ ರವರು ನಾನು ಯಾದಗಿರಿಯಲ್ಲಿ ಎಸ್.ಎಂ.ಎ ಟ್ರಾನ್ಸಪೊರ್ಟ ರವರಿಗೆ ಸಂಪರ್ಕಿಸಲಾಗಿ ಪೂನಾದ ಗುಲಟೇಕಡಿ ಮಾರ್ಕೆಟ ಯಾರ್ಡಿಗೆ ಸೋನಮಸೂರಿ ಅಕ್ಕಿಯ ಲೋಡ ತೆಗೆದುಕೊಂಡು ಹೋಗುವುದು ಇದೆ ಅಂತಾ ಹೇಳಿದ್ದರಿಂದ ಬಾಡಿಗೆ ಮುಗಿಸಿಕೊಂಡು ದಿನಾಂಕ: 23/02/2012 ರಂದು ಸಾಯಂಕಾಲ ಲಾರಿಯಲ್ಲಿ 25 ಕೆ.ಜಿ.ಯ 680 ಅಕ್ಕಿ ಪಾಕೇಟಗಳು ಅ.ಕಿ. 3,75,000/- ರೂಪಾಯಿ ಗಳದ್ದು ಮಾಲನ್ನು ಲೋಡ ಮಾಡಿಕೊಂಡು ಯಾದಗಿರಿಯಿಂದ ಹೊರಟು ಗುಲಬರ್ಗಾ ನಗರದ ಹೊರವಲಯದಲ್ಲಿರುವ ಹುಮನಾಬಾದ ರಿಂಗರೋಡ ಸೇಲ್ಸ ಟ್ಯಾಕ್ಸ್ ಚೆಕ್ ಪೊಸ್ಟ ಹತ್ತಿರ ರಾತ್ರಿ 12-30 ಗಂಟೆ ಸುಮಾರಿಗೆ ಟಪಾಲ ತೋರಿಸಿ ಮಧ್ಯರಾತ್ರಿ ಕಮಲಾಪೂರ ದಾಟಿ ಕುದುರೆಮುಖ ಹೊಡ್ಡು ಏರುತ್ತಿರುವಾಗ ರಾತ್ರಿ ಅಂದಾಜು 3-00 ಗಂಟೆ ಸುಮಾರಿಗೆ ನನ್ನ ಲಾರಿಯ ಹಿಂದಿನಿಂದ ಒಂದು ಮೋಟರ ಸೈಕಲ ಮೇಲೆ ನಾಲ್ಕು ಜನರು ಬಂದು ನಿಧಾನವಾಗಿ ಚಲಿಸುತ್ತಿದ್ದ ನನ್ನ ಲಾರಿಯಲ್ಲಿ ಮೂರು ಜನರು ಕ್ಲೀನರ್ ಕಡೆ ಬಾಗಿಲಿನಿಂದ ಒಳಗೆ ಏರಿ ಬಂದು ನನಗೆ ಲಾರಿ ನಿಲ್ಲಿಸು ಅಂತಾ ಹೆದರಿಸಿ ಲಾರಿ ನಿಲ್ಲಿಸಿ ನನ್ನನ್ನು ಸ್ಟೇರಿಂಗದಿಂದ ಪಕ್ಕಕ್ಕೆ ಸರಿಸಿ ಲ್ಯಾರಿಯ ಕ್ಯಾಬೀನದಲ್ಲಿ ನನಗೆ ಅಡ್ಡವಾಗಿ ಮಲಗಿಸಿ ನನ್ನ ಕಣ್ಣೀಗೆ ಬಟ್ಟೆ ಕಟ್ಟಿ ಕೈಗಳಿಗೆ ಶಾಲಿನಿಂದ ಹಿಂದುಗಡೆ ಕಟ್ಟಿ ನನ್ನ ಬೆನ್ನಿನ ಮೇಲೆ ಒಬ್ಬನು ಕುಳಿತುಕೊಂಡು ನನಗೆ ಕೈಯಿಂದ ಮುಖಕ್ಕೆ, ಬೆನ್ನಗೆ ಹೊಡೆದಿದ್ದು, ಚಿರಾಡಿದರೆ ಜೀವ ತೆಗೆಯುತ್ತೇವೆ ಅಂತಾ ಹಿಂದಿ ಭಾಷೆಯಲ್ಲಿ ಹೆದರಿಸಿ ನನ್ನ ಲಾರಿಯನ್ನು ತಾವೇ ಚಲಾಯಿಸಿಕೊಂಡು ಗುಲಬರ್ಗಾ ಕಡೆಗೆ ತೆಗೆದುಕೊಂಡು ಬಂದು ಸ್ವಲ್ಪ ದೂರ ಹೋದ ನಂತರ ಎಡಕ್ಕೆ ತಿರುಗಿ ಅಂದಾಜು 15-20 ಕಿಲೋ ಮಿಟರ್ ದೂರ ಹೋದ ನಂತರ ಲಾರಿಯನ್ನು ನಿಲ್ಲಿಸಿ ನನ್ನ ಲಾರಿಯಲ್ಲಿದ್ದ ಅಕ್ಕಿಯ ಪಾಕೇಟಗಳನ್ನು ಕೆಳಗೆ ಯಾವುದೋ ಹೊಲದಲ್ಲಿ ಅನಲೋಡ ಮಾಡಿ ನಂತರ ನನ್ನ ಲಾರಿಯನ್ನು ಅವರೇ ಚಲಾಯಿಸಿಕೊಂಡು ಹುಮನಾಬಾದ ಹತ್ತಿರದ ಹುಡಗಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಬೆಳೆಗ್ಗೆ ಅಂದಾಜು 7-00 ಗಂಟೆ ಸುಮಾರಿಗೆ ಬಿಟ್ಟು ಓಡಿ ಹೋಗಿರುತ್ತಾರೆ. ಸದರಿಯವರನ್ನು ನೋಡಿದಲ್ಲಿ ಗುರ್ತಿಸುತ್ತೇನೆ ಹಾಗೂ ಅವರ ವಯಸ್ಸು ಸುಮಾರು 30-35 ವರ್ಷ ದವರಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಿದ್ದರು. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 20/2012 ಕಲಂ 394. 506 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

24 February 2012

GULBARGA DIST REPORTED CRIMES

ಅಪಹರಣ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ಶಿವಬಾಯಿ ತಂದೆ ಅಶೋಕ ವ 15 ವರ್ಷ ಸಾ:ಮರತೂರ ರವರು ನಾನು ದಿನಾಂಕ-22-02-2012ರಂದು ಸಾಯಂಕಾಲ ಬಯಲು ಸ್ಥಳದಲ್ಲಿ ಶೌಚಾಲಯಕ್ಕೆ ಹೋದಾಗ ಮೌನೇಶ ತಂದೆ ನಾಗಪ್ಪಾ ಸಾ:ಮರತೂರ ಇತನು ನನಗೆ ಬಾಯಿಯಲ್ಲಿ ಕೇಕು ಒತ್ತಿ ಜೀವದ ಭಯಹಾಕಿ ಮುಗಳಗಾಂವ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದು ಅಲ್ಲಿಯ ಜನರು ಆತನನ್ನು ಹಿಡಿದುಕೊಂಡು ದೂರವಾಣಿ ಮೂಲಕ ನಮ್ಮ ಗ್ರಾಮದವರಿಗೆ ತಿಳಿಸಿದ್ದರಿಂದ ನಮ್ಮ ತಂದೆ ತಾಯಿಯವರು ಬಂದು ಕರೆದುಕೊಂಡು ಬಂದಿರುತ್ತಾರೆ. ನನಗೆ ಮೋಸದಿಂದ ಅಪಹರಣ ಮಾಡಿ ಮಾನಸಿಕವಾಗಿ ಚಿತ್ರ ಹಿಂಸೆ ನೀಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 19/2012 ಕಲಂ: 366(ಎ), 506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಹರಣ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ಸುಗಂದಬಾಯಿ ಗಂ ದಿ:ಮಹಾದೇವ ಕಮಲಾಪೂರ ಸಾ;ಶಂಕರವಾಡಿ ರವರು ನನ್ನ ಮಗ ಶಿವಮೂರ್ತಿ ಇತನು ಮನೆಯಲ್ಲಿ ಮಲಗಿಕೊಂಡಾಗ ನಂಜಮ್ಮಾ ತಂದೆ ಶಿವಲಿಂಗಪ್ಪಾ ಇವಳು ಆಕಸ್ಮಿಕವಾಗಿ ನನ್ನ ಮಗನು ಮಲಗಿದ ಕೋಣೆಯಲ್ಲಿ ಬಂದಿರುತ್ತಾಳೆ ಆಗ ಶಶಿಕಾಂತ ತಂದೆ ಶಿವಲಿಂಗಪ್ಪಾ ಚಿತ್ತಾಪೂರ ಸಂಗಡ ಇನ್ನೂ 8 ಜನರು ಸಾ: ಎಲ್ಲರೂ ಶಂಕರವಾಡಿ ಗ್ರಾಮದವರು ಬಂದು ನನ್ನ ಮಗನು ಮಲಗಿದ ಕೋಣೆಯ ಹೊರಬಾಗಿಲು ಕೀಲಿ ಹಾಕಿರುತ್ತಾರೆ. ಆಗ ನನ್ನ ಮಗನು ಗಾಬರಿಗೊಂಡು ಹೊರಗಡೆ ಬರಲು ಹೋಗಲು ಯತ್ನಿಸುತ್ತಿದ್ದಾಗ ಹುಡುಗಿಯ ಸಂಬಂಧಿಕರಾದ ಶಶಿಕಾಂತ ತಂದೆ ಶಿವಲಿಂಗಪ್ಪಾ ಮತ್ತು ಸಂಗಡ ಇನ್ನೂ 8 ಜನರು ಕೂಡಿಕೊಂಡು ನನ್ನ ಮಗನಿಗೆ ಅಪಹರಿಸಿಕೊಂಡು ಹೋಗಿ ಎಲ್ಲೋ ಬಚ್ಚಿಟ್ಟಿದ್ದಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 18/2012 ಕಲಂ 363, ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಠಾಣೆ:
ಸಂಗೀತಾ ತಂದೆ ಮಲ್ಲಿಕಾರ್ಜುನ ಚನಿಗುಂಡೆ ಸಾ: ಸಿ.ಐ.ಬಿ ಕಾಲೋನಿ ಗುಲಬರ್ಗಾ ರವರು ನಾನು ಮತ್ತು ನನ್ನೆ ಗೆಳತಿ ಶ್ರೀದೇವಿ ಸಿ.ಐ.ಬಿ ಕಾಲೋನಿಯ ಈಶ್ವರ ಇಂಗಿನ್ ಎಂಬುವವರ ಮನೆಯಲ್ಲಿ ವಿದ್ಯಾಬ್ಯಾಸ ಮಾಡುವ ಸಲುವಾಗಿ ಬಾಡಿಗೆ ಮನೆ ಮಾಡಿದ್ದು, ಸುಮಾರು 3 ತಿಂಗಳ ಹಿಂದೆ ನಮ್ಮ ಅಕ್ಕ ಮೃತ ಪಟ್ಟಿದ್ದರಿಂದ ನಮ್ಮ ಮನೆ ಖಾಲಿಯಿರುತ್ತದೆ. ನನ್ನ ತಂದೆ ತಾಯಿ ಯಾದಗಿರಿಯಲ್ಲಿರುತ್ತಾರೆ. ಸದರಿ ಮನೆಯು ಬಾಡಿಗೆ ಕೂಡುವ ನಿಮಿತ್ಯ ಸುಣ್ಣ ಬಣ್ಣ ಮಾಡಿಸುತ್ತಿದ್ದು, ಈಗ 2 ದಿನಗಳ ಹಿಂದೆ ನಾನು ಮನೆಯಲ್ಲಿಟ್ಟ ಬೆಳ್ಳಿ, ಬಂಗಾರ ಆಭರಣಗಳು ಬಾಡಿಗೆ ಮನೆಯಲ್ಲಿ ತಂದು ಇಟ್ಟಿದ್ದು ದಿನಾಂಕ 23/02/2012 ರಂದು ನಾನು ಹಾಸ್ಟೇಲದಲ್ಲಿ ವಿದ್ಯಾಬ್ಯಾಸ ನಿಮಿತ್ಯ ಉಳಿದು ಕೊಂಡಿದ್ದು ನನ್ನ ಗೆಳತಿ ಶ್ರೀದೇವಿ ಇವರು ಸಾಯಂಕಾಲ 5 ಗಂಟೆಗೆ ರೂಮಿಗೆ ಕೀಲಿ ಹಾಕಿಕೊಂಡು ಹೋಗಿರುತ್ತಾಳೆ, ದಿನಾಂಕ 24/02/2012 ರಂದು ಮುಂಜಾನೆ ನನ್ನ ಗೆಳತಿ ಯಾರೋ ಕಳ್ಳರು ನಾವು ವಾಸಿಸುವ ಬಾಡಿಗೆ ಮನೆಯ ಕೀಲಿ ಮುರಿದಿರುತ್ತಾರೆ ಅಂತಾ ಪೋನ ಮಾಡಿ ತಿಳಿಸಿದ್ದರಿಂದ ನಾನು ಬಂದು ನೋಡಲು ಸುಟಕೇಸದಲ್ಲಿಟ್ಟ ಬಂಗಾರ, ಬೆಳ್ಳಿಯ ಆಭರಣಗಳು ಸುಮಾರು 3,47,700/- ರೂ ಬೇಲೆ ಬಾಳುವವು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ. 15/2012 ಕಲಂ. 457,380 ಐಪಿಸಿ ನೇದ್ದರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಆಳಂದ ಪೊಲೀಸ ಠಾಣೆ:
ಶ್ರೀ ಹಣಮಂತರಾಯ @ ಸೂರ್ಯಕಾಂತ ತಂದೆ ಮಲ್ಕಪ್ಪ ಕಂಬಾರ ಸಾಸಕ್ಕರಗಾ ತಾಆಳಂದ ರವರು ತಮ್ಮನಾದ ಪರಮೇಶ್ವರ ಇತನು ದಿನಾಂಕ 23/02/2012 ರಂದು ರಾತ್ರಿ ಮುಂಬಯಿಗೆ ಹೋಗುವ ಕುರಿತು ಆಳಂದ ಬಸ್ಸ ನಿಲ್ದಾಣದಕ್ಕೆ ಹೋಗ ಬೇಕಾಗಿರುವದರಿಂದ ನನ್ನ ಮಗ ಶ್ರೀಶೈಲ ಇತನು ಪರಮೇಶ ಈತನಿಗೆ ಆಳಂದ ಬಸ್ಸ ನಿಲ್ದಾಣಕ್ಕೆ ಬಿಡಲು ನಮ್ಮ ಗ್ರಾಮದ ಶಿವುಕುಮಾರ ಶಿರೂರಕರ್ ಇವರ ಮೋಟರ ಸೈಕಲ ನಂ ಕೆಎ 32 Y. 8001 ನೇದ್ದು ತಗೆದುಕೊಂಡು ಹೋಗಿರುತ್ತಾನೆ .ನನ್ನ ಮಗನು ಪರತಮೇಶ್ವರ ಇತನಿಗೆ ಮುಂಬೈಗೆ ಹೋಗಲು ರಾತ್ರಿ ಆಳಂದಕ್ಕೆ ಬಿಟ್ಟು ಬರುವಾಗ ಎದುಗಡೆಯಿಂದ ಯಾವದೋ ವಾಹನ ಚಾಲಕ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿಯಿಂದ ನಡೆಸಿಕೊಂಡು ಬಂದು ಎದುರುಕಡೆಯಿಂದ ಡಿಕ್ಕಿಹೊಡೆದಿದರಿಂದ ಮುಖಕೆ ಭಾರಿ ರಕ್ತಗಾಯವಾಗಿ ಕೈ ಕಾಲು ಹೊಟ್ಟೆಗೆ ತರಚಿದ ಗಾಯಾವಾಗಿ ಮತ್ತು ಎಡಗಾಲು ಪಾದದ ಮೇಲೆ ಮುರಿದು ರಕ್ತಗಾಯಾವಾಗಿ ಮೃತಪಟ್ಟಿದ್ದು ಈ ಘಟನೆಯು ದಿನಾಂಕ 23/02/2012 ರಾತ್ರಿ ವೇಳೆಯಲ್ಲಿ ಜರಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 41 /12 ಕಲಂ 279.304[ಎ] ಐಪಿಸಿ ಸಂ 187 ಐ.ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀಮತಿ ಶೋಬಾ ಗಂಡ ದಶರಥ ಕೊಳ್ಳೂರ ಸಾ:ಐವಾನ -ಶಾಹಿ ಗುಲಬರ್ಗಾರವರು ನನ್ನ ಗಂಡ ದಶರಥ ಇವರು ದಿನಾಂಕ 22-02-12 ರಂದು ರಾತ್ರಿ 8=15 ಗಂಟೆಗೆ ಮೋಟಾರ ಸೈಕಲ್ ನಂ:ಕೆಎ32 ಯು4460 ನೇದ್ದರ ಮೇಲೆ ಸುಪರ ಮಾರ್ಕೆಟದಿಂದ ಮನೆಗೆ ಬರುತ್ತಿರುವಾಗ ಜಗತ ಸರ್ಕಲ್ ಹತ್ತಿರದ ಎದುರು ರೋಡಿನ ಮೇಲೆ ಎಸ್.ವಿ.ಪಿ.ಸರ್ಕಲ್ ಕಡೆಯಿಂದ ಕ್ರೋಜರ ಜೀಪ ನಂ:ಕೆಎ 32 ಎಮ್ 6285 ನೇದ್ದರ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನನ್ನ ಗಂಡನಿಗೆ ಡಿಕ್ಕಿ ಪಡಿಸಿದ್ದರಿಂದ ಭಾರಿಗಾಯವಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 27/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

23 February 2012

GULBARGA DIST REPORTED CRIME

ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:
ಶ್ರೀ ನಿಂಗನಗೌಡ ತಂದೆ ಮಲ್ಲಣ್ಣಗೌಡ ಬಿರಾದಾರ ಸಾ:ಕೊಡಚಿ ತಾ: ಜೇವರ್ಗಿ ರವರು ನನ್ನ ಮಗನಾದ ಸಿದ್ದಣ್ಣ ಮತ್ತು ಅವನ ಗೆಳೆಯರಾದ ದೇವಪ್ಪ ಮತ್ತು ಭೀಮಣ್ಣ ಮೂವರು ಕೂಡಿಕೊಂಡು ನಿನ್ನೆ ದಿನಾಂಕ 22-02-2012 ರಂದು ಸಾಯಾಂಕಾಲ ಹೀರೋ ಹೊಂಡಾ ಪ್ಯಾಶನ್ ಮೋಟರ ಸೈಕಲ್ ನಂ ಕೆ.ಎ.31 ಕೆ. 8986 ನೇದ್ದರ ಮೇಲೆ ಕೊಡಚಿಯಿಂದ ಚಿಗರಳ್ಳಿಗೆ ಬರುತ್ತಿದ್ದಾಗ ರಾತ್ರಿ 8-00 ಗಂಟೆಗೆ ಸುಮಾರಿಗೆ ಮುಂದಬಾಳ (ಬಿ) ಗ್ರಾಮದ ಹತ್ತಿರ ಸಿದ್ದಣ್ಣ ಇತನು ಮೋಟರ ಸೈಕಲ್ ನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ರೋಡಿನ ಸೈಡಿಗೆ ಇದ್ದ ಕಲ್ಲಿಗೆ ಡಿಕ್ಕಿ ಪಡೆಯಿಸಿದ ಪ್ರಯುಕ್ತ ಸಿದ್ದಣ್ಣ ಇತನು ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ದೇವಪ್ಪ ಮತ್ತು ಭೀಮಣ್ಣನಿಗೆ ಸಾದಾ ಮತ್ತು ಭಾರಿ ಪೆಟ್ಟು ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 25/2012 ಕಲಂ 279,337,338,304 (ಎ) ಐ.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಮಾನಭಂಗ ಮತ್ತು ಕೊಲೆಗೆ ಯತ್ನ:
ಶಹಾಬಾದ ನಗರ ಪೊಲೀಸ ಠಾಣೆ :
ಶ್ರೀ ಆನಂದ ತಂದೆ ಶಿವಲಿಂಗಪ್ಪಾ ಹುಂಡೆಕರ ಸಾ:ಶಂಕರವಾಡಿ ರವರು ನನ್ನ ತಂಗಿ ನಂದಿನಿಯು ಕಸ ಚಲ್ಲಲು ಹೋದಾಗ ಶಿವಮುರ್ತಿ ತಂದೆ ಮಹಾದೇವ ಕಮಲಾಪೂರ ಸಾ ಶಂಕರವಾಡಿ ಇವನು ನನ್ನ ತಂಗಿಗೆ ಕೈಹಿಡಿದು ತನ್ನ ಮನೆಯಲ್ಲಿ ಕರೆದುಕೊಂಡು ಹೋಗಿ ಮೈಮೇಲಿನ ಬಟ್ಟೆಗಳನ್ನು ಹರಿದು ಮಾನಭಂಗ ಮಾಡಲು ಯತ್ನಿಸಿದಾಗ ನನ್ನ ತಂಗಿ ಚೀರಾಡುವಾಗ ಇವಳನ್ನು ಮುಗಿಸಿಯೇ ಬಿಡಬೇಕು ಅಂತಾ ತೊಗರಿ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷಧವನ್ನು ಜಬರ ದಸ್ತಿಯಿಂದ ಕೂಡಿಸಿದ್ದಾನೆ, ಅಷ್ಟರಲ್ಲಿ ನಾನು ಮತ್ತು ಮಹೇಶ ಹೋಗಿ ನೋಡುವಷ್ಟರಲ್ಲಿ ಓಡಿ ಹೋಗಿರುತ್ತಾನೆ. ನಾವು ಉಪಚಾರ ಕುರಿತು ಮೇಡಿಕೇರ ಆಸ್ಪತ್ರೆ ಗುಲಬರ್ಗಾ ಕ್ಕೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಇನ್ನೂ ಮಾತಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ. ಶಿವಮುರ್ತಿ ಇತನು ನನ್ನ ತಂಗಿಗೆ ಮಾನಭಂಗಮಾಡಿ ಕೊಲೆ ಮಾಡಲು ಪಯತ್ನಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 17/2012 ಕಲಂ 354, 307 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮತಿ ನಾಗಮ್ಮಾ ಗಂಡ ಮಾಹಾಂತೇಶ ನಾಟೀಕರ ಸಾ: ಪಟ್ಟಣ ಗ್ರಾಮ ತಾ:ಜಿ: ಗುಲಬರ್ಗಾರವರು ನಾವು ದಿಃ 21-02-2012 ರಂದು ಅಮವಾಸ್ಯೆ ದಿನವಿದುದ್ದರಿಂದ ಆಫಜಲಪೂರ ತಾಲೂಕಿನ ಫತ್ತರಗಾ ಗ್ರಾಮದ ಭಾಗ್ಯವಂತಿ ದೇವಿಯ ದರ್ಶನಕ್ಕೆ ಹೋಗುವ ಕುರಿತು ನಾನು ಮತ್ತು ನನ್ನ ತಂಗಿ ರಾಚಮ್ಮಾ ಹಾಗು ಅವಳ ಮಗಳಾಧ ರಂಜಿತಾ ಕೂಡಿ ಟಂಟಂ ನಂ ಕೆಎ 32 ಬಿ-1602 ನೇದ್ದರಲ್ಲಿ ಹೋಗುವಾಗ ಸದರ ಟಂಟಂ ಚಾಲಕನು ಅತೀ ವೇಗದಿಂದ ಮತ್ತು ಅಲಕ್ಷತನದಿಂದ ನಡೆಸುತ್ತಾ ಪಟ್ಟಣ ಕ್ರಾಸ ಹತ್ತಿರ ಇರುವ ಪಾಟಿ ಹಳ್ಳದ ಹತ್ತಿರ ಒಮ್ಮಲೇ ಬ್ರೇಕ ಹಾಕಿದ್ದರಿಂದ ಟಂಟಂ ಎಡಬಾಗಕ್ಕೆ ಪಲ್ಟಿಯಾಗಿ ಭಾರಿ ರಕ್ತಗಾಯ ಮತ್ತು ಸಾದಾ ರಕ್ತಗಾಯ ಮತ್ತು ಗುಪ್ತಗಾಯಗಳು ಆಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 59/2012 ಕಲಂ 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಕಾ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:
ದಿನಾಂಕ 22-02-2012 ರಂದು ಸಾಯಂಕಾಲ ಸುಮಾರಿಗೆ ಠಾಣಾ ವ್ಯಾಪ್ತಿಯ ಬ್ರಹ್ಮಪೂರ ಬಡಾವಣೆಯ ಶಹಾ ಹುಸೇನಿ ಚಿಲ್ಲಾ ಎದುರಿಗೆ ಸಾರ್ವಜನಿಕ ರಸ್ತೆಯ ಮೇಲೆ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು, ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿದ್ದಪ್ಪ ಎ.ಎಸ್.ಐ, ಪಾಂಡುರಂಗ ಹೆಚ್.ಸಿ, ಮತ್ತು ಪಂಡಿತ, ಚನ್ನಮಲ್ಲಪ್ಪ, ನೀಲಪ್ಪ ಪಿಸಿರವರೊಂದಿಗೆ ಹೋಗಿ ಮಟಕಾ ಜೂಜಾಟ ನಡೆಸುತ್ತಿದ್ದ ದೇವಿಂದ್ರ ತಂದೆ ಸಿದ್ರಾಮಪ್ಪ ಕೋರೆ, ವಿಶ್ವನಾಥ ತಂದೆ ಪ್ರಭುಲಿಂಗ ಕೊರೆ ಇವರಿಗೆ ದಸ್ತಗಿರಿ ಮಾಡಿಕೊಂಡು ಅವರಿಂದ ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ 3461/-ರೂಪಾಯಿಗಳು, ಮಟಕಾ ನಂಬರ ಬರೆದ ಚೀಟಿಗಳು ಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 12/12 ಕಲಂ 78 (iii) ಕರ್ನಾಟಕ ಪೊಲೀಸ್ ಕಾಯ್ದೆ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಮಾದನ ಹಿಪ್ಪರಗಾ ಠಾಣೆ:
ಶ್ರೀ ತಮ್ಮಣ್ಣಾ ತಂದೆ ನಾಗಪ್ಪ ತಳಕೇರಿ ಸಾ: ಪಂಚಶೀಲ ನಗರ ನಿಂಬಾಳ ಇವರು ನಾವು ದಿನಾಂಕ: 21/02/2012 ರಾತ್ರಿ ವೇಳೆ 11-30 ರಿಂದ ಬೇಳಗಿನ 5 ಗಂಟೆಯವರೆಗಿನ ಮದ್ಯದ ಅವಧಿಯಲ್ಲಿ ಯಾರೊ ಕಳ್ಳರು ಮನೆಯಲ್ಲಿದ್ದ ನಗದು 30,000/-, ಬಂಗಾರ ಆಭರಣಗಳು ಮತ್ತು ರೇಷ್ಮೆ ಸೀರೆಗಳು ಇತರೆ ಬಟ್ಟೆಗಳು ಅಂದಾಜು ಹಿಗೆ ಒಟ್ಟು 43,500/ ರೂಪಾಯಿ ಕೀಮತ್ತಿನದ್ದು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 5/2012 ಕಲಂ 457, 380 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

22 February 2012

GULBARGA DIST REPORTED CRIMES


ಕಮಲಾಪೂರ ಠಾಣೆ:
ಹೆಣ್ಣು ಮಗಳು ಕಾಣೆಯಾದ ಪ್ರಕರಣ: ಶ್ರೀ ಶಿವಾಜಿ ತಂದೆ ನಾರಯಣರಾವ ಪಾಂಡೆ ಸಾ|| ಶಿವ ನಗರ ಹುಮನಬಾದ ತಾ|| ಹುಮನಬಾದ ಜಿ|| ಬೀದರ ರವರು ನನ್ನ ಮಗಳಾದ ಶ್ರೀಮತಿ ನಾಗೇಶ್ವರಿ ಗಂಡ ಪರಶುರಾಮ ಖಂಡೇಕರ ವ|| 22 ವರ್ಷ, ಜಾ|| ಮರಾಠ, ಸಾ|| ನಿಪ್ಪಾಣಿ ತಾ|| ಚಿತ್ತಾಪೂರ ಜಿ|| ಗುಲಬರ್ಗಾ ಇವರು ದಿನಾಂಕ: 28-12-2012 ರಂದು ಬೆಳಿಗ್ಗೆ 9-00 ಗಂಟೆಗೆ ಕಮಲಾಪೂರ ಬಸ್ಸ ನಿಲ್ದಾಣದಿಂದ ಕಾಣೆಯಾಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 19/2012 ಕಲಂ ಹೆಣ್ಣು ಮಗಳು ಕಾಣೆಯಾದ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಕಾಣೆಯಾದ ಹೆಣ್ಣು ಮಗಳ ಚಹರೆ ಪಟ್ಟಿ ಎತ್ತರ 5 ಪೀಟ, ತಳ್ಳನೆಯ ಮೈಕಟ್ಟು, ಗೋದಿ ಬಣ್ಣ, ದುಂಡು ಮುಖ, ನೇರ ಮೂಗು, ಕಪ್ಪು ಕೂದಲು ಇರುತ್ತವೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು 084728-221306, ಸಿಪಿಐ ಗ್ರಾಮಿಣ ವೃತ್ತ ಕಛೇರಿ ದೂ. ನಂ: 08472-263630 ಅಥವಾ ಗುಲಬರ್ಗಾ ಕಂಟ್ರೋಲ್ ರೂಮ್ ದೂ. ಸಂಖ್ಯೆ: 08472-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
ದರೋಡೆ ಪ್ರಕರಣ:
ಆಳಂದ ಪೊಲೀಸ ಠಾಣೆ: ಗುಂಡಪ್ಪ ತಂದೆ ಅಂಬದಾಸ ಸಾಳುಂಕೆ ಸಾ: ನಿಂಬರ್ಗಾ ರವರು ನಾನು ಮತ್ತು ನನ್ನ ಹೆಂಡತಿ ಅನಿತಾಬಾಯಿ ಇಬ್ಬರೂ ಕೂಡಿಕೊಂಡು ಮೋಟರ ಸೈಕಲ ಮೇಲೆ ನಂ ಕೆ.ಎ 32.ಎಕ್ಸ್ 2074 ನೇದ್ದರ ಮೇಲೆ ದಿನಾಂಕ 21/02/2012 ರಂದು ನಿರಗುಡಿ ಗ್ರಾಮದಿಂದ ನಿಂಬರ್ಗಾಕ್ಕೆ ಬರುತ್ತಿರುವಾಗ ರಾತ್ರಿ 8.00 ಗಂಟೆ ಸುಮಾರಿಗೆ ಕೋರಳಿ ರಸ್ತೆ ಸಂಗೊಳಗಿ ಕ್ರಾಸ ಹತ್ತಿರ ಮೋಟರ ಸೈಕಲ ಮೇಲೆ 3 ಜನರು ಬಂದು ನಮ್ಮ ಮೋಟರ ಸೈಕಲ ಎದುರುಗಡೆ ಅವರ ಮೋಟಾರ ಸೈಕಲ ನಿಲ್ಲಿಸಿ ಅವರಲ್ಲಿ ಒಬ್ಬನು ಮಚ್ಚು ನನ್ನ ಕುತ್ತಿಗಿಗೆ ಹಚ್ಚಿ ಏ ಬೋಸಡಿ ಮಗನೆ ನೀನ ಹತ್ತಿರ ಎಷ್ಟು ದುಡ್ಡು ಇವೆ ಮತ್ತು ಎಷ್ಟು ಬಂಗಾರ ಇವೆ ಕೊಡು ಅಂತ ಕೇಳುತ್ತಿದ್ದಾಗ ಇನ್ನೊಬ್ಬನು ತನ್ನ ಕೈಯಲ್ಲಿದ ರಾಡಿನಿಂದ ಎಡ ರಟ್ಟೆ ಮೇಲೆ ಜೋರಾಗಿ ಹೊಡೆದು ಗಾಯ ಮಾಡಿದನು. ನನ್ನ ಹೆಂಡತಿ ಹತ್ತಿರ ಏನು ಬಂಗಾರದ ಓಡವೆ ಸಾಮನುಗಳು ಇದೆ ಕೊಡು ಇಲ್ಲದ್ದಿದರೆ ನಿನ್ನ ಗಂಡನಿಗೆ ಬಿಡುವುದ್ದಿಲ್ಲ ಅಂತಾ ಜಬರ ದಸ್ತಿಯಿಂದ ನನ್ನ ಹೆಂಡತ್ತಿ ಹತ್ತಿರ ಇದ್ದ ಕಿವಿ ಹೂ 2 ಗ್ರಾಂ ಅಂದಾಜ ಕಿಮ್ಮತ 4000/- ಸಾವಿರ ರೂಪಾಯಿ, ಮಂಗಳಸೂತ್ರ ಹಾಗೂ 4 ಗುಂಡು ಅಂದಾಜ ಕಿಮ್ಮತ 8000/- ರೂಪಾಯಿ ಹಾಗೂ ನನ್ನ ಜೇಬಿನಲ್ಲಿದ ಎರಡು ಮೊಬೈಲ್ ಗಳು ನೊಕಿಯಾ ಕಂಪನಿದ್ದು ನಂ 9980010153 ಹಾಗೂ ಕಾರ್ಬನ್ ಕಂಪನಿದ್ದು ನಂ 8971637783 ಅಂದಾಜು ಕಿಮ್ಮತ್ 6000/- ರೂಪಾಯಿ ಹೇಗೆ ಒಟ್ಟು 18,000-00 ರುಪಾಯಿಗಳು ನಗುದು ಹಣ 4500 ರುಪಾಯಿಗಳು ಹೇಗೆ ಒಟ್ಟು 22,500-00 ಜಬರ ದಸ್ತಿನಿಂದ ಬೆಲೆಬಾಳುವವದನ್ನು ಸುಲಿಗೆ ಮಾಡಿಕೊಂಡು ಹೋಗಿದ್ದು ಸದರಿಯವರು ಅವಾಚ್ಯ ಶಬ್ದಗಳಿಂದ ಕನ್ನಡ ಹಿಂದಿ ಮತ್ತು ಮರಾಠಿ ಬಾಷೆಯಲ್ಲಿ ಬೈಯುತ್ತಿದ್ದರು ಮತ್ತು ಅವರಲ್ಲಿ ಒಬ್ಬನ ಎತ್ತರ 5 ಪೀಟ್ ಇನ್ನೂ ಇಬ್ಬರ 5 ½ ಪೀಟ್ ಇರುತ್ತಾರೆ ಒಬ್ಬನು ಗೋದಿ ಬಣ್ಣವುಳ್ಳವನಾಗಿರುತ್ತಾನೆ ಇಬ್ಬರೂ ಕಪ್ಪು ಬಣ್ಣ ಹೊಂದಿರುತ್ತಾರೆ. ಇವರು ಸಾಮಾನ್ಯವಾಗಿ 20 ರಿಂದ 25 ವರ್ಷದವರುಳ್ಳವರಾಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 39/2012 ಕಲಂ 394 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮುಂಜಾಗ್ರತೆ ಕ್ರಮ:


ಬ್ರಹ್ಮಪೂರ ಠಾಣೆ: ದಿನಾಂಕ: 22/02/12 ರಂದು ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ಹೋದಾಗ ನಗರದ ಜಿ.ಜಿ.ಹೆಚ್ ಸರ್ಕಲ ಹತ್ತಿರ 10-30 ಗಂಟೆಗೆ ಮೂರು ಜನ ಹುಡುಗರು ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವರನ್ನು ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲು ಅಂಬರೀಶ ತಂದೆ ದೇವಿಂದ್ರ ಚವ್ಹಾಣ, ಸಾ|| ಸೇವಲಾಲ ದೇವಾಲಯದ ಹಿಂದುಗಡೆ ಭರತನಗರ ತಾಂಡಾ ಬಾಪೂನಗರ ಗುಲಬರ್ಗಾ.ರಾಹುಲ ತಂದೆ ಲಕ್ಷ್ಮಣ ಪವಾರ, ಸಾ|| ವಳಕೇರಿ ಮನೆಯ ಹತ್ತಿರ ಭರತನಗರ ತಾಂಡಾ ಬಾಪೂನಗರ ಗುಲಬರ್ಗಾ. ಶಿವಕುಮಾರ ತಂದೆ ಜಯರಾಮ ರಾಠೋಡ, ಸಾ|| ಭರತನಗರ ತಾಂಡಾ ಬಾಪೂನಗರ ಗುಲಬರ್ಗಾ ಅಂತಾ ತಿಳಿಸಿದ್ದು ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಡದೆ ಇರುವದರಿಂದ ಸದರಿಯವರನ್ನು ಸ್ಥಳದಲ್ಲಿ ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಸೂಕ್ತ ಕ್ರಮಕ್ಕಾಗಿ ಪಿಸಿಗಳಾದ ಶ್ರೀ.ರಾಜಕುಮಾರ, ಮಹಾಂತೇಶ, ಸುಧಾಕರ ರವರು ವರದಿ ಸಲ್ಲಿಸಿದ್ದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 28/12 ಕಲಂ: 109 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

21 February 2012

GULBARGA DIST REPORTED CRIMES

ಕಳ್ಳತನ ಪ್ರಕರಣ:
ಕಮಲಾಪೂರ ಠಾಣೆ:
ಶ್ರೀಮತಿ. ನಾಗಮ್ಮ ಗಂಡ ಹಿರಗೆಪ್ಪ ತಗಾರೆ ವ ಯ; 75 ವರ್ಷ ಸಾ; ಜೀವಣಗಿ ಗ್ರಾಮ ತಾಜಿಗುಲಬರ್ಗಾ ರವರು ನಾನು ದಿನಾಂಕ; 20/02/2012 ರಂದು ರಾತ್ರಿ 10-00 ಗಂಟೆ ಸುಮಾರಿಗೆ ನನ್ನ ತಂಗಿ ನಿಂಗಮ್ಮ ಮನೆಗೆ ಹೋಗಿರುತ್ತೇನೆ. ನಿಂಗಮ್ಮಳ ಮನೆಯಲ್ಲಿ ನಾನು ಮತ್ತು ಅವಳ ಮಕ್ಕಳಾದ ಅಶೋಕ ಕೂಡಿಕೊಂಡು ಮಲಗಿಕೊಂಡಿದ್ದು ರಾತ್ರಿ 1- ಗಂಟೆಯ ಸುಮಾರಿಗೆ ನಮ್ಮ ಮನೆಯ ಕಡೆಗೆ ಯಾರೋ ಗುಜು ಗುಜು ಮಾತನಾಡುವ ಸಪ್ಪಳ ಕೇಳಿ ನಾನು, ನನ್ನ ತಂಗಿ ಮತ್ತು ಅವಳ ಮಗ ಅಶೋಕನಿಗೆ ಎಬ್ಬಿಸಿ ನಮ್ಮ ಮನೆಯ ಕಡೆಗೆ ಎದ್ದು ಹೊರಗೆ ಬರುತ್ತಿದ್ದಂತೆಯೇ ಯಾರೋ ಮೂರು ಜನರ ನಮ್ಮ ಮನೆಯಿಂದ ಓಡಿ ಹೋಗಿದ್ದು, ನಾವು ಗಾಬರಿಗೊಂಡು ಮನೆಗೆ ಹೋಗಿ ನೋಡಲು ಬಾಗಿಲಿಗೆ ಹಾಕಿದ್ದ ಕೀಲಿ ಕಪ್ಪಿ ಮುರಿದು ಕೆಳಗೆ ಬಿದ್ದಿದ್ದು, ಕಬ್ಬಿಣದ ಪೆಟ್ಟಿಗೆಯ ಕೀಲಿ ಮುರಿದು ಅದರಲ್ಲಿದ್ದ 5 ಗ್ರಾಂ ಬಂಗಾರದ ಆಭರಣ ಅಕಿ 9000= ರೂ ಗಳದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಹಾಗು ನಮ್ಮ ಮನೆಯ ಹತ್ತಿರದ ಶ್ರೀಮತಿ. ಸರದಾರಬೀ ಗಂಡ ಶಾಖಾದ್ರಿ ನಾಗೂರವಾಲೆ ಇವಳು ಸಹ ಗಾಬರಿಗೊಂಡು ನಮ್ಮ ಮನೆಯ ಹತ್ತಿರ ಬಂದು ರಾತ್ರಿ ಹೊತ್ತು ನಮ್ಮ ಮನೆಗೆ ಬೀಗ ಹಾಕಿ ಪಕ್ಕದ ರೂಮಿನಲ್ಲಿ ಮಲಗಿಕೊಂಡಿದ್ದಾಗ ಯಾರೋ ಅಪರಿಚಿತ ಕಳ್ಳರು ನಮ್ಮ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿನ ಸ್ಟೀಲಿನ ನಳಪಾತ್ರೆಯಲ್ಲಿ ಕ್ಯಾರಿಬ್ಯಾಗದಲ್ಲಿ ಇಟ್ಟಿದ್ದ 10900=00 ರೂಪಾಯಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದಳು. ಓಡಿ ಹೋದ ಮೂರು ಜನ ಕಳ್ಳರನ್ನು ನೋಡಿದಲ್ಲಿ ಗುರ್ತಿಸುತ್ತೇವೆ ಅಂತಾ ಹೇಳಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ; 18/2012 ಕಲಂ 457.380 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಕಮಲಾಪೂರ ಠಾಣೆ:
ಶ್ರೀ. ಪ್ರಕಾಶ ತಂದೆ ಶ್ಯಾಮರಾವ ಪಾಟೀಲ್ ವ: 65 ವರ್ಷ ಸಾ;ಬೇಲೂರ [ಕೆ] ಗ್ರಾಮ ತಾ;ಜಿ; ಗುಲಬರ್ಗಾ ರವರು ನಾವು ಊಟ ಮಾಡಿ ಮಲಗಿಕೊಂಡಿದ್ದು, ನನ್ನ ಮಗ ಸಿದ್ದಣ್ಣಗೌಡ ಪಾಟೀಲ್ ಇವರು ನಮ್ಮ ಹೊಲದಲ್ಲಿ ಮಲಗಿಕೊಳ್ಳಲು ಹೋಗಿದ್ದು, ಮಧ್ಯರಾತ್ರಿ ರಾತ್ರಿ 3-00 ಗಂಟೆಗೆ ಸಪ್ಪಳ ಕೇಳಿ ನಾನು ಎದ್ದು ನೋಡಲಾಗಿ ನಮ್ಮ ಮನೆಯ ಅಲಮೇರಾ ಇಟ್ಟಿದ್ದ ರೂಮಿನಿಂದ ಯಾರೋ ಅಪರಿಚಿತ ಮೂರು ಜನರು ಓಡಿ ಹೊರಗೆ ಓಡಿ ಹೋಗುತ್ತಿದ್ದು, ನಾನು ಗಾಬರಿಗೊಂಡು ಯಾರು ಅಂತಾ ಕೇಳುತ್ತಿದ್ದಾಗ ಆ ಮೂರು ಜನರು ಓಡಿ ನಮ್ಮ ಮನೆಯಿಂದ ಹೊರಗೆ ಹೋಗಿರುತ್ತಾರೆ. ಮನೆಯ ಅಲಮೇರಾ ಇಟ್ಟಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ 7800=00 ರೂಪಾಯಿ 2 ಮೋಬೈಲ್ ಗಳು ಹೀಗೆ ಒಟ್ಟು 23,800-00 ಗಳದ್ದು ಯಾರೋ ಕಳ್ಳರು ಮನೆಯ ಕಿಟಕಿ ಬಾಗಿಲಿನಿಂದ ಪ್ರವೇಶ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅವರನ್ನು ನೋಡಿದರೆ ಗುರ್ತಿಸುತ್ತೇನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ; 17/2012 ಕಲಂ 457. 380 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಸಿದ್ರಾಮಪ್ಪ ತಂದೆ ಮಲ್ಲೇಶಪ್ಪ ಬನಶೆಟ್ಟಿ ಸಾ: ಬಸವ ನಗರ ಸೇಡಂರವರು ನಾನು ಮತ್ತು ಹೆಂಡತಿ ಗೋದಾವರಿ, ಪರಿಚಯಸ್ಥ ವಿಜಯಕುಮಾರ ಮೊಲಿಮನಿ ಇವರು ಆಳಂದ ತಾಲೂಕಿನ ನಿರುಗಡಿ ಮುತ್ಯಾನ ಜಾತೆ ಇದ್ದ ಪ್ರಯುಕ್ತ ದಿಃ 20-02-12 ರಂದು ಕೆಎ 28 ಎಂ 2548 ನೇದ್ದರಲ್ಲಿ ಮಧ್ಯಾಹ್ನ 2-30 ಗಂಟೆ ಸುಮಾರಿಗೆ ಸೇಡಂದಿಂದ ಹೊರಟಿದ್ದು, ಸಂಜೆ 5-30 ಗಂಟೆ ಸುಮಾರಿಗೆ ಆಳಂದ ಚೆಕ್ಕ ಪೋಸ್ಟ ಹತ್ತಿರ ಬಂದಾಗ ಬಸ್ಸಿಗಾಗಿ ಕಾಯುತ್ತಾ ನಿಂತ ಶರಣಪ್ಪ ಹೂಗಾರ ಮತ್ತು ಆತನ ಹೆಂಡತಿ ಗುಂಡಮ್ಮಾ ಇನ್ನೊಬ್ಬ ವ್ಯಕ್ತಿ ಹೆಸರು ಗೊತ್ತಿಲ್ಲಾ ಕಲ್ಲಹಂಗರಗಾ ಗ್ರಾಮದವರು ಬರುತ್ತೇವೆ ಎಂದು ಹೇಳಿದ್ದರಿಂದ ಅವರನ್ನು ಕೂಡಿಸಿಕೊಂಡು ಆಳಂದ ಕಡೆ ಹೊರಟಿದ್ದು, ಪಟ್ಟಣ ಸಿಮಾಂತರ ಭೀಮಶ್ಯಾ ಬಿರಾದಾರ ಹೊಲದ ಎದುರು ರೋಡಿನ ಮೇಲೆ ಚಾಲಕ ಪ್ರಕಾಶ ಇತನು ವಾಹನವನ್ನು ಅತಿವೇಗದಿಂದ ನಡೆಯಿಸಿ ಹಾಲಿನ ಟಾಟಾ ಎಸಿಇ ಗಾಡಿ ಕೆಎ 49 2260 ನೇದ್ದಕ್ಕೆ ಬಲಭಾಗದಿಂದ ಓವರ ಟೇಕ ಮಾಡುತ್ತಿರುವಾಗ ಟಾಟಾ ಎಸಿಇ ಗಾಡಿ ಬಲಭಾಗಕ್ಕೆ ಡಿಕ್ಕಿ ಹೊಡೆದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬಲಭಾಗದ ರೋಡಿನ ಬದಿಗೆ ಪಲ್ಟಿಯಾಗಿ ಬಿದ್ದು, ನನಗೆ ಮತ್ತು ನನ್ನ ಹೆಂಡತಿ ಗೋದಾವರಿ, ಶರಣಪ್ಪ ಹೂಗಾರ, ಗುಂಡಮ್ಮಾ ಹೂಗಾರ, ವಿಜಯಕುಮಾರ ಮೊಲಿಮನಿ ಇನ್ನೊಬ್ಬ ವ್ಯಕ್ತಿ ಹೆಸರು ಗೊತ್ತಿಲ್ಲಾ ಚಾಲಕ ಪ್ರಕಾಶ ಇವರಿಗೆ ಮೈಮೇಲೆ ಅಲ್ಲಿಲ್ಲಿ ರಕ್ತಗಾಯ ಮತ್ತು ಭಾರಿ ಗುಪ್ತಗಾಯವಾಗಿದ್ದು ಇರುತ್ತದೆ.ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 58/2012 ಕಲಂ 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

20 February 2012

GULBARGA DIST REPORTED CRIMES

ಅಪಘಾತ ಪ್ರಕರಣ:

ಸುಲೇಪೇಟ ಠಾಣೆ: ಶ್ರೀಹಣಮಂತಪ್ಪಾ ತಂದೆ ಶರಣಪ್ಪಾ ರಿಬ್ಬನಪಳ್ಳಿ ಸಾ|| ಶಿರೋಳ್ಳಿ ರವರು ನನ್ನ ಅಣ್ಣನಾದ ಸಾಬಣ್ಣಾ ತಂದೆ ಶರಣಪ್ಪಾ ರಿಬ್ಬನಪಲ್ಲಿ ಮತ್ತು ಅವನ ಮಗನಾದ ಜಗಪ್ಪಾ ರಿಬ್ಬನಪಲ್ಲಿ ಇಬ್ಬರು ಕೂಡಿಕೊಂಡು ದಿನಾಂಕ 15.02.2012 ರಂದು ರಾತ್ರಿ 10.30 ಸುಮಾರಿಗೆ ನನ್ನ ಮನೆಗೆ ಬಂದು ನಮ್ಮ ಹಳೆಯ ಮನೆ ಖರೀದಿ ತೆಗೆದುಕೊ ಅಂದರ ಯ್ಯಾಕೆ ತೆಗೆದುಕೊಳ್ಳುತ್ತಿಲ್ಲಾ ಅಂತ ಹಳೆಯ ವೈಶಮ್ಯ ದಿಂದ ಜಗಳ ತೆಗದು ಅವಾಚ್ಯ ಶಬ್ದಗಳಿಂದ ಬೈದು ಕೊಡಲಿ ಕಾವಿನಿಂದ ಬಲ ಭುಜದ ಮೇಲೆ ಹೊಡೆದು ಗುಪ್ತಗಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 18/2012 ಕಲಂ. 324,504ಸಂಗಡ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ ಠಾಣೆ: ಶ್ರೀ.ಅರುಣಕುಮಾರ ತಂದೆ ಕುಪೇಂದ್ರ ಚೇಂಗಟಾ ಸಾ: ಕಮಲಾಪೂರ ತಾ||ಜಿ|| ಗುಲಬರ್ಗಾರವರು ನನ್ನ ತಾಯಿಯ ತಾಯಿ ಅಂದರೆ ಅಜ್ಜಿ ಪಾರ್ವತಿಬಾಯಿ ಗಂಡ ಶಂಕರರಾವ ಕೋನಪ್ಪ ವ: 72 ವರ್ಷ ಸಾ;ಹೆಬ್ಬಾಳ ತಾ:ಚಿತ್ತಾಪೂರ ಇವರು ತನ್ನ ಮೈಯಲ್ಲಿ ಆರಾಮ ಇಲ್ಲದ್ದರಿಂದ ನಮ್ಮ ಹತ್ತಿರ ಕಮಲಾಪೂರದಲ್ಲಿ ಬಂದು ಉಳಿದುಕೊಂಡಿದ್ದು, ಅವಳಿಗೆ ಹೆಚ್ಚಿಗೆ ಆರಾಮ ತಪ್ಪಿ ಮಾನಸಿಕ ಅಸ್ವಸ್ಥಳಾಗಿದ್ದು, ಆಗಾಗ ಚಿರಾಡುವುದು, ಮನೆ ಬಿಟ್ಟು ಹೋಗುವುದು ಮಾಡುತ್ತಿರುತ್ತಾಳೆ. ದಿನಾಂಕ: 19/02/2012 ರಂದು ಸಹ ಮಧ್ಯಾಹ್ನ 2-00 ಗಂಟೆ ಸುಮಾರಿಗೆ ನಮ್ಮ ಅಜ್ಜಿ ಪಾರ್ವತಿಬಾಯಿ ಇವಳು ಇದ್ದಕ್ಕಿದ್ದಂತೆಯೇ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಹೋಗಿದ್ದಾಳೆ, ನಾನು ಮತ್ತು ನನ್ನ ಪರಿಚಯದವರಾದ ಕನ್ನಪ್ಪ ಕೋರೆ ಕೂಡಿಕೊಂಡು ಕಮಲಾಪೂರ ಬಸ್ ನಿಲ್ದಾಣದ ಹತ್ತಿರ ಬಂದಾಗ ಪೆಟ್ರೊಲ ಪಂಪ ಹತ್ತಿರ ಯಾರಿಗೋ ರಸ್ತೆ ಅಪಘಾತವಾಗಿದ್ದು, ಅಂತಾ ಜನರು ಮಾತನಾಡುತ್ತಿರುವುದನ್ನು ಕೇಳಿ ಹೋಗಿ ನಾನು ನೋಡಲು ನಮ್ಮ ಅಜ್ಜಿ ಪಾರ್ವತಿಬಾಯಿಯೇ ಇದ್ದು, ಅವಳ ಬಲ ಹಣೆಗೆ, ಎಡ ಕಪಾಳಕ್ಕೆ ಭಾರಿ ರಕ್ತಗಾಯವಾಗಿದ್ದು ಅಲ್ಲದೇ ಮೈ ಕೈ ಗಳಿಗೆ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 16/2012 ಕಲಂ 279.304 [ಎ] ಐಪಿಸಿ ಸಂಗಡ 187 ಐಎಂವ್ಹಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

19 February 2012

GULBARGA DIST REPORTED CRIME

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀ ಅಬ್ದುಲ ಸತ್ತಾರ ತಂದೆ ಅಬ್ದುಲ ಕರೀಮ ಸಾ: ಖದೀರ ಚೌಕ ಜಿಲಾನಾ ಬಾದ ಎಮ್.ಎಸ್.ಕೆ.ಮಿಲ್ ಗುಲಬರ್ಗಾರವರು ನಾನು ದಿನಾಂಕ 26-1-2012 ರಂದು ರಾತ್ರಿ 10=30 ಗಂಟೆಗೆ ಸಂತೋಷ ಟಾಕೀಜ ಹತ್ತಿರ ಪಾನ ಡಬ್ಬಾ ಮುಚ್ಚಿಕೊಂಡು ಮನೆಗೆ ಹೋಗುತ್ತಿದ್ದಾಗ ಕಪೀಲಾ ಲಾಡ್ಜ ಎದುರು ರೋಡಿನ ಮೇಲೆ ಆಟೋರಿಕ್ಷಾ ನಂ ಕೆಎ-32 ಎ-3592 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಭಾರಿಗಾಯ ಗೊಳಿಸಿ ತನ್ನ ಆಟೋರಿಕ್ಷಾ ಸಮೇತ ಹೊರಟು ಹೋಗಿರುತ್ತಾನೆ.ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 26/2012 ಕಲಂ: 279,338 ಐ.ಪಿ.ಸಿ ಸಂ 187 ಐ,ಎಮ್,ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಹಲ್ಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ ಠಾಣೆ:
ಶ್ರೀ.ಅಂಬಣ್ಣ ತಂದೆ ಹಣಮಯ್ಯ ಭಾವಗಿ, ಸಾ ಕಲಬೇನ್ನೂರ ತಾ ಜಿ ಗುಲಬರ್ಗಾ ರವರು ನಾವು 5 ಜನ ಅಣ್ಣ ತಮ್ಮಂದಿರರು ಇದ್ದು, ಎಲ್ಲರೂ ಬೇರೆ ಬೇರೆಯಾಗಿರುತ್ತೇವೆ. ಹೊಲ ಮನೆ ಆಸ್ತಿ ಹಂಚಿಕೊಂಡಿರುವದಿಲ್ಲ. ನಾನು ಕೂಲಿ ಕೆಲಸ ಮಾಡಿಕೊಂಡು ಪೂನಾದಲ್ಲಿ ಇದ್ದು, ಆಗಾಗ ಹೊಲ ಮನೆ ನೋಡಲು ನಮ್ಮ ಊರಿಗೆ ಬಂದು ಹೋಗುವದು ಮಾಡುತ್ತೇನೆ. ಕೆಲವು ದಿವಸಗಳ ಹಿಂದೆ ಹೊಲ ಮನೆ ನೋಡಲು ನಮ್ಮ ಊರಿಗೆ ಬಂದಿದ್ದು, ನನ್ನ ತಮ್ಮ ವಿಠಲ ಇವನು ಗುಲಬರ್ಗಾದ ಗಾಜೀಪುರ ಬಡಾವಣೆಯಲ್ಲಿ ಇರುವದರಿಂದ ತೊಗರಿ ಮಾರುವ ವಿಷಯ ಸಂಬಂಧ ಅವರ ಮನೆಗೆ ಬಂದಿದ್ದು ಅವರು ಮನೆಯಲ್ಲಿ ಇರದ ಕಾರಣ ಮನೆಯ ಹೊರಗಡೆ ನಿಂತಿದ್ದೇನು. ಸಾಯಂಕಾಲ 4:30 ಗಂಟೆಗೆ ನನ್ನ ಇನ್ನೊಬ್ಬ ತಮ್ಮನಾದ ಪಾಂಡುರಂಗ ಇವನು ಮತ್ತು ಆತನ ಹೆಂಡತಿಯಾದ ಶೋಭಾ ಇವಳೊಂದಿಗೆ ಗಾಜೀಪುರ ಬಡಾವಣೆಯಲ್ಲಿರುವ ನಮ್ಮ ತಮ್ಮ ವಿಠಲ ಇವರ ಮನೆಯ ಮುಂದೆ ಬಂದು ನನಗೆ ತೊಗರಿ ಮಾರಲು ಅಡತಿಗೆ ಹೋಗೋಣ ಅಂತಾ ಕೇಳಿದನು. ಆಗ ನಾನು ಬರುವದಿಲ್ಲ ನೀನೆ ಹೋಗು ಅಂತಾ ಹೇಳಿದಕ್ಕೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಎದೆಯ ಮೇಲೆ ಹೊಡೆದು, ಎರಡು ಕಾಲುಗಳನ್ನು ಹಿಡಿದು ಎಳೆದಿದ್ದರಿಂದ ನಾನು ಕೆಳಗೆ ಬಿದ್ದು ನನ್ನ ಬಲಗೈಯ ಮೊಣಕೈ ಹತ್ತಿರ ಒಳಪೆಟ್ಟಾಗಿ ಉಬ್ಬಿದಂತೆ ಆಗಿರುತ್ತದೆ. ನನ್ನ ಅಣ್ಣನ ಹೆಂಡತಿ ಶೋಭಾ ಇವಳು ಕಾಲಿನಿಂದ ಬೆನ್ನ ಮೇಲೆ ಒದ್ದಿರುತ್ತಾಳೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಗುನ್ನೆ ನಂ: 27/2012 ಕಲಂ: 323, 324, 504 ಸಂಗಡ 34 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಆಳಂದ ಪೊಲೀಸ ಠಾಣೆ:
ಹುಚ್ಚಣ್ಣ ತಂದೆ ಫಕೀರಪ್ಪ ಹರಳಯ್ಯ ಸಾ;- ಕೊಡಲಹಂಗರಗಾ ತಾಆಳಂದರವರು ನಾನು 2 ವರ್ಷದಿಂದ ಆಳಂದ ಖಜೂರಿ ರೋಡಿನಲ್ಲಿರುವ ಚಂದುಲಾಲ ಸೇಠಜಿ ರವರ ಹೊಲದಲ್ಲಿ ಒಕ್ಕಲೂತನದ ಕೆಲಸ ಮಾಡಿಕೊಂಡಿರುತ್ತೆನೆ. ದಿನಾಂಕ 18/02/2012 ರಂದು ಬೆಳ್ಳಿಗ್ಗೆ ನನಗೆ ಆರಾಮ ಇಲ್ಲದ ಕಾರಣ ಆಳಂದ ಆಸ್ಪತ್ರೆಗೆ ಹೋಗಿ ತೋರಿಸಿ ಉಪಚಾರ ಪಡೆದುಕೊಂಡು ಮಧ್ಯಾನ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕುಡಿಕೊಂಡು ನಮ್ಮ ಮಾಲಕರ ಹೊಲಕ್ಕೆ ಹೋಗುತ್ತಿದ್ದಾಗ ಮುಗುಟ ಕಟಗಿ ಅಡ್ಡಾದ ಎದುರಿಗೆ ರೋಡಿನ ಎಡಬದಿಯಿಂದ ಹೋಗುತ್ತಿದ್ದಾಗ ಒಬ್ಬ ಟ್ಯಾಂಕರ ಬಲ್ಕರ ಎಂ,ಹೆಚ್ 24-3522 ನೇದ್ದರ ಚಾಲಕನು ತನ್ನ ಟ್ಯಾಂಕರನ್ನು ಆಳಂದ ಕಡೆಯಿಂದ ಅತೀ ವೇಗದಿಂದ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದವನೇ ತನ್ನ ಟ್ಯಾಂಕರ ಎಡಬದಿಯಿಂದ ನನಗೆ ಡಿಕ್ಕಿ ಹೊಡೆದಿದ್ದರಿಂದ ನಾನು ಪುಟಿದು ರೋಡಿನ ಮೇಲೆ ಬಿದ್ದು ಬಿಟ್ಟೆನು ಅಷ್ಟರಲ್ಲಿ ಶ್ರೀ ದಾಭಾದ ಹತ್ತಿರ ನಿಂತಿದ್ದ 3-4 ಜನರು ಬಂದು ನನಗೆ ಎಬ್ಬಿಸಿ ನೋಡಲಿ ನನ್ನ ತೆಲೆಗೆ ಮಖಕ್ಕೆ ,ಗದ್ದಕ್ಕೆ,ತುಟಿಗೆ,ಮೂಗಿಗೆ,ಎದೆಗೆ,ನಾಲಿಗೆಗೆ,ಬಲಗೈ ಮೋಳಕೈಗೆ ರಕ್ತಗಾಯವಾಯಿತು ಟ್ಯಾಂಕರ ಚಾಲಕನು ತನ್ನ ಟ್ಯಾಂಕರ ನಿಲ್ಲಿಸದೇ ವಾಹನವನ್ನು ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 38/2012 ಕಲಂ. 279.337. ಐಪಿಸಿ 187. ಐಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

18 February 2012

GULBARGA DIST REPORTED CRIMES

ಅಪಘಾತ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ
:ದಿನಾಂಕ 16-2-2012 ರಂದು ತಾಲೂಕಾ ಸಿಂದಗಿಯಿಂದ ನನ್ನ ಟಾಟಾ ಸುಮೋ ನಂಬರ ಕೆಎ-33 ಎಮ್-2723 ನೇದ್ದರಲ್ಲಿ ಕುಳಿತುಕೊಂಡು ನಾನು, ಮತ್ತು ನನ್ನ ತಮ್ಮ ಲತಿಪ ಇಬ್ಬರು ಕೂಡಿಕೊಂಡು ಶಹಾಪೂರಕ್ಕೆ ಹೊರಟಿದ್ದೆವು ಸಾಯಂಕಾಲ 6:45 ಪಿಮ್ ಕ್ಕೆ ಸಿಂದಗಿ ಬಿಟ್ಟು ಮಾವನೂರ ಕ್ರಾಸ ದಾಟಿ ಸ್ವಲ್ಪ ಮುಂದೆ ಬರುತ್ತಿರುವಾಗ ಎದುರಿನಿಂದ ಒಂದು ಟಾಟಾ ಇಂಡಿಕಾ ಕಾರ ನಂ ಕೆ ಎ 32 ಬಿ 2344 ನೇದ್ದರ ಚಾಲಕನು ತನ್ನ ಕಾರನ್ನು ಅತಿ ವೇಗ ಹಾಗೂ ಅಲಕ್ಷತನದಿಂದ ಓಡಿಸುತ್ತಾ ಬಂದು ದ್ವಿ-ಚಕ್ರ ವಾಹನಕ್ಕೆ ಗಾಡಿಗೆ ಡಿಕ್ಕಿ ಹೋಡೆದಿದ್ದರಿಂದ ನಿಯಂತ್ರಣ ತಪ್ಪಿ ರೋಡಿನ ಬದಿಯ ತೆಗ್ಗಿನಲ್ಲಿ ಹೋಗಿ ನಿಂತಿದೆ. ದ್ವಿಚಕ್ರ ವಾಹನಕ್ಕೆ ಗಾಡಿಗೆ ಡಿಕ್ಕಿ ಹೋಡೆದ ಕಾರು ಸ್ವಲ್ಪ ಮುಂದೆ ಹೋಗಿ ನಿಂತಿದೆ. ಕಾರ ಚಾಲಕನು ತನ್ನ ಕಾರನ್ನು ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ ಆತನ ಹೇಸರು ವಿಳಾಸ ಗೊತ್ತಿಲ್ಲಾ, ಅಂತಾ ಸುಭಾಶ ಎ.ಎಸ.ಐ ರವರು ಠಾಣೆ ಗುನ್ನೆ ನಂ:22/2012 ಕಲಂ 279 ಐಪಿಸಿ ಸಂಗಡ 187 ಐ ಎಂ ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:
ದಿನಾಂಕ: 16/02/2012 ರಂದು ಬೆಳಿಗ್ಗೆ ಲಾರಿ ನಂ ಎಮ್, ಎಚ್. 12 ಎಪ್,ಸಿ 7640 ರ ಚಾಲಕ ಮಲ್ಲಿಕಾರ್ಜುನ ತಂದೆ ವಿರೇಶ ಜಮಾದಾರ ಸಾ: ನಾಗಲೇಗಾಂವ ಇತನು ಅತೀವೇಗದಿಂದ ಲಾರಿ ಚಲಾಯಿಸಿ ಸರಸಂಬಾ ಗ್ರಾಮ ಸರಕಾರಿ ಪ್ರೌಡ ಶಾಲೆಯ ಹತ್ತಿರ ರಸ್ತೆಯ ಪಕ್ಕದಲ್ಲಿನ ವಿದ್ಯತ ಕಂಬದ ವೈರಿಗೆ ಲಾರಿ ಸಿಕ್ಕಿಸಿಕೊಂಡು ಹಾಗೆ ಚಲಾಯಿಸಿಕೊಂಡು ಹೋಗಿರುವದರಿಂದ ಜೆಸ್ಕಾಂ ಕಂಪನಿಯ 3 ವಿದ್ಯತ ಕಂಬಗಳು ಮುರುದಿರುತ್ತವೆ. ಮತ್ತು ಒಂದು 25 ಕೆ,ವಿಎ (ಟಿ,ಸಿ) ಪರಿವರ್ತಕ ಹಾನಿಯಾಗಿರುತ್ತದೆ. ಮತ್ತು ಕಸ್ತೂರಿಬಾ ಬಾಲಿಕಾ ಶಾಲೆಯಲ್ಲಿನ ಕಂಪ್ಯೂಟರ ಸುಟ್ಟಿದಲ್ಲದೆ ಸರಕಾರಿ ಪ್ರೌಡ ಶಾಲೆಯಲ್ಲಿ ವಿದ್ಯೂತ ಉಪಕರಣಗಳು ಸಹ ಸುಟ್ಟು ಹೋಗಿರುತ್ತವೆ ಅಂತಾ ಶ್ರೀ ಅಶೋಕ ಕುಮಾರ ಗುಡೂರೆ ಜೆಸ್ಕಂ ಶಾಖಾಧಿಕಾರಿಗಳು ಸರಸಂಬಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 03/2012 ಕಲಂ 279, 427, ಐಪಿಸಿ ಮತ್ತು ಕೆ,ಪಿ,ಡಿ,ಎಲ್, ಎಕ್ಟ -1989 2(ಎ) (ಬಿ) ಸಂಗಡ 187 ಐ,ಎಮೆ್,ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಅಪಹರಣ ಪ್ರಕರಣ:
ಚಿತ್ತಾಪೂರ ಠಾಣೆ :
ಶ್ರೀ ಶರಣಪ್ಪ ತಂದೆ ನಿಂಗಪ್ಪ ಪುಜಾರಿ ಸಾ:ಕದ್ದರಗಿ ರವರು ನನ್ನ ಮಗಳಾದ ರೇಣುಕಾ ವಯ:15 ವರ್ಷ ಇವಳಿಗೆ ಈಗ ಒಂದು ವರ್ಷದ ಹಿಂದೆ ಅನ್ವರ ತಂದೆ ಮಹೆಬೂಬ ಪಿಂಜಾರ ಇವನು ನನ್ನ ಮಗಳಿಗೆ ಆಗಾಗ ನೀರು ತರಲು ಹೋದಾಗ ಮತ್ತು ಹೊರಗೆ ಕೆಲಸಕ್ಕೆ ಹೋಗುವಾಗ ನನ್ನ ಮಗಳಿಗೆ ನೋಡಿ ಚುಡಾಯಿಸುವದು, ಮಾಡುತ್ತಿದ್ದು ಈ ವಿಷಯ ನನಗೆ ತಿಳಿದು ಅನವರ ಇವನಿಗೆ ಮತ್ತು ಅವನ ತಂದೆ ತಾಯಿಗೆ ಈ ರೀತಿ ಮಾಡುವದು ಸರಿಯಲ್ಲ ಅಂತಾ ತಿಳಿಸಿರುತ್ತೆನೆ ಆದರೆ ಆತನ ತಂದೆ ತಾಯಿಯವರು ನನ್ನ ಮಗ ಗಂಡಸು ಇದ್ದಾನೆ ನಿನ್ನ ಮಗಳಿಗೆ ಸರಿಯಾಗಿ ಇಟ್ಟುಕೊ ಅಂತಾ ಹೇಳಿದ್ದರು ದಿನಾಂಕ 16-2-2012 ರಂದು ಸಾಯಂಕಾಲ 7-00 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ದವಾಖಾನೆಗೆ ಹೋದಾಗ ಅನ್ವರ ಇವನು ನನ್ನ ಮಗಳಿಗೆ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಅಂತಾ ನನ್ನ ಮಗ ಲವಕುಶ ವ;12 ವರ್ಷ ದವನು ನೋಡಿರುತ್ತಾನೆ ಅನ್ವರ ಇತನಿಗೆ ಅವನ ತಂದೆ ತಾಯಿಗಳು ನನ್ನ ಮಗಳಿಗೆ ಅಪಹರಣ ಮಾಡಿಕೊಂಡು ಹೋಗಲು ಪ್ರಚೋದನೆ ನೀಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಗುನ್ನೆ ನಂ. 17/2012 ಕಲಂ 366 (ಎ), 109, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

17 February 2012

GULBARGA DIST REPORTED CRIME

ಕಾರಿನಲ್ಲಿಟ್ಟಿದ್ದ 33 ತೋಲಿ 7 ಗ್ರಾಂ ಬಂಗಾರದ ಆಭರಣ ಕಳ್ಳತನ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ:
ಶ್ರೀ ಡಾಃ ವಿಜಯಕುಮಾರ ತಂದೆ ಶಂಕರರಾವ ಕಟ್ಟಿಕೇರಿ ಉಃ ಸರ್ಜನ್ ಸಾಃ ಪ್ಲಾಟ ನಂ. 132 ಜಿ.ಡಿ.ಎ ಕಾಲೋನಿ ವಿರೇಂದ್ರ ಪಾಟೀಲ ನಗರ ಸೇಡಂ ರೋಡ ಗುಲಬರ್ಗಾರವರು ನಾನು ದಿನಾಂಕಃ 17/02/2012 ರಂದು ಮದ್ಯಾಹ್ನ ನನ್ನ ಕಾರ ನಂ. ಕೆ.ಎ 32 ಎನ್ 217 ತೆಗೆದುಕೊಂಡು ಎಂ.ಆರ್ ಮೆಡಿಕಲ್ ಕಾಲೇಜಿಗೆ ಹೋಗಿ ಕೆಲಸ ಮುಗಿಸಿಕೊಂಡು ನಮ್ಮ ಸಂಬಂಧಿಕರ ಲಗ್ನಕ್ಕೆ ಹೋಗುವ ಸಂಬಂಧ ಕರ್ನಾಟಕ ಬ್ಯಾಂಕ್ ಲಾಕರ್ ನಲ್ಲಿ ಇಟ್ಟ ಬಂಗಾರದ ಆಭರಣಗಳು ಅಂದಾಜು ತೂಕ 33 ತೊಲೆ 7 ಗ್ರಾಂ ಅಃಕಿಃ 8,50,000/- ರೂ. ಬೆಲೆ ಬಾಳುವುದನ್ನು ತೆಗೆದುಕೊಂಡು ಕಾರಿನ ಡ್ಯಾಶ್ ಬೋರ್ಡನಲ್ಲಿ ಇಟ್ಟು ಕಾರ ತೆಗೆದುಕೊಂಡು ಮನೆಗೆ ಕಡೆಗೆ ಬರುತ್ತಿದ್ದೆ. ಮದ್ಯದಲ್ಲಿ ಸಿಂಡಿಕೇಟ್ ಬ್ಯಾಂಕ್ ಎದುರುಗಡೆ ಕಾರ್ ನಿಲ್ಲಿಸಿ ಕಾರಿಗೆ ಸೆಂಟರ್ ಲಾಕ್ ಮಾಡಿ ಬ್ಯಾಂಕಿನಲ್ಲಿ ಹೋದೆನು. ಸ್ವಲ್ಪ ಹೊತ್ತಿನಲ್ಲಿ ನನಗೆ ಪರಿಚಯವಿದ್ದ ಉದಯ ರೇಶ್ಮಿ ಇವರು ನಿಮ್ಮ ಕಾರ್ ಗ್ಲಾಸ್ ಯಾರೋ ಒಬ್ಬ ಒಡೆದಿದ್ದು ಕಾರಿನಲ್ಲಿದ್ದ ಬ್ಯಾಗ್ ತೆಗೆದುಕೊಂಡು ಹೋಗಿತ್ತಿದ್ದಾರೆಂದು ಕಿರುಚಿದನು. ನಾನು ಹೊರಗೆ ಬರುವಷ್ಟರಲ್ಲಿ ಹಿರೋ ಹೊಂಡಾ ಬೈಕ್ ಮೇಲೆ ಇಬ್ಬರೂ ಫರಾರಿಯಾದರು. ಬ್ಯಾಗನಲ್ಲಿ ಇಟ್ಟಿದ್ದ ಯಾರೋ ಕಳ್ಳರು ನನ್ನ ಕಾರಿನ ಗ್ಲಾಸ ಒಡೆದು ಕಾರಿನಲ್ಲಿದ್ದ ಬಂಗಾರದ ಆಭರಣಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 16/2012 ಕಲಂ. 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES


ಅತ್ಯಾಚಾರ ಪ್ರಕರಣ:
ಮಹಿಳಾ ಪೋಲಿಸ ಠಾಣೆ: ದಿನಾಂಕ:24.01.2012 ರಂದು ಮದ್ಯಾಹ್ನ 2 ಗಂಟೆಗೆ ನಮ್ಮ ತಂದೆ ತಾಯಿಯವರು ನನಗೆ ಎಷ್ಟು ಹೇಳಿದರು ನೀನು ಸರಿಯಾಗಿ ಓದುತ್ತಿಲ್ಲಾ ಮತ್ತು ಮನೆ ಕೆಲಸ ಮಾಡುತ್ತಿಲ್ಲಾ ಅಂತಾ ನನಗೆ ಹೋಡೆದು ಕೆಲಸಕ್ಕೆ ಹೋದರು ನಾನು ಸಿಟ್ಟಿಗೆ ಎದ್ದು ನನ್ನ ಗೆಳತಿಯಾದ ಭಾಗ್ಯ ಇವಳ ಹತ್ತಿರ ಹೋಗಬೇಕೆಂದು ಶರಣಬಸವೇಶ್ವರ ಗುಡಿ ಹತ್ತಿರ ರೋಡಿನ ಮೇಲೆ ನಿಂತಿಕೊಂಡಾಗ ಆಟೋ ಚಾಲಕ ನನ್ನಗೆ ನೋಡಿ ಎಲ್ಲಿಗೆ ಹೋಗಬೇಕು ಅಂತಾ ಕೇಳಿದಾಗ ನಾನು ತಿಮ್ಮಾಪೂರಿ ಚೌಕಗೆ ಹೋಗಬೇಕೆಂದು ತಿಳಿಸಿ ಆಟೋದಲ್ಲಿ ಕುಳಿತೇನು. ಆಟೋದವನು ಫಿಲ್ಟರ ಬೇಡ ಆಶ್ರಯ ಕಾಲೋನಿಯಲ್ಲಿ ಅವರ ಅಕ್ಕ ಮತ್ತು ಆಕೆಯ ಮಗಳು ಆರತಿ ಇವರು ಇಬ್ಬರೆ ಮನೆಯಲ್ಲಿರುತ್ತಾರೆ ನೀನು ಅವರ ಜೋತೆಯಲ್ಲಿ ಇರುವೆ ನಡೆ ಅಂತಾ ಹೇಳಿ ಕರೆದುಕೊಂಡು ಹೋಗಿ ಮನೆಯಲ್ಲಿ ಬಿಟ್ಟನ್ನು. ಆ ಮನೆಯಲ್ಲಿ ಆತನ (ಆಟೋದವನ) ಹೆಸರು ಸೂರ್ಯಕಾಂತ ಸ್ವಾಮಿ ಅಂತಾ ತಿಳಿಯಿತು. ದಿನಾಂಕ:31.01.2012 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಅವರ ಮನೆಗೆ ಬರುವ ಇಟ್ಟಂಗಿ ಬಟ್ಟಿಯಲ್ಲಿ ಕೆಲಸ ಮಾಡುವ ಸಂಜು ಇವನು ಬಂದನು. ಅವನು ಮತ್ತು ಸಿದ್ದಮ್ಮಾ ಅವಳ ಮಗಳು ಆರತಿ ಎನೋ ಮಾತಾನಾಡಿ ಹಣ ತೆಗೆದುಕೊಂಡರು ಮತ್ತು ನನಗೆ ಸಂಜು ಜೋತೆ ಮಲಗು ಅಂತಾ ಹೇಳಿದರು ನಾನು ಬೇಡ ಅಂತಾ ಹೋರ ನಡೆದಾಗ ನನಗೆ ಜಬರದಸ್ತಿಯಿಂದ ಹಿಡಿದುಕೊಂಡು ಸಂಭೋಗ ಮಾಡಿದನು ದಿನಾಂಕ :15.02.2012 ರಂದು ಸಾಯಂಕಾಲ 7.00 ಗಂಟೆ ಸುಮಾರಿಗೆ ನಮ್ಮ ತಾಯಿ ನಿರ್ಮಲಾ ಕಾಕ ಸಂತೋಷ ಹಾಗೂ ಅಣ್ಣಂದಿರುದ ಶರಣು ನಾಗು ಸಿದ್ದು. ಇವರೆಲ್ಲರು ಬಂದು ಮನೆಯಲ್ಲಿದ್ದ ನನಗೆ ಕರೆದುಕೊಂಡು ಮನೆಗೆ ಬಂದಿರುತ್ತಾರೆ. ಅಂತಾ ನೊಂದ ಯುವತಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 14/12 ಕಲಂ 366 (ಎ),372373,376,344 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :ಶ್ರೀ ಸಂತೋಷ ತಂದೆ ಲಕ್ಷ್ಮಣ ಇವರು ಕಾಮರಡ್ಡಿ ಖಾಸಗಿ ಆಸ್ಪತ್ರೆಯಿಂದ ಶಾಂತಾಬಾಯಿ ಗಂಡ ಲಕ್ಷ್ಮಣ ಇವರ ಎಮ್.ಎಲ್.ಸಿ.ಪತ್ರ ವಸೂಲ ಮಾಡಿಕೊಂಡು 4=15 ಗಂಟೆಗೆ ಆಸ್ಪತ್ರೆಗೆ ಭೇಟಿಕೊಟ್ಟು ಗಾಯಾಳು ಶಾಂತಾಬಾಯಿ ಇವರಿಗೆ ವಿಚಾರಿಸಲಾಗಿ ನಾನು ದಿನಾಂಕ 15-2-12 ರಂದು ಸಾಯಂಕಾಲ 4=30 ಗಂಟೆಗೆ ಎಸ್.ವಿ.ಪಿ.ಸರ್ಕಲ್ ದಿಂದ ಜಗತ ಸರ್ಕಲ್ ಮೇನ ರೋಡಿನಲ್ಲಿ ಬರುವ ಲಾಹೋಟಿ ಕ್ರಾಸ್ ಹತ್ತಿರ ರೋಡ ದಾಟುತ್ತಿದ್ದಾಗ ಒಬ್ಬ ಮೋಟಾರ ಸೈಕಲ್ ನಂ:ಕೆಎ 32ಆರ್ 5688 ನೆದ್ದ ಚಾಲಕ ಎಸ್.ವಿ.ಸರ್ಕಲ್ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಭಾರಿಗಾಯ ಗೊಳಿಸಿ ತನ್ನ ಮೋಟಾರ ಸೈಕಲ್ ಸಮೇತ ಹೊರಟು ಹೋಗಿರುತ್ತಾನೆ.ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 24/2012 ಕಲಂ: 279,338 ಐ.ಪಿ.ಸಿ ಸಂ 187 ಐ,ಎಮ್,ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಹಲ್ಲೆ ಪ್ರಕರಣ:
ಮಳಖೇಡ ಠಾಣೆ: ಶ್ರೀ ವಿಶ್ವನಾಥ ತಂದೆ ದೇವಿಂದ್ರಪ್ಪ ಪುಜಾರಿ ಸಾ|| ಹಂಗನಳ್ಳಿ ತಾ|| ಸೇಡಂ ರವರು ನಾನು ದಿನಾಂಕ 16.02.2012 ರಂದು ಬೆಳಗ್ಗೆ 7:00 ಗಂಟೆಗೆ ನಾನು ಮತ್ತು ತಮ್ಮಂದಿರಾದ ನರಸಪ್ಪ ಕಾಮಣ್ಣ ಮೂರು ಜನರು ಕುಡಿಕೊಂಡು ಹೋಲಕ್ಕೆ ಹೋಗುತ್ತಿರುವಾಗ ದಾವಲಪೀರ ದರ್ಗಾ ಹತ್ತಿರ ಬಂದಾಗ ನಮ್ಮ ಊರಿನ ಈಶಪ್ಪ, ಬಸ್ಸಪ್ಪ, ಮಲ್ಲಪ್ಪ, ಶರಣಪ್ಪ ಇವರು ಕುಡಿಕೊಂಡು ಹೋಲದ ಬಗ್ಗೆ ಕೇಳಿ ಜಗಳ ತೆಗೆಯುತ್ತಿರೆನು ಅಂತ ಅವಾಚ್ಯವಾಗಿ ಬೈದು ಕಲ್ಲಿನಿಂದ ಮತ್ತು ಕಟ್ಟಿಗೆಯಿಂದ ಹೋಡೆ ಬಡೆ ಮಾಡಿ ರಕ್ತ ಗಾಯ ಮಾಡಿರುತ್ತಾರೆ ಅಂತಾ ದದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:13/2012 ಕಲಂ 341.323.504.324.506 ಸಂಗಡ 34 ಐ ಪಿ ಸಿ ನೇದ್ದರ ಪ್ರಕಾರ ಗುನ್ನೆ ದಾಖಲಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮಳಖೇಡ ಠಾಣೆ: ದಿನಾಂಕ 15.02.2012 ರಂದು ಮಾಣಿಕರಾವ ತಂದೆ ರೇವಪ್ಪ ಪಾಟೀಲ ಇವರ ಹೋಲದಲ್ಲಿ ನನ್ನ ಗಂಡ ಚಂದ್ರಕಾಂತ ಇತನು ಟ್ರ್ಯಾಕ್ಟರ್ ನಂ ಕೆ.ಎ 28 ಟಿ 4728 ನೇದ್ದರಿಂದ ನೇಗಿಲು ಹೋಡೆದು ಸಾಯಂಕಾಲ ಯಡಗಾ ಗ್ರಾಮಕ್ಕೆ ಬರುವಾಗ ಸರ್ಕಾರಿ ಆಸ್ಪತ್ರೆ ಸಮೀಪ ನೀರಿನ ಟ್ಯಾಂಕ ಹತ್ತಿರ ಟ್ರ್ಯಾಕ್ಟರ ಪಲ್ಟಿ ಹೋಡೆಸಿ ತಾನು ಟ್ರ್ಯಾಕ್ಟರ್ ಕೇಳಗೆ ಸಿಕ್ಕಿ ಹಾಕಿಕೊಂಡು ನನ್ನ ಗಂಡ ಭಾರಿ ಗಾಯ ಹೊಂದಿ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಭಾರತಿ ಗಂಡ ಚಂದ್ರಕಾಂತ ಬನ್ನೂರು ಸಾ|| ವಚ್ಚಾ ತಾ|| ಚಿತ್ತಾಪುರ ರವರು ಹೇಳಿಕೆ ನೀಡಿದ ಮೇರೆಗೆ ಠಾಣೆ ಗುನ್ನೆ ನಂ 14/2012 ಕಲಂ 279 304 (ಎ) ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀಮತಿ ಕಾಂಚನಾ ಗಂಡ ಸಂಗಮೇಶ್ವರ ಮಂದಕನಳ್ಳಿ ಸಾ|| ಬ್ಯಾಂಕ ಕಾಲನಿ ಈಶ್ವರ ಮಂದಿರ ಹತ್ತಿರ ಗುಲಬರ್ಗಾರವರು ನಾನು ದಿನಾಂಕ 16-02-2012 ರಂದು ಬೆಳಿಗ್ಗೆ ಸ್ಟೀಲ ಟೀಫನ ಡಬ್ಬಿಯಲ್ಲಿ 57 ಗ್ರಾಮ ಬಂಗಾರದ ಬಾಜು ಬಂದಿ (ವಂಕಿ), 15 ಗ್ರಾಂ ಬಂಗಾರದ ಚೈನ ಮತ್ತು ಚೈನನಲ್ಲಿ 15 ಗ್ರಾಮ ಹರಳಿನ ಪೇಡೆಂಟ (ಬಿಳಿ ಹರಳು), 10 ಗ್ರಾಂ ಬಂಗಾರದ ಕಿವಿ ಓಲೆ (ಬಿಳಿ ಹರಳಿನ), 30 ಗ್ರಾಮ ಬಂಗಾರದ ಪಾಟಲಿ ಹಾಕಿಕೊಂಡು ರಾಗ್ಜಿನ ಜೀಪ ಬ್ಯಾಗಿನ ಬಟ್ಟೆಯಲ್ಲಿ ಮುಚ್ಚಿಟ್ಟಿಕೊಂಡು,ಭಾಲ್ಕಿಯಿಂದ ಗುಲಬರ್ಗಾಕ್ಕೆ ಕೆ.ಎಸ್.ಅರ್.ಟಿ.ಸಿ. ಬಸ್ಸಿನಲ್ಲಿ ಕುಳಿತುಕೊಂಡು ಬಂದು ಬ್ಯಾಂಕ ಕಾಲನಿಯಲ್ಲಿರುವ ನ್ನ ಮನೆಗೆ ಬಂದು ಸಾಮಾನುಗಳು ತೆಗೆಯುತ್ತಿರುವಾಗ ಬಂಗಾರದ ಆಭರಣಗಳಿರುವ ಸ್ಟೀಲ ಟೀಫನ ಡಬ್ಬಿ ಕಾಣಲಿಲ್ಲಾ. ಯಾರೋ ಕಳ್ಳರು ಭಾಲ್ಕಿಯಿಂದ ಗುಲಬರ್ಗಾಕ್ಕೆ ಬರುವಾಗ ಮಾರ್ಗ ಮಧ್ಯದಲ್ಲಿ ನನಗೆ ನಿದ್ದೆ ಹತ್ತಿದ ಸಮಯದಲ್ಲಿ ಯಾರೋ ಕಳ್ಳರು ಬಂಗಾರದ ಆಭರಣಗಳಿರುವ ಸ್ಟೀಲ ಟೀಫನ ಡಬ್ಬಿ ಕಳ್ಳತನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 52/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಫರಹತಾಬಾದ ಪೊಲೀಸ್ ಠಾಣೆ:ದಿನಾಂಕ 16/2/2012 ರಂದು ಮದ್ಯಾಹ್ನ 3-00 ಗಂಟೆಗೆ ಸುಮಾರಿಗೆ ನಾನು ಇಟಗಾ(ಕೆ) ಗ್ರಾಮದಲ್ಲಿ ಗುಪ್ತ ವಿಷಯದ ಬಗ್ಗೆ ಸಂಗ್ರಹಿಸುತ್ತಿದ್ದಾಗ ಇಟಗಾ(ಕೆ) ಗ್ರಾಮದಲ್ಲಿ ಒಬ್ಬ ಹುಡುಗನು ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಎರಿದ ದ್ವನಿಯಲ್ಲಿ ಸಾರ್ವಜನಿಕರಿಗೆ ಅಂಜಿಸುತ್ತಿದ್ದನು ನೋಡಿ ಸದರಿ ಮನುಷ್ಯನಿಗೆ ಹಿಡಿದು ಅವನು ಹೆಸರು ವಿಚಾರಿಸಲಾಗಿ ತನ್ನ ಹೆಸರು ಮಲ್ಲಿಕಾರ್ಜುನ @ ಮಲ್ಲು ತಂದೆ ಸೋಮಶೇಖರ ಪೊ. ಪಾಟೀಲ ಸಾ; ಇಟಗಾ(ಕೆ) ಇದ್ದು ಮುಂಜಾಗ್ರತಾ ಕ್ರಮವಾಗಿ ಠಾಣೆ ಗುನ್ನೆನಂ: 24/2012 ಕಲಂ 110 (ಇ&ಜಿ) ಸಿಅರಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

16 February 2012

GULBARGA DIST REPORTED CRIMES

ಅಪಘಾತ ಪ್ರಕರಣ:
ಕಮಲಾಪೂರ ಠಾಣೆ:
ಶ್ರೀ ಉಮೇಶ ತಂದೆ ಅಮೃತರಾವ ಗೋಣಿಗಿಕರ ಸಾಃ ಕಿಣ್ಣಿಸಡಕ ತಾಃಜಿಃ ಗುಲಬರ್ಗಾರವರು ನಾನು ಮತ್ತು ನನ್ನ ತಮ್ಮ ಸುರೇಶ, ಪರಮೇಶ ಮಗ್ಗಿ, ಮಹೇಂದ್ರ ಹೋಳ್ಕರ ಕೂಡಿಕೊಂಡು ದಿನಾಂಕ:16/02/2012 ರಂದು ಮಧ್ಯಾಹ್ನ ಸುಮಾರಿಗೆ ನಮ್ಮೂರಿನಿಂದ ಪಾಸಪೋರ್ಟ ಅರ್ಜಿ ವಿಚಾರಣೆ ಕುರಿತು ಕಮಲಾಪೂರಕ್ಕೆ ಬಂದು ಪಾಸಪೋರ್ಟಕ್ಕೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಝರಾಕ್ಸ ಮಾಡಿಸಲು ಮಾಟೂರ ಕಾಂಪ್ಲೆಕ್ಸಗೆ ಹೋಗುತ್ತಿರುವಾಗ ಗುಲಬರ್ಗಾ ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ಸಂ. 218 ನೇದ್ದರ ರೋಡಿನ ಮಾಟುರ ಕಾಂಪ್ಲೇಕ್ಸ ಎದುರುಗಡೆ ರೋಡಿನ ಮೇಲೆ ಹಿಂದುಗಡೆಯಿಂದ ಆಟೋ ರೀಕ್ಷಾ ನಂ. ಕೆಎ:39-1245 ಚಾಲಕನಾದ ವಾಸಿಂ ತಂದೆ ಗೊರೇಸಾಬ ಖೋರಬಾ ಸಾಃ ಕಮಲಾಪೂರ ಈತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸುರೇಶ ಮತ್ತು ಮಹೇಂದ್ರ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಅವರಿಗೆ ಅಲ್ಲಲ್ಲಿ ತರಚಿದ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತವೆ.ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 15/2012 ಕಲಂ. 279, 337, 338 ಐಪಿಸಿ ಸಂ. 187 ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಮುಂಜಾಗ್ರತೆ ಕ್ರಮ:

ನೆಲೋಗಿ ಪೊಲೀಸ್ ಠಾಣೆ: ದಿನಾಂಕ 15-02-2012 ರಂದು ಮುಂಜಾನೆ 9:30 ಗಂಟೆಗೆ ನೆಲೋಗಿ ಬಸ್ಸ ನಿಲ್ದಾಣದ ಹತ್ತಿರ ಒಬ್ಬನು ಸಾರ್ವಜನಿಕ ರಸ್ತೆಯಲ್ಲಿ ನಿಂತು ಸಾರ್ವಜನಿಕರೊಂದಿಗೆ ಅಸಬ್ಯವಾಗಿ ವರ್ತಿಸುತ್ತಾ ಅವ್ಯಾಚ್ಚ ಶಬ್ದಗಳಿಂದ ಬೈದಾಡುತ್ತಾ ತೊಂದರೆ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಶ್ರೀ ಸುಭಾಷ ಎ ಎಸ್ ಐ ಹಾಗೂ ಜಗಧೀಶ ಸಿಪಿಸಿ ರವರೊಂದಿಗೆ ಹೋಗಿ ಆತನನ್ನು ವಿಚಾರಿಸಲಾಗಿ ಚಂದ್ರಕಾಂತ ತಂದೆ ಸಿದ್ರಾಮಪ್ಪ ಪಾರಗೊಂಡ ಸಾ: ಬಳ್ಳುಂಡಗಿ ಅಂತಾ ಹೇಳಿದನು ಸದರಿಯನನ್ನು ಹಾಗೇ ಸಾರ್ವಜನಿಕ ಶಾಂತತಾ ಭಂಗ ಉಂಟು ಮಾಡುತ್ತಾನೆ ಅಂತಾ ತಿಳಿದು ಆತನನ್ನು ವಶಕ್ಕೆ ತೆಗೆದುಕೊಂಡು ಬಂದು ಮುಂಜಾಗ್ರತೆ ಕ್ರಮ ಕುರಿತು.ಠಾಣೆ ಗುನ್ನೆ ನಂ 21/2012 ಕಲಂ 110 (ಇ) & (ಜಿ) ಸಿ ಆರ್ ಪಿ ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಹಾವು ಕಚ್ಚಿ ಹುಡಗಿ ಸಾವು:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀದೇವಿ ತಂದೆ ಭೀಮಶ್ಯಾ ಕಿವಡೆಕರ ವ: 18 ವರ್ಷ ಇವಳು ದಿನಾಂಕ 15/2/2012 ರಂದು ರಾತ್ರಿ ಮಲಗಿಕೊಂಡಾಗ ಅವಳ ಎಡಗೈ ಹಸ್ತದ ಕೆಳಗೆ ಹಾವು ಕಚ್ಚಿದ್ದು ಉಪಚಾರ ಕುರಿತು ಖಾಸಗಿ ಜೌಷದ ಇಲಾಜ ಮಾಡಿಸಿದ್ದು, ಸದರಿ ಶ್ರೀದೇವಿ ಇವಳು ಗುಣಮುಖವಾಗದೆ ಇಂದು ದಿನಾಂಕ 15/2/12 ರಂದು ಮಧ್ಯರಾತ್ರಿ ಮೃತಪಟ್ಟಿರುತ್ತಾಳೆ ಅಂತಾ ಶ್ರೀ ರಾಣಪ್ಪ ತಂದೆ ಭೀಮಶ್ಯಾ ಕಿವಡಿಕರ ಸಾ: ಕಲ್ಲಹಂಗರಗಾ ತಾ: ಜಿ: ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 7/2012 ಕಲಂ 174 ಸಿಅರಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

15 February 2012

GULBARGA DIST REPORTED CRIMES

ಅಪಘಾತ ಪ್ರಕರಣ:

ಸುಲೇಪೇಟ ಠಾಣೆ: ಸುಭದ್ರಮ್ಮಾ ತಂದೆ ರಾಜಪ್ಪ ತಳವಾರ ಸಾಃ ತೇಗಲತಿಪ್ಪಿ ರವರು ನಾನು ಮತ್ತು ತನ್ನ ತಾಯಿ ಶಂಕ್ರೇಮ್ಮಾ ಇವಳೊಂದಿಗೆ ದಿನಾಂಕಃ 15/02/2012 ರಂದು ಮುಂಜಾನೆ ಸುಲೇಪೇಟ ಗ್ರಾಮಕ್ಕೆ ಬಂದು ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ಮರಳಿ ತೇಗಲತಿಪ್ಪಿ ಗ್ರಾಮಕ್ಕೆ ಹೋಗುವ ಕುರಿತು ಸುಲೇಪೇಟ ಬಸ್ ನಿಲ್ದಾಣದ ಹತ್ತಿರ ಬಂದಾಗ ಮದ್ಯಾಹ್ನ ತೇಗಲತಿಪ್ಪಿ ಗ್ರಾಮದ ಶರಣಪ್ಪ ಹಳ್ಳಿ ಇತನು ಟಂಟಂ ನಂ. ಕೆಎ-32 ಎ-812 ನೇದ್ದನ್ನು ತೆಗೆದುಕೊಂಡು ಬಂದು ತೇಗಲತಿಪ್ಪಿ ಗ್ರಾಮಕ್ಕೆ ಹೋಗುತ್ತದೆ ಕುಳಿತುಕೊಳ್ಳಿರಿ ಅಂತಾ ಹೇಳಿದ್ದಾಗ ನಾನು ನನ್ನ ತಾಯಿ ಶಂಕ್ರೇಮ್ಮಾ ಮತ್ತು ನಮ್ಮ ಗ್ರಾಮದ ಅಂಬ್ರೇಶ ಪೆಂಚನಪಳ್ಳಿ ಕೂಡಿ ಟಂ ಟಂ ಟ್ರೈಲಿಯಲ್ಲಿ ಹತ್ತಿ ಕುಳಿತ್ತಾಗ ಟಂ ಟಂ ಚಾಲಕನು ಟಂ ಟಂ ಚಲಾಯಿಸಿಕೊಂಡು ಸುಲೇಪೇಟ ಗ್ರಾಮದ ಮೇಘರಾಜ ರಾಠೋಡ್ ಇವರ ಕಟ್ಟಿಗೆ ಅಡ್ಡದ ಹತ್ತಿರ ಹೋಗುತ್ತಿದ್ದಾಗ ಎದುರಿನಿಂದ ಟಂಟಂ ನಂ. ಕೆಎ-32 ಎ-4409 ನೇದ್ದರ ಚಾಲಕ ಜಾಫರ ಸಾಃ ಭಂಟ್ನಳ್ಳಿ ಇತನು ತನ್ನ ಟಂಟಂ ಅತೀವೇಗ ಮತ್ತು ನಿಸ್ಕಾಳಜಿತನದಿಂದ ತಂದು ನಾವು ಕುಳಿತ್ತಿದ್ದ ಟಂ ಟಂ ಗೆ ಡಿಕ್ಕಿ ಹೊಡೆದು ಟಂ ಟಂ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಟಂ ಟಂ. ಟ್ರೈಲಿಯಲ್ಲಿ ಕುಳಿತ ನನ್ನ ಎಡ ರಟ್ಟಿಗೆ ಮತ್ತು ಅಂಬ್ರೇಶನ ಎಡ ಮುಂಗೈ ಹಾಗೂ ಎಡಗೈ ರಟ್ಟಿಗೆ ಗುಪ್ತಗಾಯವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 16/2012 ಕಲಂ. 279, 337 ಐಪಿಸಿ & 187 ಐ.ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.

ವರದಕ್ಷಿಣೆ ಪ್ರಕರಣ:

ಮಹಿಳಾ ಪೋಲಿಸ ಠಾಣೆ:ಶ್ರೀಮತಿ. ಶಿವಾನಿ @ ಶಿವಮ್ಮಾ ಗಂಡ ಸಾಯಿ ಪ್ರಸಾದ ವ: 31 ವರ್ಷ ಉ: ಕೈಗಾರಿಕ ವಿಸ್ತಾರಣಾ ಅಧಿಕಾರಿ ಅಫಜಲಪೂರ ರವರು ನನ್ನ ಮದುವೆಯು ದಿನಾಂಕ; 13.05.2009 ರಂದು ಸಚೀನ ತಂದೆ ಸುಭಾಶ ಸಾ|| ವಿದ್ಯಾ ನಗರ ಇತನೊಂದಿಗೆ ನೇರವೆರಿದ್ದು ಮದುವೆಯ ಸಮಯದಲ್ಲಿ 2 ಲಕ್ಷ ರೂಪಾಯಿ ನಗದು ಹಣ, 11 ತೊಲೆ ಹಾಗು ಇನ್ನಿತರ ಸಾಮಾನು ಕೊಟ್ಟಿದ್ದು, ಮದುವೆ ನಂತರ ಹೊಡೆ ಬಡೆ ಮಾಡೋದು, ನ್ನ ಸಂಬಳ ತೆಗೆದುಕೊಳ್ಳುವುದು, ಇನ್ನೂ ಹಣ ತೆಗೆದುಕೊಂಡು ಬಾ ಅಂತಾ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ತವರು ಮನೆಗೆ ಕಳುಹಿಸಿದ್ದರು. ನನ್ನ ಗಂಡ ಕುಟುಂಬ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇಧನೆ ಹಾಕಿದ್ದು, ನ್ಯಾಯಾಲಯ ನಿರಾಕರಿಸಿರುತ್ತದೆ. ಅದರ ಸಂ. ಎಮ್.ಸಿ.ನಂ.171/2010 ಇದ್ದು, ದಿನಾಂಕ: 23.08.11 ರಂಧು ತೀರ್ಪು ನೀಡಿ ವಜಾ ಮಾಡಿರುತ್ತಾರೆ. ದಿನಾಂಕ: 14.02.2012 ರಂದು ಮುಂಜಾನೆ 8-30 ಗಂಟೆಗೆ ಕೇಂದ್ರ ಬಸ್ ನಿಲ್ದಾಣದಲ್ಲಿ ಅಫಜಲಪೂರ ಬಸ್ಸಿಗೆ ಕಾಯುತ್ತಿದ್ದಾಗ ನನ್ನ ಗಂಡ , ಮಾವ ಅತ್ತೆ, ನಾದಿನಿ ಇವರೆಲ್ಲರೂ ಸೇರಿ ಬಸ್ ನಿಲ್ದಾಣಕ್ಕೆ ಬಂದು ನನ್ನನ್ನು ಹೊಡೆ-ಬಡೆ ಮಾಡಿ ಅವಾಚ್ಯವಾಗಿ ಬೈದು ವಿವಾಹ ವಿಚ್ಛೇಧನೆ ಬೇಡವಾಗಿದ್ದರೆ, 10 ಲಕ್ಷ ರೂಪಾಯಿ ವರದಕ್ಷೀಣೆ ತೆಗೆದುಕೊಂಡು ಬಾ ಅಂತಾ ಬೇದರಿಕೆ ಬೆರಿಕೆ ಹಾಕಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 13/12 ಕಲಂ. 498(ಎ), 504,506, ಸಂ. 34 ಐ.ಪಿ.ಸಿ ಮತ್ತು 3 & 4 ಡಿ.ಪಿ.ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜೂಜಾಟ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣ: ದಿನಾಂಕ 15/02/2012 ರಂದು 1130 ಗಂಟೆಯ ಸುಮಾರಿಗೆ ನಿಂಬರ್ಗಾ ಗ್ರಾಮದ ಅಂಬೇಡ್ಕರ ವೃತ್ತದ ಬಳಿ ಇರುವ ಮರೆಮ್ಮಾ ದೇವಿಯ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಶರಣಬಸಪ್ಪ ತಂದೆ ದುರ್ಗಪ್ಪ ಚಿಂಚನಸೂರ ವ|| 28 ವರ್ಷ, ಜಾ|| ಹರಿಜನ, || ಕೂಲಿ ಕೆಲಸ ಸಾ|| ನಿಂಬರ್ಗಾ ತಾ|| ಆಳಂದ ಇವನು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80ರೂಪಾಯಿ ಗೆಲ್ಲಿರಿ ಅಂತ ಜನರಿಗೆ ಹೇಳುತ್ತಾ ಹಣ ಪಡೆದು ಮಟಕಾ ಚೀಟಿ ಬರೆದುಕೊಟ್ಟು ಜನರಿಗೆ ಮೋಸ ಮಾಡುತ್ತಿರುವಾಗ ಶ್ರೀ ಎಸ್.ಎಸ್ ದೊಡಮನಿ ಪಿ.ಎಸ್.ಐ ರವರು ಹಾಗೂ ಸಿಬ್ಬಂದಿ ಶಿವರಾಯ, ಮಲ್ಲಿಕಾರ್ಜುನ, ಕಲ್ಲಪ್ಪ ರವವರೆಲ್ಲರೂ ಸೇರಿ ಮಟಕಾ ಜೂಜಾಟ ನಡೆಸುತ್ತಿದ್ದವನ ಮೇಲೆ ದಾಳಿ ಮಾಡಿ ಅವನನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 185/- ರೂ, ಪೆನ್ನು ಹಾಗೂ ಮಟಕಾ ಚೀಟಿ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ. 12/2012 ಕಲಂ 78(3) ಕೆ.ಪಿ ಆಕ್ಟ ಮತ್ತು 420 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.