POLICE BHAVAN KALABURAGI

POLICE BHAVAN KALABURAGI

18 April 2012

GULBARGA DIST REPORTED CRIMES

ಕಳ್ಳತನ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ:ಶ್ರೀ ಸಂಜಿವಕುಮಾರ ತಂದೆ ಸಿದ್ರಾಮ ಉ|| ಚರ್ಚನಲ್ಲಿ ಫಾಸ್ಟರ್ ಸಾ|| ಮನೆ ನಂ 1-949/2/585 ಜಿಡಿಎ ಲೇಔಟ ಕೊರಂಟಿ ಹನುಮಾನ ಗುಡಿ ಹತ್ತಿರ ಗುಲಬರ್ಗಾರವರು ನಾವು ದಿನಾಂಕ:16-04-2012 ರಂದು ರಾತ್ರಿ 8-00 ಗಂಟೆಗೆ ಮನೆ ಕೀಲಿ ಹಾಕಿಕೊಂಡು ನಮ್ಮ ಅಣ್ಣನ ಮನೆಗೆ ಹೋಗಿದ್ದು ದಿನಾಂಕ: 17-04-2012 ರಂದು ಬೆಳಗ್ಗೆ 7-00 ಗಂಟೆಗೆ ಮರಳಿ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲು ಕೀಲಿ ಮುರದಿದ್ದು ಒಳಗೆ ಹೋಗಿ ನೋಡಲಾಗಿ ಗೃಹ ಉಪಯೋಗ ಸಾಮನುಗಳು ಒಟ್ಟು ಅಕಿ 24500/- ರೂ ಮೌಲ್ಯದ ಸಾಮಾನುಗಳು ಕಳ್ಳತನವಾಗಿದ್ದು ಯಾರೋ ಕಳ್ಳರೂ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 53/2012 ಕಲಂ 457,380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ : ಶ್ರೀ ಭಿಮರಾವ ಮಾಲಿ ಸಾ|| ಗಾಜಿಪೂರ ಗುಲಬರ್ಗಾರವರು ನಾನು ದಿನಾಂಕ:17-04-2012 ರಂದು ಸಾಯಂಕಾಲ 6-00 ಗಂಟೆಗೆ ರೈಲ್ವೆ ಸ್ಟೇಷನ ಹತ್ತಿರ ಇರುವ ಜಿ-ಶಾನ ಹೋಟೆಲ್ ದಲ್ಲಿ ಚಹಾ ಕುಡಿದು ಬರುವಾಗ ಪ್ಯಾಂಟಿನ ಜೇಬಿನಲ್ಲಿದ್ದ ಆಪ್ಯಾಲ್ ಐ ಫೊನ ಸೆಲ್ ನಂ 9008609888 ಐ.ಎಮ್.ಇ.ಐ ನಂ 013029004344614 ಅಕಿ 44000/- ರೂ ನೇದ್ದನ್ನು ಯಾರೋ ಕಳ್ಳರೂ ಕಳ್ಳತನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 54/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

ಹಲ್ಲೆ ಪ್ರಕರಣ:

ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಜಹಾಂಗೀರ ತಂದೆ ರಹಮಾನ ಸಾಬ ಸಾ:ಶಾಸ್ತ್ರಿಚೌಕ ಲೋಹಾರ ಗಲ್ಲಿ ಶಹಾಬಾದ ರವರು ನನಗೆ ದಿನಾಂಕ 10/02/2011 ಮತ್ತು 30/03/2012 ರಂದು ಭರತ ಪವಾರ ಸಂಗಡ ಇನ್ನೂ 4 ಜನರು ಕೂಡಿಕೊಂಡು ನಾನು ತೆಗೆದುಕೊಂಡ ಸಾಲವನ್ನು ಕೊಡಬೇಕಾದ ಅವಧಿಯೊಳಗೆ ಕೊಡಲಾರದಕ್ಕೆ ಭರತ ಪವಾರ ಸಂಗಡ 4 ಜನರು ಅವಾಚ್ಯ ಶಬ್ದಗಳಿಂದ ಬೈದು ಎತ್ತಿಕೊಂಡು ಹೋಗಿ ಹೊಡೆದಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:39/2012 ಕಲಂ 144, 420, 344, 504, 506 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

ಗುಲಬರ್ಗಾ ಜಿಲ್ಲಾ ಪೊಲೀಸ್ ರ ಕಾರ್ಯಚರಣೆ 5 ಜನ ಕೊಲೆ ಆರೋಪಿತರ ಬಂದನ:

ದಿನಾಂಕ:14/04/2012 ರಂದು ಡಾ||ಬಾಬಾ ಸಾಬ ಅಂಬೇಡ್ಕರ ರವರ ಜಯಂತಿ ಅಂಗವಾಗಿ ಭಾವಚಿತ್ರ ಮೆರವಣಿಗೆ ಕಾಲಕ್ಕೆ ಸಚಿನ ಇತನೊಂದಿಗೆ ರಾತ್ರಿ ಚೌಕ್ ಸರ್ಕಲ್ ನಲ್ಲಿ ಸೂರ್ಯಕಾಂತ ಭೀಮನಗರ, ಮಲ್ಲು ಮತ್ತು ರಾಜು ತೆಲ್ಲೂರ ಸಾ:ಆದರ್ಶ ನಗರ ಕಾಲೋನಿ ಇವರು ವಿನಾಃಕಾರಣ ಜಗಳ ತೆಗೆದು ಹೊಡೆಬಡೆ ಮಾಡಿದ್ದರು ಮತ್ತೆ ಅದೇ ವೈಮನಸ್ಸಿನಿಂದ ದಿನಾಂಕ:16/04/2012 ರಂದು ಮಧ್ಯಾಹ್ನ 3:30 ಗಂಟೆಯ ಸುಮಾರಿಗೆ ರಾಮಜಿ ನಗರ ರಸ್ತೆಯ ಮೇಲೆ ಸಚಿನ, ಇತನು ಕಿರಣ & ವಿಜಯ ಕುಮಾರ ಸಂಗಡ ನಿಂತಾಗ ಮಲ್ಲು ಕ್ಯಾಂಟಿನ ಹಾಗು ಇನ್ನು 4 ಜನರೊಂದಿಗೆ ಅಟೋರಿಕ್ಷಾದಲ್ಲಿ ಬಂದು ಸಚೀನ ತಂದೆ ಅರ್ಜುನ ಸಿಂದಗಿ ವಯ:18 ವರ್ಷ, ಸಾ||ರಾಮಜೀ ನಗರ ಇತನನ್ನು ಒಂದು ಆಟೋ ರಿಕ್ಷಾದಲ್ಲಿ ಅಪಹರಿಸಿಕೊಂಡು ಹೋಗಿದ್ದರು. ಅಪಹರಿಸಿಕೊಂಡ ಹೋದ ಸಚೀನ ಇತನಿಗೆ ಇಟಗಾ ಗ್ರಾಮದ ಸೀಮಾಂತರದಲ್ಲಿರುವ ಹಳ್ಳದ ನೀರಿನಲ್ಲಿ ಮುಳುಗಿಸಿ, ಕೆಸರಿನಲ್ಲಿ ತುಳಿದು, ಉಸಿರುಗಟ್ಟಿಸಿ ಕೊಲೆಮಾಡಿರುತ್ತಾರೆ.ಈ ಬಗ್ಗೆ ರೋಜಾ ಪೊಲೀಸ್ ಠಾಣೆಯಲ್ಲಿ ಅಪಹರಣ ಮತ್ತು ಕೊಲೆ ಪ್ರಕರಣ ದಾಖಲಾಗಿರುತ್ತದೆ.

ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಅಪಹರಣನಾದ ಸಚಿನ ಇತನ ಪತ್ತೆ ಮಾಡಲು ಮತ್ತು ಆರೋಪಿತರನ್ನು ದಸ್ತಗಿರಿ ಮಾಡಲು ಎರಡು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದು, ಹಾಗು ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಮತ್ತು ಶ್ರೀ ಎ.ಡಿ ಬಸಣ್ಣನವರ ಡಿಎಸಪಿ (ಬಿ) ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದ ಮೇರೆಗೆ ಈ ತನಿಖಾ ತಂಡಗಳ ನೇತ್ರತ್ವವನ್ನು ಶ್ರೀ ಡಿ.ಜಿ ರಾಜಣ್ಣ ಪೊಲೀಸ್ ಇನ್ಸಪೇಕ್ಟರ ಮತ್ತು ಶ್ರೀ ಬಿ.ಪಿ.ಚಂದ್ರಶೇಖರ ವೃತ್ತ ನಿರೀಕ್ಷಕರು ಮಹಾತ್ಮ ಬಸವೇಶ್ವರ ನಗರ ರವರು ಹಾಗು ಅವರ ಸಿಬ್ಬಂದಿಯವರಿಗೆ ವಹಿಸಿದ್ದು, ಈ ತನಿಖಾ ತಂಡದವರು ದಿನಾಂಕ: 18-04-2012 ರಂದು ಹುಮನಬಾದ ಮತ್ತು ಸೋಲಾಪೂರದಲ್ಲಿ ಕಾರ್ಯಚರಣೆ ನಡೆಸಿ 5 ಆರೋಪಿತರನ್ನು ಬಂದಿಸುವಲ್ಲಿ ಯಶ್ವಸಿಯಾಗಿರುತ್ತಾರೆ. ತಲೆ ಮರೆಸಿಕೊಂಡಿರುವ ಆರೋಪಿಯ ಬಂದನಕ್ಕೆ ವ್ಯಾಪಕ ಜಾಲ ಬಿಸಿ ಕಾರ್ಯಚರಣೆ ಜಾರಿಯಲ್ಲಿರುತ್ತದೆ. ದಸ್ತಗಿರಿಯಾದ ಆರೋಪಿತರ ವಿವರ ಈ ಕೆಳಕಂಡಂತೆ ಇರುತ್ತದೆ.1) ಮಲ್ಲು @ ಮಲ್ಲಿಕಾರ್ಜುನ ತಂದೆ ಹುಸನಪ್ಪಾ ಬೆಣ್ಣೂರ,2) ದಿನೇಶ ತಂದೆ ಬಾಬುರಾವ ಟೆಂಗೆ,3) ಯಶ್ವಂತ ತಂದೆ ಶಿವಶರಣಪ್ಪಾ ಬಪ್ಪನ,4) ಸಚಿನ ತಂದೆ ಪ್ರಕಾಶ ರಾಜನಾಳ,5) ಮಲ್ಲಿಕಾರ್ಜುನ ತಂದೆ ಜಗನಾಥ ನಿಂಬರ್ಗಾ ಎಲ್ಲರೂ ಸಾ|| ಭಿಮನಗರ ಗುಲಬರ್ಗಾ .

GULBARGA DIST REPORTED CRIMES

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಮರೆಪ್ಪಾ ತಂದೆ ನಾಗಪ್ಪ ಹಾಗರಗುಂಡಗಿ ಸಾ: ಬಸವ ನಗರ ಗುಲಬರ್ಗಾ ರವರು ನಾನು ದಿನಾಂಕ 17-04-12 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ ಸೈಕಲ ಮೇಲೆ ಜೇವರ್ಗಿ ಕ್ರಾಸದಿಂದ ಜೇವರ್ಗಿರಿಂಗ ರೋಡ ಕಡೆಗೆ ಹೋಗುತ್ತಿದಾಗ ಯಾತ್ರಿಕ ನಿವಾಸ ಎದುರು ರೋಡಿನ ಮೇಲೆ ಒಬ್ಬ ಮೋಟಾರ ಸೈಕಲನ್ನು ಜೇವರ್ಗಿ ರಿಂಗ ರೋಡ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ರಾಂಗ ಸೈಡಿನಿಂದ ಚಲಾಯಿಸಿಕೊಂಡು ಬಂದು ನನ್ನ ಸೈಕಲಗೆ ಎದುರುನಿಂದ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 45/2012 ಕಲಂ: 279 ,338 ಐ.ಪಿ.ಸಿ ಸಂ 187 ಐ,ಎಮ್,ವಿ,ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಾವು ಕಚ್ಚಿ ಸಾವು:

ಮಾದನ ಹಿಪ್ಪರಗಾ ಠಾಣೆ:ಶ್ರೀ.ಶ್ರೀಶೈಲ ತಂದೆ ಕಲ್ಲಪ್ಪ ಮೇತ್ರೆ ಸಾ;ನಾಗಲೇಗಾಂವ ರವರು ನನ್ನ ಹೆಂಡತಿಯಾದ ಸೋನುಬಾಯಿ ಇವಳು ದಿನಾಂಕ: 17-04-2012 ರಂದು ಮುಂಜಾನೆ ಹೊಲದಲ್ಲಿ ಮೆಕ್ಕೆಜೋಳ ಕಣಕಿ ತಗೆದುಕೊಳ್ಳುತ್ತಿದ್ದಾಗ ಮಕ್ಕೆಜೋಳದಕಣಿಕೆಯಲ್ಲಿದ್ದ ಹಾವು ಸೋನುಬಾಯಿಯ ಎಡಗಾಲ ಕಪಖಂಡ ಹತ್ತಿರ ಮತ್ತು ಎಡಗೈತೋರುಬೆರಳಿಗೆ ಕಚ್ಚಿದರಿಂದ ಉಪಚಾರ ಕುರಿತು ಸೊಲ್ಲಾಪೂರಕ್ಕೆ ತಗೆದುಕೊಂಡು ಹೊಗುತ್ತಿದ್ದಾಗ ಮಾರ್ಗ ಮಧ್ಯ ಮೃತಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಯು.ಡಿ.ಆರ್ ನಂ 02/2012 ಕಲಂ 174 ,ಸಿ,ಆರ್,ಪಿ,ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ವರದಕ್ಷಿಣೆ ಕಿರುಕುಳ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀಮತಿ ಶಾರದಾಬಾಯಿ ಗಂಡ ಲಿಂಬೊಜಿ ವ:45 ವರ್ಷ ಜಾ:ಲಂಬಾಣಿ ಉ:ಮನೆಕೆಲಸ ಸಾ:ಕುಸನೂರ ತಾಂಡಾ ಹಾ:ವ: ಉದನೂರ ತಾಂಡಾ ತಾ:ಜಿ:ಗುಲಬರ್ಗಾರವರು ನನ್ನ ಮಗಳಾದ ಸುರೇಖಾ 6 ವರ್ಷದ ಹಿಂದೆ ಮದುವೆ ಮಾಡಿದ್ದು ನನ್ನ ಅಳಿಯನು ನನ್ನ ಮಗಳ ಶೀಲದ ಬಗ್ಗೆ ಸಂಶಯ ಪಟ್ಟು ಹೊಡೇ ಬಡೇ ಮಾಡಿ ದೈಹಿಕ ಮತ್ತು ಮಾನಸಿಕ ತೊಂದರೆ ಕೊಡುತ್ತಿದ್ದನು,ದಿನಾಂಕ:17/04/2012 ರಂದು 8 ಎಎಮಕ್ಕೆ ನಮ್ಮ ಅಳಿಯ ಕುಮಾರ ಇವನು ನಮ್ಮ ಮಗಳಿಗೆ ಹೊಡೆಯುತ್ತಿದ್ದಾಗ ಮಗಳು ತ್ರಾಸ ತಾಳಲಾರದೇ ಕ್ರಿಮಿನಾಶಕ ಔಷದಿಯನ್ನು ಕುಡಿದು ಒದ್ದಾಡುತ್ತಿದಳು ಆಗ ನಾನು ನಮ್ಮ ತಾಂಡಾದ ಜನರು ಕೂಡಿಕೊಂಡು ಆಟೋ ರಿಕ್ಷಾದಲ್ಲಿ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಮಾಡಿರುತ್ತೇವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ಹಸನಸಾಬ ತಂದೆಖಾಜಾಸಾಬ ಬಂಕಾಪೂರ ವ: 31 ಜಾ: ಮುಸ್ಲಿಂ ಉ:ಆಟೋ ರೀಕ್ಷಾ ಚಾಲಕ ಸಾ: ತಾಜಸುಲ್ತಾನಪೂರ ಗುಲಬರ್ಗಾ ರವರು ನಾನು ದಿನಾಂಕ 17/4/2012 ರಂದು ಮಧ್ಯಾಹ್ನ ಸುಮಾರಿಗೆ ನನ್ನ ಆಟೋ ರೀಕ್ಷಾ ನಂ ಕೆಎ 32 6570 ನೇದ್ದರಲ್ಲಿ ಪ್ಯಾಸೆಂಜರ ಕೂಡಿಸಿಕೊಂಡು ತಾಜ ಸುಲ್ತಾನಪೂರದಿಂದ ಗುಲಬರ್ಗಾ ರಿಂಗ ರೋಡ ಕಡೆಗೆ ಬರುವಾಗ ಕಮಲ ನಗರದ ಹತ್ತಿರ ಹಿಂದಿನಿಂದ ಟ್ರ್ಯಾಕ್‌ರ ನಂ ಕೆಎ 32 ಟಿ- 3951- 3952 ನೇದ್ದರ ಚಾಲಕ ತನ್ನ ಟ್ರಾಕ್ಟರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಆಟೋಕ್ಕೆ ಓವರ ಟೇಕ ಮಾಡಿ ಒಮ್ಮೇಲೆ ಬ್ರೇಕ ಮಾಡಿದಾಗ ಆಟೋ ರೀಕ್ಷಾವು ಟ್ರ್ಯಾಲಿಯ ಹಿಂದೆ ಸಿಕ್ಕಿ ಬಿದಿದ್ದು ಹಾಗೆ ಮುಂದೆ ಹೋಗಿದ್ದರಿಂದ ಆಟೋ ಹಾಗೂ ಟ್ರಾಲಿ ಪಲ್ಟಿಯಾಗಿ ಅದರಲಿದ್ದ ಪ್ರಯಾಣಿಕರಿಗೆ ಗಾಯವಾಗಿದ್ದು ಇರುತ್ತದೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 118/2012 ಕಲಂ 279 337 ಐಪಿಸಿ ಸಂ/ 187 ಐಎಂವಿ ಆಕ್ಟ್‌‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಗುರುನಾಥ ತಂದೆ ಭೀಮಾಶಂಕರ ಖನಕೆ ಸಾ: ಕರಜಗಿ (ಎನ್‌ ತಾ: ಅಕ್ಕಲಕೋಟ ಹಾ: ವ: ಗುಲಬರ್ಗಾರವರು ನಾನು ದಿನಾಂಕ 17/4/2012 ರಂದು ಸಾಯಂಕಾಲ ಗಂಟೆ ಸುಮಾರಿಗೆ ನನ್ನ ಮೋ ಸೈಕಲ ನಂ ಕೆಎ 32 ಎಕ್ಸ್‌‌ 6015 ನೇದ್ದರ ಮೇಲೆ ದುಬೈ ಕಾಲನಿಗೆ ಹೋಗತ್ತಾ ನನ್ನ ಅತ್ತೆ ಮಾವನಿಗೆ ಬಿಟ್ಟು ಮರಳಿ ಮಿಜಬಾ ನಗರ ನಗರ ಕ್ರಾಸ ದಾಟಿ ಸ್ವಲ್ಪ ಮುಂದೆ ಹೋದ ಮೇಲೆ ಹಿಂದಿನಿಂದ ಮೋಟಾರ ಸೈಕಲ ನಂ ಕೆಎ 35 ಜೆ 8397 ನೇದ್ದರ ಸವಾರನು ಅತಿವೇಗ ಹಾಗೂ ಅಲಕ್ಷತನದಿಂದ ವೇಗವಾಗಿ ನಡೆಯಿಸಿಕೊಂಡು ಬಂದು ಡಿಕ್ಕಿ ಪಡೆಯಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 119/2012 ಕಲಂ 279 337 ಐಪಿಸಿ ಸಂ/ 187 ಐಎಂವಿ ಆಕ್ಟ್‌‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.