POLICE BHAVAN KALABURAGI

POLICE BHAVAN KALABURAGI

18 November 2013

PRESS NOTE

ಪತ್ರಿಕಾ ಪ್ರಕಟಣೆ
          ಗುಲಬರ್ಗಾ ಜಿಲ್ಲೆಯ ವಿಶೇಷವಾಗಿ ಗುಲಬರ್ಗಾ ನಗರದ ಸಾರ್ವಜನಿಕರಲ್ಲಿ ಕೋರುವದೇನೆಂದರೆ, ಜಿಲ್ಲೆಯಲ್ಲಿರುವಂತಹ ದ್ವಿಚಕ್ರ, 4 ಚಕ್ರ ವಾಹನಗಳಿಗೆ ಅಳವಡಿಸಿದ ನಂಬರ ಪ್ಲೇಟುಗಳು ಹೆಚ್ಚಾಗಿ ದೋಷಪೂರಿತವಾಗಿರುವುದು ಕಂಡು ಬಂದಿರುತ್ತದೆ. ದಿನಾಂಕ 05-11-2013 ರಿಂದ 14-11-2013 ರವರೆಗೆ ಈ ಬಗ್ಗೆ ಕಾರ್ಯಚರಣೆ ನಡೆಸಿರುವ ಗುಲಬರ್ಗಾ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು 110 ದೋಷಪೂರಿತ ನಂಬರ ಪ್ಲೇಟುಗಳನ್ನು ಹೊಂದಿರುವ ವಾಹನಗಳನ್ನು ಹಿಡಿದು 11,000/- ರೂ ದಂಡ ವಿಧಿಸಿ ನಂಬರ ಪ್ಲೇಟುಗಳು ತಮ್ಮ ವಶಕ್ಕೆ ತೆಗೆದುಕೊಳ್ಳಲಾಗಿದೆ.

          ಕೇಂದ್ರ ಮೋಟಾರು ವಾಹನ ಅಧಿನಿಯಮ 1989, ನಿಯಮ 51 ರಲ್ಲಿ ತಿಳಿಸಿದ ಈ ಕೆಳಕಂಡ ನಮೂನೆಯಲ್ಲಿ  ಯಾವುದೇ ವಾಹನದ ಹಿಂದೆ ಮತ್ತು ಮುಂದೆ ಇರುವಂತಹ ನಂಬರ್ ಪ್ಲೇಟುಗಳು ಸ್ವಂತಕ್ಕೆ ಬಳಸುವ ವಾಹನವಾದರೆ ಬಿಳಿಯ ಬಣ್ಣದ ಹಿನ್ನಲೆ ಹೊಂದಿ ಕಪ್ಪು ಅಕ್ಷರಗಳಿಂದ ಎರಡು ಲೈನಗಳಲ್ಲಿ (Arial Font) ನಲ್ಲಿ ಬರೆಯಬೇಕು. ಇದರ ಮೇಲೆ ಯಾವುದೇ ಹೆಸರು, ಚಿನ್ಹೆ, ಸಂಕೇತ ಬರೆಯಬಾರದು. ಸರಿಯಾದ ನಂಬರ್ ಪ್ಲೇಟ್ ಬರೆಯದೇ ಇದ್ದಾಗ ಅಪರಾಧ ಮಾಡುವಂತಹ ಅಪರಾಧಿಗಳು ಸುಲಭವಾಗಿ ತಪ್ಪಿಸಿಕೊಳ್ಳಲಿಕ್ಕೆ ಸಾದ್ಯವಾಗುತ್ತದೆ. ಆದ್ದರಿಂದ ಗುಲಬರ್ಗಾ ಜಿಲ್ಲೆಯ ಸಾರ್ವಜನಿಕರು ತಮ್ಮ ವಾಹನಗಳಿಗೆ ಅಳವಡಿಸಿರುವ ನಂಬರ್ ಪ್ಲೇಟಗಳು ದೋಷಪೂರಿತ ವಾಗಿದಲ್ಲಿ 15 ದಿವಸಗಳ ಒಳಗಾಗಿ ಕೇಂದ್ರ ಮೋಟಾರು ವಾಹನ ಅಧಿನಿಯಮ 1989, ನಿಯಮ 51 ರಲ್ಲಿ ತಿಳಿಸಿರುವಂತೆ ಬದಲಿಸತಕ್ಕದ್ದು. ದೋಷಪೂರಿತ ನಂಬರ್ ಪ್ಲೇಟ ಬರೆದಿದ್ದು ಕಂಡು ಬಂದಲ್ಲಿ ಅಂತಹ ವಾಹನ ಮಾಲಿಕರ ವಿರುದ್ದ ಮತ್ತು ಬರೆದವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.

          ಕಾರಣ ಎಲ್ಲಾ ವಾಹನ ಮಾಲಿಕರು ತಮ್ಮ ವಾಹನಗಳ ಮೇಲೆ ಸರಿಯಾದ ನಂಬರ್ ಪ್ಲೇಟಗಳನ್ನು ಅಳವಡಿಸಿಕೊಂಡು ಗುಲಬರ್ಗಾ ಜಿಲ್ಲೆಯ ಪೊಲೀಸರಿಗೆ ಸಹಕರಿಸಲು ಕೋರುತ್ತೇನೆ. 
SI No.
Class of Vehicle
Dimensions not less then (In MillimetersPree)

Height
Thickness space between
01
All motor cycles and 3 wheeled invalid carriage
Rear Letters and Rear Numbers
40
07
05
02
Motor cycles with engine Capacity less than 70 cc
Front Letters and Numbers
15
2.5
2.5
03
Other Motor Cycles
Front Letters and Numbers
30
05
05
04
Three Wheeler's
Rear and Front Letters & Numbers
40
07
05
05
All other Vehicles
Rear and Front Letters & Numbers
65
10
10

Gulbarga Dist Reported Crimes

ಮೋಟಾರ ಸೈಕಲ ಕಳವು ಪ್ರಕರಣ:
ಸೇಡಂ ಪೊಲೀಸ್ ಠಾಣೆ.
ದಿ:17-11-2013 ರಂದು ಶ್ರೀ ಇಮ್ತಿಯಾಜ್ ತಂದೆ ರಿಯಾಜೋದ್ದಿನ್ ಗೋರೆಮಿಯ್ಯಾ ಸಾ:ರಹೇಮತ ನಗರ ಸೇಡಂ ರವರು ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಬಜಾಜ ಪಲ್ಸರ ಮೋಟಾರ ಸೈಕಲ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ನೋಡಲಾಗಿ ತನ್ನ ಬಜಾಜ ಪಲ್ಸರ ಮೋಟಾರ ಸೈಕಲ ಇರಲಿಲ್ಲ ಆಗ ನಮ್ಮ ತಂದೆಯವರು ನನಗೆ ಎಬ್ಬಸಿ ಮೋಟಾರ ಸೈಕಲ ಇರಲಿಲ್ಲ ಅದನ್ನು ಯಾರೋ ಕಳ್ಳರು ಇಂದು ದಿನಾಂಕ 17-11-2013 ರಂದು ಬೆಳಗಿನ ಜಾವ 3 ಗಂಟೆಯಿಂದ 4 ಗಂಟೆಯ ನಡುವಿನ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಸಲ್ಲಿಸಿದ ದೂರು ಸಾರಂಶದ ಮೇಲಿಂಧ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಜಾರಿಯಲ್ಲಿರುತ್ತದೆ.
ಜೂಜುಕೋರರ ಬಂಧನ
ಮಹಾಗಾಂವ ಠಾಣೆ
ದಿ: 17/11/13 ರಂದು ಮಹಾಗಾಂಔ ಪೊಲೀಸ್ ಠಾಣೆ ವ್ಯಾಪ್ತಿಯ ಕಡಬೂರು ಗ್ರಾಮದ ಸರ್ಕಾರಿ ಶಾಲೆ ಹತ್ತಿರ ಕೆಲವರು ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಬಾಪುಗೌಡ ಎಸ್. ಪಾಟೀಲ ಪಿ.ಎಸ್.ಐ ಮಹಾಗಾಂವ ಠಾಣೆ ರವರು ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ 1) ತಾಜೋದ್ದೀನ್ ತಂ, ಅಲ್ಲಾವುದ್ದೀನ್ ಸಾ||ಖಾಜಾ ಕಾಲೋನಿ ಗುಲಬರ್ಗಾ 2)ಬಾಬಾ ತಂ, ಮಹ್ಮದ ಶಫೀ 3)ಅಬ್ದುಲ್ ಬಾರೀದ ತಂ, ಅಹ್ಮದ ಗನಿ ಸಾ||ಫೈಯದ ಗಲ್ಲಿ ಗುಲಬರ್ಗಾ 4)ಮಹ್ಮದ ಖಾನ್ ತಂ, ಮಹಿಮೂದ ಖಾನ್, ಸಾ||ಖಾಜಾ ಕಾಲೋನಿ ಗುಲಬರ್ಗಾ ಇವರನ್ನು ದಸ್ತಗೀರ ಮಾಡಿ ಜೂಜಾಟಕ್ಕೆ ಬಳಸಿದ 52 ಇಸ್ಪೀಟ್ ಎಲೆಗಳು ಮತ್ತು ನಗದು ರೂ 11500/- ರೂ ಜಪ್ತಿಮಾಡಿಕೊಪಂಡು ಆರೋಪಿತ ವಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ

ಚಿಂಚೋಳಿ ಪೊಲೀಸ್ ಠಾಣೆ   :   ಶ್ರೀ ತುಳಜಪ್ಪ ತಂದೆ ಬಕ್ಕಪ್ಪ ಚಿಂತಪಳ್ಳಿ ಸಾ|| ಐನೋಳ್ಳಿ ಇವರು ಚಾಂಗಲೇರಾದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕಾರಿ ತಮ್ಮೂರಿನ ಕಲ್ಲಪ್ಪ ಧುತ್ತರಗಿ ಯೊಂದಿಗೆ ಹೋಗಿ ಮರಳಿ ಚಿಂಚೋಳಿಗೆ ಆಟೋದಲ್ಲಿ ಬರುತ್ತಿರುವಾಗ ಪಟಪಳ್ಳಿ ಕ್ರಾಸ ಹತ್ತಿರ ಆಟೋ ಚಾಲಕನು ಅತೀವೇಗದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸುತ್ತಾ ಮನ್ನಾಖ್ಖೇಳಿ- ಚಿಂಚೋಳಿ ಮುಖ್ಯ ರಸ್ತೆಯ ಮೇಲೆ ಪಟಪಳ್ಳಿ ಫತ್ತೆಪೂರ ಕ್ರಾಸ  ಮದ್ಯೆ ದಲ್ಲಿ ಕ್ಯಾನಲ್ ಸಮೀಪ ಒಮ್ಮಿಂದೋಮೆಲೆ ಕಟ ಹೊಡೆದ್ದರಿಂದ ಆಟೋ ಎಡ ಮಗ್ಗಲಾಗಿ ಪಲ್ಟಿಯಾಗಿದ್ದು ಆಟೋದಲ್ಲಿ ಕುಳಿತ ತಾನಗೆ ಮತ್ತು  ಕಲ್ಲಪ್ಪನಿಗೆ ರಕ್ತ ಗಾಯವಾಗಿದ್ದು ಇನ್ನೋಬ್ಬ ಪ್ರಯಾಣಿಕ  ಆಟೋದಡಿ ಸಿಲುಕಿ ಮೃತಪಟ್ಟಿದ್ದು. ಅಪಘಾತದ ನಂತರ ನಾನು ಮತ್ತು ಕಲ್ಲಪ್ಪ ಮನೆಗೆ ಹೋಗಿ ಇಂದು ಸದರಿ ಅಟೋ  ಚಾಲಕ ನಾಗಪ್ಪನ ವಿರುದ್ದ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.