POLICE BHAVAN KALABURAGI

POLICE BHAVAN KALABURAGI

29 December 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ:28/12/2019 ರಂದು ನರೋನಾ ಠಾಣಾ ವ್ಯಾಪ್ತಿಯ . ಕಡಗಂಚಿ ತಾಂಡಾದಲ್ಲಿ ದುಬೇಶ ತಂದೆ ರೇವು ಚೌವ್ಹಾಣ ಈತನು ತನ್ನ ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ದುಬೇಶ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ.ಉದಂಡಪ್ಪಾ ಪಿ.ಎಸ್‌.ಐ ನರೋಣಾ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಠಾಣೆಯಿಂದ ಹೊರಟು ದುಬೇಶ ಈತನ ಕಿರಾಣಿ ಅಂಗಡಿಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಅಂಗಡಿಯ ಮುಂದಿನ ರೋಡಿನ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಾ ಸಾರ್ವಜನಿಕರಿಗೆ ಮೊಸ ಮಾಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ದುಬೇಶ ತಂದೆ ರೇವು ಚೌವ್ಹಾಣ,  ಸಾ:ಕಡಗಂಚಿ ತಾಂಡಾ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1]ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2)ಒಂದು ಬಾಲ ಪೆನ್‌ 3)ನಗದು ಹಣ 10,050/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನಿಗೆ ವಶಕ್ಕೆ ತೆಗೆದುಕೊಂಡು ನರೋಣಾ ಪೊಲೀಸ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನರೋಣಾ ಠಾಣೆ : ದಿನಾಂಕ:26/12/2019 ರಂದು ನರೋಣಾ ಠಾಣಾ ವ್ಯಾಪ್ತಿಯ ಅಂಬಲಗಾ ಗ್ರಾಮದಲ್ಲಿರುವ ಕಲ್ಮೇಶ್ವರ ದೇವಸ್ಥಾನದ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ಹಾಗೂ ಸಿ.ಪಿ.ಐ ಸಾಹೇಬರು ಆಳಂದರವರ ಮಾರ್ಗದರ್ಶನದಲ್ಲಿಪಿ.ಎಸ್.ಐ. ನರೋನಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಠಾಣೆಯಿಂದ ಹೊರಟು ಅಂಬಲಗಾ ಗ್ರಾಮದಲ್ಲಿರುವ ಕಲ್ಮೇಶ್ವರ ಕಟ್ಟೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಕಲ್ಮೇಶ್ವರ ದೇವಸ್ಥಾನದ ಕಟ್ಟೆಯ ಮುಂದಿನ ರೋಡಿನ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಾ ಸಾರ್ವಜನಿಕರಿಗೆ ಮೊಸ ಮಾಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಸಿದ್ದಾರೂಢ ತಂದೆ ಅಂಬರಪ್ಪಾ ಒಣಕೆ, ಸಾ:ಅಂಬಲಗಾ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1]ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2)ಒಂದು ಬಾಲ ಪೆನ್‌ 3)ನಗದು ಹಣ 11010/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನಿಗೆ ವಶಕ್ಕೆ ತೆಗೆದುಕೊಂಡು  ನರೋಣಾ ಪೊಲೀಸ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ 26/12/2019 ರಂದು ನರೋಣಾ ಪೊಲೀಸ ಠಾಣಾ ವ್ಯಾಪ್ತಿಯ  ಬಸವನಸಂಗೋಳಗಿ ಗ್ರಾಮ ಬಸವಣ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಜೂಜಾಟಕ್ಕೆ ಹಣ ಪಣಕಿಟ್ಟು ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಆಳಂದ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ನರೋಣಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳವಾದ ಬಸವನಸಂಗೋಳಗಿ ಗ್ರಾಮದ ಬಸವಣ ದೇವಸ್ಥಾನದ ಕಟ್ಟೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ  ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 09 ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಪಣಕ್ಕೆ ಹಣ ಹಚ್ಚಿ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1)ಹಣಮಂತರಾಯ ತಂದೆ ಸಬಣ್ಣ ರಾಮಶೆಟ್ಟಿ, ಸಾ:ಬಸವನಸಂಗೋಳಗಿ ಗ್ರಾಮ, 2)ಶಿವರಾಜ ತಂದ ಮಾಣಿಕರಾವ ಪಾಟೀಲ್, ಸಾ:ಗುಂಜಬಬಲಾದ 3)ಶರಣಬಸಪ್ಪಾ ತಂದೆ ಆನಂದರಾವ ಬೋದನ, 4)ಮಲ್ಲಿನಾಥ ತಂದೆ ಗುಂಡಪ್ಪಾ ಹಂಡಗೆ, 5)ಪ್ರವೀಣ ತಂದೆ ಅಂಬಾರಾಯ ಬಿರಾದಾರ, 6)ಪೀರಶೆಟ್ಟಿ ತಂದೆ ಅಪ್ಪಾರಾಯ ರಾಮಶೆಟ್ಟಿ, 7)ಪೀರಪ್ಪ ತಂದೆ ವಿಠಲ್ ಐಪ್ಪಗೋಳ, 8)ಸೋಮಶೇಖರ ತಂದೆ ಚಂದ್ರಕಾಂತ ಬಿರಾದಾರ,  9)ಬಸವರಾಜ ತಂದೆ ವಿಠಲ್ ಹರಳಯ್ಯ ಸಾ: ಎಲ್ಲರು ಬಸವನಸಂಗೋಳಗಿ ಗ್ರಾಮ, ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ಒಟ್ಟು ನಗದು ಹಣ 4400/- ರೂಪಾಯಿ ಮತ್ತು 52 ಇಸ್ಪಿಟ ಎಲೆಗಳನ್ನು  ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ನರೋಣಾ ಠಾಣೆ : ದಿನಾಂಕ 26/12/2019 ರಂದು ನರೋಣಾ ಠಾಣಾ ವ್ಯಾಪ್ತಿಯ  ಲಾಡಚಿಂಚೋಳಿ ಗ್ರಾಮ ಹನುಮಾನ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಜೂಜಾಟಕ್ಕೆ ಹಣ ಪಣಕಿಟ್ಟು ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಆಳಂದ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ನರೋಣಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳವಾದ ಲಾಡಚಿಂಚೋಳಿ ಗ್ರಾಮದ ಹನುಮಾನ ದೇವಸ್ಥಾನದ ಕಟ್ಟೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ  ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 10 ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಪಣಕ್ಕೆ ಹಣ ಹಚ್ಚಿ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1)ಜಗದೀಶ ತಂದೆ ಶಾಂತಮಲ್ಲಪ್ಪಾ ಹಾವಣಿ 2)ಸಿದ್ದು ತಂದೆ ತುಳಜಪ್ಪಾ ಹೆಬಳಿ 3)ಶಾಂತಪ್ಪಾ ತಂದೆ ಸಿದ್ರಾಮಪ್ಪಾ ಕಟ್ಟಿಮನಿ 4)ಪಂಡಿತ ತಂದೆ ಬಸವರಾಜ ಕೌಲಗಿ, 5)ಬಸವರಾಜ ತಂದೆ ಮಲಕಪ್ಪಾ ಕೋರೆ, 6)ಯಲ್ಲಾಲಿಂಗ ತಂದೆ ಬೀರಣ್ಣಾ ಬಾಳಿ, 7) ಮಾಳಪ್ಪಾ ತಂದೆ ಶಿವಶರಣಪ್ಪಾ ಪೂಜಾರಿ, 8) ಮಹೇಶ ತಂದೆ ಚಂದ್ರಶ್ಯಾ ಧಾನಕ, 9) ಶಾಂತಪ್ಪಾ ತಂದೆ ಧರ್ಮಣ್ಣಾ ಪೂಜಾರಿ, 10)ಶಿವಯ್ಯ ತಂದೆ ವೀರಭದ್ರಯ್ಯ ಮಠಪತಿ, ಸಾ: ಎಲ್ಲರು ಲಾಡಚಿಂಚೋಳಿ ಗ್ರಾಮ, ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ನಗದು ಹಣ 10,070/- ರೂಪಾಯಿ ಮತ್ತು 52 ಇಸ್ಪಿಟ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ತೆಗೆದುಕೊಂಡು  ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಸೀಮಾ ಗಂಡ ಶಿವಶರಣ ರಾಮನೂರ ಸಾ:ಅರಳಗುಂಡಗಿ ತಾ:ಯಡ್ರಾಮಿ ಹಾ|||| ಮಡಿಕೇಶ್ವರ ತಾ:ಮುದ್ದೆಬಿಹಾಳ ರವರನ್ನು ಗುರುಹಿರಿಯ ಸಮಕ್ಷಮ ಅರಳಗುಂಡಗಿ ಗ್ರಾಮದ ಶಿವಶರಣ ರಾಮನೂರ ರವರಜೋತೆ ಮದುವೆ ಮಾಡಿದ್ದು ಮದುವೆ ಕಾಲಕ್ಕೆ ನನ್ನ ತಂದೆ-ತಾಯಿಯವರು ನನ್ನ ಯೋಗಕ್ಷೇಮದ ಸಲುವಾಗಿ ನನಗೆ 4 ತೋಲಿ ಬಂಗಾರ ಕೊಟ್ಟಿದ್ದರು ನನ್ನ ಗಂಡನು ಐಟಿಬಿಪಿ ಪೊಲೀಸ ಇದ್ದು ಸದ್ಯೆಕ್ಕೆ ಅವರು ಅರುಣಾಚಲ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನನ್ನ ಮದುವೆಯಾದ 3 ತಿಂಗಳ ತನಕ ನನ್ನ ಗಂಡ ಮತ್ತು ಗಂಡನ ಮನೆಯವರು ನನಗೆ ಚನ್ನಾಗಿ ನೋಡಿಕೊಂಡಿರುತ್ತಾರೆ, ಇದಾದ ನಂತರ ನನ್ನ ಗಂಡನಾದ ಶಿವಶರಣಪ್ಪ ಮತ್ತು ನನ್ನ ಅತ್ತೆಯಾದ ಕಸ್ತೂರಿಬಾಯಿ ರಾಮನೂರ ಭಾವನಾದ ಯಮನೂರ ನಾದನಿಯರಾದ ಬಸಮ್ಮ ಗಂಡ ನಿಂಗಪ್ಪ ಶಿವಣಗಿ, ದೇವಮ್ಮ ಗಂಡ ರಮೇಶ ಜಂಬಗಿ, ಎಲ್ಲರೂ ಕೂಡಿ ನೀನು ತವರು ಮನೆಯಿಂದ ವರದಕ್ಷಿಣೆ ತಗೆದುಕೊಂಡು ಬಂದಿಲ್ಲಾ ಅಂತ, ನನ್ನ ತಂದೆ ತಾಯಿ ಮದುವೆಯ ಕಾಲಕ್ಕೆ ನನ್ನ ಯೋಗಕ್ಷಮದ ಸಲುವಾಗಿ ಕೊಟ್ಟಿದ 4 ತೋಲಿ ಬಂಗಾರ ಕಸಿದುಕೊಂಡಿರುತ್ತಾರೆ. ಇದಾದ ಮೇಲೆ ಅವರು ನನಗೆ ನೀನು ಚನ್ನಾಗಿ ಇಲ್ಲ ನನ್ನ ಮಗನಿಗೆ ತಕ್ಕ ಹೆಂಡತಿ ಅಲ್ಲಾ ನನ್ನ ಮಗನಿಗೆ ನೌಕರಿ ಇದೆ ನೀನು ತವರು ಮನೆಯಿಂದ ವರದಕ್ಷಿಣೆ ತಂದಿರುವುದಿಲ್ಲಾ ನೀನು ತವರು ಮನೆಯಿಂದ 5 ಲಕ್ಷ ರೂಪಾಯಿ ವರದಕ್ಷಿಣೆ ತಗೆದುಕೊಂಡು ಬಾ ಮತ್ತು ಒಂದು ಕಾರ ಕೊಡಿಸು ಅಂತಾ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿದ್ದು ಅಲ್ಲದೇ ನನ್ನ ಗಂಡನು ನನಗೆ ಹೊಡೆ-ಬಡೆ ಮಾಡುತ್ತಾ ಬಂದಿರುತ್ತಾರೆ, ಅವರು ಎಷ್ಟೇ ತೊಂದರೆ ಕೊಟ್ಟರು ನಾನು ಗಂಡನ ಮನೆಯಲ್ಲಿ ತಾಳಿಕೊಂಡು ಬಾಳಬೇಕು ಅಂತಾ ಸಮ್ಮನಿದ್ದೆನು ಇದಾದ ಕೆಲವು ದಿನಗಳ ಮೇಲೆ ನನ್ನ ನಾದಿನಿಯರ ಗಂಡಂದಿರರಾದ ನಿಂಗಪ್ಪ ಶಿವಣಗಿ, ರಮೇಶ ಜಂಬಗಿ ಹಾಗೂ ನಿಂಗಪ್ಪನ ಮಗನಾದ ಸಚೀನ ಶಿವಣಗಿ ಇವರು ಕೂಡಾ ನನ್ನ ಗಂಡನ ಮನೆಗೆ ಬಂದಾಗ ಅವರು ನನಗೆ ಇಕೆ ತವರು ಮನೆಯಿಂದ ವರದಕ್ಷಿಣೆ ತಂದಿಲ್ಲಾ ಇವಳಿಗೆ ಮನೆಯಲ್ಲಿ ಏಕೆ ಇಟ್ಟುಕೊಂಡಿರಿ ಹೊರಗೆ ಹಾಕಿಬಿಡಿರಿ ಅಂತ ಬೈಯುತ್ತಿದ್ದರು. ಇದಾದ ಕೆಲವು ದಿನಗಳ ಮೇಲೆ ಒಂದು ದಿನ ನಾನು ನನ್ನ ತವರು ಮನೆಗೆ ಹೋದಾಗ ನನ್ನ ಗಂಡ ಮತ್ತು ಗಂಡನ ಮನೆಯವರು ನನ್ನ ಸಂಗಡ ಕಿರಿಕಿರಿ ಮಾಡುತ್ತಿರುವ ವಿಷಯ ನನ್ನ ತಂದೆ-ತಾಯ ಮುಂದೆ ಹೇಳಿದಾಗ ದು ದಿನ ನನ್ನ ತಂದೆಯಾದ ಪವಡೆಪ್ಪ ಚಲವಾದಿ, ತಾಯಿ ಮರೇಮ್ಮ ಚಲವಾದಿ, ಹಾಗೂ ಮಡಿಕೇಶ್ವರ ಗ್ರಾಮದ ಲಕ್ಷ್ಮಣ ತಂದೆ ಮಾರುತೇಪ್ಪ ಚಲವಾದಿ, ಪವಡೇಪ್ಪ ತಂದೆ ಪರಪ್ಪ ಚಲವಾದಿ, ಬಸಪ್ಪ ತಂದೆ ಲಚ್ಚಪ್ಪ ಚಲವಾದಿ ಎಲ್ಲರೂ ಕೂಡಿ ಅರಳಗುಂಡಗಿ ಗ್ರಾಮಕ್ಕೆ ನನ್ನ ಗಂಡನ ಮನೆಗೆ ಬಂದು ಅವರಿಗೆ ನಾವು ಬಡವರಿದ್ದೇವೆ ನಾವು 5 ಲಕ್ಷ ರೂಪಾಯಿ ಮತ್ತು ಒಂದು ಕಾರ ಎಲ್ಲಿಂದ ಕೊಡಬೇಕು ನನ್ನ ಮಗಳ ಸಂಗಡ ಜಗಳ ಮಾಡಬೇಡರಿ ಅವಳಿಗೆ ಚನ್ನಾಗಿ ನೋಡಿಕೊಳ್ಳರಿ ಅಂತಾ ಬುದ್ದಿ ಮಾತು ಹೇಳಿ ಹೋಗಿದ್ದರು. ಇದಾದ ಮೇಲೆ ಕೆಲವು ದಿನ ಅವರು ನನಗೆ ಚನ್ನಾಗಿ ನೋಡಿಕೊಂಡು ಮತ್ತೆ ಎಲ್ಲರೂ ಕೂಡಿ ನನಗೆ ರಂಡಿ ನೀನು ತವರು ಮನೆಯಿಂದ ಹಣ ಮತ್ತು ಕಾರ ತಂದರೆ ಮಾತ್ರ ನಮ್ಮ ಮನೆಯಲ್ಲಿ ಇರು ಇಲ್ಲಿದ್ದರೇ ನಮ್ಮ ಮನೆಯಲ್ಲಿ ಇರಬೇಡ ನಿನಗೆ ನಾಚಿಕೆ ಇಲ್ಲಾ ಅಂತ ಬೈಯುತ್ತಿದ್ದರು ಅಲ್ಲದೇ ಒಂದು ದಿನ ನನ್ನ ಗಂಡನು ತಾನು ನೌಕರಿ ಮೇಲೆ ಇದ್ದಾಗ ರಾತ್ರಿ ವೇಳೆಯಲ್ಲಿ ನಮ್ಮ ಅತ್ತೆಗೆ ಪೋನ ಮಾಡಿ ಆ ರಂಡಿ ಕಾರ ಮತ್ತು ಹಣ ತಗೆದುಕೊಂಡು ಬರದೇ ಇದ್ದರೆ ಅವಳಿಗೆ ಮನೆಯಲ್ಲಿ ಇಟ್ಟುಕೊಳ್ಳಬೇಡರಿ ಅಂತಾ ಹೇಳಿದಾಗ ದಿನಾಂಕ: 06-03-2018 ರಾತ್ರಿ ವೇಳೆಯಲ್ಲಿ ನಮ್ಮ ಅತ್ತೆ ಮತ್ತು ನಾದಿನಿಯಾದ ಬಸಮ್ಮ ಇಬ್ಬರೂ ಕೂಡಿ ನನಗೆ ಮನೆಯಿಂದ ಹೊರಗೆ ಹಾಕಿದ್ದು ನಾನು ಮರ್ಯಾದೆಗೆ ಅಂಜಿ ರಾತ್ರಿ ಪೂರ್ತಿ ಮನೆಯ ಮುಂದೆ ಮಲಗಿಕೊಂಡಿದ್ದೆನು ಇದಾದ ಮೇಲೆ ನನ್ನ ಗಂಡನು ಊರಿಗೆ ಬಂದಾಗ ಎಲ್ಲರೂ ಕೂಡಿ ನನಗೆ ಕೈಯಿಂದ ಹೊಡೆ-ಬಡೆ ಮಾಡಿ ಮನೆಯಿಂದ ಹೊರಗೆ ಹಾಕಿರುತ್ತಾರೆ. ಅದಕ್ಕಾಗಿ ಈಗ ಒಂದು ವರ್ಷದಿಂದ ನಾನು ನನ್ನ ತವರು ಮನೆಯಾದ ಮಡಕೇಶ್ವರ ಗ್ರಾಮಕ್ಕೆ ಹೋಗಿ ನನ್ನ ತವರು ಮನೆಯಲ್ಲಿಯೇ ಇರುತ್ತೆನೆ. ಅವರು ನನಗೆ ಇವತ್ತಲ್ಲಾ ನಾಳೆ ಕರೆದುಕೊಂಡು ಹೋಗಬಹುದು ಅಂತಾ ತಿಳಿದುಕೊಂಡು ನಾನು ತಾಳಿಕೊಂಡು ಇದ್ದರು ಕೂಡಾ ಅವರು ಹಣ ಮತ್ತು ಕಾರ ತರದೆ ಇದ್ದರೆ ನಮ್ಮ ಮನೆಗೆ ಬರಬೇಡ ಅಂತಾ ನನಗೆ ಮಾನಸಿಕ ಹಿಂಸೆ ಕೊಡುತ್ತಿರುವದ್ದರಿಂದ ಈಗ ನಾನು ನಮ್ಮ ಮನೆಯಲ್ಲಿ ನಮ್ಮ ತಂದೆ-ತಾಯಿಯವರ ಸಂಗಡ ವಿಚಾರ ಮಾಡಿಕೊಂಡು ತಡವಾಗಿರತ್ತದೆ. ನನ್ನ ಗಂಡನಾದ ಶಿವಶರಣ ಮತ್ತು ಅವರ ಮನೆಯವರಾದ 1] ಕಸ್ತೂರಿಬಾಯಿ ರಾಮನೂರ 2] ಯಮನೂರ ರಾಮನೂರ 3] ಬಸಮ್ಮ ಶಿವಣಗಿ 4] ದೇವಮ್ಮ ಜಂಬಗಿ 5] ನಿಂಗಪ್ಪ ಶಿವಣಗಿ 6] ರಮೇಶ ಜಂಬಗಿ 7] ಸಚೀನ ಜಂಬಗಿ ಎಲ್ಲರೂ ಕೂಡಿ ನನಗೆ ತವರು ಮನೆಯಿಂದ ವರದಕ್ಷಿಣೆಯಾಗಿ 5 ಲಕ್ಷ ರೂಪಾಯಿ ಮತ್ತು ಒಂದು ಕಾರ ತಗೆದುಕೊಂಡು ಬರುವಂತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದು ನನಗೆ ಕೈಯಿಂದ ಹೊಡೆಬಡೆ ಮಾಡಿ ಮನೆಯಿಂದ ಹೊರಗೆ ಹಾಕಿದ್ದು ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಹಿಳೆ ಕಾಣೆಯಾದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿದ್ದರಾಮ ತಂದೆ ಹಣಮಂತ ಪೂಜಾರಿ ಸಾ||ಬಂಕಲಗಾ  ರವರ ದಿನಾಂಕ 20-12-2019 ರಂದು  9-00 ಎ.ಎಮ್,ಸುಮಾರಿಗೆ ನಾನು ನಮ್ಮ ಮನೆಯಿಂದ ನನ್ನ ಹೆಂಡತಿಗೆ ಹೇಳಿ ಹೊಲಕ್ಕೆ ಹೊಗಿರುತ್ತೇನೆ ನಂತರ ನಾನು ಮಧ್ಯಾಹ್ನ 2 -00 ಗಂಟೆಗೆ ಉಟ ಮಾಡ ಬೆಕೆಂದು ಹೊಲದಿಂದ ಮನೆಗೆ ಬಂದಾಗ ಹೆಂಡತಿ ಮನೆಯಲ್ಲಿ ಇರಲಿಲ್ಲ. ನಂತರ ನಾನು ನಮ್ಮ ಮನೆಯ ಪಕ್ಕದಲ್ಲಿರುವ ನನ್ನ ದೊಡ್ಡಪ್ಪನ ಮಗನಾದ ನಿಂಗಪ್ಪ ತಂದೆ ತಿಪ್ಪಣ್ಣ ಪೂಜಾರಿ ಇವರಿಗೆ ವಿಚಾರಿಸಲಾಗಿ ನಾನು 12-00 ಪಿ,ಎಮ್,ಸುಮಾರಿಗೆ ನಮ್ಮ ಮನೆಯ ಮುಂದೆ ನಿಂತಿದ್ದಾಗ ಕೈಯಲ್ಲಿ ಬಕೇಟ ಮತ್ತು ಬಟ್ಟೆಗಳು ಹಿಡಿದುಕೊಂಡು ಬೋರಿ ಹಳ್ಳದ ಕಡೆ ಹೋಗಿರುತ್ತಾಳೆ ಅಂತ ತಿಳಿಸಿದನು ನನ್ನ ಹೆಂಡತಿಯು ಬಟ್ಟೆ ಒಗೆಯಲು ಹೊಗಿರಬಹುದು ಅಂತ ನಾನು  ಎರಡು-ಮೂರು ತಾಸು ಕಾಯಿದೆನು ನಂತರ ಬೋರಿ ಹಳ್ಳದ ಹತ್ತಿರ ಹೋಗಿ ನೋಡಿದರು ಅಲ್ಲಿ ನನ್ನ ಹೆಂಡತಿಯು ಇದ್ದರಲಿಲ್ಲ ಆಗ ನಾನು ಈ ವಿಷಯವನ್ನು ನನ್ನ ಹೆಂಡತಿಯ ತಂದೆಯಾದ ಸಿದ್ದಪ್ಪ ರವರಿಗೆ ಪೋನ ಮಾಡಿ ತಿಳಿಸಿ ನಾನು ಮತ್ತು ನನ್ನ ಮಾವ ಇಬ್ಬರು ಕೂಡಿ ನನ್ನ ಹೆಂಡತಿಗೆ ಎಲ್ಲಾ ಕಡೆ ಹುಡುಕಾಡಿದರು ನನ್ನ ಹೆಂಡತಿಯು ಸಿಕ್ಕಿರುವದಿಲ್ಲ ನನ್ನ ಹೆಂಡತಿ ಎಲ್ಲಿಯೂ ಪತ್ತೆ ಆಗಿರುವುದಿಲ್ಲಾ ನನ್ನ ಹೆಂಡತಿ ಲಕ್ಷಿ ಇವಳು ದಿನಾಂಕ 20-12-2019 ರಂದು ಮದ್ಯಾಹ್ನ 12 ಗಂಟೆಗೆ ನಮ್ಮ ಮನೆಯಿಂದ ಕಾಣೆಯಾಗಿರುತ್ತಾಳೆ.ನನ್ನ ಹೆಂಡತಿಯು ಸಂಪತ್ತ ತಂದೆ ಕರೆಪ್ಪ ಪೂಜಾರಿ ಸಾ||ಅಳ್ಳಗಿ ಇತನ ಸಂಗಡ ಹೋಗಿರಬಹುದು ಅಂತ ನನಗೆ ಸಂಶಯ ಇರುತ್ತದೆ ಕಾರಣ ನನ್ನ ಹೆಂಡತಿಯನ್ನು ಪತ್ತೆ ಮಾಡಬೆಕೆಂದು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ರೇವೂರ ಠಾಣೆ : ಶ್ರೀ ಶರಣಪ್ಪ ತಂದೆ ಪ್ರಭು ಜಳಕಿ ಸಾ|| ಕವಲಗಾ  ತಾ||ಆಳಂದ ರವರ ಮಗನಾದ ಶಿವಾನಂದ ಈತನಿಗೆ ಈಗ ಒಂದುವರೆ ವರ್ಷದಿಂದೆ ಅಫಜಲಪೂರ ತಾಲೂಕಿನ ಸಿದನೂರರ ಗ್ರಾಮದ ಭೀಮಶ್ಯಾ ಹಿಪ್ಪರಗಿ ರವರ ಮಗಳಾದ ಮಲ್ಲಮ್ಮಾ ಇವಳೊಂದಿಗೆ ಮದುವೆ ಮಾಡಿದ್ದು ಇರುತ್ತದೆ ನನ್ನ ಮಗ ಈಗ ಸುಮಾರು ಎರಡು ತಿಂಗಳಿಂದ  ಸಿನ್ನೂರ ಗ್ರಾಮದಲ್ಲಿಯೇ ತನ್ನ ಹೆಂಡತಿಯೊಂದಿಗೆ ಕೂಲಿ ಕೆಲಸ ಮಾಡಿಕೊಂಡಿರುತ್ತಾನೆ . ದಿನಾಂಕ 01/12/2019 ರಂದು 6.00 ಪಿಎಮ್ ಸುಮಾರಿಗೆ ನಾನು ನಮ್ಮ ಮನೆಯಲಿದ್ದಾಗ ನನ್ನ ಮಗನ ಹೆಂಡತಿಯಾದ ಮಲ್ಲಮ್ಮಾ  ಇವಳು  ನಮಗೆ ಮೊಬೈಲ ಮೂಲಕ ವಿಷಯ ತಿಳಿಸಿದ್ದೆನೆಂದರೆ ನಿಮ್ಮ ಮಗ ಶಿವಾನಂದ ಈತನು ಕವಲಗಿಗೆ ಹೋಗುತ್ತೇನೆ ಅಂತ ಇಂದು ಬೆಳಿಗ್ಗೆ 11.00 ಗಂಟೆಗೆ ನಮ್ಮ ಮನೆಯಿಂದ ಹೋಗಿರುತ್ತಾನೆ ಅಲ್ಲಿಗೆ ಬಂದಿರುತ್ತಾರೆ? ಹೇಗೆ ಅಂತ ವಿಚಾರಿಸಿದಾಗ ನಾನು ಶಿವಾನಂದ ಬಂದಿರುವುದಿಲ್ಲ ಅಂತ ತಿಳಿಸಿದೆನು ನಂತರ ನಾನು ಹಾಗು ನಮ್ಮ ಸಂಬಂದಿಕರಾದ ಭಿರಣ್ಣ ಮೇತ್ರೆ, ಶ್ರೀಶೈಲ ಯಳಸಂಗಿ ಮೂರು ಜನರು ಕೂಡಿ ಕೋಗನೂರ, ಮಂಟಗಿ, ಮುದ್ದಡಗಿ, ದಂಗಾಪೂರ,ನಿಂಬರ್ಗಾ, ಬಟ್ಟರಗಾ, ಜವಳಿ ಗ್ರಾಮಗಳಿಗೆ ಹೋಗಿ ನನ್ನ ಮಗನಿಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ ಹಾಗು ಸಿದನೂರ ಗ್ರಾಮದ ನನ್ನ ಮಗನ ಹೆಂಡತಿ ಹಾಗೂ ಅವರ ಮನೆಯವರು ಎಲ್ಲಾ ಕಡೆ ಹುಡುಕಾಡಿರುತ್ತಾರೆ ಮತ್ತು  ನಮ್ಮ ಸಂಬಂದಿಕರಿಗೆ ಪೊನ್ ಮೂಲಕ ವಿಚಾರಿಸಿ ಕೇಳಲಾಗಿ ನನ್ನ ಮಗನ ಬಗ್ಗೆ ಯಾವುದೇ ಮಾಹಿತಿ ದೊರೆಯದ ಕಾರಣ ಈಗ ತಡವಾಗಿ ಠಾಣೆಗೆ ಬಂದಿರುತ್ತೇನೆ.  ಕಾರಣ ನನ್ನ ಮಗನಾದ ಶಿವಾನಂದ ತಂದೆ ಶರಣಪ್ಪ ಜಳಕಿ ವ||26 ವರ್ಷ  ಇವನು  ದಿನಾಂಕ 01/12/2019 ರಂದು ಬೆಳಿಗ್ಗೆ 11.00 ಗಂಟೆ ಸುಮಾರಿಗೆ  ಅಫಜಲಪೂರ ತಾಲೂಕಿನ ಸಿದನೂರ ಗ್ರಾಮದ ತನ್ನ ಹೆಂಡತಿಯ ತವರು ಮನೆಯಿಂದ ಹೊದವನು ಮರಳಿ ಬಂದಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 December 2019

KALABURAGI DISTRICT REPORTED CRIMES

ಶ್ರೀಗಂಧದ ಕಟ್ಟಿಗೆಯನ್ನು ಕಳವುಮಾಡುತ್ತಿದ್ದವರ ಬಂಧನ :
ನರೋಣಾ ಠಾಣೆ : ದಿನಾಂಕ:22/12/2019 ರಂದು ಮುಂಜಾನೆ ಬಸವನಸಂಗೋಳಗಿ ಗ್ರಾಮ ಸೀಮಾಂತರದಲ್ಲಿ ಬರುವ ಬಸವನಸಂಗೋಳಗಿ ಮತ್ತು ಗುಂಜಬಬಲಾದ ರೋಡಿಗೆ ಇರುವ ಮಲ್ಲಯ್ಯ ಮುತ್ಯಾನ ಗುಂಪಾದ ಕಮಾನ್ ಹತ್ತಿರ ಎಲ್ಲರೂ ಸೇರಿ, ರೋಡಿಗೆ ಹೋಗಿ ಬರುವ ವಾಹನಗಳಿಗೆ ಮೊಟಾರ್ ವಾಹನ ಕಾಯ್ದೆ ಅಡಿಯಲ್ಲಿ ದಂಡ ವಿಧಿಸುವ ಕರ್ತವ್ಯಕ್ಕಾಗಿ ತಪಾಸಣೆ ಮಾಡುತ್ತಾ ನಿಂತಾಗ ಬಸವನಸಂಗೋಳಗಿ ಕಡೆಯಿಂದ ಒಂದು ಮೊಟಾರ್ ಸೈಕಲ್ ಮೇಲೆ ಎರಡು ಜನ ವ್ಯಕ್ತಿಗಳು ಒಬ್ಬರ ಹಿಂದೆ ಒಬ್ಬರು ಕುಳಿತಕೊಂಡು ಹೊರಟಿದ್ದು ನಾವು ಕೈಮಾಡಿ ನಿಲ್ಲಿಸಿದಾಗ ಮೊಟಾರ್ ಸೈಕಲ್ ಮೇಲೆ ಬಂದ ವ್ಯಕ್ತಿಗಳು ಮೊಟಾರ್ ಸೈಕಲ್ ನಿಲ್ಲಿಸಿದ್ದು ಮೊಟಾರ್ ಸೈಕಲ್ ಮೇಲೆ ನಡುವೆ ಒಂದು ಕೊಡಲಿ ಹಾಗೂ ಒಂದು ಬಟ್ಟೆಯಿಂದ ಸುತ್ತಿದ ಗಂಟು ಇದ್ದು,  ಇಬ್ಬರು ಮೊಟಾರ್ ಸೈಕಲ್ ಮೇಲಿದ್ದ ಗಂಟು ಮತ್ತು ಕೊಡಲಿ ಹಾಗೂ ಮೊಟಾರ್ ಸೈಕಲ್ ಇವುಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಲು ಪ್ರಾರಂಭಿಸಿದರು, ಸಂಶಯ ಬಂದು ನಾನು ಮತ್ತು ಸಿಬ್ಬಂದಿಯವರು ಎಲ್ಲರೂ ಸೇರಿ ಓಡಿಹೊಗುತ್ತಿರುವ ಎರಡುಜನ ವ್ಯಕ್ತಿಗಳಿಗೆ ಬೆನ್ನಹತ್ತಿ ಹಿಡಿದು ವಿಚಾರಿಸಿದಾಗ ತಮ್ಮ ಹೆಸರು 1)ವಿಜಯಕುಮಾರ ತಂದೆ ಸುಭಾಷ ಮಾನೆ, ಸಾ:ಮಂಠಾಳ, ತಾ:ಬಸವಕಲ್ಯಾಣ, ಜಿಲ್ಲಾ:ಬೀದರ, 2)ಸಂದೀಪ ತಂದೆ ಗುರುನಾಥ ಜಾದವ್, ಸಾ:ವಿಶ್ವನಗರ ಬಸವಕಲ್ಯಾಣ ಪಟ್ಟಣ, ಜಿಲ್ಲಾ:ಬೀದರ ಅಂತಾ ತಿಳಿಸಿದರು. ಅವರು ಮೊಟಾರ್ ಸೈಕಲ್ ಮೇಲೆ ತಂದಂತಹ ಬಟ್ಟೆಗಂಟು ಅವರಿಂದ ಬಿಚ್ಚಿಸಿ ನೋಡಿದಾಗ ಅದರಲ್ಲಿ ಸಣ್ಣಸಣ್ಣ ಕಟ್ಟಿಗೆಯ 6 ತುಂಡುಗಳಿದ್ದು, ಪರಿಶೀಲಿಸಲಗಿ ಶ್ರೀಗಂಧ ಕಟ್ಟೆಗೆಯ ವಾಸನೆ ಬರುತ್ತಿದ್ದು. ಅದೇ ಗಂಟಿನಲ್ಲಿ ಎರಡು ಛಾನಾ, ಎರಡು ಕಾವುಯಿಲ್ಲದ ಕೊಡಲಿಗಳು ಇದ್ದು, ಅವರನ್ನು ವಿಚಾರಿಸಿದಾಗ ಅವರು ಬಸವನಸಂಗೋಳಗಿ ಸೀಮಾಂತರದಲ್ಲಿ ಬೆಳೆದ ಶ್ರೀಗಂಧ ಕಟ್ಟೆಗೆಯ ಗಿಡವನ್ನು ಬೆಳಿಗ್ಗೆ 6-30 ಗಂಟೆಗೆ ಯಾವುದೇ ಅನುಮತಿ ಇಲ್ಲದೆ ಕಳ್ಳತನದಿಂದ ಕಡಿದು ಅದರಲ್ಲಿರುವ ಶ್ರೀಗಂಧದ ಅಂಶವಿರುವ ತುಂಡುಗಳನ್ನ ಮಾತ್ರ ಬೇರ್ಪಡಿಸಿಕೊಂಡು ಇವುಗಳನ್ನು ಮಹಾರಾಷ್ಟ್ರದಲ್ಲಿ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿದ್ದೇವೆ. ಅಂತಾ ತಿಳಿಸಿದ್ದು.  ಇದರ ಬಗ್ಗೆ ನಾನು ಮಾನ್ಯ ಡಿ.ವೈ.ಎಸ್.ಪಿ ಸಾಹೇಬರು ಆಳಂದ ಹಾಗೂ ಸಿಪಿಐ ಸಾಹೇಬರು ಆಳಂದ ರವರಿಗೆ ಮಾಹಿತಿ ನೀಡಿ ಅವರ ಮಾರ್ಗದರ್ಶನದಲ್ಲಿ ಸದರಿ ಶ್ರೀಗಂಧದ ಕಟ್ಟಿಗೆಯನ್ನು ಜಪ್ತಿ ಮಾಡುವ ಸಲುವಾಗಿ ಇಬ್ಬರು ಪಂಚರನ್ನು  ಬರಮಾಡಿಕೊಂಡಿದ್ದು ಸದರಿಯವರಿಗೆ ವಿಷಯ ತಿಳಿಸಿ ಪಂಚರಾಗಿ, ಜಪ್ತಿ ಪಂಚನಾಮೆ ನೆರವೆರಿಸಿಕೊಡಲು ಕೇಳಿಕೊಂಡ ಮೇರೆಗೆ ಸದರಿಯವರು ಒಪ್ಪಿಕೊಂಡಿದ್ದು, ಪಂಚರ ಸಮಕ್ಷಮದಲ್ಲಿ ಆಪಾದೀತರಿಂದ 1)ಒಂದು ಸುಮಾರು 13 ಇಂಚನಷ್ಟು ಉದ್ದ ಮತ್ತು 9 ಇಂಚನಷ್ಟು ಸುತ್ತಳತೆ ಹೊಂದಿದ್ದ ಶ್ರೀಗಂಧದ ಕಟ್ಟಿಗೆ ತೂಕಮಾಡಿ ನೋಡಿದಾಗ 1 ಕೆ.ಜಿ ಯಷ್ಟು ಇರುತ್ತದೆ. 2)ಒಂದು ಸುಮಾರು 16 ಇಂಚನಷ್ಟು ಉದ್ದ ಮತ್ತು 8 ಇಂಚನಷ್ಟು ಸುತ್ತಳತೆ ಹೊಂದಿದ್ದ ಶ್ರೀಗಂಧದ ಕಟ್ಟಿಗೆ ತೂಕಮಾಡಿ ನೋಡಿದಾಗ 1 ಕೆ.ಜಿ ಯಷ್ಟು ಇರುತ್ತದೆ. 3)ಒಂದು ಸುಮಾರು 15 ಇಂಚನಷ್ಟು ಉದ್ದ ಮತ್ತು 7 ಇಂಚನಷ್ಟು ಸುತ್ತಳತೆ ಹೊಂದಿದ್ದ ಶ್ರೀಗಂಧದ ಕಟ್ಟಿಗೆ ತೂಕಮಾಡಿ ನೋಡಿದಾಗ 500 ಗ್ರಾಮನಷ್ಟು ಇರುತ್ತದೆ. 4)ಒಂದು ಸುಮಾರು 14 ಇಂಚನಷ್ಟು ಉದ್ದ ಮತ್ತು 7 ಇಂಚನಷ್ಟು ಸುತ್ತಳತೆ ಹೊಂದಿದ್ದ ಶ್ರೀಗಂಧದ ಕಟ್ಟಿಗೆ ತೂಕಮಾಡಿ ನೋಡಿದಾಗ 500 ಗ್ರಾಮದಷ್ಟು ಇರುತ್ತದೆ. 5)ಒಂದು ಸುಮಾರು 16 ಇಂಚನಷ್ಟು ಉದ್ದ ಮತ್ತು 9 ಇಂಚನಷ್ಟು ಸುತ್ತಳತೆ ಹೊಂದಿದ್ದ ಶ್ರೀಗಂಧದ ಕಟ್ಟಿಗೆ ತೂಕಮಾಡಿ ನೋಡಿದಾಗ 800 ಗ್ರಾಮದಷ್ಟು ಇರುತ್ತದೆ. 6)ಒಂದು ಸುಮಾರು 17 ಇಂಚನಷ್ಟು ಉದ್ದ ಮತ್ತು 6 ಇಂಚನಷ್ಟು ಸುತ್ತಳತೆ ಹೊಂದಿದ್ದ ಶ್ರೀಗಂಧದ ಕಟ್ಟಿಗೆ ತೂಕಮಾಡಿ ನೋಡಿದಾಗ 700 ಗ್ರಾಮದಷ್ಟು ಇರುತ್ತದೆ. ಎಲ್ಲವುಗಳನ್ನು ಒಟ್ಟಿಗೆ ತೂಕಮಾಡಿದಾಗ ಅಂದಾಜು 4.5 ಕೆ.ಜಿ ಯಷ್ಟಿದ್ದು ಒಟ್ಟು ಶ್ರೀಗಂಧದ ಕಟ್ಟಿಗೆಗಳ ಅಂ.ಕಿ 13500/- ರಾಪಾಯಿ ಆಗುತ್ತದೆ ನಂತರ ಬಟ್ಟೆ ಗಂಟಿನಲ್ಲಿದ್ದ 7)ಎರಡು ಛಾನಾ ಅಂ.ಕಿ ಇರುವುದಿಲ್ಲ. ಹಾಗೂ 8)ಕಾವುಯಿಲ್ಲದ ಎರಡು ಕೊಡಲಿಗಳು ಅಂ.ಕಿ ಇರುವುದಿಲ್ಲ. ಹಾಗೂ 9)ಕಾವು ಸಮೇತ ಒಂದು ಕೊಡಲಿ ಅಂ.ಕಿ ಇರುವುದಿಲ್ಲ. 10)ಹಿರೋ ಕಂಪನಿಯ ಸ್ಪೈಂಡರ್ ಪ್ಲಸ್ ಮೊಟಾರ್ ಸೈಕಲ್ ಸಿಲವರ್ ಬಣ್ಣದ್ದು, ಅದರ ನಂಬರ್ ಕೆಎ56-ಹೆಚ್7842 ಅಂ.ಕಿ 20000/- ರೂಪಾಯಿ ಇವುಗಳನ್ನು ಪಂಚರ ಸಮಕ್ಷಮದಲ್ಲಿ ಆಪಾದೀತರಿಂದ ಜಪ್ತಿ ಪಡಿಸಿಕೊಂಡು ಸದರಿವರನ್ನು ವಶಕ್ಕೆ ಪಡೆದು ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ನರೋಣಾ ಠಾಣೆ : ದಿನಾಂಕ:21/12/2019 ರಂದು ನರೋಣಾ ಪೊಲೀಸ ಠಾಣಾ ವ್ಯಾಪ್ತಿಯ ಅಂಬಲಗಾ ಗ್ರಾಮದಲ್ಲಿರುವ ಕರಲಿಂಗೇಶ್ವರ ದೇವಸ್ಥಾನದ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ಹಾಗೂ ಸಿ.ಪಿ. ಸಾಹೇಬರು ಆಳಂದರವರ ಮಾರ್ಗದರ್ಶನದಲ್ಲಿ, ಪಿ.ಎಸ್.ಐ. ನರೋಣಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಂಬಲಗಾ ಗ್ರಾಮದಲ್ಲಿರುವ ಕರಲಿಂಗೇಶ್ವರ ಕಟ್ಟೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಕರಲಿಂಗೇಶ್ವರ ದೇವಸ್ಥಾನದ ಕಟ್ಟೆಯ ಮುಂದಿನ ರೋಡಿನ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಾ ಸಾರ್ವಜನಿಕರಿಗೆ ಮೊಸ ಮಾಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಕಾಳಪ್ಪಾ ತಂದೆ ಚನ್ನಪ್ಪಾ ಯಳವಂತಗಿ, ಸಾ:ಅಂಬಲಗಾ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1]ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2) ಒಂದು ಬಾಲ ಪೆನ್‌ 3) ನಗದು ಹಣ 10,050/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನಿಗೆ ವಶಕ್ಕೆ ತೆಗೆದುಕೊಂಡು ನರೋಣಾ ಪೊಲೀಸ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣಗಳು :
ನೆಲೋಗಿ ಠಾಣೆ : ಶ್ರೀಕುಪ್ಪಣ್ಣ ತಂದೆ ಶಾಂತಪ್ಪ ತಳವಾರ ಸಾ:ಕಲ್ಲೂರ(ಬಿ) ತಾ:ಜೇವರಗಿ ಜಿ:ಕಲಬುರಗಿ ರವರ ಮಗ ದಿನಾಂಕ: 22-12-2019 ರಂದು ಸಾಯಂಕಾಲ-3.30 ಗಂಟೆಯ ಸುಮಾರಿಗೆ ನನ್ನ ಮಗ ಸಚೀನ ಇತನು ನಮ್ಮೂರಿನಿಂದ ಖಾಸಗಿ ಕೆಲಸದ ಪ್ರಯುಕ್ತ ಮಂದೆವಾಲ ಗ್ರಾಮಕ್ಕೆ ಮೋಟಾರ ಸೈಕಲ ನಂ. KA-32 EU-2119 ನೇದ್ದರ ಮೇಲೆ ಕಲ್ಲೂರ(ಬಿ) ಗ್ರಾಮದಿಂದ ಹೋಗುತ್ತಿದ್ದಾಗ, ಕಲ್ಲೂರ(ಕೆ) ಬಸ್ ನಿಲ್ದಾಣದ ಹತ್ತೀರ ಒಬ್ಬ ಅಪರಿಚಿತ ವ್ಯಕ್ತಿ ಮಂದೆವಾಲ ಗ್ರಾಮದವರೆಗೆ ಬರುವದಾಗಿ ಹೇಳಿ ನನ್ನ ಮಗನ ಮೋಟಾರ ಸೈಕಲನ ಹಿಂದಿನ ಸೀಟಿನಲ್ಲಿ ಕುಳಿತುಕೊಂಡು ಹೋಗಿರುತ್ತಾನೆ. ನನ್ನ ಮಗ ಸಚೀನ ಇತನು ಮೋಟಾರ ಸೈಕಲನ್ನು  ಚಲಾಯಿಸಿಕೊಂಡು ಹೊದ ಸ್ವಲ್ಪ ಸಮಯದ ನಂತರ ನಮ್ಮೂರಿನ ಮಲ್ಲಿಕಾರ್ಜುನ ತಂದೆ ದೇವಿಂದ್ರಪ್ಪ ತಾಳಿಕೋಟಿ ಇತನು ಪೋನ ಮಾಡಿ ವಿಷಯ ತಿಳಿಸಿದ್ದೇನೆಂದರೇ, ಮಂದೆವಾಲ ಗ್ರಾಮದ ಹತ್ತೀರ ಭಾಗವಾನ ಇವರ ತೊಟದ ಹತ್ತೀರ ಮಂದೆವಾಲ-ಕಲ್ಲೂರ(ಕೆ) ರೋಡಿನ ಮೇಲೆ ನನ್ನ ಮಗ ಸಚೀನ ಇತನ ಮೋಟಾರ ಸೈಕಲ ಅಪಘಾತವಾಗಿರುತ್ತದೆ ಅಂತಾ ತಿಳಿಸಿದ್ದರಿಂದ  ನಾನು ಮತ್ತು ನಮ್ಮೂರಿನ ಮಲ್ಲಿನಾಥ ತಂದೆ ಸಾಹೇಬಗೌಡ ಪ್ಯಾಟಿ, ರಾಜಕುಮಾರ ತಂದೆ ಭುತಾಳೆಪ್ಪ ಓಡೆಯರ ಹಾಗೂ ನನ್ನ ಅಣ್ಣನ ಮಗನಾದ ಶಿವರಾಜ ತಂದೆ ಮಲ್ಕಣ್ಣ ತಳವಾರ ಎಲ್ಲರೂ ಗಾಭರಿಯಾಗಿ ಹೋಗಿ ನೋಡಲಾಗಿ, ವಿಷಯ ನಿಜವಿದ್ದು ಸಚೀನ ಇತನಿಗೆ ತಲೆಗೆ ಭಾರಿ ರಕ್ತಗಾಯ, ಬಲಗಡೆ ಕಪಾಳಕ್ಕೆ ರಕ್ತಗಾಯ ಹಾಗೂ ಎದೆಗೆ ಗುಪ್ತಗಾಯವಾಗಿದ್ದು, ನನ್ನ ಮಗನ ಹಿಂದಿನ ಸೀಟಿನಲ್ಲಿ ಕುಳಿತ ವ್ಯಕ್ತಿಗೆ ತಲೆಗೆ, ಎಡಗೈಗೆ ರಕ್ತಗಾಯಗಳಾಗಿದ್ದು ಅವನ ಹೆಸರು ವಿಚಾರಿಸಲಾಗಿ ಮರೆಪ್ಪ ತಂದೆ ಅಮಲಪ್ಪ ಸಾ:ಮುದಬಾಳ(ಬಿ) ತಾ;ಜೇವರಗಿ ಅಂತಾ ಗೊತ್ತಾಗಿದ್ದು, ನನ್ನ ಮಗನ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿದ ಮಹಿಂದ್ರಾ ಪಿಕಾಪ್ ವಾಹನ ಸಂಖ್ಯೆ KA-32 D-0318 ವಾಹನ ಕೂಡಾ ಘಟನಾ ಸ್ಥಳದಲ್ಲಿಯೇ ನಿಂತಿತ್ತು. ಕೂಡಲೆ ನಾವು ನನ್ನ ಮಗನಿಗೆ ಖಾಸಗಿ ವಾಹನದಲ್ಲಿ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ  ಮಂದೆವಾಲಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡ್ಸಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ತೆಗೆದುಕೊಂಡು ಹೋಗುವಾಗ ಕಲಬುರಗಿ ಸಮೀಪ ಮಾರ್ಗ ಮಧ್ಯದಲ್ಲಿ ಸಾಯಂಕಾಲ ನನ್ನ ಮಗ ಸಚೀನ ಇತನು ಮೃತಪಟ್ಟಿರುತ್ತಾನೆ. ದಿನಾಂಕ: 22-12-2019 ರಂದು ಸಾಯಂಕಾಲ ನನ್ನ ಮಗ ಸಚೀನ ಇತನು ಮೋಟಾರ ಸೈಕಲ ನಂ. KA-32 EU-2119 ನೇದ್ದನ್ನು ಚಲಾಯಿಸಿಕೊಂಡು ಮಂದೆವಾಲ ಗ್ರಾಮಕ್ಕೆ ಹೋಗುತ್ತಿದ್ದಾಗ ಮಂದೆವಾಲ ಗ್ರಾಮದ ಹತ್ತೀರ  ಮಂದೆವಾಲ-ಕಲ್ಲೂರ(ಕೆ) ರೋಡಿನ ಮೇಲೆ ಎದುರಿನಿಂದ ಒಂದು ಮಹಿಂದ್ರಾ ಪಿಕಾಪ್ ವಾಹನ ಸಂಖ್ಯೆ KA-32 D-0318 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಡಿಕ್ಕಿ ಪಡಿಸಿದ್ದರಿಂದ ನನ್ನ ಮಗನಿಗೆ ತಲೆಗೆ, ಮುಖಕ್ಕೆ ಹಾಗೂ ಎದೆಗೆ ಭಾರಿ ರಕ್ತ & ಗುಪ್ತಗಾಯಗಳಾಗಿ ಮೃತ ಪಟ್ಟಿರುತ್ತಾನೆ ಮತ್ತು ನನ್ನ ಮಗನ ಮೋಟಾರ ಸೈಕಲ ಹಿಂದೆ ಕುಳಿತಿರುವ ಮರೆಪ್ಪ ತಂದೆ ಅಮಲಪ್ಪ ಸಾ:ಮುದಬಾಳ(ಬಿ) ಇತನಿಗೆ ತಲೆಗೆ, ಎಡಗೈಗೆ ಗಾಯಗಳಾಗಿರುತ್ತವೆ. ಈ ಘಟನೆಯ ನಂತರ ನನ್ನ ಮಗನ ಮೋಟಾರ ಸೈಕಲಗೆ  ಡಿಕ್ಕಿಪಡಿಸಿದ ಮಹಿಂದ್ರಾ ಪಿಕಾಪ್ ವಾಹನ ಸಂಖ್ಯೆ KA-32 D-0318 ನೇದ್ದರ ಚಾಲಕನು ತನ್ನ ವಾಹನ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅವನ ಹೆಸರು ಮತ್ತು ವಿಳಾಸ ಗೊತ್ತಾಗಿರುವದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀಮತಿ ವೈಶಾಲಿ ಗಂಡ ದೇವರಾಜ ಜಮಾದಾರ ಸಾ|| ಹೊನ್ನಳ್ಳಿ ತಾ|| ಆಳಂದ ರವರ ಗಂಡ ದೇವರಾಜ ಇವರು ಜೆಸಿಬಿ ಆಪರೇಟರ್ ಇದ್ದು ಬೇರೆ ಕಡೆಗೆ ಕೆಲಸಕ್ಕೆ ಹೋಗಿ ಬಂದು ಮಾಡುತ್ತಿರುತ್ತಾರೆ. ಈಗ 05 ದಿವಸಗಳ ಹಿಂದೆ ನನ್ನ ಗಂಡ ಉಮರ್ಗಾಕ್ಕೆ ಜೆಸಿಬಿ ಆಪರೇಟರ್ ಕೆಲಸಕ್ಕೆ ಹೋಗಿದ್ದು ಮನೆಯಲ್ಲಿ ನಾನು ಮಕ್ಕಳು & ಮಾವ ನಾಗನಾಥ ಇರುತ್ತೆವೆ, ದಿನಾಂಕ 22/12/2019 ರಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ನಾನು ಮನೆಯ ಮುಂದುಗಡೆ ಕೆಲಸ ಮಾಡುವಾಗ ನನ್ನ ಮಗ ದಿಗ್ವಿಜಯ ಇತನು ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಆಟವಾಡುತ್ತಾ ಹೋಗಿದ್ದು ಅದೇ ಸಮಯಕ್ಕೆ ನಮ್ಮೂರಿನ ರಾಜೇಂದ್ರ ಹದರೆ ರವರ ಅಶೋಕ ಲೇಲಂಡ ಮೀನಿ ಗೂಡ್ಸ ವಾಹನ ನಂ ಕೆಎ 32 ಡಿ 0426 ನೇದ್ದನ್ನು ಚಾಲಕ ನಡೆಸಿಕೊಂಡು ಬಂದು ನಮ್ಮ ಮನೆಯ ಮುಂದುಗಡೆ ನಿಲ್ಲಿಸಿದಾಗ ನನ್ನ ಮಗನು ವಾಹನದ ಮುಂದೆ ಆಟವಾಡುತ್ತಾ ಹೋದಾಗ ವಾಹನದ ಚಾಲಕ ಹಿಂದೆ ಮುಂದೆ ನೋಡದೆ ವಾಹನವನ್ನು ಚಾಲು ಮಾಡಿ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ನನ್ನ ಮಗನಿಗೆ ಡಿಕ್ಕಿ ಪಡಿಸಿದ್ದರಿಂದ ನನ್ನ ಮಗ ವಾಹನದ ಕೆಳಗಡೆ ಸಿಕ್ಕಿ ಬಿದ್ದಿದ್ದು ಕೂಡಲೆ ನಾನು ಹಾಗೂ ನನ್ನ ಮಾವ ನಾಗನಾಥ & ಪಕ್ಕದ ಮನೆಯ ಶರಣಪ್ಪ ತಂದೆ ಭೀಮಶಾ ಕಾಮಣೆ ಎಲ್ಲರೂ ಕೂಡಿ ಓಡಿ ಹೋಗಿ ನನ್ನ ಮಗನಿಗೆ ಗೂಡ್ಸ ವಾಹನದ ಕೆಳಗಡೆಯಿಂದ ಹೊರಗೆ ತೆಗೆದು ನೋಡಲಾಗಿ ಆತನ ಬಲಭಾಗದ ಮೆಲಕಿನ ಹತ್ತಿರ ಭಾರಿ ಗುಪ್ತಗಾಯವಾಗಿ ಮೂಗಿನಿಂದ ರಕ್ತ ಬಂದು ಎದೆಗೆ ತರಚಿದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಅಪಘಾತ ಪಡಿಸಿದ ಗೂಡ್ಸ ವಾಹನದ ಚಾಲಕ ತನ್ನ ವಾಹನವನ್ನು ಅಲ್ಲೆ ಬಿಟ್ಟು ಓಡಿ ಹೋಗಿದ್ದು ಆತನ ಹೆಸರು ವಿಚಾರಿಸಲಾಗಿ ಚಂದ್ರಕಾಂತ ತಂದೆ ಅಣ್ಣಪ್ಪ ನಿರಗುಡಿ ಸಾ|| ಕಿಣ್ಣಿಸುಲ್ತಾನ ತಾ|| ಆಳಂದ ಗೊತ್ತಾಗಿರುತ್ತದೆ.ನಂತರ ನನ್ನ ಮಗನಿಗೆ ನಾವೆಲ್ಲರೂ ಹಾಗೂ ನಮ್ಮ ಗ್ರಾಮದ ದತ್ತಾ ತಂದೆ ಸೈಬಣ್ಣಾ ಅಟ್ಟೂರ, ದತ್ತಾತ್ರೇಯ ರಾಹುಸಾಬ ಜಮಾದಾರ ಎಲ್ಲರೂ ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಆಳಂದ ಸರ್ಕಾರಿ ಆಸ್ಪತ್ರೆಗೆ ತಂದು ಶವಗಾರ ಕೋಣೆಯಲ್ಲಿ ಇಟ್ಟಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಕರಬಸಯ್ಯಾ ತಂದೆ ಸೋಮನಾತಯ್ಯಾ ಹಿರೇಮಠ ಸಾ|| ಬಿಳವಾರ ಗ್ರಾಮ ರವರು ದಿನಾಂಕ 22-12-2019 ರಂದು ಮದ್ಯಾಹ್ನ 1;00 ಗಂಟೆಯಿಂದ 1;30 ಗಂಟೆಯ ಮದ್ಯದಲ್ಲಿ ಯಾರೋ ಕಳ್ಳರು ನಮ್ಮ ಸೋದರ ಅತ್ತೆ ಸರಸ್ವತಿ ಹಿರೇಮಠ ರವರ ಮನೆಯ ಬಾಗಿಲ ಕೀಲಿಯನ್ನು ಮುರಿದು, ಒಳಗೆ ಪ್ರವೇಶ ಮಾಡಿ ಕಬ್ಬಿಣದ ಪೆಟ್ಟಿಗಿಯನ್ನು ಹೊರಗೆ ತೆಗೆದುಕೋಂಡು ಹೋಗಿ ಅದರ ಕೊಂಡಿಯನ್ನು ಮುರಿದು ಅದರಲ್ಲಿದ್ದ ಒಟ್ಟು 50,000/- ರೂ ಕಿಮ್ಮತ್ತಿನ ಬಂಗಾರದ ಸಾಮಾನುಗಳು ಮತ್ತು 19,000/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ಬಂಗಾರದ ಸಾಮಾನುಗಳನ್ನು ಪತ್ತೆಮಾಡಿ ಕೊಡಬೆಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಆಣೆ : ಶ್ರೀ ಬಲಭೀಮ ತಂದೆ ಮೇಲಪ್ಪ ಬಳೂಂಡಗಿ ಸಾ|| ಆನೂರ ರವರು ದಿನಾಂಕ 22-12-2019 ರಂದು ರವಿವಾರ ದಿವಸ ಸಂಜೆ 6:00 ಗಂಟೆಯ ಸಮಯದಲ್ಲಿ ನಮ್ಮೂರಿನ ಬಸವೇಶ್ವರ ಚೌಕದಿಂದ ನನ್ನ ಮನೆಯ ಕಡೆಗೆ  ಬರುತ್ತಿರುವಾಗ ಆನೂರ ಗ್ರಾಮದವರೆ ಆದ 1) ಜಾವುದ್ದಿನ್ ತಂದೆ ಮಿಟ್ಟುಸಾಬ ಜೇರಟಗಿ ಹಾಗೂ ಆತನ ತಂದೆಯಾದ 2) ಮಿಟ್ಟುಸಾಬ ತಂದೆ ಇಮಾಮಸಾಬ ಜೇರಟಗಿ ಇವರಿಬ್ಬರು ಕೂಡಿಕೊಂಡು ನನ್ನನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ಅಂಗಿಯ ಕಾಲರನ್ನು ಹಿಡಿದು ಜಗ್ಗುತ್ತಾ ಕೈಯಿಂದ ಹೊಡೆದು ಬೋಸಡಿ ಮಗನೆ ನನ್ನ ಮನೆಯ ಹಿಂದಿನ ಭಾಗದಲ್ಲಿ ಏರಟೇಲ ಟವರ ಕೂಡಿಸುತ್ತಿಯಾ ಮಗನೆ ಅಂತಾ ಕೈಯಿಂದ ಹೊಡೆಯುವುದಲ್ಲದೆ ನನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜಗ್ಗಾಡ ಹತ್ತಿದರು. ಆಗ ಅಲ್ಲಿಯೆ ಹತ್ತಿರದಲ್ಲಿದ್ದ ಕಾಳಪ್ಪ ತಂದೆ ಮಲಕಪ್ಪ ಮಾಂಗ (ಸಾ|| ಆನೂರ) ಈತನು ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 December 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಸಿದ್ದಣ್ಣ ತಂದೆ ನಿಂಗಪ್ಪ ಬಡಿಗೆರ ಸಾ|| ಬೆಣ್ಣೂರ ರವರು ದಿನಾಂಕ 18-12-2019 ರಂದು ನಮ್ಮ ಅಣ್ಣನ ಹೆಂಡತಿ ಶಿವಕಾಂತಮ್ಮ ಇವರ ತಮ್ಮನಾದ ಮುತ್ತಪ್ಪ ತಂದೆ ರಾಮಣ್ಣ ಬಡಿಗೆರ ಸಾ|| ಕುಮ್ಮನಸಿರಸಗಿ ಇವರು ತಮ್ಮ ಮೋಟರ ಸೈಕಲ್ ನಂ ಕೆ.-32/.ಎಫ್-6296 ನೇದ್ದನ್ನು ತೆಗೆದುಕೊಂಡು ನಮ್ಮ ಮನೆಗೆ ಬಂದಿದ್ದರು, ನಂತರ ನಿನ್ನೆ ಬೆಳಿಗ್ಗೆ 10;00 ಗಂಟೆ ಸುಮಾರಿಗೆ ನಮ್ಮ ಅಣ್ಣನ ಹೆಂಡತಿ ಶಿವಕಾಂತಮ್ಮ ಗಂಡ ಸಿದ್ದಲಿಂಗಪ್ಪ ಇವರು ತಮ್ಮ ತಮ್ಮನ ಮೋಟರ ಸೈಕಲ ಮೇಲೆ ಹಿಂದೆ ಕುಳಿತು ಸಂಬಂಧಿಕರಿಗೆ ಬೇಟಿಯಾಗಲು ಇಜೇರಿ ಗ್ರಾಮಕ್ಕೆ ಹೋಗಿದ್ದರು, 3;40 ಪಿ.ಎಂ ಸುಮಾರಿಗೆ ನಮ್ಮೂರಿನ ಬಾಬುರಾಯ ತಂದೆ ಮಹಾದೇವಪ್ಪ ಅರಳಗುಂಡಗಿ ಇವರು ನನಗೆ ಫೋನ ಹೇಳಿದ್ದೇನೆಂದರೆ, ಇದೀಗ 3;30 ಪಿ.ಎಂ ಸುಮಾರಿಗೆ ನಾನು ನಮ್ಮೂರಿಗೆ ಹೋಗುವ ಸಲುವಾಗಿ ಕರಕಿಹಳ್ಳಿ ಹತ್ತಿರ ಇರುವ ಕುಕ್ಕನೂರ ಕ್ರಾಸಬಳಿ ನಿಂತಾಗ ನಿಮ್ಮ ಅಣ್ಣನ ಹೆಂಡತಿ ಮತ್ತು ಅವರ ತಮ್ಮ ಮುತ್ತಪ್ಪ ಎಂಬುವರು ತಮ್ಮ ಮೋಟರ ಸೈಕಲ ಮೇಲೆ ಇಜೇರಿ ಕಡೆಯಿಂದ ಬರುತ್ತಿದ್ದಾಗ ಕುಕನೂರ ಕ್ರಾಸ್ ಹತ್ತಿರ ಹಿಂದಿನಿಂದ ಮೋಟರ ಸೈಕಲ್ ನಂ ಕೆ.-32/ಇಟಿ-4596 ನೇದ್ದರ ಸವಾರನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಮೋಟರ ಸೈಕಲನ್ನು ಚಲಾಯಿಸಿಕೊಂಡು ಬಂದು ಮುತ್ತಪ್ಪನ ಮೋಟರ ಸೈಕಲಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ, ನಂತರ ನಾನು ನೋಡಲಾಗಿ ನಿಮ್ಮ ಅಣ್ಣನ ಹೆಂಡತಿಯ ತಲೆಯ ಹಿಂದೆ ಜೋರಾಗಿ ಬಡಿದು ರಕ್ತಗಾಯವಾಗಿ ಭಾರಿ ಒಳಪೆಟ್ಟಾಗಿರುತ್ತದೆ, ಸದ್ಯ ಅವರು ಮಾನಾಡುತ್ತಿಲ್ಲಾ, ಮುತ್ತಪ್ಪನಿಗೆ ಎಡಗೈ ಹಸ್ತದ ಹತ್ತಿರ ಸ್ವಲ್ಪ ತರಚಿದಗಾಯವಾಗಿರುತ್ತದೆ, ಅಪಘಾತ ಪಡಿಸಿದ ಮೋಟರ ಸೈಕಲ್ ಹಿಂದೆ ಕುಳಿತವನಿಗೆ ತಲೆಗೆ ರಕ್ತಗಾಯವಾಗಿರುತ್ತದೆ, ನೀವು ಬೇಗ ಬನ್ನಿ ಅಂತಾ ಹೇಳಿದ ಕೂಡಲೆ ನಾನು ಮತ್ತು ನಮ್ಮ ಅಣ್ಣ ಸಿದ್ದಲಿಂಗಪ್ಪ ಮತ್ತು ನಮ್ಮೂರಿನ ಭೀಮಣ್ಣ ತಂದೆ ಮಹಾದೇವಪ್ಪ ನೆಲೋಗಿ, ವಿಜಯಕುಮಾರ ತಂದೆ ಈರಪ್ಪ ಸೊಲಾಪೂರ, ಮೌಲಾಲಿ ತಂದೆ ಲಾಲಸಾಬ ಮುಲ್ಲಾ ರವರು ಕೂಡಿ ಸ್ಥಳಕ್ಕೆ ಹೋಗಿ ನೋಡಿದಾಗ ನಮ್ಮ ಅಣ್ಣನ ಹೆಂಡತಿಗೆ ಮೇಲ್ಕಂಡಂತೆ ಗಾಯಗಳಾಗಿದ್ದವು, ನಂತರ ನಾವು 108 ಅಂಬೂಲೆನ್ಸ ಕರೆಯಿಸಿ ಅವರನ್ನು ಅಂಬೂಲೆನ್ಸನಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆಮಾಡಿರುತ್ತೇವೆ, ನಮ್ಮ ಅಣ್ಣನ ಹೆಂಡತಿ ಸದ್ಯ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ, ಆದ್ದರಿಂದ ನಮ್ಮ ಅಳಿಯ ಮುತಪ್ಪ ತಂದೆ ರಾಮಣ್ಣ ಬಡಿಗೆರ ರವರಿಗೆ ವಿಚಾರಿಸಿ  ಮೇಲ್ಕಂಡ ಮೋಟರ ಸೈಕಲ್ ಕೆ.-32/ಇಟಿ-4596 ನೇದ್ದರ ಸವಾರನ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿನಾಂಕ 21-12-2019 ರಂದು 11;30 .ಎಂ ಕ್ಕೆ ಫಿರ್ಯಾದಿ ಸಿದ್ದಣ್ಣ ತಂದೆ ನಿಂಗಪ್ಪ ಬಡಿಗೆರ ಸಾ|| ಬೆಣ್ಣೂರ  ರವರು ಠಾಣೆಗೆ ಹಾಜರಾಗಿ ಪುರವಣಿ ಹೇಳಿಕೆ ನೀಡಿದ್ದೆನೆಂದರೆ, ದಿನಾಂಕ 18-12-2019 ರಂದು 3;30 ಪಿ.ಎಂ ಕ್ಕೆ ಕುಕನೂರ ಕ್ರಾಸ್ ಹತ್ತಿರ ಆದ ರಸ್ತೆ ಅಪಘಾತದಲ್ಲಿ ನಮ್ಮ ಅಣ್ಣನ ಹೆಂಡತಿ ಶಿವಕಾಂತಮ್ಮ ಇವರ ತಲೆಯ ಹಿಂದೆ ಭಾರಿ ಒಳಪೆಟ್ಟಾಗಿದ್ದರಿಂದ ಅವರಿಗೆ ಉಪಚಾರ ಕುರಿತು ಕಲಬುರಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ, ನಂತರ ನಮ್ಮ ವೈನಿಯನ್ನು ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದ ಓಮಿನಿ ಆಸ್ಪತ್ರೆಗೆ ಕರೆದುಕೋಂಡು ಹೋಗಿದ್ದು, ಅಲ್ಲಿಯ ವೈದ್ಯರು ನಮ್ಮ ವೈನಿಯನ್ನು ನೋಡಿ ಪರೀಕ್ಷಿಸಿ ಇವರು ಇನ್ನು ಬಹಳೊತ್ತು ಬದುಕುವುದಿಲ್ಲಾ, ನಿವು ಮನೆಗೆ ಕರೆದುಕೋಂಡು ಹೋಗರಿ ಅಂತಾ ಹೇಳಿದ್ದರಿಂದ ನಮ್ಮ ವೈನಿಯನ್ನು ಮರಳಿ ಕರೆದುಕೋಂಡು ಬರುತ್ತಿದ್ದಾಗ ದಿನಾಂಕ 21-12-2019 ರಂದು 12;30 .ಎಂ ಸುಮಾರಿಗೆ ಮಾರ್ಗ ಮದ್ಯ ಹುಮನಾಬಾದ ಹತ್ತಿರ ನಮ್ಮ ವೈನಿ ಶಿವಕಾಂತಮ್ಮ ಇವರು ಮೃತ ಪಟ್ಟಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ವಿನೋದ ತಂದೆ ರಾಜಾಸಾಬ ವಾಗ್ಮೋರೆ ಸಾ|| ಅಫಜಲಪೂರ ರವರು ಮತ್ತು ನನ್ನ ಅಣ್ಣನಾದ ಪಾಂಡುರಂಗ ಇಬ್ಬರು 8 ವರ್ಷಗಳಿಂದ ಅಫಜಲಪೂರ ಪಟ್ಟಣದಲ್ಲಿ ಅಮೋಘಸಿದ್ದ ಗುಡಿಯ ಹತ್ತಿರ ಖಾಲಿ ಜಾಗದಲ್ಲಿ ಸೆಡ್ಡ ಹಾಕಿಕೊಂಡು ಗುಜರಿ ವ್ಯಾಪಾರ ಮಾಡುತ್ತಿರುತ್ತೇವೆ. ಈಗ ಸುಮಾರು 03 ವರ್ಷಗಳಿಂದ ಸಂದಲಕುಮಾರ ವಯ|| 40 ವರ್ಷ ಈತನು ನಮ್ಮ ಹತ್ತಿರ ಕೆಲಸ ಮಾಡುತ್ತಿದ್ದನು. ಸದರಿಯವನು ಪಟ್ಟಣದಲ್ಲಿ ಖಾಲಿ ಬಾಟಲಿ. ಪ್ಲಾಸ್ಟಿಕ್ ಇನ್ನಿತರ ಸಾಮಾನುಗಳನ್ನು ಆಯ್ದುಕೊಂಡು ಬಂದು ನಮ್ಮ ಅಂಗಡಿಯಲ್ಲಿ ಹಾಕುತ್ತಿದ್ದನು, ಸದರಿ ಸಂದಲಕುಮಾರನು ಪಟ್ಟಣದ ಲಿಂಬಿತೋಟದಲ್ಲಿರುವ ಗಂಗವ್ವ ಗೋಲ್ಲರ ಇವರ ಜಾಗದಲ್ಲಿನ ಪತ್ರಾಸ ಸೆಡ್ಡಿನಲ್ಲಿ ಒಬ್ಬನೆ ವಾಸವಾಗಿದ್ದನು. ಸದರಿ ಸಂದಲಕುಮಾರ ಈತನು ಮಾನಸಿಕ ಕಾಯಿಲೆಯಿಂದ ಬಳಲಿ ಯಾರ ಜೋತೆಗೂ ಮಾತಾಡದೆ ತನ್ನಷ್ಟಕ್ಕೆ ತಾನು ಇರುತ್ತಿದ್ದನು. ಅವನಿಗೆ ಮೈಯಲ್ಲಿ ಆರಾಮ ಇಲ್ಲದ ಕಾರಣದಿಂದ ಸದರಿ ಸಂದಲಕುಮಾರನು 3 ದಿನಗಳಿಂದ ಕೆಲಸಕ್ಕೆ ಬಂದಿರುವುದಿಲ್ಲ.  ಸದರಿ ಸಂದಲಕುಮಾರನು ಕೆಲಸಕ್ಕೆ ಬರದೆ ಇದ್ದರಿಂದ ಇಂದು ದಿನಾಂಕ 21-12-2019 ರಂದು ಬೆಳಿಗ್ಗೆ 10:00 ಗಂಟೆಗೆ ನಾನು ಸಂದಲಕುಮಾರನು ವಾಸವಿದ್ದ ಸೆಡ್ಡಿಗೆ ಹೋಗಿ ನೋಡಲಾಗಿ, ಮನೆಯ ಬಾಗಿಲು ಮುಚ್ಚಿ ಸ್ವಲ್ಪ ತೆರೆದಿತ್ತು. ಬಾಗಿಲು ತಗೆದು ನೋಡಲಾಗಿ, ಸದರಿ ಸಂದಲಕುಮಾರನು ಪತ್ರಾಸ ಸೆಡ್ಡಿಗೆ ಇರುವ ಮೇಲಿನ ಕಟ್ಟಿಗೆಗೆ ಶಾಲಿನಿಂದ ಕುತ್ತಿಗೆಗೆ ನೇಣುಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿದ್ದನು. ಸದರಿ ಸಂದಲಕುಮಾರ ಈತನು ಮಾನಸಿಕ ಕಾಯಿಲೆಯಿಂದ ಬಳಲಿ ಜಿವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 20-12-2019 ರಂದು ರಾತ್ರಿ ತಾನು ವಾಸವಿದ್ದ ಮನೆಯಲ್ಲಿ ಕುತ್ತಿಗೆಗೆ ನೇಣುಹಾಕಿಕೊಂಡು ಮೃತಪಟ್ಟಿರುತ್ತಾನೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಭಾರಿ ಗಾಯಗೊಳಿಸಿ ಜಾತಿ ನಿಂದನೆ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಗಿರೀಶ ಕಂಬಾನೂರ ರವರು ಹೆಚ್ ಎಮ್ ಪಿ ಕಾಲೋನಿಯಲ್ಲಿರುವ ನನ್ನ ಗೆಳೆಯನಾದ ಸಂತೋಷ ಡೋಣಗಾಂವ ರವರ ಮದುವೆಯು ದಿನಾಂಕ: 11/12/2019 ರಂದು ಶಹಾಬಾದ ಪಟ್ಟಣದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಇರುವುದ್ದರಿಂದ ಮದುವೆ ಕಾರ್ಯಕ್ರಮಕ್ಕೆ ಹೋಗಿ ಮದುವೆ  ಮುಗಿಸಿಕೊಂಡು ನಂತರ ರಾತ್ರಿ 9-00 ಗಂಟೆಗೆ ಮದುವೆಯ ಮನೆಯ ಹತ್ತಿರ ಕಾರ್ಯಕ್ರಮಗಳು ಇರುವುದರಿಂದ ನಾನು ಮತ್ತು ನನ್ನ ಜೊತೆಯಲ್ಲಿ ಲಕ್ಷ್ಮಿಕಾಂತ ಬೆಳ್ಳೆ , ಅರವಿಂದ ಕಾಂಬಳೆ , ಅನೀಲ ಗೊಬ್ಬರಕರ , ಎಲ್ಲಾರೂ ಕೂಡಿ ಸಂತೋಷ ಡೋಣಗಾಂವ ಇವರ ಮನೆಯ ಹತ್ತಿರ ಕಾರ್ಯಕ್ರಮದಲ್ಲಿ ಇದ್ದಾಗ ರಾತ್ರಿ 11-30 ಗಂಟೆಗೆ ಒಂದು ಮರಳು ತುಂಬಿದ ಟಿಪ್ಪರ ಅತೀ ವೇಗವಾಗಿ ಬರುತ್ತಿದ್ದಾಗ  ಅದಕ್ಕೆ ನಾವು ತಡೆದು ನಿಲ್ಲಿಸಿ ಯಾರದು ಟಿಪ್ಪರ ಅಂತಾ ವಿಚಾರಿಸಿದಾಗ ಅದರ ಚಾಲಕನು ಮಂಜು ವಾರದ ರವರ ಟಿಪ್ಪರ ಅಂತಾ ತಿಳಿಸಿದನು. ಅದೇ ವೇಳೆಗೆ ಅದರ ಹಿಂದೆ ಮತ್ತೊಂದು ಮರಳು ತುಂಬಿದ ಟಿಪ್ಪರ ಬರುತ್ತಿದ್ದಾಗ ಅದಕ್ಕೂ ನಾವು ತಡೆದು ನಿಲ್ಲಿಸಿ ವಿಚಾರಿಸಿದಾಗ ಅದರ ಚಾಲಕ ವಿಜಯಕುಮಾರ ಹಳ್ಳಿ ರವರ ಟಿಪ್ಪರ ಅಂತಾ ತಿಳಿಸಿದನು ಆಗ ಇಬ್ಬರೂ ಚಾಲಕರಿಗೆ ನೀವು ರೀತಿ ಮರಳು ತುಂಬಿಕೊಂಡು ಕಾಲೋನಿಯಿಂದ ಹೋದರೆ ಕಾರ್ಯಕ್ರಮಕ್ಕೆ ತೊಂದರೆ ಆಗುತ್ತದೆ  ಅಂತಾ ಕೇಳಿದಾಗ ಅವರು ತಮ್ಮ ಮಾಲಿಕರಿಗೆ ಟಿಪ್ಪರ ಹಿಡಿದ ಬಗ್ಗೆ ತಿಳಿಸಿ ಟಿಪ್ಪರಗಳು ಅಲ್ಲೆ ಬಿಟ್ಟು ಹೋದರೂ. ನಂತರ ನಾವು ಮದುವೆಯ ಕಾರ್ಯಕ್ರಮ ಮುಗಿಸಿಕೊಂಡು ಲಕ್ಷ್ಮಿಕಾಂತ ಬೆಳ್ಳೆ ರವರ ಈರಟಿಗಾ ಕಾರ ನಂಬರ ..32 ಪಿ 4609 ನೇದ್ದರಲ್ಲಿ ನಾನು ಮತ್ತು ಲಕ್ಷ್ಮಿಕಾಂತ ಬೆಳ್ಳೆ , ಅರವಿಂದ ಕಾಂಬಳೆ , ಅನೀಲ ಗೊಬ್ಬರಕರ , ಕೂಡಿಕೊಂಡು ಮನೆಗೆ ಹೋಗುವ ಕುರಿತು ಹೆಚ್ ಎಮ್ ಪಿ ಕಾಲೋನಿಯಿಂದ ಹೋಗುತ್ತಿದ್ದಾಗ  ದಿನಾಂಕ: 12/12/2019 ರಂದು ಬೆಳಗಿನ ಜಾವ 1-00 ಗಂಟೆಗೆ ಹೆಚ್ ಎಮ್ ಪಿ ಕಂಪನಿಯ ಎಸ್ ಆಸ್ಪತ್ರೆಯ ಹತ್ತಿರ ನಮ್ಮ ಎದುರುಗಡೆಯಿಂದ ಮೂರು ವಾಹನಗಳು ಬಂದು ನಮ್ಮ ಕಾರಿಗೆ ಎದುರುಗಟ್ಟಿ ನಿಲ್ಲಿಸಿದರೂ ಆಗ ನಾನು ಕಾರನಿಂದ ಇಳಿದು ನೋಡಲು ಒಂದು ಡಸ್ಟರ ಕಾರ ಇದ್ದು ಅದರಲ್ಲಿ ವಿಜಯಕುಮಾರ ಹಳ್ಳಿ  , ಪರವತ ರಡ್ಡಿ , ಚಂದ್ರಕಾಂತ ಬುರ್ಲೆ , ಮಲ್ಲಿಕಾರ್ಜುನ ಕಟ್ಟಿಮನಿ ಇದ್ದು,  ಇನ್ನೊಂದು ಬೊಲೊರೋ ವಾಹನದಲ್ಲಿ ಗೀರಿಶ  ರಾಠೋಡ , ಚಂಡುಲಾ , ಮತ್ತು ಕಿರಣ ಶಂಕರವಾಡಿ , ಹಾಗೂ ಇನ್ನೊಂದು ಹೊಂಡಾ ಕೇರಿಟಾ ಕಾರನಲ್ಲಿ ಮಂಜು ವಾರದ ಶಂಕರ ಅಳ್ಳೋಳ್ಳಿ , ರಾಣೋಜಿ ಶಂಕರವಾಡಿ ರವರು ವಾಹನಗಳಿಂದ ಕೆಳಗೆ ಇಳಿದು ಬಂದು ಅವರಲ್ಲಿ ವಿಜಯಕುಮಾರ  ಹಳ್ಳಿ ಇತನು ಯಾಕೆ ಟಿಪ್ಪರ ಹಿಡಿದು ನಿಲ್ಲಿಸಿದಿ ಅಂತಾ ಕೇಳಿದಾಗ ಅದಕ್ಕೆ ನಾನು ಕಾಲೋನಿಯಲ್ಲಿ ಮದುವೆಯ ಕಾರ್ಯಕ್ರಮ ಇದೆ  ಮತ್ತು ನೀವು ನಮ್ಮ ಹೊಲದಲ್ಲಿಂದ  ಬಂದರೆ ನಮ್ಮ ಹೊಲ ಹಾಳು ಅಗುವುದಿಲ್ಲಾ ಅಂತಾ ಕೇಳಿದಾಗ ಅವರಲ್ಲಿಯ ಚಂದ್ರಕಾಂತ ಬುರ್ಲೆ  ಮತ್ತು ಪರವತ ರಡ್ಡಿ ರವರು ಭೋಸಡಿ ಮಗನೆ ನಿಮ್ಮ ಹೊಲ ಇದ್ದರ ನಾವು ಏನು ಮಾಡೋಣ ಮೊದಲು ಟಿಪ್ಪರ ಯಾಕೆ ಹಿಡಿದಿದ್ದಿ ಬಿಡು ಅಂತಾ ಅವಾಚ್ಯವಾಗಿ ಬೈದು  ಅವರಲ್ಲಿ ಚಂಡೂಲಾ ಇತನು ಟಿಪ್ಪರ ಬಿಡತಿಯಿಲ್ಲೋ ಸೂಳೆ ಮಗನೆ ಅಂತಾ ಬೈದು ನನ್ನ ಕಪ್ಪಾಳದ ಮೇಲೆ ಹೊಡೆದನು ಆಗ ಅವರಲ್ಲಿ ಶಂಕರ ಅಳ್ಳೋಳ್ಳಿ , ಮಂಜು ವಾರದ ರವರು ನನಗೆ  ರಂಡಿ  ಮಗನಾ ಟಿಪ್ಪರ ಹಿಡಿದು ನಿಲ್ಲಿಸಿತ್ತಿ ಸೂಳಿ ಮಗನದು ಬಹಳ ಆಗಿದೆ ಅಂತಾ ಇಬ್ಬರೂ ಕೂಡಿ ನನ್ನ ಬಲಗೈ ಒತ್ತಿ ಹಿಡಿದರೂ ಅದೇ ವೇಳೆಗೆ ಅವರಲ್ಲಿ ಗಿರೀಶ ರಾಠೋಡ ಇತನು ಬೋಸಡಿ ಮಗನಾ ನೀನು ಟಿಪ್ಪರ ಹಿಡಿದು ನಿಲ್ಲಿಸಿದರೆ ನಾವು ಹೇಗೆ ದಂದಾ ಮಾಡುವುದು ರಂಡಿ ಮಗನೆ ಅಂತಾ ಕೈ ಮುಷ್ಟಿ ಮಾಡಿ ನನ್ನ ಬೆನ್ನಿಗೆ ಹೊಡೆದನು ಆಗ ರಾಣೋಜಿ ಶಂಕರವಾಡಿ ಮತ್ತು ಕಿರಣ ಶಂಕರವಾಡಿ ಇವರಿಬ್ಬರೂ ಕೂಡಿ ಬಂದು ನನ್ನ ಎಡಗೈ ಒತ್ತಿ ಹಿಡಿದರೂ ಆಗ ಮಲ್ಲಿಕಾರ್ಜುನ ಕಟ್ಟಿಮನಿ ಇತು  ರಂಡಿ ಮಗದು ಊರಲ್ಲಿ ಬಹಳ ಆಗಿದೆ ಇವತ್ತೂ ಏನಾಗುತ್ತದೋ ಆಗಿ ಹೋಗಲಿ ಅಂತಾ ಬೈದು ನನ್ನ ಹೊಟ್ಟೆಗೆ ಕೈಯಿಂದ ಹೊಡೆದನು ಆಗ ವಿಜಯಕುಮಾರ ಹಳ್ಳಿ ಇತನು ಸೂಳೆ ಮಗ ಜೀವಂತ ಇದ್ದರೆ ಮುಂದೆ ನಮ್ಮ ಮರಳು ದಂದೆ ಮಾಡಲು ಬಿಡುವುದಿಲ್ಲಾ ಅವನಿಗೆ ಖಲಾಸ ಮಾಡಬೇಕು ಅಂತಾ ಅನ್ನುತ್ತಾ ತನ್ನ ಹತ್ತಿರ ಇದ್ದ  ಚಾಕು ತೆಗೆದು ನನ್ನ ಬಲ ಕುತ್ತಿಗೆ ಹತ್ತಿರ ಹೊಡೆದು ರಕ್ತಗಾಯ ಪಡಿಸಿದನು ಆಗ ಕಾರನಲ್ಲಿ ಇದ್ದ ಲಕ್ಷ್ಮಿಕಾಂತ ಬೆಳ್ಳೆ ಮತ್ತು ಅರವಿಂದ ಕಾಂಬಳೆ, ಅನೀಲ ಗೊಬ್ಬರಕರ ರವರು ನೋಡಿ ಬಿಡಿಸಲು ಬಂದಾಗ ಅವರಿಬ್ಬರಿಗೆ ಚಂಡೂಲಾ ಮತ್ತು ಗಿರೀಶ ರಾಠೋಡ ಮತ್ತು ಮಂಜು ವಾರದ ರವರು ಕೂಡಿ ಅವರಿಗೆ ಹಿಡಿದು ತಡೆದು ನಿಲ್ಲಿಸಿ ಬೋಸಡಿ ಮಕ್ಕಳೆ ನಾವು ಅವನಿಗೆ ಸಾಯಿಸುವುದು ನೀವು ನೋಡಬೇಕು ಅಂತಾ ಅನುತ್ತಾ ವಿಜಯಕುಮಾರ ಹಳ್ಳಿಗೆ   ಹೊಡೆ ಸೂಳಿ ಮಗನಿಗೆ ಅಂತಾ ಅಂದಾಗ ಮತ್ತೆ ಅದೆ ಚಾಕುವಿನಿಂದ ವಿಜಯಕುಮಾರ ಹಳ್ಳಿ ಇತನು  ನನ್ನ ಎಡಗಡೆ ಹೊಟ್ಟೆಯ ಹತ್ತಿರ ಹೊಡೆದಾಗ ಭಾರಿ ರಕ್ತಗಾಯವಾಗಿ  ನಾನು ಬೇಹುಷಾ ಆಗಿ ಬಿದ್ದಾಗ  ಅರವಿಂದ ಕಾಂಬಳೆ ಇತನು ಪೋನ ಮಾಡಿ ನಮ್ಮ ಮನೆಯವರಿಗೆ ತಿಳಿಸುತ್ತಿದ್ದಾಗ  ಅವರೆಲ್ಲಾರೂ ನಾನು ಬೆಹುಷಾ ಆಗಿದ್ದು ನೋಡಿ ಸತ್ತಿರಬಹುದು ಅಂತಾ ತಿಳಿದು ತಮ್ಮ ತಮ್ಮ ವಾಹನಗಳಲ್ಲಿ ಕುಳಿತುಕೊಂಡು ಓಡಿ ಹೋಗಿರುತ್ತರೆ ಅವರ ವಾಹನಗಳು ನೋಡಿದರೆ ಗುರುತಿಸುತ್ತೇನೆ ಮತ್ತು ನಂಬರ ನೋಡಲಿಲ್ಲಾ ನಂತರ ನಮ್ಮ ಮನೆಯಿಂದ ನಮ್ಮ ಅಣ್ಣ ಸತೀಶ ಕಂಬಾನೂರ ಮತ್ತು ಅವಿನಾಶ ಕಂಬಾನೂರ ಹಾಗೂ ಮಹೇಶ ಹುಲಿ ರವರು ಬಂದು ಎಲ್ಲಾರೂ ಕೂಡಿಕೊಂಡು ನನಗೆ ಉಪಚಾರ ಕುರಿತು ಯುನೇಟೇಡ ಆಸ್ಪತ್ರೆ ತಂದು ಸೇರಿಕೆ ಮಾಡಿರುತ್ತಾರೆ . ನಾನು ಪರಿಶಿಷ್ಟ ಜಾತಿಯವನು ಎಂದು ಮಂಜು ವಾರದ ಮತ್ತು ಪರವತ ರಡ್ಡಿ ಇವರಿಗೆ ಗೊತ್ತಿದ್ದರೂ ಕೂಡ ನನಗೆ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.