POLICE BHAVAN KALABURAGI

POLICE BHAVAN KALABURAGI

15 January 2017

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರೋಜಾ ಠಾಣೆ :ದಿನಾಂಕ: 14-01-2017 ರಂದು ಕಲಬುರಗಿ ನಗರದ ಬ್ಯಾಂಕ ಕಾಲೋನಿಯ ಬಸವಣ್ಣದೇವರ ಗುಡಿಯ ಹತ್ತಿರ ಇರುವ ನೀರಿನ ಟಾಕಿಯ ಕೆಳಗೆ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವಲೀಲೆಯ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಚಂದ್ರಕಾಂತ ಎ.ಎಸ್.ಐ ರೋಜಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ  ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಬ್ಯಾಂಕ ಕಾಲೋನಿಯ ಬಸವಣ್ಣದೇವರ ಗುಡಿಯ ಹತ್ತಿರ ಇರುವ ನೀರಿನ ಟಾಕಿಯ ಕೆಳಗೆ ಕೆಲವು ಜನರು ದುಂಡಾಗಿ ಕುಳಿತುಕೊಂಡು ನನ್ನದು ರಾಣಿಗೆ ಅಂದರ 50 ರೂಪಾಯಿ , ಬಾಹರ 50 ರೂಪಾಯಿ ಅನ್ನುತ್ತಾ ಒಬ್ಬರ ಮೇಲೆ ಒಬ್ಬರು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವಲೀಲೆಯ ಆಟದಲ್ಲಿ ತೊಡಗಿರುವದನ್ನು ಖಚಿತಪಡೆಸಿಕೊಂಡು ದಾಳಿಮಾಡಿ 07 ಜನ ಜೂಜುಕೋರರಿಗೆ ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು  1] ಬಸವರಾಜ ತಂದೆ ನಾಗೇಂದ್ರಪ್ಪ ಅಣಕಲ್ 2] ವಿಶಾಲ ತಂದೆ ರಾಜಶೇಖರ ಪಾಟಿಲ 3] ರಾಕೇಶ ತಂದೆ ನೇಮಚಂದ್ ಮೇತ್ರೆ 4] ವಿಜಯಸಿಂಗ್ ತಂದೆ ಜಯಸಿಂಗ್ ಹಜಾರೆ  5] ಸೌರಭ ತಂದೆ ಸುಧೀರ ಹೆಬ್ಬಾಳಕರ್ 6] ಶಿವಶರಣಪ್ಪ ತಂದೆ ಶರಣಪ್ಪ ಭಾಗೋಡಿ 7] ಚಂದ್ರಶೇಖರ ತಂದೆ ಮಲ್ಲಣ್ಣ ಕೋಟನೂರ ಸಾ || ಎಲ್ಲರು ಬ್ಯಾಂಕ ಕಾಲೋನಿ  ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 4320/-ರೂಪಾಯಿ ಮತ್ತು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪಟ್ ಎಲೆಗಳನ್ನು ಪಂಚರ ಸಮಕ್ಷಮ  ವಶಪಡಿಸಿಕೊಂಡು ಸದರಿಯವರೊಂದಿಗೆ ರೋಜಾ ಠಾಣೆಗೆ  ಬಂದು ಪ್ರಕರಣ ದಾಖಲಿಸಲಾಗಿದೆ.
ಪಡಿತರ ಆಹಾರ ಪದಾರ್ಥಗಳನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಖಾಜಾಬಾಯಿ ತಂದೆ ನಭಿಲಾಲ ಚೌಧರಿ ಸಾ: ಕರಜಗಿ ಮಾಲಿಕರು ಎಸ್.ಎಚ್.ಎಲ್ ಕಮುನಿಕೇಶನ ಕರಜಗಿ ಇವರು ಒಟ್ಟು 18 ಪಡಿತರಚೀಟಿಗಳಿಗೆ ಮತ್ತು ಶ್ರೀ ಮಲ್ಲಿಕಾರ್ಜುನ ತಂದೆ ಸಿದ್ದಲಿಂಗ ಮರಾಠಾ ಸಾ: ಕರಜಗಿ ಮಾಲಿಕರು ಜೈ ಮಲಹಾರ ಕಂಪ್ಯೂಟರ ಸೆಂಟರ ಕರಜಗಿ  ಇವರು ಒಟ್ಟು 12 ಪಡಿತರ ಚೀಟಿಗಳಿಗೆ ಭೋಗಸ್ ಕೊಪನ್ ನೀಡಿ ಸಾರ್ವಜನಿಕ ವಿತರಣೆಗೆ ಬಿಡುಗಡೆ ಮಾಡಿರುವ ಪಡಿತರ ಪದಾರ್ಥಗಳನ್ನು ದುರುಪಯೋಗಪಡೆಸಿಕೊಂಡಿರುವುದು ಸಾಭೀತಾಗಿರುವು ದರಿಂದ ಸದರಿ ಸೇವಾ ಕೇಂದ್ರಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಶಶೀಕಲಾ ಪಾದಗಟ್ಟಿ ತಹಶೀಲ್ದಾರರು ಮತ್ತು ತಾಲೂಕಾ ದಂಡಾಧಿಕಾರಿಗಳು ಅಫಜಲಪೂರ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು
ರಾಘವೇಂದ್ರ ನಗರ ಠಾಣೆ : ಶ್ರೀ ಗೋವಿಂದ ತಂದೆ ಹಣಮಂತ ಮೇಳಕುಂದಿ ಸಾ:ಕೃಷ್ಣಾನಗರ ಬ್ರಹ್ಮಪೂರ ಕಲಬುರಗಿ ಇವರು ದಿನಾಂಕ: 13-01-2017 ರಂದು ಸಾಯಂಕಾಲ ಬಸವರಾಜ ಗುತ್ತೇದಾರ ಈತನ ರೋಡಿನ ಕೆಲಸ ಕಲಬುರಗಿ ನಗರದ ಸಂಗಮೇಶ್ವರ ಕಾಲೋನಿಯ ಮಹಿಳಾ ಮಂಡಳ ಮುಂದುಗಡೆ ರೋಡಿನ ಕೆಲಸಗೋಸ್ಕರ ಕಂಕ್ರೇಟ್‌‌ ಮತ್ತು ಉಸುಕು ಹಾಕಿ ನಾನು ರೋಡಿನ ಕೆಲಸ ಮಾಡುತ್ತಿರುವಾಗ ಸಾಯಂಕಾಲ ಬಸವನಗರ ಕಾಲೋನಿಯ ಹತ್ತಿ ಅಂಬ್ರ್ಯಾ ಈತನು ತನ್ನ ಮೋಟಾರ ಸೈಕಲ ವೇಗವಾಗಿ ತಂದು ನಾವು ಕೆಲಸ ಮಾಡುತ್ತಿರುವ ರೋಡಿನ ಮೇಲೆ  ಒಮ್ಮೆಲೆ ಬಿದ್ದು ಎದ್ದು ಏ ಭೋಸಡಿ ಮಕ್ಕಳೆ ಇಲ್ಲಿ ಏಕೆ ಉಸುಕು ಕಂಕ್ರೇಟ್‌ ಹಾಕಿದ್ದಿರಿ ಅಂತಾ ಬೈಯುತ್ತಾ ನಾನು ಕೆಲಸಗೋಸ್ಕರ ಇಟ್ಟಿದ್ದ ಸಲಕೆಯನ್ನು ತೆಗೆದುಕೊಂಡು ಅದರಿಂದ ನನ್ನ ಬಲಗಡೆ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಮತ್ತೆ ಹೊಡೆಯಲು ಬಂದಾಗ ನನ್ನ ಜೊತೆ ಕೆಲಸ ಮಾಡುತ್ತಿರುವ ಜಯರಾಮ ಮತ್ತು ನಮ್ಮ ಗುತ್ತೇದಾರ ಬಸವರಾಜ ಇವರು ಜಗಳ ಬಿಡಿಸಿರುತ್ತಾರೆ ಇಲ್ಲದಿದ್ದರೆ ಅವರು ಇನ್ನೂ ಬಹಳ ಹೊಡೆಬಡೆ ಮಾಡುತ್ತಿದ್ದನು ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಶಾಹಾಬಾದ ನಗರ ಠಾಣೆ : ಶ್ರೀ ಅಲ್ಲಾವುದ್ದಿನ ತಂದೆ ಯುಸುಫ ಜಜ್ಜಲಬಾರ ಸಾಃ ಮರತೂರ  ಇವರು ದಿನಾಂಕಃ 12.01.17 ರಂದು  ರಾತ್ರಿ ತನ್ನ  ಮನೆಗೆ ನಡೆದುಕೊಂಡು  ಹೋಗುವಾಗ ರುಕ್ಮೋದ್ದಿನ ಇತನಿಗೆ  ಮುಂಡಿ ಹತ್ತಿದ್ದರಿಂದ  ದಿನಾಂಕ 13-01-2017 ರಂದು ಬೆಳಿಗ್ಗೆ 6.30 ಎ.ಎಮ್.ಕ್ಕೆ  ಮನೆ ಹೊರೆಗೆ  ಫಿರ್ಯಾದಿ ನಡೆದಾಗ ಆರೋಪಿತರು  ಜಗಳ ತೆಗೆದು ಅವಾಚ್ಯ  ಬೈಯ್ದು  ತಡೆದುನಿಲ್ಲಿಸಿ  ಕಟ್ಟಿಗೆಯಿಂದ  ಹೊಡೆದು  ರಕ್ತಗಾಯ ,  ಕೈಯಿಂದ ಹೊಡೆದು  ಗುಪ್ತಗಾಯ ಮಾಡಿ  ಜೀವ  ಬೆದರಿಕೆ  ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.