POLICE BHAVAN KALABURAGI

POLICE BHAVAN KALABURAGI

20 April 2020

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ; 19/04/2020  ರಂದು ಮದ್ಯಾನ್ಹ ಮಾನ್ಯ ಜಿಲ್ಲಾಧಿಕಾರಿ ಕಲಬುರಗಿ ರವರು ಕಲಂ 144 ಸಿ.ಆರ್.ಪಿ.ಸಿ. ನಿಷೆದಾಜ್ಞೆ ಹೊರಡಿಸಿದ್ದು ಒತ್ತಿದ್ದರೂ ಕೂಡಾ ಜೇವರಗಿ ಪಟ್ಟಣದ ನೂರಂದೇಶ್ವರ ಶಾಲೆಯ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಜೇವರಗಿ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ. ಸಾಹೇಬ ಗ್ರಾಮಿಣ ಉಪ ವಿಬಾಗ ಕಲಬುರಗಿ, ಮಾನ್ಯ ಸಿಪಿಐ ಸಾಹೇಬ ಜೇವರಗಿ ರವರ ಮಾರ್ಗದರ್ಶನದಲ್ಲಿ  ಹೊರಟು ಬಾತ್ಮೀ ಬಂದ ಸ್ಥಳ ತಲುಪಿದ ನಂತರ ಬಾತ್ಮೀ ಸ್ಥಳದ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ನಡೆದುಕೊಂಡು ನೂರಂದೇಶ್ವರ ಶಾಲೆಯ ಗೊಡೆಯ  ಮರೆಯಲ್ಲಿ ನಿಂತು ನೋಡಲಾಗಿ  ಸದರಿ ಶಾಲೆಯ ಹತ್ತಿರ  ಸಾರ್ವಜನಿಕ ಜಾಗದಲ್ಲಿ  ಕೇಲವು  ಜನರು ದುಂಡಾಗಿ ಕುಳಿತುಕೊಂಡು ಅಂದರ ಎಕ್ಕಾಗೆ 100 ರೂ ಅನ್ನುತ್ತಿದ್ದು ಇನ್ನೊಬ್ಬನು ಬಾಹರ ಪಂಜಾಗೆ 100 ರೂ ಅನ್ನುತ್ತಿದ್ದನು. ಇಸ್ಪೀಟ ಜೂಜಾಟ ಆಡುತ್ತೀರುವದು ನಾವು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವರ ಹೆಸರು ವಿಳಾಸ ಕೇಳಿ ಅಂಗಶೊದ ಮಾಡಲಾಗಿ 1) ಹಾಜಿಮಲಂಗ ತಂದೆ ಮೌಲಾಲಿ  ಭೂಸನೂರ ಸಾ: ರಾಸಣಿ  ಹಾ:: ಜೊಪಡಪಟ್ಟಿ ಜೇವರಗಿ 2) ಶೌಕತಲಿ  ತಂದೆ ರುಕ್ಮೊದ್ದೀನ ಮುಲ್ಲಾ  ಸಾ:   ಚಿಕ್ಕ ಜೇವರಗಿ  3) ಮೈಹಿಬೂಬ ತಂದೆ ಕಾಸೀಮ ಸಾಬ ರಟಕಲ್  ಸಾ:  ವಿದ್ಯಾನಗರ  ಜೇವರಗಿ  ಅಂತಾ ತಿಳಿಸಿದ್ದು  ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ  1600/- ರೂ, ಮತ್ತು 52 ಇಸ್ಪೇಟ ಎಲೆಗಳನ್ನು ವಶಕ್ಕೆ ಪಡೆದು  ಕರೊನಾ ವೈರಸ ( covid-19)  ಹರಡದಂತೆ ತಡೆಗಟ್ಟಲು  ಮಾನ್ಯ ಜಿಲ್ಲಾಧಿಕಾರಿಗಳು ಕಲಬುರಗಿ ರವರು ಕಲಂ 144 ಸಿ.ಆರ್.ಪಿ.ಸಿ  ನಿಷೇದಾಜ್ಞೆ ಹೊರಡಿಸಿದ್ದು  ಗೊತ್ತಿದ್ದರೂ ಕೂಡಾ ಮೇಲ್ಕಂಡ ಮೂವರು  ಜೇವರಗಿ ಪಟ್ಟಣದ  ನೂರಂದೇಶ್ವರ  ಶಾಲೆಯ ಹತ್ತಿರ ಸಾರ್ವಜನಿಕ  ಸ್ತಳದಲ್ಲಿ  ದುಂಡಾಗಿ ಕುಳಿತುಕೊಂಡ ಸಾಮಾಜಿಕ  ಅಂತರ ಕಾಪಾಡದೆ  ಮತ್ತು  ತಮ್ಮ ತಮ್ಮ ಮುಖಕ್ಕೆ ಮಾಸ್ಕ ಹಾಕಿಕೊಳ್ಳದೆ ಮತ್ತು ಕೈಗಳಿಗೆ ಹ್ಯಾಂಡ್ ಗಲೊಸ್  ಹಾಕಿಕೊಳ್ಳದೆ  ನಿರ್ಲಕ್ಷತನ ವಹಿಸಿ ಗುಂಪಾಗಿ ಕುಳಿತುಕೊಂಡು ಇಸ್ಪೇಟ್ ಜೂಜಾಟ  ಆಡಿದ್ದು ಅಲ್ಲದೆ  ಗುಂಪ್ಪಾಗಿ ಕುಳಿತುಕೊಂಡರೆ  ಕರೊನಾ ವೈರಸ ( covid-19)   ಪ್ರಾಣಕ್ಕೆ ಅಪಾಯಕಾರಿ  ರೋಗದ ಸೊಂಕು ಹರಡುವ ಸಂಭವ ಇದೆ ಎಂದು ಗೊತ್ತಿದ್ದರು ಕೂಡಾ  ಉದ್ದೇಶಪೂರ್ವಕವಾಗಿ  ಮಾನ್ಯ ಜಿಲ್ಲಾಧಿಕಾರಿಗಳ ಕಲಂ 144 ಸಿ.ಆರ್.ಪಿ.ಸಿ.  ನಿಷೇದಾಜ್ಞೆ ಆಧೇಶ ಲ್ಲಂಘನೆ ಮಾಡಿರುತ್ತಾರೆ. ಸದರಿ ಮೇಲ್ಕಂಡ  ಮೂವರ ವಿರುದ್ದ ಮುಂದಿನ ಕ್ರಮಕ್ಕಾಗಿ ಸೂಚಿಸಲಾಗಿದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಿಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮೀನು ಮಾರಾಟ ಮಾಡುತ್ತಿದ್ದವನ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ: 19/04/2020  ರಂದು  ಕರೋನ ವೈರಸ ಹರಡದಂತೆ ತಡೆಗಟ್ಟುವ ಪ್ರಯುಕ್ತ ಮುಂಜಾಗೃತ ಕ್ರಮವಾಗಿ ಭಾರತ ಸರಕಾರ , ಭಾರತ ಲಾಕಡೌನ ಅದೇಶವಾಗಿ ಕರೋನಾ ವೈರಸ ತಡೆಗಟ್ಟಲು ಯಾರೋ ಹೊರಗಡೆ ತಿರುಗಾಡದಂತೆ ಮತ್ತು ಅಗತ್ಯ ವಸ್ತುಗಳು ಖರೀದಿ ಮತ್ತು ಮಾರಾಟ ಮಾಡುವ ಸಮಯದಲ್ಲಿ ಸಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರಕಾರ  ಅದೇಶದಂತೆ  ಶಹಾಬಾದ ಪಟ್ಟಣದಲ್ಲಿ ಪೆಟ್ರೊಲಿಂಗ ಮಾಡುತ್ತಾ  ವಿ ಪಿ ಚೌಕ ಕಡೆಗೆ ಹೋದಾಗ ದತ್ತ ಮಂದಿರ ಹತ್ತಿರ ಒಬ್ಬ ವ್ಯಕ್ತಿಯು  ರಸ್ತೆಯ ಬದಿಯಲ್ಲಿ ಕುಳಿತುಕೊಂಡು ಮೀನು ಮಾರಾಟ ಮಾಡುತ್ತಿದ್ದು ಅದನ್ನು ಖರೀದಿಸಲು ಸಾರ್ವಜನಿಕರ ಗುಂಪಾಗಿ ಸೇರಿಸಿದ್ದು ನೋಡಿ ಮೀನು ಮಾರಾಟ ಮಾಡುತ್ತಿದ್ದವನಿಗೆ ಹಿಡಿದು ಅವನ ಹೆಸರು ವಿಚಾರಿಸಲು ಅವನು ತನ್ನ ಹೆಸರು ನಾರಯಣ ತಂದೆ ರಾಮು ಭೋಯಿ ಸಾ: ದತ್ತಾ ಮಂದಿರ ವಿ ಪಿ ಚೌಕ ಶಹಾಬಾದ ಅಂತಾ ತಿಳಿಸಿದನು ಸದರಿಯವನಿಗೆ  ಹಿಡಿದುಕೊಂಡು ಠಾಣೆಗೆ ತಂದಿದ್ದು ಸದರಿಯವನು ಕರೋನಾ ವೈರಾಣು ತಡೆಗಟ್ಟುವ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳದೆ ಮತ್ತು ಸಮಾಜಿಕ ಅಂತರ ಕಾಯ್ದು ಕೊಳ್ಳಲು ಯಾವುದೆ ವ್ಯವಸ್ಥೆ ಮಾಡದೆ ಅತೀವ ನಿರ್ಲಕ್ಷತನ ವಹಿಸಿ ಮೀನು ಮಾರಾಟ ಮಾಡುತ್ತಾ  ಜನರ ಗುಂಪು ಸೇರಿಸಿಕೊಂಡು ಕರೋನ ವೈರಾಣು ಒಬ್ಬರಿಂದ ಮತ್ತೋಬ್ಬರಿಗೆ ಹರಡಿ ಪ್ರಾಣಕ್ಕೆ ಹಾನಿ ತರುವಂತಹ ಸಂಭವ ಇರುವುದು ತಿಳಿದು ಸಮಾಜಿಕ ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷತನ ವಹಿಸಿದ್ದರಿಂದ ಸದರಿಯವನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ 19/04/2020 ರಂದು ಶ್ರೀ  ಸಂಗಮೇಶ ಅಂಗಡಿ ಪಿ,ಎಸ್, ಜೇವರಗಿ ಪೋಲೀಸ್ ಠಾಣೆ ರವರು  ಕರೊನಾ ವೈರಸ ನಾಡಿನಾದ್ಯಾಂತ ಹಬ್ಬುತ್ತಿದ್ದು  ಹಿನ್ನೇಲೆಯಲ್ಲಿ ( covid-19)  ಕರೊನಾ ವೈರಸ ಕಲಬುರಗಿ ಜಿಲ್ಲೆಯಲ್ಲಿ  ಹರಡಂತೆ ಮುಂಜಾಗ್ರತೆಯ  ಬಗ್ಗೆ  ಎಲ್ಲಾ ಸರಕಾರಿ ಆಡಳಿತ ಮಂಡಳಿಯವರು  ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಸಾರ್ವಜನಿಕರಲ್ಲಿ  ಜಾಗೃತ ಮೂಡಿಸುತ್ತಿದ್ದು ಇರುತ್ತದೆ. ಅಲ್ಲದೆ ಸರಕಾರವೇ ನಿಷೇದಾಜ್ಞೆ ಕೂಡಾ ಹೊರಡಿಸಿದ್ದು ಇರುತ್ತದೆ. ಅದರಂತೆ  ಎಲ್ಲಾ ಹಳ್ಳಿಗಳಲ್ಲಿ  ಸರಕಾರ ನಿಷೆದಾಜ್ಞೆ ಹೊರಡಿಸಿದೆ  ಯಾರು ಹೊರಗಡೆ ಓಡಾಡುವಂತಿಲ್ಲಾ ಮತ್ತು ಅಂಗಡಿ ಹೊಟೇಲ ತೆರೆದಿಡುವಂತಿಲ್ಲಾ ಮತ್ತು ಮಾಸ್ಕ ಹಾಗೂ  ಹ್ಯಾಂಡ್   ಗ್ಲೊಸ್   ಹಾಕಿಕೊಳ್ಳುವುದು ಮತ್ತು ಮನೆಯಲ್ಲಿ  ಇದ್ದು  ಸುರಕ್ಷತೆಯಿಂದ ಕಾಪಾಡಿಕೊಳ್ಳುವಂತೆ  ನಾವು ನೊಟೀಸ್ ಮತ್ತು  ದ್ವನಿ ವರ್ಧಕ ಮುಖಾಂತರ  ಮತ್ತು ಪತ್ರಿಕಾ  ಪ್ರಕಟಣೆ ಮುಖಾಂತರ ಜನರಲ್ಲಿ ಜಾಗೃತಿ ಸಹ ಮೂಡಿಸಿದ್ದು ಇರುತ್ತದೆ.  ದಿನಾಂಕ 19/04/2020 ರಂದು ನಾನು ಮದ್ಯಾನ್ಹ 12-00 ಗಂಟೆ ಸೂಮಾರಿಗೆ ನಾನು ಕಟ್ಟಿ ಸಂಗಾವಿ ಗ್ರಾಮಕ್ಕೆ ಕರೋನಾ ಸಾಂಕ್ರಾಮಿಕ ರೋಗ ಹರಡದಂತೆ ಸಾರ್ವಜನಿಕರಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಕೂರಿತು ಜಾಗೃತಿ ಮೂಡಿಸಲು ಹೋದಾಗ covid-(19)  ಕರೊನಾ ವೈರಸ  ತಡೆಗಟ್ಟುವ  ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅಂಗಡಿ ಮುಗ್ಗಟ್ಟು ಚೆಕ್ಕ ಮಾಡುತ್ತಾ ಜನರಿಗೆ ಹೊರಗಡೆ ಬರದಂತೆ ಹೇಳುತ್ತಾ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ  ಕಟ್ಟಿ ಸಂಗಾವಿ  ಗ್ರಾಮದಲ್ಲಿ  ಯಲ್ಲಾಲಿಂಗ ಮಠದ ಹತ್ತಿರ ಸಾರ್ವಜನಿಕ ಕಟ್ಟೆಯ ಮೇಲೆ ನಾಲ್ಕು ಜನರು  ಮುಖಕ್ಕೆ  ಮಾಸ್ಕ ಹಾಕಿಕೊಳ್ಳದೆ, ಮತ್ತು ಕೈಗಳಿಗೆ ಹ್ಯಾಂಡ ಗ್ಲೊಸ್ ಹಾಕಿಕೊಳ್ಳದೆ , ಸಾಮಾಜಿಕ ಅಂತರ ನಿರ್ವಹಣೆ ಮಾಡದೆ ಯಾವುದೇ ಮುಂಜಾಗ್ರತೆ ಕ್ರಮ ಕೈಕೊಳ್ಳದೆ  ಕೂಳಿತುಕೊಂಡಿದ್ದುನ್ನು ನೋಡಿ  ಅವರಿಗೆ ವಿಚಾರಿಸಲು ಅವರು ತಮ್ಮ  ಹೆಸರು 1) ಸಿದ್ದು ತಂದೆ ಜಾನಪ್ಪ ಕುಂಬಾರ 2) ಶಾಂತಕುಮರ ತಂದೆ ಮಲ್ಲಿಕಾರ್ಜುನ ಕುಂಬಾರ 3) ಸುನೀಲ ತಂದೆ ಮಲ್ಲಪ್ಪ ಯಳೂರ 4) ರೇಹೆಮಾನ ತಂದೆ ನಬಿ ಪಟೇಲ ಕಡಗೂರ ಸಾ/ ಎಲ್ಲರು ಕಟ್ಟಿ ಸಂಗಾವಿ ಜೇವರಗಿ   ಅಂತಾ ಹೇಳಿದ್ದು  ಸದರಿ ಮೇಲ್ಕಂಡ  ನಾಲ್ಕು ಜನರು ಕೂಡಿಕೊಂಡು ಗುಂಪ್ಪಾಗಿ   ಕಟ್ಟಿ ಸಂಗಾವಿ ಗ್ರಾಮದ   ಗ್ರಾಮದಲ್ಲಿ  ಯೆಲ್ಲಾಲಿಂಗ ಮಠದ ಹತ್ತಿರ  ಹತ್ತಿರ   ಹ್ಯಾಂಡ್ ಗ್ಲೊಸ್  ಮತ್ತು ಮಾಸ್ಕ ಹಾಕಿಕೊಳ್ಳದೆ  ಇರುವುದು ನೊಡಿ  ಅವರಿಗೆ  ( covid-19)  ಕರೊನಾ ವೈರಸ  ಹರಡುತ್ತಿದೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಹೊರಗಡೆ ಓಡಾಡದಂತೆ ನಿಷೇದಾಜ್ಞೆ ಹೊರಡಿಸಿದ್ದು ಇರುತ್ತದೆ.  ( covid-19)  ಕರೊನಾ ವೈರಸ  ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮೀಕ  ರೋಗ  ಇರುತ್ತದೆ.  ಅದಕ್ಕೆ ಯಾವುದೆ ಮುಂಜಾಗ್ರತೆ ವಹಿಸದೆ ಗುಂಪ್ಪಾಗಿ ಕೂಡುವದು    ಸರಿ ಅಲ್ಲಾ  ಎಂದು ಹೇಳಿದಾಗ ಅವರು  ನಾವು ಹೇಳಿದಂತೆ ಮಾಡದೆ ನಿರ್ಲಕ್ಷತನ ವಹಿಸಿದ್ದು ಇರುತ್ತದೆ.  ಮತ್ತು ಅವರಿಗೆ ಈ ಮೊದಲು  ಮನವರಿಕೆ ಮಾಡಿದ್ದರು ಕೂಡಾ ಯಾವುದೆ  ಸರಕಾರದ  ಆಧೇಶ ಪಾಲನೆ ಮಾಡದೆ ಪದೆ ಪದೆ ಈ ರೀತಿ ಓಡಾಡುವುದು  ಕಂಡು ಬಂದಿರುತ್ತದೆ. ಕರೊನಾ ವೈರಸ ( covid-19)  ಹರಡದಂತೆ ತಡೆಗಟ್ಟಲು  ಸರಕಾರ ನಿಷೇದಾಜ್ಞೆ ಹೊರಡಿಸಿದ್ದು  ಗೊತ್ತಿದ್ದರೂ ಕೂಡಾ ತಮ್ಮ ತಮ್ಮ   ಮುಖಕ್ಕೆ ಮಾಸ್ಕ ಹಾಕಿಕೊಳ್ಳದೆ ಮತ್ತು ಕೈಗಳಿಗೆ ಹ್ಯಾಂಡ್ ಗಲೊಸ್  ಹಾಕಿಕೊಳ್ಳದೆ  ನಿರ್ಲಕ್ಷತನ ವಹಿಸಿ ಸಾರ್ವಜನಿಕ ಸ್ಥಳದಲ್ಲಿ   ಗುಂಪಾಗಿ ಕೂಳಿತಿದ್ದು   ಇದ್ದರಿಂದ ಕರೊನಾ ವೈರಸ     ( covid-19)   ಪ್ರಾಣಕ್ಕೆ ಅಪಾಯಕಾರಿ  ರೋಗದ ಸೊಂಕು ಹರಡುವ ಸಂಭವ ಇದೆ ಎಂದು ಗೊತ್ತಿದ್ದರು ಕೂಡಾ  ಉದ್ದೇಶಪೂರ್ವಕವಾಗಿ  ತಮ್ಮ  ಮುಖಕ್ಕೆ ಮಾಸ್ಕ ಹಾಕಿಕೊಳ್ಳದೆ ಮತ್ತು ಕೈಗಳಿಗೆ ಹ್ಯಾಂಡ್ ಗಲೊಸ್  ಹಾಕಿಕೊಳ್ಳದೆ  ಹಾಗೂ ಸಾಮಾಜಿಕ  ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷತನ ವಹಿಸಿ ಗ್ರಾಮದಲ್ಲಿ  ಗುಂಪ್ಪಾಗಿ ಕುಳಿತಿದ್ದು ಇರುತ್ತದೆ  ಕಾರಣ  ಅವರ  ವಿರುದ್ದ ಕಾನೂನು ಕ್ರಮ ಜರುಗಿಸಬವೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಅವಿನಾಶ ತಂದೆ ಬಾಲಕೃಷ್ಣ ರಜಪೂತ ಸಾ: ಅಫಜಲಪೂರ ರವರ  ತಂದೆಯವರಾದ ಬಾಲಕೃಷ್ಣ ತಂದೆ ರಾಮಕೃಷ್ಣ ರಜಪೂತ ಇವರು ಪ್ರತಿದಿನ ರೇಣುಕಾ ಸಕ್ಕರೆ ಕಾರ್ಖಾನೆ ಹವಳಗಿಯಲ್ಲಿ ಸೇಕ್ಯೂರಿಟಿ ಗಾರ್ಡ ಅಂತಾ ಕೆಲಸ ಮಾಡಿಕೊಂಡಿರುತ್ತಾರೆ. ಹೀಗಿದ್ದು ನಮ್ಮ ತಂದೆಯವರು ದಿನಾಂಕ:15/04/20 ರಂದು ಬೆಳಿಗ್ಗೆ ಕಾರ್ಖಾನೆಗೆ ಕೆಲಸಕ್ಕೆಂದು ಹೊಗುವದಕ್ಕೆ ತಯಾರಾದಾಗ ನಮ್ಮ ಮೋಟಾರ ಸೈಕಲ ಪಂಕ್ಷರ ಆಗಿದ್ದರಿಂದ ಬಲರಾಮಸಿಂಗ ತಂದೆ ಸಿತಾರಾಮ ರಜಪೂತರವರಿಗೆ ಕರೆದು ನಮ್ಮ ತಂದೆಯು ನನಗೆ ಸಕ್ಕರೆ ಕಾರ್ಖಾನೆಯವರಿಗೆ ಬಿಟ್ಟು ನೀನು ವಾಪಿಸ್ಸು ಬರುವಿಯಂತೆ ಮೋಟಾರ ಸಯಕಲ ತಗೆದುಕೊಂಡು ಬಾ ಅಂತ ಹೇಳಿದ್ದರಿಂದ ಬಲರಾಮಸಿಂಗನು ಮೋಟಾರ ಸೈಕಲ ನಂ ಕೆ,ಎ-32 ಈಕೆ-7326 ನೇದ್ದು ತಗೆದುಕೊಂಡು ಬಂದಿದ್ದರಿಂದ ನಮ್ಮ ತಂದೆ ಮತ್ತು ಬಲರಾಮಸಿಂಗ ಇಬ್ಬರು ಕೂಡಿ ಮೋಟಾರ ಸೈಕಲ ಮೇಲೆ ನಮ್ಮ ಮನೆಯಿಂದ ಹೋಗಿರುತ್ತಾರೆ ಹೊಗುವಾಗ ಬಲರಾಮಸಿಂಗನು ಮೋಟಾರ ಸೈಕಲನ್ನು ಚಲಾಯಿಸುತ್ತಿದ್ದನು ನಂತರ ನನ್ನ ಮೋಬೈಲಗೆ ಒಬ್ಬ ವ್ಯಕ್ತಿ ಪೊನ ಮಾಡಿ ನಾನು ನಿಮ್ಮ ತಂದೆ ಜೋತೆಯಲ್ಲಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವವನಿರುತ್ತೆನೆ ನಿಮ್ಮ ತಂದೆಗೆ ಹಿಂಚಗೇರಾ ಗ್ರಾಮದ ಹತ್ತೀರ ಮುಖ್ಯ ಡಾಂಬರ ರೋಡಿನ ಮೇಲೆ ಅಪಘಾತವಾಗಿರುತ್ತದೆ ನಾವು 108 ವಾಹನಕ್ಕೆ ಕರೆಮಾಡಿದ್ದು ನಿಮ್ಮ ತಂದೆಗೆ ಅಫಜಲಪೂರ ಸರಕಾರಿ ಆಸ್ಪತ್ರೇಗೆ ಕರೆದುಕೊಂಡು ಬರುತ್ಥೇವೆ ನೀವು ಅಲ್ಲಿಗೆ ಬನ್ನಿ ಅಂತ ತಿಳಿಸಿದ್ದರಿಂದ ನಾನು ಮತ್ತು ನನ್ನ ತಾಯಿ ಇಬ್ಬರು ಆಸ್ಪತ್ರೇಗೆ ಹೋಗಿ ನೋಡಲಾಗಿ ನಮ್ಮ ತಂದೆಗೆ ಎಡತಲೆಗೆ ಹಾಗೂ ಮೂಗಿಗೆ ಎಡಕಿವಿಗೆ ರಕ್ತಗಾಯ ಮತ್ತು ತೆಲೆಗೆ ಭಾರಿ ಒಳಪೆಟ್ಟು ಆಗಿರುವದು ಕಂಡು ಬಂತು ನನ್ನ ತಂದೆ ಮಾತನಾಡುವ ಸ್ಥಿತಿಯಲ್ಲಿ ಇದ್ದಿರಲಿಲ್ಲ ಆಗ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಧನ್ವಂತರಿ ಆಸ್ಪತ್ರೇಗೆ ಸೇರಿಕೆಮಾಡಿರುತ್ತೆವೆ ಘಟನೆ ಬಗ್ಗೆ ತಿಳಿದುಕೊಳ್ಳಲಾಗಿ 6 ,ಎಮ್.ಸುಮಾರಿಗೆ ಜರುಗಿದ್ದು ಬಲರಾಮಸಿಂಗ ತಂದೆ ಸಿತಾರಾಮನು ಮೋಟಾರ ಸೈಕಲ ಅತಿ ವೇಗವಾಗಿ ನಿಷ್ಕಾಳಜಿತನದಿಂದ ಚಲಾಯಿಸಿ ಒಮ್ಮೆಲೆ ಬ್ರೇಕ ಹಾಕಿದ್ದರಿಂದ ಮೋಟಾರ ಸೈಕಲ ಸ್ಕಿಡ ಆಗಿ ಬಿದ್ದಿರುತ್ತದೆ ಅಂತಾ ಗೊತ್ತಾಗಿರುತ್ತದೆ ಕಾರಣ ಮೋಟಾರ ಸೈಕಲನ್ನು ಅತಿ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಅಪಘಾತಪಡಿಸಿ ಮೋಟಾರ ಸೈಕಲ್ ಸ್ಥಳದಲ್ಲೆ ಬಿಟ್ಟು ಹೋದ ಬಲರಾಮಸಿಂಗ ತಂದೆ ಸೀತಾರಾಮ ರಜಪೂತ ಸಾ||ದೇವಣಗಾಂವ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

19 April 2020

KALABURAGI DISTRICT PRESS NOTE


                                                  : ಪತ್ರಿಕಾ ಪ್ರಕಟಣೆ :                                                                   
  (ದಿನಾಂಕ: 19.04.2020)
          ದೇಶದಲ್ಲಿ ಮಹಾಮಾರಿ ಕೋವಿಡ್-19 ಕೊರೊನಾ ಸಾಂಕ್ರಾಮಿಕ ರೋಗ ಹರಡುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಸನ್ಮಾನ್ಯ ಪ್ರಧಾನ ಮಂತ್ರಿಗಳು ದೇಶದ್ಯಾಂತ ಲಾಕ್ಡೌನ ಘೋಷಣೆ ಮಾಡಿದ್ದು ಈ ದಿಶೆಯಲ್ಲಿ (ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿ ಹೊರತು ಪಡಿಸಿ) ಕಲಬುರಗಿ ಜಿಲ್ಲೆಯ ಆಳಂದ, ಅಫಜಲಪೂರ, ಜೇವರ್ಗಿ,  ಚಿತ್ತಾಪೂರ, ಶಹಾಬಾದ, ಸೇಡಂ, ಮತ್ತು ಚಿಂಚೋಳಿ ತಾಲ್ಲೂಕಾಗಳ ವ್ಯಾಪ್ತಿಯಲ್ಲಿ ಲಾಕ್ಡೌನನ್ನು ಉಲ್ಲಂಘಿಸಿದವರ ವಿರುದ್ದ ಜಿಲ್ಲೆಯ ವಿವಿದ ಪೊಲೀಸ ಠಾಣೆಗಳಲ್ಲಿ ಇಲ್ಲಿಯವರೆಗೆ  ಒಟ್ಟು 38 ಲಾಕ್ಡೌನ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿಕೊಂಡು ಆ ಪ್ರಕರಣಗಳಿಗೆ ಸಂಭಂದಿಸಿದಂತೆ 122 ಜನರನ್ನು ದಸ್ತಗಿರಿಗೊಳಿಸಲಾಗಿರುತ್ತದೆ ಹಾಗೂ ಲಾಕ್ಡೌನ ಉಲ್ಲಂಘನೆ ಪ್ರಕರಣಗಳಲ್ಲಿ ಭಾಗಿಯಾದ 118 ಜನರ ವಿರುದ್ದ ರೌಡಿ ಶೀಟ ತೆರೆಯಲಾಗಿದೆ. ಅಲ್ಲದೆ ಲಾಕ್ಡೌನ ಉಲ್ಲಂಘಿಸಿ ರಸ್ತೆಯಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದ 659 ವಾಹನಗಳನ್ನು ವಶಕ್ಕೆ ಪಡೆದುಕೊಂಡು 92,700-00 ರೂ. ದಂಡ ವಿಧಿಸಲಾಗಿದೆ.

                                                                                                ಸಹಿ/-
                                                                                        ಪೊಲೀಸ ಅಧೀಕ್ಷಕರು,
                                                                                              ಕಲಬುರಗಿ
ಗೆ,
ಸಂಪಾದಕರು
ಕಲಬುರಗಿ ನಗರದ ಎಲ್ಲಾ ಪತ್ರಿಕೆಗಳು.

13 April 2020

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ:12/04/2020 ರಂದು ಮಧ್ಯಾಹ್ನ ಮುನ್ನಳ್ಳಿ ಗ್ರಾಮದ ರಾಚಣ್ಣಾ ತಂದೆ ಮಲಕಪ್ಪಾ ಪಟ್ಟಣ ಇವರ ಹೊಲದ ಪಕ್ಕ ಹಳ್ಳದ ದಂಡೆಯ ಮೇಲೆ ಬೆವಿನ ಮರದ ಕೆಳಗೆ ಸುಮರು 8-10 ಜನರು ದುಂಡಾಗಿ ಕುಳಿತು ಇಸ್ಪಿಟ್ ಎಲೆಗಳ ಸಾಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ಹಾಗೂ ಸಿಪಿಐ ಸಾಹೇಬರು ಆಳಂದ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ನರೋನಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸರ್ಕಾರಿ  ಜೀಪ್ ನಂ ಕೆಎ32-ಜಿ476 ನೇದ್ದರಲ್ಲಿ ಮುನ್ನಳ್ಳಿ ಗ್ರಾಮ ಸೀಮಾಂತರದಲ್ಲಿ ಹೋಗಿ ವಿಚಾರಿಸುತ್ತಾ, ರಾಚಣ್ಣಾ ತಂದೆ ಮಲಕಪ್ಪಾ ಪಟ್ಟಣ ಇವರ ಹೊಲಕ್ಕೆ ಹೋಗಿ ಹೊಲದ ಬಂದಾರಿಯ ಮರೆಯಲ್ಲಿ ನಿಂತು ನೋಡಿದಾಗ ಹೊಲದ ಪಕ್ಕ ಹಳ್ಳದ ದಂಡೆಯ ಮೇಲೆ ಬೆವಿನ ಮರದ ಕೆಳಗೆ ಸುಮಾರು 9ಜನರು ದುಂಡಾಗಿ ಕುಳಿತು ಇಸ್ಟಿಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಇಟ್ಟು ಅಂದರ ಬಾಹರ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಸುಮಾರು 4ಜನ ಓಡಿ ಹೋಗಿದ್ದು 5ಜನ ಸಿಕ್ಕಿರುತ್ತಾರೆ. ಸದರಿಯವರ ಹೆಸರು ವಿಳಾಸ ವಿಚಾರಿಸಲಾಯಿತು 1)ಶರಣಬಸಯ್ಯ ತಂದೆ ಪರಮೇಶ್ವರಯ್ಯ ಸ್ವಾಮಿ,. 2)ನಾರಾಯಣ ತಂದೆ ಗುಂಡೇರಾವ ಇಂಗಳೆ, 3)ದಿಗಂಬರ ತಂದೆ ಹಣಮಂತರಾವ ಇಂಗಳೆ, 4)ನಂದೇಶ ತಂದೆ ಶಿವಶರಣಪ್ಪಾ ಪಾಟೀಲ್, 5) ಸಂಗಯ್ಯಸ್ವಾಮಿ ತಂದೆ ವಿಶ್ವನಾಥಯ್ಯ ಮಠಪತಿ, ಸಾ: ಎಲ್ಲರು ಮುನ್ನಳ್ಳಿ,  ಅಂತಾ ತಿಳಿಸಿದ್ದು ಓಡಿ ಹೋದವರ ಹೆಸರು ಮತ್ತು ವಿಳಾಸ ವಿಚಾರಿಸಿದಾಗ ಅವರ ಹೆಸರು 6) ರವೀಂದ್ರ ತಂದೆ ಶಿವಶರಣಪ್ಪಾ ವಾಲಿ, 7) ವೆಂಕಟ್ ತಂದೆ ಮಾಲು ಅವತಾಡೆ, 8) ಲಿಂಗರಾಜ ತಂದೆ ಮಾಹಾದೇವ ಜಾನೆ, 9)ಸಂಜು ತಂದೆ ಮಲ್ಲೇಶಪ್ಪಾ ಕೊಳ್ಳಿ, ಸಾ:ಮುನ್ನಳ್ಳಿ ಗ್ರಾಮ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ 2640/- ರೂ ನಗದು ಹಣ 52 ಇಸ್ಪೀಟ ಎಲೆಗಳು ಮತ್ತು  1)ಒಂದು ನೀಲಿ ಮತ್ತು ಕಪ್ಪು ಬಣ್ಣದ ಸ್ಪ್ಲೈಂಡರ್ ಪ್ಲಸ್ ಮೊಟಾರ್ ಸೈಕಲ್ ನಂ ಕೆಎ 32 ಇ-ಎಂ 6761 ಅಂದಾಜು ಕಿಮ್ಮತ್ತು 30000/- ಸಾವಿರ, 2)ಒಂದು ನೀಲಿ ಮತ್ತು ಕಪ್ಪು ಬಣ್ಣದ ಹೀರೊಹೊಂಡಾ ಸ್ಪ್ಲೈಂಡರ್ ಪ್ರೋ ಮೊಟಾರ್ ಸೈಕಲ್ ನಂ ಕೆಎ32-ವೈ8781 ಅಂದಾಜು ಕಿಮ್ಮತ್ತು 40000/- ಸಾವಿರ, 3)ಒಂದು ಕೆಂಪು ಮತ್ತು ಕಪ್ಪು ಬಣ್ಣದ ಹೊಂಡಾ ಡ್ರೀಮ್ ಮೊ.ಸೈ ನಂ ಕೆಎ32-ಇಎನ್0062 ಅಂ.ಕಿ ರೂ 50000/- 4)ಕೆಂಪು ಬಣ್ಣದ ಫ್ಯಾಷನ್ ಪ್ರೋ ಮೊ.ಸೈ ನಂ ಕೆಎ32-ಇಇ5358 ಅಂದಾಜ ಕಿಮ್ಮತ್ತ 25000/- ಸಾವಿರ, 5)ಕಪ್ಪು ಬಣ್ಣದ ಹಿರೋ ಸ್ಪೆಲೆಂಡರ್ ಮೊ.ಸೈ ನಂಬರ್ ಇರುವುದಿಲ್ಲ ಚೆಸ್ಸಿ ನಂಬರ್ ಪರೀಶೀಲಿಸಿದಾಗ MBLHAR0805JHG31010 ಅಂದಾಜು ಕಿಮ್ಮತ್ತ 65000/- ಹೀಗೆ 52 ಇಸ್ಟಿಪ್ ಎಲೆಗಳು 2640/- ನಗದು ಹಣ 5 ಮೊಬೈಲ್ ಹಾಗೂ 5 ಮೊಟಾರ್ ಸೈಕಲಗಳು ಇವೆಲ್ಲವುಗಳನ್ನು ಜಪ್ತಿ ಮಾಡಿಕೊಂಡು  ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು  ಪ್ರಕರಣ ದಾಖಲಿಸಲಾಗಿದೆ. 
ಆಕ್ರಮವಾಗಿ ಮಾರಾಟ ಮಾಡುತ್ತಿದ್ದ ಮಧ್ಯ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 12-04-2020 ರಂದು ಕೊರೊನಾ ವೈರಸ್ ಕೋವಿಡ-19 ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ರಾಜ್ಯದ್ಯಂತ ಹಾಗೂ ರಾಷ್ಟ್ರಾಧ್ಯಂತ ಕಲಂ:133, 144 ಸಿಆರ್.ಪಿಸಿ ಪ್ರಕಾರ ಲಾಕ್ ಡೌನ ಘೊಷಿಸಿದ್ದು ಇರುತ್ತದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಾ ಅಫಜಲಪೂರ ಪಟ್ಟಣದ ಬಸವೇಶ್ವರ ಸರ್ಕಲ ಹತ್ತೀರ ಇದ್ದಾಗ ಚಿಂಚೋಳಿ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮೋಟಾರ ಸೈಕಲ ಮೇಲೆ ಮದ್ಯವನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಲ್ಲಬಾದ-ರೇವೂರ ಮುಖ್ಯ ರೋಡಿಗೆ ಹೊಂದಿಕೊಂಡಿರುವ ಚಿಂಚೋಳಿ ಕ್ರಾಸ ಹತ್ತೀರ ಹೋಗುತ್ತಿದ್ದಂತೆ ನಮ್ಮ ಜೀಪ ಎದುರುಗಡೆ ಒಬ್ಬ ವ್ಯಕ್ತಿ ಮೋಟಾರ ಸೈಕಲ ಮೇಲೆ ಒಂದು ರಟ್ಟಿನ ಬಾಕ್ಸ ಇಟ್ಟುಕೊಂಡು ಬಂದಿದ್ದು ನಮಗೆ ಸಂಶಯ ಬಂದು ಅದನ್ನು ನಿಲ್ಲಿಸುವಂತೆ ಕೈ ಸೂಚನೆ ಕೊಟ್ಟಾಗ ಆ ವ್ಯಕ್ತಿ ಮೋಟಾರ ಸೈಕಲ ನಿಲ್ಲಿಸಿ ನಮಗೆ ನೋಡಿ ಮೋಟಾರ ಸೈಕಲ ಮೇಲೆ ಇಳಿದು ಮೋಟಾರ ಸೈಕಲ ಬಿಟ್ಟು ಹಿಂದಕ್ಕೆ ಸರಿದನು  ಆಗ ನಾವು ಪಂಚರ ಸಮಕ್ಷಮ ಮೋಟಾರ ಸೈಕಲ ಹತ್ತಿರ ಹೋಗಿ ರಟ್ಟಿನ ಡಬ್ಬಿ ನೋಡಲಾಗಿ ಅದರಲ್ಲಿ ಮಧ್ಯದ ಬಾಟಲಿಗಳು ಇದ್ದವು ಆಗ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಲು ಹೋದಾಗ ಸದರಿ ಓಡಿ ಹೊದನು  ಆಗ ನಾವು ಸದರಿಯವನನ್ನು ಬೆನ್ನಟ್ಟಿದರೂ ಸಹ ನಮಗೆ ಸಿಗಲಿಲ್ಲ ಸದರಿ ವ್ಯಕ್ತಿ  ಸ್ಥಳದಲ್ಲಿ ಬಿಟ್ಟು ಹೋದ ಮೋಟಾರ ಸೈಕಲ ನಂಬರ ಮತ್ತು ರಟ್ಟಿನ ಬಾಕ್ಸನ್ನು ಪರಿಶೀಲಿಸಿ ನೋಡಲು ಮೋಟಾರ ಸೈಕಲ ನಂಬರ ಕೆ,ಎ-32 ಈಕ್ಯೂ-5483 ಅಂತ ಇರುತ್ತದೆ ಮತ್ತು ರಟ್ಟಿನ ಬಾಕ್ಸದಲ್ಲಿದ್ದ ಮಧ್ಯದ ಬಾಟಲಿಗಳನ್ನು ನೋಡಲು (01)ದೇಶಿ ದಾರು ಅಂತ ಬರೆದ 180 ಎಮ್,ಎಲ್.ಅಳತೆಯ 15 ಬಾಟಲಗಳು ಅ||ಕಿ||780 ನಂತರ ನಮ್ಮಿಂದ ತಪ್ಪಿಸಿಕೊಂಡು ಓಡಿ ಹೊದ ವ್ಯಕ್ತಿಯ ಹೆಸರು ಬಾತ್ಮಿದಾರರಿಗೆ ವಿಚಾರಿಸಿ ತಿಳಿದುಕೊಳ್ಳಲಾಗಿ 1)ಸಿದ್ದಪ್ಪ ತಂದೆ ವಿಠಲ ಪೂಜಾರಿ  ಸಾ||ಚಿಂಚೋಳಿ ಎಂದು ಗೊತ್ತಾಗಿರುತ್ತದೆ. ಸದರಿಯವುಗಳನ್ನು ಮತ್ತು ಮೋಟಾರ ಸೈಕಲ ಜಪ್ತಿ ಮಾಡಿಕೊಂಡು  ಅಫಜಲಪೂರ ಠಾಣೆಗೆ ಭಂದು ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ನೀಡಿದ್ದರಿಂದ ಹೇನಿನಪುಡಿ ವಿಷ ಕುಡಿದು ಮೃತಪಟ್ಟ ಪ್ರಕರಣ  :
ಜೇವರಗಿ ಠಾಣೆ : ಶ್ರೀಮತಿ ಕುತಿಜಾಬೇಗಂ ಗಂಡ ಮೈಹಿಬೂಬ  ಪಟೇಲ ಸಾ: ಬಿರಾಳ (ಬಿ),  ತಾ: ಜೇವರಗಿ ರವರ ಮಗಳಾದ ನೂರಜಾಬೇಗಂ ಇವಳಿಗೆ ಈಗ ಸುಮಾರು 4 ವರ್ಷದ ಹಿಂದೆ ಗೂಡೂರ  (ಎಸ್..) ಗ್ರಾಮದ ಮುಸ್ತಾಫ ತೇಲಿ  ಇತನ್ನೊಂದಿಗೆ ಜೇವರಗಿಯಲ್ಲಿ  ಮೈಹಿಬೂಬ ಪಂಕ್ಷನ ಹಾಲನಲ್ಲಿ  ಹಿರಿಯ ಸಮಕ್ಷಮದಲ್ಲಿ ಮದುವೆ ಮಾಡಿಕೊಟ್ಟಿರುತ್ತೆವೆ.  ಮದುವೆ ಮುಂಚಿತವಾಗಿ ಮಾತುಕತೆ ಆಡಿದಂತೆ ಮದುವೆ ಕಾಲಕ್ಕೆ ಎರಡು ತೊಲಿ ಬಂಗಾರ,  11000/- ರೂಪಾಯಿ ಹುಂಡಾ, ಮಂಚ ಗಾದಿ ಕಬ್ಬಿಣದ ಅಲಮಾರಿ ಅಡುಗೆ ಮಾಡುವ ಮನೆ ಬಳಕೆ ಹಾಂಡೆ ಬಾಂಡೆ  ತಾಮ್ರ ಕೊಡ  ವಸ್ತಗಳು ನನ್ನ ಅಳಿಯನಿಗೆ ಕೊಟ್ಟಿರುತ್ತೆವೆ.  ನನ್ನ ಮಗಳು  ನೂರಜಾಬೇಗಂ ಇವಳು ಮದುವೆಯಾದ ನಂತರ ತನ್ನ ಗಂಡನ್ನೊಂದಿಗೆ ಗೂಡುರ (ಎಸ್.ಎ) ಗ್ರಾಮದಲ್ಲಿ ತನ್ನ ಗಂಡನ ಮನೇಯಲ್ಲಿಯೇ ವಾಸವಾಗಿದ್ದಳು. ಅವಳಿಗೆ ಮೇಹಾರಬೇಗಂ,  ಮೈನ್ನೊದ್ದೀನ ಅಂತಾ ಇಬ್ಬರೂ ಮಕ್ಕಳಿರುತ್ತಾರೆ.  ಮದುವೆಯಾದ  ಸುಮಾರು 2-3  ವರ್ಷಗಳವರೆಗೆ ಅವಳ ಗಂಡ ಮತ್ತು ಗಂಡನ ಮನೆಯವರು ಅವಳಿಗೆ  ಸರಿಯಾಗಿಯೇ ನೊಡಿಕೊಂಡು ಬಂದಿರುತ್ತಾರೆ.  ನಂತರ ನನ್ನ ಮಗಳಿಗೆ ಅವಳ ಗಂಡ ಮತ್ತು ಅವಳ ಗಂಡನ ಮನೆಯವರು ವಿನಾಕಾರಣವಾಗಿ ಅವಳಿಗೆ ತೊಂದರೆ ಕೊಡುತ್ತಾ ಬಂದಿರುತ್ತಾರೆ.  ಮತ್ತು ನನ್ನ ಮಗಳು ನಮ್ಮ ಮನೆಗೆ ಬಂದಾಗ ನನಗೆ  ನನ್ನ ಗಂಡ ಮತ್ತು ಅತ್ತೆ ಬಾವಂದಿರು ಕೂಡಿಕೊಂಡು ನೀನಗೆ ಮನೆ ಕೆಲಸ, ಮತ್ತು ಅಡುಗೆ  ಸರಿಯಾಗಿ ಮಾಡಲು ಬರುವುದಿಲ್ಲಾ ಮತ್ತು ನೀನ್ನ ತವರು ಮನೆಯವರು ಮದುವೆ ಕಾಲಕ್ಕೆ ಇನ್ನೂ ಬಂಗಾರ ಕೊಡಬೇಕಾಗಿತ್ತು ಕೊಟ್ಟಿಲ್ಲಾ ನೀನ್ನ ತವರು  ಮನೆಯಿಂದ  ಬಂಗಾರ  ತೆಗೆದುಕೊಂಡು ಬಾ ಎಂದು ನನ್ನ ಸಂಗಡ ಜಗಳ ಮಾಡಿ ಹೊಡೆ ಬಡೆ  ಮಾಡಿ ಮಾನಸೀಕ ಮತ್ತು ದೈಹಿಕ  ತೊಂದರೆ  ಕೊಡುತ್ತಿದ್ದಾರೆ . ಎಂದು ನಮ್ಮ ಮುಂದೆ ಹೇಳಿದರಿಂದ ನನಗೆ  ಗೊತ್ತಾಗಿರುತ್ತದೆ.   ಅದಕ್ಕೆ . ನಾನು ಮತ್ತು ನನ್ನ ಗಂಡ ಇಬ್ಬರೂ ಗೂಡರ ಗ್ರಾಮಕ್ಕೆ  ಹೋಗಿ ನನ್ನ ಅಳಿಯನಿಗೆ ಮತ್ತು ಅವರ  ಮನೆಯವರಿಗೆ ಬುದ್ದಿ ಮಾತು ಹೇಳಿ ಬಂದಿರುತ್ತೆವೆ. ಆದರೂ ಕೂಡಾ ನನ್ನ ಮಗಳಿಗೆ ಅವಳ ಗಂಡ ಮತ್ತು ಅತ್ತೆ ಮಾವ ಬಾವಂದಿರರು ಕೂಡಿಕೊಂಡು  ಅವಳಿಗೆ ಬೈಯುವುದು ಹೊಡೆಯುವುದು ಮಾಡಿ ಮಾನಸೀಕ ಮತ್ತು ದೈಹಿಕ ಕಿರಕುಳ ಕೊಡುತಾ ಬಂದಿರುತ್ತಾರೆ. ನನ್ನ ಮಗಳು ಮನೆಯ ಮರ್ಯಾದೆಗೆ ಅಂಜಿ ಮತ್ತು ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ  ಯೋಚಿಸಿ ಅವರು ಕೊಡುವ ತೊಂದರೆ  ತಾಳುತ್ತಾ ಬಂದಿರುತ್ತಾಳೆ. ದಿನಾಂಕ 10/04/2020 ರಂದು ರಾತ್ರಿ 9.30 ಗಂಟೆಯ ಸುಮಾರಿಗೆ ನನ್ನಅಳಿಯ ಇಮಾಮಸಾಬ  ಈತನು ನನಗೆ  ಹೇಳಿದ್ದನೆಂದೆನೆಂದರೆ ಗೂಡೂರ (ಎಸ್.ಎ) ಗ್ರಾಮದಿಂದ ಮುಸ್ತಾಫ ಈತನು  ಪೊನ ಮಾಡಿ  ನೂರಜಾಬೇಗಂ ಇವಳು ಮನೆಯಲ್ಲಿ ಸುಸ್ತಾಗಿ  ಬಿದ್ದಿರುತ್ತಾಳೆ.  ಅವಳಿಗೆ  ಜೇವರಗಿ ಸರಕಾರಿ ಆಸ್ಪತ್ರೆಗೆ  ತೆಗೆದುಕೊಂಡು ಬರುತ್ತಿದ್ದೆವೆ ಎಂದು  ಹೇಳಿರುತ್ತಾನೆ.  ಎಂದು ತಿಳಿಸಿದರಿಂದ   ನಾನು ಮತ್ತು ನನ್ನ ಮಗಳು  ಶಹಾಜಾಬೇಗಂ ಅವಳ ಗಂಡ ಇಮಾಮಸಾಬ ಮೂವರು  ಜೇವರಗಿ ಆಸ್ಪತ್ರೆಗೆ  ಹೋಗಿ ನೋಡಲು ನಮ್ಮ ಮಗಳು ಸತ್ತಿದ್ದಳು.  ನನ್ನ ಅಳಿಯನಿಗೆ ಕೇಳಲು ಅವನು  ಹೇಳಿದ್ದೆನೆಂದರೆ ರಾತ್ರಿ 9.೦೦ ಗಂಟೆಯ ಸುಮಾರಿಗೆ   ಮನೆಯಲ್ಲಿ ನೂರಜಾಬೇಗಂ ಇವಳು ಮನೆಯಲ್ಲಿದ್ದ ಹೇನಿನ ಪುಡಿ ಕುಡಿದು ಸುತ್ತಾಗಿ ಬಿದ್ದಾಗ,  ಅವಳಿಗೆ ಅಸ್ಪತ್ರೆ ತಂದಿರುತ್ತೆವೆ ಅವಳು ಸತ್ತಿರುತ್ತಾಳೆ ಎಂದು ಹೇಳಿ  ಹಾಗೇನೆ ತರಾತುರಿಯಲ್ಲಿ  ನನ್ನ ಮಗಳ ಹೆಣ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಗೂಡರ (ಎಸ್.ಎ) ಗ್ರಾಮಕ್ಕೆ  ತೆಗೆದುಕೊಂಡು ಹೋಗಿ ಮನೆಯಲ್ಲಿ ಹಾಕಿರುತ್ತಾರೆ. ರಾತ್ರಿಯಾಗಿದ್ದರಿಂದ  ನಮಗೇನು ಗೊತ್ತಾಗದಕ್ಕೆ  ನಾನು ನನ್ನ ಗಂಡನಿಗೆ ಮತ್ತು ನಮ್ಮ ಸಂಭಂಧಿಕರಿಗೆ  ವಿಷಯ  ತಿಳಿಸಿದೆನು.  ಇಂದು ದಿ 11/04/2020 ರಂದು ಮುಂಜಾನೆ ನಾನು ಮತ್ತು ನನ್ನ ಗಂಡ ಮೈಹಿಬೂಬ ಪಟೇಲ ಇನ್ನೊಬಳು ಮಗಳಾದ ಶಹಾಜಾಬೇಗಂ, ಹಾಗೂ ಅವಳ ಗಂಡ ಇಮಾಮಸಾಬ ತಂದೆ  ಹುಸೇನಸಾಬ ಇನಾಮ್ದಾರ, ನನ್ನ ತಂಗ್ಗಿ ರೇಷ್ಮಾ ಗಂಡ ಇಸ್ಮಾಯಿಲ್ ಅತ್ತಾರ ಎಲ್ಲರೂ ಕೂಡಿಕೊಂಡು ಗುಡೂರ (ಎಸ್.ಎ) ಗ್ರಾಮಕ್ಕೆ ಹೋಗಿ ನೋಡಿ ನನ್ನ ಮಗಳಿಗೆ ಅವಳ ಗಂಡ ಮತ್ತು ಗಂಡನ ಮನೆಯವರು ತೊಂದರೆ ಕೊಟ್ಟಿದ್ದರಿಂದ  ಅವರು ಕೊಟ್ಟ ಕಿರಕುಳ ತಾಳಲಾರದೆ ಮನೆಯಲ್ಲಿದ್ದ ಹೆನಿನಪುಡಿ ಧಿ  ಕುಡಿದು ಸತ್ತ ಬಗ್ಗೆ ಗೊತ್ತಾಗಿ  ಅವರ ಮೇಲೆ ಕೇಸು ಮಾಡಬೇಕೆಂದು ವಿಚಾರ ಮಾಡಿ  ನೂರಜಾಬೇಗಂ ಇವಳ ಹೆಣ ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು ಹಾಕಿರುತ್ತೆವೆ. ನನ್ನ ಮಗಳಾದ ನೂರಾಜ ಬೇಗಂ ಇವಳಿಗೆ ಅವಳ ಗಂಡ 1)  ಮುಸ್ತಾಫಾ   ತಂದೆ  ಅಹ್ಮದ್ ಹುಸೇನ ತೇಲಿ, ಅವಳ ಬಾವಂದಿರಾದ 2) ನಸೀರೊದ್ದೀನ ತಂದೆ ಅಹ್ಮದ್ ಹುಸೇನ ತೇಲಿ, 3) ಹಜರತಲಿ @ ಅಜ್ಜು  ತಂದೆ ಅಹೇಮದ್ ಹುಸೇನ ತೇಲಿ,  ಅತ್ತೆಯಾದ 4) ಚಾಂದಬೀ ಗಂಡ ಅಹೇಮದ್ದ ಹುಸೇನ್ ತೇಲಿ, ಸಾ: ಗೂಡೂರ ( ಎಸ್.ಎ) ಇವರೆಲ್ಲರೂ ಕೂಡಿಕೊಂಡು ನನ್ನ ಮಗಳಿಗೆ ಅಡುಗೆ ಸರಿಯಾಗಿ ಮಾಡಲು ಬರುವುದಿಲ್ಲಾ ಮತ್ತು ತವರು ಮನೆಯಿಂದ ಬಂಗಾರ ತೆಗೆದುಕೊಂಡು ಬಾ ಎಂದು ಅವಾಚ್ಯವಾಗಿ ಬೈಯುವುದು  ಹೊಡೆಯುವುದು ಮಾಡಿ ಮಾನಸೀಕ ಮತ್ತು ದೈಹಿಕ ಕಿರಕುಳ ನೀಡಿದರಿಂದ ಅವಳು ಮನನೊಂದು  ದಿನಾಂಕ 10/04/2020 ರಂದು ರಾತ್ರಿ 9.00 ಗಂಟೆಯ ಸುಮಾರಿಗೆ  ಮನೆಯಲ್ಲಿ ಹೇನಿನಪುಡಿ ವಿಷ ಕುಡಿದು ಸತ್ತಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.