POLICE BHAVAN KALABURAGI

POLICE BHAVAN KALABURAGI

13 February 2013

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ದಿನಾಂಕ 11-02-2013 ರಂದು  ಮುಂಜಾನೆ  ಬಸವಕಲ್ಯಾಣಕ್ಕೆ  ಕೆಲಸದ ನಿಮಿತ್ಯ ನಾವು ಮನೆಯರೆಲ್ಲರೂ ಮನೆಗೆ ಕೀಲಿ ಹಾಕಿಕೊಂಡು ಹೋಗಿದ್ದು, ದಿನಾಂಕ:12-02-2013 ರಂದು ಬೆಳಿಗ್ಗೆ  ತುಮಕುಂಟಾದಿಂದ ತಮ್ಮ ಅಣ್ಣಾ ಅಂಬಣ್ಣ ಇವರು ಪೋನ ಮಾಡಿ  ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲು ಮುರಿದು, ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ನಾನು ಗಾಬರಿಯಾಗಿ ಬಸವ ಕಲ್ಯಾಣದಿಂದ ಮನೆಗೆ ಬಂದು ನೋಡಲು ಹಲಮಾರಿಯಲ್ಲಿಟ್ಟಿದ್ದ ನಗದು ಹಣ 42,094 ರೂಪಾಯಿಗಳು, ಮತ್ತು ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಹೀಗೆ ಒಟ್ಟು 50294/- ರೂಪಾಯಿಗಳ ಕಿಮ್ಮತ್ತಿನದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಜಗದೀಶ ತಂದೆ ಶರಣಪ್ಪ ಬೇಡರ್ ಸಾ: ತುಮಕುಂಟಾ ತಾ:ಚಿಂಚೋಳಿ ಜಿ:ಗುಲ್ಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:25/2013 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ಶ್ರೀ ಗೋವಿಂದ ತಂದೆ ಜಮಲು ರಾಠೋಡ ಸಾ||ಹಳೆಂಬರ ತಾಂಡಾ ತಾ:ಅವರಾದ ಜಿ:ಬೀದರ ರವರು ನಾನು ಮತ್ತು ನನ್ನ ಹೆಂಡತಿ ಮೊತುಬಾಯಿ, ಮಕ್ಕಳಾದ ಸಂತೋಷ, ಬಾಲಾಜಿ ಹಾಗೂ ಮಗಳು ಪಿಂಕಾಬಾಯಿ ನಮ್ಮ ಜೊತೆಯಲ್ಲಿ ಗೌಂಡಗಾಂವ ತಾಂಡಾದವರಾದ ಅಂಕೋಶ ಜಾದವ, ಲಕ್ಷ್ಮಣ ಜಾದವ  ರವರು ಕೂಡಿಕೊಂಡು ಕೊರ ಗ್ರೀನ್ ಸುಗರ್ ಫ್ಯಾಕ್ಟರಿ ವಡಗೇರಾ ವತಿಯಿಂದ ಕಬ್ಬು ಕಡಿಯಲು ಕೆಲಸಕ್ಕೆಂದು ಬಂದಿರುತ್ತೇವೆ. ದಿನಾಂಕ:13/2/2013 ರಂದು ಬೆಳಿಗ್ಗೆ 10-20 ಗಂಟೆಯ ಸುಮಾರಿಗೆ ಕುಡಿಯುವ ನೀರು ತರಲು ನಾನು ಮತ್ತು ನನ್ನ ಮಗಳು ಪಿಂಕಾಬಾಯಿ ಕೂಡಿ ರಾಷ್ಟ್ರೀಯ ಹೆದ್ದಾರಿ ದಾಟಿ ಫರತಬಾದ ಕರಿಗೊಳೇಶ್ವರ ಗುಡಿಯ ಹತ್ತಿರ ಇರುವ ನೀರಿನ ಗುಮ್ಮಿಗೆ ನೀರು ತರಲು ಹೋಗಿದ್ದು, ನೀರು ತುಂಬಿಕೊಂಡು ನನ್ನ ಮಗಳು ಪಿಂಕಾಬಾಯಿ ರೋಡ ದಾಟುತ್ತಿರುವಾಗ ಗುಲಬರ್ಗಾ ಕಡೆಯಿಂದ ಒಬ್ಬ ಬಿಳಿ ಬಣ್ಣದ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗಳಿಗೆ ಡಿಕ್ಕಿ ಪಡಿಸಿ ಓಡಿ ಹೋಗಿರುತ್ತಾನೆ. ನನ್ನ ಮಗಳಿಗೆ ಡಿಕ್ಕಿ ಪಡಿಸಿದ ಕಾರು  ಮತ್ತು ಅದರ ಚಾಲಕನ ಪತ್ತೆ ಮಾಡಿ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:18/2013 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT


:: ಗುಲಬರ್ಗಾ ಜಿಲ್ಲಾ ಪೊಲೀಸ್ ರ ಕಾರ್ಯಚರಣೆ::
 ಮೂರು (3) ಜನ ಸರಗಳ್ಳರ ಬಂಧನ. ಬಂಧಿತರಿಂದ 4.5 ಲಕ್ಷ ರೂಪಾಯಿ ಬೆಲೆ ಬಾಳುವ ಬಂಗಾರದ ಆಭರಣಗಳು ಮತ್ತು ಮೊಟಾರ ಸೈಕಲ್ ಜಪ್ತಿ.
       ಮಾನ್ಯ ಎನ್. ಸತೀಶಕುಮಾರ ಐ.ಪಿ.ಎಸ್ ಜಿಲ್ಲಾ ಪೊಲೀಸ ಅಧೀಕ್ಷಕರು ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಶ್ರೀ, ಎಸ್ ಅಸ್ಲಂ ಬಾಷಾ ಪ್ರಭಾರಿ ಸಿಪಿಐ ಎಂ.ಬಿ ನಗರ, ಜೆ.ಹೆಚ್ ಇನಾಂದಾರ ಪಿಐ ಸ್ಟೇಷನ ಬಜಾರ ಠಾಣೆ, ಶ್ರೀಮಂತ ಇಲ್ಲಾಳ ಪಿ.ಎಸ.ಐ(ಕಾಸು) ಎಂ.ಬಿ ನಗರ, ಗೋಪಾಲ ರಾಠೋಡ ಪಿ.ಎಸ.ಐ (ಕಾ.ಸು) & ಪ್ರದೀಪ ಬಿ.ಸೆ ಪಿ.ಎಸ್.ಐ (ಅ.ವಿ) ವಿಶ್ವ ವಿದ್ಯಾಲಯ ಪೊಲೀಸ ಠಾಣೆ, ಹಾಗೂ ಸಿಬ್ಬಂದಿಯವರಾದ ಶಿವಪುತ್ರ ಸ್ವಾಮಿ, ಶಿವಪ್ಪ ಕಮಾಂಡೊ, ಶಂಕರ, ಪ್ರಭಾಕರ, ಶ್ರೀನಿವಾಸರೆಡ್ಡಿ, ಗಂಗಾಧರ, ಅಶೋಕ, ಮಶಾಕ, ಅರ್ಜುನ. ಸಿದ್ರಾಮಯ್ಯ, ವೀರಶೆಟ್ಟಿ, ಬಲರಾಮ, ರವರು ಖಚಿತ ಭಾತ್ಮಿಯಂತೆ ದಿನಾಂಕ:13.02.2013 ರಂದು ಅಪರಾತ್ರಿ ಸಮಯದಲ್ಲಿ ಮೂರು ಜನ ಆರೋಪಿತರಾದ 1] ರಾಜು ತಂದೆ ಖಂಡಪ್ಪಾ ಬಾಬನ್ ವಃ24 ವರ್ಷ ಸಾಃ ಸುಂದರ ನಗರ 2) ನಾಗು @ ಲಾಲ್ಯಾ ತಂದೆ ತುಳಜಾರಾಮ ವಃ 22 ವರ್ಷ ಸಾಃ ಸುಂದರ ನಗರ 3) ಪ್ರಸಾದ @ ಕೆಂಪ್ಯಾ ತಂದೆ ಮಲ್ಲಿಕಾಜರ್ುನ ವಃ 22 ವರ್ಷ ಸಾಃ ಸುಂದರ ನಗರ ರವರನ್ನು ದಸ್ತಗಿರಿ ಮಾಡಿದ್ದು,  ಈ ಆರೋಪಿತರು ಅದರ್ಶ ನಗರ ಬಸ್ಸ ನಿಲ್ದಾಣದ ಹತ್ತಿರ ರೋಡಿನ ಮೇಲೆ ಬೆಳಗಿನ ಸಮಯದಲ್ಲಿ ಮಹಿಳೆಯ ಕೊರಳಲ್ಲಿದ್ದ್ದ 05 ತೊಲೆಯ ಬಂಗಾರದ ಮಂಗಳ ಸೂತ್ರ, ನಂತರ ಪ್ರಶಾಂತ ನಗರದಲ್ಲಿ ಮಹಿಳೆಯ ಕೊರಳಲ್ಲಿದ್ದ 03 ತೊಲೆಯ ಬಂಗಾರದ ಚಪಲ ಹಾರ, ವೆಂಕಟೇಶ ನಗರದಲ್ಲಿ ಮಹಿಳೆಯ ಕೋರಳಲ್ಲಿದ್ದ 04 ತೊಲೆಯ ಬಂಗಾರದ ಮಂಗಳಸೂತ್ರ, ಐವಾನ-ಇ-ಶಾಹಿ ಆಲ್ ಬದರ್ ಲೇಡಿಜ್ ಹಾಸ್ಟೆಲ್ ಹತ್ತಿರ ಮಹಿಳೆಯ ಕೊರಳಿಂದ 21/2 ತೊಲೆಯ ಬಂಗಾರದ ಚೈನ್ ಗಳನ್ನು ದೋಚುತ್ತಿದ್ದು, ಮೇಲ್ಕಂಡ ಮೂರು ಜನರು ಸ್ಪ್ಲೆಂಡರ + ಮೊಟಾರ ಸೈಕಲ ಸಿಲ್ವರ ಕಲರ ನೇದ್ದನ್ನು ಬಳಸಿಕೊಂಡು ಸರಗಳ್ಳತನ ಮಾಡಿರುತ್ತಾರೆ.ಈ ನಾಲ್ಕು ಬಂಗಾರದ ಸರಗಳನ್ನು ಆರೋಪಿತರ ಕಡೆಯಿಂದ ಜಪ್ತಿ ಮಾಡಿಕೊಂಡಿದ್ದು, ಒಟ್ಟು 140 ಗ್ರಾಂ ಬಂಗಾರದ ಆಭರಣಗಳು ಅ.ಕಿಃ 4,20,000/-ರೂ ಹಾಗೂ ಈ ಸರಗಳ್ಳತನಕ್ಕೆ ಬಳಸಿದ ಮೋಟಾರ ಸೈಕಲ್ ಸ್ಪ್ಲೆಂಡರ + ಅಕಿ.ಃ 30,000/- ಒಟ್ಟು 4,50,000/- ರೂ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
      ಈ ತನಿಖಾ ತಂಡವು ಶ್ರೀ ಕಾಶಿನಾಥ ತಳಕೇರಿ ಅಪರ ಅಧೀಕ್ಷಕರು ಗುಲಬರ್ಗಾ, ಶ್ರೀ ತಿಮ್ಮಪ್ಪ ಹೆಚ್, ಉಪಾಧೀಕ್ಷಕರು ಗ್ರಾಮಾಂತರ ಉಪವಿಭಾಗ ಗುಲಬರ್ಗಾರವರ ನೇತೃತ್ವದಲ್ಲಿ ಪತ್ತೆ ಕಾರ್ಯ  ಮಾಡಿರುತ್ತಾರೆ.

ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬ್ಯಾಗ್ ಕಳ್ಳತನ ಪ್ರಕರಣದ ಆರೋಪಿ ಬಂಧನ, ಬಂಧಿತನಿಂದ ಬಂಗಾರದ ಆಭರಗಣಗಳು ಜಪ್ತಿ:
ವಿಶಾಲ ವಿಶ್ವ  ಕನ್ನಡ ದಿನಪತ್ರಿಕೆಯ ಸಂಪಾದಕಿ ಶ್ರೀಮತಿ. ಅಕ್ಕಮಹಾದೇವಿ ಗಂಡ ವಿಶ್ವನಾಥ ಸ್ವಾಮಿ  ಇವರು ದಿನಾಂಕ:14-06-2012 ರಂದು ರಾತ್ರಿ ವೇಳೆಯಲ್ಲಿ  ದಾವಣಗೇರೆಯಿಂದ  ರಾಜಹಂಸ ಬಸ್ಸಿನಲ್ಲಿ  ಕುಳಿತು ಗುಲಬರ್ಗಾ ಕ್ಕೆ ಪ್ರಯಾಣ ಮಾಡುತ್ತಿರುವಾಗ  ಬಸ್‌ ಕ್ಯಾರಿಯರದಲ್ಲಿ ಇಟ್ಟಿದ್ದ   ಬ್ಯಾಗ  ಕವರ್‌ ಹರಿದು ಬ್ಯಾಗದಲ್ಲಿಟ್ಟಿದ್ದ   ಒಂದು ಬಂಗಾರ ಚೈನ,  ಬಂಗಾರದ ಬಳೆಗಳು, ಬಂಗಾರದ ಕಿವಿ ಹೂವುಗಳು, ಒಂದು ನೊಕಿಯಾ ಮೊಬೈಲ ಹೀಗೆ ಒಟ್ಟು  2,15,000/-  ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು ಮತ್ತು  ಮೊಬೈಲ ಫೋನ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅಂತಾ ದೂರಿನ ಮೇಲೆ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ. 52/2013 ಕಲಂ. 379 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿತ್ತು.  
         ಈ ಪ್ರಕರಣದಲ್ಲಿ ಕಳುವಾಗಿದ್ದ ಮೊಬೈಲ  ತಂತ್ರಾಂಶಗಳಿಂದ ಶ್ರೀ. ಭೂಷಣ ಬೊರಸೆ  ಎ.ಎಸ್‌.ಪಿ  ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ,   ಶ್ರೀ.ಟಿ.ಹೆಚ್‌ ಕರಿಕಲ್‌  ಪಿ.ಐ ಹಾಗು ಸುರೇಶಕುಮಾರ, ಉಮ್ಮಣ್ಣಾ,  ಚಂದ್ರಕಾಂತ,ಉಮೇಶ ಪಿಸಿರವರು  ಬಸ್ಸಿನಲ್ಲಿ ಬ್ಯಾಗ ಕಳ್ಳತನ ಮಾಡುವ  ಆರೋಪಿತನಾದ  ರಾಜೇಂದ್ರ ತಂದೆ ತಾಯಪ್ಪಾ ದಂಡಗುಲೆ  ಸಾ:ಆಳಂದ  ಜಿ:ಗುಲಬರ್ಗಾ ಇತನಿಗೆ ಪತ್ತೆ ಹಚ್ಚಿ   ಒಂದು ಜೊತೆ  ಬಂಗಾರದ ಬಳೆಗಳು, ಎರಡು ಜೊತೆ ಬಂಗಾರದ ಕಿವಿ ಹೂವುಗಳು, ಒಂದು ನೊಕಿಯಾ ಮೊಬೈಲ, ಒಂದು ಹಿರೊ ಹೊಂಡಾ ಸ್ಪ್ಲೇಂಡರ ದಿಚಕ್ರ ವಾಹನ ನಂ. ಕೆಎ -32 ಕೆ-8954  ಹೀಗೆ ಒಟ್ಟು 1,40,000/- ರೂಪಾಯಿ ಕಿಮ್ಮತ್ತಿನ ಬಂಗಾರ ಮತ್ತು  ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಆರೋಪಿತನಿಗೆ  ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.


GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀಮತಿ.ಶರಣಮ್ಮ ಗಂಡ ದುಂಡಪ್ಪ ಕೊಚಿ ಸಾ:ಝಳಕಿ (ಕೆ) ರವರು ನಾನು ದಿನಾಂಕ:11/02/2013 ರಂದು ಮಧ್ಯಾಹ್ನ 2-00 ಗಂಟೆಗೆ ಮನೆಯಲ್ಲಿರುವಾಗ  ಹವಳಪ್ಪ ತಂದೆ ಭೋಗಪ್ಪ ಕೊಚಿ ಸಂಗಡ 8 ಜನರು ಸಾ:ಎಲ್ಲರೂ ಝಳಕಿ(ಕೆ)  ರವರು ಕೂಡಿಕೊಂಡು ಬಂದು ಹಳೆಯ ವೈಷ್ಯಮದಿಂದ ಜಗಳ ತಗೆದು ಅವಾಚ್ಯ ಶಬ್ಬಗಳಿಂದ ಬೈಯುತ್ತಿದ್ದಾಗ ಯಾಕೇ ಬೈಯುತ್ತಿದ್ದಿರಿ ಅಂತಾ ಕೇಳಲು ದತ್ತಪ್ಪ ಇತನು ಅವಾಚ್ಯವಾಗಿ ಬೈದು ಸುಳ್ಳು ಕೆಸ್ ಮಾಡುತ್ತಿ ಹೊಡೆ ಬಡೆ ಮಾಡಿರುತ್ತಾರೆ. ನನ್ನ ಮಗಳಾದ ರುಕ್ಮೀಣಿ ಬಾಯಿಗೆ ಈಜಮ್ಮ, ಸಿದ್ದಮ್ಮ.ಗುರುಬಾಯಿ ಹಲ್ಲೆ ಮಾಡಿರುತ್ತಾರೆ. ದತ್ತಪ್ಪ ಕೊಚಿ ಮತ್ತು ಅವನ ಸಂಗಡ ಇನ್ನೂ 8 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶರಣಮ್ಮ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ:18/2013 ಕಲಂ: 143,147,323,324,341,354,504,506 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರರಕಣ  ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ 11-02-13 ರಂದು ಮಧ್ಯಾಹ್ನ 4:30 ಗಂಟೆ ಸುಮಾರಿಗೆ ನಾನು ತಾವರಗೇರಾ ಗ್ರಾಮದಲ್ಲಿ ನನ್ನ ಅಜ್ಜಿ ಸಿದ್ದಮ್ಮಾ ಇವಳ ಮೈಯಲ್ಲಿ ಆರಾಮ ಇಲ್ಲದ ಕಾರಣ ಮಾತನಾಡಿಸುವ ಕುರಿತು ಮೋಟಾರ ಸೈಕಲ ಕೆಎ 32 ಅರ್ 1437  ಮೇಲೆ  ಒಬ್ಬನೇ ಕುಳಿತುಕೊಂಡು  ಗುಲಬರ್ಗಾದಿಂದ ಹೊರಟಾಗ  ತಾವರಗೇರಾ ಕ್ರಾಸ ಸಮೀಪ ಹುಮನಾಬಾದ ರೋಡ ಕಡೆಯಿಂದ ಕ್ರೋಜರ ನಂಬರ ಎಪಿ-22/ವಿ-5967 ಚಾಲಕ ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಬಂದವನೇ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದಿದ್ದರಿಂದ  ನನ್ನ  ಬಲಗಾಲ ತೊಡಗೆ ಬಲಗೈ ಮೊಣಕಣ್ಣಿನ ಹತ್ತಿರ ಭಾರ ರಕ್ತಗಾಯವಾಗಿರುತ್ತದೆ ಅಂತಾ ಶ್ರೀ ವಿನಯ ತಂದೆ ನಾಗಯ್ಯ ಮಠಪತಿ ಸಾ: ತಾವರಗೇರಾ ಗ್ರಾಮ ಹಾ:ವ: ಮಹಾಲಕ್ಷ್ಮೀ ಲೇಔಟ್ ನೆಹರು ಗಂಜ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 95/2013 ಕಲಂ 279, 338 ಐಪಿಸಿ ಸಂ. 187 ಎಂ.ವಿ.ಅಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.