POLICE BHAVAN KALABURAGI

POLICE BHAVAN KALABURAGI

30 April 2018

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ರಾಘವೇಂದ್ರ ನಗರ ಠಾಣೆ : ದಿನಾಂಕ 28-04-2018 ರಂದು  ಶ್ರೀ ಎನ್, ಚೊಕ್ಕಾರೆಡ್ಡಿ ಭೂ , ವಿಜ್ಞನಿಗಳು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಲಬುರಗಿ  ರವರು ಕಲಬುರಗಿ ನಗರದ ಎಮ್.ಎಸ್.ಕೆ.ಮೀಲ್ ವ್ಯಾಪ್ತಿಯ ಮಹ್ಮದ ಚೌಕ ಹತ್ತಿರ ಟಿಪ್ಪರ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ ಅಂತ ಮಾಹಿತಿ ಇದ್ದು. ಮಾಹಿತಿಯಂತೆ ಅಕ್ರಮ ಮರಳು ಸಾಗಾಟ ಮಾಡುವವರ ವಿರುದ್ದ ಕ್ರಮ ಕೈಕೊಳ್ಳುವ ಕುರಿತು ಇಂದು ಬೆಳ್ಳಿಗೆ 10:45 ಗಂಟೆಗೆ ತಮ್ಮ ಠಾಣೆಗೆ ಹಾಜರಾಗಿ ತಮ್ಮ ಸಹಾಯದೊಂದಿಗೆ ಪಂಚರನ್ನು ಕರೆದುಕೊಂಡು ಮಹ್ಮದ ಚೌಕ ಹತ್ತಿರ ಹೋಗಿ ವಾಹಗಳನ್ನು ಪರಿಶಿಲನೆ ಮಾಡುತ್ತಿದ್ದಾಗ ಬೆಳ್ಳಿಗ್ಗೆ 11:15 ಗಂಟೆಗೆ ಸುರಮಾರಿಗೆ ಒಂದು ಟಿಪ್ಪರ ಲಾರಿ ಬರುತ್ತಿದ್ದು ನಾನು ಮತ್ತು ಪಿ.ಎಸ್.ಐ. ಸಾಹೇಬರು ಸಿಬ್ಬಂದಿಯವರು ರಸ್ತೆಯ ಮೇಲೆ ಸದರಿ ಟಿಪ್ಪರ ಚಾಲಕನಿಗೆ ಟಿಪ್ಪರ ನಿಲ್ಲಿಸುವಂತೆ ಸೂಚಿಸಿದ್ದು ಸದರಿ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ರಸ್ತೆ ಬದಿಗೆ ತೆಗೆದುಕೊಂಡು ಟಿಪ್ಪರ ನಿಲ್ಲಿಸಿ ಒಮ್ಮಲೆ ಅಲ್ಲಿಂದ ಓಡಿ ಹೋಗಿದ್ದು ಟಿಪ್ಪರ ಹತ್ತಿರ ಹೋಗಿ ನೋಡಲು ಸದರಿ ಟಿಪ್ಪರ ನಂ ಓಆರ್ 19 ಬಿ 1110 ಅಂತ ಇದ್ದು, ಸದರಿ ಟಿಪ್ಪರನ್ನು ಪರಿಶೀಲಿಸಿ ನೋಡಲು ಅದರಲ್ಲಿ ಅಂದಾಜು 6 ಬ್ರಾಸ ಮರಳು ಇದ್ದು ಸದರಿ ಟಿಪ್ಪರ ಕ್ಯಾಬಿನ ಒಳಗೆ ಹೋಗಿ ಕ್ಯಾಬಿನ ಪರಿಸಿಲಿಸಿ ನೋಡಲು ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಯಾವುದೆ ಮರಳು ಸಾಗಾಣಿಕೆ ಪರವಾನಿಗೆ ಲಭ್ಯವಾಗಿರುವುದಿಲ್ಲ. ಸದರಿ ಟಿಪ್ಪರ ಚಾಲಕ ಮತ್ತು ಟಿಪ್ಪರ ಮಾಲೀಕ ಕೂಡಿಕೊಂಡು ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಪಿ.ಎಸ್.ಐ. ಸಾಹೇಬರ ಸಹಾಯದೊಂದಿಗೆ ಸದರಿ ಟಿಪ್ಪರ ನಂ ಓಆರ್ 19 ಬಿ 1110 ನೇದ್ದು ಅ:ಕಿ: 3 ಲಕ್ಷ ರೂ ಟಿಪ್ಪರದಲಿದ್ದ ಅಂದಾಜ 6 ಬ್ರಾಸ ಮರಳು ಅ:ಕಿ: 12,000/- ರೂ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 27.04.2018 ರಂದು ಸಾಯಂಕಾಲ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಂಗಾ ನಗರ ನಾಗರ ಕಟ್ಟಾ ಗುಡಿಯ ಮುಂದೆ ರಸ್ತೆಯ ಪಕ್ಕದಲ್ಲಿ ಮೂರು ಜನ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೊಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಂಗಾ ನಗರ ನಾಗರ ಕಟ್ಟಾ ಗುಡಿಯ ಹತ್ತಿರ ಹೋಗಿ ಜೀಪ ನಿಲ್ಲಿಸಿ ನಾವು ಜೀಪಿನಿಂದ ಇಳಿದು ಸ್ವಲ್ಪ ಮುಂದೆ ಹೋಗ ಮರೆಯಲ್ಲಿ ನಿಂತುಕೊಂಡು ನಾಗರ ಕಟ್ಟಾ ಗುಡಿಯ ಮುಂದೆ ರಸ್ತೆಯ ಪಕ್ಕದಲ್ಲಿ ಮೂರು ಜನ ವ್ಯಕ್ತಿಗಳು ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಡುತ್ತಿದ್ದವರನ್ನು ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1. ಶರಣಪ್ಪ @ ಬಾಂಬೆ ಶರಣ್ಯ ತಂದೆ ಗುಂಡಪ್ಪ ಕೂಡಿ ಸಾ: ಯಲ್ಲಮ್ಮ ಗುಡಿ ಹತ್ತಿರ ಗಂಗಾನಗರ ಕಲಬುರಗಿ 2. ಬಾಬುರಾವ ತಂದೆ ಚಂದ್ರಶ್ಯಾ ಡಿಗ್ಗಿ ಸಾ: ನಾಗರಕಟ್ಟಾ ಹತ್ತಿರ ಗಂಗಾನಗರ ಕಲಬುರಗಿ 3. ಸೈಯದ ಖಾದ್ರಿ ತಂದೆ ಸೈಯದ ಮಿನಲ್ಲಾ ಹುಸೇನಿ ಸಾ: ಅಬುಬಕರ ಮಜ್ಜಿದ ಹತ್ತಿರ ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 2710/- ರೂ 5 ಮಟಕಾ ಚೀಟಿಗಳು ಮತ್ತು 3 ಬಾಲ ಪೇನಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 23-04-2018 ರಂದು ಮುಂಜಾನೆ ನನ್ನ ಮಗ ದೇವಾ ಈತನು ನಮ್ಮೂರ ಆದಿತ್ಯ ಈತನಿಗೆ ತುಕರಾಮ  ಇವರ ಹೊಂಡಾ ಎಕ್ಟಿವ್ ಮೋ.ಸೈಕಲ್ ನಂ ಕೆಎ-20-ಎಕ್ಸ್-0128 ನೇದ್ದನ್ನು ನಡೆಸಿಕೊಂಡು ಜೀವಣಗಿ ಗೋಗಿ ರೋಡಿನ ಲಕ್ಷ್ಮಿ ಗುಡಿಯ  ಮುಂದುಗಡೆ ರೋಡಿನ ಮೇಲೆ ಹೋಗುವಾಗ ನಮ್ಮೂರಿನ ಕ್ರೋಜರ ಜೀಪ್ ನಂ ಕೆಎ-39-ಎಮ್-1438 ನೇದ್ದರ ಚಾಲಕನು ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿ ನನ್ನ ಮಗ ದೇವಾ ಈತನಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿ ಓಡಿ ಹೋದ ಬಗ್ಗೆ ನನ್ನ ಹೇಳಿಕೆಯನ್ನು ನೀಡಿ ಕೇಸ ಮಾಡಿದ್ದು ಅಲ್ಲದೆ ಗಾಬರಿಯಲ್ಲಿ ನನ್ನ ಮಗ ದೇವಾನ ಇಂದು ದಿನಾಂಕ 29-4-2018 ರಂದು ಮುಂಜಾನೆ 11-00 ಗಂಟೆಗೆ ನನ್ನ ಮಗ ದೇವಾ ಈತನಿಗೆ ಅಪಘಾತವಾದ ವಿಷಯದಲ್ಲಿ ಮುಂದುವರೆದು ಹೇಳುವುದೇನೆಂದರೆ ಅಪಘಾತದಲ್ಲಿ ದೇವಾ 16 ವರ್ಷ ಈತನ ಬಲ ಮೆಲಕಿಗೆ ಭಾರಿ ರಕ್ತಗಾಯ ಹಾಗೂ ಅಲಲ್ಲಿ ರಕ್ತ ಗುಪ್ತಗಾಯಗಳು ಹೊಂದಿ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದಾಗ ದೇವಾನಿಗೆ ಉಪಚಾರ ಕೊಡಿಸುವ ಖರ್ಚು  ಜಾಸ್ತಿ ಬರುತ್ತಿದ್ದು ನನಗೆ ಹಣದ ತೊಂದರೆ ಇದ್ದುರಿಂದ ದಿನಾಂಕ 27-04-2018 ರಂದು ಸಾಯಂಕಾಲದ ವೇಳೆಯಲ್ಲಿ ನನ್ನ ಮಗ ದೇವಾ ಈತನಿಗೆ ಕಾಮರೆಡ್ಡಿ ಆಸ್ಪತ್ರೆಯಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇನೆ.  ಇಂದು ದಿನಾಂಕ 29-4-2018 ರಂದು ಮುಂಜಾನೆ 10-15 ಗಂಟೆಗೆ ನನ್ನ ಮಗ ದೇವಾ ವಯ 16 ವರ್ಷ ಈತನ ಉಪಚಾರದಲ್ಲಿ ಉಪಚಾರ ಫಲಕಾರಿ ಆಗದೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಶ್ರೀಮತಿ ಶಾರದಾಬಾಯಿ ಗಂಡ ಸುರೇಶ ಮರಗುತ್ತಿ ಸಾ: ಜೀವಣಗಿ ಗ್ರಾಮ ತಾ.ಜಿ ಕಲಬುರಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 April 2018

KALABURAGI DISTRICT REPORTED CRIMES


ಪತ್ರಿಕಾ ಪ್ರಕಟಣೆ :
ಮಾನ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಒಳಾಡಳಿತ ಇಲಾಖೆ ಬೆಂಗಳೂರು ರವರ ಕಛೇರಿ ಆಧೇಶ ಸಂಖ್ಯೆ ಹೆಚ್.ಡಿ -32/ಎಸ್.ಎಸ್.ಟಿ/201807ದಿನಾಂಕ 07-04-2018 ರ ಆಧೇಶದ ಅನ್ವಯ  ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ – 2018 ರ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಎಲ್ಲಾ ವಿಧಾನ ಸಭಾ ಮತಕ್ಷೆತ್ರಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದಾದರು ದೂರುಗಳು ಇದ್ದಲ್ಲಿ ಪ್ರತ್ಯೇಕವಾಗಿ ಸ್ಥಾಪಿಸಿರುವ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 08472 – 254425 ನೇದ್ದಕ್ಕೆ ದೂರುಗಳನ್ನು ಸಲ್ಲಿಸಬಹುದಾಗಿದೆ.  
                                                                                                        ಸಹಿ/
                                                                                                ಪೊಲೀಸ ಅಧೀಕ್ಷಕರು
                                                                                                       ಕಲಬುರಗಿ
ಅಪಘಾತ ಪ್ರಕರಣ :
ನರೋಣಾ ಠಾಣೆ : ದಿನಾಂಕ:25/04/2018 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನಾನು ಗೌಡಗಾಂವ ಗ್ರಾಮದಲ್ಲಿ ನಮ್ಮ ಮನೆಯಲ್ಲಿದ್ದಾಗ ಗುಂಜಬಬಲಾದ ಗ್ರಾಮದಿಂದ ನನ್ನ ತಮ್ಮನಾದ ಬಸವರಾಜ ತಂದೆ ಮಾರುತಿ ಖೇತ್ರಿ ಇವರು ಫೋನಮಾಡಿ ಸಚಿನನು ನಮ್ಮ ಟ್ರ್ಯಾಕ್ಟರ್ ನಂ ಕೆಎ32-ಟಿ9834 ನೇದ್ದರ ಮೇಲೆ ಪಂಚರ ಜೋಡಿಸಿಕೊಂಡು ಬರಲು ದೇಗಾಂವ ದಿಂದ ಮುನ್ನಳ್ಳಿ ಗ್ರಾಮಕ್ಕೆ ಹೋಗಿ ಪಂಚರ ಜೋಡಿಸಿಕೊಂಡು ವಾಪಸ್ಸು ದೇಗಾಂವ ಗ್ರಾಮಕ್ಕೆ ಬರುತ್ತಿರುವಾಗ ಟ್ರ್ಯಾಕ್ಟರನ್ನು ಅದರ ಚಾಲಕನಾದ ಸುರೇಶ ತಂದೆ ನಾಗೀಂದ್ರ ಖೇತ್ರಿ ಸಾ||ಬಿಲಗುಂದಾ ಈತನು ಟ್ರ್ಯಾಕ್ಟರನ್ನು ಅತೀವೇಗ ಮತ್ತು ನಿರ್ಲಕ್ಷತನಿಂದ ಚಲಾಯಿಸಿದ್ದರಿಂದ ಟ್ರ್ಯಾಕ್ಟರ್ ಮಡಗಡ ಮೇಲೆ ಕುಳಿತಿದ್ದು ಸಚಿನನು ತೆಳಗೆ ಬಿದ್ದು ಅಲ್ಲದೇ ಅವನ ಮೇಲೆ ಟ್ರ್ಯಾಕ್ಟರನ ದೊಡ್ಡ ಟಯರ್ ಹಾದು ಹೋಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ತಿಳಿಸಿದ ಮೇರೆಗೆ ನಾನು ಈ ವಿಷಯವನ್ನು ನಮ್ಮ ಮೈದನು ಹಣಮಂತ ಅತ್ತೆ ಶಿವಕಾಂತಮ್ಮ ರವರುಗಳಿಗೆ ತಿಳಿಸಿ ಅವರು ಮತ್ತು ನಮ್ಮ ಓಣಿಯ ಇನ್ನು ಕೆಲವು ಜನರು ಕೂಡಿಕೊಂಡು ಒಂದು ಕ್ರುಜರ ಜೀಪಿನಲ್ಲಿ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಗ ಸಚಿನನ ಎಡಗಡೆ ಕಪಾಳಿಗೆ ಹೊಟ್ಟೆಗೆ ಕಂದು ಗಟ್ಟಿದ ಗಾಯಗಳಾಗಿ ಮೃತಪಟ್ಪಿರುತ್ತಾನೆ ಟ್ರ್ಯಾಕ್ಟರ್ ನಂ ಕೆಎ32-ಟಿ9834 (ಇಂಜಿನ ಮಾತ್ರ) ನೇದ್ದರ ಚಾಲಕನಾದ ಸುರೇಶ ಖೇತ್ರಿ ಸಾ||ಬಿಲಗುಂದಾ ಈತನು ಟ್ರ್ಯಾಕ್ಟರನ್ನು ಅತೀವೇಗ ಮತ್ತು ನಿರ್ಲಕ್ಷತನಿಂದ ಚಾಲಾಯಿಸಿಕೊಂಡು ಮುನ್ನಳ್ಳಿ ಗ್ರಾಮದ ಕಡೆಯಿಂದ ದೇಗಾಂವ ಗ್ರಾಮದ ಕಡೆಗೆ ಬರುವಾಗ ಟ್ರ್ಯಾಕ್ಟರನ ಮಡಗಡ ಮೇಲೆ ಕುಳಿತಿದ್ದ ನನ್ನ ಮಗ ಸಚಿನ ಈತನು ಟ್ರ್ಯಾಕ್ಟರನಿಂದ ಕೆಳಗೆ ಬಿದ್ದು ಅಲ್ಲದೇ ಅವನ ಮೇಲಿಂದ ಟ್ರ್ಯಾಕ್ಟರ್ ಹಾದು ಹೊಗಿದ್ದರಿಂದ ಭಾರಿಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.  ಅಂತಾ ಶ್ರೀಮತಿ ಸಿದ್ದಮ್ಮ ಗಂಡ ದಿ:ಅರ್ಜುನ ಖೇತ್ರಿ ಸಾ||ಗೌಡಗಾಂವ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ವಿದ್ಯಾಸಾಗರ ತಂದೆ ಶಾಂತಲಿಂಗಪ್ಪ ವಾಡಿ ಸಾ: ಪಟ್ಟಣ ಗ್ರಾಮ ತಾ:ಜಿ: ಕಲಬುರಗಿ ಒಕ್ಕಲುತನ ಕೆಲಸ  ಮಾಡಿಕೊಂಡು ಉಪಜೀವಿಸುತ್ತೇನೆ. ನಾನು ಹೋದ ವರ್ಷ ಯುಗಾದಿಗೆ  ನಮ್ಮ 30 ಎಕರೆ ಜಮೀನು ನಮ್ಮೂರಿನ ಸಂಜುಕುಮಾರ ತಂದೆ ಸೂರ್ಯಕಾಂತ @ ಸುರೇಶ ವಾಗ್ದರಿ  ಇತನಿಗೆ ಅರ್ಧ ಪಾಲಿನಿಂದ ಹಚ್ಚಿದ್ದು, ಈ ವರ್ಷ 2018 ನೇ ಸಾಲಿನ ಯುಗಾದಿ ಅವನಿಗೆ ಪಾಲಿನಿಂದ ಬಿಡಿಸಿ ನಾನೇ ಸಾಗುವಳಿ ಮಾಡುತ್ತಿದ್ದು. ಅದಕ್ಕೆ ಸಂಜುಕುಮಾರ ಮತ್ತು ಅವನ ತಂದೆ ಸೂರ್ಯಕಾಂತ @ ಸುರೇಶ ತಂದೆ ಭೀಮಶ್ಯಾ ವಾಗ್ದರಿ, ಮತ್ತು ಸಂಜಕುಮಾರ ಹಾಗೂ ಹೆಂಡತಿ ಸಂಬಂಧಿಕರಾದ ರೇವಣಸಿದ್ಧಪ್ಪ ತಂದೆ ಶಿವರಾಯ ಮತ್ತಿಮೂಡ, ಶಿವಲಿಂಗಪ್ಪ ತಂದೆ ಬಾಬುರಾವ ಮತ್ತಿಮೂಡ ಇವರು ನನಗೆ  ಈ ವರ್ಷವೂ  ನಮಗೆ ಹೊಲ ಅರ್ಧ ಪಾಲಿನಿಂದ ಹಚ್ಚು ಅಂತಾ ಕೇಳಿದ್ದು ಅದಕ್ಕೆ ನಾನು ನಿರಾಕರಿಸಿದ್ದಕ್ಕೆ  ಅವರೆಲ್ಲರೂ ನನಗೆ ಹೇಗೆ ಅರ್ಧ ಪಾಲಿನಿಂದ ನಮಗೆ ಹಚ್ಚುವುದಿಲ್ಲಾ ಮತ್ತು ನೀನು  ಹೇಗೆ ಹೊಲ ಸಾಗುವಳಿ ಮಾಡುತ್ತೀ ನಿನಗೆ ನೋಡುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ. ಅಲ್ಲದೇ ಈಗ ಒಂದು ತಿಂಗಳ ಹಿಂದೆ ಸಂಜುಕುಮಾರ ಇತನ ಹೆಂಡತಿ ಜಯಶ್ರೀ ಇವಳು ಹೊಲದ ಪಕ್ಕದಲ್ಲಿ ಇರುವ ಶಿವಯ್ಯ ಸ್ವಾಮಿ ಇವರ ಹೊಲ ಪಾಲನಿಂದ ಮಾಡುತ್ತಿದ್ದ ಹೊಲಕ್ಕೆ ಹೋದಾಗ ಅವಳಿಗೆ ನಮ್ಮೂರಿನ ಸಿದ್ಧು ತಂದೆ ಮಾರುತಿ ಮರಾಠಿ ಇತನು ಅವಳೊಂದಿಗೆ ಅಸಭವ್ಯವಾಗಿ ನಡೆದುಕೊಂಡಿರುತ್ತಾನೆಂದು ಅವನಿಗೆ ಸಂಜಕುಮಾರ ಮತ್ತು ಇತರರು ಕೂಡಿ ಹೊಡೆ ಬಡಿ ಮಾಡಿದ್ದು, ಸಿದ್ದು ಇತನು ಸಂಜುಕುಮಾರನಿಗೆ  ನಾನು  ಕೂಡಾ ಜಯಶ್ರೀ ಇವಳೊಂದಿಗೆ ಅಸಭ್ಯವಾಗಿ ನಡೆದುಕೊಂಡಿರುತ್ತೇನೆ ಎಂದು ಹೇಳಿದ್ದರಿಂದ ಈ ಮೇಲಿನ ಎರಡು ವಿಷಯ ಸಂಬಂಧವಾಗಿ ನನ್ನೊಂದಿಗೆ ಆಗ್ಗಾಗೆ ತಕರಾರ ಮಾಡುತ್ತಾ ಹೊರಟಿದ್ದು ,ಈ ವಿಷಯ ಸಂಬಂಧವಾಗಿ ಅವರು  ನನ್ನೊಂದಿಗೆ ದ್ವೇಷ ಮನೋಭಾವ. ಬೆಳಿಸಿಕೊಂಡು ಬಂದಿದ್ದು ದಿನಾಂಕ 24/04/18 ರಂದು ಬೆಳಿಗ್ಗೆ ಮನೆಯಿಂದ ಹಾಲು ತೆಗೆದುಕೊಂಡು ನಮ್ಮೂರಿನ ಅಗಸಿ ಹತ್ತಿರ ಇರುವ ಹಾಲಿನ ಡೈರಿ ಎದುರುಗಡೆ ಹೋದಾಗ ಅಲ್ಲಿಗೆ ನಮ್ಮೂರಿನ  1)ಸಂಜಕುಮಾರ ತಂದೆ  ಸೂರ್ಯಕಾಂತ @ ಸುರೇಶ ವಾಗ್ದರಿ 2)ರೇವಣಸಿದ್ಧಪ್ಪ ತಂದೆ ಶಿವರಾಯ ಮತ್ತಿಮೂಡ 3) ಸೂರ್ಯಕಾಂತ @ ಸುರೇಶ ತಂದೆ ಭೀಮಶ್ಯಾ ವಾಗ್ದರಿ 4) ಶಿವಲಿಂಗಪ್ಪ ತಂದೆ ಬಾಬುರಾವ ಮುತ್ತಿಮೂಡ ಇವರೆಲ್ಲರೂ ನನ್ನ ಹತ್ತಿರ ಬಂದು ನನಗೆ ಭೋಸಡಿ ಮಗನೇ  ಈ ವರ್ಷ ನಿಮ್ಮ  ಹೊಲ ಪಾಲಿನಿಂದ ಕೊಡು ಅಂದರೆ ಕೊಟ್ಟಿರುವುದಿಲ್ಲಾ. ಅಲ್ಲದೇ ನನ್ನ ಹೆಂಡತಿ ಜಯಶ್ರೀ ಇವಳು ಹೊಲಕ್ಕೆ ಬಂದಾಗ ಅವಳೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತೀ ಮಗನೇ ಅಂತಾ ಬೈಯ್ಯುತ್ತಾ ರೇವಣಸಿದ್ಧಪ್ಪ ಮತ್ತು ಸೂರ್ಯಕಾಂತ @ ಸುರೇಶ ಇಬ್ಬರು ನನಗೆ  ಒತ್ತಿಯಾಗಿ ಹಿಡಿದಾಗ  ಸುರೇಶ ಇತನು ನನಗೆ ಕೊಲೆ ಮಾಡುವ ಉದ್ದೇಶದಿಂದ ಬಡಿಗೆಯಿಂದ ನನ್ನ ಬಲಗೈ ಮಣಿಕಟ್ಟಿನ ಮೇಲೆ, ಮುಂಗೈಯ ಮೇಲೆ  ಮತ್ತು ಬಲಭುಜದ ಮೇಲೆ ಹೊಡೆದು ಭಾರಿ ಗುಪ್ತಗಾಯಗೊಳಿಸಿದನು. ಶಿವಲಿಂಗಪ್ಪ ಇತನು ಕೂಡಾ ನನಗೆ ಕೊಲೆ ಮಾಡುವ ಉದ್ದೇಶದಿಂದ ಸೈಕಲ ಚೈನನಿಂದ ನನ್ನ ಬಲಗಾಲ ಮೊಳಕಾಲ ಮೇಲೆ ಮತ್ತು ಎಡಗೈ ಅಂಗೈಯ ಮೇಲೆ ಮತ್ತು ಅಲ್ಲಿಲ್ಲಿ ಹೊಡೆದು ಭಾರಿ ರಕ್ತಗಾಯ ಮತ್ತು ಗುಪ್ತಗಾಯ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 April 2018

KALABURAGI DISTRICT REPORTED CRIMES

ಕಳವು ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಸಿದ್ದಲಿಂಗಪ್ಪಾ ಜೇವರಗಿ ಸಾ: ಅಂಕಲಗಿ ತಾ:ಜಿ:ಕಲಬುರಗಿ ರವರು ದಿನಾಂಕ: 23/04/2018 ರಂದು ರಾತ್ರಿ ನಾನು, ನನ್ನ ಹೆಂಡತಿ ಮತ್ತು ತಾಯಿ ಎಲ್ಲರೂ ಊಟ ಮಾಡಿ ರಾತ್ರಿ 10-00 ಗಂಟೆ ಸುಮಾರಿಗೆ ನನ್ನ ತಾಯಿ ಸುಶೀಲಾಬಾಯಿ ಇವರು ನನಗೆ ಬಹಳಷ್ಟು ಶಕೆ ಆಗುತ್ತಿದೆ ಅಂತಾ ಹೇಳಿ ಮ್ಯಾಳಿಗೆ ಮೇಲೆ ಮಲಗಲು ಹೊಗಿದ್ದು. ನಾನು, ನನ್ನ ತಾಯಿ ಮಲಗುವ ಕೋಣೆಗೆ ಬೀಗ ಹಾಕಿ ನಾನು ಮತ್ತು ನನ್ನ ಹೆಂಡತಿ ನಮ್ಮ ಬೆಡ್ ರೂಮಿಗೆ ಹೋಗಿ ಮಲಗಿಕೊಂಡಿರುತ್ತೇವೆ. ಇಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ನನ್ನ ತಾಯಿ ಗಾಬರಿಯಿಂದ ನಮ್ಮ ರೂಮಿನ ಬಾಗಿಲು ಬಡಿದು ಕರೆದಾಗ ನಾನು ನನ್ನ ಹೆಂಡತಿ ಹೊರಗೆ ಬಂದಾಗ ನನ್ನ ತಾಯಿ ನಾನು ಮಲಗುವ ಕೊಣೆಯ ಬಾಗಿಲ ಕೊಂಡಿ ಮುರಿದು ತರೆದಿದ್ದು ಇರುತ್ತದೆ. ಮತ್ತು ಅಲ್ಮಾರದ ಬಾಗಿಲು ಕೂಡಾ ಮುರಿದಂತಾಗಿ ತೆರೆದಿರುತ್ತದೆ. ಅಂತಾ ತಿಳಿಸಿದಾಗ ನಾವು ಕೂಡಾ ಗಾಬರಿಗೊಂಡು ರೂಮಿನಲ್ಲಿ ಹೋಗಿ ಪರಿಶೀಲಿಸಿ ನೋಡಲಾಗಿ, ಅಲಮಾರದಲ್ಲಿಟ್ಟಿರುವ 6,70,000-00 ಕಿಮತ್ತಿನ ಬಂಗಾರ ಮತ್ತು ಬೆಳಿಯ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು. ನಂತರ ನಮ್ಮ ಅಣ್ಣತಮ್ಮಕೀಯ ನೀಲಕಂಠ ಜೇವರಗಿ ಇವರ ಫತ್ರಾ ಶಡ್ಡ್ ಹಾಕಿರುವ ಮನೆಗೆ ಹೋಗಿ ನೋಡಲಾಗಿ ಅಲಮಾರದಲ್ಲಿಟ್ಟಿರುವ 1,28,000-00 ರೂ. ಕಿಮ್ಮತ್ತಿನ ಬಂಗಾರ ಮತ್ತು ಬೆಳ್ಳಿಯ ಸಾಮಾನುಗಳು ಹಾಗು ನಗದು ಹಣ ಕಳ್ಳತನವಾಗಿದ್ದು ಇರುತ್ತದೆ. ನಮ್ಮ ಮನೆಯ ಅಲ್ಮಾರದಲ್ಲಿಟ್ಟಿರುವ ಮತ್ತು ನಮ್ಮ ಅಣ್ಣತಮ್ಮಕಿಯ ನೀಲಕಂಠ ಇವರ ಮನೆಯ ಅಲ್ಮಾರದಲ್ಲಿಟ್ಟಿರುವ ಒಟ್ಟು ಅ:ಕಿ: 7,98,000-00 ರೂ ಕಿಮ್ಮತ್ತಿನ ಬಂಗಾರ, ಬೆಳ್ಳಿ ಮತ್ತು ನಗದು ಹಣವನ್ನು ನಿನ್ನೆ ದಿನಾಂಕ: 23/04/2018 ರಂದು ರಾತ್ರಿ 10-00 ಗಂಟೆಯಿಂದ ಇಂದು ದಿನಾಂಕ: 24/04/2018 ರಂದು ಬೆಳಿಗ್ಗೆ 6-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 17/04/2018 ರಂದು 10 ಪಿಎಮ್ ಸುಮಾರಿಗೆ ಕಲಬುರಗಿಯಿಂದ ನಮ್ಮ ವಾಹನದಲ್ಲಿ  DIsel ತಗೆದುಕೊಂಡು ಅಫಜಲಪೂರ ತಾಲೂಕಿನ ಕರಜಗಿ, ಮಾಶಾಳ ಟವಾರಗಳಿಗೆ DIsel ತಲುಪಿಸಿ ಮರಳಿ ಕಲಬುರಗಿಗೆ ಬರುವಾಗ ಅಫಜಲಪೂರ ದಾಟಿದ ಬಳಿಕ ನಮ್ಮ ವಾಹನದ ಚಾಲಕನಾದ ಗೌರಿಶಂಕರ ಈತನು ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸುತಿದ್ದನು ನಾನು ನಿಧಾನವಾಗಿ ಚಲಾಯಿಸು ಅಂತ ಹೇಳಿದರು ಕೇಳದೆ ಹಾಗೆ ಚಲಾಯಿಸುತ್ತಾ ಮಲ್ಲಾಬಾದ ಗ್ರಾಮದ ಬಸ್ಟ್ಯಾಂಡ ಹತ್ತಿರ ರೋಡಿನ ಬಾಜು ಇದ್ದ ಕನಕದಾಸ ಚೌಕ ಕಟ್ಟೆಗೆ ಡಿಕ್ಕಿ ಪಡಿಸಿದ ರಬಸಕ್ಕೆ ನನಗೆ ಎಡಗೈ ಭುಜಕ್ಕೆ ಟೊಂಕಕ್ಕೆ , ಭಾರಿ ಗುಪ್ತ ಗಾಯಗಳಾಗಿದ್ದು ಬಲಗಣ್ಣಿನ ಕೆಳಗೆ ರಕ್ತಗಾಯವಾಗಿದ್ದು ನಮ್ಮ ಚಾಲಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲ ನಮ್ಮ ವಾಹನ ಡಿಕ್ಕಿ ಪಡಿಸಿದ  ಶಬ್ದಕ್ಕೆ ಅಲ್ಲೆ ಹೊಟೇಲಗಳಲ್ಲಿ ಮಲಗಿದ ಜನರು ಎದ್ದು ಬಂದಿದ್ದು ನಮ್ಮ ಚಾಲಕ ಗೌರಿಶಕರ 108 ವಾಹನಕ್ಕೆ ಕಾಲ್ ಮಾಡಿ ಕರೆಯಿಸಿ ನನಗೆ ಅದರಲ್ಲಿ ಹಾಕಿಕೊಂಡು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಕರೆದುಕೋಂಡು ಬಂದು ಚಿಕಿತ್ಸೆ ಕುರಿತು ಸೇರಿಕೆ ಮಾಡಿರುತ್ತಾರೆ ಕಾರಣ ಟಾಟಾ ಎಸಿ ನಂ ಕೆಎ-32 ಸಿ-3396 ನೆದ್ದರ ಚಾಲಕ ಗೌರಿಶಂಕರನು ತನ್ನ ವಶದಲಿದ್ದ ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿ  ಮಲ್ಲಾಬಾದ ಗ್ರಮಾದ ರೋಡಿನ ಬಾಜು ಇರುವ ಕನಕದಾಸ ಚೌಕ ಕಟ್ಟೆಗೆ ಜೋರಾಗಿ ಡಿಕ್ಕಿ ಪಡಿಸಿ ನನಗೆ ಭಾರಿ ರಕ್ತಗಾಯ ಹಾಗು ಗುಪ್ತಗಾಯ ಪಡಿಸಿದ್ದು ಸದರಿ ಚಾಲಕನ  ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 April 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:- 22/04/2018 ರಂದು ಸಾಯಂಕಾಲ ನಾನು ಕೆಲಸ ಮಾಡುತ್ತಿದ್ದಾಗ ಆಗ ನಮ್ಮ ಬಾಜು ಖಾಜಾ ದಾಲಮೀಲದಲ್ಲಿ ಕೆಲಸ ಮಾಡುವ ಬಿಹಾರ ರಾಜ್ಯದ ಒಬ್ಬ ಮನುಷ್ಯನು ನಮ್ಮ ಹುಡುಗನಿಗೆ ಯಾರೋ ದಾಲಮೀಲದ ಹಿಂದೆ ಹೊಡೆಯುತ್ತಿದ್ದಾರೆ ಅಂತಾ ಒಂದೇ ಸವನೇ ಚೀರಾಡುತ್ತಿದ್ದಾಗ ಆಗ ನಾನು ಮತ್ತು ನಮ್ಮ ದಾಲಮಿಲ ಮಾಲಿಕ ರಿಜ್ವಾನ ಹಾಗು ಬಿಹಾರ ರಾಜ್ಯದ ಇನ್ನು 03 ಜನರು ಕೂಡಿಕೊಂಡು ನಮ್ಮ ದಾಲಮೀಲದ ಹಿಂದುಗಡೆ ಇರುವ ಅಸ್ಪಾನ ಮೋಟಾರ್ಸ್ ಇವರ ಹೋದಲ್ಲಿ ಮುಳ್ಳಿನ ಕಂಟಿಯಲ್ಲಿ ಒಬ್ಬ ಹುಡಗನು ಬೋರಲಾಗಿ ಬಿದ್ದಿದ್ದನು ಆಗ 03 ಜನರು ಬಿಹಾರ ರಾಜ್ಯದ ಹುಡುಗರು ಅವನಿಗೆ ಸರಿಯಾಗಿ ಮಲಗಿಸಿ ನೋಡಲಾಗಿ ಅವನಿಗೆ ತಲೆಯ ಹಿಂದೆ ಭಾರಿ ರಕ್ತಗಾಯ,  ಎಡಹಣೆಗೆ ತರಚಿದ ಗಾಯ, ಬಲಕಣ್ಣಿಗೆ ತರಚಿದ ಗಾಯ, ಎಡಗಣ್ಣಿನ ಕೆಳಗೆ ತರಚಿದ ಗಾಯ, ಎರಡು ಕಿವಿ ಮತ್ತು ಮೂಗಿನಿಂದ ರಸ್ತಸ್ರಾವ, ಎಡರಟ್ಟೆಗೆ ಮತ್ತು ಮೋಳಕೈಗೆ, ಹೆಬ್ಬೆರಳಿಗೆ ಮುಳ್ಳು ಚುಚಿದ ಗಾಯಗಳಾಗಿ ಎರಡು ಕಿವಿಯಿಂದ ಮತ್ತು ಮೂಗಿನಿಂದ ರಕ್ತಸ್ರಾವವಾಗುತ್ತಿತ್ತು. ನಂತರ ಅವನಿಗೆ ನಾನು ಮತ್ತು ಬಿಹಾರ ರಾಜ್ಯದ ಒಬ್ಬ ಹುಡುಗ ಇಬ್ಬರು ಕೂಡಿಕೊಂಡು ಸದರಿಯವನಿಗೆ ನನ್ನ ಮೋಟಾರ ಸೈಕಲ ಮೇಲೆ ನಡುವೆ ಕೂಡಿಸಿಕೊಂಡು ಕಪನೂರ ಗ್ರಾಮದ ಎ.ಎಸ್.ಎಮ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಸದರಿಯವನನ್ನು ಪರೀಕ್ಷಿಸಿದ ವೈದ್ಯರು ಈಗಾಗಲೆ ಮೃತಪಟ್ಟಿರುತ್ತನೆ ಅಂತಾ ತಿಳಿಸಿದ್ದು ನನ್ನ ಜೊತೆಗೆ ಮೋಟಾರ ಸೈಕಲ ಮೇಲೆ ಬಂದವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಭೋಜಮುಖಿಯಾ ತಂದೆ ಹೀರಾಲಾಲ ಮುಖಿಯಾ ಸಾ : ತಿರಬಿನಿ  ಸಾ:ತಿರಬಿನಿ ಅಂತಾ ತಿಳಿಸಿದ್ದು ಪ್ರಕಾಶ ತಂದೆ ಕೈಲಾಸ ಮುಖಿಯಾ ಮು:ಜೀತವಾರಪೂರ ತಾ:ಅರೇರಾ ಜಿ:ಮತಿಹಾರಿ ರಾಜ್ಯ: ಬಿಹಾರ ಹಾವ: ಮಹಮ್ಮದ ಜಾವೀದ ಇವರ ದಾಲಮೀಲದಲ್ಲಿ ಅಂತಾ ತಿಳಿಸಿರುತ್ತಾನೆ  ಮತ್ತು ನನ್ನೊಂದಿಗೆ ಸ್ಥಳಕ್ಕೆ ಬಂದ ಇಬ್ಬರ ಹೆಸರು ಸಿಪಾಯಿ ತಂದೆ ರಾಮರಂಗೇರಾವ ಹಾಗು ಹೀರಾಲಾಲ ತಂದೆ ರುವಾಲ ಪಣಿತ ಅಂತಾ ತಿಳಿಸಿದನು ಪ್ರಕಾಶ ಮುಖಿಯಾ ಇತನು ಸಾಯಂಕಾಲ 4 ಗಂಟೆಗೆ ದಾಲಮಿಲ್ದಿಂದ ಸಂಡಾಸಕ್ಕೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋಗಿದ್ದು ನಂತರ ಈ ಘಟನೆ ನಡೆದಿರುತ್ತದೆ   ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕೆ ಅಥವಾ ಯಾವುದೋ ದುರದ್ದೇಶದಿಂದ ಇಂದು ದಿನಾಂಕ:- 22/04/2018 ರಂದು ಸಾಯಂಕಾಲ 04:00 ಗಂಟೆಯಿಂದ 06:30 ಪಿ.ಎಂದ ಮದ್ಯದ ಅವಧಿಯಲ್ಲಿ ಮೃತ ಪ್ರಕಾಶ ಇತನು ಸಂಡಾಸಕ್ಕೆ ಹೋದಾಗ ಯಾವುದೋ ಭಾರವಾದ ವಸ್ತುವಿನಿಂದ ಅಥವಾ ಯಾವುದೋ ಹರಿತವಾದ ಆಯುದದಿಂದ ಆತನ ತಲೆಗೆ ಹಾಗು ಇತರೇ ಕಡೆಗೆ ಹೊಡೆದು ಬಾರಿ ಗಾಯ ಪಡಿಸಿ ಕೊಲೆ ಮಾಡಿರುತ್ತಾರೆ ಅಂತಾ ಶ್ರೀ ಮಹಮ್ಮದ ಶಕೀಲ ತಂದೆ ಶಫೀ ಅಹೆಮ್ಮದ  ಸಾ : ಇಸ್ಲಾಮಾ ಬಾದ ಕಾಲನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಪೂರ ಠಾಣೆ : ಶ್ರೀಮತಿ ಉಮಾಶ್ರೀ ಗಂಡ ಭಗವಂತ್ರಾಯ ಬಿರಾದಾರ ಸಾ||ಬಂಕಲಗಾ ತಾ||ಅಫಜಲಪೂರ ರವರ ಗಂಡನಾದ ಭಗವಂತ್ರಾಯ ತಂದೆ ಮಲ್ಲೇಶಿ ಬಿರಾದಾರ ಈತನು ದಿನಾಲು ಸರಾಯಿ ಸೇವನೆ ಮಾಡಿ ಮನೆಗೆ ಬರುತಿದ್ದನ್ನು ನಾನು ನಮ್ಮ ಅತ್ತೆಯಾದ ಶಿವಮ್ಮಾ ಮೈದುನನಾದ ಸಾಯಿಬಣ್ಣ ಸರಾಯಿ ಸೇವನೆ ಮಾಡಬೇಡ ಆರೋಗ್ಯ ಹಾಳಾಗುತ್ತೇ ಸಂಸಾರ ಕೆಡುತ್ತೇ ಎರಡು ಹೆಣ್ಣು ಮಕ್ಕಳಿವೆ ಅಂತ ತಿಳುವಳಿಕೆ ಹೇಳಿದರು ಕೇಳದೆ ನನಗೆ ಜೀವನ ಸಾಕಾಗಿದೆ ಅಂತ ಹೇಳಿ ದಿನಾಲು ಸರಾಯಿ ಸೇವನೆ ಮಾಡುತಿದ್ದನು ದಿನಾಂಕ 20/04/2018 ರಂದು 3.00 ಪಿಎಮ್ ಸುಮಾರಿಗೆ ನನ್ನ ಗಂಡನು ಸರಾಯಿ ಸೇವನೆ ಮಾಡಿ ಮನೆಗೆ ಬಂದು ನನಗೆ ಜೀವನ ಸಾಕಾಗಿದೆ ನಾನು ಇಂದು ಸಾಯುತ್ತೇನೆ ಅಂತ ಅನ್ನುತ್ತಾ ಹೊಲಕ್ಕೆ ಹೋಗುತ್ತೇನೆ ಅಂತ ಹೇಳಿ ಹೋದನು ನಾವು ಸರಾಯಿ ನಶೆಯಲ್ಲಿ ಹಾಗೇ ಹೇಳುತ್ತಾನೆ ಅಂತ ಸುಮ್ಮನಿದ್ದೇವು ನಂತರ 6.00 ಪಿಎಮ್ ಸುಮಾರಿಗೆ ನಮಗೆ ತಿಳಿದಿದ್ದೇನೆಂದರೆ ನನ್ನ ಗಂಡನಾದ ಭಗವಂತ್ರಾಯ ಈತನು ನಮ್ಮ ಹೊಲಕ್ಕೆ ಹೋಗುವ ದಾರಿಯಲ್ಲಿ ವಿಠ್ಠಲ ಜಾಮಗೊಂಡ ರವರ ಹೊಲದ ಹತ್ತಿರ ಕ್ರೀಮಿನಾಶಕ ವಿಷ ಸೇವನೆ ಮಾಡಿ ಒದ್ದಾಡುತಿದ್ದಾನೆ ಅಂತ ಗೊತ್ತಾಗಿ ನಾನು ನಮ್ಮ ಅತ್ತೆಯಾದ ಶಿವಮ್ಮಾ ಮೈದುನನಾದ ಸಾಯಿಬಣ್ಣ ಹಾಗು ನಮ್ಮ ಗ್ರಾಮದ ಸಿದ್ದರಾಮ ತಂದೆ ಯಶವಂತ್ರಾಯ ಬಿರಾದಾರ, ಮಲ್ಕಣ್ಣಗೌಡ ತಂದೆ ಹಣಮಂತ್ರಾಯ ಗೌಡ ಬಿರಾದಾರ ಎಲ್ಲರು ಕೂಡಿ ಒಂದು ಖಾಸಗಿ  ತಗೆದುಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ವಿಠ್ಠಲ ಜಾಮಗೊಂಡ ರವರ ಹೊಲದ ಹತ್ತಿರ ದಾರಿಯ ಮೇಲೆ ನನ್ನ ಗಂಡನು ಬಿದ್ದು ಒದ್ದಾಡುತಿದ್ದನು ನಾವು ನನ್ನ ಗಂಡನಿಗೆ ವಿಚಾರಿಸಿದಾಗ ಬೆಳೆಗೆ ಸಿಂಪಡಿಸುವ ಕ್ರೀಮಿನಾಷಕ ಔಷದಿ ಸರಾಯಿ ಕುಡಿದ ನಶೆಯಲ್ಲಿ 5.00 ಗಂಟೆ ಸುಮಾರಿಗೆ ಸೇವನೆ ಮಾಡಿರುತ್ತೇನೆ ಅಂತ ತಿಳಿಸಿದನು ನಾವು ಖಾಸಗಿ ವಾಹನದಲ್ಲಿ ನನ್ನ ಗಂಡನಿಗೆ ಹಾಕಿಕೊಂಡು ಕಲಬುರಗಿಯ ಸರಕಾರಿ ಆಸ್ಪತ್ರಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ನನ್ನ ಗಂಡನಿಗೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ದಿನಾಂಕ 21/04/2018 ರಂದು ರಾತ್ರಿ 9.25 ಪಿಎಮ್ ಸುಮಾರಿಗೆ ಮೃತಪಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

17 April 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 16-04-2018 ರಂದು ಮಣುರ ಗ್ರಾಮದ ಶ್ರೀ ಯಲ್ಲಮ್ಮಾ ದೇವಿಯ ಗುಡಿಯ ಹತ್ತಿರ  ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಮರೆಯಾಗಿ ನಿಂತು ನೊಡಲು ಮಣುರ ಗ್ರಾಮದ ಶ್ರೀ ಯಲ್ಲಮ್ಮಾ ದೇವಿಯ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ 5 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಡುತಿದ್ದ  ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಶರಣು @ ಶರಣಬಸಪ್ಪ ತಂದೆ ನೀಲಕಂಠ ಮೋಸಲಗಿ 2) ಸುರೇಶ ತಂದೆ ಆನಂದಪ್ಪ ತೋಳನೂರ 3) ಮಹೇಶ ತಂದೆ ಸಂಗಪ್ಪ ಕುಂಬಾರ 4) ಅನೀಲ ತಂದೆ ಕಾಶೀನಾಥ ಜೀಪೂರ ಸಾ|| ಎಲ್ಲರು  ಮಣೂರ ಗ್ರಾಮ  ಅಂತ ತಿಳಿಸಿದ್ದು  ಸದರಿಯವರಿಂದ  ಒಟ್ಟು 12390/- ರೂ ನಗದು ಹಣವನ್ನು ಮತ್ತು 52 ಇಸ್ಪೆಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ  ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ
ಅಫಜಲಪೂರ ಠಾಣೆ : ದಿನಾಂಕ 16/04/2018 ರಂದು ಅಫಜಲಪೂರ ಪಟ್ಟಣದ ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಮರೆಯಾಗಿ ನಿಂತು ನೊಡಲು  ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದುದನ್ನು  ಖಚಿತಪಡಿಸಿಕೊಂಡು  ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಪುಲೇಪ್ಪ @ ಶಿವಾನಂದ ತಂದೆ ದೇವರಾಯ ಕೋರಳ್ಳಿ ಸಾ|| ಮಣೂರ ಗ್ರಾಮ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1610/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ಮೊಸಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಕುಮಾರಿ ಇವರು 2 ವರ್ಷಗಳ ಹಿಂದೆ ಜೇವರ್ಗಿ ಸರಕಾರಿ ಪದವಿ ಕಾಲೇಜಿನಲ್ಲಿ ಬಿ.ಎ ವಿದ್ಯಾಭ್ಯಾಸ ಮಾಡುತ್ತಿದ್ದೆನು,  ಆ ಸಮಯದಲ್ಲಿ ಆಲುರ ಗ್ರಾಮದ ಹಮೀದ ತಂದೆ ಬಂದೇನವಾಜ ಹರನೂರ ಎಂಬುವನು ನನಗೆ ಪರಿಚಯಮಾಡಿಕೊಂಡನು, ಅವನು ಸಹ ಅದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ನಂತರ ನಾವಿಬ್ಬರು ಪರಸ್ಪರ ಪ್ರಿತಿಸುತ್ತಿದ್ದೇವು, ಹಮೀದ ಇವನು ನನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಅನ್ನುತ್ತಾ ಬಂದಿದ್ದನು, ದಿನಾಂಕ 09-07-2015 ರಂದು ನಾನು ಮನೆಯಲ್ಲಿದ್ದಾಗ ಹಮೀದ ಇವನು ನಮ್ಮ ಮನೆಗೆ ಬಂದಿದ್ದನು, ಆಗ ನಮ್ಮ ಮನೆಯಲ್ಲಿ ಯಾರು ಇರಲಿಲ್ಲಾ. ನಂತರ ಹಮೀ ಇವನು ನನಗೆ ಪುಸಲಾಯಿಸಿ ಮುಂದೆ ನಾವು ಹೇಗಾದರು ಮದುವೆಯಾಗುವುದು ಖಚಿತ ಇದೆ ಅಂತಾ ಮನ ಒಲಿಸಿ ಸಂಭೋಗಕ್ಕೆ ಒತ್ತಾಯಿಸಿದನು, ಆಗ ನಾನು ಮದುವೆಯಾದ ನಂತರ ಸೇರೋಣಾ ಅಂತಾ ಹೇಳಿದರು ಕೇಳದೆ ಬಲವಂತವಾಗಿ ನಮ್ಮ ಮನೆಯಲ್ಲಿ ನನಗೆ ಸಂಭೋಗ ಮಾಡಿರುತ್ತಾನೆ, ಈ ವಿಷಯ ಯಾರಿಗು ಹೇಳಬೇಡಾ ಅಂತಾ ಹೇಳಿ ಹೋದನು. ನಂತರ ಆಗಾಗ ನಮ್ಮ ಮನೆಯಲ್ಲಿ ಯಾರು ಇರಲಾರದನ್ನು ಗಮನಿಸಿ ಹಮೀದ ಇವನು ನಮ್ಮ ಮನೆಗೆ ಬಂದು ನನ್ನೊಂದಿಗೆ ಸುಮಾರು ಸಲ ಬಲವಂತವಾಗಿ ಸಂಭೋಗ ಮಾಡಿರುತ್ತಾನೆ, ನಾವಿಬ್ಬರು ಪ್ರಿತಿಸುವ ವಿಷ ನಮ್ಮ ಮನೆಯಲ್ಲಿ ಗೊತ್ತಾಗಿ ನಂತರ ನಮ್ಮ ಮನೆಯವರು ಸೇರಿಕೊಂಡು ಆಲೂರ ಗ್ರಾಮದ ಹಮೀದ ರವರ ಮನೆಗೆ ಹೋಗಿ ವಿಷಯ ಹೇಳಿದರು. ಹಮೀದ ಇವನು ಬೆಂಗಳೂರು ಸಿ..ಆರ್ ಪೋಲಿಸ ನೇಮಕಾತಿಯಾಗಿದ್ದನು, ನಮ್ಮ ಮನೆಯವರು, ಹಮೀದನಿಗೆ ಹಾಗು ಅವರ ಮನೆಯವರಿಗೆ  ಪೊಲೀಸ ಟ್ರೇನಿಂಗ ಹೊಗುವ ಮುಂಚೆನೆ ಮದುವೆ ಮಾಡಿಬಿಡೋಣಾ ಅಂತಾ ಹೇಳಿದಾಗ ಹಮೀದ ರವರ ಮನೆಯವರು ಪೊಲೀಸ ಟ್ರೇನಿಂಗ ಮುಗಿದ ನಂತರ ಮದುವೆ ಮಾಡೋಣಾ ಸದ್ಯ ನಿಶ್ಚಿತಾರ್ಥ ಮಾಡೋಣಾ ಅಂತಾ ಹೇಳಿದರು. ದಿನಾಂಕ 26-10-2016 ರಂದು ನಮ್ಮೂರ ಇಸ್ಲಾಂ ಕಮೀಟಿ ಅಧ್ಯಕ್ಷರಾದ ಇಬ್ರಾಹಿಮಸಾಬ ಉಸ್ತಾದ, ರಜಾಕ ಮನಿಯಾರ, ಅಲ್ಲಾಪಟೇಲ ಚಿಂಚೋಳಿ, ಇಸ್ಮಾಯಿಲ್ ನಾಯ್ಕೋಡಿ, ಮಹಿಬೂಬಪಟೇಲ ಚಿಂಚೋಳಿ, ಶಿವಲಿಂಗ ಸುಂಕದ, ಚಂದ್ರಶೇಖರ ಪುರಾಣಿಕ, ಮಲ್ಲಿಕಾರ್ಜುನ ಹಲಕಟ್ಟಿ, ಕೆ. ವಿರೇಶಗೌಡ ಹಾಗು ನಮ್ಮ ಮತ್ತು ಹಮೀದ ರವರ ಸಂಬಂಧಿಕರ ಸಮಕ್ಷಮದಲ್ಲಿ ನಮ್ಮ ಮನೆಯಲ್ಲಿ ನಿಶ್ಚಿತಾರ್ಥ (ರಸಂ) ಮಾಡಿರುತ್ತಾರೆ, ನಂತರ ಹಮೀದ ಇವನು ನನ್ನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದನು, ಈಗ 5-6 ತಿಂಗಳಿಂದ ಹಮೀದ ಇವನು ನನಗೆ ಸರಿಯಾಗಿ ಮಾತನಾಡದೆ ನೀನು ಸರಿಯಾಗಿಲ್ಲಾ, ನಿನ್ನ ಕ್ಯಾರಕ್ಟರ್ ಸರಿ ಇಲ್ಲಾ ಅಂತಾ ಅನ್ನುತ್ತಾ ನನ್ನಿಂದ ದೂರ ಇರಲು ಪ್ರಾರಂಭೀಸಿದನು, ನಂತರ ಈ ವಿಷಯ ನಮ್ಮ ಮನೆಯವರಿಗೆ ಹೇಳಿದಾಗ ನಮ್ಮ ತಂದೆ ಇಮಾಮಖಾಸಿಂ, ತಾಯಿ ಮಮತಾಜ ಹಾಗು ಮೇಲ್ಕಂಡ ಜಮಾತ ಮಂದಿ ಕೂಡಿಕೊಂಡು ಆಲೂರ ಗ್ರಾಮಕ್ಕೆ 3-4 ಸಲ ಹೋಗಿ ಹಮೀದನ ತಂದೆ ತಾಯಿಗೆ ತೆಳವಳಿಕೆ ಹೇಳಿ ಮದುವೆ ಮಾಡೋಣಾ ಅಂತಾ ಹೇಳಿದರು ಅವರು ಒಪ್ಪದೆ ನಮ್ಮ ತಂದೆ ತಾಯಿಗೆ ಬಾಯಿಗೆ ಬಂದಂತೆ ಮಾತನಾಡಿ ನಾವು ನಮ್ಮ ಮನಗ ಮದುವೆ ನಿಮ್ಮ ಮಗಳೊಂದಿಗೆ ಮಾಡುವುದಿಲ್ಲಾ ಏನು ಮಾಡಕೋತಿರಿ ಮಾಡಕೋರಿ ಅಂತಾ ಅಂದರು, ಆಗ ನಮ್ಮ ತಂದೆಯವರು ಈ ಬಗ್ಗೆ ಪೊಲೀಸ ಕಂಪ್ಲೆಂಟ ಕೊಡುತ್ತೇವೆ ಅಂತಾ ಅಂದಾಗ ಪೊಲೀಸ ಕಂಪ್ಲೆಂಟ ಕೊಟ್ಟರೆ ನಿಮಗ ಖಲಾಸೆ ಮಾಡುತ್ತೇವೆ ಅಂತಾ ಜೀವ ಭಯ ಹಾಕಿರುತ್ತಾರೆ. ಕಾರಣ ಹಮೀದ ತಂದೆ ಬಂದೇನವಾಜ ಹರನೂರ ಸಾ|| ಆಲೂರ ಈತನು ನನ್ನೊಂದಿಗೆ ಪ್ರಿತಿಸಿದಂತೆ ವರ್ತಿಸಿ ಮದುವೆಯಾಗುತ್ತೇನೆ ಅಂತಾ ನಂಬಿಸಿ ನನ್ನನ್ನು ಪುಸಲಾಯಿಸಿ ಸುಮಾರು ಸಲ ಬಲಾತಕಾರದಿಂದ ನಮ್ಮ ಮನೆಯಲ್ಲಿ ಸಂಭೋಗ ಮಾಡಿ ನನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಸದ್ಯ ನನಗೆ ಮದುವೆ ಯಾಗದೆ ಮೋಸ ಮಾಡಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಆರೀಫಖಾನ ತಂದೆ ನಿಜಾಮಖಾನ ಸಾ|| ಪ್ಲಾಟ ನಂ; 48 ವಿಶ್ವರಾದ್ಯ ಕಾಲೋನಿ ಆಳಂದ ರೋಡ ಕಲಬುರಗಿ ಇವರು ಮ್ಮ ಬಡಾವಣೆಯಲ್ಲಿ ವಾಸವಾಗಿರುವ ಹೈದರ ತಂದೆ ಜಿಲಾನಿ, ಆರೀಫ್ ತಂದೆ ಸಲಿಂ, ಮುಭೀನ್ ತಂದೆ ಖಯುಂ, ಫಯಾಝ ಹಾಗು ಪ್ರಶಾಂತ ಇವರು ವಿನಾಕಾರಣ ನನ್ನ ಸಂಗಡ ವೈರತ್ವ ಬೇಳೆಯಿಸಿಕೊಂಡು ಬಂದಿದ್ದು ಇರುತ್ತದೆ. ನಾನು ಅವರ ಸಂಗಡ ತಿರುಗಾಡಲು ಹೋಗದಕ್ಕೆ ಸದರಿಯವರು ನನ್ನ ಮೇಲೆ ಹಗೆತನ ಬೇಳೆಯಿಸಿಕೊಂಡು ಬಂದಿದ್ದು ದಿನಾಂಕ 12/04/2018 ರಂದು ರಾತ್ರಿ 10.15 ಪಿ.ಎಂ ಸುಮಾರಿಗೆ ನಾನು ನಮ್ಮ ಮನೆಯಿಂದ ಅವಟೆ ಹಾಸ್ಪೆಟಲ್ ಕಡೆಗೆ ಹೊಗುವ ಕುರಿತು ಎಸ್ ಬಿ ಟ್ರೇಡರ್ಸ ಅಂಗಡಿಯ ಮುಂದಿನ ರಸ್ತಯ ಮೇಲೆ ನಡೆದುಕೊಂಡು ಹೊಗುತ್ತಿದ್ದು ಅದೆ ವೇಳೆಗೆ ನನ್ನ ಎದುರಗಡೆ ಹೈದರ ತಂದೆ ಜಿಲಾನಿ, ಆರೀಫ್ ತಂದೆ ಸಲಿಂ, ಮುಭೀನ್ ತಂದೆ ಖಯುಂ, ಫಯಾಝ ಹಾಗು ಪ್ರಶಾಂತ ಇವರೆಲ್ಲರೂ ಕೋಡಿಕೊಂಡು ಬಂದವರೆ ನನ್ನನ್ನು ತಡೆದು ಅವರಲ್ಲಿ ಹೈದರ ತಂದೆ ಜಿಲಾನಿ ಇತನು ರಂಡಿ ಮಗನೆ ನನ್ನ ಎದರು ಗಾಡಿಮೇಲೆ ದಿಮಾಕ ಮಾಡಿಕೊಂಡು ಹೊಗುತ್ತಿಯಾ ನಿನ್ನ ತಿಂಡಿ ಬಹಳ ಇದೆ ಬೋಸಡಿ ಮಗನೆ ಅಂತ ಬೈಯುತ್ತಿದ್ದು ಆಗ ನಾನು ಸದರಿಯವನಿಗೆ ಯಾಕೆ ನನಗೆ ಬೈಯುತ್ತಿ ಅಂತ ಕೇಳಿದಾಗ ಸದರಿಯವನು ತನ್ನ ಕೈಯಿಂದ ನನ್ನ ಎದೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು,  ಆರೀಫ್ ತಂದೆ ಸಲಿಂ ಇತನು ನಮಗೆ ಎದರು ಮಾತನಾಡುತ್ತಿಯಾ ಬೋಸಡಿಕ್ಯಾ ಅಂತಾ ಬೈದು ಅಲ್ಲೆ ಬಿದ್ದಿದ್ದ ಡ್ರ್ಯಾನೆಜ್ ಪೈಪು ತೆಗೆದುಕೊಂಡು ನನ್ನ ತಲೆಯ ಮೇಲೆ ಹೊಡದು ರಕ್ತಗಾಯ ಪಡಿಸಿದ್ದು. ಮುಭೀನ್ ತಂದೆ ಖಯುಂ ಕೈಮುಷ್ಟಿಮಾಡಿ ನನ್ನ ತಲೆಯ ಹಿಂಬಾಗ, ಮೈ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು, ಫಯಾಜ ಇತನು ಕೈಯಿಂದ ನನ್ನ ಹೊಟ್ಟೆಗೆ ಹೊಡೆದನು. ಪ್ರಶಾಂತ ಇತನು ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.