POLICE BHAVAN KALABURAGI

POLICE BHAVAN KALABURAGI

03 February 2013

GULBARGA DISTRICT REPPORTED CRIMES

ಅಪಘಾತ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ಶ್ರೀಮತಿ ಕವಿತಾ ಗಂಡ ದರ್ಮು ಪವಾರ ಸಾ:ಭೋಗನಿಂಗದಳ್ಳಿ  ತಾಂಡಾ, ತಾ:ಚಿಂಚೋಳಿ ರವರು ದಿನಾಂಕ: 02-02-2013 ರಂದು ಸಾಯಾಂಕಾಲ 6.00 ಗಂಟೆ ಸುಮಾರಿಗೆ ನಾನು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ನನ್ನ ಮೂರು ಜನ ಮಕ್ಕಳು ನಮ್ಮ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದರು. ಆ ಸಮಯದಲ್ಲಿ  ಟ್ರಾಕ್ಟರ ಇಂಜಿನ ನಂ 008008799 ಚೆಸ್ಸಿ ನಂ ಟಿ06008602411 ನೇದ್ದರ ಚಾಲಕನಾದ ರಾಜು ಎಂಬುವವನು ಅತಿವೇಗದಿಂದ  ಮತ್ತು ನಿಷ್ಕಾಳಿಜಿತನದಿಂದ ಚಲಾಯಿಕೊಂಡು ಬಂದು ಅಂಗಳದಲ್ಲಿ  ಆಟವಾಡುತ್ತಿದ್ದ ನನ್ನ ಮೂರನೆಯ ಮಗ ಶಾಮರಾವ್  ವಯಾ|| 2 ವರ್ಷ ಇತನಿಗೆ ಡಿಕ್ಕಿ ಪಡಿಸಿದನು. ಡಿಕ್ಕಿ ಪಡಿಸಿದ ರಭಸಕ್ಕೆ ತಲೆಗೆ ಕಿವಿಯಿಂದ ಮತ್ತು ಮೂಗಿನಿಂದ ರಕ್ತ ಸ್ರಾವವಾಗಿ ಮಗು  ಸ್ಥಳದಲ್ಲಿ ಮೃತಪಟ್ಟಿದ್ದು, ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ . ನನ್ನ ಮಗನ ಸಾವಿಗೆ ಕಾರಣನಾದ ಟ್ರ್ಯಾಕ್ಟರ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀಮತಿ ಕವಿತಾ ಗಂಡ ದರ್ಮು ಪವಾರ ರವರು ದೂರು ಸಲ್ಲಿಸಿದ  ಸಾರಂಶದ ಮೇಲಿಂದ ಠಾಣೆ ಗುನ್ನೆ:17/2013 ಕಲಂ.279, 304(ಎ), ಐ.ಪಿ.ಸಿ ಸಂ.187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಮೋಟಾರ ಸೈಕಲ ಕಳ್ಳತನ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀ ಪರಮೇಶ್ವರ ತಂದೆ ಬಂಡೆಪ್ಪ ಜೀವಣಗಿ ಸಾ:ಕುಮಸಿ ರವರು ದಿನಾಂಕ:19/01/2013 ರಂದು ನಾನು ನಮ್ಮ ತೋಟಕ್ಕೆ ರಾತ್ರಿ 8:00 ಗಂಟೆಗೆ ಹೋಗಿ ತೊಟದ ಮನೆಯ ಮುಂದೆ ನನ್ನ ಟಿವಿಎಸ್ ಗಾಡಿ ನಂ-ಕೆಎ32 ವೈ-8476 ನೇದ್ದು ನಿಲ್ಲಿಸಿದ್ದೆ, ಬೆಳಿಗ್ಗೆ 6:00 ಗಂಟೆಯ ಸಮಯಕ್ಕೆ ನೋಡಲಾಗಿ ಟಿವಿಎಸ್‌‌ ಎಕ್ಸ್‌‌‌‌‌‌‌‌‌ಲ್‌ ಹೆಚ್‌‌ಡಿ, ಹಸಿರು ಬಣ್ಣದಮೋಟಾರ ಸೈಕಲ, ಇಂಜಿನ ನಂಬರ:OD1GB1395590,ಚೆಸ್ಸಿ ನಂಬರ:MD621BO1582G81733 ನೇದ್ದು ನಿಲ್ಲಿಸಿದ ಸ್ಥಳದಲ್ಲಿರಲಿಲ್ಲ . ಯಾರೋ ಕಳ್ಳರು ಅಂದಾಜು ಕಿಮ್ಮತ್ತು 20,000/-ರೂ ಬೆಲೆಬಾಳುವ ವಾಹನವನ್ನು ಕಳ್ಳತನ  ಮಾಡಿಕೊಂಡು ಹೋಗಿರುತ್ತಾರೆ . ಕಳ್ಳತನವಾಗಿದ್ದ ಮೋಟಾರ ಸೈಕಲ ಪತ್ತೆ ಮಾಡಿಕೋಡಬೇಕು ಅಂತಾ ಪರಮೇಶ್ವರ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:73/2013 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIME


ಕೊಲೆಗೆ  ಪ್ರಯತ್ನ:
ಗ್ರಾಮೀಣ ಠಾಣೆ ಗುಲಬರ್ಗಾ :ಶ್ರೀ ಹಣಮಂತ @ ದೀಲಿಪ ತಂದೆ ನಾಗಪ್ಪಾ ಗುತ್ತೆದಾರ ವಯಾ:35 ವರ್ಷ ಜಾ:ಇಳಿಗೇರ ಸಾ:ಅಶೋಕ ನಗರ ಶಹಾಬಾದ ಹಾ:ವ:ಎಸ್.ಎಂ ಕೃಷ್ಣಾ ಕಾಲೋನಿ ಗುಲಬರ್ಗಾ  ರವರು ನನ್ನ  ಹೆಂಡತಿ ಬಸಮ್ಮಾ @ ರೇಖಾ ಇವಳಿಗೆ ಬಾಜು ಮನೆಯ ರಾಹುಲ ಇತನು ಅವಾಚ್ಯವಾಗಿ ನಿಂದನೆ ಮಾಡಿದ ವಿಷಯದಲ್ಲಿ  ದಿನಾಂಕ:-02/02/2013 ರಂದು ಬೆಳ್ಳಿಗೆ 7:00 ಗಂಟೆಯ ಸುಮಾರಿಗೆ ಫಿರ್ಯಾದಿಯು ರಾಹುಲ ಇತನ ಮನೆಗೆ ಹೋಗಿ ತನ್ನ ಹೆಂಡತಿಗೆ ಬೈಯ್ದ ವಿಷಯದಲ್ಲಿ ಕೇಳಲು ಹೋದಾಗ ಸದರಿ ಆಪಾದತ ರಾಹುಲ ಇತನು ಬಂದು ನನ್ನೊಂದಿಗೆ ಜಗಳ ಮಾಡಿ ಅಂಗಿಯನ್ನು ಹಿಡಿದು ಕಾಲಿನಿಂದ ಒದ್ದನ್ನು ಇದನ್ನು ನೋಡಿ ನನ್ನ  ಹೆಂಡತಿ ಬೀಡಿಸಲು ಬಂದರೆ ಅವಳಿಗು ಕೂಡಾ ಪ್ರಲ್ಹಾದ ಮತ್ತು ಅವನ ತಂಗಿ ಜಗದೇವಿ @ ತ್ರೀವೇಣಿ ಇಬ್ಬರು ಕೂಡಿ ಬಂದು ಬಸಮ್ಮಾಳಿಗೆ ಮಾನ ಭಂಗವನ್ನು ಮಾಡುವ ಉದ್ದೇಶದಿಂದ ಕೈಹಿಡಿದು ಜಗ್ಗಾಡಿ ಕೈಯಿಂದ ಹೊಡೇ ಬಡೇ ಮಾಡಿರುತ್ತಾರೆ.ರಾಹುಲು ಇತನು ಜಂಬೆಯನ್ನು ತೆಗೆದುಕೊಂಡು ಬಂದು  ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗಿಗೆ ಹೊಡೆಯಲು ಬಂದಾಗ ರಕ್ಷಣೆಗಾಗಿ ಕೈ ಅಡ್ಡ ತಂದಿದ್ದರಿಂದ ಜಂಬೆಯ ಹಿಡಿಕೆ ಏಟು ಬಲಗೈ ಮಣಿಕಟ್ಟಿಗೆ ಹತ್ತಿ ಗುಪ್ತಗಾಯವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಅಪರಾಧ ಸಂಖ್ಯೆ 70/2013 ಕಲಂ 323 324 354 504 307 504 506 (2) ಸಂಗಡ 34 ಐ.ಪಿ.ಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.