POLICE BHAVAN KALABURAGI

POLICE BHAVAN KALABURAGI

12 June 2012

GULBARGA DIST REPORTED CRIMES


ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ: ಶ್ರೀಮತಿ ಪ್ರಿಯಾಂಕ ಗಂಡ ಶ್ರೀಧರ ಮಾಡೋರಕರ ವ:19 ವರ್ಷ ಸಾ:ಸುಂದರ ನಗರ ಗುಲಬರ್ಗಾರವರು ನನ್ನ ತಂದೆ ತಾಯಿಗೆ 2 ಹೆಣ್ಣು 2 ಗಂಡು ಮಕ್ಕಳಿದ್ದುನಾನೇ ಕೊನೆಯವಳಿದ್ದುಪೊಲೀಸ್ ಕಾಲೋನಿ ಶಾಲೆಯಲ್ಲಿ ಓದುತ್ತಿರುವಾಗ 8 ನೇ ತರಗತಿಯಿಂದ 10 ನೇ ತರಗತಿಯವರೆಗೆ ಶ್ರೀದರನೊಂದಿಗೆ ಪ್ರೀತಿಸುತ್ತಿದ್ದುದಿನಾಂಕ: 11.11.2011 ರಂದು ನಾವಿಬ್ಬರೂ ರಾಮ ತೀರ್ಥ ಮಂದಿರದಲ್ಲಿ ಶ್ರೀಧರನ ಗೆಳೆಯರಾದ ಮೌನೇಶಮೋಹನಮತ್ತು ನನ್ನ ಗೆಳತಿ ಅರ್ಚನಾ ಇವರ ಸಮಕ್ಷಮದಲ್ಲಿ ಮದುವೆ ಮಾಡಿಕೊಂಡಿರುತ್ತೆವೆ. ಮದುವೆಯಾದ ಮೇಲೆ ನಾನು ಮತ್ತು ಶ್ರೀಧರ  ಯಾರಿಗೂ ನಮ್ಮ ಮನೆಯವರ ಕಡೆಗೆ ತಿಳಿಸದೇ ಶ್ರೀದರ ತಾಯಿಯಾದ ಸುನಿತಾ ಇವಳೊಂದಿಗೆ ಬೆಂಗಳೂರಿಗೆ ಹೋಗಿ ಚಾಮರಾಜಪೇಟೆಯಲ್ಲಿ ವಾಸವಾಗಿದೆವು,ಆ ಸಮಯದಲ್ಲಿ ನಾನು ನನ್ನ ತಾಯಿಯೊಂದಿಗೆ ಸಂಪರ್ಕದಲ್ಲಿರುವಾಗ ನನ್ನ ಗಂಡ ಅತ್ತೆ ನಿನ್ನ ತಾಯಿಯಿಂದ ಹಣ ತೆಗೆದುಕೊಂಡು ಬಾ ಅಂತಾ ದೈಹಿಕ ಮಾನಸಿಕ ಹಿಂಸೆಕೊಡಲು ಪ್ರಾರಂಬಿಸಿದನು. ದಿನಾಂಕ:27.05.2012 ರಂದು ನನ್ನ ಅತ್ತೆ ಹಾಗೂ ನನ್ನ ಗಂಡ ನಮ್ಮ ಸಂಭಂದಿಕರ ಮದುವೆ ಇದ್ದೆ ಅಂತಾ ಬೆಂಗಳೂರುನಿಂದ ಗುಲಬರ್ಗಾಕ್ಕೆ  ಕರೆದುಕೊಂಡು ಬಂದ್ದರು. ಇಲ್ಲಿ ಬೇರೆ ಮನೆ ಮಾಡುತ್ತೆವೆ. ನಿನ್ನ ತಾಯಿಯಿಂದ 30 ಸಾವಿರ ತೆಗೆದುಕೊಂಡು ಬಾ ಅಂತಾ ಮಾನಸಿಕ ಹಿಂಸೆ ಕೊಟ್ಟಿರುತ್ತಾರೆ. ದಿನಾಂಕ: 11.06.12 ರಂದು ಸಂಜೆ 7.00 ಗಂಟೆ ಸುಮಾರಿಗೆ ನನ್ನ ಗಂಡ, ಮಾವನಾದ ರಾಜು, ಗಂಡನ ಚಿಕ್ಕಪ್ಪಾ  ಮೂರು ಜನರು ನನಗೆ ಜಬರ ದಸ್ತಿಯಿಂದ ನನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗಿ ಬಂಗಾರದ ತಾಳಿ ಚೈನು ಹಾಗೂ 30 ಸಾವಿರ ರೂ ತೆಗೆದುಕೊಂಡು ಬಾ ಅಂತಾ ದೂರದಲ್ಲಿ ನಿಂತು ಕಳುಹಿಸಿದರು. ನಮ್ಮ ತಂದೆ ತಾಯಿಯವರ ಹತ್ತಿರ ಹಣವಿರುವದಿಲ್ಲ ಅಂತಾ ತಿಳಿಸಿದಾಗ ಗಂಡನ ಮನೆಯವರು  ಕೈಯಿಂದ ಹೊಡೆದು, ಕಾಲಿನಿಂದ ಉದ್ದು, ನಾನು ಚಿರಾಡುತ್ತಿರುವಾಗ ನನ್ನ ಮಾವ ನನ್ನ ಬಾಯಿ ಒತ್ತಿ ಹಿಡಿದರು. ಸ್ವಲ್ಪ ಸಮಯ ನಂತರ ಕೈ ತೊಳೆದುಕೊಂಡು ಬಾ ಅಂತಾ ಹೊರಗೆ ಕಳುಹಿಸಿದರು. ನಾನು ನೀರು ತೆಗೆದುಕೊಂಡು ಕಾರಿಡರ ಗೋಡೆ ಹತ್ತಿರ ನಿಂತಿರುವಾಗ ನನ್ನ ಅತ್ತೆ , ಗಂಡ ನನ್ನನು ನೋಡಿ ನೀನು ಜೀವಂತ ವಿದ್ದರೆ ಪ್ರಯೋಜನ ವಿಲ್ಲಾ ನೀನು  ಹಣ ತರುವುದಿಲ್ಲಾ ನೀನು ಸತ್ತು ಹೋಗು ಅಂತಾ  ನನಗೆ 1 ನೇ ಅಂತಸ್ತಿನ ಮೇಲಿಂದ ನೂಕಿರುತ್ತಾರೆ.  ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ 46/12 ಕಲಂ 498(ಎ), 307 ಸಂಗಡ 149 ಐ.ಪಿ.ಸಿ ಮತ್ತು 3&4 ಡಿ.ಪಿ.,ಎಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಜೀತೇಂದ್ರ ತಂದೆ ರಾಮಶೆಟ್ಟಿ  ರಾಠೋಡ ಉ ;ಗ್ರಾಮ ಪಂಚಾಯತ ದಸ್ಯ,  ಸಾ ||ಚೌಕ ತಾಂಡಾ ಚಿಮ್ಮನಚೊಡ ತಾ||ಚಿಂಚೋಳಿ,  ಹಾ|||| ಮನೆ ನಂ 43/2  ನಂದನ ನಿವಾಸ,  ರಾಮ ತೀರ್ಥ ನಗರ  ಗುಲಬರ್ಗಾರವ ರು ನ್ನ ಟಾಟಾ ಇಂಡಿಕಾ ಕಾರ ನಂ: ಕೆಎ 33 ಎಮ್-4005 ನೇದ್ದು  ದಿನಾಂಕ  09-06-2012 ನೇದ್ದು ನಾನು ಬಾಡಿಗೆ ಮನೆಯ ಮುಂದೆ ನಿಲ್ಲಿಸಿ, ಊರಿಗೆ ಹೋಗಿರುತ್ತೆನೆ. ಮರಳಿ ದಿನಾಂಕ 10/06/12  ರಂದು ಮನೆಗೆ ಬಂದಾಗ, ನಾನು ಮನೆಯ ಮುಂದೆ ನಿಲ್ಲಿಸಿದ  ನನ್ನ ಕಾರ  ಇರಲಿಲ್ಲ , ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ಸಿಕ್ಕಿರುವದಿಲ್ಲ, ಯಾರೊ ಕಳ್ಳರು ಕಾರ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 199/12  ಕಲಂ 379 ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ ಶ್ರೀ ಪಾಂಡು ತಂದೆ ಗಂಗಾರಾಮ ರಾಠೋಡ ಸಾ: ಮನೆ ನಂ 1-867/28ಸಿ ವೆಂಕಟೇಶ ನಗರ ಗುಲಬರ್ಗಾವರು ನಾನು ದಿನಾಂಕ 06-06-12 ರಂದು ಸಾಯಂಕಾಲ 4-30 ಗಂಟೆಗೆ ಮನೆಯ ಮುಂದೆ ಮೊ. ಸೈ ನಂ ಕೆ.ಎ 32 ಕ್ಯೂ 7587 ಹೀರೋ ಹೊಂಡಾ ಪ್ಲಸ್ ಬ್ಲಾಕ ಕಲರ ಇಂಜಿನ ನಂ 05ಎ15ಇ32704 ಚೆಸಿ ನಂ 05ಎ16ಎಫ್.32506 ಅ.ಕಿ 25000/- ರೂ  ನೇದ್ದು  ನಿಲ್ಲಿಸಿ ಮನೆಯ ಳಗಡೆ ಹೋಗಿದ್ದು, ಮನೆಯಿಂದ ಹೊರಗೆ ಬಂದು ನೋಡಲಾಗಿ ವಾಹನ ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂ 83/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.                                                                     

GULBARGA DIST REPORTED CRIMES


ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಕು: ಸುನಂದ ತಂದೆ ರಾಮದಾಸ ರಾಠೋಡ ಸಾ: ಕೆ.ಹೆಚ್.ಬಿ ಕಾಲೋನಿ  ಸೋಲಾಪೂರ ರೋಡ ಬಿಜಾಪೂರರವರು ನಾನು ಮತ್ತು ನಮ್ಮ ದೊಡ್ಡಪ್ಪ ರೂಪಸಿಂಗ ರಾಠೋಡ, ಮತ್ತು ದೊಡ್ಡಮ ರುಕಾಮ್ಮಬಾಯಿ , ರೂಪಸಿಂಗ ಇವರ ಪಿ.ಎ ಶ್ರೀಶೈಲ , ಸಪಾರಿ ವಾಹನ ಚಾಲಕ ಕಮಲಪ್ಪ ಎಲ್ಲಾರೂ ಸಪಾರಿ ವಾಹನ ನಂಬರ ಕೆಎ. 28 ಎಮ್ 5605 ನೇದ್ದರಲ್ಲಿ ಕುಳಿತು ದಿನಾಂಕ: 11/06/2012 ರಂದು ಬೆಳ್ಳಗಿನ ಜಾವ 1-00 ಗಂಟೆಗೆ ಬಿಜಾಪೂರದಿಂದ ಹೈದ್ರಾಬಾದಕ್ಕೆ ಬರುತ್ತಿದ್ದಾಗ ರಾತ್ರಿ ಜೇವರ್ಗಿ ಸಮೀಪ ಸಪಾರಿ ವಾಹನ ಚಾಲಕ ಕಮಲಪ್ಪ ಇತನು ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ರೋಡಿನ ಸೈಡಿಗೆ ಯಾವುದೆ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳದೆ ನಿಲ್ಲಿಸಿದ ಲಾರಿ ನಂ ಕೆಎ-36/5281 ನೇದ್ದಕ್ಕೆ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ನನಗೆ  ಮತ್ತು ನಮ್ಮ ದೊಡ್ಡಪ್ಪ, , ದೊಡ್ಡಮ್ಮ , ವಾಹನ ಚಾಲಕ ಕಮಲ್ಲಪ್ಪ ಮೂವರಿಗೆ ಗಾಯಾ ಪೆಟ್ಟು ಆಗಿದ್ದು, ಪಿ.ಎ ಶ್ರೀಶೈಲ ಇತನಿಗೆ ಭಾರಿ ಗಾಯಾಗಳಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಲಾರಿ ಕ್ಲಿನರ ಹುಸೇನ ಭಾಷ ತಂದೆ ಮಹಿಬೂಬ ಇತನು ಕೂಡ ಉಪಚಾರ ಕುರಿತು ತೆಗೆದುಕೊಂಡು ಹೋಗುತ್ತಿರುವಾಗ ಫರತಬಾದ ಹತ್ತಿರ ಮೃತಪಟ್ಟಿರುತ್ತಾನೆ ಅವನ ಶವವು ಕೂಡ ಮರಳಿ ಸರಕಾರಿ ಆಸ್ಪತ್ರೆ ಜೇವರ್ಗಿಯಲ್ಲಿ ಇರುತ್ತದೆ. ಕಾರಣ ನಮ್ಮ ಸಪಾರಿ ವಾಹನ ಚಾಲಕ ಕಮಲ್ಲಪ್ಪ ಮತ್ತು ಲಾರಿ ಚಾಲಕ ಹುಸೇನ ಭಾಷ ಇವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 87/2012 ಕಲಂ 279, 337, 338, 283 , 304 (ಎ), ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.