POLICE BHAVAN KALABURAGI

POLICE BHAVAN KALABURAGI

30 June 2015

Kalaburagi District Reported Crimes

ಹಲ್ಲೆ ಪ್ರಕರಣಗಳು :
ರೇವೂರ ಠಾಣೆ : ದಿನಾಂಕಃ29/06/2015 ರಂದು ಶ್ರೀ ಶರಣಬಸಪ್ಪಾ ತಂದೆ ರಾಜಕುಮಾರ ದಂಡೋತಿ ಸಾ : ಅಂಕಲಗಾ ರವರ ತಮ್ಮನಾದ ಶ್ರೀಮಂತ ಹಾಗೂ ಶರಣಪ್ಪಾ ತಂದೆ ಚನ್ನಪ್ಪಾ ಪಡಶೇಟ್ಟಿ ಇಬ್ಬರ ಮದ್ಯ ಸುಮಾರು 2-3 ತಿಂಗಳ ಹಿಂದೆ ಜಗಳ ವಾಗಿದ್ದು ಶರಣಪ್ಪಾ ತಂದೆ ಚನ್ನಪ್ಪಾ ಪಡಶೇಟ್ಟಿ  ಈತನು ನನ್ನ ತಮ್ಮನ ಮೇಲೆ ಹಗೆತನ ಸಾಗಿಸಿಕೊಂಡು ಬಂದಿರುತ್ತಾನೆ. ದಿನಾಂಕಃ 28/06/2015 ರಾತ್ರಿ 2 ಗಂಟೆ ಸುಮಾರಿಗೆ ಶರಣಪ್ಪಾ ತಂದೆ ಚನ್ನಪ್ಪಾ ಪಡಶೇಟ್ಟಿ ರವರ ಟ್ರಾಕ್ಟರ ಇಂಜನ ಭಾಗಕ್ಕೆ ಬೆಂಕಿ ಹತ್ತಿ ಸುಟ್ಟಿದ್ದು ದಿನಾಂಕ 29-06-2015 ರಂದು ನಾನು ಹಾಗೂ ನನ್ನ ತಂದೆ ಹಾಗೂ ನನ್ನ ತಮ್ಮಂದಿರಾದ ಶ್ರೀಮಂತ ಹಾಗೂ ಬಸವರಾಜ ಎಲ್ಲರೂ ಬಸ್ಸ್ ನಿಲ್ದಾಣದ ಹತ್ತಿರ ನಿಂತಾಗ ಅಲ್ಲೆ ಬಸ್ಸ ನಿಲ್ದಾಣ ಹತ್ತಿರ ನಿಂತಿದ್ದ  ಶರಣಪ್ಪಾ ತಂದೆ ಚನ್ನಪ್ಪಾ ಪಡಶೇಟ್ಟಿ  ಹಾಗೂ ಆತನ ತಮ್ಮ ಶಂಕರ ಇಬ್ಬರೂ ತಮ್ಮ ಟ್ರಾಕ್ಟರ ಸುಟ್ಟ ಬಗ್ಗೆ ನಮ್ಮ ತಮ್ಮ ಶ್ರೀಮಂತ ಮೇಲೆ ಯಾಸಿದಿಗಡಿಯಾಗಿ ಮಾತನಾಡುತ್ತಿದ್ದರು ಆಗ ಶ್ರೀಮಂತನು  ನನ್ನ ಮೇಲೆ ವಿನಾ ಕಾರಣ ಸುಳ್ಳು ಅಪವಾದ ಮಾಡತ್ತಿರಾ  ಅಂತಾ ಕೇಳಿದಾಗ ಹಳೆ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಶರಣಪ್ಪನು ಏ ರಂಡಿ ಮಗನೇ ನಿನ್ನ ಸೊಕ್ಕು ಬಹಾಳ ಆಗಿದೆ  ನಿನ್ನ ಜೀವ ಹೊಡೆದು ಬಿಡುತ್ತೇವೆ ಅಂತಾ ಅಂದು ಎದೆಯ ಮೇಲಿನ ಅಂಗಿ ಹಿಡಿದು ಏಳೆದಾಡುತ್ತಿರುವಾಗ ಶಂಕರ ಈತನು ಅಲ್ಲೆ ಬಿದ್ದಿದ ಬಡಿಗೆಯನ್ನು ತೆಗೆದುಕೊಂಡು ಶ್ರೀಮಂತನ ತಲೆಯ ಹಿಂಭಾಗಕ್ಕೆ ಹೋಡೆದು ಭಾರಿ ರಕ್ತಗಾಯ ಮಾಡಿದನು. ಆಗ ನಾನು ನನ್ನ ತಂದೆ, ತಮ್ಮ ಬಸವರಾಜ ಎಲ್ಲರೂ ಏಕೆ ಹೊಡೆಯುತ್ತಿದ್ದರಿ ಅಂತಾ ಕೇಳಲು ಹೋದಾಗ ಶರಣು ಪಡಶಟ್ಟಿರವರ ತಮ್ಮನಾದ ಸಿದ್ರಾಮಪ್ಪಾ. ಹಾಗೂ ಅವರ ಅಣ್ಣತಮ್ಮಕಿಯವರಾದ, ರುದ್ರಪ್ಪ ತಂದೆ ಗಣಪತಿ ಪಡಶೇಟ್ಟಿ, ಶಿವಲಿಂಗಪ್ಪಾ ತಂದೆ ದತ್ತು ಪಡಶೇಟ್ಟಿ, ಹಾಗೂ ಅಶೋಕ ತಂದೆ ರುದ್ರಪ್ಪಾ ಗಿಲಕಿ, ಮಲ್ಲು ತಂದೆ ಸಿದ್ರಾಮಪ್ಪಾ ಗಿಲಕಿ ಎಲ್ಲರೂ  ಗುಂಪು ಕಟ್ಟಿಕೊಂಡು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಈ ರಂಡಿ ಮಕ್ಕಳ ಸೋಕ್ಕು ಬಹಳ ಆಗ್ಯಾದ ಇವರಿಗೆ  ಇವತ್ತು  ಕೋಲೆ ಮಾಡಿಬಿಡೋಣ ಅಂತಾ ಅನ್ನುತಾ ಬಂದು ಅವರಲ್ಲಿ ಸಿದ್ರಾಮಪ್ಪ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಶ್ರೀಮಂತನ ತಲೆಯ ಮಧ್ಯ ಭಾಗದಲ್ಲಿ ಹೋಡೆದು ಭಾರಿ ರಕ್ತಗಾಯ ಮಾಡಿ ಈ ಸೂಳೆ ಮಕ್ಕಳಿಗೆ ಬಿಡಬ್ಯಾಡರಿ  ಖಲಾಸ ಮಾಡ್ರಿ ಅಂತಾ  ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 27.06.2015 ರಂದು ರಾತ್ರಿ ಶ್ರೀಮತಿ ನಾಗಮ್ಮ ಗಂದೆ ರಾಯಪ್ಪ ನಾಯ್ಕೊಡಿ ಸಾಃ ರಾಂಪೂರ  ರವರು ನನ್ನ ಗಂಡ ಮತ್ತು ಮಕ್ಕಳು ನಮ್ಮ ಮನೆಯ ಎದುರು ಸ್ಥಳದಲ್ಲಿ ಇದ್ದಾಗ ನಮ್ಮ ಎರಡನೆ ಅಣ್ಣತಮ್ಮಕಿಯವರಾದ ಶಂಕ್ರೇಪ್ಪ ತಂದೆ ಸುಬಾಷ ಬೆಂಗಳೂರ [ನಾಯ್ಕೊಡಿ] ಸಂಗಡ 4 ಜನರು  ಕೂಡಿಕೊಂಡು ಹಿಂದಿನ ಹಳೇ ದ್ವೇಷದಿಂದ ನಮ್ಮೊಂದಿಗೆ ಜಗಳ ಮಾಡಿ ಅವಾಚ್ಯವಾಗಿ ಬೈಯ್ದು, ಕೈಯಿಂದ ಬಡಿಗೆಯಿಂದ ಹೊಡೆ ಬಡೆ ಮಾಡಿ ತಡೆದು ನಿಲ್ಲಿಸಿ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಲಕ್ಷ್ಮಿಕಾಂತ ತಂದೆ ಶಿವಶರಣಪ್ಪ ತಳ್ಳೋಳಿ ಸಾ: ಪ್ಲಾಟ ನಂ. 41 ಮಿಸ್ಬಾನಗರ ಎಮ್.ಎಸ್.ಕೆ. ಮಿಲ್ ರಿಂಗ ರಸ್ತೆ ಕಲಬುರಗಿ ಇವರು ತನ್ನ ತಂದೆಯವರಾದ ಶಿವಶರಣಪ್ಪ ತಳ್ಳೋಳಿ ಇವರು ನನಗೆ ಬಜಾಜ ಪ್ಲಾಟಿನಾ ದ್ಚಿಚಕ್ರ ವಾಹನ ನಂ. KA-32 V-6827 ಕಪ್ಪು ಬಣ್ಣದು ಮಾಡಲ್ 2009, Engine No. DUMBSAA2203 CHESSI NO: MD2DDDZZZSWB17209 ನೇದ್ದನ್ನು ಖರೀಧಿಸಿ ಕೊಟ್ಟಿದ್ದು ಅದನ್ನು ನಾನು ಉಪಯೊಗಿಸುತ್ತಾ ಬಂದಿದ್ದು ದಿನಾಂಕ 28.06.2015 ರಂದು ಸಾಯಂಕಾಲ 4 ಗಂಟೆಗೆ ಸೂಪರ ಮಾರ್ಕೇಟ ಎಸಿಯನ್ ಕಾಂಪ್ಲೇಸ್ಸಿನ ಪಿಲಿಪ್ಸಎಜೆನಸಿಜ ಸರ್ವಿಸದಲ್ಲಿ ಕೆಲಸ ವಿದ್ದ ಪ್ರಯುಕ್ತ ನಾನು ನನ್ನ ವಾಹನವನ್ನು ಎಸಿಯನ್ ಕಾಂಪ್ಲೇಕ್ಸ ಎದುರುಗಡೆ ನಿಲ್ಲಿಸಿ ಆಫೀಸದಲ್ಲಿ ಹೋಗಿ ಕೆಲಸ ಮುಗಿಸಿಕೊಂಡು ಮರಳಿ 5 ಗಂಟೆಗೆ ಬಂದು ನೋಡುವಷ್ಠರಲ್ಲಿ ನಾನು ನಿಲ್ಲಿಸಿದ ಸ್ಥಳದಲ್ಲಿ ನನ್ನ ದ್ವಿಚಕ್ರ ವಾಹನ ಇರಲಿಲ್ಲಾ. ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.ಅದರ ಅಂದಾಜು ಕಿಮ್ಮತ್ತು 31,000/- ರೂ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅನಧೀಕೃತವಾಗಿ ಮರಳು ಸಾಗಿಸುತ್ತಿದ್ದ ವಾಹನಗಳ ಜಪ್ತಿ :
ಅಫಜಪೂರ ಠಾಣೆ : ದಿನಾಂಕ 29/06/2015 ರಂದು ಬೆಳಿಗ್ಗೆ 6.00 ಗಂಟೆಗೆ ಗ್ರಾಮ ಲೆಕ್ಕಿಗರ ಭವನ ಹತ್ತಿರ ಕಂದಾಯ ನಿರೀಕ್ಷಕರು ಅಫಜಲಪೂರ ಮತ್ತು ಗ್ರಾಮ ಲೆಕ್ಕಿಗರು ಅಫಜಲಪೂರ ಇವರು ಟಿಪ್ಪರ ನಂ ಕೆಎ-32 ಸಿ-0413 ಟಿಪ್ಪರನ್ನು ತಡೆದು ವಿಚಾರಣೆ  ಮಾಡಲಾಗಿ ವಾಹನ ಚಾಲಕರು ವಾಹನದಲ್ಲಿ ಮರಳು ಇದೆ ಎಂದು ಹೇಳಿದ್ದು ಈ ಕುರಿತು ದಾಖಲಾತಿಗಳನ್ನು ಸಲ್ಲಿಸಲು ತಿಳಿಸಲಾಗಿ ಅಧಿಕೃತ ದಾಖಲಾತಿಗಳು ಸಲ್ಲಿಸಿರುವದಿಲ್ಲಾ. ಕಾರಣ ಇದೊಂದು ಅನಧಿಕೃತ ಮರಳು ಸಾಗಣಿಕೆ ಎಂದು ಕಂಡು ಬಂದ ಕಾರಣ ಕಂದಾಯ ನಿರೀಕ್ಷಕರಾದ ಮಾಣಿಕ ಘತ್ತರಗಿ ರವರು ವಾಹನವನ್ನು ಜಪ್ತಿಮಾಡಿ ಪಂಚನಾಮೆಯನ್ನು ತಂದು ಹಾಜರ ಪಡಿಸಿದ್ದರ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಜಲಪೂರ ಠಾಣೆ : ದಿನಾಂಕ 29/06/2015 ರಂದು ಬೆಳಿಗ್ಗೆ 7.30 ಗಂಟೆಗೆ ಅಮೋಘಿಸಿದ್ದ ಹತ್ತಿರ ಕಂದಾಯ ನಿರೀಕ್ಷಕರು ಅಫಜಲಪೂರ ಮತ್ತು ಗ್ರಾಮ ಲೆಕ್ಕಿಗರು ಅಫಜಲಪೂರ ಇವರು ಟಿಪ್ಪರ ನಂ ಕೆಎ-32 ಸಿ-3429  ಟಿಪ್ಪರನ್ನು ತಡೆದು ವಿಚಾರಣೆ  ಮಾಡಲಾಗಿ ವಾಹನ ಚಾಲಕರು ವಾಹನದಲ್ಲಿ ಮರಳು ಇದೆ ಎಂದು ಹೇಳಿದ್ದು ಈ ಕುರಿತು ದಾಖಲಾತಿಗಳನ್ನು ಸಲ್ಲಿಸಲು ತಿಳಿಸಲಾಗಿ ಅಧಿಕೃತ ದಾಖಲಾತಿಗಳು ಸಲ್ಲಿಸಿರುವದಿಲ್ಲಾ. ಕಾರಣ ಇದೊಂದು ಅನಧಿಕೃತ ಮರಳು ಸಾಗಣಿಕೆ ಎಂದು ಕಂಡು ಬಂದ ಕಾರಣ ಕಂದಾಯ ನಿರೀಕ್ಷಕರಾದ ಮಾಣಿಕ ಘತ್ತರಗಿ ರವರು ವಾಹನವನ್ನು ಜಪ್ತಿಮಾಡಿಕೊಂಡು ಪಂಚನಾಮೆಯನ್ನು ತಂದು ಹಾಜರ ಪಡಿಸಿದ್ದರ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

29 June 2015

Kalaburagi District Reported Crimes

ಹಲ್ಲೆ ಪ್ರಕರಣಗಳು :
ಅಫಜಪೂರ ಠಾಣೆ : ಶ್ರೀ ಶರಣಪ್ಪ ತಂದೆ ಭಿಮಶಾ ಲಾಳಸಂಗಿ ಸಾ ಕರಜಗಿ ರವರ ತಮ್ಮನಿಗು ಮತ್ತು ನಮ್ಮೂರ ಈರಪ್ಪ ತಂದೆ ಗಂಗಾಧರ ನಾಯ್ಕೋಡಿ ರವರಿಗೆ ಬಸ್ಸ ನಿಲ್ದಾಣದಲ್ಲಿ ಕ್ರೋಜರಗಳು ಪಾಳಿ ನಿಲ್ಲಿಸುವ ವಿಚಾರದಲ್ಲಿ ತಕರಾರು ಆಗಿದ್ದು ಈರಪ್ಪ ಇವನು ನಮ್ಮ ತಮ್ಮನ ಮೇಲೆ ಹಗೆ ಸಾದಿಸುತ್ತಾ ಬಂದಿದ್ದು ದಿನಾಂಕ 28-06-2015 ರಂದು ಸಾಯಂಕಾಲ ನಾನು ಮತ್ತು ನಮ್ಮ ತಮ್ಮ ಸಿದ್ದಪ್ಪ ರವರು  ಕೂಡಿ ನಮ್ಮೂರ ಬಸ್ ನಿಲ್ದಾಣದ ಹತ್ತಿರ ಇದ್ದಾಗ ಅದೇ ಸಮಯಕ್ಕೆ ಅಲ್ಲಿ ನಮ್ಮೂರ ಈರಪ್ಪ ತಂದೆ ಗಂಗಾಧರ ನಾಯ್ಕೋಡಿ ರವರು ಸಹ ಇದ್ದರು, ಆಗ ನಾನು ಅವನ ಹತ್ತಿರ ಹೋಗಿ ಯಾಕ ನಮ್ಮ ತಮ್ಮನ ಜೋತೆ ಜಗಳ ತೆಗೆದಿದಿ, ಅಂತಾ ಕೇಳಿದಾಗ, ಈರಪ್ಪ ಇವನು ನನಗೆ ಏನೋ ಸುಳಿಮಗನಾ  ನನಗೇನ ಕೇಳತಿ ನಿಮ್ಮ ತಮ್ಮನಿಗೆ ಹೇಳು ಅಂತಾ ಅಂದನು ಆಗ ನಾನು ಸರಿಯಾಗಿ ಮಾತಾಡು ಯಾಕ ಬೈತಿ ಅಂತಾ ಅಂದಾಗ, ನನಗೆ ಎದುರು ಮಾತಾಡತಿಯಾ ಮಗನಾ ಅಂತಾ ಅಂದು ನನ್ನ ಎದೆ ಮೇಲಿನ ಅಂಗಿ ಹಿಡಿದು ನನಗೆ ಕಪಾಳ ಮೇಲೆ ಹೊಡೆದನು ಆಗ ಅಲ್ಲೆ ಇದ್ದ 1] ಸೋಮಶೇಖರ ತಂದೆ ಗಂಗಾಧರ ನಾಯ್ಕೋಡಿ, 2] ಲಕ್ಷ್ಮಣ ತಂದೆ ಗಂಗಾಧರ ನಾಯ್ಕೋಡಿ, 3] ಸಿದ್ದಾರ್ಥ ತಂದೆ ಚಂದ್ರಕಾಂತ ನಾವಿ, 4] ಚಂದ್ರಕಾಂತ ನಾವಿ ರವರು ಓಡುತ್ತಾ ನಮ್ಮ ಹತ್ತಿರ ಬಂದು, ನಮಗೆ ಯಾಕೋ ಸೂಳಿ ಮಕ್ಕಳ್ಯಾ ನಮ್ಮ ತಮ್ಮನ ಜೋತೆ ಜಗಳಾ ಮಾಡತಿರಾ ಅಂತಾ ಅಂದು ನಮಗೆ ಹೊಡೆಯಲು ಬಂದರು, ಆಗ ಈರಪ್ಪ ಇವನು ಅಲ್ಲೆ ಬಿದ್ದಿದ ಒಂದು ಕಲ್ಲು ತೆಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದನು, ನಂತರ ನನಗೆ ಕೆಳಗೆ ಕೆಡವಿ ಎಲ್ಲರು ಸೇರಿ ಕಾಲಿಲೆ ಒದ್ದಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಅಫಜಲಪೂರ ಠಾಣೆ : ಶ್ರೀ ಈರಪ್ಪಾ ತಂದೆ ಗಂಗಾಧರ ನಾಯ್ಕೊಡಿ ಸಾ : ಕರಜಗಿ ರವರು ನಮ್ಮೂರ ಬಸ್ ನಿಲ್ದಾಣದಲ್ಲಿ ನಮ್ಮೂರಿನ ಕ್ರೂಜರಗಳು ಪಾಳಿ ಪ್ರಕಾರ ಕರಜಗಿ ಅಫಜಲಪೂರ ಹಾಗೂ ಇನ್ನಿತರ ಊರುಗಳಿಗೆ ಜನರನ್ನು ಕೂಡಿಸಿಕೊಂಡು ಹೋಗುವುದು ಬರುವುದು ಮಾಡುತ್ತಿರುತ್ತೆವೆ. ಈಗ ಒಂದು ವಾರದ ಹಿಂದೆ ನಾನು ಮತ್ತು ನಮ್ಮೂರ ಸಿದ್ದು ತಂದೆ ಭಿಮಶಾ ಲಾಳಸಂಗಿ ಈತನು ಹಾಗೂ ಇನ್ನು ಕೆಲವು ಕ್ರೂಜರ ಚಾಲಕರು ಹಾಗೂ ಜೀಪ ಚಾಲಕರು ತಮ್ಮ ತಮ್ಮ ವಾಹನಗಳನ್ನು ಪಾಳಿ ಪ್ರಕಾರ ಪ್ಯಾಶೆಂಜರ ಬಾಡಿಗೆ ಹೊಡೆಯಲು ನಿಲ್ಲಿಸಿರುತ್ತೆವೆ. ನನ್ನ ಕ್ರೂಜರ ಪಾಳಿ ಬಂದಾಗ ಸಿದ್ದು ಲಾಳಸಂಗಿ ಈತನು ಮಗನೆ ನನ್ನ ಗಾಡಿಯ ಪಾಳಿ ಇರುತ್ತದೆ ನಿನ್ಯಾಕ ತಂದ ಹಚ್ಚಿದಿ ಮಗನಾ ಅಂತಾ ಅಂದು ನನ್ನ ಏದೆಯ ಮೇಲಿನ ಅಂಗಿ ಹಿಡಿದು ಹೋಡೆದನು, ಆಗ ನನಗೂ ಅವನಿಗೂ ಜಗಳ ಆಗುತ್ತಿದ್ದಾಗ ಅಲ್ಲೆ ಇದ್ದ ಕ್ರೂಜರ ಚಾಲಕರು ಮತ್ತು ಇನ್ನು ಕೆಲವು ಜನರು ಜಗಳ ಬಿಡಿಸಿದರು. ಆಗ ಸದರಿ ಸಿದ್ದು ಲಾಳಸಂಗಿ ಈತನು ಮಗನೆ ನಾವು 6 ಜನ ಅಣ್ಣ ತಮ್ಮರಿದ್ದಿವಿ, ನಿನ್ನ ಜೀವ ನಮ್ಮ ಕೈಯಲ್ಲೆ ಹೋಗೊದು, ನೋಡು ನಿನಗೆ ಒಂದು ವಾರದಲ್ಲಿ ಒಂದು ಗತಿ ಕಾಣಿಸುತ್ತೆವೆ ಅಂತಾ ಹೇಳಿ ನನ್ನ ಮೇಲೆ ಬಾರಿ ದ್ವೇಷ ಮಾಡಿಕೊಂಡು ಅಲ್ಲಿಂದ ಹೊದನು. ಅಂದಿನಿಂದ ಸಿದ್ದು ಲಾಳಸಂಗಿ ಮತ್ತು ಅವನ ಅಣ್ಣ ತಮ್ಮರಾದ ಶರಣಪ್ಪ, ಕೃಷ್ಣಪ್ಪ, ಪರಶುರಾಮ, ಪುಂಡಲಿಕ, ಶ್ರೀಶೈಲ ಇವರುಗಳು ಏನೊ ಮಗನೆ ನಮ್ಮ ಜೋತೆಗೆನೆ ಜಗಳ ತಗಿತಿಯಾ, ನಿನಗೆ ಒಂದು ಗತಿ ಕಾಣಿಸುತ್ತೆವೆ ಅಂತಾ ಹೇಳುತ್ತಾ ನನ್ನನ್ನು ಕೊಲೆ ಮಾಡಬೆಕಂದು ನನ್ನ ಮೇಲೆ ಹಗೆ ಸಾದಿಸುತ್ತಿದ್ದರು. ಇಂದು ದಿನಾಂಕ 28-06-2015 ರಂದು ಸಾಯಂಕಾಲ 5:30 ಗಂಟೆ ಸಮಯಕ್ಕೆ ನಾನು ನಮ್ಮ ಮನೆಯಿಂದ, ನಮ್ಮೂರಿನ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ, ನನ್ನ ಹಿಂದೆ ಹಿಂದೆಯೆ ನನ್ನ ಜೊತೆಗೆ ಜಗಳ ಮಾಡಿದ ಸಿದ್ದು ಲಾಳಸಂಗಿ ಈತನು ಪೋನಿನಲ್ಲಿ ಆ ಸೂಳಿ ಮಗಾ ಇಲ್ಲೆ ಹೊಂಟಾನ ಮನ್ಯಾಗ ಇರೊ ಮಚ್ಚು ತಗೆದುಕೊಂಡು ಎಲ್ಲರೂ ಬರ್ರಿ, ಈ ಸೂಳೆ ಮಗನಿಗೆ ಇವತ್ತು ಹೊಡೆದು ಕಲಾಸ ಮಾಡೋಣ ಅಂತಾ ಹೇಳಿದನು, ಅದನ್ನು ಕೇಳಿ ಅಲ್ಲಿಂದ ಓಡಿ ನಮ್ಮೂರಿನ ಬಸ್ ನಿಲ್ದಾಣದ ಹತ್ತಿರ ಬಂದು ಸದರಿ ವಿಷಯವನ್ನು ನನ್ನ ಗೆಳೆಯ ಶಿವಾನಂದ ನಾವಿ ಇವನಿಗೆ ಹೇಳುತ್ತಿದ್ದೆನು, ಅಷ್ಟರಲ್ಲಿ 1) ಸಿದ್ದು ತಂದೆ ಬೀಮಶಾ ಲಾಳಸಂಗಿ 2) ಶರಣಪ್ಪ ತಂದೆ ಬೀಮಶಾ ಲಾಳಸಂಗಿ 3) ಕೃಷ್ಣಪ್ಪ ತಂದೆ ಬೀಮಶಾ ಲಾಳಸಂಗಿ 4) ಪರಶುರಾಮ ತಂದೆ ಬೀಮಶಾ ಲಾಳಸಂಗಿ 5) ಪುಂಡಲಿಕ ತಂದೆ ಬೀಮಶಾ ಲಾಳಸಂಗಿ 6) ಶ್ರೀಶೈಲ ತಂದೆ ಬೀಮಶಾ ಲಾಳಸಂಗಿ ಇವರೆಲ್ಲರೂ ಸಿದ್ದು ಈತನು ತನ್ನ ಕೈಯಲ್ಲಿ ಮಚ್ಚನ್ನು ಹಾಗೂ ಶರಣಪ್ಪ ಈತನು ಒಂದು ಬಡಿಗೆಯನ್ನು ಮತ್ತು ಕೃಷ್ಣಪ್ಪಾ ಈತನು ಒಂದು ರಾಡನ್ನು ಹಿಡಿದುಕೊಂಡು ಓಡುತ್ತಾ  ನನ್ನ ಹತ್ತಿರ ಬರುತ್ತಿದ್ದರು, ಆಗ ನಾನು ಸದರಿಯವರನ್ನು ನೋಡಿ ಓಡುತ್ತಿದ್ದಾಗ ಎಲ್ಲರೂ ನನ್ನ ಬೆನ್ನಟ್ಟಿ ಬಂದು, ಬಸ್ ನಿಲ್ದಾಣದಲ್ಲಿರುವ ಪಾನಶಾಪ್ ಹತ್ತಿರ ಸುತ್ತುವರೆದು ಸಿದ್ದು ಲಾಳಸಂಗಿ ಈತನು ಮಗನೆ ನೀನು ಇವತ್ತು ಕಲಾಸ ಅಂತಾ ಹೇಳುತ್ತಾ ತನ್ನ ಕೈಯಲ್ಲಿದ್ದ ಮಚ್ಚಿನಿಂದ ನನ್ನ ತಲೆಯ ಮೇಲೆ ಹೊಡೆದನು, ಕೃಷ್ಣಪ್ಪಾ ಈತನು ರಾಡಿನಿಂದ ನನ್ನ ಬೆನ್ನಿನ ಮೇಲೆ ಹೊಡೆದನು. ಹಾಗೂ ಶರಣಪ್ಪ ಇವನು ಬಡಿಗೆಯಿಂದ ನನ್ನ ಕಾಲಿನ ಮೇಲೆ ಎಲ್ಲರೂ ಮನಸ್ಸೊ ಇಚ್ಚೆ ಹೊಡೆಯುತ್ತಿದ್ದಾಗ ನಾನು ಕೇಳಗೆ ಬಿದ್ದೆನು ಆಗ ಉಳಿದ ಪರಶುರಾಮ, ಪುಂಡಲಿಕ ಮತ್ತು ಶ್ರೀಶೈಲ ಇವರುಗಳು ಈ ಸೂಳಿ ಮಗನಿಗೆ ಕಲಾಸ ಮಾಡೋಣ ಅಂತಾ ಹೇಳುತ್ತಾ ಕಾಲಿನಿಂದ ಹೊಟ್ಟೆಯ ಮೇಲೆ ಒದ್ದು ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

28 June 2015

Kalaburagi District Reported Crimes

ಹಲ್ಲೆ ಮಾಡಿ ನಿಂದನೆ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಕುಮಾರಿ ಬಸಲಿಂಗಮ್ಮ ತಂದೆ ಶಿವಲಿಂಗಪ್ಪಾ ಸಾ; ಪ್ಲಾಟ ನಂ 5 ವಿರೇಶ ನಗರ ಮೆಡಿಕಲ್ ಕಾಲೇಜ ಹತ್ತಿರ ಕಲಬುರಗಿ ರವರು ದಿನಾಂಕ 31-05-2015 ರಂದು 7-00 ಎ.ಎಮ್ ಕ್ಕೆ ಚಿರಾಯು ಆಸ್ಪತ್ರೆಗೆ ಅವರ ಸಂಬಂಧಿಕರಿಗೆ ಭೇಟಿಯಾಗಲು ಹೋದಾಗ 1)ಅನಂತ ರಾಜ ತಂದೆ ಗುರಣ್ಣಾ 2) ಭಾಗೀರಥಿ ಗಂಡ  ಅನಂತ ರಾಜ ಸಾ:ಗುಂದೇಗುಡಿ ಲೇಔಟ ಶಹಾಬಜಾರ ಕಲಬುರಗಿ ನೀನು ಈ ಮೊದಲು ನನ್ನ ಮೇಲೆ ಅನೈತಿಕ ಸಂಬಂಧದ ವಿಷಯದಲ್ಲಿ ಕೇಸು ಕೊಟ್ಟು ನನಗೆ ತ್ರಾಸ ಕೊಟ್ಟಿದ್ದೀ ಈಗ ನಾನು ನಿನ್ನ ಜೋತೆ ಮತ್ತೆ ಸಂಪರ್ಕ ಮಾಡುತ್ತೇನೆ ನಡೆ ಅಂತಾ ಕೈ ಹಿಡಿದು ಕೈಯಲ್ಲಿದ್ದ ಬಳೆಗಳನ್ನು ಒಡೆದು ಹಾಕಿದನು. ಆರೋಪಿ ನಂ;2ನೇದ್ದವಳು ವಿನಾಃ ಕಾರಣ ನನ್ನ ಹೆಸರು ಕೇಸಿನಲ್ಲಿ ಸೇರಿಸಿದ್ದೀ ಮಾದಿಗ ರಂಡಿ ಕಮ್ಮಜಾತಿ ಎಂದು ತನ್ನ ಗಂಡನಿಗೆ ಈ ರಂಡಿಗೆ ಬಿಡಬೇಡ ಇವಳಿಗೆ ಬಹಳ ಸೊಕ್ಕು ಇದೆ. ಬಿಡು ಇನ್ನೊಮ್ಮೆ ನಮ್ಮ ಗೂಡವಿಗೆ ಬರದಂತೆ ಸೇಡು ತಿರಿಸಿಕೊ ಅಂತಾ ನನ್ನ ಕೂದಲು ಹಿಡಿದು ಎಳೆದಾಡಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಕುರಕುಂಟಾ ಠಾಣೆ : ಶ್ರೀ ತುಳಿಸಿರಾಮ  ತಂದೆ ನಾರಾಯಣ ಪವಾರ ಸಾ|| ವೆಂಕಟೇಶ ನಗರ ಕುರಕುಂಟಾ ತಾ|| ಸೇಡಂ ಇವರ ತಂದೆಯವರಾದ ನಾರಾಯಣ ತಂದೆ ಅಂಬ್ರು ಪವಾರ ಇವರು 3 ವರ್ಷದ ಹಿಂದೆ ರೆಬ್ಬನಪಲ್ಲಿ ಗ್ರಾಮದಲ್ಲಿ ನಮ್ಮ ಪರಿಚಯದವರಾದ  ಶ್ರೀನಿವಾಸ ತಂದೆ ಲಕ್ಷ್ಮಾರೆಡ್ಡಿ ಇವರ ಹತ್ತಿರ ಟ್ಯಾಕ್ಟರ ನಂ ಎ.ಪಿ-07/ಟಿ.ಬಿ 8346 ಮತ್ತು 8347 ನೇದ್ದನ್ನು ಖರೀದಿಸಿದ್ದು ಟ್ಯಾಕ್ಟರ ನನ್ನ ತಂದೆಯವರ ಹೆಸರಿನ ಮೇಲೆ ಇರುತ್ತದೆ. ನಮ್ಮ ತಂದೆಯವರು ಖರೀದಿ ಮಾಡಿದ ಟ್ಯಾಕ್ಟರ ಉಸ್ತುವಾರಿಯನ್ನು ನಾನು ನೋಡಿಕೊಂಡು ಬಂದಿರುತ್ತದೆ. ನಾನು ಒಂದು ಸ್ವಂತ ಟೆಂಟ್ ಹೌಸ ಹೊಂದಿದ್ದು ಟೆಂಟ್ ಹೌಸ ಸಾಮಾನುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ನಮ್ಮ ತಂದೆಯವರು ಖರೀದಿ ಮಾಡಿದ  ಟ್ಯಾಕ್ಟರ ಅನ್ನು ಉಪಯೋಗಿಸುತ್ತಾ ಬಂದಿರುತ್ತನೆ . ಸದರಿ ಟ್ಯಾಕ್ಟರನ ಚಾಲಕನಾಗಿ ರಾಜು ತಂದೆ ರಾಮಸ್ವಾಮಿ ಸಾ|| ಕುರಕುಂಟಾ ಇವನನ್ನು ನೇಮಕ ಮಾಡಿಕೊಂಡಿದ್ದು ಒಂದು ತಿಂಗಳಲ್ಲಿಯೇ ಅವನು ಕೆಲಸ ಬಿಟ್ಟು ಹೋದ ನಂತರ ಸಂತೋಷ ತಂದೆ ಗುಂಡಪ್ಪ ಸಾ|| ಉದನೂರು ಇವನನ್ನು ನೇಮಕ ಮಾಡಿಕೊಂಡಿದ್ದು ಇವನು ದಿನಾಲು ನನ್ನ ಟೆಂಟ್ ಹೌಸಿನ ಸಾಮಾನುಗಳನ್ನು ಮನೆಯ ಮುಂದೆ ಇಳಿಸಿ ನಮ್ಮ ಮನೆಯ ಮುಂದೆ  ಟ್ಯಾಕ್ಟರ ನಿಲ್ಲಿಸಲು ಸ್ಥಳದ ಕೊರತೆ ಇದ್ದ ಕಾರಣ ನಮ್ಮ ಮನೆಯ ಹಿಂದೆ ಇರುವ ವಿಜಯಕುಮಾರ ಸೂರ್ಯವಂಶಿ ಇವರ ಮನೆಯ ಪಕ್ಕದಲ್ಲಿರುವ ಸಿ.ಸಿ ರಸ್ತೆಯ ಮೇಲೆ ನಿಲ್ಲಿಸಿ ಕೀಲಿ ಹಾಕಿ ಕೊಂಡು ಮನೆಗೆ ಬರುತ್ತಿದ್ದನು. ಹೀಗಿರುವಾಗ ದಿನಾಂಕ:- 14-04-2015 ರಂದು ರಾತ್ರಿ 8.00 ಗಂಟೆ ಸುಮಾರಿಗೆ ನನ್ನ ಟ್ಯಾಕ್ಟರನ ಚಾಲಕನಾದ ಸಂತೋಷ ತಂದೆ ಗುಂಡಪ್ಪ ಸಾ|| ಉದನೂರು ಇವರು ಟೆಂಟ್ ಹೌಸಿನ ಸಾಮಾನುಗಳನ್ನು ಮನೆಯ ಮುಂದೆ ಇಳಿಸಿ ನಮ್ಮ ಟ್ಯಾಕ್ಟರ ಅನ್ನು ಎಂದಿನಂತೆ ವಿಜಯಕುಮಾರ ಸೂರ್ಯವಂಶಿ ಇವರ ಮನೆಯ ಪಕ್ಕದಲ್ಲಿರುವ ಸಿ.ಸಿ ರಸ್ತೆಯ ಮೇಲೆ ನಿಲ್ಲಿಸಿ ಕೀಲಿ ಹಾಕಿ ಕೊಂಡು ಮನೆಗೆ ಬಂದಿದ್ದು ಮುಂಜಾನೆ 6.00 ಗಂಟೆಗೆ ಹೋಗಿ ನೋಡಲಾಗಿ ಸ್ಥಳದಲ್ಲಿ ಟ್ಯಾಕ್ಟರ ಇರಲ್ಲಿಲ್ಲ. ಆಗ ನನ್ನ ಡ್ರೈವರ ಗಾಬರಿಯಾಗಿ ನನಗೆ ಪೋನ ಮಾಡಿ ತಿಳಿಸಿದ್ದು ಆಗ ನಾನು ವಿಜಯಕುಮಾರ ಸೂರ್ಯವಂಶಿ ಇವರ ಮನೆಯ ಪಕ್ಕದಲ್ಲಿರುವ ಸಿ.ಸಿ ರಸ್ತೆಯ ಮೇಲೆ ಹೋಗಿ ನೋಡಲಾಗಿ ಸದರಿ ಸ್ಥಳದಲ್ಲಿ ನನ್ನ ಟ್ಯಾಕ್ಟರ ಇರಲ್ಲಿಲ್ಲ. ಅಂದಿನಿಂದ ಇಲ್ಲಿಯವರೆಗೆ ತಾಂಡೂರು, ಮಲ್ಕಾಪೂರ , ಕರನಕೋಟ, ಕೊಂಚಾವರಂ, ಹೈದ್ರಾಬಾದ ,ಮಹಬೂಬನಗರ, ಬೀದರ, ಚಿಂಚೋಳಿ ,ಮುಧೋಳ, ರೆಬ್ಬನಪಲ್ಲಿ , ಸೇಡಂ ,ಕಲಬುರಗಿ ,ಇತ್ಯಾದಿ ಪಟ್ಟಣಗಳನ್ನು ತಿರುಗಾಡಿ ಹುಡುಕಲಾಗಿ ನನ್ನ ಟ್ಯಾಕ್ಟರ ಸಿಕ್ಕಿರುವುದಿಲ್ಲಾ ನನ್ನ ಟ್ಯಾಕ್ಟರಿನ ಕಂಪನಿಯ ಹೆಸರು ಮಹೇಂದ್ರ 575 ಡಿ.ಐ ಇದ್ದು ಟ್ಯಾಕ್ಟರ ಇಂಜಿನಿನ ಬಣ್ಣ ಕೆಂಪು ಕಲರ ಇದ್ದು ಅದರ ಟ್ರಾಲಿ ನೀಲಿ ಮತ್ತು ಅರಿಸಿಣ  ಬಣ್ಣದ್ದು ಇದ್ದು ಅದರ ಕಿಮತ್ತು 5,00,000=00 ರೂಪಾಯಿ ಆಗುತ್ತಿದ್ದು ದ ನನ್ನ ಟ್ಯಾಕ್ಟರ ನಂ ಎ.ಪಿ-07/ಟಿ.ಬಿ 8346 ಮತ್ತು 8347 ನೇದ್ದನ್ನು ಪತ್ತೆ ಹಚ್ಚಿಕೊಡಲು ಸಾಹೇಬರಲ್ಲಿ ವಿನಂತಿ ಅದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕುರಕುಂಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 June 2015

Kalaburagi District Reported Crimes

ಅಶೋಕ ನಗರ ಪೊಲೀಸ ಠಾಣೆಯ ಅಧಿಕಾರಿ ಮತ್ತು ಸಿಬ್ಬಂಧಿ ಜನರ ಕಾರ್ಯಾಚರಣೆ ನಗರದಲ್ಲಿ 9 ಮನೆ ಕಳ್ಳತನ ಮಾಡಿದ್ದ ಇಬ್ಬರು ಮನೆ ಕಳ್ಳರ ಬಂಧನ :
ಅಶೋಕ ನಗರ ಠಾಣೆ : ಅಶೋಕ ನಗರ ಪೊಲೀಸ ಠಾಣೆ ವ್ಯಾಪ್ತಿಯ ಸಾಯಿ ಮಂದಿರ ಹಿಂದುಗಡೆ ಸಂಗಮೇಶ್ವರ ನಗರ ಲೇಔಟದಲ್ಲಿ  ದಿನಾಂಕ 28/02/2015 ರಂದು ಶ್ರೀ. ಶರಣಪ್ಪಾ ಭೋಗಶೇಟ್ಟಿ  ನಿವೃತ್ತ ಸೇನಾಧಿಕಾರಿ ರವರ ಮನೆ ಮತ್ತು ದಿನಾಂಕ 09/01/2015 ರಂದು ಶ್ರೀಮತಿ.ಜಯಶ್ರೀ ಗಂಡ ಮೊಹನ ಗಚ್ಚಿನಮನಿ ರವರ ಮ ರೆಡ್ಡಿ ರವರು ಮನೆ ಕಳ್ಳತನ ವಾಗಿದ್ದು, ಬೇಸಿಗೆಯಲ್ಲಿ ನಗರದಲ್ಲಿ ಮೇಲಿಂದ ಮೇಲೆ  ಮನೆ ಕಳ್ಳತನ ಆಗುತ್ತಿದ್ದರಿಂದ  ಶ್ರೀ. ಅಮೀತ ಸಿಂಗ ಐಪಿಎಸ್  ಎಸ್.ಪಿ ಕಲಬುರಗಿಶ್ರೀ. ಜಯಪ್ರಕಾಶ  ಅಪರ ಎಸ್.ಪಿ ಕಲಬುರಗಿಶ್ರೀ. ಎಂ.ಬಿ ನಂದಗಾವಿ ಡಿ.ಎಸ್.ಪಿ (ಎ) ಉಪ ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ  ಅಶೋಕ ನಗರ ಪೊಲೀಸ ಠಾಣೆಯ ಶ್ರೀಮತಿ. ಸುಧಾ ಆದಿ ಪಿ.ಐಸೇವುನಾಯ್ಕ ಹೆಚ್ಸಿ 250, ಗುಂಡೇರಾಯ ಹೆಚ್ಸಿ 297, ಸುರೇಶ ಪಿಸಿ 534, ಗುರುಮೂತರ್ಿ ಪಿಸಿ 269, ನಿತ್ಯಾನಂದ ಪಿಸಿ 1028, ಶಿವಪ್ಪಾ ಎಪಿಸಿ 52  ರವರನ್ನೊಳಗೊಂಡ  ತಂಡವು, ಕಲಬುರಗಿ ನಗರದಲ್ಲಿ ಮನೆ ಕಳ್ಳತನ ಮಾಡುವ  ಆರೋಪಿತರಾದ 1) ರವಿ ತಂದೆ ಶಂಕರ ಕಾಂಬ್ಳೆ  ಸಾ: ಭಾಂಡೆ ಮಾರ್ಕೆಟ ಔರಾದ(ಬಿ) ಜಿ: ಬೀದರ,  2) ಗೊಪಿ @ ಗೊಪಿಕಿಶನ ತಂದೆ ನಾಮದೇವ ಸಕಟ್ ಸಾ: ಅಲ್ಲಾ ಗಲ್ಲಿ ಬಸವಕಲ್ಯಾಣ ಜಿ: ಬೀದರ ರವರಿಗೆ ದಸ್ತಗಿರಿ ಮಾಡಿ  1)ಅಶೋಕ ನಗರ ಪೊಲೀಸ ಠಾಣೆಯ 1) ಗುನ್ನೆ ನಂ. 28/2015,  2) ಗುನ್ನೆ ನಂ. 03/2015,  3) ಗುನ್ನೆ  ನಂ.164/2014 ಕಲಂ. 457, 380 ಐಪಿಸಿ 2)ರಾಘವೆಂದ್ರ ನಗರ ಪೊಲಿಸ ಠಾಣೆಯ 1) ಗುನ್ನೆ ನಂ. 42/2015,  2) ಗುನ್ನೆ ನಂ. 61/2015  3) ಗುನ್ನೆ   ನಂ. 72/2015 ಕಲಂ. 457, 380 ಐಪಿಸಿ 3)ಸ್ಟೇಷನ ಬಜಾರ ಪೊಲೀಸ ಠಾಣೆ ಗುನ್ನೆ ನಂ. 96/2015 ಕಲಂ. 457, 380 ಐಪಿಸಿ 4)ಗ್ರಾಮೀಣ ಪೊಲೀಸ ಠಾಣೆ 1) ಗುನ್ನೆ ನಂ. 38/2015, 39/2015 ಕಲಂ. 457, 380 ಐಪಿಸಿ  ಹೀಗೆ ಒಟ್ಟು 9 ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿ ಆರೋಪಿತರು ಕಳ್ಳತನ ಮಾಡಿದ್ದ ಬಂಗಾರದ ಆಭರಣಗಳನ್ನು ಮಹಾರಾಷ್ಟ್ರ ರಾಜ್ಯದ ನಾಂದೇಡ ಜಿಲ್ಲೆ, ಉದಗೀರ ಕಡೆಗಳಲ್ಲಿ ವಿಲೆವಾರಿ ಮಾಡಿದ್ದನ್ನು  ಒಟ್ಟು 6,62,000/- ರೂಪಾಯಿ ಮೌಲ್ಯದ ಒಟ್ಟು 245 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ  ಕಲಬುರಗಿ ಹೈಕೊರ್ಟ ಆವರಣದಲ್ಲಿ ಆದ ಎರಡು ಮನೆಕಳ್ಳತನ ಪ್ರಕರಣವನ್ನು ಭೇದಿಸಲಾಗಿದೆ.
ಹಣದ ಬ್ಯಾಗ ಕಿತ್ತುಕೊಂಡು ಕೊಲೆ ಮಾಡಿ ಪರಾರಿಯಾದ ಆರೋಪಿತರ ಬಂಧನ :
ಜೇವರ್ಗಿ ಠಾಣೆ : ಶ್ರೀ ನಾಗನಗೌಡ ತಂದೆ ಶಿವಶರಣಪ್ಪಗೌಡ ಹೊಸಮನಿ ಸಾ : ಗೌಂವಾರ ರವರು ದಿನಾಂಕ 09-10-2015 ರಂದು ರಾತ್ರಿ ಸಿದ್ದಾರ್ಥ ಲಾಡ್ಜ ಹಿಂಭಾಗ ಯಾರೋ ದುಷ್ಕರ್ಮಿಗಳು ನನ್ನ ತಮ್ಮ ಸಂಗನಗೌಡ ಹೊಸಮನಿ ಇತನಿಗೆ ಗುಂಡು ಹಾರಿಸಿ ಕೊಲೆ ಮಾಡಿ ಅವನ ಹತ್ತಿರ ಇದ್ದ ಹಣದ ಬ್ಯಾಗ ಕಸಿದುಕೊಂಡು ಹೋದ ಬಗ್ಗೆ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರ ಪ್ರಕರಣದ ತನಿಖೆ ಕುರಿತು ಶ್ರೀ ಅಮಿತ್ ಸಿಂಗ ಐಪಿಎಸ್ ಪೊಲೀಸ ಅಧೀಕ್ಷಕರು ಕಲಬುರಗಿ, ಶ್ರೀ ಜಯಪ್ರಕಾಶ ಹೆಚ್ಚುವರಿ ಪೊಲೀಸ ಅಧೀಕ್ಷಕರು ಕಲಬುರಗಿ ಇವರ ಮಾರ್ಗದರ್ಶನದಲ್ಲಿ ಮತ್ತು ಶ್ರೀ ವಿಜಯ. ಪಿ. ಅಂಚಿ ಪೊಲೀಸ ಉಪಾಧೀಕ್ಷಕರು ಗ್ರಾಮಾಂತರ ಉಪ ವಿಭಾಗ ಕಲಬುರಗಿ ರವರ ನೇತ್ರತ್ವದಲ್ಲಿ ಶ್ರೀ ಎಸ್.ಎಸ್.ಹುಲ್ಲೂರ ಸಿ.ಪಿ.ಐ. ಜೇವರಗಿ ಶ್ರೀ ಪಂಡಿತ ಸಗರ ಪಿ.ಎಸ್.ಐ. ಜೇವರಗಿ, ಆನಂದರಾವ ಪಿಎಸ್ಐ ಯಡ್ರಾಮಿ, ಕಪೀಲದೇವ ಪಿ.ಎಸ್.ಐ.ನೆಲೋಗಿ ಹಾಗೂ ಸಿಬ್ಬಂದಿ ಜನರಾದ 1] ಶಶಿಕಾಂತ ಪಿ.ಸಿ. 2] ಪರಮೇಶ್ವರ ಪಿ.ಸಿ 3] ಶಿವರಾಯ ಪಿ.ಸಿ 4] ಮಲ್ಲಿಕಾರ್ಜುನ  ಪಿ.ಸಿ ಎಸ್.ಬಿ. 5] ಶ್ರೀನಾಥ ಪಿ.ಸಿ. 6] ರಘುವೀರಲಾಲ ಪಿ.ಸಿ. 7] ರವಿ ಎಪಿಸಿ ರವರು ಇವರುಗಳು ಮತ್ತು ಹುಣಸಗಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ದಸ್ತಗಿರಿ ಮಾಡಿದಂತ ಆರೋಪಿತರಾದ 1] ಮುನೀರಪಾಶಾ ಉರ್ಪ ಮುನ್ನಾ ತಂದೆ ಮಹೆಬೂಬಸಾಬ ಕಳ್ಳಿ ಸಾ: ಜೇವರಗಿ.  2) ಮಹಿಬೂಬ ತಂದೆ ಮಹಮೂದಸಾಬ್ ಖುರೇಷಿ ಸಾ: ಜೇವರಗಿ. 3) ಸದಾಶಿವ ತಂದೆ ಸಾಯಿಬಣ್ಣ  ಬಡಿಗೇರ್ ಸಾ: ಶಖಾಪೂರ ಹಾ:ವ: ಮೂಡಬೂಳ      4) ಸಿದ್ದು ತಂದೆ ಮರೆಪ್ಪ ಕಾಂಬಳೆ ಸಾ: ಮಂಗಳೂರ ತಾ: ಸಿಂದಗಿ.5) ಅಜಯಕುಮಾರ ಉರ್ಪ ಭೀಮು ಫೈಲವಾನ್ ಉರ್ಪ ಮುನ್ನಾ ಸುರೇಶ ತಂದೆ ಅಪ್ಪಾರಾವ  ತಾ: ಹುಮನಾಬಾದ  6) ವಾಚು ತಂದೆ ರಾವಜೀ ಚಿನ್ನಾ ರಾಠೋಡ ಸಾ: ಚಾಮನಾಳ ತಾಂಡಾ  ತಾ: ಸುರಪೂರ 7) ಖಾಸಿಂ ತಂದೆ ಶಹಾಬುದ್ದಿನ ಪಟೇಲ ಸಾಃ ಮಳ್ಳಿ, ಇವರಗಳನ್ನು ದಿನಾಂಕ 25-06-15 ರಂದು ಮಧ್ಯಹ್ನ ಪುನಃ ಪೊಲೀಸ ವಶಕ್ಕೆ ಪಡೆದುಕೊಂಡು ಆರೋಪಿತರನ್ನು ಕುಲಕೂಂಷವಾಗಿ ತನಿಖೆ ಮಾಡಲಾಗಿ ತನಿಖೆಯಲ್ಲಿ ಕಂಡು ಬಂದಿದ್ದೇನೆಂದರೆ ಆರೋಪಿತರೆಲ್ಲರೂ ಸೇರಿಕೊಂಡು ಆರೋಪಿತರಲ್ಲಿ ಕೆಲವರು ಮುಂಚಿತವಾಗಿನೇ ಜೇವರಗಿ ಪಟ್ಟಣದಲ್ಲಿ ಯಾವ ಯಾವ ವರ್ತಕರು ಎಷ್ಟು ಹಣ ಸಂಗ್ರಹಿಸಿ ಯಾವ ಮಾರ್ಗದ ಮುಖಾಂತರ ಹೋಗುತ್ತಾರೆ ಎಂಬುದನ್ನು ಮುಂಚಿತವಾಗಿನೇ ತಿಳಿದುಕೊಂಡು ಉಪಾಯ ಮಾಡಿ ದಿ: 9-10-14 ರಂದು ಜೇವರಗಿ ಪಟ್ಟಣದ ಸೀರಿ ಕಾಂಪ್ಲೇಕ್ಸ ಹತ್ತಿರ ಮೃತ ಸಂಗಣ್ಣಗೌಡ ಇತನು ತನ್ನ ಹಣವನ್ನು ತೆಗೆದುಕೊಂಡು ಮೋಟರಸೈಕಲ ಮೇಲೆ ಹೋಗುತ್ತಿರುವಾಗ ಹೋಗುವದನ್ನು ಆರೋಪಿತರಲ್ಲಿ ಕೆಲವು ಆರೋಪಿತರು ಮೋದಲೆ ಹೊಂಚುಹಾಕಿ ಕುಳಿತಂತ ಆರೋಫಿತರಿಗೆ ಮೋಬೈಲ್ ಮುಖಾಂತರ ತಿಳಿಸಿ ಮೃತ ಸಂಗಣ್ಣಗೌಡ ತನ್ನ ಅಂಗಡಿಯನ್ನು ಮುಚ್ಚಿ ಹಣ ಬ್ಯಾಗ ಸಮೇತ ಮೋಟರಸೈಕಲ ಮೇಲೆ ಹೋಗುತ್ತಿರುವಾಗ ಹೊಂಚು ಹಾಕಿ ಕುಳಿತಂತ ಆರೋಪಿತರು ಹಣ ಬ್ಯಾಗನ್ನು ಕಸಿದುಕೊಳ್ಳುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಮೋಟರಸೈಕಲಿಗೆ ತಮ್ಮ ಮೋಟರಸೈಕಲನ್ನು ಅಡ್ಡವಾಗಿ  ನಿಲ್ಲಿಸಿ ಪೂರ್ವ ನಿಯೋಜನೆಯಂತೆ ಮೃತ ಸಂಗಣ್ಣಗೌಡ ಇತನ ಸಂಗಡ ಜಗಳ ತೆಗೆದು ಮೋಟರಸೈಕಲ ಮೇಲಿಂದ ಕೆಳಗೆ ಇಳಿದು ಹಣ ಸಮೇತ ಇದ್ದ ಬ್ಯಾಗ ಕಿತ್ತಿಕೊಳ್ಳುತ್ತಿದ್ದಾಗ ಅವನು ಹಣದ ಬ್ಯಾಗ ಕೊಡದೆ ಇರುವದರಿಂದ ಇಬ್ಬರಿಗೂ ತೆಕ್ಕಿಕುಸ್ತಿಯಾಗಿ ಮೃತ ಸಂಗಣ್ಣಗೌಡ ಇತನು ಕಿತ್ತಿಕೊಂಡಂತ ಬ್ಯಾಗನ್ನು ಪುನಃ ಅವರ ಮೇಲೆ ಎರಗಿ ಮರಳಿ ಕಿತ್ತಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾಗ ಮೃತ ಸಂಗಣ್ಣಗೌಡನಿಗೆ ಕಂಟ್ರಿ ರಿವಲ್ವಾರನಿಂದ ಫೈಯರ ಮಾಡಿದಾಗ ಮೃತ ಸಂಗಣ್ಣಗೌಡ ಇತನು 4-5 ಹೆಜ್ಜೆ ಹೋಗಿ ಮೃತ ಪಟ್ಟಿರುತ್ತಾನೆ  ಹಣದ ಬ್ಯಾಗಿನೊಂದಿಗೆ ಮೋಟರಸೈಕಲ ಮೇಲೆ ಪರಾರಿಯಾಗಿರುತ್ತಾರೆ. ಅಂತಾ ಹೇಳಿದ್ದು ಸದರಿಯವರಿಂದ ನಗದು ಹಣ 11,850/- ರೂ   ಅಟೋ ನಂ ಕೆ.ಎ-32-8806 ಮೃತ ಸಂಗಣ್ಣಗೌಡನ ಚಲವಲನದ ಮೇಲೆ ನಿಗಾ ವಹಿಸಲು ಬಳಸಿದ ವಾಹನ ಮತ್ತು   ಮೋಟರಸೈಕಲ ನಂ ಕೆ.ಎ-28 ಎಸ್-1842 ಕೃತ್ಯವನ್ನು ಎಸಗಲು ಉಪಯೋಗಿಸಿದ  ಮೋಟರಸೈಕಲನ್ನು ವಶಪಡಿಸಿಕೊಂಡು ಸದರಿಯವರನ್ನು ನ್ಯಾಯಾಂಗ ಬಂಧನ ಕುರಿತು ಕಳುಹಿಸಿ ಕೊಡಲಾಗಿದೆ.  
ಅಪಘಾತ ಪ್ರಕರಣ :
ಆಳಂದ ಠಾಣೆ : ದಿನಾಂಕ:26/06/2015 ರಂದು ದೂರವಾಣಿ ಮೂಲಕ ಜಿರೋಳ್ಳಿ ಆಳಂದ ರೋಡಿನ ಅಜಮತ್ತುಲ್ಲಾ ಖಾದ್ರಿ ದೆವರ ಹೊಲದ ಪಕ್ಕದಲ್ಲಿ ಆಟೋ ರಿಕ್ಷಾ ಪಲ್ಟಿಯಾಗಿ ಒಬ್ಬ ಹೆಣ್ಣು ಮಗಳು ಸ್ಥಳದಲ್ಲೆ ಮೃತ ಪಟ್ಟಿದ್ದು ಇತರೆ ಗಾಯಾಳುದಾರರಿಗೆ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆ ಆಳಂದಕ್ಕೆ ಕಳುಹಿಸಿದ್ದು ಇದೆ ಅಂತಾ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ಮೃತಳಾದ ಸುರೇಖಾ ಗಂಡ ಸಂತೋಷ ರಾಠೋಡ ಸಾ: ಜಿರೋಳ್ಳಿ ತಾಂಡಾ ಇವಳ ಶವವು ಸಂಚಾರದ ಸುರಕ್ಷಾ ದೃಷ್ಟಿಯಿಂದ ಜಿಜಿಎಚ್‌ ಅಳಂದಕ್ಕೆ ಸಾಗಿಸಿ ಆಸ್ಪತ್ರೆಯಲ್ಲಿ  ಉಪಚಾರ ಪಡೆಯುತ್ತಿದ್ದ ಮೃತಳ ಗಂಡನಾದ ಸಂತೋಷ ತಂದೆ ರತನು ರಾಠೋಡ ಇವರು ನನ್ನ ಹೆಂಡತಿಯ ಬಾಣಂತನ 3 ದಿವಸಗಳ ಹಿಂದೆ ಆಗಿದ್ದು ಆಕೆಗೆ ತನ್ನ ತವರು ಮನೆಗೆ ಕರೆದುಕೊಂಡು ಹೋಗಲು ನಮ್ಮ ಅತ್ತೆ ಶಾಹುಬಾಯಿ ಗಂಡ ಸತೀಶ ಚವ್ಹಾಣ ಸಾ:ಬಲಸೂರ ತಾಂಡ ಇವಳು ನಿನ್ನೆ ನಮ್ಮ ತಾಂಡಕ್ಕೆ ಬಂದಿದ್ದು ದಿನಾಂಕ:26/06/2015 ರಂದು ಮದ್ಯಾಹ್ನ ನಮ್ಮೂರಲ್ಲಿದ ಆಟೋಚಾಲಕ ಸುರೇಶ ತಂದೆ ಸೋಮಲು ರಾಠೋಡ ಈತನ ಆಟೋ ನಂ: ಕೆ.ಎ:32 / 4963 ನೇದ್ದರಲ್ಲಿ ನಾನು ನನ್ನ ಹೆಂಡತಿ ಸುರೇಖಾ ಹಾಗೂ 3 ದಿನದ ಕೂಸು ಹೆಣ್ಣು ಮಗು ಹಾಗೂ ನಮ್ಮ ಅತ್ತೆ ಶಾಹುಬಾಯಿ ರಾಠೋಡ ಈತನು ಸದರಿ ವಾಹನ ಅತೀವೇಗದಿಂದ ಹಾಗೂ ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಓಡಿಸುವಾಗ ನಾವು ಸಾವಕಾಶವಾಗಿ ಚಲಾಯಿಸಿ ಕೊಂಡು ಹೋಗಲು ತಿಳಿಸಿದರು ಕೂಡಾ ಅತೀವೇಗದಲ್ಲಿ ಹೋಗುವಾಗ ಆಟೋರಿಕ್ಷಾದ ಮುಂದಿನ ಗಾಲಿ ಎಕ್ಸಲ್ ಸಮೇತ ಕಟ್ ಆಗಿ ಅಜಮತ್ ತುಲ್ಲಾ ಖಾದ್ರಿ ದೇವರ ಹೊಲದಲ್ಲಿ ಪಲ್ಟಿಯಾದ ಪರಿಣಾಮ ನನ್ನ ಹೆಂಡತಿಗೆ ಆಟೋ ರಿಕ್ಷಾವು ಆಕೆಯ ತಲೆಯ ಮೇಲೆ ಬಿದ್ದು ಕೆಳಗೆ ಸಿಕ್ಕಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ತುಕಾರಾಮರಾವ್ ಸರಾಫ್ ಸಾ:ಭಗವತಿನಗರ ಕಲಬುರಗಿ ದಿನಾಂಕ: 08/06/2015 ರಂದು ತಮ್ಮ ಮನೆಯ ಮುಂದೆ ನಿಲ್ಲಿಸಿದ ಹಿರೋ ಹೊಂಡಾ ಸ್ಲೆಂಡರ ಪ್ಲಸ್ ಕಪ್ಪು ಬಣ್ಣ ಕೆಎ-32 ಎಕ್ಸ- 4499 ಇಂಜನ ನಂ- MBLHA 10EYAHJ 37997 ಇದ್ದು ಇದನ್ನು ನಾನು 5 ವರ್ಷಗಳ ಹಿಂದೆ ಖರಿಧಿ ಮಾಡಿದ್ದು ನಾನು ಮಾರ್ಕೇಟಗೆ ಹೋಗಿ ಸಾಮಾನು ತೆಗೆದುಕೊಂಡು ಬಂದು ಮೋಟಾರ ಸೈಕಲ್ ನಮ್ಮ ಮನೆಯ ಮುಂದೆ ನಿಲ್ಲಿಸಿ ಸಾಮಾನುಗಳನ್ನು ಮನೆಯಲ್ಲಿ ಇಟ್ಟು ಪುನ: ಹೊರಗೆ ಬಂದಾಗ ನನ್ನ ಮೋಟಾರ ಸೈಕಲ್ ಕಾಣಲಿಲ್ಲ. ನಾನು ಗಾಬರಿಯಾಗಿ ಮುಂದೆ ಯಾರಾದರೂ ತೆಗೆದುಕೊಂಡು ಹೋಗಿ ನಿಲ್ಲಿಸಿದ್ದಾರೆಂದು ನೋಡಿದೇನು ಅಲ್ಲಿ ಕಾಣಲಿಲ್ಲ. ಆದರೂ ಕೂಡಾ ಜೇವರ್ಗಿ ಕ್ರಾಸ, ಎಮ್.ಎಸ.ಕೆ.ಮೀಲ್, ರಾಮಮಂದಿರರವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಕೂಡಾ ಕಳವುವಾದ ನನ್ನ ಮೋಟಾರ ಸೈಕಲ್ ಸಿಕ್ಕಿರುವುದಿಲ್ಲ ಕಾರಣ ಮಾನ್ಯರಾದ ತಾವು ನನ್ನ ಕಳೆದ ಹೋದ ಮೋಟಾರ ಸೈಕಲ್ ಕೆಎ-32 ಎಕ್ಸ- 4499 ಹುಡುಕಿಕೊಡಬೇಕಾಗಿ ತಮ್ಮಲ್ಲಿ ವಿನಂತಿ.ಅಂದಾಜು ಕಿಮ್ಮತು ಅಕಿ- 25,000/- ಕಳೆದು ಹೋಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

26 June 2015

Kalaburagi District Reported Crimes

ದರೋಡೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ಚೌಕ ಠಾಣೆ : ದಿನಾಂಕ 22.06.2015 ರಂದು ರಾತ್ರಿ ವೇಳೆಯಲ್ಲಿ ನಡೆದ ಕೊಲೆ ಕೇಸಿನ ಆರೋಪಿ ಪತ್ತೆ ಮಾಡುವ ಕುರಿತು ಶ್ರೀ ಉಮಾಶಂಕರ.ಬಿ ಪಿ.ಐ ಚೌಕ ಪೋಲೀಸ ಠಾಣೆ ಕಲಬುರಗಿ ರವರು ಹಾಗು ಠಾಣೆಯ ಸಿಬ್ಬಂದಿ ಮೋಸಿನ್‌‌ ಪಿಸಿ 811, ಮತ್ತು ವಾಹನ ಚಾಲಕ ಶರೀಫ ರವರೊಂದಿಗೆ ಚೌಕ ಪೊಲೀಸ ಠಾಣಾ ಹದ್ದಿಯಲ್ಲಿ ಸರಕಾರಿ ಜಿಪ್ ನಂ ಕೆಎ 32 ಜಿ 639 ನೇದ್ದರಲ್ಲಿ ದಿನಾಂಕ 25.06.2015 ರಂದು ರಾತ್ರಿ ವೇಳೆಯಲ್ಲಿ ವಿಶೇಷ ಪೆಟ್ರೋಲಿಂಗ್ ಮಾಡುತ್ತಿರುವಾಗ ಬೆಳಗಿನ ಜಾವ 1-30 ಗಂಟೆಗೆ ಖಚಿತ ಬಾತ್ಮಿ ಬಂದಿದ್ದೆನೆಂದರೆ ಠಾಣಾ ವ್ಯಾಪ್ತಿಯಲ್ಲಿ ಹುಮನಾಬಾದ ರಿಂಗ ಲಾರಿ ತಂಗುದಾಣದ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ರಿಂಗ ರೋಡಿಗೆ ಕೆಲವು 5-6 ಜನರು ದರೋಡೆ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಅಡಗಿ ಕುಳಿತ ಬಗ್ಗೆ ಖಚಿತ ಮಾಹಿತಿ ಸಿಕ್ಕ ಮೇರೆಗೆ ಸಿಬ್ಬಂದಿಯವರೊಂದಿಗೆ ಹುಮನಾಬಾದ ರಿಂಗ ರೋಡ ಲಾರಿ ತಂಗುದಾಣದ ಪಕ್ಕದಲ್ಲಿ ಹೋಗಿ ಠಾಣೆಯ ಹಸೇನ ಬಾಷಾ ಪಿ.ಎಸ್.ಐ (ಕಾ.ಸು) ಹಾಗು ಮತ್ತು ಬೀಟ ಕರ್ತವ್ಯದ ಸಿಬ್ಬಂದಿಯವರಾದ ಶಿವಶರಣಪ್ಪ ಎ.ಎಸ್.ಐ, ಪ್ರಕಾಶ ಪಿಸಿ 1132, ಅಸ್ಲಂಬಾಷಾ ಪಿಸಿ 434, ರವರಿಗೆ  ಮತ್ತು ಮಾಹಾಂತೇಶ ಪಿಸಿ 716, ಬಂದೇನವಾಜ ಪಿಸಿ 429, ಕರಣಸಿಂಗ ಪಿಸಿ 422 ಇವರಿಗೆ ಸದರಿ ವಿಷಯ ಫೊನ ಮುಖಾಂತರ ಮಾಹಿತಿ ನೀಡಿದ್ದು ಅವರು ತಮ್ಮ ದ್ವಿಚಕ್ರಗಳ ವಾಹನಗಳ ಮೇಲೆ ಹುಮನಾಬಾದ ರಿಂಗ ರೋಡ ಲಾರಿ ತಂಗುದಾಣದ ಪಕ್ಕದಲ್ಲಿ ಬಂದಿದ್ದು ನಂತರ ಎಲ್ಲರೂ ಕೂಡಿಕೊಂಡು ಬಾತ್ಮಿ ಬಂದ ಸ್ಥಳಕ್ಕೆ ಬೆಳಗಿನ ಜಾವ ರಿಂಗ ರೊಡ ಹತ್ತಿರ ಹೊಗಿ ಜಾಡು ಹಿಡಿದು ನೋಡಲು ಹುಮನಾಬಾದ ರಿಂಗ ರೋಡ ಪಕ್ಕದಲ್ಲಿರುವ ಲಾರಿ ತಂಗುದಾಣದ ತಗ್ಗಿನಲ್ಲಿ ದರೋಡೆಖೊರರು ಗುಜುಗುಜು ಮಾತಾಡುವ ಶಬ್ದ ಕೆಳಿಸಿತು ಆಗ ನಾವೆಲ್ಲರು ಬರುವದನ್ನು ಗಮನಿಸಿ ಓಡರೋ ಓಡರೋ ಭಾಗೋ ಭಾಗೋ ಅನ್ನುತ್ತಾ ಒಂದೇ ಸವನೆ ಓಡ ತೊಡಗಿದರು. ಕೂಡಲೆ ನಾವೆಲ್ಲರು ಬೆನ್ನಟಿ ಒಟ್ಟು 4 ಜನರಿಗೆ ಹಿಡಿದುಕೊಂಡಿದ್ದು, ಒಬ್ಬನು ಕತ್ತಲಲ್ಲಿ ಮುಳ್ಳು ಕಟ್ಟೆಯಲ್ಲಿ ಓಡಿಹೋಗಿ ತಪ್ಪಿಸಿಕೊಂಡಿದ್ದು ಸದರಿ 4 ಜನರನ್ನು ರಿಂಗ ರೋಡಿನ  ಮೇಲೆ ಕರೆದುಕೊಂಡು ಬಂದು ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ, ಒಬ್ಬನು ತನ್ನ ಹೆಸರು 1) ಸಲ್ಲೀಂ ತಂದೆ ಮಹ್ಮದ ಸಲಾಂ ಸಾಃ ಹನುಮಾನ ಗುಡಿ ಹತ್ತಿ ಲಾಲಗಿರಿ ಕ್ರಾಸ್‌ ಕಲಬುರಗಿ 2) ಸಿದ್ದು @ ರೇವಣಸಿದ್ದಪ್ಪ ತಂದೆ ರವಿಕುಮಾರ ಶೆಳ್ಳಗಿ ಸಾಃ ದುಬೈ ಕಾಲೋನಿ ಕಲಬುರಗಿ  3) ರವಿ @ ರವಿಚಂದ್ರ  ತಂದೆ ವಿರೇಶ ವಿಶ್ವಕರ್ಮ ಸಾಃ ಲೋಹರ ಗಲ್ಲಿ ಮಹಾದೇವ ನಗರ ಕಲಬುರಗಿ  4) ಪ್ರಲ್ಹಾದ ತಂದೆ ಅಂಬಾದಾಸ ಗಾಯಕವಾಡ ಸಾಃ ಮರಗಮ್ಮ ಗುಡಿ ಹತ್ತಿರ ಕಲಬುರಗಿ ಈ 4 ಜನರಿಗೆ ಓಡಿ ಹೋದವನ ಬಗ್ಗೆ ಹೆಸರು ವಿಳಾಸ ವಿಚಾರಿಸಲಾಗಿ ಅವನ ಹೆಸರು 5) ಈಶ್ವರ ತಂದೆ ಶಿವಶರಣಪ್ಪ ಮುಡಬಿ ಸಾ: ಸಂಜೀವ ನಗರ ಅಂತಾ ತಿಳಿಸಿದರು.           ನಂತರ ಸದರಿಯವರ ಅಂಗ ಶೋದನೆಯನ್ನು ಮಾಡಲಾಗಿ ಒಂದು ತಲವಾರಗಳು ಮಚ್ಚು ಮತ್ತು ಲಾಂಗಲಳು ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಣ್ಣದ ಬಟ್ಟೆ ಕಾಗದದಲ್ಲಿ ಕಟ್ಟಿದ ಖಾರದ ಎರಡು ಪುಡಿಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ 25-06-2015 ರಂದು ಕರಜಗಿ ಗ್ರಾಮದಲ್ಲಿ ಕರಜಗಿ ಗ್ರಾಮದ ಜಗನ್ನಾಥ ತಂದೆ ಹಣಮಂತ ಲೋಣಾರ ಮತ್ತು ಅವನ ತಂಗಿ ಮಾಹಾದೇವಿ ತಂದೆ ಹಣಮಂತ ಲೋಣಾರ ಇವರು ದಿನಾಲು ಬೆಳಗಿನ ಜಾವದಲ್ಲಿ ಮತ್ತು ಇನ್ನಿತರ ಸಮಯದಲ್ಲಿ ಜಗನ್ನಾಥ ಈತನು ಬಸವೇಶ್ವರ ಚೌಕ ಹತ್ತಿರ ಮತ್ತು ಮಾಹಾದೇವಿ ಇವಳು ತನ್ನ ಮನೆಯ ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ, ಅವರನ್ನು ನಂಬಿಸಿ ಜನರನ್ನು ವಂಚಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿರುತ್ತಾರೆ. ಈಗ ಮಟಕಾ ಬರೆದುಕೊಳ್ಳುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕರಜಗಿ ಗ್ರಾಮಕ್ಕೆ ಹೋಗಿ, ಕರಜಗಿ ಗ್ರಾಮದ ಬಸವೇಶ್ವರ ಸರ್ಕಲದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ, ನಿವು ನನ್ನನ್ನು ನಂಬಿರಿ ಇದು ನಿಮ್ಮ ದೈವ ಲಿಲೆ ಧನ ಲಕ್ಷ್ಮೀ ನಿಮ್ಮ ಮನೆಯ ಬಾಗಿಲಿಗೆ ಬಂದು ನಿಂತಿದ್ದಾಳೆ, ಬನ್ನಿ ಹಣ ಕೊಟ್ಟು ನಿಮ್ಮ ಅದೃಷ್ಟದ ನಂಬರನ್ನು ಬರೆಸಿ ನಾನು ನಿಮಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಜನರನ್ನು ವಂಚಿಸುತ್ತಾ ಕೈಯಲ್ಲಿ ಹಣ ಹಿಡಿದುಕೊಂಡು, ಜನರಿಂದ ಹಣ ಪಡೆಯುತ್ತಾ ಅಂಕಿ ಸಂಖ್ಯೆ ಬರೆದುಕೊಟ್ಟು ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಜಗನ್ನಾಥ ತಂದೆ ಹಣಮಂತ ಲೋಣಾರ  ಸಾ: ಕರಜಗಿ ಅಂತಾ ತಿಳಿಸಿದನು, ಸದರಿ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿ, ಸದರಿಯವನ ಸ್ವ ಖುಷಿ ಹೇಳಿಕೆ ಪಡೆದುಕೊಂಡಿದ್ದು, ಸದರಿ ವ್ಯಕ್ತಿ ನಾನು ಸುಮಾರು ದಿನಗಳಿಂದ ಮಟಕಾ ಬರೆದುಕೊಳ್ಳುತ್ತೆನೆ,  ಹಾಗೂ ನನ್ನ ತಂಗಿ ಮಾಹಾದೇವಿ ಇವಳು ನಮ್ಮ ಮನೆಯ ಮುಂದೆಯೆ ಕುಳಿತುಕೊಂಡು, ಹೊಲಕ್ಕೆ ಹೋಗಿ ಬರುವ ಜನರಿಗೆ ಮತ್ತು ನಮ್ಮ ಮನೆಯ ಹತ್ತಿರ ತಿರುಗಾಡುವ ಜನರನ್ನು ಕರೆದು ಅವಳು ಸಹ ಜನರನ್ನು ನಂಬಿಸಿ ಜನರಿಂದ ಹಣ ಪಡೆದು, ಜನರನ್ನು ವಂಚಿಸಿ ಮೊಸದಿಂದ ಮಟಕಾ ಬರೆದುಕೊಳ್ಳುತ್ತಾಳೆ, ನಾನು ಜನರು ಬರೆಸಿದ ಮಟಕಾ ಹಣದಲ್ಲಿ 1,00,000/- ರೂ (ಒಂದು ಲಕ್ಷ ರೂಪಾಯಿ) ಹಣವನ್ನು ನಮ್ಮ ಮನೆಯಲ್ಲಿ ಮುಚ್ಚಿ ಇಟ್ಟಿರುತ್ತೆನೆ. ಹಾಗೂ ನಾನು ಮತ್ತು ನನ್ನ ತಂಗಿ ಮಾಹಾದೇವಿ ಇಬ್ಬರು ಬರೆದುಕೊಂಡ ಮಟಕಾ ಹಣವನ್ನು ಮತ್ತು ಮಟಕಾ ನಂಬರಗಳನ್ನು ಗಿರಿಮಲ್ಲಪ್ಪ ಗಂಗೊಂಡ ಸಾ: ನಾಗಣಸೂರ ತಾ: ಅಕ್ಕಲಕೋಟ ಈತನು ನಮ್ಮ ಊರಿಗೆ ಬಂದು ತಗೆದುಕೊಂಡು ಹೋಗುತ್ತಾನೆ, ನಾವು ಮಟಕಾವನ್ನು ಗಿರಿಮಲ್ಲಪ್ಪನಿಗೆ ಕೊಡುತ್ತೆವೆ ಅಂತಾ ತಿಳಿಸಿದನು ಮತ್ತು ನಾನು ಈಗಾಗಲೆ ಜನರಿಂದ ಹಣ ಪಡೆದು ಮಟಕಾ ಬರೆದುಕೊಂಡ ಹಣದಲ್ಲಿ 1,00,000/- ಹಣವನ್ನು ಮನೆಯಲ್ಲಿಟ್ಟಿದ್ದು, ತಾವುಗಳು ನನ್ನ ಜೋತೆಗೆ ಬಂದಲ್ಲಿ ಸದರಿ 1,00,000/- ರೂ (ಒಂದು ಲಕ್ಷ ರೂಪಾಯಿ) ಹಣವನ್ನು ತೋರಿಸಿ ಹಾಜರುಪಡಿಸುತ್ತೆನೆ ಅಂತಾ ತನ್ನ ಸ್ವ ಖುಷಿ ಹೇಳಿಕೆ ನೀಡಿದನು. ನಂತರ ಸದರಿ ಜಗನ್ನಾಥ ಈತನನ್ನು ದಸ್ತಗಿರಿ ಮಾಡಿ, ಸದರಿಯವನನ್ನು ಚೆಕ್ ಮಾಡಲಾಗಿ ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ, ನಗದು ಹಣ  36,100/- ರೂ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ನೋಟ್ ಬುಕ್ ಮತ್ತು ಒಂದು ಪೆನ್ನ ಹಾಗೂ ಒಂದು ಮೋಬೈಲ ಪೋನ್ ಅಕಿ- 1000/- ರೂ ದೊರೆತವು, ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡೆನು. ನಂತರ ಸದರಿ ಆರೋಪಿತನು ತನ್ನ ಸ್ವ ಖುಷಿ ಹೇಳಿಕೆಯಲ್ಲಿ ತಿಳಿಸಿದಂತೆ ಮಟಕಾ ಜೂಜಾಟಕ್ಕೆ ಸಂಭಂದಪಟ್ಟ ಮನೆಯಲ್ಲಿಟ್ಟ 1,00,000/- ರೂ (ಒಂದು ಲಕ್ಷ ರೂಪಾಯಿ) ಹಣವನ್ನು ಹಾಜರು ಪಡಿಸುತ್ತೆನೆ ಅಂತಾ ತಿಳಿಸಿದ ಮೇರೆಗೆ, ಸದರಿ ಆರೋಪಿತನನ್ನು ಸದರಿ ಹಣವನ್ನು ಹಾಜರುಪಡಿಸಲು ತಿಳಿಸಿದ ಮೇರೆಗೆ, ಸದರಿ ಆರೋಪಿತನು ನನ್ನ ಜೋತೆಗೆ ಬನ್ನಿ ಅಂತಾ ಹೇಳಿ ಬಸವೇಶ್ವರ ಸರ್ಕಲದಿಂದ ನಮ್ಮನ್ನು ಕರೆದುಕೊಂಡು ನಮ್ಮ ಮುಂದೆ ಮುಂದೆ ಹೊರಟನು, ನಾವೆಲ್ಲರು ಅವನ ಹಿಂದಿನಿಂದ ಹೊರಟೇವು. ಸದರಿ ಆರೋಪಿತನಾದ ಜಗನ್ನಾಥ ಈತನು ಸ್ವಲ್ಪ ದೂರು ಕರೆದುಕೊಂಡು ಹೋಗಿ ದೂರಿನಿಂದ ಮುಂದೆ ಕಾಣುತ್ತಿರುವುದೆ ನಮ್ಮ ಮನೆ, ನಮ್ಮ ಮನೆಯ ಮುಂದೆ ಬೋರವೇಲ್ ಹತ್ತಿರ ಕುಳಿತಕೊಂಡು ಮಟಕಾ ಬರೆದುಕೊಳ್ಳುತ್ತಿದ್ದವಳೆ ನಮ್ಮ ತಂಗಿ ಮಾಹಾದೇವಿ ಇರುತ್ತಾಳೆ ಅಂತಾ ತಿಳಿಸಿದನು. ಆಗ ನಾವೆಲ್ಲರು ಸದರಿ ಮಹಿಳೆಯನ್ನು ನೋಡಲಾಗಿ, ಸದರಿ ಮಹಿಳಿಯೆ ಬೊರವೇಲ್ ಹತ್ತಿರ ಕುಳಿತುಕೊಂಡು ಹೋಗಿ ಬರುವ ಜನರಿಗೆ ಮತ್ತು ಹೊಲಗಳಿಗೆ ಹೋಗುವ ಜನರಿಗೆ ಕರೆದು, ಜನರನ್ನು ವಂಚಿಸುತ್ತಾ ಜನರಿಂದ ಹಣ ಪಡೆಯುತ್ತಾ ಅಂಕಿ ಸಂಖ್ಯೆ ಬರೆದುಕೊಟ್ಟು ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದಳು. ಸದರಿ ಮಹಿಳೆಯ ಮೇಲೆ ದಾಳಿ ಮಾಡಿ ಹಿಡಿದು ಸದರಿಯವಳ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮಾಹಾದೇವಿ ತಂದೆ ಹಣಮಂತ ಲೋಣಾರ  ಸಾ: ಕರಜಗಿ ಅಂತಾ ತಿಳಿಸಿದಳು. ಸದರಿ ಮಹಿಳೆಯನ್ನು ವಿಚಾರಣೆಗೊಳಪಡಿಸಿ, ಸದರಿಯವಳ ಸ್ವ ಖುಷಿ ಹೇಳಿಕೆ ಪಡೆದುಕೊಂಡಿದ್ದು, ಸದರಿಯವಳು ನಾನು ಸುಮಾರು ದಿನಗಳಿಂದ ಮಟಕಾ ಬರೆದುಕೊಳ್ಳುತ್ತೆನೆ, ನಾನು ದಿನಾಲು ನಮ್ಮ ಮನೆಯ ಮುಂದೆ ಕುಳಿತುಕೊಂಡು, ಹೊಲಕ್ಕೆ ಹೋಗಿ ಬರುವ ಜನರಿಗೆ ಮತ್ತು ನಮ್ಮ ಮನೆಯ ಮುಂದೆ ತಿರುಗಾಡುವ ಜನರಿಗೆ ಕರೆದು ನಂಬಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು ಮಟಕಾ ಬರೆದುಕೊಳ್ಳುತ್ತೆನೆ, ಹಾಗೂ ನನ್ನ ಅಣ್ಣ ಜಗನ್ನಾಥ ಈತನು ನಮ್ಮ ಊರಿನಲ್ಲಿ ಜನಸಂದಣಿ ಏರಿಯಾಗಳಲ್ಲಿ ತಿರುಗಾಡಿ ಹಾಗೂ ನಿಂತುಕೊಂಡು ಅವನು ಸಹ ಜನರನ್ನು ನಂಬಿಸಿ ಜನರಿಂದ ಹಣ ಪಡೆದು, ಜನರನ್ನು ವಂಚಿಸಿ ಮೊಸದಿಂದ ಮಟಕಾ ಬರೆದುಕೊಳ್ಳುತ್ತಾನೆ, ನಾನು ಜನರು ಬರೆಸಿದ ಮಟಕಾ ಹಣದಲ್ಲಿ 50,000/- ರೂ (ಐವತ್ತು ಸಾವಿರ ರೂಪಾಯಿ) ಹಣವನ್ನು ನಮ್ಮ ಮನೆಯಲ್ಲಿ ಮುಚ್ಚಿ ಇಟ್ಟಿರುತ್ತೆನೆ ಅಂತಾ ತಿಳಿಸಿದಳು. ಮತ್ತು ನಾನು ಈಗಾಗಲೆ ಜನರಿಂದ ಹಣ ಪಡೆದು ಮಟಕಾ ಬರೆದುಕೊಂಡ ಹಣದಲ್ಲಿ 50,000/- ಹಣವನ್ನು ಮನೆಯಲ್ಲಿಟ್ಟಿದ್ದು, ತಾವುಗಳು ನನ್ನ ಜೋತೆಗೆ ನಮ್ಮ ಮನೆಯಲ್ಲಿ ಬಂದಲ್ಲಿ ಸದರಿ 50,000/- ರೂ (ಐವತ್ತು ಸಾವಿರ ರೂಪಾಯಿ) ಹಣವನ್ನು ತೋರಿಸಿ ಹಾಜರುಪಡಿಸುತ್ತೆನೆ ಅಂತಾ ತನ್ನ ಸ್ವ ಖುಷಿ ಹೇಳಿಕೆ ನೀಡಿದಳು. ನಂತರ ಸದರಿಯವಳನ್ನು ದಸ್ತಗಿರಿ ಮಾಡಿ, ಮ.ಹೆಚ್.ಸಿ ರವರಿಂದ ಚೆಕ್ ಮಾಡಿಸಲಾಗಿ ಸದರಿಯವಳ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ, 6360/- ರೂ ನಗದು ಹಣ ಮತ್ತು ಒಂದು ಪೆನ್ನ ಹಾಗೂ ಒಂದು ಮಟಕಾ ಚೀಟಿ ದೋರೆತವು. ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು,  ಸದರಿ ಆರೋಪಿತಳನ್ನು ವಶಕ್ಕೆ ಪಡೆದುಕೊಂಡೆವು. ಸದರಿ ಆರೋಪಿತರಿಂದ 1) ಒಟ್ಟು 1,92,460/- ರೂ (ಒಂದು ಲಕ್ಷ ತೊಂಬತ್ತೇರಡು ಸಾವಿರದ ನಾಲ್ಕು ನೂರಾ ಅರವತ್ತು ರೂಪಾಯಿ) ಗಳನ್ನು 2) 1 ಅಂಕಿ ಸಂಖ್ಯೆ ಬರೆದ ಮಟಕಾ ನೋಟ ಬುಕ್, 3) ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ 4) ಒಂದು ಕಾರಬನ್ ಕೆ9 ಕಂಪನಿಯ ಮೋಬೈಲ ಪೋನ್ ಅಕಿ-1000/- ರೂ 5) 2 ಪೆನ್ನಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜಾತಿ ನಿಂದನೆ ಪ್ರಕರಣ :
ಚಿತ್ತಾಪೂರ ಠಾಣೆ : ದಿನಾಂಕ 25-06-2015 ರಂದು ಸಾಯಾಂಕಾಲ ಶ್ರೀನಿವಾಸ ಬಾರ ಹತ್ತಿರ ಅಣ್ಣಪ್ಪ ಗುತ್ತೆದಾರ ಇವನು  ನಿಂತಿದ್ದನ್ನು ನೋಡಿ ಶ್ರೀ ಕುಮಾರ ತಂದೆ ದೇವುಜಿ ಚವ್ಹಾನ ಸಾ : ಮೊಗಲಾ ತಾಂಡಾ ತಾ : ಚಿತ್ತಾಪೂರ ರವರು ತನಗೆ ಕೊಡಬೇಕಾದ 1000/- ರೂ ಸಾಲದ ಹಣವನ್ನು ಕೇಳಲು ತನ್ನ ಅಣ್ಣನೊಂದಿಗೆ ಹೋದಾಗ ಸದರಿ ಅಣ್ಣಪ್ಪನು ನಿಮ್ಮ ಯಾವ ಸಾಲ ಕೊಡುವುದಿದೆ   ಲಮಾಣಿ ಭೋಸಡಿ ಮಕ್ಕಳೆ ಅಂತ ಜಾತಿ ಎತ್ತಿ ಅವಾಚ್ಯವಾಗಿ ಬೈದು ತನ್ನ ಕೈಯಲ್ಲಿದ್ದ ಬ್ಲೇಡನಿಂದ ಕುತ್ತಿಗೆಯ ಎಡಬಾಗಕ್ಕೆ ಹೊಡೆದು ಭಾರಿ ರಕ್ತಗಾಯ ಮಾಡಿರುತ್ತಾನೆ. ಕೊಲೆ ಮಾಡುವ ಉದ್ದೇಶದಿಂದ ಬ್ಲೇಡನಿಂದ ಹೊಡೆದಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿತ್ತಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವು ಕಚ್ಚಿ ಮೃತಪಟ್ಟ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 25.06.2015 ರಂದು ಮದ್ಯಾನ 1.00  ಗಂಟೆಯ ಸುಮಾರಿಗೆ ಮದರಿ ಸೀಮಾಂತರ ನಮ್ಮ ಹೊಲದಲ್ಲಿ ನನ್ನ ಗಂಡ ಮಲ್ಲಪ್ಪ ಗಡೆದಾರ ಕಸ ತೆಗಯುತ್ತಿದ್ದಾಗ ಕಸ ಗುಂಪಿಯಲ್ಲಿನ ವಿಷಪೂರಿತ ಹಾವು ಆಕಸ್ಮಿಕವಾಗಿ ಅವನ ಬಲಕೈ ಕಿರುಬೆರಳಿಗೆ ಕಚ್ಚಿದ್ದು ಉಪಚಾರ ಕುರಿತು  ಸರಕಾರಿ ಆಸ್ಪತ್ರೆ ಜೇವರಗಿಗೆ ತೆಗದುಕೊಂಡು ಹೊಗುವಾಗ ಮಾರ್ಗ ಮದ್ಯದಲ್ಲಿ ಮದ್ಯಾಹ್ನ ಹಾವು ಕಚ್ಚಿದ ವಿಷದ ಬಾದೆಯಿಂದ ಮೃತಪಟ್ಟಿರುತ್ತಾನೆ ಘಟನೆ ಆಕಸ್ಮಿಕವಾಗಿ ಆಗಿರುತ್ತದೆ  ಅಂತಾ ಶ್ರೀಮತಿ ಭಾಗಮ್ಮ ಗಂಡ ಮಲ್ಲಪ್ಪ ಗಡೆದಾರ ಸಾಃ ಮದರಿ ತಾಃ ಜೇವರಗಿ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ