POLICE BHAVAN KALABURAGI

POLICE BHAVAN KALABURAGI

09 August 2014

Gulbarga District Reported Crimes

ದರೋಡೆ ಸುಲಿಗೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ಬ್ರಹ್ಮಪೂರ ಠಾಣೆ : ದಿನಾಂಕ 09-08-14 ಬೆಳಗಿನ ಜಾವ 2-00 ಗಂಟೆಗೆ ಠಾಣಾ ವ್ಯಾಪ್ತಿಯಲ್ಲಿ ಬರುವ ವಿರೇಶ ನಗರ  ಕ್ರಾಸ್ ಹತ್ತಿರ ಇರುವ ಜಾಲಿ ಕಂಟಿಯ ಮರೆಯಲ್ಲಿ ಕೆಲವು ಜನರು ದರೋಡೆ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಅಡಗಿ ಕುಳಿತ ಬಗ್ಗೆ  ಬಾತ್ಮಿ ಬಂದ ಮೇರೆಗೆ ಶ್ರೀ ಎಮ್.ಬಿ.ಬಿರಾದಾರ ಪಿ.ಎಸ್.ಐ (ಅ.ವಿ) ಬ್ರಹ್ಮಪೂರ ಠಾಣೆ ಮತ್ತು  ಸಿಬ್ಬಂದಿಯವರೊಂದಿಗೆ ಹಾಗು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೊಗಿ ಜಾಡು ಹಿಡಿದು ನೋಡಲು  ವಿರೇಶ ನಗರದ ಕಡೆಗೆ ಹೋಗುವ ರೋಡಿನ ಎಡಗಡೆ ಜಾಲಿ ಕಂಟಿಗಳಲ್ಲಿ ದರೋಡೆ ಕೋರರು ಗುಜು ಗುಜು ಮಾತಾಡುವ ಶಬ್ದ ಕೆಳಿಸಿತು ಆಗ ನಾವೆಲ್ಲರೂ ಬರುವದನ್ನು ಗಮನಿಸಿ ಓಡಿರೋ ಓಡಿರೋ ಅನ್ನುತ್ತಾ ಒಂದೇ ಸವನೆ ಓಡ ತೊಡಗಿದರು. ಕೂಡಲೆ ನಾವೆಲ್ಲರು ಬೆನ್ನಟಿ  ಒಟ್ಟು 6 ಜನರಿಗೆ ಹಿಡಿದು ಕೊಂಡಿದ್ದು ಅವರ ಹೆಸರು 1. ಮುಸ್ತಾಖ ಶಫೀ @ ಭೋಲಾ ತಂದೆ ಅಲಿಂ ಮೀಯಾ  ಸಾ|| ರಹಿಮತ ನಗರ ಗುಲಬರ್ಗಾ 2. ಸೈಯದ ಸದಾಂ ತಂದೆ ಬಾಬುಮಿಯಾ ಸಾ|| ಎಮ್.ಎಸ್.ಕೆ ಮೀಲ ಗುಲಬರ್ಗಾ 3. ಸಾಗರ @ ಸಾಗರ್ಯಾ ತಂದೆ ವಕೀಲ @ ನಾರಾಯಣ ಕಾಂಬಳೆ   ಸಾ|| ಬಾಪು ನಗರ ಗುಲಬರ್ಗಾ 4. ಚಿರಂಜೀವಿ ತಂದೆ ಸುಗಾರಾಮ ಪಾಟೀಲ ಸಾ|| ಬಾಪು ನಗರ ಗುಲಬರ್ಗಾ 5.  ದೇವು @ ದೇವ್ಯಾ ತಂದೆ ಪನ್ನಾ ಸಕಟ ಸಾ|| ಬಾಪು ನಗರ ಗುಲಬರ್ಗಾ  6. ಅಜರ್ುನ ತಂದೆ ವಿಜಯ ಕಾಂಬಳೆ ಸಾ|| ಬಾಪು ನಗರ ಗುಲಬರ್ಗಾ ಅಂತಾ ತಿಳಿಸಿದ್ದು  ಸದರಿಯವರ ವಶದಲ್ಲಿದ್ದ ನಗದು ಹಣ ಒಟ್ಟು 5618/- ರೂಪಾಯಿ ಹಾಗು  ದರೊಡೆ ಮತ್ತು ಸುಲಿಗೆ ಕೃತ್ಯಕ್ಕೆ ಉಪಯೋಗಿಸಲು ತಂದಿದ್ದ 2 ಮೋಟಾರು ಸೈಕಲಗಳಾದ 1] ಒಂದು ಸಿ.ಟಿ 100 ಮೋಟಾರ ಸೈಕಲ್ ನಂ. ಕೆಎ-32.ಕ್ಯೂ-9876 ಕಪ್ಪು ಬಣ್ಣದು ಅ||ಕಿ|| 35.000/- 2) ಹಿರೋಹೊಂಡಾ ಸ್ಪ್ಲೆಂಡರ್  ಮೋಟಾರ ಸೈಕಲ್ ನಂಬರ ಕೆಎ-32. ಎಲ್-1199 ಕಪ್ಪು ಬಣ್ಣದು ಅ|| ಕಿ|| 35.000/-  ಮತ್ತು ಕೃತ್ಯಕ್ಕೆ ಬಳಸಲು ತಂದಿದ್ದ ಖಾರದ ಪುಡಿ ಪಾಕೀಟಗಳು, ಮುಖಕ್ಕೆ ಕಟ್ಟಿಕೊಳ್ಳುವ ಬಟ್ಟೆ ಹಾಗು ಹಗ್ಗಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಬ್ರಹ್ಮಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :

ಮಹಿಳಾ ಠಾಣೆ : ಶ್ರೀ ಸುರೇಶ ತಂದೆ ಲಾಲುಸಿಂಗ್ ಪವಾರ ಸಾ; ಮಹಾರಾಜ ಹೋಟಲ ಎದುರುಗಡೆ ಐವಾನ್-ಶಾಹಿ ರೋಡ ಗುಲಬರ್ಗಾ ರವರ  ಅಕ್ಕ ಅನುಷಾ ಮತ್ತು ಭಾವ ರಾಜು ಇವರಿಬ್ಬರೂ ಮೃತಪಟ್ಟಿದ್ದರಿಂದ ಅವರ ಮಕ್ಕಳಾದ ಸಪ್ನಾ ಮತ್ತು ರಾಹುಲ ಇವರು ಸುಮಾರು 5 ವರ್ಷಗಳಿಂದ ನಮ್ಮಲ್ಲಿಯೇ ಇರುತ್ತಾರೆ. ಸಪ್ನಾ ಇವಳೂ ದಿನಾಂಕ 7.08.2014 ರಂದು ಮನೆಯ ಮುಂದೆ ಆಡುತ್ತಿದ್ದಳು. ಸುಮಾರು 4 ಗಂಟೆಯ ಸುಮಾರಿಗೆ ನಾನು ಹೊರಗಡೆ ಬಂದು ನೋಡಲಾಗಿ ಸಪ್ನಾ ಇವಳು ಕಾಣಲಿಲ್ಲ. ಅಲ್ಲಿಂದ ಇಲ್ಲಿಯವರೆಗೆ ನಾನು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವದಿಲ್ಲ. ಕಾರಣ ಕಾಣೆಯಾದ ಸಪ್ನಾ ಇವಳಿಗೆ ಪತ್ತೆ ಮಾಡಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಥಾವರು ತಂದೆ ಪಾಂಡು ಪವಾರ ಸಾ; ಚೋಕ್ಲಾ ನಾಯಕ ತಾಂಡ ರಾಜನಾಳ ಗ್ರಾಮ  ರವರು ದಿನಾಂಕ 07-08-2014 ರಂದು 8 ಗಂಟೆಗೆ ಸುಮಾರಿಗೆ ಶ್ರಾವಾಣ ಮಾಸವಿದ್ದ ಸಂಭಂದ ಜೋಕ್ಲಾ ನಾಯ್ಕ ತಾಂಡದ ಹುನುಮಾನ ದೇವರ ಗುಡಿಯಲ್ಲಿ ಪಿರ್ಯಾದಿ ಮತ್ತು ಆರೋಪಿತರು ಹಾಗೂ ತಾಂಡದ ಇತರರು ಕೂಡಿಕೊಂಡು ಭಜನೆ ಮಾಡಿ ರಾತ್ರಿ 10 ಗಂಟೆಗೆ ಸಮಯ ಬಹಳ ಆಗಿದ್ದರಿಂದ ಪಿರ್ಯಾದಿ ಹುಮನಾನ ದೇವರಿಗೆ ಟೆಂಗು ಒಡೆದು ಆರತಿ ಮಾಡಿ ಭಜನೆಯನ್ನು ಮುಗಿಸಿದ್ದರಿಂದ ಇದೆ ವಿಷಯದಲ್ಲಿ ದೇವಿದಾಸ ಸಂಡಗ 3 ಜನರು ಎಲ್ಲರೂ ಸಾ; ಜೋಕ್ಲಾ ನಾಯಕ ತಾಂಡ ರಾಜನಾಳ ಗ್ರಾಮ ಇವರು ಅವಾಚ್ಯ ಶಭ್ದಗಳಿಂದ ಬೈದ್ದು, ಪ್ರಚೋದನೆ ಯಿಂದ ಕಲ್ಲಿನಿಂದ ಮತ್ತು ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿ ಗುಪ್ತಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀವ ಬೆದರಿಕೆ ಹಾಕಿದ ಪ್ರಕಣ :
ನಿಂಬರ್ಗಾ ಠಾಣೆ : ಶ್ರೀ ಶಾಂತಮಲ್ಲಪ್ಪ ಹೆಚ್.ಸಿ 434 ನಿಂಬರ್ಗಾ ಪೊಲೀಸ ಠಾಣೆರವರು ದಿನಾಂಕ  01-08-2014 ರಂದು 15-30 ಗಂಟೆಗೆ ತನ್ನ ಮೊಬೈಲ ನಂ. 9449693699 ನೇದ್ದಕ್ಕೆ ಮೋಬೈಲ ನಂ. 9902496551 ನೇದ್ದರಿಂದ ಯಾವುನೊ ಒಬ್ಬ ವ್ಯಕ್ತಿಯು ಜೀವ ಬೆದರಿಕೆ ಕರೆ ಮಾಡಿರುತ್ತಾನೆ ಕಾರಣ ಮಾನ್ಯರವರು ಸದರಿ ಮೋಬೈಲ ನಂಬರದಿಂದ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಶಿವಪ್ಪ ತಂದೆ ಶರಣಪ್ಪ ದೇವಣಿ  ಸಾ : ಮೈಸಲಗಿ ತಾ: ಬಸವಕಲ್ಯಾಣ ಜಿ : ಬೀದರ ರವರು ಬೆಳಗ್ಗಿನ ಜಾವ 2.00 ,ಎಮ್,ದ ಸೂಮಾರಿಗೆ ನನ್ನ ಲಾರಿ ಚಾಲಕ ಕಿಶನ ಇತನು ಪೋನ ಮಾಡಿ ತಿಳಿಸಿದ್ದೇನಂದರೆ ಮದ್ಯ ರಾತ್ರಿ 1.00 ಗಂಟೆಯ ಸೂಮಾರಿಗೆ ತಾನು ಸದರ ಲಾರಿ ಚಲಾಯಿಸಿಕೊಂಡು ಗುಲಬರ್ಗಾ ಕಡೆಗೆ ಹೋಗುತ್ತಿದ್ದಾಗ ಕುರಿಕೋಟ ಗ್ರಾಮದ ಸಮೀಪ ರೋಡಿನ ಎಡಗಡೆ ತೆಗ್ಗಿನಲ್ಲಿ ಲಾರಿ ಅಪಘಾತವಾಗಿರುತ್ತದೆ ಇದರಿಂದ ತನಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ ಅಂತಾ ತಿಳಿಸಿದನು ದಿನಾಂಕ 08-08-2014  ರಂದು ಬೆಳಗ್ಗೆ 11.00 ಗಂಟೆಗೆ ನಾನು ಸ್ಥಳದಲ್ಲಿ ಬಂದು ನೋಡಲಾಗಿ ಹಕೀಕತ ನಿಜಾಇದ್ದು ಲಾರಿ ನೋಡಲಾಗಿ ಲಾರಿ ಬಲಮಗ್ಗಲಾಗಿ ಬಿದ್ದಿದ್ದು ಮುಂದಿನ ಗ್ಲಾಸ ಒಡೆದು ಹೋಗಿದ್ದು ಸೈಡ ಬಾಡಿ ಜಖಂ ಗೊಂಡಿದ್ದು ಕ್ಯಾಬೀನ , ಲಾರಿಯ ಚೆಸ್ಸಿ , ಬೆಂಡ್ ಹಾಗೂ ಹೌಸಿಂಗ ಇತ್ಯಾದಿಗಳು ಜಖಂ ಗೊಂಡಿರುತ್ತವೆ  ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾಗಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.