POLICE BHAVAN KALABURAGI

POLICE BHAVAN KALABURAGI

30 July 2012

GULBARGA DIST REPORTED CRIME


ಗುಲಬರ್ಗಾ ಜಿಲ್ಲಾ ಪೊಲೀಸರ ಯಶಸ್ವಿ ಕಾರ್ಯಚರಣೆ
ಹಿರಿಯ ಪತ್ರಕರ್ತ, ಹಾಗೂ ಸಾಹಿತಿ ಲಿಂಗಣ್ಣ ಸತ್ಯಂಪೇಟ ಕೊಲೆ ಪ್ರಕರಣ ಬೇಧಿಸಿ ಆರೋಪಿಗಳ ಬಂದನ .
ಮಾನ್ಯ ಐಜಿಪಿ ಈಶಾನ್ಯ ವಲಯ ಶ್ರೀ ಮಹಮ್ಮದ ವಜೀರ ಅಹ್ಮದ ಐಪಿಎಸ್ ಹಾಗೂ ಎಸ್.ಪಿ ಗುಲಬರ್ಗಾ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್, ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಎಸ್.ಪಿ ಗುಲಬರ್ಗಾರವರ ಮಾರ್ಗದರ್ಶನದಲ್ಲಿ  ತನಿಖಾ ತಂಡದ ಅಧಿಕಾರಿಗಳಾದ ಶ್ರೀ ಭೂಷಣ ಭೋರಸೆ ಎ.ಎಸ್.ಪಿ, (ಎ) ಉಪ-ವಿಭಾಗ, ಶ್ರೀ ಚಂದ್ರಶೇಖರ ಬಿಪಿ ಸಿಪಿಐ ಎಮ್.ಬಿ ನಗರ, ಸಿಪಿಐಗಳಾದ ಶ್ರೀ ಶರಣಬಸವೇಶ್ವರ, ವಿಶ್ವನಾಥ ಕುಲಕರ್ಣಿ, ಪಿಐಗಳಾದ ಜೆ.ಹೆಚ್ ಇನಾಮದಾರ, ಬಸೀರ ಪಟೇಲ, ಅಸ್ಲಾಮ ಬಾಷ, ಪಿ.ಎಸ್.ಐ ಗಳಾದ ಶ್ರೀ ರಾಜಶೇಖರ ಹಳಿಗೋದಿ, ಶಾಂತಿನಾಥ ಬಿ.ಪಿ, ಪಂಡಿತ ಸಗರ, ಬಸವರಾಜ ತೇಲಿ, ಸಂತೋಷಕುಮಾರ, ಹಾಗೂ ಸಿಬ್ಬಂದಿ ಜನರಾದ ಬಸವರಾಜ ಎ.ಎಸ್.ಐ, ಶಂಕರಲಿಂಗ, ತುಕಾರಾಮ, ಸುಭಾಷ, ಕಾಳಪ್ಪ, ದೇವಿಂದ್ರ, ಅರ್ಜುನ, ಅಶೋಕ ಹಳಗೋದಿ, ಮಶಾಕ, ಪ್ರಭಾಕರ, ಶಿವಪ್ರಕಾಶ, ರಪಿಕ, ರಾಮು ಪವಾರ, ಗಂಗಯ್ಯ, ಚನ್ನವೀರೇಶ, ಅಶೋಕ ಗಣಕಯಂತ್ರ ವಿಭಾಗ, ಅಣ್ಣಪ್ಪ, ಬಸವರಾಜ ಪಾಟೀಲ, ಶಿವಶರಣಪ್ಪ, ಶರಣಬಸಪ್ಪ, ರಾಜಕುಮಾರ ರವರು ದಿನಾಂಕ:29-07-2012 ರ ರಾತ್ರಿ ಗುಲಬರ್ಗಾ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಹತ್ತಿರ ಖಚಿತ ಮಾಹಿತಿಯಂತೆ ಹಠಾತ್ ದಾಳಿ ಮಾಡಿ ಹಿರಿಯ ಪತ್ರಕರ್ತ ಲಿಂಗಣ್ಣ ಸತ್ಯಂಪೇಟ್ ಕೊಲೆ ಪ್ರಕರಣದ ಆರೋಪಿತರಾದ ದಯಾನಂದ ತಂದೆ ಬೀರಪ್ಪಾ ಪೂಜಾರಿ ವಃ38  ವರ್ಷ ಜಾಃ ಕುರುಬ ಉಃ ಜೈ ಜವಾನ ಸೆಕ್ಯೂರಿಟಿ ಗಾರ್ಡ ಎಜೇನ್ಸಿ ಗುಲಬರ್ಗಾ, ಸಾ|| ಸಮತಾ ಕಾಲೋನಿ ಬ್ರಹ್ಮಪುರ ಗುಲಬರ್ಗಾ, ಶಾಮರಾವ @ ಶಾಮ ತಂದೆ ಶರಣಪ್ಪ ಪೂಜಾರಿ ವಃ38 ವರ್ಷ ಜಾಃ ಕುರುಬ ಉಃ ಜೈ ಜವಾನ ಸೆಕ್ಯೂರಿಟಿ ಗಾರ್ಡ ಎಜೇನ್ಸಿ ಗುಲಬರ್ಗಾ ಸಾ|| ಕನಕ ನಗರ ಬ್ರಹ್ಮಪುರ ಗುಲಬರ್ಗಾರವರನ್ನು ದಸ್ತಗಿರಿ ಮಾಡಿ ತನಿಖೆಗೆ ಒಳ ಪಡಿಸಿ ತನಿಖೆ ಕಾಲಕ್ಕೆ ಆರೋಪಿತರ ತಾಬಾದಿಂದ ಮೃತ ಲಿಂಗಣ್ಣ ರವರ ಸುಲಿಗೆಗೊಳಗಾದ ಮೊಬಾಯಿಲ್ ಪೊನ್, ನಗದು ಹಣ, ಬಸ್ ಪಾಸ್, ಹ್ಯಾಂಡಬ್ಯಾಗ, ಶಾಲು, ಪುಸ್ತಕ, ಬಸವ ಮಾರ್ಗ ಪತ್ರಿಕೆ ವಗೈರೆ ವಸ್ತುಗಳನ್ನು ಆರೋಪಿತರ ತಾಬಾದಿಂದ ವಶ ಪಡಿಸಿಕೊಂಡಿದ್ದು, ಹಿರಿಯ ಪತ್ರಕರ್ತ ಮೃತ ಲಿಂಗಣ್ಣ ಸತ್ಯಂಪೇಟ್ ರವರ ಶವವನ್ನು ಸಾಕ್ಷಿ ಪುರಾವೆ ನಾಶ ಪಡಿಸುವ ಉದ್ದೇಶದಿಂದ ಮೃತ ದೇಹದ ಮೇಲಿನ  ಧೋತಿ ಮತ್ತು ಶರ್ಟಗಳನ್ನು ತೆಗೆದು ದೇವಸ್ಥಾನದ ಆವರಣದ ಎದುರಿನ ತೆಂಗಿನ ಕಾಯಿ ಮಾರಾಟ ಮಾಡುವ  ಅಂಗಡಿಯ ಕೆಳಗಿನ ಒಳ ಚರಂಡಿಯಲ್ಲಿ ಬಿಸಾಕಿದ ಬಗ್ಗೆ ತಿಳಿಸಿರುತ್ತಾರೆ. ಸದರಿ ಲಿಂಗಣ್ಣ ಸತ್ಯಂಪೇಟ ರವರು ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ನಿಮಿತ್ಯ ಪ್ರವಚನ ನಡೆಯುವ ಕಾರ್ಯಕ್ರಮಕ್ಕೆ ಅಹ್ವಾನಿತರಾಗಿ ಬಂದಿದ್ದರು. ಐದು ಬೇರೆ ಬೇರೆ ತಂಡದ ವಿಶೇಷ ತನಿಖಾಧಿಕಾರಿಗಳು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ತನಿಖೆ ಮಾಡಿ ವಿಶ್ಲೇಷಣೆಗೆ ಒಳ ಪಡಿಸಿ ರಾಜ್ಯದ ಗಮನ ಸೆಳದ ಸತ್ಯಂಪೇಟ್ ರವರ ಕೊಲೆ ಪ್ರಕರಣವನ್ನು ಅತ್ಯಂತ ಶೀಘ್ರವಾಗಿ ಚಾಕಚಕ್ಯತೆಯಿಂದ ಬೇಧಿಸಿ ಸತ್ಯಂಪೇಟ್ ರವರ ನಿಗೂಢ ಸಾವಿನ ಪ್ರಕರಣವನ್ನು ಬೇಧಿಸಿರುತ್ತಾರೆ. ಬಂದಿತ ಎರಡು ಜನ ಆರೊಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದ್ದು.  
ಸದರಿ ಆರೋಪಿತರಾದ ದಯಾನಂದ ಹಾಗೂ ಶಾಮರಾವ ರವರನ್ನು ಪುನಃ ಪೊಲೀಸ ಕಷ್ಟಡಿಗೆ ಪಡೆದು ತನಿಖೆಗೆ ಒಳಪಡಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ವಿಶೇಷ ತನಿಖಾ ತಂಡಕ್ಕೆ ಐಜಿಪಿ ಈಶಾನ್ಯ ವಲಯ ಗುಲಬರ್ಗಾ ಶ್ರೀ ಮಹಮ್ಮದ ವಜೀರ ಅಹ್ಮದ ಐಪಿಎಸ್ ಹಾಗೂ ಎಸ್.ಪಿ ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ್ ರವರು ಕುತೂಹಲ ಕೆರಳಿಸಿದ ಕೊಲೆ ಪ್ರಕರಣವನ್ನು ಬೇಧಿಸಿದ ತಂಡವನ್ನು ಶ್ಲಾಘಿಸಿ 25,000/- ರೂಪಾಯಿಗಳ ನಗದು  ಬಹುಮಾನವನ್ನು ಘೋಷಿಸಿರುತ್ತಾರೆ.   
ವಿಶೇಷ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿ ಜನರು ಲಿಂಗಣ್ಣ ಸತ್ಯಂಪೇಟ ರವರ ಕೊಲೆ ಪ್ರಕರಣದ ಇಬ್ಬರೂ ಆರೋಪಿತರನ್ನು ಹಾಗೂ ಸುಲಿಗೆಗೆ ಒಳಗಾದ ಲಿಂಗಣ್ಣ ಸತ್ಯಂ ಪೇಟ ರವರ ಮೊಬಾಯಿಲ್ ಪೊನ್, ನಗದು ಹಣ, ಹ್ಯಾಂಡ ಬ್ಯಾಗ, ಶಾಲು, ಅವರಿಂದ ರಚಿತವಾದ ಕೃತಿಗಳು, ಬಸವ ಮಾರ್ಗ ಪತ್ರಿಕೆಯ ಚಂದಾ ರಸೀದಿ ಪುಸ್ತಕ, ಬಸ್ ಪಾಸ ವಗೈರೆ ವಸ್ತುಗಳನ್ನು ಜಪ್ತು ಪಡಿಸಿಕೊಂಡು ತನಿಖೆ ಮುಂದುವರೆಯಿಸಿರುತ್ತಾರೆ. 

GULBARGA DIST REPORTED CRIMES

ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ : ದಿನಾಂಕ 29-07-12 ರಂದು ಸಾಯಂಕಾಲ 5-15  ಗಂಟೆ ಸುಮಾರಿಗೆ  ರಾಜು ತಂದೆ ಬಸವರಾಜ ಎಕಶೇಟ್ಟಿ, ಸಂತೋಷ ಕುಮಾರ ತಂದೆ ವಿಜಯಕಜುಮಾರ ಪರೀಟ್, ವೀರೇಶ ತಂದೆ ಗುಂಡಪ್ಪಾ ಮಾಶೇಟ್ಟಿ, ಗಿರೀಶ ತಂದೆ ದತ್ತಾತ್ರಯ ನಂದಲೇ, ಬಸವರಾಜ ತಂದೆ ಮಾಣಿಕರಾವ, ಮತ್ತು ಅಬ್ದುಲ ರಜಾಕ ತಂದೆ ಗೋರಬೈ ಸಾ||  ಎಲ್ಲರೂ ಗುಲಬರ್ಗಾ ರವರು ಡಬರಾಬಾದ ಈದ್ಗಾ ಹತ್ತಿರುವ ಒಂದು ಬೇವಿನ ಗಿಡದ ಕೆಳಗಡೆ ಅಂದರ ಬಾಹರ ಇಸ್ಪೇಟ ಜೂಜಾಟ ಆಡುತ್ತಿರುವಾಗ ಮಾನ್ಯ ಡಿ.ಎಸ್.ಪಿ. ಗ್ರಾಮಾಂತರ್ರ  ರವರ ಮಾರ್ಗದರ್ಶನ ಮೇರೆಗೆ ಮತ್ತು ಸಿಪಿಐ ಗ್ರಾಮೀಣ ವೃತ್ತ  ಗುಲಬರ್ಗಾ ರವರ ನೇತೃತ್ವದಲ್ಲಿ ದಾಳಿ ಮಾಡಿ ಅವರಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ, ಇಸ್ಪೇಟ ಎಲೆಗಳು ಜಪ್ತ ಮಾಡಿಕೊಂಡಿದ್ದರಿಂದ ಸರಕಾರಿ ತರ್ಪೆಯಾಗಿ ಶ್ರೀ ಆನಂದರಾವ ಎಸ್.ಎನ್.   ಪಿಎಸ್ಐ ಗ್ರಾಮೀಣ ಪೊಲೀಸ ಠಾಣೆರವರು  ಠಾಣೆ ಗುನ್ನೆ ನಂ: 247/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  

ಚರಂಡಿಯಲ್ಲಿ ಬಿದ್ದು ಒಂದು ಮಗು ಸಾವು:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಸಂತೋಷ ತಂದೆ ದತ್ತಪ್ಪಾ ಅಪಗೊಂಡಿ ಹಟಗಾರ್ ಸಾ|| ಮರಗಮ್ಮನ ಗುಡಿಯ ಹತ್ತಿರ ಇಂದಿರಾನಗರ ಗುಲಬರ್ಗಾರವರು ನನಗೆ ನನಗೆ ಎರಡು ಜನ ಮಕ್ಕಳಿದ್ದು ಪೂಜಾ 5 ವರ್ಷ ಎರಡನೆಯವನು ಅಭೀಷೆಕ 3 ವರ್ಷ 6 ತಿಂಗಳು ದಿನಾಂಕ.29-07-2012 ರಂದು ಬೆಳಿಗ್ಗೆ 10.00 ಗಂಟೆಗೆ ದಿನ ನಿತ್ಯದಂತೆ ನಾನು ಕೂಲಿ ಕೆಲಸಕ್ಕೆ ಹೋಗಿದ್ದು, ಮದ್ಯಾಹ್ನ 1.30 ಗಂಟೆಗೆ ನನ್ನ ತಾಯಿ ಬಂಗಾರೆಮ್ಮ ಇವಳು ನನಗೆ ಪೋನ್ ಮಾಡಿ ನನಗೆ ತಿಳಿಸಿದ್ದೆನಂದರೆ, ನಿನ್ನ ಮಗ ಅಭೀಷೆಕ ಈತನು ನಮ್ಮ ಮನೆಯ ಮುಂದಿರುವ ಚರಂಡಿಯಲ್ಲಿ ಬಿದ್ದಿದ್ದು ಅವನನ್ನು ಮೇಲೆ ಎತ್ತಿದ್ದೆವೆ ಅವನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವದಿದೆ ಬೇಗ ಬಾ ಅಂತಾ ತಿಳಿಸಿದ್ದರಿಂದ ನಾನು ಬಂದು ನನ್ನ ತಾಯಿಯನ್ನು ವಿಚಾರಿಸಲಾಗಿ ಅಭಿಷೆಕ ಈತನು ಆಟ ಆಡಲು ಹೋಗಿ ನಮ್ಮ ಮನೆಯ ಮುಂದೆ ಇರುವ ಚರಂಡಿಯಲ್ಲಿ ಬಿದ್ದಿದ್ದು ನಾವು ಎಲ್ಲಾ ಕಡೆ ಹುಡುಕಾಡಿದ್ದು ಎಲ್ಲಿ ಸಿಗದ ಕಾರಣ ವಾಪಸ್ಸು ಮನೆಗೆ ಬರುವಾಗ ನಮ್ಮ ಮನೆಯ ಮುಂದೆ ಇರುವ ಚರಂಡಿಯಲ್ಲಿ ಅಭಿಷೆಕ ಈತನು ಬಿದ್ದಿದ್ದು ನೋಡಿ ನಾನು ಮತ್ತು ನಮ್ಮ ಒಣಿಯವರು ಚರಂಡಿಯಲ್ಲಿ ಬಿದ್ದಿರುವ ಅಭಿಷೆಕನನ್ನು ಮೇಲೆ ಎತ್ತಿರುತ್ತೇವೆ. ಉಪಚಾರಕ್ಕಾಗಿ ಆಸ್ಪತ್ರೆಗೆ ಹೋಗೊಣ ಅಂತಾ ತಿಳಿಸಿದ್ದರಿಂದ  ಡಾ|| ಸೂರ್ಯಕಾಂತ ಪಾವಲೆ ಮಕ್ಕಳ ತಜ್ಞರು ಇನರ ಆಸ್ಪತ್ರೆಗೆ ತಗೆದುಕೊಂಡು ಹೋಗಿ ತೊರಿಸಿದ್ದು ಅಲ್ಲಿಯ ವೈದ್ಯರು ನನ್ನ ಮಗನನ್ನು ಪರಿಕ್ಷಿಸಿ ಸದರಿ ಹುಡುಗನು ಮೃತಪಟ್ಟಿರುತ್ತಾನೆ  ಅಂತಾ ತಿಳಿಸಿದರು. ಕಾರಣ ನಮ್ಮ ಒಣಿಯ ಮುಂದಿರುವ ಚರಂಡಿಯು ತೆರೆದ ಚರಂಡಿಯಾಗಿದ್ದು ಎರಡು ಮೂರು ತಿಂಗಳ ಹಿಂದೆ ಮಹಾನಗರ ಪಾಲಿಕೆಯವರು ಚರಂಡಿಯಲ್ಲಿರುವ ಹೂಳ ತೆಗೆಯುವ ಕೆಲಸ ಕೈಗೊಂಡಿದ್ದು, ಸದರಿ ಮಹಾ ನಗರ ಪಾಲಿಕೆ ಅಧಿಕಾರಿಗಳಿಗೆ ಓಣಿಯ ಪ್ರಮುಖರಾದ ಶಾಂತಪ್ಪ. ಹಡಪದ ಮತ್ತು ಶಿವಶರಣಪ್ಪ.ಸಜ್ಜನಶೆಟ್ಟಿ ರವರು ಹಲವಾರು ಬಾರಿ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಅಲ್ಲಲ್ಲಿ ಎರಡರಿಂದ ಮೂರು ಅಡಿ ನೀರು ನಿಲ್ಲುತ್ತಿದ್ದು ಅದು ಮಕ್ಕಳ ಪ್ರಾಣಕ್ಕೆ  ಅಪಾಯ ಇದೆ ಕೆಲಸ ಸರಿಯಾಗಿ ನಿರ್ವಹಿಸುವಂತೆ ವಿನಂತಿಸಿಕೊಂಡಿದ್ದರು  ಸಹ ಮಹಾನಗರ ಪಾಲಿಕೆಯ ಅಧಿಕಾರಿಗಳು ಕೆಲಸ ಮಾಡದೇ ನಿರ್ಲಕ್ಷ್ಯತನ ಮತ್ತು ಬೇಜವಬ್ದಾರಿ ತೋರಿಸಿದರಿಂದ ನನ್ನ ಮಗನು ಚರಂಡಿಯಲ್ಲಿ ಬಿದ್ದು ಮೃತಪಟ್ಟಿರುತ್ತಾನೆ ಕಾರಣ ನನ್ನ ಮಗನ ಸಾವಿಗೆ ಕಾರಣರಾದ ಮಹಾನಗರ ಪಾಲಿಕೆಯ ಆಯುಕ್ತರಾದ 1) ಶ್ರೀ.ಸಿ.ನಾಗಯ್ಯ 2) ವಿಜಯಕುಮಾರ್ ಎಕ್ಸೂಕೂಟಿವ ಇಂಜಿನಿಯರ್  3). ಮಹ್ಮದ್ ಶಮಶೊದ್ದಿನ್ ವಲಯ ನಂಬರ್ 01 ಆಯುಕ್ತರು, 4). ಬಸವರಾಜ.ಪಾಟೀಲ್ ಸೆನೆಟರಿ ಇನ್ಸಪೆಕ್ಟರ್ ಹಾಗೂ ಗೋಪಾಲ್ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:103/2012 ಕಲಂ 149, 304(ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.