POLICE BHAVAN KALABURAGI

POLICE BHAVAN KALABURAGI

10 August 2017

Kalaburagi District Reported Crimes

ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ  : ಶ್ರೀ ಸಂಪತ ಕುಮಾರ ತಂದೆ ಪ್ರಕಾಶ ಸಾ|| ಹನುಮಾನ ಗುಡಿಯ ಹತ್ತಿರ ಗಂಗಾನಗರ ಕಲಬುರಗಿ ಇವರ ಮನೆಯ ಬಲಕ್ಕೆ ಮಾಣಿಕ ಮತ್ತು ಎಡಕ್ಕೆ ರೇವಣಸಿದ್ದ ಇವರ ಮನೆಯಿದ್ದು ಮಾಣಿಕ ಇವರು ಎಮ್ಮೆಗಳನ್ನು ಸಾಕಿರುತ್ತಾರೆ. ಎಮ್ಮೆಗಳು ಮೂತ್ರ ವಿಸರ್ಜನೆ ಮಾಡಿದಾಗ ಅವು ನಮ್ಮ ಅಂಗಡಿ ಮುಂದಿನಿಂದ ಹರಿದು ರೇವಣಸಿದ್ದ ಇವರ ಮನೆಯ ಮುಂದೆ ರಸ್ತೆಯ ಮೇಲೆ ಹರಿದು ಹೋಗಿ ನಾಲೆಗೆ ಸೇರುತ್ತವೆ. ಈಗ ಸುಮಾರು 8-10 ದಿನಗಳ ಹಿಂದೆ ರೇವಣಸಿದ್ದ ಈತನು ತಮ್ಮ ಮನೆಯ ಮುಂದೆ ಮೂತ್ರ ಹರಿದು ಬರದ ಹಾಗೆ ಒಡ್ಡಿಹಾಕಿದ್ದು ಆಗ ಮಳೆ ಬಂದಾಗ ನಮ್ಮ ಕಾಕಾ ಹರಿದು ಹೋಗಲೆಂದು ಒಡ್ಡಿಯನ್ನು ತಗೆದಾಗ ನಮ್ಮೊಂದಿಗೆ ಬಾಯಿ ಮಾತಿನ ತಕರಾರನ್ನು ರೇವಣಸಿದ್ದನು ಮಾಡಿಕೊಂಡು ನಮ್ಮ ಮಗ ಬರಲಿ ನಿಮಗೆ ನೋಡಿಕೊಳ್ಳುತ್ತೇವೆ ಅಂತಾ ಹೇಳಿದ್ದು  ದಿನಾಂಕ:08/08/17 ರಂದು ರಾತ್ರಿ ನಾನು ಮತ್ತು ನಮ್ಮ ಕಾಕಾ ಮಹೇಶ ಅಂಗಡಿ ಬಂದ ಮಾಡಿ ನಾನು ಗಾಡಿಗಳನ್ನು ಮನೆ ಒಳಗೆ ಹಚ್ಚುತ್ತಿದ್ದಾಗ ರೇವಣಸಿದ್ದ ಮತ್ತು ಅವನ ಸುರೇಶ ಇಬ್ಬರೂ ಕೂಡಿ ಬಂದು ಸುರೇಶನು ನನಗೆ ರಂಡಿ ಮಗನೆ ನಮ್ಮ ತಂದೆಗೆ ನಾನು ಇಲ್ಲದಾಗ ಜಗಳ ತೆಗೆದು ಬೈಯುತ್ತಿರಿ ಅಂತಾ ಬೈದು ಅಲ್ಲೇ ಬಿದ್ದಿದ್ದ ಒಂದು ಗಾಜಿನ ಬಾಟಲಿಯಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ರೇವಣಸಿದ್ದನು ಸೂಳೆಮಗಂದು ಬಹಳ ಆಗ್ಯಾದ ಅಂತಾ ಬೈದು ಕೈಯಿಂದ ಕಣ್ಣಿನ ಮೇಲೆ ಹೊಡೆದಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ  ವ್ಯೆಕತ್ತಿಯ ಬಂಧನ  :
ಶಾಹಾಬಾದ ನಗರ ಠಾಣೆ : ದಿನಾಂಕ: 09/08/2017 ರಂದು ಬೆಳಗಿನ ಜಾವ ಶ್ರೀ ಎಸ್ ಅಸ್ಲಾಂ ಭಾಷ ಪಿ ಐ ಶಹಾಬಾದ ರವರು  ಮತ್ತು ಸಿಬ್ಬಂದಿಯೊಂದಿಗೆ ವಿಶೇಷ ಗಸ್ತು  ಮಾಡುತ್ತಾ ಲಕ್ಷ್ಮಿ ಗಂಜದಲ್ಲಿರುವ  ಇಂಗಿನ ಶೇಟ್ಟಿ ಇವರ ಆಡತ ಅಂಗಡಿಯ ಕಡೆಗೆ ಹೋದಾಗ ಅರವಿಂದ ತಂದೆ ತಾರಾಸಿಂಗ ಪವಾರ ಸಾ: ರಾರಪೈಲ ತಾಂಡಾ ಕಲಬುರಗಿ ಇತನು ಕತ್ತಲಲ್ಲಿ ಮರೆಯಾಗಿ ನಿಂತಿದ್ದು ನಮ್ಮ ನೋಡಿ ಓಡಿ ಹೋಗಲು ಪ್ರಯತ್ನಿಸಿದ್ದಾಗ ಅವನಿಗೆ ಹಿಡಿದು ವಿಚಾರಿಸಲು ತನ್ನ ಹೆಸರು ವಿಧ ವಿಧವಾಗಿ ತಿಳಿಸಿದನು ಮತ್ತು ಅವನಿಗೆ ಅಂಗ ಶೋಧನೆ ಮಾಡಲು ಅವನ ಹತ್ತಿರ ಒಂದು ಕಬ್ಬಿಣದ ರಾಡ ಸಿಕ್ಕಿದ್ದು . ಸದರಿಯವರನು ರಾತ್ರಿ ವೇಳೆಯಲ್ಲಿ ರಾಡು ಹಿಡಿದುಕೊಂಡು ಯಾವುದಾರು ಸ್ವತ್ತಿನ ಅಪರಾಧ ಮಾಡುವ ಉದ್ದೇಶ ರಾಡು ಇಟ್ಟುಕೊಂಡು ತಿರುಗಾಡುತ್ತಿದ್ದು ಅವನಿಗೆ ಹೀಗೆ ಬಿಟ್ಟಲ್ಲಿ ಸ್ವತ್ತಿನ ಅಪರಾಧ ಮಾಡುವ ಸಂಭವ ಕಂಡು ಬಂದಿರುವುದರಿಂದ ಸದರಿಯವನಿಗೆ ಹಿಡಿದುಕೊಂಡು  ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಂಗ್ರಹಿಸಿದ ಮರಳು ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ:09.08.2017 ರಂದು ಹೋನಗುಂಟಾ ಸೀಮಾಂತರದ ವಿವಿದ ಸರ್ವೆ ನಂಬರ್ ಜಮೀನುಗಳಲ್ಲಿ ಆಕ್ರಮವಾಗಿ ಕಾಗಿಣಾ ನದಿಯಿಂದ ಮರಳು ಹೊರತೆಗೆದು ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿ ಇಟ್ಟಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿಐ ಶಹಾಬಾದ ಮತ್ತು ಸಿಬ್ಬಂದಿಯವರು ಹಾಗೂ ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಜನರು ಮತ್ತು ಪಿಡಬ್ಲೂಡಿ ಅಧಿಕಾರಿಗಳೊಂದಿಗೆ ಹೊನಗುಂಟಾ ಸೀಮಾಂತರದ ಸರ್ವೆ ನಂ.164/06 134 ಹಾಗೂ ಸರಿಕಾರಿ ಗಾಯರಾಣ ಸರ್ವೆ ನಂ.141 ಹೀಗೆ ವಿವಿದ ಸರ್ವೆ ನಂಬರಗಳಲ್ಲಿ  ಮರಳು ದಾಸ್ತಾನು ಮಾಡಿದ್ದು ನೋಡಿ ಖಚಿತ ಪಡಿಸಿಕೊಂಡು ಪಂಚರೊಂದಿಗೆ ಜಪ್ತಿ ಪಂಚನಾಮೆ ಕೈಕೊಂಡು ಪಿಡಬ್ಲೂಡಿ ಅಧಿಕಾರಿಯಿಂದ ಅಳತೆ ಮಾಡಿಸಲಾಗಿ  ಒಟ್ಟು 39 ಕ್ಯೂಬಿಕ್ ಮೀಟರ್ ಅಂ.ಕಿ 27300/- ನೇದ್ದು ಮರಳು ಜಪ್ತಿ ಪಡಿಸಿಕೊಂಡು ಭೂಮಾಲಿಕರು ಆಕ್ರಮ ಮರಳು ದಾಸ್ತಾನು ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ 4.30 ಪಿಎಂ ಕ್ಕೆ ಶ್ರೀ ಮಲ್ಲಿಕಾರ್ಜುನ ಶಿವಪೂರ ಉಪ ತಹಸೀಲ್ದಾರರು ನಾಡ ಕಾರ್ಯಲಯ ಶಹಾಬಾದ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರವಾಹನ ಕಳವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ದಸ್ತಗಿರಿ ತಂದೆ ಬುರಾನಸಾಬ ಸಾ:ಮರತೂರ ರವರು ತನ್ನ ದಿನ ನಿತ್ಯದ ಕೆಲಸಕ್ಕಾಗಿ ನನ್ನ ಹೆಸರಿನಲ್ಲಿರುವ ಹೀರೊ ಹೊಂಡಾ ಮೊ ಸೈ ನಂ ಕೆಎ 37 ಕ್ಯೂ 2100 ನ್ನದ್ದು  ನಡೆಸಿಕೊಂಡು ಹೆಂಡತಿ ಮಕ್ಕಳೊಂದಿಗೆ ಇರುತ್ತೇನೆ. ಹೀಗಿದ್ದು ಇಂದು ದಿನಾಂಕ 09/08/2017  ಬೆಳಗ್ಗೆ  10.30 ಕ್ಕೆ ನನ್ನ ಮೋ ಸೈ ತೆಗೆದುಕೊಂಡು ನಮ್ಮೂರ ವಿಜ್ಞಾನೇಶ್ವರ ಗುಡಿಯ ಹತ್ತಿರದ ಹೊಲಕ್ಕೆ ಹೋಗಿ ಹೊಲದ ಹತ್ತಿರ ಮೋ ಸೈ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದೇನು ಹೊಲದಲ್ಲಿ ಕೆಲಸ ಮುಗಿಸಿಕೊಂಡು  ಮರಳಿ 1 ಪಿಎಂ ಕ್ಕೆ ಬಂದಾಗ ನನ್ನ  ಮೋ ಸೈ ಕಾಣಲಿಲ್ಲ ಗಾಬರಿಯಾಗಿ ಆಜು ಬಾಜು & ಇತರೆ ಕಡೆಗೆ ಹುಡುಕಾಡಿದ್ದು ಸಿಗಲಿಲ್ಲಾ. ನಂತರ ನನ್ನ ಮೋ ಸೈ ಕಾಣೆಯಾದ ಬಗ್ಗೆ ನಮ್ಮೂರ ಶಾಮರಾಯ ತಂ ಶಿವಶರಣಪ್ಪಾ & ದೇವಾನಂದ  ತಂದೆ ಚಂದಪ್ಪಾ ಇವರಿಗೆ ತಿಳಿಸಿದ್ದರಿಂ ದ ಅವರೊಂದಿಗೆ ನಾನು  & ಎಲ್ಲರೂ ಕೂಡಿ ಮರತೂರ ಹಾಗೂ ಇತರೆ ಕಡೆಗಳಲ್ಲಿ ಹುಡುಕಾಡಿದರು ಮೋ ಸೈ  ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿದ್ರಾಮಪ್ಪ ತಂದೆ ಶ್ರೀಮಂತರಾವ ಐರೋಡಗಿ ಸಾ: ರೌರ (ಬಿ) ರವರ ಹೇಳಿಕೆ ಪಡೆದುಕೊಂಡು ಹಾಜರ ಪಡಿಸಿದ್ದು ಸದರಿ ಕೇಳಿಕೆಯ ಸಾರಾಂಶವೇನೆಂದರೆ  ನಿನ್ನೆ ದಿನಾಂಕ 07-08-2017 ರಂದು ಎಂದಿನಂತೆ ಅಫಜಲಪೂರದಲ್ಲಿರುವ ಮನೆಯಿಂದ ಕರಜಗಿ ಕರ್ತವ್ಯಕ್ಕೆಂದು ನನ್ನ ಮೋಟಾರ ಸೈಕಲ್ ನಂ ಎಮ್.ಹೆಚ್-13-2051 ನೇದ್ದರ ಮೇಲೆ ಕುಳಿತುಕೊಂಡು ನಾನೊಬ್ಬನೆ ಹೋಗುತ್ತಿದ್ದು ರೌರ ಕ್ರಾಸ್ ಸಮೀಪ ಸಮಯ 09:40 ಎ.ಎಮ್ ದ ಸುಮಾರಿಗೆ ಎದುರುಗಡೆಯಿಂದ ಒಬ್ಬ ಮೋಟಾರ ಸೈಕಲ ಸವಾರನು ತನ್ನ ವಾಹನವನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡೆಸಿದ್ದು ನಾನು ಹಾಗೂ ಸದರಿ ವಾಹನದ ಮೇಲೆ ಕುಳಿತ ಮೂರು ಜನರು ಕೂಡಾ ಕೇಳಗೆ ಬಿದ್ದೇವು. ಅವರಿಗೆ ಯಾವುದೇ ಗಾಯ ಪೆಟ್ಟು ಆಗಿರುವುದಿಲ್ಲಾ ನನಗೆ ಎಡಗಾಲು ಮೋಳಕಾಲ ಕೇಳಗೆ ಎಲುಬು ಮುರಿದಿದ್ದು ಎಡಗೈಯ ಕೀರುಬೇರಳು ಮಧ್ಯ ಬೇರಳಿಗೆ ರಕ್ತ ಗಾಯವಾಗಿದ್ದು ಇರುತ್ತದೆ. ಸದರಿ ಮೋಟಾರ ಸೈಕಲ್ ನಂ ಎಮ್.ಹೆಚ್-12-ಸಿ.ಜಿ-6510 ಇತ್ತು ಸದರಿ ಮೂರು ಜನರು ನನಗೆ ಅಪಘಾತವಾದುದನ್ನು ನೋಡಿ ಮಾಡಾಡಿಸದೇ ಓಡಿ ಹೋಗಿರುತ್ತಾರೆ ಸದರಿ ಯವರಿಗೆ ನೋಡಿದಲ್ಲಿ ಗುರುತಿಸುತ್ತೇನೆ  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.