POLICE BHAVAN KALABURAGI

POLICE BHAVAN KALABURAGI

26 September 2011

Gulbarga District Reported Crime

ಅಪಘಾತ ಪ್ರಕರಣ :

ಕಮಲಾಪೂರ ಠಾಣೆ :ಶ್ರೀ. ಚಂದ್ರಕಾಂತ ತಂದೆ ಮರೇಪ್ಪಾ ಹೊಳ್ಕರ ಸಾಃ ಡೋರಜಂಬಗಾ ತಾ;ಜಿ;ಗುಲಬರ್ಗಾ ಇವರು ದಿನಾಂಕ 25-09-2011 ರಂದು ಸಾಯಂಕಾಲ ರೋಡಕಿಣ್ಣಿ ಗ್ರಾಮದ ವಸಂತ ತಂದೆ ಗೌಡಪ್ಪಾ ಪಾಟೀಲ ಇವರ ಮನೆಯಲ್ಲಿ ಟಿವಿ ರೀಪೆರಿ ಮಾಡಲು ಬಂದಿದ್ದು. ರಾತ್ರಿ 11-00 ಗಂಟೆಯವರೆಗೆ ರಿಪೇರಿ ಮಾಡಿ, ಮರಳಿ ಉರಿಗೆ ಹೋಗಲು ನಾವು ಇಬ್ಬರು ಕೂಡಿಕೊಂಡು ರೋಡಕಿಣ್ಣಿ ಗ್ರಾಮದ ಬಸ್ಸ ಸ್ಟ್ಯಾಂಡದ ಹತ್ತಿರ ಬಂದು ನಿಂತುಕೊಂಡಾಗ ಗುಲಬರ್ಗಾ ಹುಮನಾಬಾದ 218 ರೋಡಿನ ಮುಲ್ಲಾಮಾರಿ ಸೇತುವೆ ಮೇಲೆ ಗುಲಬರ್ಗಾ ಕಡೆಯಿಂದ ಲಾರಿ ನಂ. ಜಿಜೆ:10, ಡಬ್ಲೂ:7745ನೇದ್ದರ ಚಾಲಕ ಇಕ್ಬಾಲ ತಂದೆ ಇಸಾಕಭಾಯಿ ಜೌಂಧಿಯಾ ಸಾಃಜಾಮನಗರ ಕೋಜಾಗೇಟ ಗುಜರಾತ ಮತ್ತು ಹುಮನಾಬಾದ ಕಡೆಯಿಂದ ಲಾರಿ ನಂ. ಎಂಹೆಚ್:04, ಹೆಚ್:9245 ನೇದ್ದರ ಚಾಲಕ ಸಮೀರುದ್ದಿನ್ ತಂದೆ ಮಹ್ಮದ ಉಸ್ಮಾನಸಾಬ ದುಬೈವಾಲೇ ಸಾಃ ನೌಬಾದ ಬೀದರ ಇವರು ತಮ್ಮ ತಮ್ಮ ವಾಹನಗಳನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮುಲ್ಲಾಮಾರಿ ಸೇತುವೆ ನಾನು ಮೊದಲು ತಾನು ಮೊದಲು ಅಂತಾ ಸೇತುವೆ ಮಧ್ಯಭಾಗಕ್ಕೆ ಬಂದು ಒಬ್ಬರಿಗೊಬ್ಬರು ಲಾರಿಗಳನ್ನು ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿದ್ದರಿಂದ ಸೇತುವೆ ಸುಕ್ಷತೆಗಾಗಿ ಕಲ್ಲಿನಿಂದ ಕಟ್ಟಿದ ತಡೆಗೋಡೆ ಸುಮಾರು 30 ಫೀಟ್ ಉದ್ದಳತೆಯ ಗೋಡೆ ಕೆಡುವಿ ಹಾನಿಪಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಮಾರಣಾಂತಿಕ ಹಲ್ಲೆ ಪ್ರಕರಣ :
ರೋಜಾ ಠಾಣೆ :ಇಂದು ದಿನಾಂಕ
25-09-2011 ರಂದು ಸಾಯಂಕಾಲ ಶ್ರೀ ಜಕಿ ಖಾನ ತಂದೆ ಜಹೀರ ಅಹ್ಮದ ಖಾನ ಸಾ:ಖಾನ ಕಂಪೌಂಡ ಪಾಶಾಪೂರ ಗುಲಬರ್ಗಾ ಇವರು ಬಾಂಬೆ ಹೊಟೆಲ್ ಹತ್ತಿರ ಇರುವ ಚಿಕನ ಸೆಂಟರ ಮುಂದುಗಡೆ ನನ್ನ ವಾಹನಕ್ಕೆ ಕಟ್ ಹೊಡೆದ ಹುಡುಗನಿಗೆ ವಿಚಾರಿಸುತ್ತಿದ್ದಾಗ ಕಲೀಮ, ಸಿ.ಐ.ಬಿ ಕಾಲೋನಿ, ಯುನೂಸ, ಜಾವೀದ, ಚೋಟು ಇವರೆಲ್ಗರು ಕೂಡಿಕೊಂಡು ಬಂದು ಜಂಬ್ಯ ಮತ್ತು ರಾಡಿನಿಂದ ತಲೆಗೆ ಮತ್ತು ಕಣ್ಣಿನ ಹುಬ್ಬಿನ ಮೇಲೆ ಹೊಡೆದು ಭಾರಿ ರಕ್ತಗಾಯ ಪಡೆಸಿ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಝಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ :ಶ್ರೀ ಶರಣಪ್ಪ ತಂದೆ ಕಾಶಪ್ಪ ಬೊಮ್ಮನಳ್ಳಿ ದಿನಾಂಕ 24-09-2011 ರಂದು ಸಾಯಂಕಾಲ ನಿಂಗಪ್ಪ ಮುತ್ಯನ ಗುಡಿಯ ಹತ್ತಿರ ಕುಳಿತಾಗ ನಮ್ಮೂರ ಸಾಬಣ್ಣ ಧೂಳಪ್ಪ ಅಗಸಿಮನಿ ಇವನು ಬಂದು
 ಅವಾಚ್ಯ ಶಬ್ದಗಳಿಂದ ಬೈದು ನನ್ನ ಜೇಬಿನಿಂದ ಬಿದ್ದ ಹಣ ಯಾಕೆ ತೆಗೆದುಕೊಂಡಿದಿ ಅಂತ ಬೈದಾಡಿದಕ್ಕೆ ನಾನು, ನಿನ್ನ ದುಡ್ಡು ತೆಗೆದುಕೊಂಡಿಲ್ಲ ನನಗೆ ಗೊತ್ತಿಲ್ಲ ಅಂತ ನನ್ನ ಹೊಲದ ಕಡೆಗೆ ಹೋಗುತ್ತಿದ್ದಾಗ, ನನ್ನ ಬೆನ್ನು ಹಿಂದೆ ಓಡುತ್ತಾ ಬಂದು ಅಯ್ಯಣ್ಣ ಸೌಕಾರ ಇವರ ಗೋದಾಮ ಹತ್ತಿರ ರಸ್ತೆಯ ಮೇಲೆ ತಡೆದು ನಿಲ್ಲಿಸಿ ಜಾತಿ ನಿಂದನೆ ಮಾಡಿ  ಎಲ್ಲಿಗೆ ಹೋಗುತ್ತಿ ನನ್ನ ಹಣಕೊಟ್ಟು ಹೋಗು ಅಂತ ಜಾತಿನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿದ್ದ ಬಡಿಗೆಯಿಂದ ಹೊಡೆದು ಕಂದುಗಟ್ಟಿದ ಗಾಯ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.