POLICE BHAVAN KALABURAGI

POLICE BHAVAN KALABURAGI

13 January 2016

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ 12.01.2016 ರಂದು ಇಜೇರಿ ಗ್ರಾಮದ ಸಾಥಖೇಡ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ. ವಿಧ್ಯಾಸಾಗರ ಎ.ಎಸ್.ಐ ಜೇವರಗಿ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಒಂದು ರುಪಾಯಿಗೆ 80 ರೂಪಾಯಿ ಕೊಡುತ್ತೆವೆ ಅಂತ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಬರೆದುಕೊಳ್ಳುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ದಾಳಿ ಮೂರು ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರನ್ನು ವಿಚಾರಿಸಲು 1. ಮಲಕಲಣ್ಣ ತಂದೆ ಮಲ್ಲಪ್ಪ ಮಡಿವಾಳಕರ್ ಸಾ : ಶಹಾಪುರ 2.  ಮಲ್ಲಣ್ಣ ತಂದೆ ನರಸಿಂಗಪ್ಪ ಸಗರ ಸಾ : ಇಜೇರಿ 3. ಗುರಪ್ಪ ತಂದೆ ಶಿವಪ್ಪ ಮಡಿವಾಳಕರ್ ಸಾ : ಇಜೇರಿ ಅಂತಾ ತಿಳಿಸಿದ್ದು ಸದರಿಯವರಿಂದ  ಜೂಜಾಟಕ್ಕೆ  ಬಳಸಿದ ನಗದು ಹಣ 4.000/- ರೂ, 3 ಬಾಲ್‌ ಪೆನ್ ಮತ್ತು 3 ಮಟಕಾ ಚೀಟಿ ಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಕುಮಾರಿ ವಿಜಯಲಕ್ಷ್ಮೀ ಕೋಬಾಳಕರ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಕಲಬುರಗಿ ಇವರು ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಮೇಲಾಧಿಕಾರಿಗಳಿಂದ ಅನುಮೋದನೆ ಪಡೆಯಲು ಮಂಡಿಸದೆ ಅಪ್ರಾಮಾಣಿಕತೆಯಿಂದ ಉದ್ದೇಶಪೂರ್ವಕವಾಗಿ ವಂಚನೆ ಮಾಡಿರುವದು ಹಾಗೂ ತಪ್ಪು ದಸ್ತಾ ವೇಜುಗಳನ್ನು ತಯಾರಿಸಿ ಸರ್ಕಾರದ ಅನುದಾನ ದೂರುಪಯೋಗ ಪಡಿಸಿಕೊಂಡಿದ್ದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಮಾನ್ಯ ಪ್ರಾದೇಶಿಕ ಆಯುಕ್ತಕರು ತಿಳಿಸಿ ಸದರಿಯವರ ವಿರುದ್ದ ಕ್ರಿಮಿನಲ್‌ ಮೂಕದ್ದಮೆ ದಾಖಲಿಸುವಂತೆ ಸೂಚಿಸಿರುತ್ತಾರೆ ಆದ್ದರಿಂದ ಸದರಿಯವರು ಸರ್ಕಾರದ ಅನುದಾನ ರೂಪಾಯಿ 10098110 (ಒಂದು ಕೋಟಿ 98 ಸಾವಿರ110/-ರೂ) ಮಾತ್ರ ದುರ್ಬಳಕೆ ಮಾಡಿ ತೀರ್ವ ತರಹದ ಕರ್ತವ್ಯ ಲೋಪವೆಸಗಿ ಸರ್ಕಾರಿ ದಾಖಲಾತಿಗಳನ್ನು ಪೋರ್ಜರಿ ಮಾಡಿರುತ್ತಾರೆ ಆದ್ದರಿಂದ ಕುಮಾರಿ ವಿಜಯಲಕ್ಷ್ಮೀ ಕೋಬಾಳಕರ ಇವರ ವಿರುದ್ದ ಸೆಕ್ಷನ 420 ಅಡಿ ತಕ್ಷಣ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಶ್ರೀ ಚಂದ್ರಾಮಪ್ಪಾ ತಂದೆ ಹುಚ್ಚಪ್ಪಾ ಯೋಜನಾ ನಿರ್ದೇಶಕರು ಡಿ.ಆರ್‌‌.ಡಿ.ಎ ಜಿಲ್ಲಾ ಪಂಚಾಯತ ಕಲಬುರಗಿ ರವರು ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಹನಮಂತರಾಯ್  ತಂದೆ ಕಲ್ಯಾಣರಾವ್ ಮಲಾಜೀ ಸಾ: ಬೆಳಮಗಿ ತಾ: ಆಳಂದ ಜಿ: ಕಲಬುರಗಿ ಹಾ:ವ: ಮನೆ ನಂ ಹೆಚ್.ಐ.ಜಿ- 140 ಹೈಕೋರ್ಟ ಎದರುಗಡೆ ಕೆಹೆಚ್.ಬಿ ಕಾಲನಿ ಕಲಬುಗಿ ರವರು  ಹೆಂಡತಿ ಮಕ್ಕಳೊಂದಿಗೆ ಎಳ್ಳಾಮಸೆ ಹಬ್ಬದ ಪ್ರಯುಕ್ತ ನಾನು ಕುಟುಂಬ ಸಮೇತನಾಗಿ ದಿನಾಂಕ: 09/01/2016 ರಂದು ಸಾಯಂಕಾಲ 06-00 ಗಂಟೆ ಸುಮಾರಿಗೆ ಕೆ.ಹೆಚ್.ಬಿ ಕಾಲನಿಯ ಮನೆ ಮುಂದಿನ ಬಾಗಿಲನ್ನು ಕೊಂಡಿ ಹಾಕಿ ಹಿಂದಿನ ಬಾಗಿಲ  ಕೀಲಿ ಹಾಕಿಕೊಂಡು ಬೆಳಮಗಿ ಊರಿಗೆ ಹೋಗಿದ್ದು ದಿನಾಂಕ: 11/01/2016 ರಂದು 12-30 ಪಿಎಮ್ ಕ್ಕೆ ಊರಿನಿಂದ ಮನೆಗೆ ಬಂದು ನೋಡಲು ನಮ್ಮ ಮನೆಯ ಹಿಂದಿನ ಬಾಗಿಲ ಚಾನಲ ಗೇಟಗೆ ಹಾಕಿದ್ದ ಕೀಲಿ ಮುರಿದಿದ್ದು ಚಾನಲ ಗೇಟ ತೆಗೆದಿದ್ದು ಒಳಗಡೆ ಬಾಗಿಲಿಗೆ ಹಾಕಿದ್ದ ಕೀಲಿ ಕೊಂಡಿ ಮುರಿದಿದ್ದು ಬಾಗಿಲು ಸ್ವಲ್ಪ ತೆರೆದಿದ್ದು ನಾನು ಗಾಬರಿಯಿಂದ ಒಳಗೆ ಹೋಗಿ ನೋಡಲು ಮನೆಯ ಬೆಡರೂಮ್ ನಲ್ಲಿದ್ದ ಎರಡು ಅಲಮಾರಿಗಳು ಕೆಳಗೆ ಖುಲ್ಲಾ ಬಾಗಿಲು ತೆರೆದು ಬಿದ್ದಿದ್ದು ಅಲಮಾರಾದ ಲಾಕ ಮುರಿದಿದ್ದು ನಾನು ಅಲಮಾರದಲ್ಲಿ ನೋಡಲು ಅಲಮಾರದ ಲಾಕರನಲ್ಲಿಟ್ಟ 1,65,000/-ರೂ ನಗದು ಹಣ  ಕಾಣಿಸಲಿಲ್ಲಿ. ಮತ್ತು ಇನ್ನೊಂದು ಅಲಮಾರದ ಲಾಕರನಲ್ಲಿಟ್ಟ 12ತೊಲೆ ಬೆಳ್ಳಿ ಆರತಿ ಸೆಟ್ ಅ.ಕಿ 4800/-ರೂ 11 ತೊಲೆ ಬೆಳ್ಳಿ ಗಣಪತಿ ಅ.ಕಿ= 4400/-ರೂ ಪ್ರತಿ 4 ತೊಲೆ ಬೆಳ್ಳಿಯ 2 ಗ್ಲಾಸ್ ( 8 ತೊಲೆ ) ಅ.ಕಿ = 3200/-ರೂ ಹಾಗೂ ಒಂದು ಸ್ಯಾಮಸಂಗ ಮೋಬೈಲ್ ಅ.ಕಿ= 4000/-ರೂ ಹೀಗೆ ಒಟ್ಟು 1,81,400/- ರೂ ಕಿಮ್ಮತ್ತಿನ ನಗದು ಹಣ ಬೆಳ್ಳಿ ಆಭರಣಗಳನ್ನು ಯಾರೋ ಕಳ್ಳರು ದಿನಾಂಕ: 09/01/2016 ರಂದು ಸಾಯಂಕಾಲ 06-00 ಗಂಟೆಯಿಂದ ದಿನಾಂಕ: 11/01/2016ರ ಮಧ್ಯಾಹ್ನ 12-30 ಗಂಟೆಯ ಮಧ್ಯದ ಅವಧಿಯಲ್ಲಿ ನಮ್ಮ ಮನೆ ಹಿಂದಿನ ಬಾಗಿಲ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಶೋಕ ನಗರ ಠಾಣೆ : ದಿನಾಂಕ:11/01/2016 ರಂದು ಮದ್ಯಾಹ್ನ ನಾನು ಬಸ್‌ ಮೂಲಕ ಕಲಬುರಗಿಗೆ ಬಂದಿದ್ದು ಬರುವಾಗ ನನ್ನ ವ್ಯವಹಾರದ ಸಲುವಾಗಿ 1,00,000/- ರೂಪಾಯಿಗಳು ತೆಗದುಕೊಂಡು ಬಂದಿದ್ದು ಸಾಯಂಕಾಲ 6 ಗಂಠೆಯ ಸುಮಾರಿಗೆ ನಾನು ನಮ್ಮ ಪೆಟ್ರೊಲ್‌ ಬಂಕನಿಂದ ಜಮಾ ಆದ ಒಟ್ಟು 30,000/- ರೂಪಾಯಿಗಳನ್ನು ತೆಗದುಕೊಂಡು ಕೇಂದ್ರ ಬಸ್‌ ನಿಲ್ದಾಣಕ್ಕೆ ಬಂದಿದ್ದು ಆ ಸಮಯದಲ್ಲಿ ನನ್ನ ಹತ್ತಿರ ಒಟ್ಟು 1,30,000/- ಇದ್ದವು. ರಾತ್ರಿ 7:30 ಗಂಟೆಯ ಸುಮಾರಿಗೆ ನನಗೆ ಪರಿಚಯದವರಾದ ಅಂಬಾದಾಸ ಎನ್ನುವವರು ನನ್ನ ಹತ್ತಿರ ಬಂದು ನನಗೆ 30,000/- ರೂಪಾಯಿ ಕೈಗಡ ಕೇಳಿದ್ದು ಆಗ ನಾನು ಆ ವ್ಯಕ್ತಿಗೆ ನನ್ನ ಹತ್ತಿರ ಇದ್ದ ಹಣದಲ್ಲಿ 30,000/-ರೂಪಾಯಿಗಳನ್ನು ಕೊಟ್ಟಿದ್ದು  ಇರುತ್ತದೆ. ಉಳಿದ ಹಣ 1 ಲಕ್ಷ ರೂಪಾಯಿ ನನ್ನ ಪ್ಯಾಂಟಿನ ಜೇಬಿನಲ್ಲಿ ಇಟ್ಟುಕೊಂಡಿದ್ದೆನು. ರಾತ್ರಿ 8 ಗಂಟೆಯ ಸುಮಾರಿಗೆ ನಾನು ಬಿ.ಗುಡಿಗೆ ಹೋಗುವ ಸಲುವಾಗಿ ಕಲಬುರಗಿ ಬೆಂಗಳೂರ ಬಸ್ಸಿಗೆ ಹತ್ತಿದೆನು. ನಾನು ಹತ್ತುವ ಸಮಯದಲ್ಲಿ ನನ್ನ ಹತ್ತಿರ  ಇದ್ದ 1 ಲಕ್ಷ ರೂಪಾಯಿ ಹಣ ನನ್ನ ಪ್ಯಾಂಟಿನ ಜೇಬಿನಲ್ಲಿದ್ದವು. ನಂತರ ರಾತ್ರಿ 9:30 ಗಂಟೆಯ ಸುಮಾರಿಗೆ ನಾನು ಬಿ. ಗುಡಿಯಲ್ಲಿ ಬಸ್‌ ಇಳಿದ ನಂತರ ನನ್ನ ಜೇಬಿನಲ್ಲಿದ್ದ ಹಣ ನೋಡಲು ಇದ್ದಿರುವದಿಲ್ಲ. ಬಸ್‌ ಇಳಿಯುವ ಸಮಯದಲ್ಲಿ ಯಾರೋ ಕಳ್ಳರು ನನ್ನ ಪ್ಯಾಂಟಿನ ಜೇಬನ್ನು ಕತ್ತರಿಸಿ 1 ಲಕ್ಷ ರುಪಾಯಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಅಂತಾ  ಶ್ರೀ  ವಾಯ್‌.ಟಿ.ಲಿಂಗಣ್ಣಾ ತಂದೆ ತಿಮ್ಮಣ್ಣಾ ಸಾ||ಮನೆ ನಂ. 23/2 ಭಲಬಿಮೇಶ್ವರ ಕಲ್ಯಾಣ ಮಂಟಪ್ಪ ಹತ್ತಿರ ಬಿಮರಾಯನ ಗುಡಿ ತಾ|| ಶಹಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ: 12-06-2016 ರಂದು ಮಧ್ಯಾನ ನನ್ನ ಹೀರೊ ಹೊಂಡಾ ಸ್ಪೆಂಡರ್‌‌ ಪ್ಲಸ್‌‌ ಮೋಟಾರ ಸೈಕಲ ನಂ.ಕೆಎ.32 ಯು.6407 ನೇದ್ದನ್ನು ಮನೆಯ ಮುಂದೆ ನಿಲ್ಲಿಸಿ ಹೊರಗಡೆ ಹೋಗಿದ್ದು ಮರಳಿ 4 ಗಂಟೆಗೆ ಮನೆಗೆ ಬಂದಾಗ ನನ್ನ ಮನೆಯ ಮುಂದೆ ನನ್ನ ಮೋಟಾರ ಸೈಕಲ ಇರಲಿಲ್ಲ ಕಾರಣ ನನ್ನ ಮೋಟಾರ ಸೈಕಲ ಕಪ್ಪು ಬಣ್ಣವುಳ್ಳದ್ದು ನಂ.KA32 U6407, CHASSIS NO. MBLHA10EE8HH03236, ENGINE NO.HA10EA8HH07824 ಅ.ಕಿ. .30000/-ರೂ ಬೆಲೆ ಬಾಳುವದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಶ್ರೀ ಚನ್ನಬಸಪ್ಪಾ ಪಾಟೀಲ ತಂದೆ ಶರಣಪ್ಪಾ ಪಾಟೀಲ್‌ ಸಾ:ಮಹಾಲಕ್ಷ್ಮೀ ಲೇ ಔಟ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 10/01/2016 ರಂದು ನಾನು ನನ್ನ ಹೆಂಡತಿಯಾದ ಗಂಗುಬಾಯಿ ನನ್ನ ಮಕ್ಕಳಾದ ರಾಹುಲ,ರೇಷ್ಮಾ ಎಲ್ಲರು ನಮ್ಮ ಹೊಲ ಸರ್ವೇ ನಂ 101 ನೇದ್ದರಲ್ಲಿನ ನಮ್ಮ ಮನೆಯಲ್ಲಿದ್ದಾಗ ಯಾರೋ ಬೈಯುವುದನ್ನು ಕೇಳಿ ನಾನು ನನ್ನ ಹೆಂಡತಿ ನನ್ನ ಮಕ್ಕಳು ಮನೆಯಿಂದ ಹೊರಗೆ ಬಂದು ನೋಡಲಾಗಿ ನಮ್ಮ ಅಣ್ಣನ ಮಗನಾದ 1) ಸಚೀನ ತಂದೆ ಛತ್ರು ರಾರೋಡ ಹಾಗೂ ನಮ್ಮ ಅಣ್ಣಂದಿರಾದ 2) ಛತ್ರು ತಂದೆ ರತ್ನು ರಾಠೋಡ 3)ಹೀರೂ ತಂದೆ ರತ್ನು ರಾಠೋಡ ಮತ್ತು 4) ಭದ್ರು ತಂದೆ ಹೀರೂ ರಾಠೋಡ 5)ಶಾಂತಾಬಾಯಿ ಗಂಡ ಛತ್ರು ರಾಠೋಡ 6) ಲಲಿತಾಬಾಯಿ ಗಂಡ ಹೀರೂ ರಾಠೋಡ 7)ರವಿನಾಬಾಯಿ ಗಂಡ ಭದ್ರು ರಾಠೋಡ ಸಾ||ಎಲ್ಲರು ಬಳೂರ್ಗಿ ತಾಂಡಾ ಇವರೇಲ್ಲರು ಗುಂಪು ಕಟ್ಟಿಕೊಂಡು ಅತಿಕ್ರಮವಾಗಿ ನಮ್ಮ ಹೊಲದಲ್ಲಿ ಪ್ರವೇಶ ಮಾಡಿ ನಮ್ಮ ಮನೆಯ ಮುಂದೆ ಬಂದು ನನಗೆ ಛತ್ರು ಇತನು ರಂಡಿಮಗನೆ ಹೊಲ ಮನಿ ಇನ್ನೂ ಸರಿಯಾಗಿ ಪಾಲ ಆಗಿಲ್ಲಾ ಈ ಹೊಲದಲ್ಲಿ ನಮಗ ಇನ್ನೂ ಪಾಲ ಬರ್ತಾದ ಅಂತ ಅನ್ನುತಿದ್ದಾಗ ಅದೇ ಸಮಯಕ್ಕೆ ಅಲ್ಲಿಂದ ತಮ್ಮ ಹೊಲಗಳಿಗೆ ಹೋಗುತಿದ್ದ ನಮ್ಮ ಗ್ರಾಮದ ಆನಂದ ತಂದೆ ಲಸ್ಕರ ರಾಠೋಡ , ಸುರೇಶ ತಂದೆ ಚಂದ್ರಶ್ಯಾ ಸಕ್ಕರಗಿ , ಮಲ್ಲಪ್ಪ ತಂದೆ ಚಂದ್ರಮಾ ಕೋತಿ ಇವರು ನಮ್ಮ ಹತ್ತಿರ ಬಂದು ನಮ್ಮ ಅಣ್ಣನಾದ ಛತ್ರು ಹಾಗೂ ಹೀರೂ ಇವರಿಗೆ ಯಾಕೆ ಸುಮ್ಮನೆ ಬೈದಾಡುತ್ತಿರಿ ಅಂತ ಅನ್ನುತಿದ್ದಾಗ ಹೀರೂ ಇತನು ನನಗೆ ಈ ರಂಡಿಮಗಂದು ಸೊಕ್ಕ ಬಾಳ ಅದಾ ಅಂತ ಅಂದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ನನ್ನ ಕಪಾಳದ ಮೇಲೆ ಹೊಡೆದಾಗ ನನ್ನ ಹೆಂಡತಿ ಬಿಡಿಸಲು ಬಂದರೆ ಲಲಿತಾಬಾಯಿ, ಶಾಂತಾಬಾಯಿ, ರವಿನಾಬಾಯಿ ಇವರು ನನ್ನ ಹೆಂಡತಿಗೆ ನಿನು ಬರ್ತಿ ರಂಡಿ ಅಂತ ಅಂದು ನನ್ನ ಹೆಂಡತಿಗೆ ಹಿಡಿದು ಕೈಯಿಂದ ಹೊಡೆಯುತಿದ್ದಾಗ ಸಚೀನ ಇತನು ಅಲ್ಲೆ ಬಿದ್ದ ಒಂದು ಬಡಿಗೆ ತಗೆದುಕೊಂಡು ನನ್ನ ಹೆಂಡತಿಯ ತಲೆಗೆ ಜೋರಾಗಿ ಹೊಡೆದು ರಕ್ತಗಾಯ ಪಡಿಸಿ ಕುದಲು ಹಿಡಿದು ಜಗ್ಗಾಡುತಿದ್ದನು ಆಗ ನನಗೆ ಛತ್ರು ಇತನು ಕಲ್ಲಿನಿಂದ ನನ್ನ ಕಡೆ ಬಿಸಿ ಹೊಡೆದಾಗ ಸದರಿ ಕಲ್ಲು ನನ್ನ ಬಲಗೈ ಹೆಬ್ಬೆರಳಿಗೆ ಬಡಿದು ರಕ್ತಗಾಯವಾಗಿರುತ್ತದೆ. ನನ್ನ ಮಗ ರಾಹುಲ ಹಾಗೂ ರೇಷ್ಮಾ ನಮಗೆ ಹೊಡೆಯುವದನ್ನು ಬಿಡಿಸಲು ಬಂದರೆ ಶಾಂತಾಬಾಯಿ ಇವಳು ಸಚೀನನ ಕೈಯಲಿದ್ದ ಬಡಿಗೆ ತಗೆದುಕೊಂಡು ಅದೇ ಬಡಿಗೆಯಿಂದ  ನನ್ನ ಮಗಳ ಏಡಗೈ ಮುಗೈ ಕೆಳಗೆ ಹೊಡೆದು ರಕ್ತಗಾಯ ಪಡಿಸಿ ಜೀವದ ಭಯ ಹಾಕಿರುತ್ತಾರೆ ಅಂತಾ ಶ್ರೀ ಮನೋಹರ ತಂದೆ ರತ್ನು ರಾಠೋಡ ಸಾ|| ಬಳೂರ್ಗಿ ತಾಂಡಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.