POLICE BHAVAN KALABURAGI

POLICE BHAVAN KALABURAGI

28 April 2014

Gulbarga District Reported Crimes

ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ ರತ್ನಕರ ತಂದೆ ಬಾಬುರಾವ ಮುರಮೆ ಸಾ: ಸಂಗೋಳಗಿ [ಸಿ] ರವರ  ಸೊದರ ಮಾವನ ಮಗನಾದ ಅನೀಲಕುಮಾರ ಈತನು ನಮ್ಮ ಗ್ರಾಮದ  ಚಂದ್ರಕಾಂತ @ ಕಾಂತಪ್ಪ  ತಂದೆ ರುಕ್ಮಣ್ಣ ಅಕ್ಕಾಣಿ ಇವರ ಮಗಳಾದ ಪಂಚಮ್ಮ ಇವಳನ್ನು ಕರದುಕೊಂಡು ತುಮಕೂರಿಗೆ ಹೋಗಿದ್ದು ನಂತರ 10-12 ದಿವಸಗಳು ಆದ ಮೇಲೆ ನಮ್ಮ ತಂದೆ ಹಾಗೂ ಚಂದ್ರಕಾಂತ @ ಕಾಂತಪ್ಪ ಮತ್ತು ಜಂಬಗಾ  ಗ್ರಾಮದ ಸಿದ್ದಾರೂಡ ರವರುಗಳೂ ಕೂಡಿ ಕೊಂಡು ತುಮಕೂರಿಗೆ  ಹೋಗಿ ಅನೀಲಕುಮಾರ ಮತ್ತು ಪಂಚಮ್ಮ ಇವರನ್ನು ನಮ್ಮ ಊರಿಗೆ  ಕರೆದುಕೊಂಡು ಬಂದು ಉರಲ್ಲಿ ಪಂಚಾಯಿತಿ ಮಾಡಿ ಪಂಚಮ್ಮಳಿಗೆ  ಅವರ ತಂದೆಯ ಮನೆಗೆ ಕಳುಹಿಸಿದ್ದು ಇರುತ್ತದೆ. ಘಟನೆ ಜರುಗಿದ್ದಾಗಿನಿಂದ ಚಂದ್ರಕಾಂತ @ ಕಾಂತಪ್ಪಹಾಗೂ ಅವರ ಸಂಬಂದಿಕರು ಕೂಡಿ ನಮ್ಮ ಮೇಲೆ ದ್ವೇಷ ಸಾಧೀಸುತ್ತಾ ಬಂದಿರುತ್ತಾರೆ. ಈಗ ಒಂದು ವಾರದ ಹಿಂದೆ ನಮ್ಮ ಸೊದರ ಮಾವನ ಮಗನಾದ ಸುನೀಲಕುಮಾರನು ಅನಿಮಾನ ಆಸ್ಪದವಾಗಿ ಮೃತ ಪಟ್ಟಿರುತ್ತಾನೆ. ಹೀಗಿರುವಾಗ ನಿನ್ನೆ ದಿನಾಂಕ 26/04/2014 ರಂದು ಮುಂಜಾನೆ 11 ಗಂಟೆಯ ಸುಮಾರಿಗೆ ನಮ್ಮ ತಂದೆ ಮತ್ತು ನಮ್ಮ ಸೊದರ ಮಾವ ಮದುಕರರಾವ ಹಾಗೂ ನಮ್ಮ ಗ್ರಾಮದ ಕುಪೇಂದ್ರರಾವ ತಂದೆ ಹಣಮಂತರಾವ ಬಿರೆದಾರ ರವರುಗಳೂ ಕೂಡಿ ನಮ್ಮ ಊರಿನ ಬಲಭೀಮ ತಂದೆ ಮಹಾದೇವರಾವ ಬಿರೆದಾರ ರವರ ಹೊಟೇಲ ಮುಂದೆ ಮಾತನಾಡುತ್ತಾ ಕುಳಿತುಕೊಂಡಾಗ ನಮ್ಮ ಗ್ರಾಮದ ಚಂದ್ರಕಾಂತ @ ಕಾಂತಪ್ಪ ತಂದೆ ರುಕ್ಮಣ್ಣ ಅಕ್ಕಾಣಿ ಸೂರ್ಯಕಾಂತ ತಂದೆ ರುಕ್ಮಣ್ಣ ಅಕ್ಕಾಣಿ . ಮಹಾಂತಪ್ಪಾ ತಂದೆ ಚಂದ್ರಶಾ ಬಿರೆದಾರ ಬಸವಲಿಂಗಪ್ಪ ತಂದೆ ಚಂದ್ರಶ್ಯಾ ಬಿರೆದಾರ ಹಾಗೂ ಕಲ್ಲ ಹಂಗರಗಾ ಗ್ರಾಮದ 6 ಜನರು ಅವರ ಹೆಸರು ಗೊತ್ತಿಲ್ಲಾ ಇವರುಗಳೆಲ್ಲರೂ ಕೂಡಿಕೊಂಡು ಬಂದು ನಮ್ಮ ತಂದೆಗೆ ಹಾಗೂ ನಮ್ಮ ಸುನೀಲಕುಮಾರನಿಗೆ ನಾವೆ ಹೊಡೆದಿರುತ್ತೇವೆಂದು ಊರಲ್ಲಿ ಎಲ್ಲರ ಎದುರು ಹೇಳುತ್ತಾ ತಿರುಗಾಡುತ್ತಾದ್ದೀರಿ ಅಂತಾ ಅವಾಚ್ಯ ಶಬ್ದಗಳಿಂದಾ ಬೈದ್ದು ಜೀವದ  ಬೆದರಿಕೆ ಹಾಕಿರುತ್ತಾರೆ. ಅಷ್ಟರಲ್ಲಿಯೇ ಅಲ್ಲಿಯೇ ಇದ್ದ ಕುಪೇಂದ್ರ ರಾವ ತಂದೆ ಹಣಮಂತರಾವ ಬಿರೆದಾರ  ರವರುಗಳು ಕೂಡಿ ಬಲಭೀಮ ತಂದೆ ಮಹಾದೇವ ಬಿರೆದಾರ ರವರುಗಳು ಕೂಡಿ ಜಗಳಾ ಆಗುವದನ್ನು ತಪ್ಪಿಸಿರುತ್ತಾರೆ. ವಿಷಯ ನನಗೆ ನಮ್ಮ ತಂದೆಯಿಂದಾ ಗೊತ್ತಾಗಿರುತ್ತದೆ.ನಂತರ ಇಂದು ದಿನಾಂಕ 27/04/2014 ರಂದು ಮುಂಜಾನೆ 0830 ಗಂಟೆಯ ಸುಮಾರಿಗೆ ನಾನು ನರೋಣಾ ಗ್ರಾಮದ ಸಿಮಾಂತರದಲ್ಲಿರುವ ನಮ್ಮ ಬದಬದ ನಾಲ ಹೊಲದಲ್ಲಿ ಸುರೇಪಾನ ಕಟ್ಟಿಗೆ ಕಿತ್ತಿಹಾಕಿ ಅಲ್ಲಿಯೇ ಹೊಲದ ಬಂದಾರಿ ಹತ್ತಿರ ಸಂಡಾಸಕ್ಕೆ ಕುಲೀತಕೊಂಡಿರುವಾಗ ಯಾರೋ 4 ಜನ ಗುಂಡು ಮಕ್ಕಳು ತಮ್ಮ ಮುಖಕ್ಕೆ ಬಟ್ಟಿ ಕಟ್ಟಿಕೊಂಡು ಬಂದು ನನ್ನನ್ನು ಹಿಡಿದು ಎಳೆದು ಅಂಗಾತವಾಗಿ ಮಲಗಿಸಿ ನನಗೆ ಕೊಲೆ ಮಾಡುವ ಉದ್ದೇಶದಿಂದ  ಅವರಲ್ಲಿ ಇಬ್ಬರೂ ನನ್ನ ಕೈಯ ಎರಡು ಕಟ್ಟೆಗಳನ್ನು ಒತ್ತಿಹಿಡಿದು  ಇನ್ನೊಬ್ಬನು ಒಂದು ಬಿಳಿಯ ಡಬ್ಬಾಯಲ್ಲಿರುವ ವಿಷವನ್ನು  ಒತ್ತಾಯ ಪೂರ್ವಕವಾಗಿ ನನ್ನ ಬಾಯಿಯಲ್ಲಿ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.  
ಸಿಡಿಲು ಬಡಿದು ಎತ್ತುಗಳ ಸಾವು :
ಮಾಹಾಗಾಂವ ಠಾಣೆ : ದಿನಾಂಕ 27-04-14 ರಂದು ಮಧ್ಯಾಹ್ನ 4-00 ಗಂಟೆ ಸುಮಾರಿಗೆ  ತನ್ನ ಹೊಲ ಸರ್ವೆ ನಂ. 171/2 ರಲ್ಲಿ ಇರುವ ಮಾವಿನ ಗಿಡದ ಕೆಳಗಡೆ ತನ್ನ ಎರಡು ಜೋಡೆ ಎತ್ತುಗಳು :ಕಿ: 1ಲಕ್ಷ ರೂ. ಬೆಲೆವುಳ್ಳದ್ದು ಕಟ್ಟಿದ್ದು  ಒಮ್ಮೇಲೆ ಆಕಾಶದಲ್ಲಿ ಗುಡುಗು ಮಿಂಚು ಪ್ರಾರಂಭಿಸಿ ಅಕಾಲಿಕ ಮಳೆ ಬರಲು ಪ್ರಾರಂಭಿಸಿದ್ದು, ಅದೇ ವೇಳೆಗೆ ಒಮ್ಮೇಲೆ ನೈಸರ್ಗಿಕ ವಿಕೋಪದಿಂದ ಸಿಡಲು ಮಿಂಚು ಗುಡುಗು ಪ್ರಾರಂಭವಾಗಿ ಆಕಸ್ಮಿಕವಾಗಿ ಜೋರಾಗಿ ಸಪ್ಪಳವಾಗಿ ನಮ್ಮ ಮಾವಿನ ಗಿಡದ ಕೆಳೆಗೆ ಕಟ್ಟಿದ್ದ ಎರಡು ಜೋಡು ಎತ್ತುಗಳ ಮೇಲೆ ಸಿಡಲು ಬಿದ್ದಿದ್ದರಿಂದ ನಮ್ಮ ಎತ್ತುಗಳು ಕಾಲು ಕೆದರುತ್ತಾ ಒದರುತ್ತಿದ್ದಾಗ ನಾವು ಇಬ್ಬರು ಗಂಡ ಹೆಂಡತಿ ಓಡಿ ಹೋಗಿ ನೋಡಲಾಗಿ ಎತ್ತುಗಳು ಕಣ್ಣುಗಳು ಬೆಳ್ಳಗೆ ಮಾಡಿ ಒದ್ದಾಡುತ್ತಾ ಸ್ಥಳದಲ್ಲಿ ಮೃತಪಟ್ಟಿದ್ದು, ಘಟನೆ ನೈಸರ್ಗಿಕ ಪ್ರಕೃತಿ ವಿಕೋಪದಿಂದ ನಡೆದಿರುತ್ತದೆ ಅಂತಾ ಶ್ರೀ ರೇವಣಸಿದ್ದಪ್ಪಾ ಡಬರಿ ಸಾ : ಕೊಳಕುಂದಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ತಮ್ಮಣ್ಣಗೌಡ ತಂದೆ ಬಸವಂತರಾವ ಪಾಟೀಲ  ಸಾ:ಹಾಗರಗಾ ತಾ:ಜಿ:ಗುಲಬರ್ಗಾ ಹಾ:ವ:ಜೆ.ಆರ್.ನಗರ ಅಳಂದ ರಸ್ತೆ ಗುಲಬರ್ಗಾ ಇವರು  ದಿನಾಂಕ:29-11-2013 ರಂದು ರಾತ್ರಿ 8.00 ಗಂಟೆಗೆ ತನ್ನ ಟಿವಿಎಸ್ ಸ್ಟಾರ ಸಿಟಿ ಮೋಟಾರ ಸೈಕಲ್ ಕೆಎ-32 ಆರ್-7682 CHESSI NO.MD625KF5461G93758 ENGINE NO.AFSG61537445 ಕಪ್ಪು ಬಣ್ಣದ್ದು ಅ.ಕಿ.15000/-ರೂ ನೇದ್ದು ನಮ್ಮ ಮನೆಯ ಮುಂದೆ ನಿಲ್ಲಿಸಿ ರಾತ್ರಿ ನಾನು ಊಟ ಮಾಡಿಕೊಂಡು ಮಲಗಿ ಕೊಂಡಿದ್ದು ಬೆಳಗ್ಗೆ ದಿನಾಂಕ:30-11-2013 ರಂದು ಬೆಳಗ್ಗೆ 8.00 ಗಂಟೆಗೆ ಎದ್ದು ನೋಡಲು ಮನೆಯ ಮುಂದೆ ಇಟ್ಟ ಸದರಿ ಮೋಟಾರ ಸೈಕಲ ಇರಲಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಚೌಕ ಠಾಣೆ : ದಿನಾಂಕ 27.04.2014 ರಂದು 10.30 ಗಂಟೆಗೆ  ರಂದು ಶ್ರೀ ಮತಿ ಜಯಶ್ರೀ ಗಂಡ ಶರಣಬಸಪ್ಪ ಬೊಮನಳ್ಳಿ ಸಾಃ ಶಹಾಬಜಾರ  ಕಟಗರಪುರ ಗುಲಬರ್ಗಾ ರವರು  ತಮ್ಮ ಸಂಬಂದಿಕರ ಮದುವೆಗೊಸ್ಕರ ಖಣದಾಳ ಗ್ರಾಮಕ್ಕೆ ಹೋಗುವ ಕುರಿತು ಕಟಗರಪು ಶಹಾಬಜಾರದ ಸಂಜಯಸಿಂಗ  ರವರ ಮನೆಯ ಮುಂದಿನ ಹನುಮಾನ ಗುಡಿಯ ಮುಂದಿರುವ ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಯಾರೊ ಇಬ್ಬರು ಅಪರಿಚಿತ ಮೊಟಾರ ಸೈಕಲ ಸವಾರರು ತಮ್ಮ ಕರಿಷಮಾ ಮೊಟಾರ ಸೈಕಲ ಮೇಲೆ ಎದುರಿನಿಂದ ಬಂದು ಫಿರ್ಯಾದಿಯ ಕೊರಳಿಗೆ ಕೈ ಹಾಕಿ ಫಿರ್ಯಾದಿ ಕೊರಳಲ್ಲಿರುವ 4 ತೊಲೆ ಬಂಗಾರದ ಮಂಗಳ ಸೂತ್ರ ಅಃಕಿಃ 90 ಸಾವಿರ ರೂಪಾಯಿ ಬೆಲೆಬಾಳುವ ಆಭರಣವನ್ನು ಕಿತ್ತುಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.