POLICE BHAVAN KALABURAGI

POLICE BHAVAN KALABURAGI

11 November 2017

KALABURAGI DISTRICT REPORTED CRIMES

ದ್ವೀಚಕ್ರ ವಾಹನಗಳ ಕಳವು ಪ್ರಕರಣಗಳು :
ನೆಲೋಗಿ ಠಾಣೆ : ಶ್ರೀ ಸಂತೋಷ ತಂದೆ ಶಿವಶರಣಪ್ಪ ನೌಟಾಕ ಸಾ|| ಬಗಲೂರ ತಾ|| ಸಿಂದಗಿ ಜಿ|| ವಿಜಯಪೂರ ಇವರು ದಿನಾಂಕ: 09/11/2017 ರಂದು ಜೇರಟಗಿ ಗ್ರಾಮದಲ್ಲಿ ರೇವಣಾಸಿದ್ದೇಶ್ವರ ಜಾತ್ರೆ ಇದ್ದ ಪ್ರಯುಕ್ತ ನಮ್ಮ ಅಣ್ಣನಾದ ರಾಜಕುಮಾರ ಇವರ ಸೈಕಲ ಮೋಟರ ನಂ: KA28 EH 6042 ನೇದ್ದನ್ನು  ತಗೆದುಕೊಂಡು ನಾನು ನಮ್ಮ ಮಾಮಾ ಗುಪರಾಯ ಮುದ್ದಾ, ಕೂಡಿಕೊಂಡು ಜೇರಟಗಿಗೆ 2:00 ಪಿ.ಎಂಕ್ಕೆ ಬಂದು ಯು.ಕೆ.ಕ್ಯಾಂಪಿನಲ್ಲಿ ನಿಲ್ಲಿಸಿ ಜಾತ್ರೆ ನೋಡಲು ಹೋಗಿದ್ದೇವು, ನಂತರ ಜಾತ್ರೆ ಮುಗಿಸಿಕೊಂಡು ಸಾಯಂಕಾಲ 7:00 ಪಿ.ಎಂಕ್ಕೆ ಬಂದು ನೋಡಲಾಗಿ ನನ್ನ ಸೈಕಲ ಮೋಟರ ಇರಲಿಲ್ಲಾ. ಸೈಕಲ ಮೋಟರ ||ಕಿ|| 30,000/- ರೂ ಆಗಬಹುದು ಯಾರೋ ಕಳ್ಳರು 2:00 ಪಿ.ಎಂ ದಿಂದ 7 :00 ಪಿ.ಎಂದ ಅವಧಿಯಲ್ಲಿ ಯು,ಕೆ.ಪಿ ಕ್ಯಾಂಪನಲ್ಲಿ ನಿಲ್ಲಿಸಿದ ನನ್ನ ಸೈಕಲ ಮೋಟರ ನಂ: KA28 EH 6042 ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲೋಗಿ ಠಾಣೆ : ಶ್ರೀ ದೇವಪ್ಪ ತಂದೆ ಶಿವರಾಯ ಬಿರೆದಾರ ಸಾ|| ಗನಟಗಾ ತಾ|| ಜೇವರ್ಗಿ ಜಿ|| ಕಲಬುರಗಿ  ಇವರು ದಿನಾಂಕ: 09/11/2017 ರಂದು ಜೇರಟಗಿ ಗ್ರಾಮದಲ್ಲಿ ರೇವಣಾಸಿದ್ದೇಶ್ವರ ಜಾತ್ರೆ ಇದ್ದ ಪ್ರಯುಕ್ತ ನಾನು ನನ್ನ ಮಗನ ಹೆಸರಿನಲ್ಲಿರುವ ಸೈಕಲಮೋಟರ ನಂ: KA32 EC 5658 ನೇದ್ದು ತಗೆದುಕೊಂಡು ನಾನು ನನ್ನ ಹೆಂಡತಿ ಲಕ್ಷ್ಮಿಬಾಯಿ ಕೂಡಿಕೊಂಡು ಜೇರಟಗಿಗೆ 4:00 ಪಿ.ಎಂಕ್ಕೆ ಬಂದು ರಾಷ್ಟ್ರೀಯ ಹೇದ್ದಾರಿ 218 ಜೇರಟಗಿ ಬಸ ನಿಲ್ದಾಣದ ಹತ್ತಿರ ಇರುವ ದೇಸಾಯಿ ಇವರ ಅಂಗಡಿಯ ಮುಂದೆ ನನ್ನ ಸೈಕಲ ಮೋಟರ ನಿಲ್ಲಿಸಿ ಜಾತ್ರೆ ನೋಡಲು ಹೋಗಿದ್ದೇವು, ನಂತರ ಜಾತ್ರೆ ಮುಗಿಸಿಕೊಂಡು ಸಾಯಂಕಾಲ 7:00 ಪಿ.ಎಂಕ್ಕೆ ಬಂದು ನೋಡಲಾಗಿ ನನ್ನ ಸೈಕಲ ಮೋಟರ ಇರಲಿಲ್ಲಾ. ಸೈಕಲ ಮೋಟರ ||ಕಿ|| 30,000/- ರೂ ಆಗಬಹುದು ಯಾರೋ ಕಳ್ಳರು 4:00 ಪಿ.ಎಂ ದಿಂದ 7 :00 ಪಿ.ಎಂದ ಅವಧಿಯಲ್ಲಿ ರಾಷ್ಟ್ರೀಯ ಹೇದ್ದಾರಿ 218 ಜೇರಟಗಿ ಬಸ ನಿಲ್ದಾಣದ ಹತ್ತಿರ ಇರುವ ದೇಸಾಯಿ ಇವರ ಅಂಗಡಿಯ ಮುಂದೆ ನಿಲ್ಲಿಸಿದ ನನ್ನ ಸೈಕಲ ಮೋಟರ ನಂ: KA32 EC 5658 ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಪ್ರಚೋದನೆ ಮಾಡಿದ ಪ್ರಕರಣ  :
ಜೇವರಗಿ ಠಾಣೆ : ಶ್ರೀ ಚಾಂದಪಾಶಾ ತಂದೆ ಖಾಜಾಲಾಲ್‌ ಜಮದಾರ ಸಾ: ಮಾರಡಗಿ ಗ್ರಾಮ ತಾ: ಜೇವರ್ಗಿ ಜಿ: ಕಲಬುರಗಿ ಇವರು 01) ಸಂಗಣ್ಣ ತಂದೆ ನಾಗಣ್ಣ ಸಾ: ಮಾರಡಗಿ ಗ್ರಾಮ 02) ದೇವಿಂದ್ರಪ್ಪಾ ತಂದೆ ನಾಗಣ್ಣ ಸಾ: ಮಾರಡಗಿ ಗ್ರಾಮ ತಾ; ಜೇವರ್ಗಿ ಇವರು ಫಿರ್ಯಾದಿ ಹೊಲದಲ್ಲಿ ಹಾದು ಹೋದ ಕ್ಯಾನಲ್‌ಗೆ ಅಡ್ಡವಾಗಿ ತಾಡಪತ್ರಿ ಕಟ್ಟಿ ಮುಂದಿನ ಹೊಲಗಳಿಗೆ ನೀರು ಹೋಗದಂತೆ ಮಾಡಿ ಅಕ್ರಮವಾಗಿ ಇಂಜಿನ್‌ ಬಳಸಿ ನೀರು ಪಡೆಯುತ್ತಿದ್ದರಿಂದ ಫಿರ್ಯಾದಿ ಮತ್ತು ಇತರರು ಕೂಡಿ ಕೇಳಿದ್ದಕ್ಕೆ ತಕರಾರು ಮಾಡಿರುತ್ತಾರೆ. ಫಿರ್ಯಾದಿದಾರರು ದಿನಾಂಕ; 30/11/2016 ರಂದು ಈ ಕುರಿತು ನಿರಾವರಿ ಇಲಾಖೆಯ ಜೆ.ಇ ಮತ್ತು ಇ.ಇ ರವರಿಗೆ ದೂರು ನೀಡಿದ್ದು, ಅವರು ಅಕ್ರಮವಾಗಿ ಕ್ಯಾನಲ್‌ ದಿಂದ ಇಂಜಿನ ಮೂಲಕ ನೀರು ಬಳಸುವವರ ವಿರುದ್ದ ಕ್ರಮ ಕೈಗೊಂಡು ಇಂಜಿನ್‌ ಬಂದ ಮಾಡಿಸಿರುತ್ತಾರೆ. ಅಲ್ಲದೆ ಅಕ್ರಮವಾಗಿ ನೀರು ಬಳಸದಂತೆ ಸೂಚಿಸಿರುತ್ತಾರೆ. ಇದರಿಂದ ಆರೋಪಿತರು ಫಿರ್ಯಾದಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಭಾರಿ ಘಾಯಗೊಳಿಸಿದ್ದರಿಂದ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 299/2016 ಪ್ರಕರಣ ಧಾಖಲಾಗಿರುತ್ತದೆ, ನಂತರ ದಿನಾಂಕ; 11/12/2016 ರಂದು 10-30 ಘಂಟೆಗೆ ಫಿರ್ಯಾದಿ ಮನೆಯ ಮುಂದೆ ಆರೋಪಿತರು ಫಿರ್ಯಾದಿಗೆ ಕೊಲೆ ಮಾಡುವ ಉದ್ದೇಶದಿಂದ ಪದೆ ಪದೆ ಅವಾಚ್ಯವಾಗಿ ಬೈಯುವದು ಜೀವ ಭೆದರಿಕೆ ಹಾಕುವದು ಕರೆ ಮಾಡುವ ಮೂಲಕ ಕೊಲೆ ಮಾಡುವ ಬೇದರಿಕೆ ಹಾಕುವದು ಮಾಡುತ್ತಾ ಬಂದಿರುತ್ತಾರೆ. ಇದರಿಂದ ದೂರುದಾರನ ಜೀವನ ಅಪಾಯದಲ್ಲಿರುತ್ತದೆ. ಈ ಕುರಿತು ಠಾಣೆಗೆ ಅರ್ಜಿ ನೀಡಿದರು ಕೂಡ ಆಪಾದಿತರನ್ನು ಬಂದಿಸಿರುವದಿಲ್ಲ, ಗ್ರಾಮದಲ್ಲಿ ಮುಕ್ತವಾಗಿ ಭಯವಿಲ್ಲದೆ ಒಡಾಡುತ್ತಿದ್ದಾರೆ. ಮತ್ತು ಗ್ರಾಮದಲ್ಲಿ ಅವಾಚ್ಯವಾಗಿ ಬೈದು ಮುಸ್ಲಿಂ ಸುಮುಧಾಯದ ಜನರ ಧಾರ್ಮಿಕ ಬಾವನಗಳಿಗೆ ನೋವುಂಟು ಮಾಡಿ ಧಾರ್ಮಿಕ ಸಮುದಾಯದಲ್ಲಿ ಅಸಮತೋಲನವನ್ನು ಸೃಷ್ಟಿಸುತ್ತಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಧಿಕೃತವಾಗಿ ಪ್ಲೇಕ್ಸ ಬೋರ್ಡ ಹಾಕಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ: 10/11/2017 ರಂದು ಬೆಳ್ಳಿಗೆ 10-00 ಗಂಟೆಗೆ ಶ್ರೀ ಅರ್ಜುನ ಪಿಸಿ 1075 ರವರು ಮುತ್ತಾಗಾ ಗ್ರಾಮಕ್ಕೆ ಬೀಟ ಕರ್ತವ್ಯಕ್ಕೆ ಹೋದಾಗ ಮುತ್ತಾಗಾ ಗ್ರಾಮದ ಮುಖ್ಯ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿನ್ನೆ ದಿನಾಂಕ: 09/11/2017 ರಂದು ರಾತ್ರಿ ವೇಳೆಯಲ್ಲಿ ಗ್ರಾಮದ ಯಾರೋ ಮುಸ್ಲಿಂ ಜನಾಂಗದವರು ಒಂದು ಕಟ್ಟಿ ಕಟ್ಟಿ ಕಟ್ಟೆಯ ಮೇಲೆ ಕಬ್ಬಿಣದ  ಆಂಗಲ್ ಬೋರ್ಡ ತಯಾರಿಸಿ ಅದಕ್ಕೆ ಟಿಪ್ಪು ಸುಲ್ತಾನ ಭಾವಚಿತ್ರದ ಪ್ಲೇಕ್ಸ ಬ್ಯಾನರ್ ಅಂಟಿಸಿರುತ್ತಾರೆ ಯಾರೋ ಸಾರ್ವಜನಿಕ ಸ್ಥಳದಲ್ಲಿ ಮುತ್ತಗಾ ಗ್ರಾಮದಲ್ಲಿ ಟಿಪ್ಪು ಸುಲ್ತಾನ ಭಾವಚಿತ್ರ ಇರುವ ಪ್ಲೇಕ್ಸ ಬ್ಯಾನರ ಹಾಕಿ ಕೋಮು ಭಾವನೆ ಕೆರಳಿಸುವ ಉದ್ದೆಶದಿಂದ ಕಟ್ಟಿ ಕಟ್ಟಿ ಗ್ರಾಮದಲ್ಲಿ ಶಾಂತತಾ ಭಂಗವನುಂಟು ಮಾಡುವ ಉದ್ದೇಶದಿಂದ ಯಾರೋ ಮುಸ್ಲಿಂ ಜನಾಂಗದವರು ಕಟ್ಟೆ ಕಟ್ಟಿ ಅದರ ಮೇಲೆ ಟಿಪ್ಪು ಸುಲ್ತಾನ ಭಾವಚಿತ್ರದ ಪ್ಲೇಕ್ಸ ಬ್ಯಾನರ್ ಹಾಕಿದವರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ನೆಲೋಗಿ ಠಾಣೆ : ದಿನಾಂಕ: 29/10/2017 ರಂದು ಶ್ರೀ ಸೈಫನಸಾಬ ತಂದೆ ಶಹಾಬುದ್ದೀನ ಮುಲ್ಲಾ ಸಾ: ಅಂಕಲಗಾ ಇವರು ಸಿದ್ನಾಳ ಸೀಮಾಂತರ ಯಮನಪ್ಪ ಗುಳ್ಯಾಳ, ಮಲ್ಕಪ್ಪ ಸಿದ್ನಾಳ ಇವರ ಹೊಲಗಳ ಬಾಂದಾರಿಯಲ್ಲಿ ಇರುವ ಕೇನಾಲ ಕಾಲುವೆಯಲ್ಲಿ ಒಂದು ಹೆಣ್ಣು ಮಗಳ ಶವ ಬೋರಲಾಗಿ ಬಿದ್ದಿದ್ದು, ಅಲ್ಲಲ್ಲಿ ಮೈ ಮೇಲಿನ ಚರ್ಮ ಸುಲಿದು ಬೆಳ್ಳಗೆ ಆಗಿರುತ್ತದೆ. ಅವಳ ವಯಸ್ಸು: 45-50 ವರ್ಷ ಇರಬಹುದು. ಅವಳ ನೀರಿನಲ್ಲಿ ಬಿದ್ದು ಸುಮಾರು 4-5 ದಿನಗಳ ಆಗಿರಬಹುದು. ಅವಳ ಮೈ ಮೇಲೆ ಯಾವುದೇ ಬಟ್ಟೆ ಬರೆ ಇರುವದಿಲ್ಲಾ. ಅವಳು ಯಾವ ಕಾರಣಕ್ಕಾಗಿ ನೀರಿನಲ್ಲಿ ಬಿದ್ದು ಸತ್ತಿರಬಹುದು ಅವಳ ಸಾವಿನಲ್ಲಿ ಸಂಶಯ ಇದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.