POLICE BHAVAN KALABURAGI

POLICE BHAVAN KALABURAGI

01 January 2012

GULBARGA DIST REPORTED CRIME


ಜಬರಿ ಸಂಭೋಗ ಮಾಡಿ ಕೊಲೆ:
ಚಿತ್ತಾಪೂರ ಠಾಣೆ:  ದಿನಾಂಕ 31-12-2011 ರಂದು ಮಧ್ಯಾಹ್ನನ ಮನೆಯಿಂದ ಕಟ್ಟಿಗೆ ತರುವ ಕುರಿತು ನಮ್ಮ ಹೊಲಕ್ಕೆ ಒಂಬತ್ತು ಕಮಾನ ಮುಖಾಂತರ ಹೋದಾಗ ಸಂಜೆ 5-30 ಗಂಟೆಯಾದರು ಬರಲಾರದ ಕಾರಣ ನಾನು ನನ್ನ ತಾಯಿಗೆ ಹುಡುಕಾಡಲು 9 ಕಮಾನ ಹತ್ತಿರ ಹೋದಾಗ ಎದುರಿನಿಂದ ಸೇಡಂದ ಶಂಬುಲಿಂಗ ಮತ್ತು ಚಿತ್ತಾಪುರದ ಬಸವನಗರದ ಕಮಲಾಕರ ಇವರು ಬರುತ್ತಿದ್ದು, ಶಂಭುಲಿಂಗನ ತಲೆಯ ಮೆಲೆ ಕಟ್ಟಿಗೆ ಹೊರೆ ಹಾಗು ಕೈಯಲ್ಲಿ ಕೊಡಲಿ ಇದ್ದು , ನಾನು ಕೊಡಲಿಯನ್ನು ನೋಡಿ ಗುರುತಿಸಿ ಅವನಿಗೆ ಇದು ನಮ್ಮ ಕೊಡಲಿ ಇದೆ ನಮ್ಮ ತಾಯಿ ಕಟ್ಟಿಗೆ ತರಲು ತಗೆದುಗೊಂಡು ಹೋಗಿದ್ದು ನಿನ್ನ ಹತ್ತಿರ ಯಾಕೆ ಇದೆ ಅಂತಾ ಕೇಳಿದಾಗ ಈ ಕೊಡಲಿ ನಮ್ಮದು ಇರುತ್ತದೆ ಅಂತಾ ಅಂದು ಇಬ್ಬರು ಕೂಡಿ ಬಸವನಗರ ಕಡೆಗೆ ಹೋದರು, ನಾನು ಮತ್ತು ಇತರರು ಕೂಡಿ ಹುಡುಕಾಡಲಾಗಿ ಎಲ್ಲಿಯೂ ಸಿಕ್ಕಿರಲಿಲ್ಲ ದಿನಾಂಕ 1-1-2012 ರಂದು ಮುಂಜಾನೆ ಹೋಗಿ ಮತ್ತೆ ಹುಡುಕಾಡಲಾಗಿ ಶರಣಪ್ಪ ಅಲ್ಲೂರ ಇವರ ತೊಗರಿ ಕೊಯ್ದ ಹೊಲದಲ್ಲಿ ತನ್ನ ತಾಯಿಯ ಶವ ಬೆತ್ತಲೆಯಾಗಿ ಬಿದ್ದ ಶವ ನೋಡಿದ್ದು, ಅವಳಿಗೆ ಸೇಡಂದ ಶಂಬುಲಿಂಗ ಮತ್ತು ಚಿತ್ತಾಪುರದ ಕಮಲಾಕರ ಇವರುಗಳು ಬಟ್ಟೆ ಬಿಚ್ಚಿ ಬಲತ್ಕಾರ ಸಂಭೋಗ ಮಾಡಿ ಕೊಡಲಿಯಿಂದ ತಲೆಗೆ ಹೊಡೆದು ಭಾರಿ ರಕ್ತ ಗಾಯಪಡಿಸಿ ಕೊಲೆ ಮಾಡಿರುತ್ತಾರೆ ಅವರಿಬ್ಬರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೆಕು ಅಂತ ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಮಗ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 1/2012 ಕಲಂ 302,376 ಸಂಗಡ 34 .ಪಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,


GULBARGA DIST REPORTED CRIMES

ಅಪಘಾತ ಪ್ರಕರಣ ಒಂದು ಸಾವು:
ಫರಹತಾಬಾದ ಪೊಲೀಸ್ ಠಾಣೆ :
ರಾಜು ತಂದೆ ಬಲರಾಮ ರಾಠೋಡ ಸಾ: ಅಲ್ಟೊ ತಾ:ಅಚ್ಚಪೇಟ ಜಿ: ಮಹಬೂಬ ನಗರ ರಾಜ್ಯ: ಆಂದ್ರ ಪ್ರದೇಶರವರು ನಾನು ಮತ್ತು ಸಂಬಂಧಿಕರು ಒಂದು ತಿಂಗಳ ಹಿಂದೆ ಕೂಲಿ ಕೇಲಸ ಕುರಿತು ಜೇವರ್ಗಿ ತಾಲೂಕಿನ ಕೆಲ್ಲೂರ ಗ್ರಾಮಕ್ಕೆ ಬಂದಿರುತ್ತೆವೆ. ದಿನಾಂಕ 31/12/2011 ರಂದು ರಾತ್ರಿ 22:30 ಗಂಟೆಯ ಸುಮಾರಿಗೆ ನಾವೇಲ್ಲರು ಜೇವರ್ಗಿಯಿಂದ ಟಾಟಾ ಎ.ಸಿ ವಾಹನದಲ್ಲಿ ಕೂಳಿತು ಗುಲಬರ್ಗಾಕ್ಕೆ ಬರುತ್ತಿದ್ದೆವು ದಾರಿಮಧ್ಯ ರಾತ್ರಿ 00:30 ಗಂಟೆಯ ಸುಮಾರಿಗೆ ಸರಡಗಿ (ಬಿ) ಕ್ರಾಸದಿಂದ ಹೋಗುತ್ತಿದ್ದಾಗ ಟಾಟಾ ಎ.ಸಿ ಚಾಲಕನು ತನ್ನ ಟಾಟಾ ಎ.ಸಿ ಯನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಎಡಭಾಗದಲ್ಲಿ ನಿಂತಿದ ಲಾರಿಗೆ ಡಿಕ್ಕಿ ಪಡಿಸಿರುತ್ತಾನೆ. ಇದ್ದರಿಂದ ಟಾಟಾ ಎ.ಸಿ ವಾಹನದಲ್ಲಿದ ಮಂಗಿ ಗಂಡ ಶಿವಯ್ಯಾ ಇವಳಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ್ತ ಪಟ್ಟಿರುತಾಳೆ. ಮತ್ತು ಉಳಿದವರಾದ ಭದ್ದು ತಂದೆ ಫರತಾಳ. ಸರಿತಾ. ಹಾಗೂ ಜ್ಯೋತಿ. ಇವರೇಲ್ಲರಿಗೆ ಸಾದಾಗಾಯವಾಗಿರುತ್ತದೆ. ಆಗ ನಾವು ಕುಳಿತಿದ್ದ ಟಾಟಾ ಎ.ಸಿ ನಂ ನೋಡಲಾಗಿ ಕೆಎ-32 ಎ-6825 ನೇದ್ದು ಇದ್ದು ಅಪಘಾತಗೊಳಗಾದ ಲಾರಿ ನಂ ನೋಡಲಾಗಿ ಎಮ್.ಹೆಚ್.-13 ಬಿ-4000 ನೇದ್ದು ಇರುತ್ತದೆ. ಕಾರಣ ನಾವು ಸದರಿ ಟಾಟಾ ಎ.ಸಿಯಲ್ಲಿ ಕೂಳಿತಿದ್ದ ವಾಹನ ನಂ ಕೆಎ-32 ಎ-6825 ನೇದ್ದರ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 01/2012 ಕಲಂ . 279.337.338.304(ಎ) ಐಪಿಸಿ ಸಂಗಡ 187 ಐ.ಎಮ್.ವಿ ಎಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಗುಲಬರ್ಗಾ ಗ್ರಾಮೀಣ ಠಾಣೆ
: ದಿನಾಂಕ 31-12-11 ರಂದು ಸಂಜೆ 5:30 ಗಂಟೆಗೆ ಪಿ.ಎಸ.ಐ ಗ್ರಾಮೀಣ ಠಾಣೆ ರವರು ಪೆಟ್ರೋಲಿಂಗ ಕರ್ತವ್ಯ ಮಾಡುತ್ತಾ ಹೀರಾಪುರ ಕ್ರಾಸ ಹತ್ತಿರ ಹೋದಾಗ ಒಬ್ಬನ್ನು ಸಮವಸ್ತ್ರದಲ್ಲಿದಿದ್ದನ್ನು ನೋಡಿ ಓಡಲು ಪ್ರಾರಂಬಿಸಿದಾಗ ಅತನ ಮೇಲೆ ಸಂಶಯ ಬಂದು ಅವನನ್ನು ಹಿಡಿದುಕೊಂಡು ವಿಚಾರಣೆ ಮಾಡಲಾಗಿ ಸರಿಯಾದ ವಿವರಣೆ ನೀಡದೆ ಇರುವದರಿಂದ ಇತನನ್ನು ಹಾಗೆಯೆ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿ ಅಪರಾದ ಮಾಡಬಹುದು ಅಂತಾ ಖಚಿತ ಪಡಿಸಿಕೊಂಡು ಮುಂಜಾಗ್ರತಾ ಕ್ರಮದ ಅಡಿಯಲ್ಲಿ ಕ್ರಮ ಜರೂಗಿಸಿದ್ದರಿಂದ ಠಾಣೆ ಗುನ್ನೆ ನಂ: 390/2011 ಮುಂಜಾಗ್ರತೆ ಕ್ರಮದ ಅಡಿಯಲ್ಲಿ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.