POLICE BHAVAN KALABURAGI

POLICE BHAVAN KALABURAGI

01 January 2012

GULBARGA DIST REPORTED CRIME


ಜಬರಿ ಸಂಭೋಗ ಮಾಡಿ ಕೊಲೆ:
ಚಿತ್ತಾಪೂರ ಠಾಣೆ:  ದಿನಾಂಕ 31-12-2011 ರಂದು ಮಧ್ಯಾಹ್ನನ ಮನೆಯಿಂದ ಕಟ್ಟಿಗೆ ತರುವ ಕುರಿತು ನಮ್ಮ ಹೊಲಕ್ಕೆ ಒಂಬತ್ತು ಕಮಾನ ಮುಖಾಂತರ ಹೋದಾಗ ಸಂಜೆ 5-30 ಗಂಟೆಯಾದರು ಬರಲಾರದ ಕಾರಣ ನಾನು ನನ್ನ ತಾಯಿಗೆ ಹುಡುಕಾಡಲು 9 ಕಮಾನ ಹತ್ತಿರ ಹೋದಾಗ ಎದುರಿನಿಂದ ಸೇಡಂದ ಶಂಬುಲಿಂಗ ಮತ್ತು ಚಿತ್ತಾಪುರದ ಬಸವನಗರದ ಕಮಲಾಕರ ಇವರು ಬರುತ್ತಿದ್ದು, ಶಂಭುಲಿಂಗನ ತಲೆಯ ಮೆಲೆ ಕಟ್ಟಿಗೆ ಹೊರೆ ಹಾಗು ಕೈಯಲ್ಲಿ ಕೊಡಲಿ ಇದ್ದು , ನಾನು ಕೊಡಲಿಯನ್ನು ನೋಡಿ ಗುರುತಿಸಿ ಅವನಿಗೆ ಇದು ನಮ್ಮ ಕೊಡಲಿ ಇದೆ ನಮ್ಮ ತಾಯಿ ಕಟ್ಟಿಗೆ ತರಲು ತಗೆದುಗೊಂಡು ಹೋಗಿದ್ದು ನಿನ್ನ ಹತ್ತಿರ ಯಾಕೆ ಇದೆ ಅಂತಾ ಕೇಳಿದಾಗ ಈ ಕೊಡಲಿ ನಮ್ಮದು ಇರುತ್ತದೆ ಅಂತಾ ಅಂದು ಇಬ್ಬರು ಕೂಡಿ ಬಸವನಗರ ಕಡೆಗೆ ಹೋದರು, ನಾನು ಮತ್ತು ಇತರರು ಕೂಡಿ ಹುಡುಕಾಡಲಾಗಿ ಎಲ್ಲಿಯೂ ಸಿಕ್ಕಿರಲಿಲ್ಲ ದಿನಾಂಕ 1-1-2012 ರಂದು ಮುಂಜಾನೆ ಹೋಗಿ ಮತ್ತೆ ಹುಡುಕಾಡಲಾಗಿ ಶರಣಪ್ಪ ಅಲ್ಲೂರ ಇವರ ತೊಗರಿ ಕೊಯ್ದ ಹೊಲದಲ್ಲಿ ತನ್ನ ತಾಯಿಯ ಶವ ಬೆತ್ತಲೆಯಾಗಿ ಬಿದ್ದ ಶವ ನೋಡಿದ್ದು, ಅವಳಿಗೆ ಸೇಡಂದ ಶಂಬುಲಿಂಗ ಮತ್ತು ಚಿತ್ತಾಪುರದ ಕಮಲಾಕರ ಇವರುಗಳು ಬಟ್ಟೆ ಬಿಚ್ಚಿ ಬಲತ್ಕಾರ ಸಂಭೋಗ ಮಾಡಿ ಕೊಡಲಿಯಿಂದ ತಲೆಗೆ ಹೊಡೆದು ಭಾರಿ ರಕ್ತ ಗಾಯಪಡಿಸಿ ಕೊಲೆ ಮಾಡಿರುತ್ತಾರೆ ಅವರಿಬ್ಬರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೆಕು ಅಂತ ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಮಗ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 1/2012 ಕಲಂ 302,376 ಸಂಗಡ 34 .ಪಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,


No comments: