POLICE BHAVAN KALABURAGI

POLICE BHAVAN KALABURAGI

04 November 2014

Kalaburagi District Reported Crimes

ಅಪಘಾತ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ಶ್ರೀ ವಿಜಯಾನಂದ ತಂದೆ ಗುಂಡೇರಾವ ಮಾಣಿಕ ಸಾ: ಗೊಳಾ [ಕೆ] ರವರು ದಿನಾಂಕ:22/09/2014 ರಂದು 8.30 ಪಿಎಮ್ ಕ್ಕೆ ಪಿರ್ಯಾದಿಯ ಅಣ್ಣನಾದ ದಯಾನಂದ ಮಾಣಿಕ ಇತನು ಮನೆಯಿಂದ  ಮೊ/ಸೈ ನಂ; ಕೆ.ಎ-32/ಇಎಫ್-9636 ನೇದ್ದರ ಮೇಲೆ ಕೆಲಸದ ನಿಮತ್ಯಾ ಶಹಬಾದಕ್ಕೆ ಹೋಗಿ ಬರುತ್ತೇನೆ ಅಂತಾ ಪಿರ್ಯಾದಿಗೆ ಮತ್ತು ಪಿರ್ಯಾದಿಯ ತಂದೆಗೆ ಹೇಳಿ ಸದರಿ ಮೊ/ಸೈ ನ್ನು ಪಿರ್ಯಾದಿಯ ಅಣ್ಣನ ಮಗನಾದ ಗುರು ಇತನು ಚಲಾಯಿಸಿಕೊಂಡು ಅದರ ಹಿಂದೆ ಪಿರ್ಯಾದಿಯ ಅಣ್ಣ ದಯಾನಂದ ಇತನು ಕುಳಿತಿ ಶಹಾಬಾದ ಕಡೆಗೆ ಹೋದರು. ನಂತರ ಪಿರ್ಯಾದಿಯ ತಂದೆಗೆ ದಯಾನಂದ ಇತನ ಮಗ ಗುರು ಇತನು ಪೊನ ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು ನನ್ನ ತಂದೆ ಕೂಡಿ ಶಹಾಬಾದ ಕಡೆಗೆ ಅಶೊಕ ನಗರದ ಮೊದಲನೆ ಜಂಪಿನಲ್ಲಿ ನನ್ನ ಮೊ/ಸೈ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಸದರಿ ಮೊ/ಸೈ ಸ್ಲೀಪ್ ಬಿದ್ದಿದ್ದರಿಂದ ನನ್ನ ತಂದೆಯ ತಲೆಗೆ ಭಾರಿ ಒಳಪೆಟ್ಟಾಗಿ ರಕ್ತಗಾಯವಾಗಿ ಮೂರ್ಚೇ ಹೋಗಿರುತ್ತಾನೆ.  ಮತ್ತು ನನಗೆ ಅಲಲ್ಲಿ ತರಚಿದ ಗಾಯವಾಗಿರುತ್ತದೆ. ಅಂತಾ ಪಿರ್ಯಾದಿಯ ತಂದೆಗೆ ತಿಳಿದ ಮೇರೆಗೆ ಪಿರ್ಯಾದಿ ಮತ್ತು ಪಿರ್ಯಾದಿ ತಂದೆ ಹಾಗೂ ಇತರರು ಕೂಡಿ ಸದರಿ ಸ್ಥಳಕ್ಕೆ ಹೋಗಿ ನೋಡಿದ್ದು ಸದರಿ ಘಟನೆ ನಿಜವಿದ್ದು ನಂತರ ಗಾಯಾಳು ದಯಾನಂದ ಇತನಿಗೆ ಉಪಚಾರ ಕುರಿತು ಗುಲ್ಬರ್ಗಾ ಮೇಡಿಕೇರ ಆಸ್ಪತ್ರೆಗೆ ಸೇರಿಕೆ ಮಾಡಿ ಹೆಚ್ಚಿನ ಉಪಚಾರ ಕುರಿತು ಸೊಲ್ಲಾಪೂರದ ಗಂಗಾಮಾಯಿ ಆಸ್ಪ್ರೆಗೆ ಸೇರಿಕೆ ಮಾಡಿ ಉಪಚಾರ ಹೊಂದುತ್ತಾ ದಿನಾಂಕ;10/10/2014 ರಂದು 8.00 ಎಎಮ್ ಸುಮಾರಿಗೆ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 03-11-2014 ರಂದು 08-45 ಎ.ಎಮ್ ಕ್ಕೆ ಶ್ರೀ ಶ್ರೀಕಾಂತ ತಂದೆ ಚಂದ್ರಶೇಖರ ನಾಟಿಕಾರ, ಸಾಃ ಪ್ಲಾಟ ನಂ. 77 ತಿಲಕನಗರ ಕುಸನೂರ ರೋಡ ಕಲಬುರ್ಗಿ ರವರ ಅಣ್ಣನಾದ ವಿಜಯಕುಮಾರ ಈತನು ಗುಬ್ಬಿ ಕಾಲೂನಿಯಲ್ಲಿ ಕೆಲಸ ಇರುವುದರಿಂದ ಮನೆಯಲ್ಲಿದ್ದ ತನ್ನ ಮೋಟಾರ ಸೈಕಲ ನಂ. ಕೆ.ಎ 32 ಕ್ಯೂ 1319 ನೇದ್ದನ್ನು ತೆಗೆದುಕೊಂಡು ಗುಬ್ಬಿ ಕಾಲೂನಿ ಕ್ರಾಸ್ ಕಡೆ ಬರುವ ಸಲುವಾಗಿ ತನ್ನ ಬಲಗೈ ತೋರಿಸಿ ಸಾವಕಾಶವಾಗಿ ಮೋಟಾರ ಸೈಕಲ ತಿರುಗಿಸುತ್ತಿರುವಾಗ ಆರೋಪಿ ಅಮೀರ ಹುಸೇನ ತಂದೆ ಅಲ್ತಾಫ ಹುಸೇನ ಈತನು ತನ್ನ ಮೋಟಾರ ಸೈಕಲ ನಂ. ಕೆ.ಎ 32 ಡಬ್ಲು 1746 ನೇದ್ದನ್ನು ಸೇಡಂ ರಿಂಗ ರೋಡ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಇದನ್ನು ನೋಡಿದ ಅಲ್ಲಿಯೇ ಇದ್ದ ರಾಹುಲ ಮತ್ತು ಅಲ್ಲಿದ್ದ ಜನರು ನೋಡಿ ಎಬ್ಬಿಸಿದ್ದು ಅಪಘಾತದಲ್ಲಿ ವಿಜಯಕುಮಾರ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕೊಲೆ ಪ್ರಕರಣ :
ನರೋಣಾ ಠಾಣೆ : ಶ್ರೀ ಮಧುಕರ ತಂದೆ ಶಿವಾಜಿರಾವ ತರಮುಡೆ ಸಾ: ಸಂಗೋಳಗಿ(ಸಿ) ತಾ: ಆಳಂದ ಜಿ: ಕಲಬುರ್ಗಿ ಇವರು ಕಿರಿಯ ಮಗನಾದ ಅನೀಲಕುಮಾರ ತುಮಕೂರಿನ ಸಿದ್ದಗಂಗಾ ಮಠದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು ಇವನು ಕೆಲವೊಂದು ವಿಷಯದಲ್ಲಿ ಫೇಲಾಗಿದ್ದಕ್ಕಾಗಿ ಅಲ್ಲೆ ಅಭ್ಯಾಸ ಮಾಡುತ್ತಾ ಸಾಯಿ ರೆಡಿಮೆಟ್ ಗಾರಮೇಂಟ್ಸಕೆಲಸ ಮಾಡುತ್ತಿದ್ದ ಇವನಿಗೆ ನಮ್ಮ ಗ್ರಾಮದವರೆ ಆದ ಚಂದ್ರಕಾಂತ @ ಕಾಂತಪ್ಪಾ ತಂದೆ ರುಕ್ಮಣ್ಣ ಇವರ ಮಗಳಾದ  ಪಂಚಮ್ಮಾ ಇವಳು ಪ್ರತಿಸುತ್ತಿದ್ದು ಅವರ ಮನೆಯಲ್ಲಿ ಆಕೆಯನ್ನು ಬೇರೆಯವರೊಂದಿಗೆ ಮದುವೆ ಮಾಡಲು ವಿಚಾರ ಮಾಡುತ್ತಿದ್ದಾಗ ಆಕೆಯು ತಮ್ಮ ಮನೆಯಲ್ಲಿ ಹೇಳೆದ ಕೇಳದೆ ಮಾರ್ಚ ತಿಂಗಳಲ್ಲಿ ನನ್ನ ಕಿರಿಯ ಮಗನಾದ ಅನೀಲಕುಮಾರ ಇವನು ತೂಮಕೂರಿನಲ್ಲಿ ಕೆಲಸ ಮಾಡಿಕೊಂಡಿದ್ದು ಪಂಚಮ್ಮಾ ಇವಳು ನೇರವಾಗಿ ತೂಮಕೂರಿಗೆ ಹೋಗಿ ನನ್ನ ಮಗ ಅನೀಲಕುಮಾರನಿಗೆ ತಮ್ಮ ಮನೆಯಲ್ಲಿ ತನಗೆ ಬೇರೆಯವರ ಜೋತೆ ಲಗ್ನ ಮಾಡಿಕೊಡಲು ಮಾತನಾಡುತ್ತಿದ್ದಾರೆ ತಾನು ಅನೀಲಕುಮಾರನಿಗೆ ಪ್ರೀತಿಸುತ್ತಿದ್ದ ಕಾರಣ ಮನೆಯವರಿಗೆ ಯಾರಿಗೂ ಹೇಳದೆ ಬಂದಿರುವದಾಗಿ ಹೇಳಿ ನನ್ನ ಮಗ ಅನೀಲಕುಮಾರನೊಂದಿಗೆ ತೂಕಮೂರ ಸಮೀಪದಲ್ಲಿಯ ಗೌರವ್ವನ ಹಳ್ಳಿಯ ಆಂಜನೆಯ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡು ಅವನ ಜೋತೆಗೆ ಇರುವ ವಿಷಯ ನನ್ನ ಹಿರಿಯ ಮಗನಾದ ಸುನೀಲಕುಮಾರನಿಗೆ ತಿಳಿಸಿದ್ದು ಪಂಚಮ್ಮನ ತಂದೆಯಾದ ಚಂದ್ರಕಾಂತ ಇವರು ನಮ್ಮ ಮನೆಗೆ ಬಂದು ನನ್ನ ಮಗಳು ಮನೆ ಬಿಟ್ಟು ಓಡಿ ಹೋಗಿದ್ದಾಳೆ ಇವಳು ಅನೀಲಕುಮಾರನ್ನು ಪ್ರೀತಿಸುತ್ತದ್ದಳು ಅಲ್ಲಿಗೆ ಹೋಗಿರಬಹುದು ಅವರ ಪತ್ತೆ ಹಚ್ಚಿ ಎಂದು ನಮಗೆ ಹೇಳಿದ ಆಗ ಪಂಚಮ್ಮಳು ಅನೀಲನ ಹತ್ತಿರ ಇದ್ದ ಸುದ್ದಿ ಅನೀಲನೆ ಫೋನ ಮುಖಾಂತರ ತಿಳಿಸಿರುತ್ತಾನೆ ಅಂತಾ ನಾವು ಅವರಿಗೆ ಹೇಳಿದೆವು. ಅಲ್ಲದೆ ಮರುದಿವಸ ನಾನು ಮತ್ತು ನನ್ನ ಮಗ ಸುನೀಲಕುಮಾರ ಮತ್ತು ನನ್ನ ಹೆಂಡತಿ ತಮ್ಮ ಬಾಬುರಾವ ಹುಡಗಿಯ ಸಹೋದರಮಾವ ನಾಗಣ್ಣ ಜಮಗಿ, ಸಿದ್ದಣ್ಣ ಜಮಗಿ, ಅನೀಲಕುಮಾರನ ಬಳಿ ಹೋಗಿ ಪಂಚಮ್ಮಳಿಗೆ ಮತ್ತು ಅನೀಲಕುಮಾರನಿಗೆ ಬುದ್ದಿವಾದ ಹೇಳಿ ಊರಿಗೆ ಕರೆದುಕೊಂಡು ಬಂದೆವು ಊರಲ್ಲಿ ಪಂಚಾಯಿತಿ ಮಾಡಿ ಹುಡಗಿಯನ್ನು ಅವಳ ತಂದೆ ಸಂಗಡ ಮನೆಗೆ ಕಳುಹಿಸಿದೆವು. ನಮ್ಮ ಹುಡಗನಿಗೆ ಸಹ ಬುದ್ದಿವಾದ ಹೇಳಿ ಪಂಚಮ್ಮಳಿಗೆ ತಂಟೆಗೆ ಹೋಗಬೇಡಾ ಅಂತಾ ಹೇಳಿದೆವು. ಅಂದಿನಿಂದ  ಮೇಲ್ಕಂಡ ಎಲ್ಲರೂ ಅನೀಲಕಮಾರನಿಗೆ ಹೊಡೆಯುತ್ತೆವೆ ಬಡೆಯುತ್ತೆವೆ ಅಂತಾ ಜೀವದ ಭಯ ಹಾಕಿದೇವು ನಂತರ ಚಂದ್ರಕಾಂತ ಮತ್ತು ಆತನ ಸಹೋದರ ಸಂಬಂದಿ ಮಹಾಂತಪ್ಪ  ಬಿರದಾರ ಇವರು ಕೂಡಿ ನನ್ನ ಮಗ ಅವರ ಮನೆ ಮರಿಯಾದೆ ತೆಗೆದಿರುತ್ತಾನೆ ಅವನಿಗೆ ಮುಗಿಸಿಯೆ ಬಿಡುಬೇಕೆಂದು ವಿಷಯದಲ್ಲಿ ನಮೂದಿಸಿದ ಜನರು ದ್ವೇಷ ಸಾಧಿಸುತ್ತಿದ್ದರು ದಿನಾಮಕ: 18/04/2014 ರಂದು ನಾನು ಸಾಯಾಂಕಾಲ ಹೊಲದಿಂದ ಮನೆಗೆ ಬಂದು ಬುತ್ತಿ ತೆಗೆದುಕೊಂಡು ಮರಳಿ ಹೊಲಕ್ಕೆ ಹೋದಾಗ ನನ್ನ ಮಗ ಸುನೀಲ ಕುಮಾರನು ಕಾಣಲಿಲ್ಲಾ ಆಗ ಅನೀಲಕುಮಾರನಿಗೆ ವಿಚಾರಿಸಲು ತಾನು ಇಲ್ಲಯೆ ಹುಣಸಿಗಿಡದ ಕೆಳಗಡೆ ಮಲಗಿದ್ದೆ ಸುನೀಲನು ಎತ್ತುಗಳಿಗೆ ಮೇವು ಹಾಕಲು ಕೊಟ್ಟಿಗೆ ಬಳಿ ಹೋಗಿರಬಹುದು ಅಂತಾ ಹೇಳಿದಾಗ ನಾನು ಮತ್ತು ಅನೀಲಕುಮಾರ ಕೂಡಿ ಎಲ್ಲಾಕಡೆ ಹುಡುಕಾಡಿದರೂ ಸುನೀಲಕುಮಾರ ಇರಲಿಲ್ಲಾ ಅವನ ಫೋನಗೆ ಕಾಲ್ ಮಾಡಿದಾಗ ಅವನ ಫೋನ ಸ್ವಕರಿಸಲಿಲ್ಲಾ ರಾತ್ರಿ 12:00 ಗಂಟೆಯವರೆಗೆ ಫೊನ ಮಾಡಿದರೂ ಯಾರು ಫೊನ ಎತ್ತರಲಿಲ್ಲಾ ಮರುದಿವಸ ದಿನಾಂಕ; 19/04/2014 ರಂದು ನಮ್ಮ ಮನೆಯವರೆಲ್ಲರೂ ಕೂಡಿ ಸುನೀಲನಿಗೆ ಹುಡುಕಾಡಿದರೂ ಸಿಗಲಿಲ್ಲಾ ಅಂದು ಮುಂಜಾನೆ ಚಂದ್ರಕಾಂತ @ ಕಾಂತಪ್ಪಾ, ಮಂಜುನಾಥ, ಮಹಾದೇವಪ್ಪಾ, ಸಿದ್ದಣ್ಣನಾಗಣ್ಣ, ಹಾಗೂ ಬಸಲಿಂಗಪ್ಪಾ ಇವರು ಫೋನ ಮಾಡಿ ನನಗೆ ಗುಲಬರ್ಗಾಕ್ಕೆ ತಕ್ಷಣ ಬರಲು ತಿಳಿಸಿದರು. ಆಗ ನಾನು ನಮ್ಮ ಭಾವ ಮೈದುನ ಬಾಬುರಾವ ಸೇರಿ ಗುಲಬಗಾಕ್ಕೆ ಬಂದು ಚಂದ್ರಕಾಂತನ ಮನೆಗೆ ಹೋಗಿ ಭೇಟಿಯಾಗಿ ಯಾಕೆ ಬರಲು ತಿಳಿಸಿದ್ದಿರಿ ಅಂತಾ ಕೇಳಿದೆವು ಅಲ್ಲದೆ ನನ್ನ ಮಗನು ಸುನೀಲಕುಮಾರನು ಕಾಣೆಯಾಗಿದ್ದಾನೆ ಅವನನ್ನು ಹುಡುಕುತ್ತಿದ್ದೆವೆ ಎಂದು ಸಹ ಹೇಳಿದ್ದೆವೆ ಅದಕ್ಕೆ ಅವಳು ತಮ್ಮ ಮಗಳಾದ ಪಂಚಮ್ಮಳಿಗೆ ಡಿ.ಈಡ್ ವಿದ್ಯಾಭ್ಯಾಸಕ್ಕಾಗಿ ಪ್ರವೇಶ ಪಡೆಯುತ್ತಿದ್ದೆವೆ ನಿನ್ನ ಮಗ ಏನಾದರೂ ನನ್ನ ಮಗಳ ತಂಟೆಗೆ ಬಂದರೆ ಅವನಿಗೆ ಒಂದು ಗತೀ ಕಾಣಿಸುತ್ತೆವೆ ಅಂತಾ ಹೇಳಿದರು. ಆಗ ನಾನು ಮತ್ತು ಮಕ್ಕಳು ಕೂಡಿ ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತವೆ ನೀವು ಪದೆ ಪದೆ ಕರೆದು ಜೀವದ ಬೆದರಿಕೆ ಹಾಕಬೇಡಿ ಹಾಗೂ ನಮ್ಮ ಮಕ್ಕಳ ತಂಟೆಗೆ ಬರಬೇಡಿ ಅಂತಾ ಹೇಳಿದೆವು  ನಾವು ಗುಲಬರ್ಗಾದಲ್ಲಿಯೆ ಇದ್ದಾಗ ಚಂದ್ರಕಾಂತನ ಸಂಬಂದಿಕರಾದ ಮಹಾಂತಪ್ಪಾ ಎಂಬುವವನು ನನಗೆ ಫೋನ ಮಾಡಿ ನಮ್ಮ ಹಂಗರಗಿ ಗ್ರಾಮದ ಸಂಬಂದಿಕರಾದ ಮಲ್ಕಪ್ಪಾ ರವರಿಗೆ ಕಟ್ಟಿಗೆಗಳು ಬೇಕಾಗಿವೆ ಅವರು ಊರಿಗೆ ಬಂದಿದ್ದಾರೆ ನಿಮ್ಮ ಹೊಲದಲ್ಲಿರುವ ಗೀಡಗಳು ಮಾರಟಕ್ಕಿವೆ ಅಂತಾ ಕೇಳಿದ್ದೆವೆ. ನಮಗೆ ಗೀಡಗಳು ತೋರಿಸಿ ಅಂತಾ ಕೇಳಿದಾಗ ಅದಕ್ಕೆ ನಾನು ಊರಲ್ಲಿ ಇಲ್ಲಾ ನಮ್ಮ ಸಂಬಂದಿಕರಾದ ರತ್ನಾಕರ್ ಮತ್ತು ನನ್ನ ಮಗ ಊರಲ್ಲಿ ಇರುತ್ತಾರೆ ನೀವು ಅವರನ್ನು ಕರೆದುಕೊಂಡು ಹೋಗಿ ಗೀಡಗಳು ನೋಡಿಕೊಂಡು ಬನ್ನಿ ಅಷ್ಟರಲ್ಲಿ ನಾವು ಗುಲಬರ್ಗಾದಿಂದ ಬರುತ್ತವೆ ಅಂತಾ ಹೇಳಿದ್ದೆವು. ಅಂದೆ ಮದ್ಯಾಹ್ನ ನಾನು ಮತ್ತು ಬಾಬುರಾವ ಊರಿಗೆ ಬಂದು ನನ್ನ ಮಗನಾದ ಅನೀಲಕುಮಾರ ಮತ್ತು ರತ್ನಾಕರ ಇವರಿಗೆ ಗೀಡಗಳು ತೋರಿಸುವದಾಗಿ ಹೇಳಿದಾಗ ಅವರು ನನಗೆ ಹೇಳಿದ್ದೆನೆಂದರೆ ಮಹಾಂತಪ್ಪಾ ಬಿರದಾರ ಮತ್ತು ಮಲ್ಕಪ್ಪಾ ಎಂಬುವವರು ಹೊಲದಲ್ಲಿದ್ದ ಎಲ್ಲಾ ಗೀಡಗಳನ್ನು ನೋಡಿ ಕಾಲೂ ದಾರಿಗಳು ಹೇಗೆ ಬರುತ್ತವೆ ಬಂಡಿದಾರಿಗಳು ಎಲ್ಲಿ ಬರುತ್ತವೆ ಎಂದು ಎಲ್ಲಾ ನೋಡಿ ಕೊನೆಗೆ ನಮಗೆ ಗೀಡಗಳು ಪಸಂದ ಬಂದಿರುವುದಿಲ್ಲಾ ಅಂತಾ ಹೇಳಿ ಹೋಗಿರುತ್ತಾರೆ ಅಂತಾ ತಿಳಿಸಿದರು. ಮರುದಿವಸ ಅಂದರೆ ದಿನಾಂಕ: 20/04/2014 ರಂದು ಸಾಯಾಂಕಾಲ ನಮ್ಮ ಪಕ್ಕದ ಹೊಲದವರಾದ ಅಣ್ಣಪ್ಪಾ ತಂದೆ ಶಿವಪ್ಪಾ ವಾಗ್ದರ್ಗಿ ಇವರು ನಮ್ಮ ಹೊಲಕ್ಕೆ ಬಂದು ತಿಳಿಸಿದ್ದೆನೆಂದರೆ ನನ್ನ ಮಗ ಸುನೀಲಕುಮಾರನ ಶವವು ನಮ್ಮ ಪಕ್ಕದಲ್ಲಿರುವ ಶಾಂತಬಾಯಿ ಬಾಪುರಾವ ತರಮಡೆ ಇವರ ಬಿಳು ಜಮೀನಿನಲ್ಲಿ ಬಿದ್ದಿರುತ್ತದೆ ಎಂದು ತಿಳಿಸಿದನು. ಆಗ ನಾನು ಮತ್ತು ನನ್ನ ಹೆಂಡತಿ ಮಗ ಸುನೀಲಕುಮಾರ ಕೂಡಿ ಅಣ್ಣಪ್ಪನೊಂದಿಗೆ ಅಲ್ಲಿಗೆ ಹೋಗಿ ಶವ ನೋಡಿದಾಗ ಅಲ್ಲಿ ಗೀಡಗಂಟಿಗಳ ಪಕ್ಕದಲ್ಲಿ ನನ್ನ ಮಗ ಸುನೀಲಕುಮಾರ ಶವ ಬಿದ್ದಿದ್ದು ಅದು ಉಬ್ಬಿ ಹೋಗಿತ್ತು ಅಲ್ಲಲ್ಲಿ ಚರ್ಮ ಸುಲಿದಿತ್ತು, ಹೊಟ್ಟೆ ಕರಳು ಹೊರಗೆ ಬಂದಿದ್ದವು ಮತ್ತು ಶವದ ಮುಖ ಹಾಗೂ ಮೈ ನೀಲಿಯಾಗಿತ್ತು. ನಾವು ಫೊಟೊಗಳನ್ನು ತೆಗೆಯಿಸಿ ತಮಗೆ ಕೊಟ್ಟಿರುತ್ತವೆ.  ಆರೋಪಿತರಾದ ಚಂದ್ರಕಾಂತ, ಮಂಜುನಾಥ, ಮಹಾದೇವಪ್ಪಾ, ಸಿದ್ದಾರೂಢ, ನಾಗಣ್ಣ ಜಮಗಾ, ಬಸಲಿಂಗಪ್ಪಾ, ಮಹಾಂತಪ್ಪಾ ಹಾಗೂ ಮಲ್ಕಪ್ಪಾ ಎಲ್ಲರೂ ಕೂಡಿ ನನ್ನ ಮಗ ಸುನಿಲಕುಮಾರನಿಗೆ ಕೊಲೆ ಮಾಡಲು ಸಂಚು ಹಾಕಿ ರಾತ್ರಿ ವೇಳೆಯಲ್ಲಿ ಕೊಲೆ ಮಾಡಲು ಅಪಹರಿಸಿಕೊಂಡು ಹೋಗಿ ಯಾವುದೊ ಸ್ಥಳದಲ್ಲಿ ಕೊಲೆ ಮಾಡಿ ಗೀಡಗಳನ್ನು ಖರಿದಿಸುವ ನೆಪದಲ್ಲಿ ನನ್ನ ಅಕ್ಕಪಕ್ಕದ ಸ್ಥಳಗಳನ್ನು ನೋಡಿ ಹೋಗಿದ್ದು ಅದೇ ರೀತಿ ಎಲ್ಲರೂ ಕೂಡಿ ನನ್ನ ಸುನೀಲಕುಮಾರನಿಗೆ ಎಲ್ಲಿಯೋ ಕೊಲೆ ಮಾಡಿ ಹೆಣವನ್ನು ತಂದು ನಮ್ಮ ಹೊಲದ ಪಕ್ಕದಲ್ಲಿ ಬಿಸಾಕಿ ಹೋಗಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.