POLICE BHAVAN KALABURAGI

POLICE BHAVAN KALABURAGI

23 March 2014

Gulbarga District Reported Crimes

ಜಾತಿ ನಿಂದನೆ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀಮತಿ ಉಮಾಬಾಯಿ ಗಂಡ ನಾಗೇಂದ್ರ ಗಾಯಕವಾಡ ಸಾ: ಕಿಣ್ಣಿ ಅಬ್ಬಾಸ ತಾ: ಆಳಂದ ಇವರು ದಿನಾಂಕ:21-03-2014 ರಂದು 02;30 ಪಿ.ಎಂಕ್ಕೆ ತನ್ನ ಮೊಮ್ಮಗಳಾದ ಕುಶಾ ಇವಳು ಬಾಯಿಗೆ ಖಾರಾ ಹತ್ತಿದೆ ಅಂತಾ ಅಳುತ್ತಾ ಮನೆಗೆ ಬಂದಾಗ ತನ್ನ ಮೊಮ್ಮಗಳು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಾಡಿದ ಬಿಸಿ ಊಟ ಮಾಡಿ ಅಡುಗೆಯಲ್ಲಿನ ಸಾಂಬರದಲ್ಲಿ  ಖಾರಾ ಜಾಸ್ತಿಯಾಗಿ ಬಾಯಿಗೆ  ಖಾರ ಹತ್ತಿದರಿಂದ ನಾನು 02;30 ಪಿ.ಎಂಕ್ಕೆ ಸದರಿ ಸರಕಾರಿ ಶಾಲೆಯ ಆವರಣದಲ್ಲಿ ಹೋಗಿ ಶಾಲೆಯಲ್ಲಿ ಅಡುಗೆ ಮಾಡುವ ಪುತಳಾಬಾಯಿ ಗಂಡ ಶಂಕರ ಇಂಡೆ ಸಾ: ಕಿಣ್ಣಿ ಅಬ್ಬಾಸ ಇವಳಿಗೆ ನೀವು ಅಡುಗೆ ಸಾಂಬಾರನಲ್ಲಿ ಖಾರಾ ಕಡಿಮೆ ಹಾಕಬೇಕು ನನ್ನ ಮೊಮ್ಮಗಳು ಕುಶಾ ಇವಳು ಬಾಯಿಯಲ್ಲಿ  ಖಾರಾ ಹೆಚ್ಚಿಗೆ ಆಗಿದೆ ಎಂದು ಅಳುತ್ತಾ ಮನೆಗೆ ಬಂದಿರುತ್ತಾಳೆ ಎಂದು ಕೇಳಿದಕ್ಕೆ ಸದರಿ ಪುತಳಾಬಾಯಿ ಇಂಡೆ ಇವಳು ನನಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿ  ನಾವು ಅಡುಗೆಯಲ್ಲಿ ಖಾರಾ ಸರಿಯಾಗಿ ಹಾಕುತ್ತೇವೆ. ಶಾಲೆಯ ತನಕ ಬಂದು ಕೇಳತಿ ಅಂತಾ ಅಂದು ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದು ತಲೆಯಲ್ಲಿ ಕೂದಲು ಹಿಡಿದು ಜಗ್ಗಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಹರಣ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಸ್ತೇಷನ ಬಜಾರ ಠಾಣೆ : ಶ್ರೀಮತಿ ಸುಸಲಾಬಾಯಿ ಗಂಡ ಅರ್ಜುನ ಹತಗುಂದಿ ಸಾ: ದತ್ತ ನಗರ ಗುಲಬರ್ಗಾ ಇವರು ಈಗ ಸುಮಾರು ಎರಡುವರೆ ವರ್ಷ ಹಿಂದೆ ನಮ್ಮ ಪರಿಚಯವಿರುವ ಶಿವಲಿಂಗಪ್ಪಾ ಬೆಂಗಳೂರ ಇವರಲ್ಲಿ ನನ್ನ ಅಡಚಣೆ ಸಲುವಾಗಿ 2,00,000/- ರೂ ತೆಗೆದುಕೊಂಡಿದ್ದು ಅದರಲ್ಲಿ ಸ್ವಲ್ಪ ಹಣ ಕೊಟ್ಟಿದ್ದು ಇನ್ನೂ ಹಣ ಕೊಡುವುದು ಇದೆ. ಹೀಗಿರುವಾಗ ದಿನಾಂಕ 20/03/2014 ರಂದು 11:00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಪರಿಚಯದವನಾದ ಕೀರಣ ಇವನ ಮೋಟಾರ ಸೈಕಲ ಮೇಲೆ ರಾಮ ಮಂದಿರ ಕಡೆಯಿಂದ ಮೋಹನ ಲಾಡ್ಜ ಕಡೆಗೆ ಬುರುವಾಗ ಪಿ&ಟಿ ಕ್ರಾಸ್ ಹತ್ತಿರ ಶಿವಲಿಂಗಪ್ಪಾ ಬೆಂಗಳೂರ ಇವರ ನನಗೆ ಕೂಗಿದರು ಆಗ ಕೀರಣ ಇವನು ಮೋಟಾರ ಸೈಕಲ ನಿಲ್ಲಿಸಿದನು. ಆಗ ಸದರಿ ಶಿವಲಿಂಗಪ್ಪಾ ಮತ್ತು ಅವನ ಹೆಂಡತಿ ನಾಗರತ್ನ ಕೂಡಿ ನನಗೆ ಕೊಡಬೇಕಾದ ಹಣ ಕೊಡು ಅಂತಾ ಹೇಳಿ ನಾಗರತ್ನ ಇವಳು ಸೀರೆ ಹಿಡಿದು ಜಬರದಸ್ತಿನಿಂದ ಎಳೆದಿದ್ದರಿಂದ ನನ್ನ ಮೈ ಮೇಲಿನ ಸೀರೆ ಬಿಚ್ಚಿತು ಆಗ ನಾಗರತ್ನ ಇವಳು ಸೀರೆ ಕೊಟ್ಟಿದ್ದು ಆಗ ಸೀರೆ ಉಟ್ಟಿಕೊಂಡು ನಂತರ ನನಗೆ ಜಬರದಸ್ತಿನಿಂದ ಯಾವುದೊ ಅಟೋದಲ್ಲಿ ಕುಡಿಸಿಕೊಂಡು ಕೌಶಿಕ ಲಾಡ್ಜನಲ್ಲಿ ಯಾವುದೊ ಒಂದು ರೂಮಿನಲ್ಲಿ ಒಯ್ದಿಟ್ಟನು. ಆಗ ಸದರಿ ಶಿವಲಿಂಗಪ್ಪಾ ಇವನು ಕೊಡಬೇಕಾದ ಹಣ ಕೊಡುತ್ತಿಲ್ಲಾ ರಂಡಿ, ಭೋಸಡಿ ಅಂತಾ ಬೈದು ಕೈಯಿಂದ ಮುಖದ ಮೇಲೆ ಹಾಗು ತಲೆಯ ಮೇಲೆ ಹೊಡೆದನು ಮತ್ತು ಕಾಲಿನಿಂದ ಬಲಗೈ ರಟ್ಟೆಗೆ ಒದ್ದನು. ಆ ದಿವಸ ರಾತ್ರಿ ನಾನು ಮತ್ತು ಶಿವಲಿಂಗಪ್ಪನ ಹೆಂಡತಿ ಮತ್ತು ಶಿವಲಿಂಗಪ್ಪಾ ಎಲ್ಲರೂ ಒಂದೇ ರೂಮಿನಲ್ಲಿ ಇದ್ದೆವು. ಮರುದಿವಸ ದಿನಾಂಕ 21/03/2014 ರಂದು 02:00 ಗಂಟೆ ಸುಮಾರಿಗೆ ಕಬಿನಾ ಲಾಡ್ಜಗೆ ಹೋಗಿ ಅಲ್ಲಿಯೆ ಉಳಿದುಕೊಂಡೆವು. ನಂತರ ಅರ್ಜುನ ಹತಗುಂದಿ ಇವನು ನಿನಗೆ ತೊಂದರೆ ಕೊಡು ಅಂತಾ ಹೇಳಿದ್ದರಿಂದ ನಾವು ನಿನಗೆ ಜಬರದಸ್ತಿನಿಂದ ಕರೆದುಕೊಂಡು ಬಂದಿದ್ದೆವೆ ಅಂತಾ ಹೇಳಿ ಕೈಯಿಂದ ಮತ್ತೆ ತಲೆಗೆ ಹೊಡೆದಿರುತ್ತಾನೆ ಮತ್ತು ನೀನು ಹಣ ಕೊಡದೆ ಇದ್ದರೆ ನಿನಗೆ ಮತ್ತು ನಿಮ್ಮ ಮಕ್ಕಳಿಗೂ ಸಹ ಬೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಡಾ|| ರಶ್ಮಿ ಗಂಡ ಡಾ|| ಆನಂದ ನಾಗಲಿಕರ ಸಾ : ಎಸ.-2 ಬ್ಯಾಗವಂತಿ ರೆಸಿಡೆನ್ಸಿ ಸಂಗಮೇಶ್ವರ ಕಾಲೋನಿ ಗುಲಬರ್ಗಾ ಇವರು  ಬೇಸಿಗೆ ರಜೆಯಿದ್ದ ಪ್ರಯುಕ್ತ ನನ್ನ ಮಕ್ಕಳೊಂದಿಗೆ ತವರು ಮನೆ ಬಳ್ಳಾರಿಗೆ ಹೋಗಿದೆ.  ನಿನ್ನೆ ದಿನಾಂಕ 21 ಮಾರ್ಚ 2014 ರಂದು ಗುಲಬರ್ಗಾಕ್ಕೆ ಮರಳಿ ಬರುವಾಗ ನನ್ನ ಮೈಮೆಲೆ ಇದ್ದ ಬಂಗಾರದ ಒಡವೆಗಳನ್ನು ವೇನೆಟಿ ಬ್ಯಾಗಿನಲ್ಲಿ ಹಾಕಿದ್ದು ಮತ್ತು ಲಗೇಜ ಬ್ಯಾಗದೊಂದಿಗೆ ರಾತ್ರಿ 9-30 ಗಂಟೆ ಸುಮಾರಿಗೆ ರಿಸರ್ವೇಶನ ಟಿಕೇಟ ತೆಗೆಸಿಕೊಂಡು ಬಳ್ಳಾರಿಯಿಂದ ಸುಹಾಸ ಬಸ್ಸ ಸಂಖ್ಯೆ:ಕೆಎ-32 ಎಪ್-1809 ರಲ್ಲಿ ಪ್ರಯಾಣ ಮಾಡುವಾಗ ವೆನೇಟ ಬ್ಯಾಗ ಮತ್ತು ಲಗೇಜ ಬ್ಯಾಗಯನ್ನು ಶೀಟ ಕಾಲ ಕೆಳಗಡೆ ಇಟ್ಟಿದೆ.  ಬೆಳಗ್ಗೆ  ಗುಲಬರ್ಗಾಕ್ಕೆ ಬಂದು ಇಳಿದಿದ್ದು.  ನನ್ನ ಗಂಡ ಆನಂದ ರವರ ಕಾರ ತೆಗೆದುಕೊಂಡು ಬಂದಿದ್ದು.  ಮನೆಗೆ ಹೋಗಿ ವೇನೆಟಿ ಬ್ಯಾಗನಲ್ಲಿಟ್ಟಿದ ಬಂಗಾರದ ಒಡವೆಗಳನ್ನು ನೋಡಿದಾಗ ಇರಲಿಲ್ಲಾ.  ಬಂಗಾರ ಆಭರಣಗಳು ಒಟ್ಟು  18 ತೊಲೆ ಬಂಗಾರದ ಒಡವೆಗಳು ಅದರ ಕಿಮ್ಮತ್ತು 5,20,000=00 ಇರಬಹುದು.ನಾನು ಬಸ್ಸಿನಲ್ಲಿ ಪ್ರಯಾಣಿಸುವಾಗ ನನ್ನ ಪಕ್ಕದ ಸಿಟ್ಟಿನಲ್ಲಿ ಇಬ್ಬರು ಹೆಂಗಸರು, ಒಬ್ಬ ಗಂಡಸು ಕೆದರಿದ ಕೂದಲುವುಳ್ಳವರು ಕುಳಿತಿದರು. ಅವರ ಹಿಂದಿನ ಸಿಟಿನಲ್ಲಿ ಇಬ್ಬರು 25-35 ವಯಸ್ಸಿನವರು ಬಳ್ಳಾರಿಯಿಂದ ಗುಲಬರ್ಗಾಕ್ಕೆ ಟೀಕೆಟ ತೆಗೆಸಿದ್ದು ನಡುವೆ ಲಿಂಗಸೂರಿನಲ್ಲಿ ಇಳಿದಿರುತ್ತಾರೆ. ಅವರ ನನ್ನ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿರಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 22-03-2014 ರಂದು 1400 ಗಂಟೆಗೆ ಜವಳಿ (ಡಿ) ಗ್ರಾಮದ ಹುನುಮಾನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ ಸಾಹೇಬರು ಹಾಗೂ ಠಾಣೆಯ ಸಿಬ್ಬಂಧಿ ಮತ್ತು ಪಂಚರೊಂದಿಗೆ ಜವಳಿ (ಡಿ) ಗ್ರಾಮಕ್ಕೆ ಹೋಗಿದ್ದು ಆ ವೇಳೆಗೆ ಮಾನ್ಯ ಕೆ.ಎಸ್. ಹಟ್ಟಿ ಸಿಪಿಐ ಆಳಂದ ರವರು ಸಹ ಅಲ್ಲಿಗೆ ಬಂದಿದ್ದು ಅವರ ನೇತೃತ್ವದಲ್ಲಿ ಗ್ರಾಮದ ಹನುಮಾನ ದೇವರ ಗುಡಿಯ ಕಟ್ಟೆಯ ಮರೆಯಾಗಿ ನಿಂತು ನೋಡಲಾಗಿ 05 ಜನ ವ್ಯಕ್ತಿಗಳು ಹನುಮಾನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 1430 ಗಂಟೆಗೆ ಪಂಚರ ಸಮಕ್ಷಮದಲ್ಲಿ ಸಿಪಿಐ ಸಾಹೇಬರುಪಿ.ಎಸ್.ಐ ಸಾಹೇಬರು ಹಾಗೂ ಸಿಬ್ಬಂಧಿ ಜನರು ದಾಳಿ ಮಾಡಿ 1. ಸಿದ್ರಾಮಯ್ಯ ತಂದೆ ಮಲ್ಲಯ್ಯ ಹಿರೇಮಠ, 2. ಮಲ್ಲಪ್ಪ ತಂದೆ ಮೈಲಾರಿ ಗೌರವಗೋಳ 3. ಸುರೇಶ ತಂದೆ ಭೀಮರಾವ ಶಿರವಾಳ 4.  ಶ್ರೀಶೈಲ ತಂದೆ ಬಸವರಾಜ ಉಡಗಿ 5.  ಗುರುಶರಣ ತಂದೆ ದತ್ತಪ್ಪ ಕೊಡ್ಲ ಹಂಗರಗಾ, ಸಾ|| ಎಲ್ಲರೂ ಜವಳಿ(ಡಿ) ರವರನ್ನು ಹಿಡಿದು ಸದರಿಯವರಿಂದ ಒಟ್ಟು 2330/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 22-03-2014 ರಂದು 1130 ಗಂಟೆಗೆ ದೇವಂತಗಿ ಗ್ರಾಮದ ಗುಂಡೇರಾವ ಪೊಲೀಸ ಪಾಟೀಲ ಇವರ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಬೇವಿನ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ ಸಾಹೇಬರು ಹಾಗೂ ಠಾಣೆಯ ಸಿಬ್ಬಂಧಿಯವರು ಮತ್ತು ಪಂಚರೊಂದಿಗೆ  ದೇವಂತಗಿ ಗ್ರಾಮಕ್ಕೆ ಹೋಗಿದ್ದು ಆ ವೇಳೆಗೆ ಮಾನ್ಯ ಕೆ.ಎಸ್. ಹಟ್ಟಿ ಸಿಪಿಐ ಆಳಂದ ರವರು ಸಹ ಅಲ್ಲಿಗೆ ಬಂದಿದ್ದು ಅವರ ನೇತೃತ್ವದಲ್ಲಿ ಗ್ರಾಮದ ಗುಂಡೇರಾವ ಪೊಲೀಸ ಪಾಟೀಲ ಇವರ ಮನೆಯ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ 04 ಜನ ವ್ಯಕ್ತಿಗಳು ಗುಂಡೇರಾವ ಪೊಲೀಸ ಪಾಟೀಲ ಇವರ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಬೇವಿನ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 1. ಗುಂಡೇರಾವ ತಂದೆ ಅಮೃತರಾವ ಪೊಲೀಸ ಪಾಟೀಲ 2.ಪರಮೇಶ್ವರ ತಂದೆ ಪಂಡೀತರಾವ ಮಾಲಿಪಾಟೀಲ 3. ಗುಂಡೇರಾವ ತಂದೆ ಬಲವಂತಪ್ಪ ಮೂಲಗೆ 4. ಬೀರಪ್ಪ ತಂದೆ ಮೈಲಾರಿ ಅಂಕಲಗಿ ಸಾ|| ಎಲ್ಲರೂ ದೇವಂತಗಿ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಒಟ್ಟು 15110/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.