POLICE BHAVAN KALABURAGI

POLICE BHAVAN KALABURAGI

11 April 2015

Kalaburagi District Reported Crimes

ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಅರವಿಂದ ತಂದೆ ಅರ್ಜುನ ಹಾದಿಮನಿ ಸಾ:ಬೋರಾಬಾಯಿ ನಗರ ಬ್ರಹ್ಮಪೂರ ಕಲಬುರಗಿ ಇವರು  ದಿನಾಂಕ:10/04/2015 ರಂದು ಬೆಳಗ್ಗೆ ಅಣ್ಣನಿಗೆ ರೊಟ್ಟಿ ಕೊಟ್ಟು ಮನೆಗೆ ಬರುತ್ತಿರುವಾಗ ಕಲ್ಯಾಣಿ ಪೆಟ್ರೋಲ ಬಂಕ ಹತ್ತಿರ ವಿರೇಶ ಮತ್ತು ಬನ್ನಿ ಎಂಬುವರು ಮೋಟಾರ ಸೈಕಲ ಮೇಲೆ ಬಂದು ನಮ್ಮ ಮೋಟಾರ ಸೈಕಲ ಮೇಲೆ ಕೂಡು ಅಲ್ಲಿಯವರೆಗೆ ಒಯ್ದು ಬಿಡುತ್ತೇವೆ ಅಂತಾ ನನ್ನನ್ನು ಕೂಡಿಸಿಕೊಂಡು ರಾಮಮಂದಿರ ಹತ್ತಿರ ಒಯ್ದು ಕೆಳಗೆ ಕೆಡವಿ ಭೋಸಡಿ ಮಗನೆ ನಿನ್ನ ಸೊಕ್ಕು ಬಹಳ ಆಗಿದೆ ವಿರೇಶ ಮತ್ತು ಬನ್ನಿ ಇವರು ಕೈಯಿಂದ ಹೊಡೆದು ಕಾಲಿನಿಂದ ಒದೆ ಹತ್ತಿದರು ವಿಷ್ಣು ಎಂಬಾತನು ಒಂದು ರಾಡ ತಂದು ರಾಡಿನಿಂದ ನನ್ನ ತಲೆಯ ಹಿಂಭಾಗದಲ್ಲಿ ಹೊಡೆದನು. ಸಾಗರ ಇತನು ಬಡಿಗೆಯಿಂದ ಎಡಗಾಲ ಕಪಗಂಡ ಮೇಲೆ ಬೆನ್ನಿನ ಮೇಲೆ ಹೊಡೆಹತ್ತಿದನು ಆಗ ಯಾರೋ ಇಬ್ಬರೂ ಬಂದು ನನಗೆ ಬಿಡಿಸಿ ಕೊಂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಳಖೇಡ ಠಾಣೆ : ಶ್ರೀಮತಿ ಜಮುನಾಬಾಯಿ ಗಂಡ ಸೋಮು ರಾಠೋಡ ಸಾ:ವಿದ್ಯಾನಗರ ಸೇಡಂ ಇವರ ಗಂಡ ದಿನಾಂಕ 09-04-2015 ರಂದು ರಾತ್ರಿ 10-00 ಗಂಟೆಗೆ ನನ್ನ ಗಂಡ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಬಂದ ನಂತರ ಲಾಡ್ಲಾಪುರ ಗ್ರಾಮಕ್ಕೆ ಜಾತ್ರೆ ಪ್ರಯುಕ್ತ ಹೋಗಿ ಬರುತ್ತೇನೆ. ಅಂತಾ ಮೋಟಾರ ಸೈಕಲ ನಂಬರ ಕೆಎ-32ಇಬಿ-8346 ನೇದ್ದರ ಮೇಲೆ ನನ್ನ ಗಂಡ ಮತ್ತು ನನ್ನ ಅಕ್ಕನ ಮಗನಾದ ಪ್ರದೀಪ ತಂದೆ ಚಂದರ ರಾಠೋಡ ಇಬ್ಬರು ಕೂಡಿಕೊಂಡು ಮನೆಯಿಂದ ಹೋದರು. ನಂತರ ರಾತ್ರಿ 11-30 ಗಂಟೆಯ ಸುಮಾರಿಗೆ ನನ್ನ ಅಕ್ಕನ ಮಗನಾದ ಪ್ರದೀಪ ರಾಠೋಡ ಇವನು ಫೋನ ಮಾಡಿ ತಿಳಿಸಿದ್ದೇನೆಂದರೆ ಲಾಡ್ಲಾಪುರ ಜಾತ್ರೆಗೆ ಮೋಟಾರ ಸೈಕಲ ಮೇಲೆ ಹೋಗುತ್ತಿರುವಾಗ ಮಳಖೇಡ ಗ್ರಾಮ ದಾಟಿ ಚಿತ್ತಾಪುರ ರೋಡಿನ ಮೇಲೆ ರಸ್ತೆಯ ಬ್ರಿಜ್ ಕಾಮಗಾರಿ ಹತ್ತಿರ ಹೋಗುತ್ತಿರುವಾಗ ಎದುರಿನಿಂದ ಒಂದು ಮೋಟಾರ ಸೈಕಲ ನಂಬರ ಕೆಎ-32 ವೈ-0584 ನೇದ್ದರ ಚಾಲಕ ಅತಿವೇಗದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಎದುರುಗಡೆಯಿಂದ ಬಂದು ನಮ್ಮ ಮೊಟಾರ ಸೈಕಲಗೆ ಡಿಕ್ಕಿಹೊಡೆದು ರಸ್ತೆ ಅಪಘಾತಪಡಿಸಿದಾಗ ನಾವಿಬ್ಬರು ರೋಡಿನ ಮೇಲೆ ಬಿದ್ದಾಗ ನನಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮತ್ತು ಒಳಪೆಟ್ಟಾಗಿದ್ದು, ಮತ್ತು ಮೋಟಾರ ಸೈಕಲ ನಡೆಸುತ್ತಿದ್ದ ನನ್ನ ಕಾಕಾ ಸೋಮು ರಾಠೋಡ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ ಕಿವಿಯಿಂದ ಮತ್ತು ಬಾಯಿಯಿಂದ ರಕ್ತ ಬಂದು ನಾಲಿಗೆ ಕಚ್ಚಿರುತ್ತದೆ ಅಂತಾ ತಿಳಿಸಿ ಮಳಖೇಡ ಆಸ್ಪತ್ರೆಗೆ ಅಂಬುಲೆನ್ಸನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಬಗ್ಗೆ ತಿಳಿಸಿದಾಗ ನಾನು ಹಾಗು ನನ್ನ ಅಕ್ಕನ ಗಂಡ ಚಂದರ ನನ್ನ ಅಕ್ಕ ಅನಿತಾ ಇಬ್ಬರೂ ಕೂಡಿ ಮಳಖೇಡ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಮಳಖೇಢ ಆಸ್ಪತ್ರೆಯಿಂದ ನನ್ನ ಗಂಡನಿಗೆ ಗುಲಬರ್ಗಾ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಉಪಚಾರ ಕುರಿತು ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.