POLICE BHAVAN KALABURAGI

POLICE BHAVAN KALABURAGI

16 April 2016

Kalaburagi District Reported Crimes

ಕೊಲೆ ಪ್ರಕರಣ :
ಚಿತ್ತಾಪೂರ ಠಾಣೆ : ಶ್ರೀಮತಿ ಗೋದಾವರಿ ಗಂಡ ಸಾಬಣ್ಣ ಜಡಿ ಸಾ:ಢೋಣಗಾಂವ್ ತಾ:ಚಿತ್ತಾಪೂರ ಜಿ:ಕಲಬುರಗಿ ಇವರ ನಮ್ಮೂರ ಮಾರ್ತಂಡಪ್ಪ ತಂದೆ ಮಲ್ಲಪ್ಪ ರಟಕಲ ಹಾಗೂ ರಾಜಪ್ಪ ತಂದೆ ಮಲ್ಲಪ್ಪ ಜಡಿ ನನ್ನ ಗಂಡ ಸಾಬಣ್ಣನ ಗೆಳೆತನ ಇತ್ತು. ಆಗಾಗ ಇವರೆಲ್ಲರು ಕೂಡಿಯೆ ಇರುತ್ತಿದ್ದರು. ಈಗ ಸುಮಾರು 15 ದಿವಸಗಳ ಹಿಂದೆ ಸದರ ಮಾರ್ತಂಡಪ್ಪ ರಟಕಲ ಮತ್ತು ರಾಜಪ್ಪ ಜಡಿ ಇಬ್ಬರು ನಮ್ಮ ಮನೆಗೆ ಬಂದು ನನ್ನ ಗಂಡನಿಗೆ ರೊಕ್ಕ ಯಾವಾಗ ಕೊಡುತ್ತಲೆ ಅಂತ ಬಾಯಿ ಮಾಡುತ್ತಿದ್ದರು. ಆಗ ನಾನು ನನ್ನ ಗಂಡನಿಗೆ ಕೇಳಿದಾಗ, ನನ್ನ ಗಂಡ ಸಾಬಣ್ಣ ನಾನು ಅವರ ಹತ್ತಿರ 20 ಸಾವೀರ ರೂಪಾಯಿ ತೆಗೆದುಕೊಂಡಿದ್ದೇನೆ. ಅದಕ್ಕೆ ಅವರು ಕೇಳುತ್ತಿದ್ದಾರೆ, ನಿನಗೇನು ಮಾಡುವುದಿದೇ ಸುಮ್ಮನೀರು ಅಂತ ಅಂದನು ನಾನು ಸುಮ್ಮನಾದೆ. ದಿನಾಂಕ:-09/04/2016 ರಂದು ರಾತ್ರಿ 7 ಗಂಟೆ ಸುಮಾರಿಗೆ ನಮ್ಮ ಮನೆ ಕಟ್ಟೆಯ ಮೇಲೆ ನಾನು ಮತ್ತು ನನ್ನ ಗಂಡ ನಾದ ಸಾಬಣ್ಣ ತಂದೆ ಸುಬಣ್ಣ ಜಡಿ ಇಬ್ಬರು ಮಾತಾಡುತ್ತಾ ಕುಳಿತ್ತಿದ್ದಾಗ. ನನ್ನ  ಗಂಡನ ಗೆಳೆಯರಾದ 1] ಮಾರ್ತಂಡಪ್ಪ ತಂದೆ ಮಲ್ಲಪ್ಪ ರಟಕಲ 2] ರಾಜಪ್ಪ ತಂದೆ ಮಲ್ಲಪ್ಪ ಜಡಿ ಸಾ: ಇಬ್ಬರು ಢೋಣಗಾಂವ್. ಇಬ್ಬರು ನಮ್ಮ ಮನೆಯ ಮುಂದೆ ಸ್ವಲ್ಪ ದೂರದಲ್ಲಿ ನಿಂತು ಮಾರ್ತಂಡಪ್ಪ ಈತನು ನನ್ನ ಗಂಡನಿಗೆ ಕೈ ಸನ್ನೆ ಮಾಡಿ ಕರೆದನು. ನನ್ನ ಗಂಡನು ಅವನು ಕಡೆಗೆ ಹೊಗುತ್ತಿದ್ದಾಗ. ನಾನು ಅವನಿಗೆ ಊಟ ಮಾಡು ಅಂತ ತಡೆದೆ. ಅದಕ್ಕೆ ಅವನು ನೀನು ಊಟ ಮಾಡಿ ಮಲಗು ನಾನು ಹೊಗಿ ಬರುತ್ತೇನೆ ಅಂತ ಹೇಳಿ ಹೋದನು. ರಾತ್ರಿಯಾದರು ನನ್ನ  ಗಂಡ ಮನೆಗೆ ಬರಲಿಲ್ಲ. ಮರುದಿನ ದಿನಾಂಕ:-10/04/2016 ರಂದು ಮುಂಜಾನೆ 7 ಗಂಟೆ ಸುಮಾರಿಗೆ ನಮ್ಮ ಓಣಿಯ ಜನರೆಲ್ಲರು ಹಳಿಮನಿ  ಮರೆಪ್ಪನ ಮನೆ ಕಪೌಂಡಿಗೆ ಹತ್ತಿ ಒಬ್ಬ ಮನುಷ್ಯ ಸತ್ತು ಬಿದ್ದಾನ ಅಂತ ಓಡುತ್ತಿದ್ದಾಗ, ನಾನು ಸಹ ಅವರೊಂದಿಗೆ ಹೋಗಿ ನೋಡಲಾಗಿ ನನ್ನ ಗಂಡ ಸಾಬಣ್ಣ ತಂದೆ ಸುಬಣ್ಣ ಜಡಿ ಈತನು ಸತ್ತಿದ್ದು ನೋಡಿದೆ. ನಾನು ಗಾಬರಿಯಾಗಿ ಅಳತೊಳಗಿದೆ. ನಂತರ ಮಾರ್ತಂಡಪ್ಪ ತಂದೆ ಮಲ್ಲಪ್ಪ ರಟಕಲ, ಸಾಬಣ್ಣ ತಂದೆ ಬಸಪ್ಪ ಚವನೂರು, ದೇವೀಂದ್ರ ತಂದೆ ಶರಣಪ್ಪ ರಟಕಲ ವರೆಲ್ಲರು ನನ್ನ  ಗಂಡನ ಶವವನ್ನು ಪ್ಲಾಸ್ಟೀಕ ತಾಡಪತ್ರಿಯಲ್ಲಿ ನನ್ನ  ಮನೆಯ ಮುಂದೆ ತಂದು ಹಾಕಿದರು. ನನ್ನ ಗಂಡನ ಶವವನ್ನು ನೋಡಲಾಗಿ. ತಲೆಯ ಹಿಂದೆ ರಕ್ತ ಬಂದಿದ್ದು. ಮತ್ತು ಹಳೆಣೆ ಕಚ್ಚಿನ ಗಾಯ ಬಿದ್ದಿದ್ದು. ಕುತ್ತಿಗಿಗೆ ಎದುರುಗಡೆ ಕಂದುಗಟ್ಟಿದ ಗಾಯ ನೋಡಿದೆ. ಏನಾಗಿದೆ ನನ್ನ ಗಂಡನಿಗೆ ಅಂತ ಅಳುತ್ತಿದ್ದಾಗ ಬಿಸಿಲು ಜಾಸ್ತಿ ಆದ ಕೊಡದಂಗ ಕಾಣ್ತಾನ ಅದಕ್ಕೆ ಸತ್ತಾನ ಅಂತ ಅನ್ನುತ್ತಿದ್ದರು. ಅದೆ ದಿವಸ ನಮ್ಮ ಹೋಡ ಹೊಲದಲ್ಲಿ ಮಣ್ಣು ಮಾಡಿದರು. ನಂತರ ಊರಲ್ಲಿ ಜನರು ಸಾಬಣ್ಣ ಜಡಿ ಕುಡಿದು ಸತ್ತಿಲ್ಲ. ಅವನಿಗೆ ಕೊಲೆ ಮಾಡಿದ್ದಾರೆ ಅಂತ  ಅಂದಾಡುತ್ತಿದ್ದಾಗ ನಾನು ರಾಜಪ್ಪ ಮತ್ತು ಮರ್ತಾಂಡಪ್ಪನಿಗೆ ನನ್ನ ಗಂಡನಿಗೆ ಏನು ಮಾಡಿದ್ದಿರಿ ಅಂತ ಕೇಳಿದಾಗ ಅವರು ನೀನೆ ನಿನ್ನ ಗಂಡಗ ಹೊಡೆದು ಕೊಲೆ ಮಾಡಿದ್ದಿ ಅಂತ ಕೇಸ ಕೊಡುತ್ತೇವೆ ಸುಮ್ಮನೀರು ಅಂತ ಅಂಜಿಸಿದರು. ನನ್ನ ಗಂಡ ಸಾಬಣ್ಣನಿಗೆ ದಿನಾಂಕ:-09/04/2016 ರಂದು 7 ಪಿ.ಎಮ್. ದಿಂದ ದಿನಾಂಕ:-10/04/2016 ರಂದು 7 .ಎಮ್. ಅವಧಿಯಲ್ಲಿ ನಮ್ಮೂರ ಮಾರ್ತಂಡಪ್ಪ ರಟಕಲ ಹಾಗೂ ರಾಜಪ್ಪ ಜಡಿ ಇವರು ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿತ್ತಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.