POLICE BHAVAN KALABURAGI

POLICE BHAVAN KALABURAGI

15 December 2012

GULBARGA DISTRICT REPORTED CRIME


ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ ಬಸವರಾಜ ತಂದೆ ಚಂದ್ರಕಾಂತ ಪಾಟೀಲ ಸಾ|| ಬೀಜಾಸಪೂರ ತಾ|| ಸುರಪೂರ ಹಾ||ವ|| ಮಹಾಲಕ್ಷ್ಮಿ ಲೇಔಟ ಲಾಲಗೇರಿ ಕ್ರಾಸ ಗುಲಬರ್ಗಾರವರು ದಿನಾಂಕ:13/12/2012 ರಂದು ರಾತ್ರಿ 10 ಗಂಟೆ ಸುಮಾರಿಗೆ ಡ್ರೈವರ ಈರಣ್ಣ ಬೊರಗಿ ರವರು ನನ್ನ ಟವೇರಾ ವಾಹನ ನಂ. ಕೆಎ-32 ಎಂ-4376 ಇಂಜನ ನಂ. 31E22321  ಚೆಸ್ಸಿ ನಂ. MA6AB6G765HJ22699 ನೇದ್ದರಲ್ಲಿ ನನ್ನ ತಾಯಿಯವರಿಗೆ ಸುರಪೂರಕ್ಕೆ ಕರೆದುಕೊಂಡು ಹೋಗಿ ದೇವರ ದರ್ಶನ ಮಾಡಿ ಮರಳಿ ಗುಲಬರ್ಗಾಕ್ಕೆ ಕರೆದುಕೊಂಡು ಮನೆಗೆ ಬಂದಿದ್ದು, ಟವೇರಾ ವಾಹನವನ್ನು ಶಾಂತಿನಗರದ ಮಹೇಶ ಚಿಂಚೋಳಿ ರವರ ಮನೆಯ ಮುಂದೆ ನಿಲ್ಲಿಸಿ ಡ್ರೈವರ ಕಲ್ಯಾಣಿ @ ಕಲ್ಲಪ್ಪ ರವರಿಗೆ ಹೇಳಿ ಊರಿಗೆ ಹೋಗಿರುವಾಗ ಯಾರೋ ಅಪರಿಚಿತ ಕಳ್ಳರು ರಾತ್ರಿ ವೇಳೆಯಲ್ಲಿ ಟವೇರಾ ವಾಹನ ಅ.ಕಿ 4,35,000/- ರೂ. ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.115/2012 ಕಲಂ 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.