POLICE BHAVAN KALABURAGI

POLICE BHAVAN KALABURAGI

19 October 2012

GULBARGA DISTRICT REPORTED CRIME


ಕಳ್ಳತನ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ: ಶ್ರೀ  ಪ್ರವೀ ಕುಲ್ಕರ್ಣಿ ತಂದೆ ಪ್ರಕಾಶ ಕುಲ್ಕರ್ಣಿ  || ವಕೀಲರು ಮತ್ತು ಆಡಳಿತಾಧಿಕಾರಿಗಳು ವಿದ್ಯಾನಿಧಿ ಪ್ರತಿಷ್ಠಾಣ ಚಿಂಚೋಳಿ ಸಾ|| ಸೇಡಂ, ಹಾ|||| ಮನೆ ವೆಂಕಟೇಶ್ವರ ಮಂದಿರ ಹತ್ತಿರ ಬ್ರಾಹ್ಮಣಗಲ್ಲಿ ಚಿಂಚೋಳಿ ರವರು ದಿನಾಂಕ 07-10-2012 ರಿಂದ ರಜೆ ಇರುವದರಿಂದ ಸೇಡಂಗೆ ಹೋಗಿ, ಅಲ್ಲಿಂದ ದಿನಾಂಕ:08-10-2012 ರಿಂದ 17-10-2012 ರವರೆಗೆ ಆರ್.ಎಸ್.ಎಸ್ ಕ್ಯಾಂಪ ಕುರಿತು ಶಾಹಾಬಾದಿಗೆ ಹೋಗಿದ್ದು ಸದರಿ ಕ್ಯಾಂಪನಲ್ಲಿದ್ದಾಗ ಬಾಸ್ಕರ್ ಕುಲ್ಕರ್ಣಿ ಎಂಬುವವರು ದಿನಾಂಕ:12-10-2012 ರಂದು ಮಧ್ಯರಾತ್ರಿ 3-00 ಗಂಟೆಗೆ ತನ್ನ ಮನೆ ಕಳತನವಾಗಿದ್ದ ಬಗ್ಗೆ ತಿಳಿಸಿದ್ದು  ಇಂದು ದಿನಾಂಕ 18-10-2012 ರಂದು ತಾನು ಬಾಡಿಗೆ ಇರುವ ಮನೆಗೆ ಬಂದು ನೋಡಲು ಮನೆ ಬೀಗ ಕಪ್ಪಿ ಒಡೆದು  ಯಾರೋ ಕಳ್ಳರು ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ಒಂದು ತೋಲೆ ಬಂಗಾರದ ಚೈನು ಅ.ಕಿ.32000 ರೂ.ಗಳು ಮತ್ತು ನಗದು ಹಣ 10,000 ಸಾವಿರ ರೂ ಗಳು ಹಿಗೆ ಒಟ್ಟು 42,000/- ಸಾವಿರ ರೂ ಗಳು ದಿನಾಂಕ:11-10-2012  ರಂದು 11-00 ರಾತ್ರಿ ಗಂಟೆಯಿಂದ ಬೆಳಗಿನ ಜಾವ  3-00 ಗಂಟೆಯ  ಒಳಗಿನ  ಅವಧಿಯಲ್ಲಿ  ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:102/2012 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಮಂಗಳಸೂತ್ರ ದೋಚಿದ ಪ್ರಕರಣ:
ಚೌಕ ಪೊಲೀಸ್ ಠಾಣೆ:ಶ್ರೀಮತಿ ಉಮಾದೇವಿ ಗಂಡ ಮೋಹನ ಚಂದ್ರ ಪಾಟೀಲ  ವರು ನಾನು ದಿನಾಂಕಃ 18.10.2012 ರಂದು ರಾತ್ರಿ 8.40 ಗಂಟೆ ಸುಮಾರಿಗೆ ಸಂದಲ ಗಲ್ಲಿಯ ನಮ್ಮ ಮನೆಯಿಂದ ಹಿಂಗುಲಾಂಬಿಕ ದೇವಸ್ಥಾನಕ್ಕೆ ಹೋರಟಾಗ ಗಣೇಶ ಮಂದಿರ ಕಡೆಯಿಂದ ಎರಡು ಜನ ಮೋಟಾರು ಸೈಕಲ ಮೇಲೆ ಬಂದು  ಹಿಂದೆ ಕುಳಿತವನು ಒಮ್ಮೇಲೆ ನನ್ನ ಕೊರಳಿಗೆ ಕೈಹಾಕಿ ಬಂಗಾರದ ತಾಳಿ ಚೈನ್ ನ್ನು ಕಿತ್ತಿಕೊಂಡು ತನ್ನ ಮೊಟಾರ ಸೈಕಲನ್ನು ವೇಗವಾಗಿ ಓಡಿಸಿಕೊಂಡು ನ್ಯಾಷನಲ ಕಾಲೇಜ ಕಡೆ ಹೋಗಿದ್ದು ನನ್ನ  ತಾಳಿ ಚೈನ ಅಂದಾಜು 4 ½  ತೊಲೆ ತೂಕ ಇದ್ದು  ಅದರ ಅಃಕಿಃ 1,30,000-00 ರೂ ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:167/2012 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಚೌಕ ಪೊಲೀಸ್ ಠಾಣೆ:ಶ್ರೀ ರಮೇಶ ತಂದೆ ಭೀಮಶ್ಯಾ ಬೇಲೂರ ವಯಃ30 ವರ್ಷ ಜಾಃ ಲಿಂಗಾಯಿತ ಉಃ ಜೈ ಭವಾನಿ ಟ್ರಾನ್ಸಪೂರ್ಟ ಸಾಃ ದೇವಿ ನಗರ ಗುಲಬರ್ಗಾ ರವರು ನಾನು ದಿನಾಂಕಃ08.10.2012 ರಂದು ನನ್ನ ಲಾರಿ ನಂ ಕೆಎ-32, 6474 ನೇದ್ದು ಲಾರಿ ತಂಗುದಾಣದಲ್ಲಿ ನಿಲ್ಲಿಸಿದ್ದಾಗ ಯಾರೋ ಕಳ್ಳರು ಲಾರಿಯನ್ನು ಕಳ್ಳತನ ಮಾಡಿ ಕೊಂಡು ಹೋಗಿದ್ದರು. ದಿನಾಂಕಃ 11.10.2012 ರಂದು 4-00 ಪಿ.ಎಮ್ ಸುಮಾರಿಗೆ ತಾವೆರಗೇರಾ ಗ್ರಾಮದ ಅಡವಿಯಲ್ಲಿ ಯಾವುದೋ ಒಂದು ಲಾರಿ ಇದೆ ಎಂದು ಮಾಹಿತಿ ಮೇರೆಗೆ ನಾನು ಮತ್ತು ನನ್ನ ಸಂಗಡ ಚಂದ್ರಕಾಂತ, ಸಂತೋಷ ರವರು ಕೊಡಿ ತಾವರಗೇರಾ ಹೋಗಿ ನೋಡಲಾಗಿ ಕೋಠಾರಿ ಎಂಬುವರ ಹೋಲದಲ್ಲಿ ನಮ್ಮ ಲಾರಿಯನ್ನು ನಿಂತಿದ್ದು, ಆದರೆ ಲಾರಿಯ ಆರು ಟೈಯರಗಳು ಸಿದ್ದು, ಮಲ್ಲಿಕಾರ್ಜುನ , ರಮೇಶ ಮತ್ತು ಮಚೇಂದ್ರ ಎಂಬುವವರು ನಮ್ಮ ಲಾರಿಯನ್ನು ಕಳ್ಳತನ ಮಾಡಿಕೊಂಡು ಹೋಗಿ  ತಾವರಗೇರಾ ಸಿಮೇಯಲ್ಲಿ 6 ಟೈಯರಗಳು ಡಿಸ್ಕ ಸಮೇತಾ ಕಳುವು ಮಾಡಿಕೊಂಡು ಹೋಗಿದ್ದು ತಿಳಿದು ಬಂದಿರುತ್ತದೆ. ಕಾರಣ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಜರಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 166/2012 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಗುರುಶಾಂತಪ್ಪಾ ತಂದೆ ಚಂದ್ರಶೇಖರ ಮಾಲಿ ಪಾಟೀಲ    ಸಾ:ಹನುಮಾನ ಗುಡಿ ಹತ್ತಿರ ಬಿದ್ದಾಪೂರ ಕಾಲೋನಿ  ಗುಲಬರ್ಗಾ  ರವರು ನಾನು ದಿನಾಂಕ:18-10-2012 ರಂದು ಸಾಯಂಕಾಲ 5=30 ಗಂಟೆಯ ಸುಮಾರಿಗೆ ನನ್ನ ಮೋಟಾರ ಸೈಕಲ ನಂ: ಕೆಎ-32 ಯು-1474 ನೇದ್ದರ ಮೇಲೆ ನನ್ನ  ಹಿಂದುಗಡೆ ಶ್ರೀದರ ಕುಳಿತುಕೊಂಡಿದ್ದು ಜಗತ ಸರ್ಕಲ ಕಡೆಯಿಂದ ಬಂದು ಮಹಾನಗರ ಪಾಲಿಕೆ ಕಡೆಗೆ ಹೋಗುತ್ತಿರುವಾಗ ಪಟೇಲ್ ಸರ್ಕಲ್ ಕಡೆಯಿಂದ ಬಸ ಬರುವುದನ್ನು ನೋಡಿ  ನಾನು ನನ್ನ ಮೋಟಾರ ಸೈಕಲ ಇಂಡಿಕೇಟರ ಹಾಕಿ ಬಸ ಹೋಗುವರಿಗೆ ನಿಂತಿರುವಾಗ ಮಹೀಂದ್ರ ಗೂಡ್ಸ ನಂಬರ ಕೆಎ-32 ಟಿ ಆರ್- 0937 ನೇದ್ದರ ಚಾಲಕ ರಾಜು ಇತನು ತನ್ನ ವಾಹನವನ್ನು  ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಗೆ ಹಿಂದಿನಿಂದ ಡಿಕ್ಕಿ ಪಡಿಸಿ  ಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 106/2012 ಕಲಂ, 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.