POLICE BHAVAN KALABURAGI

POLICE BHAVAN KALABURAGI

10 April 2012

GULBARGA DIST REPORTED CRIMES

ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:
ಶ್ರೀ ಸೊಮಶೇಖರ ತಂದೆ ದೇವಿಂದ್ರಪ್ಪ ಕೆಲ್ಲೂರ ಸಾಸೊಮನಾಥ ಹಳ್ಳಿ ಹಾವ ಲಕ್ಷ್ಮಿ ಚೌಕ ಜೇವರ್ಗಿರವರು ನನ್ನ ಅಕ್ಕನಾದ ಪಾರ್ವತಿ ಕೋಕಾಟೆ, ಹಾಗೂ ಹಂದನೂರ ಗ್ರಾಮದ ಭಾಗಮ್ಮ ಹೋಸಮನಿ, ಮತ್ತು ಲಕ್ಷ್ಮಿ ತಂದೆ ಬಸವರಾಜ ಜನಿವಾರ ರವರು ದಿನಾಂಕ: 09/04/2012 ರಂದು ಟಂ ಟಂ ವಾಹನ ನಂಬರ ಕೆಎ-32 ಎ-2929 ನೇದ್ದರಲ್ಲಿ ಕೂಡಿಸಿಕೊಂಡು ಪ್ರಕಾಶ ಕೋಕಾಟೆ ಇತನು ಎಸ್.ಎಸ್. ಹಿಪ್ಪರಗಿಯಿಂದ ಹಂದನೂರ ಗ್ರಾಮಕ್ಕೆ ಹೋಗುತ್ತಿರುವಾಗ ಮದ್ಯಾಹ್ನ 3-00 ಗಂಟೆಗೆ ಸುಮರಿಗೆ ಜನಿವಾರ-ಹಂದನೂರ ಗ್ರಾಮದ ರೋಡಿನ ರಾಸಣಗಿ ಕ್ರಾಸ ಸಮೀಪ ರೋಡಿನಲ್ಲಿ ಟಂ ಟಂ ಚಾಲಕ ಪ್ರಕಾಶ ಕೋಕಾಟೆ ಇತನು ತನ್ನ ಟಂಟಂ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ರೋಡಿನಲ್ಲಿ ಒಮ್ಮೇಲೆ ಕಟ್ಟ ಹೊಡೆದ್ದಿದರಿಂದ ಟಂಟಂ ಪಲ್ಟಿಯಾಗಿ ಮೂರು ಜನರಿಗೆ ಭಾರಿ ಮತ್ತು ಸಾದಾ ರಕ್ತ ಮತ್ತು ಗುಪ್ತ ಗಾಯಾಗಳಾಗಿರುತ್ತವೆ. ಗಾಯಾಳುಗಳನ್ನು ಉಪಚಾರ ಕುರಿತು ಅಂಬುಲೇನ್ಸ ವಾಹನದಲ್ಲಿ ಜೇವರ್ಗಿ ಸರಕಾರಿ ಆಸ್ಪತ್ತೆ ಕರೆದುಕೊಂಡು ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಪಾರ್ವತಿ ಇವಳು ಅಪಘಾತದಿಂದ ಆದ ಗಾಯಾದಿಂದ ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:43/2012 ಕಲಂ 279, 337, 338 304 (ಎ) ಐಪಿಸಿ ಸಂಗಡ 187 ಐ.ಎಮ್.ವಿ ಅಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಅಪಘಾತ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:
ಶ್ರೀ ಉಮೇಶ ಸಿಂಗ ತಂದೆ ಗಂಗಾ ಸಿಂಗ ಸಾ ಬಸರಾಲಪುರ ಜಿಲ್ಲಾ ಗೊರಕಪೂರ ರಾಜ್ಯ ಜಾರಖಂಡ ರವರು ನಾನು ದಿನಾಂಕ 09/04/2012 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಎನ್ ಎಸ ಎಲ್ ಸುಗರ ಪ್ಯಾಕ್ಟರಿಯಲ್ಲಿ ಟ್ಯಾಕ್ಟರ ನಂ ಕೆ ಎ 32 ,ಟಿ -1374-1375 ನೇದ್ದರ ಚಾಲಕನಾದ ಬಳಿರಾಮ ತಂದೆ ಅಪ್ಪಣ್ಣಾ ನೊರಟಿ ಇವನು ತನ್ನ ಟ್ಯಾಕ್ಟರನ್ನು ನಿರ್ಲಕ್ಷತನದಿಂದ ಚಲಾಯಿಸಿ ಕೆಲಸ ಮಾಡುತ್ತಿದ್ದ ಗಂಗಾ ತಂದೆ ಸೌದಾಗರ ಇತನಿಗೆ ತಲೆ ಮೇಲೆ ಟ್ಯಾಕ್ಟರ ಹಾಯಿಸಿದ್ದರಿಂದ ಗಂಗಾ ಸೌದಾಗರ ಇತನು ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:28/12 ಕಲಂ 279, 304 ( ಎ) ಐ ಪಿ ಸಿ ಸಂ 187 ಐ ಎಮ ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಕೊಂಡಿರುತ್ತಾರೆ.