POLICE BHAVAN KALABURAGI

POLICE BHAVAN KALABURAGI

25 February 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಆಳಂದ ಠಾಣೆ : ದಿನಾಂಕಃ 24-02-2019 ರಂದು ನನ್ನ ತಾಯಿಯಾದ ಪದ್ಮಾವತಿ ಇವಳು ನಮ್ಮ ಮನೆಯ ಮುಂದಿನ ಅಂಗಳಕ್ಕೆ ಹತ್ತಿಕೊಂಡು ರಸ್ತೆಯ ಪಕ್ಕದಲ್ಲಿ ಕಸ ಗುಡಿಸುತ್ತಿರುವಾಗ ನಮ್ಮೂರಿನ ಶ್ರೀಶೈಲ ತಂದೆ ಶರಣಪ್ಪಾ ಪಾಟೀಲ ಇವರ ಇಚರ್ ವಾಹನ ನಂಬರ ಎಮ್.ಹೆಚ್-13 ಕೆ-4893 ನೇದ್ದನ್ನು ನಮ್ಮೂರಿನ ವಿಜಯಕುಮಾರ@ಬಾಳು ತಂದೆ ಶ್ರೀಶೈಲ ಪಾಟೀಲ ಇತನು ಸದರಿ ಇಚರ್ ವಾಹನವನ್ನು ನಮ್ಮೂರಿನ ಸರ್ಕಾರಿ ಬಾವಿಯಿಂದ ಹಿಂದಿನಿಂದ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮನೆಯ ಮುಂದೆ ಕಸಗುಡಿಸುತ್ತಿರುವ ನನ್ನ ತಾಯಿ ಪದ್ಮಾವತಿಯ ತಲೆಗೆ ಡಿಕ್ಕಿಪಡಿಸಿದ್ದು ನನ್ನ ತಾಯಿಯ ಎಡ ಮೇಲಿಕಿಗೆ, ಕಿವಿಯ ಮೇಲೆ ಭಾರಿ ರಕ್ತಗಾಯ ಮತ್ತು ತಲೆಯ ಮೇಲೆ ಭಾರಿ ರಕ್ತಗಾಯ ಮಾಡಿದ್ದು ಆಗ ನಾನು ನೋಡಿ ಚೀರಾಡುವದನ್ನು ನೋಡಿ ಸದರಿ ವಾಹನದ ಚಾಲಕನು ತನ್ನ ವಾಹನ ಸಮೇತ ಓಡಿಹೋಗಿದ್ದು ನಂತರ ನನ್ನ ತಾಯಿಗೆ ಉಪಚಾರ ಕುರಿತು ನಾನು & ನನ್ನ ಮಗ ಚಿದಾನಂದ, ತಮ್ಮ ಜಗನ್ನಾಥ, ಹೆಂಡತಿ ಕಾಶಿಬಾಯಿ ರವರೆಲ್ಲರೂ ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಮರ್ಗಾಕ್ಕೆ ತಗೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾಳೆ. ನನ್ನ ತಾಯಿಯ ಸಾವಿಗೆ ಕಾರಣನಾದ ಇಚರ್ ವಾಹನ ನಂಬರ್ ಎಮ್.ಹೆಚ್-13 ಕೆ-4893 ನೇದ್ದರ ಚಾಲಕ ವಿಜಯಕುಮಾರ @ಬಾಳು ತಂದೆ ಶ್ರೀಶೈಲ ಪಾಟೀಲ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ. ಸಿದ್ದಾರಾಮ ತಂದೆ ಶಂಕರ ಕಂಬಾರ ಸಾಃ ಆಳಂಗಾ ತಾಃ ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ:22/02/2019 ರಂದು ನನ್ನ ಅಣ್ಣನಾದ ಶಿವಶರಣ ಈತನು ದೇ.ಗಾಣಗಾಪೂರಕ್ಕೆ ಹೋಗಿ ಬರುತ್ತೇನೆ ಅಂತಾ ಮೋ ಸೈ.ನಂ:ಎಮ್.ಹೆಚ್-13 ಸಿ,ಎಫ್-5317 ನೇದ್ದನು ತಗೆದುಕೊಂಡು ನಮ್ಮ ಮನೆಯಿಂದ 5 ಪಿ,ಎಮ್.ಸುಮಾರಿಗೆ ನಮಗೆ ಹೇಳಿ ಹೋಗಿರುತ್ತಾನೆ ನಂತರ ರಾತ್ರಿ 10-30 ಪಿ,ಎಮ್.ಸುಮಾರಿಗೆ ನನಗೆ ಪರಿಚಯವರಾದ ಬಸವರಾಜ ತಂದೆ ಬಾಬಯ್ಯ ವಸ್ತ್ರದ ಸಾ:ಮಂಗಳೂರ ರವರು ನನಗೆ ಪೊನ ಮಾಡಿ ತಿಳಿಸಿದ್ದೆನಂದರೆ ನಿಮ್ಮ ಅಣ್ಣನಾದ ಶಿವಶರಣನು 7 ಪಿ.ಎಮ್,ಸುಮಾರಿಗೆ ಕರಜಗಿ-ಮಣ್ಣೂರ ರೊಡಿನ ಮೇಲೆ ಶಿವೂರ ಕ್ರಾಸ್ ಹತ್ತಿರ ಮೋಟಾರ ಸೈಕಲ ಮೇಲೆ ಕರಜಗಿ ಗ್ರಾಮದ ಕಡೆ ಹೋಗುತ್ತೀರುವಾಗ ಮೋ ಸೈ.ನಂ:ಕೆ,-32 ಇಎಫ್-9302 ನೇದ್ದರ ಚಾಲಕನು ಹಿಂದಿನಿಂದ ತನ್ನ ಮೋ ಸೈಕಲನ್ನು ಅತಿ ವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ನಿನ್ನ ಅಣ್ಣನಿಗೆ ತಲೆಗೆ ಬಾರಿ ರಕ್ತಗಾಯ ಮತ್ತು ಒಳ ಪೆಟ್ಟಾಗಿರುತ್ತದೆ ಅಪಘಾತಪಡಿಸಿದ ಮೋ ಸೈ ಸವಾರನು ತನ್ನ ಮೋಟಾರ ಸೈಕಲನ್ನು ನಿಲ್ಲಿಸಿ ನೋಡಿ ಅಲ್ಲಿಂದ ತನ್ನ ಮೋಟಾರ ಸೈಕಲನ್ನು ತಗೆದುಕೊಂಡು ಹೋಗಿರುತ್ತಾನೆ ನಾನು ನಿನ್ನ ಅಣ್ಣನಿಗೆ ಕಲಬುರ್ಗಿಯ ಸನ ರೈಸ ಆಸ್ಪತ್ರೇಗೆ ತಂದು ಸೇರಿಕೆ ಮಾಡಿರುತ್ತೆನೆ ನಿನು ಬಾ ಅಂತಾ ತಿಳಿಸಿದ ಮೇರೆಗೆ ನಾನು ಕಲಬುರ್ಗಿಗೆ ಬಂದು ನನ್ನ ಅಣ್ಣನಿಗೆ ನೋಡಲಾಗಿ ನನ್ನ ಅಣ್ಣ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಅವನ ತೆಲೆಯ ಹಿಂಭಾಗಕ್ಕೆ ರಕ್ತಗಾಯ ಮತ್ತು ಒಳಪೆಟ್ಟು ಬಲಗೈ ಮೇಲೆ ತರಚಿದ ಗಾಯ ಮುಂಗೈಗೆ ತರಚಿದ ರಕ್ತಗಾಯ ಬಲಗಾಲಮೊಣಕಾಲಿಗೆ ರಕ್ತಗಾಯ ಬೆನ್ನ ಹಿಂದೆ ಭುಜಕ್ಕೆ ತರಚಿದಗಾಯ ಮತ್ತು ಒಳಪೆಟ್ಟುಗಳಾಗಿದ್ದು ಇರುತ್ತದೆ,ಸದರಿ ಅಪಘಾತದಲ್ಲಿ ಆದ ಗಾಯಗಳಿಂದ ಉಪಚಾರ ಪಡೆಯುತ್ತೀದ್ದ ನನ್ನ ಅಣ್ಣನು ಉಪಚಾರ ಫಲಿಸದೆ ನಿನ್ನೆ ದಿನಾಂಕ:23/02/2019 ರಂದು 10-18 ಪಿ,ಎಮ್. ಸುಮಾರಿಗೆ ಸನ್ ರೈಸ ಆಸ್ಪತ್ರೇಯಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ ಶ್ರೀ ಶಿವಾಜಿ ತಂದೆ ಚಂದ್ರಶೇಖರ ಕೋರೆ ಸಾ:ಗುಡ್ಡೆವಾಡಿ ತಾ:ಅಕ್ಕಲಕೋಟ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ದಿನಾಂಕ: 24/02/2019 ರಂದು 5-00 ಪಿ.ಎಂಕ್ಕೆ ನಮ್ಮ ಸಂಬಂದಿ ಗುಂಡಪ್ಪಾ ತಂದೆ ಪೀರಪ್ಪಾ ಚಿಂಚೋಳಿ ಸಾ:ದಣ್ಣೂರ ಇವರು ಫೋನ ಮಾಡಿ ನನ್ನ ಮಗ ವಿಠಲ್ ಈತನಿಗೆ ಕಡಗಂಚಿ ಗ್ರಾಮ ಮೌಂಟ್ ಕಾರ್ಮೇಲ್ ಶಾಲೆಯ ಹತ್ತಿರ ಆತನ ಮೋಟಾರ್ ಸೈಕಲಗೆ ಬಸ್  ಡಿಕ್ಕಿಹೊಡೆದು ಸ್ಥಳದಲ್ಲಿಯೇ ತಲೆಗೆ ಭಾರಿ ರಕ್ತಗಾಯವಾಗಿ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಕಲ್ಯಾಣಿ ತಂದೆ ಮಹಾದೇವ ಜಮಾದಾರ ಮತ್ತು ಕಲ್ಯಾಣಿ ತಂದೆ ಸಾಯಬಣ್ಣಾ ಜಮದಾರ ರವರೆಲ್ಲರೂ ಕೂಡಿಕೊಂಡು ಅಲ್ಲಿಗೆ ಹೋಗಿ ನೋಡಲಾಗಿ ನನ್ನ ಮಗನು ರಸ್ತೆಯ ಮೇಲೆ ಭಾರಿರಕ್ತಗಾಯವಾಗಿ ಮೃತ ಪಟ್ಟಿದ್ದು ನಿಜವಿದ್ದು. ಸಂಬಂಧಿ ಗುಂಡಪ್ಪಾ ಚಿಂಚೋಳಿ ರವರಿಗೆ ವಿಚಾರಿಸಲಾಗಿ ನನ್ನ ಮಗನನ್ನು ಮೊಟಾರ್ ಸೈಕಲ್ ನಂಬರ್ ಕೆಎ32ವ್ಹಿ9661 ನೇದ್ದರ ಮೇಲೆ ಕಡಗಂಚಿ ಕಡೆಯಿಂದ ಆಳಂದ ಕಡೆಗೆ ಬರುವಾಗ ನಾನು ಕುಳಿತು ಹೊರಟ ಬಸ್ ನಂಬರ್ ಕೆಎ32ಎಫ್2371 ನೇದ್ದರ ಚಾಲಕನು ಆಳಂದ ದಿಂದ ಕಲಬುರಗಿ ಕಡೆಗೆ ಕಡಗಂಚಿ ಗ್ರಾಮದ ಹತ್ತಿರ ಅತೀವೇಗ ಮತ್ತು ಅಲಕ್ಷತನಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಲಾರಿಹಿಂದಿನಿಂದ ಬರುವ ನನ್ನ ಮಗನ ಮೊಟಾರ್ ಸೈಕಲ್ ಡಿಕ್ಕಿ ಪಡಿಸಿರುತ್ತಾರೆ. ಸದರಿ ಮೊಟಾರ್ ಸೈಕಲ್ ಮೇಲೆ ನನ್ನ ಮಗ ಬರುತ್ತಿದ್ದು ಅಂತಾ ತಿಳಿಸಿರುತ್ತಾರೆ. ಕಾರಣ ನನ್ನ ಮಗ ವಿಠಲ್ ಈತನು ಮೊಟಾರ್ ಸೈಕಲ್ ನಂಬರ್ ಕೆಎ32ವ್ಹಿ9661 ನೇದ್ದರ ಮೇಲೆ ಕಲಬುರಗಿಯಿಂದ ನಮ್ಮೂರಿಗೆ ಒಬ್ಬನೆ ಬರುತ್ತಿರುವಾಗ ಕಡಗಂಚಿ ಗ್ರಾಮದ ಮೌಂಟ್ ಕಾರ್ಮೇಲ ಶಾಲೆಯ ಹತ್ತಿರ ರೋಡಿನ ಇಳಿಜಾರಿನಲ್ಲಿ ಆಳಂದ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ32ಎಫ್2371 ನೇದ್ದರ ಚಾಲಕನು ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗನ ಮೊಟಾರ್ ಸೈಕಲಕ್ಕೆ ಡಿಕ್ಕಿಪಡಿಸಿ ನನ್ನ ಮಗನ ಸಾವಿಗೆ ಕಾರಣನಾದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶ್ರೀ ಗುಂಡಪ್ಪಾ ತಂದೆ ಮಹಾದೇವ ಜಮಾದಾರ, ಸಾ:ಕೊಡಲಹಂಗರಗ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 23.02.2019 ರಂದು ಮಧ್ಯಾನ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಂಗಾನಗರ ಹನುಮಾನ ದೇವರ ಗುಡಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ  ಶ್ರೀ ಶಿವಯೋಗಿ ಎ.ಎಸ್‌‌.ಐ  ರಾಘವೇಂದ್ರ ನಗರ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಂಗಾನಗರ ಹನುಮಾನ ದೇವರ ಗುಡಿಯ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಗುಡಿಯ ಪಕ್ಕದಲ್ಲಿ ಇರುವ ಸಾರ್ವಜನಿಕ ಸ್ಥಳಲ್ಲಿ 6 ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಟ ನಿರತರನ್ನು ವಶಕ್ಕೆ ಪಡೆದುಕೊಂಡು ನಂತರ ಸದರಿಯವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1) ಸಿದ್ದು ತಂದೆ ಫ್ರಭುಲಿಂಗ ತಳವಾರ ಸಾ:ಮಾಣಿಕೇಶ್ವರಿ ಕಾಲೋನಿ ಕಲಬುರಗಿ. 2) ಅಂಬ್ರೇಶ ತಂದೆ ಶಂಕರ ತಳವಾರ ಸಾ:ಮಾಣಿಕೇಶ್ವರಿ ಕಾಲೋನಿ ಕಲಬುರಗಿ 3) ಅಯ್ಯಪ್ಪ ತಂದೆ ಲಕ್ಷ್ಮಣ ತಳವಾರ ಸಾ : ಗಂಗಾ ನಗರ ಹನುಮಾನ ಗುಡಿಯ ಹತ್ತಿರ ಕಲಬುರಗಿ 4) ಬಾಬು ತಂದೆ ಲಕ್ಷ್ಮಣ ತಳವಾರ ಸಾ:ಮಾಣಿಕೇಶ್ವರಿ ಕಾಲೋನಿ ಕಲಬುರಗಿ 5) ಶಿವಕುಮಾರ ತಂದೆ ಬಂಡೆಪ್ಪ ಯಾದವ ಸಾ:ಜೋಡಯಲ್ಲಮ್ಮಾ ಗುಡಿಯ ಹತ್ತಿರ ಬ್ರಹ್ಮಪೂರ ಕಲಬುರಗಿ 6) ಶಾಂತಕುಮಾರ ತಂದೆ ಶರಣು ಕೌವಲಗಿ ಸಾ:ಗಂಗಾನಗರ ಹನುಮಾನ ಗುಡಿಯ ಹತ್ತಿರ ಕಲಬುರಗಿ  ಅಂತಾ ತಿಳಿಸಿದ್ದು  ಸದರಿಯವರಿಂದ ಜೂಜಾಟಕ್ಕೆ ಬಳಸಿದ  52 ಇಸ್ಪೇಟ ಎಲೆಗಳನ್ನು ಮತ್ತು ನಗದು ಹಣ 2130/- ರೂ ಗಳನ್ನು ವಶಕ್ಕೆ ಪಡೆದು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಜಾತಿ ನಿಂದನೆ ಮಾಡಿ ಅಪಹರಣ ಮಾಡಿಕೊಂಡು ಹೋದ ಪ್ರಕರಣ :
ಜೇವರಗಿ ಠಾಣೆ : ದಿನಾಂಕ; 07/02/2019 ರಂದು ಸಾಯಂಕಾಲ ನಾನು ಪೂನಾದಲ್ಲಿ ಇದ್ದಾಗ ನನ್ನ ಗಂಡ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ; ನಮ್ಮೂರ ದೇವಪ್ಪ ತಂದೆ ಸೋಮಣ್ಣ ತಳವಾರ ಈತನು ನಮ್ಮ ಮಗಳು ಸವಿತಾ ಇವಳಿಗೆ ಚುಡಾಯಿಸುತ್ತಾ ಬಂದು ಇಂದು ಮದ್ಯಾಹ್ನ 3-00 ಘಂಟೆ ಸುಮಾರಿಗೆ ನಾನು ಮನೆಯಲ್ಲಿ ಇಲ್ಲದಿದ್ದಾಗ ಮನೆಗೆ ಬಂದು ಮಗಳಿಗೆ ಚುಡಾಯಿಸುತ್ತಿದ್ದಾನೆ ನೀನು ಬಂದು ಮಗಳಿಗೆ ಪೂನಾಕ್ಕೆ ಕರೆದುಕೊಂಡು ಹೋಗು ಎಂದು ತಿಳಿಸಿದನು. ನಂತರ ನಾನು ಅಂದೇ ರಾತ್ರಿ ನಮ್ಮೂರಿಗೆ ಹೊರಟು ಟ್ರೇನ್ ಮೂಲಕ ಕಲಬುರಗಿಗೆ ಬಂದು ನಮ್ಮೂರಿಗೆ ಬಂದಿರುತ್ತೇನೆ. ನಂತರ ನಮ್ಮ ಮಗಳಿಗೆ ವಿಚಾರಿಸಲು ಅವಳು ಹೇಳಿದ್ದೇನೆಂದರೆ; ದೇವಪ್ಪ ತಳವಾರ ಈತನು ನನ್ನ ಹಿಂದೆ ಬಿದ್ದಿದ್ದಾನೆ. ನಾನು ಹೋದ ಕಡೆಗೆ ಬರುತ್ತಿದ್ದಾನೆ. ಮತ್ತು ನಿನಗೆ ಪ್ರೀತಿ ಮಾಡುತ್ತೇನೆ ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ನನ್ನ ಹಿಂದೆ ಬಿದ್ದು ಚುಡಾಯಿಸುತ್ತಿದ್ದಾನೆ. ನಾನು ಅವನಿಗೆ ನಮ್ಮದು ಲಂಬಾಣಿ ಜಾತಿ ನಿಮ್ಮದು ಕಬ್ಬಲಿಗ ಜಾತಿ ಇದೆ ಹೀಗೆಲ್ಲ ಮಾಡುವದು ಸರಿ ಅಲ್ಲ ಎಂದು ಹೇಳಿದರು ಕೂಡ ಅವನು ನನ್ನ ಹಿಂದೆ ಬಿದ್ದು ದಿನಾಂಕ; 07/02/2019 ರಂದು ಮನೆಯಲ್ಲಿ ಯಾರು ಇಲ್ಲದಾಗ ಮನೆಗೆ ಬಂದು ತೊಂದರೆ ಕೊಟ್ಟಿರುತ್ತಾನೆ. ಮತ್ತು ಆಗ ನನ್ನ ತಂದೆಯವರು ದೇವಪ್ಪನಿಗೆ ಮನೆಗೆ ಯಾಕೆ ಬಂದಿದಿ ಎಂದು ಕೇಳಿದ್ದಕ್ಕೆ ‘ಭೋಸಡಿ ಮಗನೆ ಲಮಾಣೆ ನೀನೇನು ಕೇಳುತ್ತಿ ಎಂದು ಜಾತಿ ಎತ್ತಿ ಬೈದು ನೂಕಿಸಿಕೊಟ್ಟು ಓಡಿ ಹೋಗಿರುತ್ತಾನೆ. ಎಂದು ವಿಷಯ ತಿಳಿಸಿದಳು. ನಂತರ ನಾನು ಮತ್ತು ನನ್ನ ಗಂಡ ಮನೆಯಲ್ಲಿ ವಿಚಾರ ಮಾಡಿ ಮಗಳು ಸವಿತಾ ಇವಳು ಇಲ್ಲಿ ಇರುವದು ಬೇಡ ಅವಳಿಗೆ ನನ್ನ ಸಂಗಡ ಪೂನಾಕ್ಕೆ ಕರೆದುಕೊಂಡು ಹೋದರಾಯಿತು ಎಂದು ದಿನಾಂಕ; 09/02/2019 ರಂದು ಸಾಯಂಕಾಲ 4-30 ಪಿ.ಎಮ್ ವೇಳೆಗೆ ನಾನು ಮತ್ತು ನಮ್ಮ ಮಗಳು ಕೂಡಿಕೊಂಡು ಗಂವಾರ ಗ್ರಾಮದಿಂದ ಚಿಗರಳ್ಳಿಗೆ ಬಂದು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೇವು. ಅದೇ ವೇಳೆಗೆ ನಾನು ತಿನ್ನಲು ಬಾಳೆ ಹಣ್ಣು ತೆಗೆದುಕೊಳ್ಳುತ್ತಿದ್ದಾಗ ನಮ್ಮೂರ ದೇವಪ್ಪ ತಂದೆ ಸೋಮಣ್ಣ ತಳವಾರ ಈತನು ಒಂದು ಮೋಟಾರ ಸೈಕಲ್ ಮೇಲೆ ಬಂದುವನೆ ನಮ್ಮ ಮಗಳಿಗೆ ಒತ್ತಾಯಪೂರ್ವಕವಾಗಿ ಕೂಡಿಸಿಕೊಂಡು ಸ್ಪೀಡಾಗಿ ಮೋಟಾರ ಸೈಕಲ್ ಚಲಾಯಿಸಿಕೊಂಡು ಜೇವರಗಿ ಕಡೆಗೆ ಹೋದನು. ಆಗ ನಾನು ಚೀರುತ್ತಾ ಹಿಂದೆ ಬೆನ್ನು ಹತ್ತಿದರು ಕೂಡ ಅವನು ಹೊರಳಿ ನೋಡದೆ ನಮ್ಮ ಮಗಳಿಗೆ ಕೂಡಿಸಿಕೊಂಡು ಹೋಗಿರುಯ್ಯಾನೆ ಅಂತಾ ಶ್ರೀಮತಿ ನಾಗಮ್ಮ ಗಂಡ ನಾನು ನಾಯಕ್ ಸಾ; ಗಂವಾರ ತಾಂಡಾ ತಾ; ಜೇವರಗಿ ಜಿ; ಕಲಬುರಗಿ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಪರಮಾನಂದ ತಂದೆ ಸಿದ್ದಪ್ಪ ಶರ್ಮಾ ಸಾ; ಯಲಗೋಡ ರವರದು ಯಲಗೋಡ ಸೀಮಾಂತರದಲ್ಲಿ  ಸರ್ವೆ ನಂಬರ 49/4 ರಲ್ಲಿ 3 ಎಕರೆ 37 ಗುಂಟೆ ಜಮೀನು ಇದ್ದು. ಸಾಗುವಳಿ ಮಾಡಿಕೊಂಡು ಉಪಜೀವಿಸುತ್ತಿದ್ದೆನೆ. ಬರಗಾಲದಿಂದ ಹೊಲದಲ್ಲಿ ಬೆಳೆದ ಬೆಳೆ  ಹಾನಿಯಾಗಿದ್ದು ಸರಕಾರದಿಂದ ಮಂಜೂರಾದ ಬೆಳೆ ವಿಮೆ ಪರಿಹಾರ ಹಣವು ಯಲಗೋಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೊಂದಣಿ ಮಾಡಲಾದ ನನ್ನ ಬ್ಯಾಂಕ ಖಾತೆ  ನಂಬರ 198002025062 ನೇದ್ದರಲ್ಲಿ ದಿನಾಂಕ: 11-10-2018 ರಂದು ರೂಪಾಯಿ 16983/- ಜಮಾ ಆಗಿರುತ್ತದೆ. ಆ ಸಂದರ್ಭದಲ್ಲಿ ಬ್ಯಾಂಕಿನ ಪಾಸಬುಕ್  ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿಯಾದ ರಾಯಪ್ಪಗೌಡ ತಂದೆ ಶಿವಪ್ಪಗೌಡ ಅಣಜಗಿ ಇವರ ಹತ್ತಿರ ಇದ್ದು. ಹಲವು ಭಾರಿ ಪಾಸಬುಕ್ ಕೊಡು ಅಂತ ಕೇಳಲಾಗಿ ಕೊಟ್ಟಿರುವುದಿಲ್ಲಾ, ಹೀಗಿರುವಾಗ ನಿನ್ನೆ ದಿನಾಂಕ: 22-02-2019 ರಂದು ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ನಾನು ಯಲಗೋಡದ  ಸಹಕಾರಿ ಸಂಘಕ್ಕೆ ಹೋಗಿ ರಾಯಪ್ಪಗೌಡನಿಗೆ ನನ್ನ ಪಾಸಬುಕ್ ಕೊಡು ಅಂತ ಕೇಳಿದಕ್ಕೆ ಆಗ ರಾಯಪ್ಪಗೌಡನು ಪಾಸಬುಕ್ ಕೊಟ್ಟನು. ಆಗ ನಾನು ಪಾಸಬುಕ್ ತೆರೆದು ನೋಡಲಾಗಿ ದಿನಾಂಕ: 21-10-2018 ರಂದು ನನ್ನ ಬ್ಯಾಂಕ ಖಾತೆಯಿಂದ ರೂಪಾಯಿ 12000/- ಕಡಿತವಾಗಿರುತ್ತದೆ. ಆಗ ನಾನು ಕಡಿತವಾದ ಹಣದ ಬಗ್ಗೆ ರಾಯಪ್ಪಗೌಡನಿಗೆ ವಿಚಾರಿಸಲಾಗಿ  ನನಗೆ ಎಲೇ ಹೊಲೆಯ ಸೂಳೆ ಮಗನೇ ಪರಮ್ಯಾ ನಾನು ಕೋ ಆಪರೇಟಿವ್ ಬಾಸ್ ಇದ್ದಿನಿ ಯಾವುದೇ ದುಡ್ಡು ತೊಗೊತ್ತಿನಿ, ಬಿಡತ್ತಿನಿ, ನಿನ್ನ ದುಡ್ಡು ತಗೊಂಡಿನಿ ಮಗನೇ ಸುಮ್ಮನೇ ಹೋಗು ಅಂತ ಕಪಾಳಕ್ಕೆ ಹೊಡೆದನು. ನನಗೆ ಹಣ ಬೇಕಾಗಿತ್ತು, ತಗೆದುಕೊಂಡಿದ್ದೆನೆ, ಏನು ಮಾಡುತ್ತಿಯಾ ತಾಕತ್ ಇದ್ದರೇ ವಸೂಲಿ ಮಾಡಿಕೋ ನನಗೆ ಕೇಳಲು ಬಂದರೇ ನಿನಗೆ ಖಲಾಸ ಮಾಡುತ್ತೆನೆ ಅಂತ ನನಗೆ ಹೊಡೆಯಲು ಬಂದಾಗ ಅಲ್ಲಿಯೇ ಇದ್ದ ಸಿದ್ದಪ್ಪ ಕಟ್ಟಿಮನಿ ಸಾ:ಮಂಗಳೂರ, ರವಿಕುಮಾರ ಬರ್ಮಾ ಸಾ: ಯಲಗೋಡ ಇವರು ಬಂದು ಜಗಳ ಬಿಡಿಸಿದರು ನಂತರ ರಾಯಪ್ಪಗೌಡ ಇತನು ಈ ಹೊಲೆಯ ಸೂಳೆ ಮಕ್ಕಳದ್ದು ಬಹಳ ಆಗಿದೆ ಅಂತ ಬೈದು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ  ಬಿಸ್ಮಿಲ್ಲಾ ಗಂಡ ಇಮಾಮಸಾಬ ಚೌಧರಿ ಸಾ;ಇಂದಿರಾ ನಗರ ಮಣ್ಣೂರ ಪಂಕ್ಷನ ಹಾಲ ಹತ್ತಿರ ಅಫಜಲಪೂರ ರವರ ಗಂಡನು ಹೊರದೇಶದಲ್ಲಿದ್ದು ನಾನು ಮೂರು ಮಕ್ಕಳೊಂದಿಗೆ ಉಪ ಜೀವನ ಸಾಗಿಸಿಕೊಂಡಿರುತ್ತೇನೆ. ನಮ್ಮ ಓಣಿಯ ಬಾನು ಗಂಡ ಚಾಂದ ಸೊನ್ನ ರವರು ನಳದ ನೀರಿನ ವಿಷಯವಾಗಿ ನನ್ನ ಜೋತೆ ವಾರದ ಹಿಂದೆ ತಕರಾರು ಮಾಡಿಕೊಂಡು ನನ್ನ ಮೇಲೆ ದ್ವೇಷ ಸಾದಿಸಿಕೊಂಡು ಬಂದಿರುತ್ತಾರೆ.ಹೀಗಿದ್ದು ದಿನಾಂಕ:19/02/2019 ರಂದು 9 ಪಿ.ಎಮ್.ಸುಮಾರಿಗೆ ನಾನು ಮನೆಯ ಮುಂದಿನ ರೋಡಿನ ಮೇಲೆ ನಿಂತಾಗ 01) ಬಾನು ಗಂಡ ಚಾಂದ ಸೋನ್ನ 02)ಚಾಂದ ಸೋನ್ನ 03)ಅಶ್ಪಕ ಹಟ್ಟಿ,03)ಸಲ್ಮಾ ಬೇಗ ಗಂಡ ಮಂಜೂರ ಬೇಗ ಎಲ್ಲರೂ ಕೂಡಿಕೊಂಡು ನನ್ನ ಹತ್ತಿರ ಬಂದು ಅದರಲ್ಲಿ ಸಲ್ಮಾ ಬೇಗ ಈವಳು ನನಗೆ ರಂಡಿ ನಳ ಏನು ನಿನ್ನ ಗಂಡ ಹಡಿಸಿ ಗಳಿಸಿದ್ದು ಅದಾ ಏನು ಸರಕಾರ ನಳ ಅದಾ ಅಂದರು ನಿನು ಇಷ್ಟು ದಿಮಾಕ ಮಾಡತಿ ಅಂತಾ ಅವಾಚ್ಯ ಶಬ್ದಗಳಿಂದ ಬೈದನು ಚಾಂದ ಈತನು ನನ್ನ ಬಲಗೈ ಹಿಡಿದು ತಿರುವಿ ರಂಡಿಗೆ ಊರು ಬಿಡಿಸಿ ಕಳೂಹಿಸಬೇಕು ಅಂತಾ ಅಂದು ನನ್ನ ಕಪಾಳ ಮೇಲೆ ಹೋಡೆದು ನನಗೆ ದಂಗಾ ಮುಸ್ತಿ ಮಾಡಿ ನನ್ನ ಮಾನಕ್ಕೆ ಕುಂದುಂಟು ಮಾಡಿರುತ್ತಾನೆ. ಬಾನು ಈವಳು ನನಗೆ ತನ್ನ ಕಾಲಿನಿಂದ ಒದ್ದಳು ಆಗ ನಾನು ಓಡಿ ಹೋಗ ಬೇಕೆನ್ನುವಷ್ಟರಲ್ಲಿ ಅಶ್ಪಕನು ನನಗೆ ಮುಂದೆ ಹೋಗದಂತೆ ತಡೆದನು ನಂತರ ನಮ್ಮ ಓಣಿಯ ಮಹ್ಮದ ಜೋಗುರ ರವರು ಬಂದು ಬಿಡಿಸಿದರು ಅಶ್ಪಕ ಮತ್ತು ಚಾಂದ ಇಬ್ಬರು ಕೂಡಿ ನನಗೆ ಇಂದು ಮಹ್ಮದರವರು ಬಿಡಿಸಿದ್ದರಿಂದ ನೀನು ಜೀವ ಸಹಿತ ಊಳಿದಿರುವಿ ಇಲ್ಲ ಅಂದರೆ ನಿನ್ನ ಜೀವ ಸಹಿತ ಬಿಡುತ್ತಿರಲಿಲ್ಲ ಅಂತಾ ಜೀವದ ಭಯ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ,

18 February 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 17-2-2019 ರಂದು ಮುಂಜಾನೆ 7-00 ಎ.ಎಂ. ಗಂಟೆಯ ಸುಮಾರಿಗೆ ನಮೂರಿನಿಂದ ಕೆರೂರ ಗ್ರಾಮಕ್ಕೆ ನನ್ನ ವಯಕ್ತಿಕ ಕೆಲಸದ ನಿಮಿತ್ಯ ನನ್ನ ಮೋಟಾರ ಸೈಕಲ ಮೇಲೆ ಹೋಗುತ್ತಿರುವಾಗ ತಾವರಗೇರಾ ಸೀಮಾಂತರದಲ್ಲಿ ಬರುವ ಸಾತಪೀರ ದರ್ಗಾ ಇನ್ನೂ ಒಂದು ಫರ್ಲಾಂಗ ಕ್ಕಿಂತ ಮುಂಚಿತವಾಗಿ ಸರಕಾರಿ ಗೈರಾಣಿ ಜಮೀನಿನಲ್ಲಿ ರೋಡನ  ಪಕ್ಕದಲ್ಲಿ  ಒಬ್ಬ ವ್ಯಕ್ತಿ ಬಿದಿದ್ದನ್ನು ನೋಡಿ ಸಮೀಪ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿಯು ಅಂದಾಜ 25-30 ವರ್ಷ ವಯಸ್ಸಿನವನಿದ್ದು ಅವನ ಕುತ್ತಿಗೆಯ  ಎಡಭಾಗದಲ್ಲಿ, ಎದರುಗಡೆ ಹಾಗೂ ಎಡಕಿವಿ ಮೇಲೆ ಭಾರಿ ಹರಿತವಾದ ಆಯುಧದಿಂದ ಕೊಯಿದು ಭಾರಿ ರಕ್ತಗಾಯವಾಗಿ ಮಾಂಸಖಂಡಗಳು ಕಾಣುತಿದ್ದು ಬಾಯಿ, ಮೂಗಿನಿಂದ ರಕ್ತಸ್ರಾವಾಗಿ ಮೃತ ಮೃಟ್ಟಿದ್ದನು.  ಸದರಿ ವ್ಯಕ್ತಿಯ ಮುಖದ ಮೇಲೆ ಉದ್ದನೆಯ ಕಪ್ಪು ದಾಡಿ ಇದ್ದು, ಎತ್ತರ 5 ಫೀಟ 6 ಇಂಚು ಇದ್ದು ತಳ್ಳನೆಯ ಸದೃಡ ಮೈಕಟ್ಟು ಹೊಂದಿದ್ದು ,ಕೆಂಪು ಗೋಧಿ ಮೈಬಣ್ಣ ಹೊಂದಿದ್ದು ಮೈ ಮೇಲೆ ಒಂದುನೀಲಿ ಕಲರ ಕುರ್ತಾ (ಶರ್ಟ), ಒಂದು ಬಿಳಿಬನಿಯನ, ಒಂದು ಕಪ್ಪು ಬಣ್ಣದ ಪೈಜಾಮ ಧರಿಸಿದ್ದು  ಸದರೀ ವ್ಯಕ್ತಿಯು ಮುಸ್ಲಿಂ ಸಮುದಾಯ ದವನಾಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಸದರಿ ಘಟನೆಯು ದಿನಾಂಕ. 16-2-2019 ರಂದು ರಾತ್ರಿ ವೇಳೆಯಿಂದ ದಿನಾಂಕ. 17-2-2019 ರಂದು 7-00 ಎ.ಎಂ.ದ ಮದ್ಯದ ಅವಧಿಯಲ್ಲಿ ಆಗಿರುತ್ತದೆ.  ದಿನಾಂಕ.16-2-2019 ರಂದು  ರಾತ್ರಿ ವೇಳೆಯಿಂದ ದಿನಾಂಕ. 17-2-2019 ರಂದು ಬೆಳಗ್ಗೆ 7-00 ಎ.ಎಂ. ದ ಮದ್ಯದ ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಹರಿತವಾದ ಆಯುಧಗಳಿಂದ ಕುತ್ತಿಗೆಗೆ,ಎಡಕಿವಿಗೆ ಹೊಡೆದು ಕೊಲೆ ಮಾಡಿರುತ್ತಾರೆ.ಸದರಿ ಮೃತ ವ್ಯಕ್ತಿಯು ಅಪರಿಚಿದನಾಗಿದ್ದು ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ. ಆದುದರಿಂದ ಸದರಿ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿತರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಆನಂದ ತಂದೆ ರಾಣಪ್ಪಾ ಹುಲಿ ಸಾ;ತಾವಗೇರಾ ತಾ;ಜಿ;ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಂತೋಷ ತಂದೆ ಅರ್ಜುನ ಬಿರಾದಾರ  : ಪಶುವೈಧ್ಯಕೀಯ ಸಹಾಯಕ ಪಶು ಆಸ್ಪತ್ರೆ ಉಡಚಾಣ ಸಾ: ಕರಜಗಿ ರವರು ಮತ್ತು ತಾಯಿಯವರಾದ ಶ್ರೀಮತಿ ಅಂಬವ್ವ ಗಂಡ ಅರ್ಜುನ ಬಿರಾದಾರ, ಹೆಂಡತಿಯಾದ ಗಜರಾಬಾಯಿ ಎಲ್ಲರೂ ದಿನಾಂಕ  14-02-2019 ರಂದು  ಸಾಯಂಕಾಲ 5:00 ಗಂಟೆಗೆ ಉಡಚಾಣ ಗ್ರಾಮದಲ್ಲಿ ನನ್ನ ಸಂಬಂಧಿಕರ ಅಕ್ಕಿಕಾಳು ಕಟ್ಟುವ ಕಾರ್ಯಕ್ರಮಕ್ಕಾಗಿ ಕರಜಗಿ ಗ್ರಾಮದಲ್ಲಿರುವ ನಮ್ಮ ಸ್ವಂತ ಮನೆಗೆ ಕೀಲಿ ಹಾಕಿಕೊಂಡು ಹೋಗಿರುತ್ತೇವೆ.         ಉಡಚಾಣ ಗ್ರಾಮದಿಂದ ದಿನಾಂಕ 15-02-2019 ರಂದು ಸಾಯಂಕಾಲ 3:30 ಗಂಟೆಗೆ ಮರಳಿ ಎಲ್ಲರೂ ಊರಿಗೆ ಬಂದು ನಮ್ಮ ಮನೆಗೆ ಹೋಗಿ ನೋಡಿದಾಗ ಮನೆಯ ಬಾಗಿಲಿಗೆ ಹಾಕಿದ ಕಿಲಿ ಕೊಂಡಿ ಮುರಿದ ಸ್ಥಿತಿಯಲ್ಲಿ ಇದ್ದು ನಾವೆಲ್ಲ ಮನೆಯ ಒಳಗೆ ಹೋಗಿ ನೋಡಿದಾಗ ಬೆಡ್ರೂಮ  ಕೋಣೆಯಲ್ಲಿದ್ದ ಅಲಮಾರಿ  ತೆರದ ಸ್ಥಿತಿಯಲ್ಲಿದ್ದು ಹಾಗೂ ಅಲಮಾರಿಯ ಮುಂದೆ ಬಟ್ಟೆ ಬರೆಗಳು ಚಲ್ಲಾಪಿಲ್ಲಿ ಯಾಗಿ ಬಿದ್ದಿದ್ದು ನಾವೆಲ್ಲರು ಗಾಬರಿಯಾಗಿ ನಾವು ಅಲಮಾರಿ ಚೆಕ ಮಾಡಲಾಗಿ ಅಲಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು  ಮತ್ತು ನಗದು ಹಣ  ಒಟ್ಟು :ಕಿ:3,30,000/- ಸಾವಿರ ರೂಪಾಯಿಗಳ ಮೌಲ್ಯದ ಬಂಗಾರದ ಆಭರಣಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಡ್ಡಿಗೆ ಬೆಂಕಿ ಹಚ್ಚಿ ಹಾನಿ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 16-02-2019 ರಂದು ಬೆಳಿಗ್ಗೆ ನಮ್ಮ ತಂಗಿ ಗಂಡ ಬಸವರಾಜ ಈತನು ನಾನು ನನ್ನ ಹಂಡತಿಗೆ ನಮ್ಮೂರಿಗೆ ಕರೆದುಕೊಂಡು ಹೊಗುತ್ತೇನೆ ಅಂತಾ ಅಂದನು, ಆಗ ನಾವು ಮುಂಬರುವ ಶಿವರಾತ್ರಿ ಹಬ್ಬ ಮಾಡಿಕೊಂಡು ಕರೆದುಕೊಂಡು ಹೋಗು ಅಂತಾ ಹೇಳಿದೇವು ಅದಕ್ಕೆ ಆತನು ಒಪ್ಪದೇ ನಮ್ಮೊಂದಿಗೆ ಗಲಾಟೆ ಮಾಡಿಕೊಂಡು ಹೋದನು, ನಂತರ ರಾತ್ರಿ 8;00 ಗಂಟೆಗೆ ಬಸವರಾಜ ಈತನು ಮತ್ತೆ ಸರಾಯಿ ಕುಡಿದು ನಮ್ಮ ಮನೆಗೆ ಬಂದು ಏ ಸೂಳಿ ಮಕ್ಕಳ್ಯಾ ನನ್ನ ಹೆಂಡತಿಗೆ ನನ್ನೊಂದಿಗೆ ಕಳಿಸು ಅಂದರೆ ಕಳಸಲ್ಲ ಅಂತಿರಾ ಮಕ್ಕಳ್ಯಾ ಇವತ್ತ ನಿಮಗೆಲ್ಲರಿಗೂ ಬೆಂಕಿ ಹಚ್ಚಿ ಸುಡತಿನಿ ಅಂತಾ ಅನ್ನುತ್ತಿದ್ದನು, ಆಗ ನಮ್ಮ ಅಣ್ಣತಮ್ಮಕಿಯ ಬಾಬುಗೌಡ ಮಾಲಿ ಪಾಟೀಲ ಮತ್ತು ಮಲ್ಲಿನಾಥ ತಂದೆ ಬಸವಂತ್ರಾಯ ಮಾಲಿ ಬಿರಾದಾರ ರವರೆಲ್ಲರೂ ಕೂಡಿ ಬಸವರಾಜನಿಗೆ ತಿಳವಳಿಕೆ ಹೇಳಿ ಕಳುಹಿಸಿಕೊಟ್ಟರು, ನಮ್ಮ ಮನೆಯ ಮುಂದೆ ತೊಗರಿ ಕಟ್ಟಿಗೆ ಮತ್ತು ಆಪಿನಿಂದ ಒಂದು ಶಡ್ಡ ಕಟ್ಟಿದ್ದು, ಅದರ ಮೇಲೆ 10 ಪತರಾಸ ಹಾಕಿರುತ್ತೇವೆ, ಮನೆಯಲ್ಲಿ ಮತ್ತು ಮನೆಯ ಮುಂದೆ ಇದ್ದ ಶಡ್ಡಿನಲ್ಲಿ ಹತ್ತಿ ಹಾಕಿದ್ದು ಇರುತ್ತದೆ, ಮತ್ತು ಎರಡುಕುರಿಗಳನ್ನು ಸಹ ಅಲ್ಲೆ ಶಡ್ಡಿನಲ್ಲಿ ಕಟ್ಟಿ ನಾನು ನಮ್ಮ ತಂಗಿ ಬೋರಮ್ಮ ಮತ್ತು ಅವಳ ಮಗ ಮೂರುಜನರು ಊಟ ಮಾಡಿ ರಾತ್ರಿ 9;30 ಗಂಟೆಗೆ ಶಡ್ಡಿನಲ್ಲೇ ಮಲಗಿಕೊಂಡಿರುತ್ತೇವೆ, ನಮ್ಮ ತಂದೆ ತಾಯಿ ಮತ್ತು ನಮ್ಮ ತಮ್ಮ ಬಾಪುಗೌಡ ಹಾಗು ಅವನ ಹೆಂಡತಿ ದೇವಕ್ಕಿ ಹೀಗೆಲ್ಲರೂ ಮನೆಯ ಮುಂದಿನ ಇನ್ನೊಂದು ಕೋಣೆಯಲ್ಲಿ ಮಲಗಿಕೊಂಡಿದ್ದರು, ರಾತ್ರಿ 11;00 ಗಂಟೆ ಸುಮಾರಿಗೆ ನಾವು ಮಲಗಿದ ಶಡ್ಡಿಗೆ ಬೆಂಕಿ ಹತ್ತಿದ್ದನ್ನು ನೋಡಿ ನಾನು ಒಮ್ಮೇಲೆ ಚೀರಾಡಿ ನಮ್ಮ ತಂಗಿಗೆ ಮತ್ತು ಅವಳ ಮಗನಿಗೆ ಕರೆದುಕೊಂಡು ಹೊರಗೆ ಬಂದು ನೋಡಿದಾಗ ನಮ್ಮ ತಂಗಿ ಗಂಡ ಬಸವರಾಜ ಈತನು, ಕಡ್ಡಿ ಕೊರಿದು ಬೆಂಕಿ ಹಚ್ಚಿನಿ ಮಕ್ಕಳ್ಯಾ ಇವತ್ತ ನನ್ನ ಕೈಯಲ್ಲಿ ನೀವೆಲ್ಲರೂ ಸಾಯಿತಿರಿ ಅಂತಾ ಅನ್ನುತ್ತಿದ್ದನು, ಆಗ ನಾನು ಅವನಿಗೆ ಹಿಡಿಯಲು ಹೋದಾಗ ಓಡಿ ಹೋದನು, ನಂತರ ನಮ್ಮ ತಂದೆ ತಾಯಿ ನಮ್ಮ ತಮ್ಮ ಬಾಪುಗೌಡ ಮತ್ತು ಅವರ ಹೆಂಡತಿ ದೇವಕ್ಕಿ ಹಾಗು ನಮ್ಮ ಅಣ್ಣತಮ್ಮಕಿಯ ಬಾಬುಗೌಡ ಮಾಲಿಪಾಟೀಲ, ಮಲ್ಲಿನಾಥ ಮಾಲಿ ಬಿರಾದಾರ, ಬಸವರಾಜ ತಂದೆ ಶರಣಪ್ಪ ಬಳೂಂಡಗಿ, ಖ್ಯಾತಪ್ಪಗೌಡ ಖಾನಗೌಡ ಹಿಗೆಲ್ಲರೂ ಕೂಡಿ ಬೆಂಕಿ ಆರಿಸುವಷ್ಟರಲ್ಲಿ ಶಡ್ಡಿನಲ್ಲಿದ್ದ ಸುಮಾರು 12 ಕ್ವೀಂಟಲ್ ಹತ್ತಿ ಮತ್ತು ಅಡುಗೆ ಸಾಮಾನುಗಳು ವ್ಯವಸಾಯಕ್ಕೆ ಉಪಯೋಗಿಸುವ ದಿಂಡು ಮತ್ತು ನಗ ಹಾಗು ಇತರೆ ವ್ಯವಸಾಯದ ಸಾಮಗ್ರಿಗಳು, ಮತ್ತು ಮೋಟರ ಸೈಕಲ್ ನಂ ಕೆ.-32/.ಎಲ್-6389, ಮತ್ತು 10 ಪತರಾಸಗಳು ಹಾಗು ಒಂದು ಕುರಿಯನ್ನು ಸಂಪೂರ್ಣವಾಗಿ ಸುಟ್ಟು ಸತ್ತು ಹೋಗಿರುತ್ತದೆ, ಇನ್ನೊಂದು ಕುರಿಗೆ ಸುಟ್ಟ ಗಾಯಗಳು ಆಗಿರುತ್ತವೆ, ಹೀಗೆ ಸುಮಾರು ಅಂದಾಜು 1,20,000/- (ಒಂದು ಲಕ್ಷ ಇಪ್ಪತ್ತು ಸಾವಿರ) ರೂಪಾಯಿಯಷ್ಟು ಹಾನಿಮಾಡಿರುತ್ತಾನೆ ಅಂತಾ ಶ್ರೀ ಶರಣಗೌಡ ತಂದೆ ಅಳ್ಳಪ್ಪಗೌಡ ಮಾಲಿ ಬಿರಾದರ, ಸಾ: ಸುಂಬಡ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಠಾಣೆ : ಶ್ರೀ ಚಾಂದಪಟೇಲ ತಂದೆ ಮೋದಿನ ಪಟೇಲ ಸಾ:ಶಹಾಜಿಲಾನಿ ದರ್ಗಾ ಹತ್ತಿರ 2ನೇ ಕ್ರಾಸ ಮದೀನಾ ಕಾಲೋನಿ ಕಲಬುರಗಿ ರವರು ಹಾಗೂ ದೌಲ ಪಟೇಲ, ಲಾಲ ಪಟೇಲ ಹಾಗೂ ಚಾಂದ ಪಟೇಲ ಅಂತಾ 4 ಜನ ಅಣ್ಣ-ತಮ್ಮಂದಿರು ಇದ್ದು ನಮ್ಮ ತಂದೆಯವರಾದ ಮೋದಿನ ಪಟೇಲ ಇವರು ಮದೀನಾ ಕಾಲೋನಿಯ ಜಿಲಾನಾಬಾದ ದರ್ಗಾ ಹತ್ತಿರ ಪ್ಲಾಟ ಖರೀದಿಸಿ ಮನೆ ಕಟ್ಟಿಸಿದ್ದು ಆ ಮನೆಯಲ್ಲಿ 4 ಜನ ಅಣ್ಣ-ತಮ್ಮಂದಿರಿಗೆ ಸಮನಾಗಿ ಕೋಣೆಗಳು ಹಂಚಿಕೆಯಾಗಿದ್ದು ಆದರೆ ನಮ್ಮ ಅಣ್ಣನಾದ ಲಾಲಪಟೇಲ ಇತನು ನಾನೇ ಮನೆಯ ವಾರಸುದಾರ ನಾನು ಮನೆ ಕೊಡುವದಿಲ್ಲಾ ಅಂತಾ ನಮ್ಮೊಂದಿಗೆ ಜಗಳ ಮಾಡುತ್ತಾ ಬಂದಿರುತ್ತಾನೆ. ದಿನಾಂಕ:- 16/02/2019 ರಂದು 7.30 ಪಿ.ಎಂ ಸುಮಾರಿಗೆ ನಾನು ನಮ್ಮ ಸ್ವಂತ ಊರಾದ ಹಸರಗುಂಡಗಿಯಿಂದ ಮನೆಗೆ ಬಂದಾಗ ನಮ್ಮ ಅಣ್ಣನಾದ ಲಾಲ ಪಟೇಲ ಇತನು ಈ ಮನೆಗೆ ಯಾಕೆ ಬಂದಿದ್ದಿ ಮಗನೆ ನಿನ್ನ ಸೊಕ್ಕು ಬಹಳ ಆಗ್ಯಾದ ಅಂದವನೆ ನನಗೆ ಹೊಡೆಯಲು ಬಂದನು ಆಗ ಆತನಿಂದ ತಪ್ಪಿಸಿಕೊಂಡು ಹಿಂದೆ ಸರಿದಾಗ ನಮ್ಮ ಅತ್ತಿಗೆಯಾದ ಅಂಜುಮ ಬೇಗಂ ಗಂಡ ಲಾಲಪಟೇಲ ಇವರು ಬಂದು ನನಗೆ ತಡೆದು ಹಿಡಿದುಕೊಂಡಳು ಆಗ ನಮ್ಮ ಅಣ್ಣ ಲಾಲಪಟೇಲ ಇತನು ಚಾಕುವಿನಿಂದ ನನ್ನ ಎಡಗೈ ರಟ್ಟೆಗೆ ಹೊಡೆದು ರಕ್ತಗಾಯ ಗೊಳಿಸಿದನು. ಆಗ ಲಾಲಪಟೇಲ ಇತನ ಅತ್ತೆ, ಮಾವ ಇವರು ಬಂದು ಇವನಿಗೆ ಬಿಡಬೇಡ ಹೊಡೆಯಿರಿ ಅಂತಾ ಅವರು ನನಗೆ ಹಿಡಿದುಕೊಂಡರು ಆಗ ಮತ್ತೆ ನಮ್ಮ ಅಣ್ಣ ಲಾಲಪಟೇಲ ಚಾಕುವಿನಿಂದ ಹೊಡೆಯಲು ಬಂದಾಗ ನನ್ನ ಬಲಗೈ ಉಂಗುರು ಬೇರಳಿಗೆ ಏಟು ಬಿದ್ದು ಸ್ವಲ್ಪ ರಕ್ತಗಾಯವಾಗಿದ್ದು ಇರುತ್ತದೆ.  ಅಕ್ಕ-ಪಕ್ಕದ ಮನೆಯವರು ಬಂದಾಗ ನನಗೆ ಹೊಡೆಯುವದು ಬಿಟ್ಟು ಇನ್ನೊಂದು ಸಲ ಈ ಮನೆ ಕಡೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಬೈಯುತ್ತಾ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದರೋಡೆ ಮಾಡಿ ಅಪಹರಣ ಮಾಡಿಕೊಂಡು ಹೋದ ಪ್ರಕರಣ :
ನರೋಣಾ ಠಾಣೆ : ಶ್ರೀ  ಅಪ್ಪಾರಾಯ ತಂದೆ ವಿಠಲ್ ಇಲ್ಲಾಳ ಸಾ:ಲೇಂಗಟಿ ಗ್ರಾಮ ರವರ ಮಗಳಾದ  ಸದುಮತಿ ಇವಳು, ಈಗ ಕೆಲವು ದಿವಸಗಳ ಹಿಂದೆ ನನ್ನ ಮಗಳು ಆಳಂದಲ್ಲಿ ಕೆಲವು ದಿವಸ ಖಾಸಗಿ ಶಿಕ್ಷಕಿ ಅಂತಾ ಕೆಲಸ ಮಾಡಿ ಕೆಲವು ದಿವಸಗಳಿಂದ ನನ್ನ ಮಗಳು ನಮ್ಮ ಹತ್ತಿರವೆ ಇದ್ದಳು.   ದಿನಾಂಕ:13/02/2019 ರಂದು ಬೆಳಿಗ್ಗೆ 0600 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿ ಗೀತಾಬಾಯಿ ಮಗಳಾದ ಸದುಮತಿ ಹೊಲದಲ್ಲಿದ್ದಾಗ ಅದೇ ಸಮಯಕ್ಕೆ ನಮ್ಮ ಹೊಲದಲ್ಲಿ ಸುಮರು 5-6 ಜನರು ಅಪರಿಚಿತರು ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಬಂದು ನನಗೂ ಮತ್ತು ನನ್ನ ಹೆಂಡತಿಯಾದ ಗೀತಾಬಾಯಿ ಇಬ್ಬರಿಗೂ ಕೈಯಿಂದ ಮತ್ತು ಕಾಲಿನಿಂದ ಮತ್ತು ಬಡೆಗೆಯಿಂದ ಸಿಕ್ಕಾಪಟ್ಟೆ ಹೊಡೆಬಡೆ ಮಾಡಿ ಜೀವನ ಸಹಿತ ಬಿಡುವುದಿಲ್ಲ ಅಂತಾ ನನಗೆ ಹಾಗೂ ನನ್ನ ಹೆಂಡತಿಗೆ ಜೀವ ಭಯಹಾಕಿ ಅವಾಚ್ಯ ಶಬ್ದಗಳಿಂದ ರಂಡಿಮಗಳೆ ಭೋಸಡಿ ಮಗಳೆ ಎಂದು ನನ್ನ ಹೆಂಡತಿ ಹತ್ತಿರ ಇದ್ದ ಒಂದು 10 ಗ್ರಾಂ ಬಂಗಾರದ ಚೈನ್ ಅ.ಕಿ 30000/- ರೂಪಾಯಿ ಕಿಮ್ಮತ್ತಿನ ಜಬರದಸ್ತಿಯಿಂದ ಕಸಿದುಕೊಂಡು ಅಲ್ಲದೇ ನನ್ನ ಮಗಳಾದ ಸದುಮತಿ ಇವಳಿಗೆ ಅಪರಿಹಿಸಿಕೊಂಡು ಅವರು ತಾವು ತಂದ ವಾಹನದಲ್ಲಿ ಹಾಕಿಕೊಂಡು ಓಡಿಹೋಗುವಾಗ ಏ ರಮೇಶ ನಡಿಯೋ, ಏ ಶ್ರೀಮಂತ ನಡಿಯೋ, ಏ ಪ್ರಕಾಶ ನಡಿಯೋ, ಸಿದ್ದಾರೂಡ, ಅನೀಲ ತುಸಾರ ಬೇಗ ನಡೆರಿ ಬೇಗ ನಡೆರಿ ಅಂದಾಡುತ್ತಾ ಓಡಿ ತಮ್ಮ ದೂರದಲ್ಲಿ ನಿಂತಿರುವ ಜೀಪ್ ವಾಹನದಲ್ಲಿ ನನ್ನ ಮಗಳನ್ನು ಅಪಹರಿಸಿಕೊಂಡು ಖೇರಡಕ್ಕೆ ಹೋಗುತ್ತಿದ್ದೇವೆ ಅಂತಾ ಹೇಳಿದರು ಆಗ ಅದೇ ಸಮಯಕ್ಕೆ ದಾರಿಯಿಂದ ನಮ್ಮೂರ ಕಾಶಿರಾಯ ಲಾಡವಂತಿ ಮತ್ತು ಹಣಮಂತ ಇವರು ದಾರಿಯಿಂದ ಬರುತ್ತಿರುವಾಗ ನೋಡಿರುತ್ತಾರೆ.  ನಮಗೆ ಯಾವುದೇ ರೀತಿ ತೋಚದೆ ಇರುವುದರಿಂದ ನಾವು ಹಾಗೆ ಮನೆಯಲ್ಲಿ ಊಳಿದುಕೊಂಡು ಮತ್ತು ಖಾಸಗಿಯವಾಗಿ ಮನೆಯಲ್ಲಿ ಉಪಚಾರ ಪಡೆದುಕೊಂಡಿದ್ದು ನನಗೆ ಹೊಡೆಬಡೆ ಮಾಡಿ ನಮ್ಮ ಹತ್ತಿರವಿದ್ದ ಬಂಗಾರದ ಆಭರಣಗಳನ್ನು ಜಬರದಸ್ತಿಯಿಂದ ಕಸಿದುಕೊಂಡು ಸುಲಗೆ ಮತ್ತು ದರೋಡೆ ಮಾಡಿದ್ದು ಅಲ್ಲದೇ ನನ್ನ ಮಗಳಾದ ಸದುಮತಿ ಇವಳಿಗೆ ಅಪರಿಸಿಕೊಂಡು ಹೋಗಿದ್ದು ಆದ್ದರಿಂದ ನನ್ನ ಮಗಳಾದ ಸದುಮತಿಗೆ ಪತ್ತೆಹಚ್ಚಿ ಹಾಗೂ ಅಪಹರಣ ಮತ್ತು ದರೋಡೆ ಮಾಡಿದವರ ಹಾಗೂ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

16 February 2019

KALABURAGI DISTRICT REPORTED CRIMES

ಅನಧೀಕೃತವಾಗಿ ಮಧ್ಯ ಮಾರಾಟಮಾಡುತ್ತಿದ್ದವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 15.02.2019 ರಂದು ಬೆಳ್ಳಿಗ್ಗೆ ರಾಘವೇಂದ್ರ  ನಗರ  ಠಾಣಾ ವ್ಯಾಪ್ತಿಯ ವಿನೊಭಾ ಬಾವೆ ಚೌಕ ಹತ್ತಿರ ಪಂಪಚರ ಅಂಗಡಿಯಲ್ಲಿ ಒಬ್ಬ ವ್ಯಕ್ತಿ ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯದ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ನೋಡಲು ವಿನೊಭಾ ಬಾವೆ ಚೌಕ ದಿಂದ ಬೊರಾಬಾಯಿ ನಗರದ ಕಡೆಗೆ ಹೋಗುವ ರಸ್ತೆಗೆ ಉತ್ತರಕ್ಕೆ ಮುಖ ಮಾಡಿಕೊಂಡಿರುವ ಒಂದು ಪಂಪಚರ ಅಂಗಡಿಯಲ್ಲಿ ಒಬ್ಬ ವ್ಯಕ್ತಿ ಪ್ಲಾಸ್ಟಿಕ ಚೀಲದಲ್ಲಿ ಮಧ್ಯದ ಟೇಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಮಧ್ಯ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಮಧ್ಯ ಮಾರಾಟ ಮಾಡುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ವಿಜಯಕುಮಾರ ತಂದೆ ರಾಮಚಂದ್ರ ಮಾನೆ ಸಾ: ಚಾಣುಕ್ಯ ಬಾರ ಹತ್ತಿರ ಬ್ರಹ್ಮಪೂರ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ ನಗದು ಹಣ 225/- ರೂ ದೊರೆತಿದ್ದು ಸ್ಥಳದಲ್ಲಿ ಪರಿಶೀಲಿಸಿ ನೋಡಲು ಮಾರಾಟ ಕುರಿತು ಇಟ್ಟಿದ 90 ಎಮ್.ಎಲ್.ದ ಓರಿಜಿನಲ್ ಚ್ವಾಯಿಸ್ ವಿಸ್ಕಿ 54 ಟೇಟ್ರಾ ಪಾಕೇಟಗಳಿದ್ದು ಒಂದು ಟೇಟ್ರಾ ಪಾಕೇಟ ಬೇಲೆ 30.ರೂ 32 ಪೈಸೆ. ಇದ್ದು ನಂತರ ಸದರಿಯವನಿಗೆ ಮಧ್ಯ ಎಲ್ಲಿಂದ ತಂದು ಮಾರಾಟ ಮಾಡುತ್ತಿರುವೆ ಅಂತ ವಿಚಾರಿಸಿದಾಗ ಸದರಿಯವನು ಗೊಪಿ ವೈನ ಶ್ಯಾಪ ದಿಂದ ತೆಗೆದುಕೊಂಡು ಬಂದು ಮಾರಾಟ ಮಾಡುತ್ತಿದ್ದೆನೆ ಅಂತ ತಿಳಿಸಿದ್ದು ಸ್ಥಳದಲ್ಲಿ ದೊರೆತ ಟೇಟ್ರಾ ಪ್ಯಾಕೆಟಗಅ:ಕಿ: 1606 ರೂ 96 ಪೈಸೆ ನೇದ್ದನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 15.02.2019 ರಂದು ರಾಘವೇಂದ್ರ ನಗರ ಠಾಣಾ  ವ್ಯಾಪ್ತಿಯ ಡಬರಾಬಾದ ಕ್ರಾಸ ಹತ್ತಿರ ಸಂತೊಷ ಕಾಲೋನಿ ಹೋಗು ಮುಖ್ಯ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಎ.ಎಸ್‌‌.ಐ ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ  ಡಬರಾಬಾದ ಕ್ರಾಸ ಹತ್ತಿರ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಡಬರಾಬಾದ ಕ್ರಾಸ ದಿಂದ ಸಂತೋಷ ಕಾಲೋನಿ ಕಡೆಗೆ ಹೋಗುವ  ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು  ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಮಹ್ಮದ ಶಫೀ ತಂದೆ ಮಹ್ಮದ ಲಿಯಾಖತ ಪ್ರೂಟವಾಲೆ ಸಾ: ಡಬರಾಬಾದ ಕ್ರಾಸ ಲಕ್ಷ್ಮಿ ನಗರ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ ನಗದು ಹಣ 1050 ರೂ,2 ಮಟಕಾ ಬರೇದ ಚೀಟಿಗಳು ಅ:ಕಿ: 00 ಮತ್ತು ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ವಶಕ್ಕೆ ಪಡೆದು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 15-02-2019  ರಂದು ಗುಡ್ಡೆವಾಡಿ ಕಡೆಯಿಂದ ಆನೂರ ಗ್ರಾಮದ ಕಡೆಗೆ ಅನದಿಕೃತವಾಗಿ ಕಳ್ಳತನದಿಂದ ಟಿಪ್ಪರಗಳಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಆನೂರ ಗ್ರಾಮದ ಹೈಸ್ಕೂಲ ಹತ್ತಿರ ಹೋಗುತ್ತಿದ್ದಾಗ ಆನೂರ ಗ್ರಾಮದ ಕಡೆಯಿಂದ ಎರಡು ವಾಹನಗಳು ಬರುತ್ತಿದ್ದು ನೋಡಿ, ನಾವು ನಮ್ಮ ವಾಹನವನ್ನು ನಿಲ್ಲಿಸಿ ಕೆಳಗೆ ಇಳಿದು ಸದರಿ ವಾಹನಗಳನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ ಸದರಿ ವಾಹನದ ಚಾಲಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ಮತ್ತು ನಮ್ಮ ಇಲಾಖಾ ವಾಹನವನ್ನು ನೋಡಿ ತಮ್ಮ ವಾಹನಗಳನ್ನು ರೋಡಿನ ಮೇಲೆ ನಿಲ್ಲಿಸಿ ಕತ್ತಲಲ್ಲಿ ತಪ್ಪಿಸಿಕೊಂಡು ಓಡಿ ಹೋದರು. ನಂತರ ನಾವು ಪಂಚರ ಸಮಕ್ಷಮ ಸದರಿ ವಾಹನಗಳ ಹತ್ತಿರ ಹೋಗಿ ಚೆಕ್ ಮಾಡಿ ನೋಡಲು 1) ಭಾರತ ಬೆಂಜ್ ಕಂಪನಿಯ ಟಿಪ್ಪರ ಇದ್ದು ಅದರ ನಂ ಕೆಎ-32 ಡಿ-9850 ಇದ್ದು, ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇತ್ತು.  ಟಿಪ್ಪರ ಅಂದಾಜು ಕಿಮ್ಮತ್ತು 10,00,000/- ರೂ ಮತ್ತು ಸದರಿ ಟಿಪ್ಪರನಲ್ಲಿದ್ದ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 10,000/- ರೂ ಆಗಬಹುದು. 2) ಭಾರತ ಬೆಂಜ್ ಕಂಪನಿಯ ಟಿಪ್ಪರ ಇದ್ದು ಅದರ ನಂ ಕೆಎ-32ಸಿ-9850 ಇದ್ದು, ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇತ್ತು.  ಟಿಪ್ಪರ ಅಂದಾಜು ಕಿಮ್ಮತ್ತು 10,00,000/- ರೂ ಮತ್ತು ಸದರಿ ಟಿಪ್ಪರನಲ್ಲಿದ್ದ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 10,000/- ರೂ ಆಗಬಹುದು. ನಂತರ ಸದರಿ ಎರಡು ಮರಳು ತುಂಬಿದ ಟಿಪ್ಪರಗಳನ್ನು ಪಂಚರ ಸಮಕ್ಷಮ ವಶಕ್ಕೆ ಪಡೆದು ಸದರ ಬಾಹನಗಳೋಂದಿಗೆ ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ನರೋಣಾ ಠಾಣೆ : ದಿನಾಂಕ:15-02-2019 ರಂದು  ಶ್ರೀ ಮಹಾರಾಜ ತಂದೆ ರೇವಣಸಿದ್ದಪ್ಪಾ ಕೆರೂರ ಸಾ:ಕಡಗಂಚಿ ಗ್ರಾಮ ರವರು ಮತ್ತು  ಮಗನಾದ ಮಾಳಪ್ಪಾ ಈತನ ಮೊಟಾರ್ ಸೈಕಲ್ ಸ್ಪೈಲಂಡರ್ ಪ್ಲಸ್ ಸಿಲಿವರ್ ಕಲರ ಅದರ ನಂ: ಕೆಎ32-ಇಟಿ0939 ನೇದ್ದರ ಮೇಲೆ 0900 ಎ.ಎಂ ಸುಮಾರಿಗೆ ಕಡಗಂಚಿ ಗ್ರಾಮಕ್ಕೆ ಹೋಗಿದ್ದ ಅಲ್ಲಿ ಕೂಲಿಜನರಿಗೆ ಜೋಳಾ ಕಟಾವು ಮಾಡಲು ಹೇಳಿ ವಾಪಸ್ಸು ಹೊಲಕ್ಕೆ ಹೊರಟಾಗ ಕಡಗಂಚಿ ಬಸ್ ನಿಲ್ದಾಣ ದಾಟಿದಾಗ ನನ್ನ ಮಗ ಮಾಳಪ್ಪಾ ತನ್ನ ಸ್ವಧಿನದ ಮೊಟಾರ್ ಸೈಕಲ್ ಅತೀವೇಗ ಮತ್ತು ನಿಷ್ಕಾಳಜಿತನಿಂದ ನಡೆಯಿಸುತ್ತಿದ್ದನು. ಹಿಂದೆ ಕುಳಿತಿದ್ದ ನಾನು ಅವನಿಗೆ ಎಸ್ಟೇ ಸಮಜಾಯಿಸಿದರು ಕೇಳದೆ ಹಾಗೆ ನಿಷ್ಕಾಳಜಿತನಿಂದ ಮೊಟಾರ್ ಸೈಕಲ್ ಓಡಿಸಿ ಸ್ವಾಮಿ ಸಮರ್ಥ ಪೆಟ್ರೋಲ್ ಬಂಕ್ ದಾಡುತ್ತಿದ್ದಾಗ  ಜಂಪಿನಲ್ಲಿ ಜೋರಾಗಿ ಹೋಗಿ ವಾಹನದ ಆಯಾತಪ್ಪಿ ಎಡಭಾಗಗಕ್ಕೆ ವಾಹನ ಸ್ಕಿಡಾಗಿ ಜೋರಾಗಿ ನೆಲಕ್ಕೆ ಬಿಳಿಸಿದನು ಅದರಿಂದ ನನ್ನ ಎಡಭಾಗದ ತೊಡೆಯಿಂದ ಪಾದದ ವರೆಗೆ ಭಾರಿ ಗಾಯವಾಗಿದ್ದು ನಮ್ಮ ಗ್ರಾಮದ ಗುರಣ್ಣಾ ಹೊನ್ನಾನವರ, ವಿಠಲ್ ಹಿರೇಕುರುಬರ, ಭೀಮಾಶಂಕರ ಪಟ್ಟಣ, ಅಣ್ಣಾರಾವ ಬಬಲಾದಿ ಇವರುಗಳು ಬಂದು ನನಗೆ ಒಂದು ಜೀಪಿನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿರುತ್ತಾರೆ. ಕಾರಣ ನನ್ನ ಮಗ ಮಾಳಪ್ಪಾ ಈತನು ತನ್ನ ಮೊಟಾರ್ ಸೈಕಲ್ ನಂ: ಕೆಎ32-ಇಟಿ0939 ನೇದ್ದು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿ ಅಪಘಾತ ಪಡಿಸಿ ನನಗೆ ದುಖಃಪಾತ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.