POLICE BHAVAN KALABURAGI

POLICE BHAVAN KALABURAGI

31 May 2017

Kalaburagi District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಗುಣವಂತ ತಂದೆ ಶಂಕರ ಬಿಸೆ ಸಾ: ಮಣೂರ ಇವರು ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜಾರಿಕೆ ಸೇವೆ ಮಾಡುತ್ತಿದ್ದು  ನಮ್ಮಂತೆ ನಮ್ಮೂರಿನ ತಮ್ಮಣ್ಣ ತಂದೆ ಶಿವಪ್ಪ ಪೂಜಾರಿ ಇವರ ಕುಟುಂಬಕ್ಕು ಸಹ ಪೂಜಾರಿಕೆಯ ಪಾಲು ಇರುತ್ತದೆ, ಈಗ ಕೆಲವು ವರ್ಷಗಳಿಂದ ಸದರಿ ತಮ್ಮಣ್ಣ ಪೂಜಾರಿ ಮತ್ತು ಅವನ ಕಡೆಯವರು ನಮಗೆ ಶ್ರೀ ಯಲ್ಲಮ್ಮ ದೇವಸ್ಥಾನದ ಪೂಜಾರಿಕೆ ಪೂರ್ತಿ ನಮ್ಮದು ಇರುತ್ತದೆ ನೀವು ಇನ್ನುಮುಂದೆ ಪೂಜಾರಿಕೆ ಮಾಡಬೇಡಿ ಅಂತಾ ಹೇಳಿದ್ದರಿಂದ ನಮಗೂ ಅವರಿಗೂ ತಕರಾರು ಆಗಿರುತ್ತದೆ. ಅಂದಿನಿಂದ ಸದರಿ ತಮ್ಮಣ್ಣ ಪೂಜಾರಿ ಮತ್ತು ಅವನ ಕಡೆಯವರು ನಮ್ಮ ಮೇಲೆ ದ್ವೇಷ ಸಾದಿಸುತ್ತಾ ಬಂದಿರುತ್ತಾರೆ, ದಿನಾಂಕ 30-05-2017 ರಂದು ಸದರಿ ಶ್ರೀ ಯಲ್ಲಮ್ಮ ದೇವಸ್ಥಾನದ ಪೂಜಾರಿಕೆ ವಿಷಯವಾಗಿ ಇದ್ದ ತಕಾರಿನ ಬಗ್ಗೆ ನ್ಯಾಯ ಪಂಚಾಯತಿ ಮಾಡಿ ಬಗೆ ಹರಿಸಿಕೊಳ್ಳೊಣ ಎಂದು ಗ್ರಾಮದ ಮುಖಂಡರು ಹೇಳಿದ ಮೇರೆಗೆ ಇಂದು ಮದ್ಯಾಹ್ನ 2:00 ಗಂಟೆ ಸುಮಾರಿಗೆ ಭೀಮಾ ನದಿಯ ಹತ್ತಿರ ಇರುವ ಶ್ರೀ ಅಂಬಾ ಭವಾನಿ ಗುಡಿಯ ಹತ್ತಿರ ಎಲ್ಲರಿಗೂ ಬರಲು ತಿಳಿಸಿದ ಮೇರೆಗೆ ನಾನು ಮತ್ತು ನಮ್ಮ ಸಮಾಜದ ಎಲ್ಲಾ ಮುಖಂಡರು ಕೂಡಿಕೊಂಡು ಶ್ರೀ ಅಂಬಾ ಭವಾನಿ ಗುಡಿಯ ಹತ್ತಿರ ಹೋಗಿ ಮಾತುಕತೆ ಮಾಡುತ್ತಿದ್ದಾಗ ನಮ್ಮೂರಿನ 1)  ಬಸಪ್ಪ ತಂದೆ ಮಾಹಾದೇವಪ್ಪ ಕರೂಟಿ 2) ಬಸು ಅಳ್ಳಗಿ  3) ಯಶವಂತ ಕರೂಟಿ 4) ಚನ್ನು ಕರೂಟಿ 5) ಮಾಹಾದೇವ ಸಾಲುಟಗಿ 6) ಮಾಹಾದೇವ ಅಲ್ಲಾಪೂರ 7) ಮಾಹಾದೇವ ಜಾನಕರ್ 8) ಧಾನು ಧಾನಶೇಟ್ಟಿ ಮತ್ತು ಇವರ ಕಡೆಯವರು 9) ಭೀಮಣ್ಣ ಹತ್ತರಕಿ 10) ಮುದಕಪ್ಪ ತಂದೆ ಬಸಪ್ಪ ಹಿರೋಳ್ಳಿ 11) ಶಿರಕೂ ಕರೂಟಿ 12) ತಮ್ಮಣ್ಣ ತಂದೆ ಶಿವಪ್ಪ ಪೂಜಾರಿ 13) ಭಿಮಾಶಂಕರ ತಂದೆ ಗಡ್ಡೆಪ್ಪ ಪೂಜಾರಿ 14) ಶೇಖರ ತಂದೆ ತಮ್ಮಣ್ಣ ಪೂಜಾರಿ 15) ಧಾನಪ್ಪ ತಂದೆ ತಮ್ಮಣ್ಣ ಪೂಜಾರಿ 16) ಶಿವಪ್ಪ ತಂದೆ ಗಡ್ಡೆಪ್ಪ ಪೂಜಾರಿ 17) ಪ್ರಕಾಶ ತಂಣದೆ ಗಡ್ಡೆಪ್ಪ ಪೂಜಾರಿ 18) ಮಲ್ಲು ತಂದೆ ಗಡ್ಡೆಪ್ಪ ಪೂಜಾರಿ 19) ಶಿವಪ್ಪ ತಂದೆ ಪರಮೇಶ್ವರಪೂಜಾರಿ 20) ಬಸವರಾಜ ತಂದೆ ಪರಮೇಶ್ವರ ಪೂಜಾರಿ 21) ಸಚಿನ ತಂದೆ ಸಿದ್ದಪ್ಪ ಪೂಜಾರಿ 22) ರಾಹುಲ್ ತಂದೆ ಶಾಂತಪ್ಪ ಪೂಜಾರಿ ಹಾಗೂ ಇತರರೂ ಕೂಡಿಕೊಂಡು ಒಳಸಂಚು ಮಾಡಿ ಬಸಪ್ಪ ತಂದೆ ಮಾಹಾದೇವಪ್ಪ ಕರೂಟಿ ಇವರ ಕಾರ ನಂ ಎಮ್.ಹೆಚ್-13 9555 ಕಾರಿನಲ್ಲಿದ್ದ ಬಡಿಗೆಗಳನ್ನು ಹಾಗೂ ಕಲ್ಲುಗಳನ್ನು ಮತ್ತು ತಲವಾರನ್ನು ತಗೆದುಕೊಂಡು ಬಂದು ಏಕಾ ಏಕಿ ನನಗೆ ಮತ್ತು ನನ್ನ ಮಕ್ಕಳಾದ ಆಕಾಶ ತಂದೆ ಗುಣವಂತ ಬಿಸೆ (ಗೊಂದಳಿ), ಲಕನ್ ತಂದೆ ಗುಣವಂತ ಬಿಸೆ (ಗೊಂದಳಿ), ನನ್ನ ಹೆಂಡತಿ ಇಂದುಬಾಯಿ ಗಂಡ ಗುಣವಂತ ಬಿಸೆ (ಗೊಂದಳಿ), ಹಾಗೂ ನಮ್ಮ ಅಣ್ಣ ತಮ್ಮಕಿಯ ಕಿರಣ ತಂದೆ ಸಹದೇವ ಬಿಸೆ (ಗೊಂದಳಿ), ಮಹಾದೇವ ತಂದೆ ಮೋತಿರಾಮ ಬಿಸೆ (ಗೊಂದಳಿ), ವಿಷ್ಣು ತಂದೆ ಶಂಕರ ಬಿಸೆ (ಗೊಂದಳಿ), ಅಂಬಾದಾಸ್ ತಂದೆ ಅರ್ಜುನ ಬಿಸೆ (ಗೊಂದಳಿ), ವಿಜಯ ತಂದೆ ಗುಂಡಪ್ಪ ಬಿಸೆ (ಗೊಂದಳಿ), ಮನೋಹರ್ ತಂದೆ ದೊಂಡಿಬಾ ಪಾಚಂಗೆ ನಮಗೆಲ್ಲರಿಗೂ ಮಾರಕಾಸ್ತ್ರಗಳಿಂದ ನಮ್ಮ ಮೇಲೆ ಹಲ್ಲೆ ಮಾಡಿರುತ್ತಾರೆ, ಸದರಿಯವರು ನಮಗೆ ಹಲ್ಲೆ ಮಾಡುತ್ತಿದ್ದಾಗ ನ್ಯಾಯ ಪಂಚಾಯತಿಗೆ ಬಂದವರು ನಮಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ಸದರಿಯವರು ಹೊಡೆದರಿಂದ ನಮಗೆಲ್ಲರಿಗೂ ಬಾರಿ ರಕ್ತಗಾಯಗಳು ಮತ್ತು ಒಳಪೆಟ್ಟುಗಳು ಆಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಜೇವರಗಿ ಠಾಣೆ : ಶ್ರೀ ದೇವಿಂದ್ರ ತಂದೆ ತಿಪ್ಪಣ್ಣ ಜಾನ ಸಾಃ ಜೀವಣಗಿ ತಾಃ ಜಿಃ ಕಲಬುರಗಿ ಹಾಃವಃ ಗಂಗಾಮಯಿ ಮಠ ಹತ್ತಿರ ಜೇವರಗಿ ಇವರು ಜೇವರಗಿ ಪಟ್ಟಣದ ಗಂಗಾಮಯಿ ಮಠದ ಹತ್ತಿರ ಸ್ವಂತ ಮನೆ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೆನೆ. ನಮ್ಮ ಮನೆಯ ಎರಡು ಕೊಣೆಗಳು ಪರಸಪ್ಪ ತಂದೆ  ಯಲ್ಲಪ್ಪ ಮಾದರ  ಶಿಕ್ಷಕರಿಗೆ ಬಾಡಿಗೆ ಕೊಟ್ಟಿದ್ದು ಅವರು ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಾರೆ.  ದಿನಾಂಕ 28.05.2017 ರಂದು ರಾತ್ರಿ ಮನೆಯಲ್ಲಿ  ಎಲ್ಲರೂ ಊಟಮಾಡಿಕೊಂಡು ರಾತ್ರಿ 10.00 ಗಂಟೆಯ ಸುಮಾರಿಗೆ ನಮ್ಮ ಮನೆಯ ಬಾಗೀಲ ಮುಚ್ಚಿ ಕೀಲಿ ಹಾಕಿ ನಾವು ಮನೆಯವರೆಲ್ಲರೂ ಮತ್ತು ಪರಸಪ್ಪ ಮಾದರ ಎಲ್ಲರೂ ನಮ್ಮ ಮನೆಯ ಛತ್ತಿನ ಮೇಲೆ ಹೋಗಿ ಮಲಗಿಕೊಂಡಿರುತ್ತೆವೆ. ದಿ. 29.05.2017 ರಂದು ಮುಂಜಾನೆ 6.00 ಗಂಟೆಯ ಸುಮಾರಿಗೆ ಪರಸಪ್ಪ ಮಾದರ ಇವರು ಎದ್ದು ಕೇಳಗೆ ಬಂದು ನಮ್ಮ ಮನೆಯ ಬಾಗೀಲ ತೆರೆದಿದ್ದು ನೋಡಿ ಬಂದು ಹೇಳಿದಾಗ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಮನೆಯ ಮೇಲಿಂದ ಎದ್ದು ಬಂದು ನೋಡಲಾಗಿ ನಮ್ಮ ಮನೆಯ ಬಾಗೀಲ ಕೀಲಿ ಮುರಿದಿದ್ದು ಮತ್ತು ಬಾಗೀಲ ತೆರೆದಿದ್ದು ಇತ್ತು ಅಲ್ಲದೆ ಬಾಡಿಗೆ ಇದ್ದ ಪರಸಪ್ಪ ಇವರ ಮನೆಯ  ಬಾಗೀಲ ಸಹ ತೆರೆದಿದ್ದು ಇತ್ತು. ನಂತರ ನಾವು ನಮ್ಮ ಮನೆಯೊಳಗೆ ಹೋಗಿ ನೋಡಲಾಗಿ ನಮ್ಮ ಮನೆಯಲ್ಲಿ ಸಾಮಾನುಗಳು ಚಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು. ನಮ್ಮ ಮನೆಯೊಳಗಿನ ಕಬ್ಬಿಣದ ಕಪಾಟ ತೆರದು ನೋಡಲು ಅರದಲ್ಲಿ ಇಟ್ಟ ಬಂಗಾರದ ಆಭರಣಗಳು  83 ಗ್ರಾಂ ಬಂಗಾರದ ಆಭರಣಗಳು ಅ.ಕಿ. 2,34,000/- ರೂ ಕಿಮ್ಮತ್ತಿನವು ಕಳ್ಳತನವಾಗಿದ್ದವು ನಂತರ ನಮ್ಮ ಮನೆಯಲ್ಲಿ ಬಾಡಿಗೆ ಇದ್ದ ಪರಸಪ್ಪ ಮಾದರ ಇವರ ಮನೆಯ ಬಾಗಿಲ ಕೀಲಿ ಮುರಿದು ಅವರ ಮನೆಯಲ್ಲಿನ 1) ನಗದು ಗಣ 24,200/- ರೂ 2) 5 ಗ್ರಾಂ ಬೆಳ್ಳಿಯ ಒಂದು ಜೊತೆ ಕಾಲು ಚೈನಗಳು ಅ.ಕಿ. 3,000/- ರೂ ಕಿಮ್ಮತ್ತಿನವು ಕಳುವಾದ ಬಗ್ಗೆ ಮತ್ತು ಅವರ ಎಸ್.ಬಿ.ಹೆಚ್. ಬ್ಯಾಂಕ ಜೇವರಗಿಯಲ್ಲಿ ಡಿಪೊಜೀಟ್ ಇಟ್ಟ ಹಣ ಬಾಂಡ್ ಕಳುವಾಗಿರುತ್ತದೆ ಒಟ್ಟು 83 ಗ್ರಾಂ ಬಂಗಾರದ ಅಭರಣಗಳು 5 ಗ್ರಾಂ ಬೆಳ್ಳಿಯ ಆಭರಣಗಳು & ನಗದು ಹಣ ಸೇರಿ ಒಟ್ಟು 2,61,200/- ರೂಪಾಯಿ ಕಿಮ್ಮತ್ತಿನಷ್ಟು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

30 May 2017

Kalaburagi District Reported Crimes

ಕೊಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ. ನೀಲಮ್ಮ ಗಂಡ ಬಾಲರಾಜ ಟೈಗರ್ ಸಾ: ಫಿಲ್ಟರ್ ಬೆಡ್ ಆಶ್ರಯ ಕಾಲನಿ ಕಲಬುರಗಿ ರವರ ಗಂಡನಾದ ಬಾಲರಾಜ ತಂದೆ ಮುಗಲಪ್ಪ ಟೈಗರ ಇವರು ಮಹಾನಗರ ಪಾಲಿಕೆ ಕಲಬುರಗಿಯಲ್ಲಿ ಗುತ್ತಿಗೆ ಪೌರ ಕಾರ್ಮಿಕನೆಂದು ಕಲಬುರಗಿಯ ವಾರ್ಡ ನಂ.36 (ಪ್ಯಾಕೇಜ ನಂ.9) ರಲ್ಲಿ ದಿನಾಂಕ:28/05/2017 ರಂದು ಎಂದಿನಂತೆ ಕರ್ತವ್ಯದಲ್ಲಿದ್ದಾಗ ಬೆಳಗಿನ ಜಾವ 5:00 ಗಂಟೆಗೆ ಎಮ್.ಎಸ್.ಕೆ ಮಿಲ್ ಸೈದಾಪೂರ ಹೊಟೇಲ ಹತ್ತಿರ ಬಯೋಮೆಟ್ರಿಕ ಹೆಬ್ಬಟ್ಟಿನ ಗುರುತಿನ ಹಾಜರಾತಿಯನ್ನು ಹಾಕಿ ಕರ್ತವ್ಯದಲ್ಲಿದ್ದಾಗ ಮದ್ಯಾಹ್ನ 2:00 ಗಂಟೆಯವರೆಗೆ ಕಾರ್ಯ ನಿರ್ವಹಿಸಿ ಮತ್ತೆ ಮದ್ಯಾಹ್ನ ಕರ್ತವ್ಯ ಮುಗಿಸುವ ಹೊತ್ತಿಗೆ ಮಿರ್ಚಿ ಗೋದಾಮನ ಹತ್ತಿರ ಇರುವ ಕಾರ್ಪೊರೇಷನ ಪ್ರಾದೇಶಿಕ ಎಸ.ಐ ಆಫೀಸ್ ನಲ್ಲಿ ಬಯೊಮೆಟ್ರಿಕನಲ್ಲಿ ಹೆಬ್ಬಟ್ಟಿನ ಸಹಿ ಮಾಡುತ್ತಿರುವಾಗ ಆ ಸಮಯದಲ್ಲಿ ಕಛೇರಿಯಲ್ಲಿ ಬಯೊಮೆಟ್ರಿಕ ಮಷೀನ ಇರದ ಕಾರಣ ಬೆರೆ ಕಡೆಯಿಂದ ಅಂದರೆ ಪಿ&ಟಿ ಕಾಲನಿಯಿಂದ ಮಶೀನ ತರುವುದಿದೆ ಅಂತಾ ತಿಳಿದಾಗ ನನ್ನ ಗಂಡನು ಬಹಳಷ್ಟು ಬಿಸಿಲು ಬೇಗೆಯಿಂದ ನೆರಳಿಗೆ ಹೋಗುವ ಸಲುವಾಗ ಕಛೇರಿಯಲ್ಲಿ ನೆರಳಿನಲ್ಲಿ ಕುಳಿತಿರುವಾಗ ಕಛೇರಿಯಲ್ಲಿ ಶರಣಗೌಡ ಸೂಪರವೈಜರ ಹಾಗೂ ಅಲ್ಲಿಯ ಇನ್ನೊಂದು ಕೋಣೆಯಲ್ಲಿದ್ದ ಪರಶುರಾಮ ಸಿಪಾಯಿ ಇಬ್ಬರು ಕೂಡಿ ನನ್ನ ಗಂಡನಿಗೆ ಇಲ್ಲೆಕೆ ಒಳಗೆ ಕುಳಿತಿದ್ದಿಯಾ ಹೊರಗಡೆ ನಡಿ ಅಂತಾ ಜಗಳ ತೆಗೆದು ಹೊಡೆಬಡೆ ಮಾಡಿ ಒತ್ತಾಯಪೂರ್ವಕವಾಗಿ ಆಫೀಸನಿಂದ ಹೊರಗೆ ದಬ್ಬಿದಾಗ ನನ್ನ ಗಂಡನು ಆಗ ಕೆಳಗೆ ಬಿದ್ದು ಎದೆಗೆ ಪೆಟ್ಟಾಯಿತು. ಇದನ್ನು ನೋಡಿದ ಪೌರ ಕಾರ್ಮಿಕರಾದ ಶ್ರೀ ದೇವಿಂದ್ರಪ್ಪ ತಂದೆ ಶರಣಪ್ಪ ದೊಡ್ಡಮನಿ ಸಾ: ಡಬರಾಬಾದ ಆಶ್ರಯ ಕಾಲನಿ ಕಲಬುರಗಿ ಇವರು ನನ್ನ ಗಂಡನನ್ನು ಎಬ್ಬಿಸಿ ನೀರು ಕುಡಿಸಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಆಟೊರಿಕ್ಷಾದಲ್ಲಿ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾರೆ. ಇದನ್ನು ಮನಗಂಡು ಅಲ್ಲಿಯೆ ಇದ್ದ ಸಂಬಂಧಿಸಿದ ಸೂಪರವೈಜರಗಳಾದ ಶ್ರೀ ಪ್ರಮೋದ ಹಾಗೂ ಈಶ್ವರ ಕೂಡಾ ಆಸ್ಪತ್ರೆಗೆ ಬಂದಿದ್ದರು. ಆ ವೇಳೆಯಲ್ಲಿ ನನ್ನ ಗಂಡನಿಗೆ ತೀವ್ರ ಸ್ವರೂಪದ ಒಳಪೆಟ್ಟು ಆಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಚಿಕಿತ್ಸೆಯ ವೇಳೆಯಲ್ಲಿ ನನ್ನ ಗಂಡನು ಮೃತಪಟ್ಟಿರುತ್ತಾನೆ. ಆದ್ದರಿಂದ ನನ್ನ ಗಂಡನು ಕರ್ತವ್ಯದಲ್ಲಿದ್ದಾಗ ನನ್ನ ಗಂಡನ ಮೇಲೆ ವಿನಾ ಕಾರಣ ಮಿರ್ಚಿ ಗೋದಾಮದ ಹತ್ತಿರ ಇರುವ ಕಾಪೋರೇಷನ ಎಸ.ಐ ಆಫೀಸ್ನಲ್ಲಿ ನನ್ನ ಗಂಡನ ಮೇಲೆ ಹಲ್ಲೆ ಮಾಡಿದ ಶರಣಗೌಡ ಹಾಗೂ ಪರಶುರಾಮ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಮತ್ತು ಟ್ರ್ಯಾಕ್ಟರ ಜಪ್ತಿ :
ನರೋಣಾ ಠಾಣೆ : ದಿನಾಂಕ:29-05-2017 ರಂದು ಬೆಳಿಗ್ಗೆ ಕೊಹಿನೂರ ಕಡೆಯಿಂದ ಮರಳು ತುಂಬಿದ ಲಾರಿ ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಶ್ರೀ.ಶಿವಶಂಕ.ಎಸ್.ಸಾಹು, ಪಿ.ಎಸ್.ಐ ನರೋಣಾ ಪೊಲೀಸ್ ಠಾಣೆ,  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ವ್ಹಿ,ಕೆ.ಸಗಲರ ಗ್ರಾಮದ ಸಾಂಭಶಿವ ಸರ್ಕಲ್ ಹತ್ತಿರ ಸದರಿ ಲಾರಿ ಬರುತ್ತಿರುವುದನ್ನು ಕಾಯುತ್ತಿರುವಾಗ ವ್ಹಿ.ಕೆ.ಸಲಗರ ಗ್ರಾಮದ ಕಡೆಯಿಂದ ಒಂದು ಮರಳು ತುಂಬಿದ ಲಾರಿ ಬರುತ್ತಿರುವುದನ್ನು ಗಮನಿಸಿ ನಾನು ಹಾಗೂ ಸಿಬ್ಬಂದಿಯವರು ಕೂಡಿ ಸದರಿ ಲಾರಿಯನ್ನು ಕೈಮಾಡಿ ನಿಲ್ಲಿಸಲಾಗಿ ಚಾಲಕನು ಲಾರಿಯಿಂದ ಇಳಿದು ಓಡಿಹೋದನು. ಪಂಚರ ಸಮಕ್ಷಮದಲ್ಲಿ ಸದರಿ ಲಾರಿಯನ್ನು ಪರಿಶೀಲಿಸಲು ಸದರಿ ಲಾರಿಯು ಅಶೋಕ ಲಿಲ್ಯಾಂಡ್ ಕಂಪನಿದಾಗಿದ್ದು ಲಾರಿ ಲೋಡಿದ್ದು ತಾಡಪತ್ರಿಹಾಕಿ ಹಗ್ಗದಿಂದ ಬಿಗದಿದ್ದು ತಗೆದು ನೋಡಲಾಗಿ ಒಳಗಡೆ ಮರಳು ತುಂಬಿತ್ತು ಸದರಿ ಲಾರಿ ನಂ-ಎಪಿ31 - ಟಿಎ1283 ಅಂತಾ ಇದ್ದು ಮತ್ತು ಸದರಿ ಮರಳು ಸಾಗಣಿಕೆ ಬಗ್ಗೆ ದಾಖಲಾತಿಗಳನ್ನು ಲಾರಿಯಲ್ಲಿ ಹುಡಕಾಡಲು ಯಾವುದೇ ದಾಖಲಾತಿಗಳು ಲಭ್ಯವಾಗಿರುವುದಿಲ್ಲ. ಸದರಿ ಲಾರಿ ಚಾಲಕನು ಎಲ್ಲಿಂದಲೋ ಕಳ್ಳತನಿಂದ ಮರಳು ತುಂಬಿಕೊಂಡು ಕಳ್ಳತನಿಂದ ಮಾರಾಟ ಮಾಡಲು ಸಾಗಣೆ ಮಾಡುತ್ತಿರುವ ಬಗ್ಗೆ ಕಂಡು ಬಂದಿದ್ದರಿಂದ ಸದರಿ ಮರಳು ತುಂಬಿದ ಲಾರಿಯನ್ನು ಜಪ್ತಿ ಪಡಿಸಿಕೊಂಡು ಮರಳಿ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಶಾಹಾಬಾದ ನಗರ ಠಾಣೆ : ದಿನಾಂಕ: 29/05/2017 ರಂದು ಮುಂಜಾನೆ ಹೊನಗುಂಟಾ ಸೀಮಾಂತರದ ಕಾಗಿನಾ ನದಿಯಿಂದ ಮರಳು ಕಳ್ಳತನದಿಂದ ಟ್ರಾಕ್ಟರನಲ್ಲಿ ತುಂಬಿಕೊಂಡು ಬರುತ್ತಿದ್ದ ಬಗ್ಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ ಶ್ರೀ ಎಸ್ ಅಸ್ಲಾಂ ಭಾಷ ಪಿ ಐ ಶಹಾಬಾದ ನಗರ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗುತ್ತಿರುವಾಗ ಹೊನಗುಂಟಾ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಹೊನಗುಂಟಾ ಕಡೆಯಿಂದ ಕೆಂಪು ಬಣ್ಣದ ಮಹೇಂದ್ರ ಕಂಪನಿಯ ಟ್ರಾಕ್ಟರನಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದು ಅದರ ಚಾಲಕನಾದ ಬೆಳ್ಳೆಪ್ಪ ತಂದೆ ಮಲ್ಲಪ್ಪಾ ಖಂಡ್ರಾ ಸಾ: ಹೊನಗುಂಟಾ ಇತನು ಪೊಲೀಸ ಜೀಪ ನೋಡಿ ತನ್ನ ಟ್ರಾಕ್ಟರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಸದರಿ ಕೆಂಪು ಬಣ್ಣದ ಮಹೆಂದ್ರ ಕಂಪನಿ ಟ್ರಾಕ್ಟರ ಅ.ಕಿ 200000-00 ರೂ ಮತ್ತು ಅದರಲ್ಲಿಯ ಮರಳು ಅ.ಕಿ 1000-00 ರೂ ನೇದ್ದುವುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮೊಸ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಗುರಲಿಂಗಪ್ಪಾ ತಂದೆ ಮಡಿವಾಳಪ್ಪಾ ಬುಕ್ಕರ ಸಾ : ಬೈರಮಡಗಿ ರವರಿಗೆ  ದೇವಾಂಗ ಹಟಗಾರ ಸಮಾಜದವರು ಕರ್ನಾಟಕ ಸೊಸಾಯಿಟಿ ನೊಂದಣಿ ಕಾಯ್ದೆ 1960 ಅಯಡಿಯಲ್ಲಿ   ಜಾಫರಾಬಾದ  ಸರ್ವೆ ನಂ.30 ನೇದ್ದರಲ್ಲಿ ಒಟ್ಟು 13 ಎಕರೆ 5 ಗುಂಟೆ ಜಮೀನನ್ನು ಖರಿದಿಸಿದ್ದು, ಸದರಿ  ಜಮಿನಿನಲ್ಲಿ ಸಂಘದ ಎಲ್ಲಾ ಸದಸ್ಯರಿಗೆ ಪ್ಲಾಟಗಳನ್ನು ಹಂಚಿಕೆ ಮಾಡಿ ವಿತರಣಾ ಪತ್ರಗಳನ್ನು ಕೊಟ್ಟಿದ್ದು ಇರುತ್ತದೆ. ಸದರಿ ಸದಸ್ಯರಲ್ಲಿ ಈ ಖಾಸಗಿ ದೂರಿನ ಸಾಕ್ಷಿ ನಂ.. 1 ರಿಂದ 8 ನೇದ್ದವರಿಗೆ  ಹಂಚಿಕೆ ಮಾಡಿದ್ದ ಪ್ಲಾಟಗಳನ್ನು ಸದ್ಯ ಇದ್ದ ಸಮಾಜದ ಅದ್ಯಕ್ಷರಾದ 1) ಚಂದ್ರಶೇಖರ ತಂದೆ ತುಕಾರಾಮ ಸುಲ್ತಾನಪೂರ 2) ದತ್ತು ಸುಗುರ ಕಾರ್ಯದರ್ಶಿ ಹಟಗಾರ ದೆವಾಂಗ ಸಮಾಜ 3) ಪಿಡಿಓ ಗ್ರಾಮ ಪಂಚಾಯತ ಭಿಮಳ್ಳಿ ಇವರು ಕೂಡಿಕೊಂಡು ಖೊಟ್ಟಿ ದಾಖಲಾತಿಗಳನ್ನು ತಯಾರಿಸಿ ಒಬ್ಬರ ಹೆಸರಿಗೆ ಇದ್ದ ಪ್ಲಾಟಗಳನ್ನು ಇನ್ನೊಬ್ಬರ ಹಸರಿಗೆ ದುಡ್ಡು ತೆಗೆದುಕೊಂಡು ಹೊಸದಾಗ ಪ್ಲಾಟ ನಂಬರಗಳನ್ನು  ಕೊಟ್ಟು ಬೇರೆ ಬೇರೆಯವರಿಗೆ ಹಂಚಿಕೆ ಮಾಡಿ ಮೊಸ ಮಾಡಿದಲ್ಲದೆ ನಿಜವಾದ ಪ್ಲಾಟ ಮಾಲಿಕರು ಅದ್ಯಕ್ಷರನ್ನು ಕೇಳಲು ಹೋದರೆ ಜೀವ ಭಯ ಹಾಕಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ.ಮಲ್ಲಿಕಾರ್ಜುನ ತಂದೆ ಸಂಬಣ್ಣಾ ಮದಲಿ ಸಾ||ನರೋಣಾ ಗ್ರಾಮ ಇವರು  ವಾಸವಾಗಿರುವ ಮನೆಯ ಪಕ್ಕದಲ್ಲಿಯೇ ತಮ್ಮ ಅಣತಮ್ಮಕಿಯವರಾದ ಬಸವರಾಜ ತಂದೆ ಶರಣಪ್ಪ ಮದಲಿ ಇವರ ಮನೆಯಿದ್ದು ಅವರ ಮನೆಯ ಬಚ್ಚಲು ನೀರು ಟೆಗ್ಗುಮಾಡಿ ಸಂಗ್ರಹಿಸದೇ ಹಾಗೆ ಬಿಟ್ಟಿದ್ದರಿಂದ ಸದರಿ ಬಚ್ಚಲು ನೀರು ನಮ್ಮ ಮನೆಯ ಕಟ್ಟಡದ ಬುನಾದಿಗೆ ಇಳಿಯುತ್ತಿದ್ದರಿಂದ ನಾನು ಸದರಿ ಬಚ್ಚಲು ನೀರು ಹೋಗಲು ಮತ್ತು ಸಂಗ್ರಹ ಮಾಡಲು ಕಾವಲಿ ಹಾಗೂ ಟೆಗ್ಗು ತೋಡುವಂತೆ ಹೇಳಿರುತ್ತೇನೆ. ಆದರೆ ಅವರು ನನ್ನ ಮಾತಿಗೆ ಬೆಲೆ ಕೊಡದೆ ಅವರ ಬಚ್ಚಲು ನೀರು ಹಾಗೆ ಬಿಡುತ್ತಿದ್ದರಿಂದ ನನ್ನ ಮನೆಯ ಗೋಡೆಗೆ ತೊಂದರೆ ಆಗುತ್ತಿದ್ದು ಇದೆ ವಿಷಯವನ್ನು ನಾನು ಹಲವಾರುಬಾರಿ ದಶರಥ ಇವರಿಗೆ ಹೇಳಿದ್ದರಿಂದ ಅವರು ಹಾಗೂ ಅವರ ಕುಟುಂಬದವರು ನನ್ನೊಂದಿಗೆ ತಕರಾರು ಮಾಡುತ್ತಾ ಬಂದಿದ್ದು ದಿನಾಂಕ:28/05/2017 ರಂದು ರಾತ್ರಿ ನಾನು ನನ್ನ ಹೆಂಡತಿಯಾದ ಅಂಬಿಕಾ ಹಾಗೂ ಹಿರಿಯ ಮಗನಾದ ಶರಣಬಸಪ್ಪಾ ರವರು ನಮ್ಮ ಮನೆಯ ಮುಂದಿನ ಅಂಗಳದಲ್ಲಿ ಮಲಗಿರುವಾಗ ನಮ್ಮ ಅಣತಮ್ಮಕಿಯ ದಶರಥ ತಂದೆ ಶರಣಪ್ಪಾ ಮದಲಿ, ವಿಜಯಕುಮಾರ ತಂದೆ ದಶರಥ ಮದಲಿ, ಲಲಿತಾಬಾಯಿ ಗಂಡ ದಶರಥ ಮದಲಿ, ಮಲ್ಲಿಕಾಜರ್ುನ ತಂದೆ ಪೀರಪ್ಪ ಮದಲಿ, ನಾಗಪ್ಪ ತಂದೆ ಪೀರಪ್ಪ ಮದಲಿ ಮತ್ತು ಪರೆಮ್ಮ ಗಂಡ ಪೀರಪ್ಪ ಮದಲಿ ರವರೆಲ್ಲರೂ ಕೂಡಿಕೊಂಡು ಬಂದು ನನ್ನ ಹೆಸರಿನಿಂದ ಚಿರಾಡುತ್ತಿರುವಾಗ ನಾನು ಮತ್ತು ನನ್ನ ಹೆಂಡತಿ ಇಷ್ಟೊತ್ತಿಗೆ ನಮ್ಮ ಮನೆಯ ಮುಂದೆ ಬಂದು ಏಕೆ ಚಿರಾಡುತ್ತಿದ್ದಿರಾ ಎಂದು ವಿಚಾರಿಸುತ್ತಿರುವಾಗ ವಿಜಯಕುಮಾರನು ಕೈಯಲ್ಲಿ ಚಾಕು ಹಿಡಿದುಕೊಂಡು ನನಗೆ ಮಗನೆ ನಿನಗೆ ಖಲಾಸಮಾಡಿ ಬಿಡುತ್ತೇನೆ ಸೂಳೆಮಗನೆ ಎಂದು ಜೀವದ ಬೇದರಿಕೆ ಹಾಕುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನನ್ನ ಹೆಂಡತಿ ಹೀಗೇಕೆ ಬೈಯುತ್ತಿದ್ದಿರಿ ಅಂತಾ ವಿಚಾರಿಸುತ್ತಿದ್ದಾಗ ದಶರಥ ಹಾಗೂ ಲಲಿತಾಬಾಯಿ ರವರು ಬಚ್ಚಲು ನೀರಿನ ಬಗ್ಗೆ ಪದೇ ಪದೇ ಯಾಕೆ ನಮ್ಮೊಂದಿಗೆ ತಕರರು ಮಾಡುತ್ತಿದ್ದಿ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು ಅಷ್ಟರಲ್ಲಿಯೇ ವಿಜಯಕುಮಾರ , ಮಲ್ಲಿಕಾರ್ಜುನ ನಾಗಪ್ಪ ಪರೆಮ್ಮ ರವರುಗಳು ನಮಗೆ ಕಲ್ಲಿನಿಂದ ಹೊಡೆಯುವಾಗ  ನಾವು ತಪ್ಪಿಸಿಕೊಂಡಿರುತ್ತೇವೆ. ಅಷ್ಟರಲ್ಲಿಯೇ ಓಣಿಯವರಾದ ಚಂದ್ರಕಾಂತ ತಂದೆ ಶಾಣಪ್ಪಾ ಹಾದಿಮನಿ, ಖ್ಯಾಮಲಿಂಗ ತಂದೆ ಶಾಂತಪ್ಪಾ ಇಟಿಕರ ರವರುಗಳು ಬಂದು ಜಗಳ ನೋಡಿ ಬಿಡಿಸಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

29 May 2017

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 28/05/2017 ರಂದು  ಮುಂಜಾನೆ ಹೊನಗುಂಟಾ ಸೀಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ಯಾಕ್ಟರನಲ್ಲಿ  ತುಂಬಿಕೊಂಡು ಸಾಗಿಸುತ್ತಿದ್ದಾರೆ  ಅಂತಾ  ಖಚಿತ ಬಾತ್ಮಿ ಬಂದ  ಮೇರೆಗೆ  ಪಿ.ಐ. ಶಾಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗುತ್ತಿರುವಾಗ ಹೊನಗುಂಟಾ ಕಡೆಯಿಂದ  ಒಂದು ಮರಳು ತುಂಬಿದ ಟ್ಯಾಕ್ಟರ ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕನು ನಮ್ಮ ಪೊಲೀಸ ಜೀಪ ನೋಡಿ  ತನ್ನ ಟ್ರಾಕ್ಟರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು  ಸದರಿ ಟ್ರಾಕ್ಟರ ಪರಿಶೀಲಿಸಿ ನೋಡಲಾಗಿ` ಟ್ರಾಕ್ಟರ ನಂಬರ ಕೆ.ಎ. 32 ಟಿಎ 2725 2726 ಅ.ಕಿ     2 ಲಕ್ಷ ರೂ ಅಂತಾ ಇದ್ದು ಸದರಿ ಟ್ರಾಕ್ಟರನದಲ್ಲಿ ಮರಳು ತುಂಬಿದು ಮರಳಿನ ಅ.ಕಿ 1000-00 ರೂ ಸದರಿ ಮರಳು ತುಂಬಿದ ಟ್ರಾಕ್ಟರನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಕೊಂಡು ಮರಳಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ; 23-05-2017 ರಂದು ಬೆಳಿಗ್ಗೆ ನನಗೆ ವಿಜಯಪೂರಕ್ಕೆ ಹೋಗ ಬೇಕಾಗಿದ್ದರಿಂದ ಬಾಳಾಸಾಹೇಬನು ತನ್ನ ಮೋಟಾರ್ ಸೈಕಲ ನಂ ಎಮ್ ಹೆಚ್-13/ ಎವ್ಹಿ-6352 ನೇದ್ದರ ಮೇಲೆ ಕರಜಗಿಯಿಂದ ಮಣುರ ಕಡೆ ಹೋಗುವ ರೋಡಿಗೆ ಇರುವ ಹೈದ್ರಾ ಕ್ರಾಸ ಹತ್ತಿರ ಬಿಟ್ಟು ಹೋಗಲು ಬಂದಿದ್ದನು ಬೆಳಿಗ್ಗೆ ಹೈದ್ರಾ ಕ್ರಾಸದಿಂದ ತನ್ನ ಮೋಟಾರ್ ಸೈಕಲ್ ಹೈದ್ರಾ ರೋಡಿನ ಕಡೆಗೆ ತಿರುಗಿಸುತಿದ್ದಾಗ ಮಣುರ ಕಡೆಯಿಂದ ಒಂದು ಕ್ರೂಜರ್ ವಾಹನ ಬರುತಿದ್ದು ಅದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಬಾಳಾಸಾಹೇಬನ ಮೋಟಾರ್ ಸೈಕಲಿಗೆ ಜೋರಾಗಿ ಡಿಕ್ಕಿ ಪಡಿಸಿ ಅಫಘಾತ ಪಡಿಸಿದನು ಆಗ ಬಾಳಾಸಾಹೇಬನು ರೋಡಿನ ಮೇಲೆ ಬಿದ್ದಿದ್ದು ಕ್ರೂಜರ ವಾಹನ ಮೋಟಾರ್ ಸೈಕಲ್ ಸಮೇತ ಎಳೆದುಕೊಂಡು ಹೋಗಿ ರೋಡಿನ ಪಕ್ಕದಲ್ಲಿರುವ ವಿದ್ಯೂತ್ ಕಂಬದ ಹತ್ತಿರ ನಿಂತಿರುತ್ತದೆ.ಸದರಿ ಘಟನೆಯಲ್ಲಿ ಬಾಳಸಾಹೇಬನ ಎದೆಯಿಂದ ಸೊಂಟದವರೆಗೆ ಭಾರಿ ಒಳಪೆಟ್ಟಾಗಿ ಎಡಕಾಲಿನ ಕೆಳಭಾಗದಲ್ಲಿ ಎಲುಬು ಮೂರಿದು ಭಾರಿ ರಕ್ತಗಾಯ ಮತ್ತು ಒಳ ಪೆಟ್ಟಾಗಿರುತ್ತದೆ.ಅಪಘಾತ ಸಂಬವಿಸಿದ ಕೂಡಲೆ ಕ್ರೂಜರ ವಾಹನದ ಚಾಲಕನು ತನ್ನ ವಾಹನದಿಂದ ಇಳಿದು ಓಡಿ ಹೋಗಿರುತ್ತಾನೆ ನಂತರ ಅಪಘಾತ ಪಡಿಸಿದ ಕ್ರೂಜರ ವಾಹನದ ನಂಬರ ನೋಡಲು ಕೆಎ-28 /ಎನ್-9326 ಇತ್ತು ಅಪಘಾತ ಸಂಬವಿಸಿದ ವಿಷಯವನ್ನು ನಾನು ಸಂತೋಷ ಬಿರಾಜದಾರ ರವರಿಗೆ ಪೋನ ಮೂಲಕ ತಿಳಿಸಿದರಿಂದ ಅವರು ಒಂದು ಜೀಪಿನಲ್ಲಿ ಚಂದ್ರಶೇಖರ ಕರೂಟಿ, ದುಂಡುಗೌಡ ಬಿರಾಜದಾರ, ಮಲ್ಲು ರೋಡಗಿ ಮತ್ತಿತರರಿಗೆ ಕರೆದುಕೊಂಡು ಘಟನಾ ಸ್ಥಳಕ್ಕೆ ಬಂದರು ಆಗ ನಾವೇಲ್ಲರು ಬಾಳಸಾಹೇಬನಿಗೆ ಚಿಕಿತ್ಸೆಗಾಗಿ ಜೀಪಿನಲ್ಲಿ ಹಾಕಿಕೊಂಡು ಅಕ್ಕಲಕೋಟಕ್ಕೆ ಹೋಗುತಿದ್ದಾಗ ಮಾರ್ಗ ಮದ್ಯದಲ್ಲಿ ನಾಗಣಸೂರ ಗ್ರಾಮದ ಹತ್ತಿರ ಎದುರುಗಡೆಯಿಂದ ಅಂಬ್ಯೂಲೆನ್ಸ ವಾಹನ ಬಂದಿದ್ದು ನಾವೇಲ್ಲರು ಬಾಳಾಸಾಹೇಬನಿಗೆ ಅದರಲ್ಲಿ ಹಾಕಿಕೊಂಡು ಹೋಗಿ ಅಕ್ಕಲಕೋಟದಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ ಚಿಕಿತ್ಸೆ ಫಲಕಾರಿಯಾಗದೇ ಬಾಳಾಸಾಹೇಬನು ಮದ್ಯಾಹ್ನ 2.30 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾನೆ.ಅಂತಾ ಶ್ರೀ  ಶ್ರೀಮಂತ ತಂದೆ ಈರಣ್ಣ ರೂಗಿ ಸಾ|| ಹೈದ್ರಾ ತಾ|| ಅಕ್ಕಲಕೋಟ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣು ಮಗಳು ಕಾಣೆಯಾದ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 26-05-2017 ರಂದು ಶ್ರೀ ಸುರೇಶ ಅಮ್ಮಣ್ಣ ಸಾ : ಗೋಗಿ ಕೆ.ರವರು  ಮತ್ತು ನನ್ನ ಹೆಂಡಿತಿ ಭಾಗ್ಯಶ್ರೀ ತಂದೆ ರಾಮು ಚಂದ್ರ ತಾಯಿ ಕಮಲಾಬಾಯಿ ಊಟ ಮಾಡಿ ಮನೆಯಲ್ಲಿ ಮಲಗಿಕೊಂಡಿದ್ದೆವು ಬೆಳಗಿನ ಜಾವ ಅಂದಾಜು ನಾಲ್ಕು ಗಂಟೆ ಸುಮಾರಿಗೆ ನಾನು ಕಾಲು ಮಡಿಯಲೆಂದು ಎದ್ದು ಕಾಲಮಡೇದು ಬಂದೆನು ಆಗ ನನ್ನ ಹೆಂಡತಿ ಭಾಗ್ಯಶ್ರೀ ಮನೆಯಲ್ಲಿ ಇರಲಿಲ್ಲಾ ನಾನು ಭಾಗ್ಯಶ್ರೀ ಸಂಡಸ ಅಥವಾ ಕಾಲು ಮಡೆಯಲು ಹೋಗಿರಬಹದೆಂದು ತಿಳಿದು ಮಲಗಿಕೊಂಡೆನು -ಬೆಳಗಿನ ಜಾವ ಐದು ಗಂಟೆಗೆ ನೋಡಲಾಗಿ ಭಾಗ್ಯಶ್ರೀ ಎಲ್ಲಿ ಹೋಗಿದ್ದಾಳೆ ಎಂದು ಅಲ್ಲಿ ಇಲ್ಲಿ ಹುಡುಕಲು ಪ್ರಾರಂಭಿಸಿ ಆರು ಗಂಟೆ ಹೊತ್ತಿಗೆ ಅವಳ ತವರು ಮನೆಯವರಿಗೆ ಗುಂಡರಕ್ಕೆ ಪೋನ ಮಾಡಿ ಅವಳ ತಂದೆಯಾದ ಚಂದ್ರಕಾಂತ ರವರಿಗೆ ತಿಳಿಸಿದೆ ಅವರು ಸಹ ಅವಳು ಊರಿಗೆ ಬಂದಿಲ್ಲ ಅಂತ ತಿಳಿಸಿದರು , ನನ್ನ ಮಾವ ಚಂದ್ರಕಾಂತ ಮತ್ತು ಸಂಭಂದಿ ದೀಪಕ ಮತ್ತು ನಮ್ಮ ಊರಿನ ಅಣ್ಣ ತಮ್ಮಂದಿರೊಂದಿಗೆ  ಹುಡುಕಾಡಿದರು ಪತ್ತೆಯಾಗಿರುವದಿಲ್ಲ. ದಿನಾಂಕ 26-05-2017 ರಿಂದ ದಿನಾಂಕ 27-05-2017 ರಂದು ರಾತ್ರಿ ವೇಳೆಯಲ್ಲಿ ಮನೆಯಿಂದ ಕಾಣೆಯಾಗಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.