POLICE BHAVAN KALABURAGI

POLICE BHAVAN KALABURAGI

13 March 2017

Kalaburagi District Reported Crimes

ಕೊಲೆ ಪ್ರಕರಣ :
ಸೇಡಂ ಠಾಣೆ : ಶ್ರೀ. ರಾಜೇಂದ್ರ ತಂದೆ ಮುಖ್ಯಪ್ರಾಣ ಉಪಾಧ್ಯಯ, :ಮ್ಯಾಜೇಜರ್ & ಮಾಲಿಕರು ಅಶೋಕ ಲಾಡ್ಜ್, ಸೇಡಂ, ಸಾ:ಮನೆ ನಂ-4-8-35/4-7-35/1 ಹನುಮಾನ ಗುಡಿಯ ಹಿಂದುಗಡೆ, ಕೆ..ಬಿ ಕಾಲೋನಿ, ಸೇಡಂ. ತಾ:ಸೇಡಂ, ಜಿಲ್ಲೆ:ಕಲಬುರಗಿ. ಇವರು ಸೇಡಂ ಪಟ್ಟಣದ ರೈಲ್ವೆಸ್ಟೇಶನ್ ಎದುರುಗಡೆ ಅಶೋಕಾ ಲಾಡ್ಜ್ ಎಂಬ ಹೆಸರಿನ ಲಾಡ್ಜ ಇಟ್ಟುಕೊಂಡಿದ್ದು ನಿನ್ನೆ ದಿನಾಂಕ:11-03-2017 ರಂದು ರಾತ್ರಿ 09-30 ಗಂಟೆ ಸುಮಾರಿಗೆ ಒಬ್ಬ ವ್ಯಕ್ತಿಯು ತನ್ನೊಂದಿಗೆ ಒಬ್ಬ ಹೆಣ್ಣುಮಗಳನ್ನು ಸಂಗಡ ಕರೆದುಕೊಂಡು ಬಂದು ಅವಳು ತನ್ನ ಹೆಂಡತಿ ಇದ್ದು ಆಕೆಯ ಹೆಸರು ಹೇಳಿರುವದಿಲ್ಲ ತಾನು ಕೊಡ್ಲಾ ಗ್ರಾಮದಿಂದ ಬಂದಿದ್ದು ಬೆಳಗ್ಗೆ ತಾಂಡೂರಿಗೆ ಹೋಗಬೇಕಾಗಿದೆ ವಸತಿ ಕುರಿತು ಒಂದು ರೂಮ್ ಬೇಕಾಗಿದೆ ಅಂತ ಹೇಳಿದ್ದರಿಂದ ಆತನಿಗೆ ಐ.ಡಿ ಪ್ರೂಫ್ ಕೇಳಲು ತಾನು ಸಂಗಡ ಐ.ಡಿ ಪ್ರೂಫ್ ತಂದಿರುವದಿಲ್ಲ ಅಂತ ವಗೈರೆ ಹೇಳಿದನು. .ಡಿ ಫ್ರೂಫ್ ಇರಲಾರದೇ ರೂಮ್ ಕೊಡಲು ಆಗುವದಿಲ್ಲ ಅಂತ ಹೇಳಿದಾಗ ರಾತ್ರಿ ಹೊತ್ತಿನಲ್ಲಿ ಹೆಂಡತಿಯನ್ನು ರೈಲ್ವೆ ಸ್ಟೇಶನದಲ್ಲಿ ಕೂಡಿಸಿಕೊಳ್ಳುವದು ಸರಿಕಾಣುವದಿಲ್ಲ ಆದ್ದರಿಂದ ಒಂದು ರೂಮ್ ನೀಡಬೇಕೆಂದು ಕೇಳಿಕೊಂಡ ಮೇರೆಗೆ ಆತನಿಗೆ ರೂಮಿಗೆ 350/- ರೂಪಾಯಿ ಬಾಡಿಗೆ ಆಗುತ್ತದೆ ಅಂತ ಹೇಳಿದಾಗ ಆತನು ಹಣ ಕೊಟ್ಟು ತನ್ನ ಹೆಸರು ನರಸಪ್ಪ ತಂದೆ ಭೀಮಪ್ಪ ದೊಡ್ಮನಿ, ಸಾ:ಲಖ್ನಾಪೂರ ತಾಂಡೂರ. ಅಂತ ಹೇಳಿದ್ದು ಆತನು ಹೇಳಿದಂತೆ ಲಾಡ್ಜಿನ ರಜಿಸ್ಟರನಲ್ಲಿ ನಮೂದು ಮಾಡಿ ಅವರಿಗೆ ಲಾಡ್ಜಿನ ರೂಮ್ ನಂ-5 ನೇದ್ದನ್ನು ಬುಕ್ ಮಾಡಿ ಬೀಗದಕೈ ನೀಡಿ ರೂಮಿಗೆ ಕಳೂಹಿಸಿಕೊಟ್ಟೇನು. ರಾತ್ರಿ 11-00 ಗಂಟೆಯವರೆಗೆ ಎಚ್ಚರವಿದ್ದು ನಂತರ ಲಾಡ್ಜಿನ ಆಫೀಸಿನಲ್ಲಿ ಮಲಗಿಕೊಂಡಿದ್ದು ರಾತ್ರಿ 03-00 ಗಂಟೆ ಸುಮಾರಿಗೆ ಸದರಿ ವ್ಯಕ್ತಿಯು ಆಫೀಸಿನ ಬಾಗಿಲು ಬಡಿಯಲು ನನಗೆ ಎಚ್ಚರವಾಗಿ ವಿಚಾರಿಸಲು ತಿಳಿಸಿದ್ದೇನೆಂದರೆ, ತಾನು ರೈಲ್ವೆಸ್ಟೇಶನಗೆ ಟ್ರೇನ್ ಟೈಮ್ ತಿಳಿದುಕೊಂಡು ಬರಲು ಹೋಗಬೇಕಾಗಿದೆ. ಲಾಡ್ಜಿನ ಹೊರಬಾಗಿಲು ತೆಗೆಯಿರಿ ಅಂತ ಹೇಳಿದಾಗ ನಾನು ಅವನಿಗೆ ಹೊರಗೆ ಹೋಗಬೇಕಾದರೆ ಇಬ್ಬರೂ ಹೋಗಿರಿ ಅಂತ ಹೇಳಿದಾಗ ಆತನು ಈ ಅಪರಾತ್ರಿಯಲ್ಲಿ ಹೆಣ್ಣುಮಗಳನ್ನು ರೈಲ್ವೆಸ್ಟೇಶನವರೆಗೆ ಹೇಗೆ ಕರೆದುಕೊಂಡು ಹೋಗುವದು, ನನಗೆ ಕೇವಲ ಟ್ರೇನ್ ಟೈಮ್ ತಿಳಿದುಕೊಂಡು ಬರಬೇಕಾಗಿದೆ ವಾಪಸ್ ಬಂದ ನಂತರ ಟ್ರೇನ ಟೈಮಗೆ ಹೆಂಡತಿಯನ್ನು ಕರೆದುಕೊಂಡು ಹೋಗುವದಾಗಿ ಹೇಳಿದ್ದರಿಂದ ನಾನು ಲಾಡ್ಜಿನ ಹೊರ ಬಾಗಿಲನ್ನು ತೆರೆದಾಗ ಆತನು ರೈಲ್ವೆಸ್ಟೇಶನ ಕಡೆಗೆ ಹೋದನು. ಅವನು ಹೋದ ನಂತರ ಮೂತ್ರವಿಸರ್ಜನೆ ಕುರಿತು ಲಾಡ್ಜಿನ ಮೊದಲೇ ಅಂತಸ್ತಿಗೆ ಹೋಗಿ ವಾಪಸ್ ಬರುವಾಗ ಸದರಿ ವ್ಯಕ್ತಿಯು ಮರಳಿ ಲಾಡ್ಜಿಗೆ ಬರದೇ ಇದ್ದುದ್ದರಿಂದ ಅನುಮಾನಗೊಂಡು ಆತನು ಉಳಿದುಕೊಂಡಿದ್ದ ರೂಮ್ ನಂ-5 ರವರೆಗೆ ಹೋಗಿ ನೋಡಲಾಗಿ ರೂಮಿನ ಬಾಗಿಲು ಮುಂದಕ್ಕೆ ಮಾಡಿದ್ದು ಬಾಗಿಲು ತೆರೆದು ನೋಡಲಾಗಿ ರೂಮಿನ ಪಶ್ಚಿಮ ದಿಕ್ಕಿಗೆ ಇರುವ ಪಲಂಗ ಮೇಲೆ ಹೆಣ್ಣುಮಗಳು ಸತ್ತು ಬಿದ್ದಿದ್ದು ಆಕೆಯ ಕುತ್ತಿಗೆಯ ಹತ್ತಿರ ರಕ್ತಬಂದಂತೆ ಕಾಣುತಿತ್ತು. ನಾನು ಗಾಭರಿಗೊಂಡು ರೈಲ್ವೆಸ್ಟೇಶನ್ ವರೆಗೆ ಹೋಗಿ ನೋಡಲಾಗಿ ಸದರಿ ವ್ಯಕ್ತಿಯು ಎಲ್ಲಿಯೂ ಕಾಣಲಿಲ್ಲ.ಸದರಿ ವ್ಯಕ್ತಿಯು ತನ್ನ ಹೆಸರು ನರಸಪ್ಪ ತಂದೆ ಭೀಮಪ್ಪ ದೊಡ್ಮನಿ ಸಾ:ಲಖ್ನಾಪೂರ, ತಾಂಡೂರ ಅಂತ ಹೇಳಿಕೊಂಡು ತನ್ನೊಂದಿಗೆ ಬಂದಿರುವ ಹೆಣ್ಣುಮಗಳು ತನ್ನ ಹೆಂಡತಿ ಅಂತ ಹೇಳಿ ನಮ್ಮ ಲಾಡ್ಜಿನಲ್ಲಿಯ ಒಂದು ರೂಮನ್ನು ಪಡೆದು ಯಾವುದೋ ಕಾರಣಕ್ಕಾಗಿ ಆಕೆಯ ಕುತ್ತಿಗೆಗೆ ಯಾವುದೊ ವಸ್ತುವಿನಿಂದ ಬಿಗಿದು ಕೊಲೆ ಮಾಡಿ ಓಡಿಹೋಗಿರುತ್ತಾನೆ. ಈ ಘಟನೆಯು ನಿನ್ನೆ ದಿನಾಂಕ:11-03-2017 ರಂದು ರಾತ್ರಿ 09-30 ಗಂಟೆಯಿಂದ 03-00 ..ಎಮ್ ಅವಧಿಯಲ್ಲಿ ಜರುಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ