POLICE BHAVAN KALABURAGI

POLICE BHAVAN KALABURAGI

06 January 2012

Gulbarga Dist Reported Crime

ಅಡಿಗೆ ಮಾಡುವ ಸಲುವಾಗಿ ಉಪಯೋಗಿಸುವ ಗ್ಯಾಸ್ ಸಿಲೆಂಡರಗಳಿಂದ ಅನಧಿಕೃತವಾಗಿ ಗ್ಯಾಸನ ಯಂತ್ರದ ಮೂಲಕ ತೆಗೆದು ಅಟೋರಿಕ್ಷಾಗಳಿಗೆ ತುಂಬುತ್ತಿರುವ ಬಗ್ಗೆ.
ಬ್ರಹ್ಮಪೂರ ಠಾಣೆ: ಇಂದು ನಗರದ ಸಿ.ಟಿ ಬಸ್ಸ ನಿಲ್ದಾಣದ ಹತ್ತಿರ ಶರಣು ಭೂಸಾ ಈತನು ಅನಧಿಕೃತವಾಗಿ ಗೃಹ ಬಳಕೆಗೆ ಗ್ಯಾಸನ್ನು ಆಟೋರಿಕ್ಷಾ ಸಿಲೆಂಡರಗಳಿಗೆ ಯಂತ್ರದ ಮೂಲಕ ಗ್ಯಾಸ ತುಂಬುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಶ್ರೀ ರಾಮಪ್ಪ ವಿ ಸಾವಳಗಿ ಪಿ.ಐ ಎ.ಡಿ.ಎಸ್/ಆರ್.ಸಿ.ಐ.ಬಿ ಸಿ.ಐ.ಡಿ ಗುಲಬರ್ಗಾ ರವರು ತಾವು ಮತ್ತು ತಮ್ಮ ಘಟಕದ ಸಿಬ್ಬಂದಿಯವರದೊಂದಿಗೆ ದಾಳಿ ಮಾಡಿ ಒಂದು ಹೆಚ್.ಪಿ ಕಂಪನಿಯ ಗ್ಯಾಸ ಸಿಲೇಂಡರ, ಎಲೆಕ್ಟ್ರಾನಿಕ ತೂಕದ ಮಷೀನ, ಎಲೆಕ್ಟ್ರಿಕಲ್ ಪಂಪ ಮಷೀನ, ಟೇಬಲ ಫ್ಯಾನ, ಒಂದು ಬ್ಲೂಮ ಮೊಬೈಲ, ಆಟೋ ರಿಕ್ಷಾ ನಂಬರಗಳು : ಕೆಎ 32 ಎ 4079, ಮತ್ತು ಕೆಎ 32 9787 ಹೀಗೆ ಒಟ್ಟು 2,59,300/- ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2012 ಕಲಂ: 3 LPG (REGULATION OF SUPPLY & DISTRUBUTION) ORDER 2000 & 3 & 7 EC ACT ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ :
ಶ್ರೀ ಸೈಯದ ಮೊಜಮ ಅಲಿ ತಂದೆ ಸೈಯದ ಮಜರ ಅಲಿ ಸಾ:ಮ.ನಂ. ಎಲ್.ಐ.ಜಿ 11 ಶಾಂತಿನಗರ ಗುಲಬರ್ಗಾ ರವರು ನನ್ನ ದ್ವಿಚಕ್ರ ವಾಹನ ನಂ:ಕೆಎ-32 ಎಸ್-3892 ನೇದ್ದನ್ನು ದಿನಾಂಕ:22/08/2011 ರಂದು ರಾತ್ರಿ 11:50 ಕ್ಕೆ ಶಾಂತಿನಗರ ಬಡಾವಣೆಯ ನನ್ನ ಮನೆಯ ಮುಂದೆ ಮೋಟರ ಸೈಕಲ್ ನಂ:ಕೆಎ-32 ಎಸ್-3892 ಚೆಸ್ಸಿ ನಂ:07ಸಿ16ಎಫ್39669 ಇಂಜಿನ ನಂ:07ಸಿ15ಇ46081 ಅ.ಕಿ 40,000 ರೂ.ಗಳ ಕಿಮ್ಮತ್ತಿನ ವಾಹನ ನಿಲ್ಲಿಸಿದ್ದು ದಿನಾಂಕ:23/08/2011 ರಂದು ಬೆಳಗಿನ ಜಾವ 4:00 ಎಎಮ್ ಸುಮಾರಿಗೆ ನೋಡಲಾಗಿ ನನ್ನ ವಾಹನ ಕಾಣಲಿಲ್ಲ ಯಾರೋ ಕಳ್ಳರು ನನ್ನ ದ್ವಿ ಚಕ್ರವಾಹನ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:02/2012 ಕಲಂ:379 ಐಪಿಸಿ ನೇದ್ದರ ಪ್ರಕಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ಸುರೇಶ ತಂದೆ ನಾಗಣ್ಣಾ ಸುತಾರ ಸಾ: ಕಲ್ಲಹಂಗರಗಾ ತಾ & ಜಿ ಗುಲಬರ್ಗಾರವರು ನಾನು ಟಂ ಟಂ ನಂ ಕೆಎ-32-ಬಿ-4257 ನೇದ್ದರಲ್ಲಿ ಕಲ್ಲಹಂಗರಗಾದಿಂದ ಗುಲಬರ್ಗಾಕ್ಕೆ ಬರುತ್ತಿರುವಾಗ ತಾಜಸುಲ್ತಾನಪೂರ ಗ್ರಾಮದ ಹತ್ತಿರ ಗುಲಬರ್ಗಾ ಕಡೆಯಿಂದ ಒಂದು ಲಾರಿ 608 ಲಾರಿ ನಂ ಕೆಎ-37-1 ನೇದ್ದರ ಚಾಲಕ ಜೈಭೀಮ ಇತನು ತನ್ನ ವಾಹನವನ್ನು ಅತೀವೇಗ & ನಿಸ್ಕಾಳಜೀತನದಿಂದ ವಾಹನ ನಡೆಸಿಕೊಂಡು ಬಂದು ಟಂಟಂ ಕ್ಕೆ ಡಿಕ್ಕಿ ಹೊಡೆದಿದ್ದರಿಂದ ನನಗೆ ಮತ್ತು ಸಿದ್ದು @ ಸಿದ್ದಾರೋಡ ತಂದೆ ಶರಣಪ್ಪಾ ಎಕಲೂರ ವಯ ; 18 ವರ್ಷ , ಸಿದ್ದ @ ಸಿದ್ದಾರೋಡ ತಂದೆ ಶಂಕರ ಸುಲ್ತಾನಪೂರ ವಯ ;18 ವರ್ಷ , ಶಿವಕುಮಾರ ತಂದೆ ಶಿವಶರಣಪ್ಪಾ ಕಿಣಗಿ ವ;24 ವರ್ಷ ಸಾ ಎಲ್ಲರೂ ಕಲ್ಲಹಂಗರಗಾ ಇವರುಗಳಿಗೆ ಸಾದಾ ಮತ್ತು ಭಾರಿಗಾಯಾಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ:: 279.337.338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.