POLICE BHAVAN KALABURAGI

POLICE BHAVAN KALABURAGI

09 January 2019

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 08-01-2019 ರಂದು ಸೊನ್ನ ಗ್ರಾಮದ ಕಡೆಯಿಂದ ಒಬ್ಬ ವ್ಯಕ್ತಿ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆಗೆ ಬರುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ, ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಹೊಸ ಬಡಾವಣೆಗೆ ಹೋಗುವ ಕ್ರಾಸ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ರ್ಯಾಕ್ಟರ ಬರುತ್ತಿತ್ತು, ಆಗ ಸದರಿ ಟ್ರ್ಯಾಕ್ಟರನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋಗುತ್ತಿದ್ದನು, ಆಗ ನಾವು ಸದರಿಯವನನ್ನು ಬೆನ್ನಟ್ಟಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಸಾತಲಿಂಗಪ್ಪ ತಂದೆ ಭೀಮಶ್ಯಾ ದೇವರನಾವದಗಿ ಸಾ||ಸೊನ್ನ ತಾ|| ಅಫಜಲಪೂರ ಅಂತ ತಿಳಿಸಿದ್ದು, ಸದರಿಯವನಿಗೆ ಮರಳು ಸಾಗಾಣಿಕೆ ಮಾಡಲು ಪರವಾನಿಗೆ ಪಡೆದುಕೊಂಡ ಬಗ್ಗೆ ವಿಚಾರಿಸಲಾಗಿ ತನ್ನ ಹತ್ತಿರ ಯಾವುದೆ ದಾಖಲಾತಿಗಳು ಇರುವುದಿಲ್ಲ ಅಂತ ತಿಳಿಸಿದನು. ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು SWARAJ ಕಂಪನಿಯದಿದ್ದು, ಅದರ ಟ್ರ್ಯಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿತ್ತು, ಟ್ಯಾಕ್ಟರ ಮೇಲೆ ಎಲ್ಲಿಯೂ ನಂಬರ ಬರೆದಿರುವುದಿಲ್ಲ. ನಂತರ ಇಂಜೆನ್ ನಂಬರ ಚೆಕ್ ಮಾಡಲಾಗಿ ಅದರ Engine NO 47.5013/SZDo4456 CHASSIS NO WZCD61930952916 ಅಂತಾ ಇದ್ದು ಸದರಿ ಟ್ರ್ಯಾಕ್ಟರ ಅ.ಕಿ 5,00,000/-ರೂ  ಇರಬಹುದು. ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ ಅ.ಕಿ 3000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ  ಜಪ್ತಿಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 08-01-2019 ರಂದು ಮಲ್ಲಾಬಾದ ಗ್ರಾಮದ ಕನಕದಾಸ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬಾತ್ಮಿ ಸ್ಥಳಕ್ಕೆ ಹೋಗಿ ಮಲ್ಲಾಬಾದ ಗ್ರಾಮದ ಕನಕದಾಸ ಚೌಕದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಕನಕದಾಸ ಚೌಕ ಹತ್ತಿರ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಆಗ ನಾವು  ದಾಳಿ ಮಾಡಿದಾಗ ಮಟಕಾ ಬರೆಸಲು ಬಂದಂತಹ ಜನರು ಓಡಿ ಹೊದರು. ಮಟಕಾ ಬರೆದುಕೊಳ್ಳುತ್ತಿದ್ದ ವ್ಯೆಕ್ತಿಯನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅಡಿವೆಪ್ಪ ತಂದೆ ಶಿವಶರಣಪ್ಪ ಪಾಟೀಲ ಸಾ|| ಅತನೂರ ಹಾ|| || ಮಲ್ಲಾಬಾದ ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 3670/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಪೆನ್ನ ದೊರೆತವು, ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು  ಸದರಿ ಆರೋಪಿತನೊಂದಿಗೆ ಮರಳಿ ಅಫಜಲಪೂರ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ರೇವೂರ ಠಾಣೆ : ಶ್ರೀ ಮಲ್ಲಪ್ಪ ತಂದೆ ರಾಮಚಂದ್ರ ಕಡಗಂಚಿ ಸಾ:ಭೈರಾಮಡಗಿ ತಾ:ಅಫಜಲಪೂರ ರವರ ಮಗಳಾದ ಅಂಜನಾ ಇವಳು 10 ತರಗಿತಿಯವರೆಗೆ ನಮ್ಮ ಗ್ರಾಮದಲ್ಲಿ ವಿದ್ಯೆಭ್ಯಾಸ ಮುಗಿಸಿದ್ದು ದಿನಾಂಕ:20-12-2018 ರಂದು ನಾನು ಮತ್ತು ನನ್ನ ಹೆಂಡತಿ ಪ್ರತಿ ದಿನದಂತೆ ಬೆಳಿಗ್ಗೆ 10,ಎಮ್,ಕ್ಕೆ ನಮ್ಮ ಹೋಲಕ್ಕೆ ಹೋಗಿರುತ್ತೇವೆ ನಾವ ಹೋಲಕ್ಕೆ ಹೋಗುವಾಗ ನನ್ನ ಮಗಳು ಅಂಜನಾ ಮನೆಯಲ್ಲಿಯೆ ಇದ್ದಳು ಮತ್ತು ಕೋಮಲ ಹಾಗೂ ಖ್ಯಾಮಲಿಂಗ ಇಬ್ಬರು ಶಾಲೆಗೆ ಹೋಗಿದ್ದರು ನಾವು ಹೋಲ್ಕಕೆ ಹೋಗಿ ನಮ್ಮ ಕೇಲಸ ಮುಗಿಸಿಕೊಂಡು ಮರಳಿ 6 ಪಿ,ಎಮ್.ಕ್ಕೆ ಮನೆಗೆ ಬಂದಿದ್ದು ಮನೆಗೆ ಬಂದಾಗ ನನ್ನ ಮಗಳು ಅಂಜನಾ ಮನೆಯಲ್ಲಿ ಇದ್ದಿರಲಿಲ್ಲ ಸ್ವಲ್ಪ ಹೋತ್ತು ಕಾದು ನೋಡಿದರು ಅವಳು ಬರಲಿಲ್ಲ ಆಗ ಗಾಬರಿಯಿಂದ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕುಡಿ ಹುಡುಕಾಡಲು ಸುರುಮಾಡಿದೆವು ಮತ್ತು ಅಕ್ಕ ಪಕ್ಕದ ಮನೆಯವರಿಗೆ ವಿಚಾರಿಸಲು ಸುರುಮಾಡಿದಾಗ ನಮ್ಮ ಪಕ್ಕದ ಮನೆಯವರಾದ ಬಿರಣ್ಣ ತಂದೆ ನ್ಯಾಮಣ್ಣ ಜಮಾದಾರ ಇವರು ತಿಳಿಸಿದ್ದೆನಂದರೆ ನಾನು ಮಧ್ಯಾಹ್ನ 2 ಪಿ,ಎಮ್. ಸುಮಾರಿಗೆ ಬಿರಲಿಂಗೆಶ್ವರ ಗುಡು ಹತ್ತೀರ ಕುಳಿತಿದ್ದಾಗ ಮಲ್ಲಿಕಾರ್ಜುನ @ ಮಲ್ಲಪ್ಪ ತಂದೆ ಸಿದ್ದಮಾಳಪ್ಪ ನಿಂಬರ್ಗಾ ಈತನು ಟಂಟಂ ತಗೆದುಕೊಂಡು ಬಂದು ನಿಮ್ಮ ಮನೆ ಹತ್ತೀರ ನಿಂತು ನಿನ್ನ ಮಗಳಾದ ಅಂಜನಾ ಈವಳಿಗೆ ಹೆದರಿಸಿ ಟಂಟಂ ನಲ್ಲಿ ಕೂಡಿಸಿಕೊಂಡು ಹೋಗಿರುತ್ತಾನೆ ಅಂತಾ ತಿಳಿಸಿದನು. ಆಗ ನಾನು ಕಲಬುರಗಿ ಯಲ್ಲಿರುವ ನನ್ನ ಮಗನಾದ ಶರಣು ಈತನಿಗೆ ನಮ್ಮ ಗ್ರಾಮಕ್ಕೆ ಕರೆಯಿಸಿ ಈ ಬಗ್ಗೆ  ವಿಷಯ ತಿಳಿಸಿ ನಾನು ಮತ್ತು ನನ್ನ ಹೆಂಡತಿ ನನ್ನ ಸಂಬಂಧಿಕರೊಂದಿಗೆ ಚರ್ಚಿಸಿ  ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತೀದ್ದು ಕಾರಣ ಅಪ್ರಾಪ್ತ ವಯಸ್ಸಿನ ನನ್ನ ಮಗಳಾದ ಅಂಜನಾ ಈವಳಿಗೆ ಹೆದರಿಸಿ ಅಪಹರಿಸಿಕೊಂಡು ಹೋದ ನಮ್ಮ ಗ್ರಾಮದ ಮಲ್ಲಿಕಾರ್ಜುನ  @ ಮಲ್ಲಪ್ಪ ತಂದೆ ಸಿದ್ದಮಾಳಪ್ಪ ನಿಂಬರ್ಗಾ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 06/01/2019 ರಂದು ರಾತ್ರಿ  ಶ್ರೀ ಶಿವಾನಂದ ಈತನು ತನ್ನ ಅಟೋರಿಕ್ಷಾ ನಂ ಕೆಎ-32 ಬಿ-6333 ನೇದ್ದರಲ್ಲಿ ತನ್ನ ಮಕ್ಕಳಾದ ಶಿವರಾಜ ಮತ್ತು ಬಸವರಾಜ ಹಾಗೂ ಅಳಿಯನಾದ ಸಂಜುಕುಮಾರ ಇವರಿಗೆ ಕೂಡಿಸಿಕೊಂಡು ಯಕ್ಕಂಚಿ ದಿಂದ ಸಿಂದಗಿ ಕಡೆಗೆ ಅಟೋ ಚಾಲಾಯಿಸಿಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಾಲಯಿಸಿಕೊಂಡು ಬಂದು ಅಟೋರಿಕ್ಷಾಕ್ಕೆ ಡಿಕ್ಕಿ ಪಡಿಸಿ ಅಟೋ ಪಲ್ಟಿಗೊಳಿಸಿ ಫೀರ್ಯಾದಿಯ ಮಗನಾದ ಬಸವರಾಜ ಈತನು ಎಡಗಾಲು ಮೊಳಕಾಲಿಗೆ, ಬಲಗೈ ರಟ್ಟೆಗೆ , ತರಚಿದಗಾಯ ಬಾಯಿಗೆ ಪೆಟ್ಟಾಗಿದ್ದು ತಲೆಗೆ ಭಾರಿಗಾಯಗೊಳಿಸಿ ಟ್ರ್ಯಾಕ್ಟರ ಸಮೇತ ಚಾಲಕ ಓಡಿಹೋಗಿದ್ದು ಬಸವರಾಜ ಈತನಿಗೆ ಉಪಚಾರ ಕುರಿತು ವಿಜಯಪೂರ ವಾಸುದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಹಣದ ಅಡಚಣೆ ಇದ್ದ ಪ್ರಯುಕ್ತ ಆತನ ತಂದೆ ಮತ್ತು ತಾಯಿ ಕೂಡಿ ಬಸವರಾಜ ಈತನಿಗೆ ನಿನ್ನೆ ವಿಜಯಪೂರದಿಂದ ಕಲಬುರಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಬಸವರಾಜ ಈತನು ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿ ಆಗದೆ ಇಂದು ದಿನಾಂಕ 08/01/2019 ರಂದು ಬೆಳಿಗ್ಗೆ 10-30 ಎ.ಎಂ.ಕ್ಕೆ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.