ಅಪಘಾತ ಪ್ರಕರಣ:
ಮಳಖೇಡ ಪೊಲೀಸ್ ಠಾಣೆ: ದಿನಾಂಕ:09/12/2012 ರಂದು ರಾತ್ರಿ 9:30 ಗಂಟೆಗೆ ಮಹಾಲಿಂಗ
ತಂದೆ ಸಿದ್ದಣ್ಣ ಮತ್ತು ಸರೋಜಾ ಗಂಡ ಮಹಾಲಿಂಗ ಸಾ|| ಇಬ್ಬರು ಜಾಂಬವಿ ನಗರ ವಾಡಿ ತಾ|| ಚಿತ್ತಾಪುರರವರು ಮಹಾಲಿಂಗ ಇತನು ತನ್ನ ಮಾವನ ಮನೆ ಸೇಡಂ ದಿಂದ
ವಾಡಿ ಗೇ ಹೋಗುವ ಕುರಿತು ತನ್ನ ಹೋಸ ಮೋಟಾರು ಸೈಕಲ್ ಮೇಲೆ ತನ್ನ ಹೆಂಡತಿಯಾದ ಸರೋಜಾ ಇವಳನ್ನು
ಕರೆದುಕೊಂಡು ವಾಡಿಗೆ ಹೋಗುವಾಗ ಸೇಡಂ ಗುಲಬರ್ಗಾ ಎಸ್.ಹೆಚ್. 10 ರೋಡಿನ ಹುಡಾ (ಕೆ) ಗೇಟ ಸಮೀಪ
ರಾತ್ರಿ 10:30 ಪಿ.ಎಮ್ ಸುಮಾರಿಗೆ ಯಾವುದೋ ಒಂದು ಅಪರಿಚಿತ ವಾಹನವು ಮೋಟಾರು ಸೈಕಲ್ ಕ್ಕೆ
ಡಿಕ್ಕಿ ಹೊಡೆದಿದ್ದರಿಂದ ಮೋಟಾರ ಸೈಕಲ್ ಪೆಟ್ರೋಲ್ ಟ್ಯಾಂಕ್ ಒಡೆದು ಬೆಂಕಿ ಹತ್ತಿ ಮೋಟಾರು
ಸೈಕಲ್ ಮತ್ತು ಮೃತರ ಬಟ್ಟೆಗಳು ಸುಟ್ಟಿದ್ದು ಮತ್ತು ತಲೆಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೆ
ಮೃತಪಟ್ಟಿರುತ್ತಾರೆ ಅಂತಾ ಶ್ರೀ ಸಿದ್ದಣ್ಣ ತಂದೆ ಶರಣಪ್ಪ ಹಲಗೇನವರ ಸಾ|| ಜಾಂಬವಿ ಕಾಲೋನಿ ವಾಡಿ ತಾ|| ಚಿತ್ತಾಪುರ ರವರು ದೂರು ಸಲ್ಲಿಸಿದ
ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 74/2012 ಕಲಂ, 279, 304 (ಎ) ಐಪಿಸಿ ಸಮಗಡ 187
ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.