POLICE BHAVAN KALABURAGI

POLICE BHAVAN KALABURAGI

25 October 2011

GULBARGA DIST REPORTED CRIME





ಕುಖ್ಯಾತ 6 ಜನ ಸರಗಳ್ಳರ ಬಂದನ, ಸುಮಾರು 12 ಲಕ್ಷ ರೂ ಬೆಲೆಬಾಳುವಬಂಗಾರ,ಆಭರಗಳು, ನಗದು,ಮೊಟಾರ ಸೈಕಲ ಮತ್ತು ಮೊಬಾಯಿಲಗಳ ವಶ.

ಖಚಿತ ಮಾಹಿತಿ ಆಧಾರ ಅನ್ವಯ ಈ ದಿವಸ ಸೊನಿಯಾ ಗಾಂಧಿ ಕಾಲೋನಿ ಮತ್ತು ಟಿಪ್ಪು ಸುಲ್ತಾನ ಚೌಕದಲ್ಲಿ ದಾಳಿ ಮಾಡಿದ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು 6 ಜನ ಕುಖ್ಯಾತ ಸರಗಳ್ಳತನ ಮಾಡುವ ಜನರನ್ನು ಬಂಧಿಸಿದ್ದಾರೆ. ಸದರಿಯವರಿಂದ ಬಂಗಾರದ ಆಭರಣಗಳು ಸರಗಳ್ಳತನ ಮಾಡಲು ಬಳಸುತ್ತಿದ್ದು ಮೊಟಾರ ಸೈಕಲಗಳು, ಮೊಬಾಯಿಲ್ ಪೊನಗಳು, ಸಿಮ್ ಕಾರ್ಡ, ಚಾಕು, ವಗೈರೆ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡು ವಿಶೇಷ ತನಿಖಾ ತಂಡದವರು ತನಿಖೆ ಮುಂದುವರೆಯಿಸಿರುತ್ತಾರೆ.

ಗುಲಬರ್ಗಾ ನಗರದಲ್ಲಿ ಘಟಿಸಿದ ಸ್ವತ್ತಿನ ಪ್ರಕರಣಗಳಲ್ಲಿನ ಆರೋಪಿತರ ಪತ್ತೆ ಕುರಿತು ಮಾನ್ಯ ಶ್ರೀ ಮಹಮ್ಮದ ವಜೀರ ಅಹ್ಮದ ಐ.ಪಿ.ಎಸ್ ಐ.ಜಿ.ಪಿ ಸಾಹೇಬರು ಈಶಾನ್ಯ ವಲಯ ಗುಲಬರ್ಗಾ ಹಾಗೂ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ. ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ಮತ್ತು ಶ್ರೀ ಹೆಚ್. ತಿಮ್ಮಪ್ಪಾ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ನಿನ್ನೆ ದಿನಾಂಕ 24/10/2011 ರಂದು ಮದ್ಯ ರಾತ್ರಿ ವಿಶೇಷ ತನಿಖಾ ತಂಡದ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಮ್.ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ ಪಿಐಗಳಾದ 1) ಶ್ರೀ ಬಿ.ಬಿ ಪಟೇಲ ಮತ್ತು 2) ಶ್ರೀ ರಾಜಣ್ಣ 3) ಶ್ರೀ ಪಂಡಿತ ಸಗರ ಪಿ.ಎಸ್.ಐ (ಕಾಸು) ವಿವಿ ಠಾಣೆ 4) ಸಂಜೀವಕುಮಾರ ಪಿ.ಎಸ್.ಐ (ಕಾಸು) ಎಮ್.ಬಿ ನಗರ, 5) ಶ್ರೀ ಸಂಗಮೇಶ ಪಿ.ಎಸ್.ಐ ಜೇವರಗಿ 6) ಶ್ರೀ ಶಾಂತಿನಾಥ ಪಿ.ಎಸ್.ಐ ಕಮಲಾಪುರ ಮತ್ತು ಸಿಬ್ಬಂದಿಯವರಾದ ಸಿದ್ರಾಮ ಹೆಚ್.ಸಿ, ಶಿವಪುತ್ರ ಸ್ವಾಮಿ ಹೆಚ್.ಸಿ, ಪ್ರಭಾಕರ ಪಿಸಿ, ಅಶೋಕ ಪಿಸಿ, ವೇದರತ್ನಂ ಪಿಸಿ, ಗಂಗಾಧರ ಪಿಸಿ, ಲೈಕೋದ್ದಿನ ಪಿಸಿ, ಇಮ್ತಿಯಾಜ ಎಪಿಸಿ, ಅರ್ಜುನ ಎಪಿಸಿ ಚಂದ್ರಕಾಂತ ಮುರುಡ ಪಿಸಿ, ಬಲರಾಮ ರಜಪುತ ಪಿಸಿ, ಮಶಾಕ ಪಿಸಿ ರವರು ಖಚಿತ ಭಾತ್ಮಿ ಮೇರೆಗೆ ಸೊನಿಯಾ ಗಾಂಧಿ ಕಾಲೋನಿ ಮತ್ತು ಟಿಪ್ಪು ಸುಲ್ತಾನ ಚೌಕದಲ್ಲಿ ಮಿಂಚಿನ ದಾಳಿ ಮಾಡಿ ಕುಖ್ಯಾತ ಸರಗಳ್ಳತನ ಮಾಡುವ ಜನರಾದ ಸೈಯದ ಫಯಾಜ ತಂದೆ ಬಾಶುಮಿಯಾ ವಯ: 24 ವರ್ಷ ಗುಲಬರ್ಗಾ ಟಿಪ್ಪು @ ಇರ್ಫಾನ ತಂದೆ ಅಯೂಬ ಪಟೇಲ ಮಚಲಿವಾಲೆ ವಯ : 21 ವರ್ಷ ಉ: ಅಲೂಮಿನಿಯಂ ಸಾ|| ಖುಲ್ಲಾ ಬನಿ ಮಜೀದ ಹತ್ತಿರ ಗುಲಬರ್ಗಾ :ಮಹ್ಮದ ರಫೀಕ ತಂದೆ ಸಲೀಂ ಮಿಯಾ ಶೇಖ ವಯ: 20 ವರ್ಷ ಉ:: ವೆಲ್ಡಿಂಗ್ ಕೆಲಸ ಸಾ|| ನಯಾ ಮೊಹಲ್ಲಾ ಶಾಲೆ ಹಿಂದುಗಡೆ ಗುಲಬರ್ಗಾ ಮಹ್ಮದ ಅಖೀಲ್ ತಂದೆ ಮಹ್ಮದ ಜಾಫರ ಚುವೆವಾಲೆ ವಯ: 22 ವರ್ಷ ಉ:: ಮೇಕ್ಯಾನಿಕ ಸಾ|| ಲಾಲಗೇರಿ ಗುಲಬರ್ಗಾ ಮಹ್ಮದ ಅನ್ವರ ತಂದೆ ಮಹ್ಮದ ಹುಸೇನಿ ಖುರೆಸಿ ವಯ: 23 ವರ್ಷ ಉ: ಚಿಕನ ಅಂಗಡಿ ಸಾ: ಮಿಲನ್ ಚೌಕ ಗಾಜಿಫುರ ಗುಲಬರ್ಗಾ 6) ಶೇಖ್ ಜಾಫರ ತಂದೆ ಶೇಖ್ ಫರೀದ್ ವಯ: 19 ವರ್ಷ ಉ: ಪೆಂಟಿಂಗ ಕೆಲಸ ಸಾ: ಶಹಬಾಜ ಸ್ಕೂಲ್ ಹತ್ತಿರ ಇಸ್ಲಾಮಬಾದ ಕಾಲೋನಿ ಗುಲಬರ್ಗಾ ರವರನ್ನು ಹಿಡಿದುಕೊಂಡು ಠಾಣೆಗೆ ತಂದು ತನಿಖೆಗೆ ಒಳಪಡಿಸಿದಾಗ ಈಗ ಸುಮಾರು ಒಂದು ವರ್ಷದಿಂದ ಗುಲಬರ್ಗಾ ನಗರದ ವಿಭೂತಿ ಕಾಲೋನಿ, ಜಿಡಿಎ ಕಾಲೋನಿ ಹನುಮಾನ ಮಂದಿರ ಹತ್ತಿರ, ಪ್ರಗತಿ ಕಾಲೋನಿ, ಡಾಕ್ಟರ್ಸ ಕಾಲೋನಿ ಬಸವೇಶ್ವರ ಕಾಲೋನಿ, ಗುಬ್ಬಿ ಕಾಲೋನಿ, ಪ್ರಶಾಂತ ನಗರ, ಬ್ಯಾಂಕ ಕಾಲೋನಿ ಮತ್ತು ಜಗತ ವೃತ್ತ ಬಳಿ ಸರಗಳ್ಳತನ ಮತ್ತು ಸುಲಿಗೆ ಮಾಡಿರುವ ಬಗ್ಗೆ ತನಿಖೆ ಹಾಗೂ ವಿಚಾರಣೆ ಕಾಲಕ್ಕೆ ಒಪ್ಪಿಕೊಂಡಿದ್ದು. ಸದರಿ ಆರೊಪಿತರಿಂದ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು, ನಗದು, ಮೊಬಾಯಿಲ್ ಮತ್ತು ಸರಗಳ್ಳತನ ಮಾಡಲು ಬಳಸುತ್ತಿದ್ದ 3 ಮೂರು ಮೊಟಾರ ಸೈಕಲಗಳು. ಒಂದು ಚಾಕು, ಸಿಮ್ ಕಾರ್ಡಗಳು ವಗೈರೆ ವಸ್ತುಗಳನ್ನು ಜಪ್ತು ಪಡಿಸಿಕೊಂಡು ವಿಶೇಷ ತನಿಖಾ ತಂಡದವರು ತನಿಖೆ ಮುಂದುವರೆಸಿದ್ದು ಆರೊಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

GULBARGA DISTRICT REPORTED CRIMES

ಕಳ್ಳತನ ಪ್ರಕರಣ:

ಎಂ.ಬಿ.ನಗರ ಪೊಲೀಸ್ ಠಾಣೆ : ಶ್ರೀ ಡಾಃ ಹನುಮಂತಪ್ಪ ತಂದೆ ಬಸವಣಪ್ಪಾ ಕಲಾಸಗಿ ಸಾಃ ಗಾಜಿಪೂರ ಗುಲಬರ್ಗಾ ರವರು ನಾನು ದಿನಾಂಕ 19/10/2011 ರಂದು ರಂದು ಮಧ್ಯಾಹ್ನ ನನ್ನ ಹಿರೊ ಹೊಂಡಾ ಸ್ಪೆಂಡರ್ ಪ್ಲಸ್ (ಕಪ್ಪು ಬಣ್ಣದ್ದು) ಮೋಟಾರ ಸೈಕಲ ನಂ. ಕೆ.ಎ 32 ಎಸ್ 7012 ನೇದ್ದನ್ನು ಸಿಂಡಿಕೇಟ್ ಬ್ಯಾಂಕ್ ಹತ್ತಿರ ನಿಲ್ಲಿಸಿ ಹೋಗಿ ಬರುವಷ್ಟರಲ್ಲಿ ಯಾರೋ ಕಳ್ಳರು ಮೋಟಾರ ಸೈಕಲನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 148/2011 ಕಲಂ. 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀ ಅಬ್ದುಲ್ ರಹಿಮ ತಂದೆ ಅಬ್ದುಲ ಅಲೀಮ ಸಾ: ಮನೆ 9-566/11 ವಿಜಯ ನಗರ ರವರು ನಾನು ದಿನಾಂಕ 24.10.11 ರಂದು ಸಾಯಂಕಾಲ್ ಎಸ್.ವಿ.ಪಿ.ಸರ್ಕಲ್ ದಿಂದ ಪಿ.ಡಿ.ಎ.ಕಾಲೇಜ ರೋಡಿನಲ್ಲಿ ಬರುವ ಸಪ್ನಾ ಝೆರಾಕ್ಸ ಅಂಗಡಿ ಎದುರುಗಡೆಯಿಂದ ನನ್ನ ಮೋಟಾರ್ ಸೈಕಲ್ ನಂ: ಕೆಎ 32 ಎಲ್ 3103 ನೇದರ ಮೇಲೆ ಹೋಗುತ್ತಿದಾಗ ಎಸ್.ವಿ.ಪಿ.ಸರ್ಕಲ್ ಕಡೆಯಿಂದ ಮೋಟರ ಸೈಕಲ ನಂ ಕೆ.ಎ 32 ಡಬ್ಲೂ 8700 ನೇದ್ದನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಡಿಕ್ಕಿ ಪಡಿಸಿ ಅಪಫಾತ ಮಾಡಿ ಗಾಯಗೂಳಿಸಿರುತ್ತಾನೆ ಅಂತಾ ದೂಋಉ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 135/2011 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :
ವಿಶ್ವವಿದ್ಯಾಲಯ ಪೊಲೀಸ ಠಾಣೆ:
ಶ್ರೀಮತಿ ಶೋಭಾ ಗಂಡ ಅಂಬಾರಾಯ ಅಂಬಲಗಿ ಉ:ಸ.ಹಿ.ಪ್ರಾ.ಶಾಲೆ ಹಲೇ ಶಾಬಾದದಲ್ಲಿ ಸಹ ಶಿಕ್ಷಕಿ ಸಾ: ರಾಜಾಪೂರ ಬಡೇಪೂರ ಬಡಾವಣೆ ಜಿಡಿಎ ಪ್ರಶಾಂತ ನಗರ (ಬಿ) ಗುಲಬರ್ಗಾ ರವರು ನಾನು ಮತ್ತು ನಮ್ಮ ಅತ್ತೆ ಗಂಗಮ್ಮ ಇಬ್ಬರೂ ಮದ್ಯಾಹ್ನ ಕೆನರಾ ಬ್ಯಾಂಕ್ ಗೆ ಹಣ ತರುವ ಕುರಿತು ಹೋಗುವಾಗ, ನನ್ನ ಮಗನಿಗೆ ಎದುರು ಮನೆಯಲ್ಲಿ ಬಿಟ್ಟು ಹೋಗಿದ್ದು, ಒಂದೂವರೆ ಗಂಟೆಯ ನಂತರ ಎದುರು ಮನೆಯವರು ಪೋನ್ ಮಾಡಿ ನಿಮ್ಮ ಮನೆಯ ದ್ವಾರದ ಕೀಲಿ ಮುರಿದಿದೆ ತಿಳಿಸಿದ್ದರಿಂದ ನಾನು ಮತ್ತು ನನ್ನ ಅತ್ತೆ ಇಬ್ಬರೂ ಕೂಡಿ ಮನೆಗೆ ಬಂದು ನೋಡಲಾಗಿ ಬೆಡ್ ರೂಮ್ ದಲ್ಲಿದ್ದ ಅಲಮಾರಿ ಮುರಿದಿದ್ದು ಅಲಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು ಅಂದಾಜ ಕಿಮ್ಮತ್ತು 65.000/- ರೂ ಮೌಲ್ಯದ ಕಳವುವಾ್ಇದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 244/2011 ಕಲಂ 454, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ

ಕಳ್ಳತನ ಪ್ರಕರಣ :

ಸ್ಟೇಷನ ಬಜಾರ ಪೊಲೀಸ ಠಾಣೆ: ಪಾಲರಾಜ ತಂದೆ ಮಣಿಕರಾವ ವ|| 37 ವರ್ಷ ವೈದ್ಯಕೀಯ ಟೆಕ್ನಾಲೊಜಿಸ್ಟ್ ಸರಕಾರಿ ಆಸ್ಪತ್ರೆ ಗುಲಬರ್ಗಾ ಸಾ|| ಮನೆ ನಂ 125/2/ಸಿ/ಪಿಡಬ್ಲುಡಿ ಕ್ವಾಟರ್ಸ ಐವಾನ-ಇ-ಶಾಹಿ ಕಾಲೊನಿ ಗುಲಬರ್ಗಾ ರವರು ನಾನು ಮತ್ತು ನನ್ನ ಹೆಂಡತಿ ಇಬ್ಬರು ಸರಕಾರಿ ನೌಕರರಿದ್ದು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದು ನಮಗೆ ಒಂದೇ ಹೆಣ್ಣು ಮಗು ಇದ್ದು ಅವಳು ಮಧ್ಯಾನ 4.00 ಗಂಟೆಗೆ ಮನೆಗೆ ಶಾಲಯಿಂದ ಮನೆಗೆ ಬರುತಿದ್ದು ಅವಳ ಯೋಗಕ್ಷೇಮ ನೋಡಿಕೊಳ್ಳಲು ಕು. ಸುನೀತಾ ಎನ್ನುವವಳಿಗೆ ತಿಂಗಳಿಗೆ 400/- ರೂ ಸಂಬಳ ಕೊಡುತಿದ್ದು ಅವಳು ಸುಮಾರು 3 ವರ್ಷದಿಂದ ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡು ಇರುತ್ತಾಳೆ. ದಿನಾಂಕ 21.10.2011 ರಂದು ನನ್ನ ಹೆಂಡತಿ ತನ್ನ ಕರ್ತವ್ಯ ಮುಗಿಸಿಕೊಂಡು ಸಂಜೆ 4.30 ಗಂಟೆಗೆ ಮನೆಗೆ ಬಂದು ಸುನೀತಾಳಿಗೆ ಕೊಡಬೇಕಾದ ಸಂಬಳ 400/- ರೂ ತೆಗೆದುಕೊಳ್ಳುವಂತೆ ಡೈನಿಂಗ್ ಟೇಬಲ್ ಮೇಲೆ ಇಟ್ಟು ಅಲ್ಲಿಂದ ನೇರವಾಗಿ ಬೆಡ್ ರೂಮಿಗೆ ಹೋಗಿ ಕೊರಳಲ್ಲಿಯ ಮಂಗಳಸೂತ್ರ ಮತ್ತು ಬಳೆ ಗಡಿಯಾರ ಅಲ್ಲಿಯೇ ಇಟ್ಟು ಮುಖ ತೊಳೆದುಕೊಳ್ಳಲು ಹೋಗುವಾಗ ಕು.ಸುನೀತಾಳಿಗೆ ಮಗುವಿಗೆ ಮ್ಯಾಗಿ ತಯ್ಯಾರ ಮಾಡು ಅಂತಾ ಹೇಳಿ ಒಳಗೆ ಹೋಗಿದ್ದು ಸುನೀತಾ ಇವಳು ಮ್ಯಾಗಿ ತಯ್ಯಾರಿಸಲು ಅಡುಗೆ ಮನೆಗೆ ಹೋದಾಗ ಯಾರೋ ಅಪರಿಚಿತ ಕಳ್ಳರು ಮನೆಯಲ್ಲಿ ಪ್ರವೇಶ ಮಾಡಿ ಡೈನಬಿಂಗ್ ಟೇಬಲ್ ಮೇಲೆ ಇಟ್ಟ 400/- ರೂ ಗಡಿಯಾರ ಹಾಗೂ ಬಂಗಾರದ ಬಳೆ, ಮಂಗಳಸೂತ್ರ ಒಟ್ಟು 5,1/2 ತೊಲೆ ಬಂಗಾರದವುಗಳು ಅ.ಕಿ. 1,50,000/- ರೂ ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 189/11 ಕಲಂ 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಹಣಮಂತ ತಂದೆ ರಾಮಣ್ಣ ನವಲೇಕಾರ ಸಾ; ತಾಜಸುಲ್ತಾನಪೂರ ತಾ;ಜಿ;ಗುಲಬರ್ಗಾ ರವರು ನಾನು ದಿನಾಂಕ.24-10-2011 ರಂದು ಅಶೋಕ ಅಟ್ಟೂರ ಇವರ ಮನೆಯ ಎದರುಗಡೆ ಬರುತ್ತಿರುವಾಗ ಶರಣಪ್ಪಾ ಮದನಕರ , ಕೃಷ್ಣಾ ತಂದೆ ಶರಣಪ್ಪ ಮದನಕರ, ವಿಠಲ ತಂದೆ ಶರಣಪ್ಪ ಮದನಕರ ಸಾ: ತಾಜಸುಲ್ತಾನಪೂರ ರವರು ಅವ್ಯಾಚ್ಛ ಶಬ್ದಗಳಿಂದ ಬೈದು ಬಡಿಗೆಯಿಂದ ನನ್ನ ಬಲಗಾಲು ತೊಡೆಗೆ ಜೋರಾಗಿ ಹೋಡೆದಿರುತ್ತಾರೆ ವಿಠಲ ಇತನು ಬ್ಲೇಡ (ರೇಜರ) ದಿಂದ ನನ್ನ ಎದೆಯ ಮೇಲೆ ಹೊಡೆದನು ರಕ್ತ ಗಾಯ ಮಾಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 312/2011 ಕಲಂ. 341, 323, 324, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ :
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮೇಹಿಬೂಬ ಅಲಂ ತಂದೆ ಮಹಮ್ಮದ ಹುಸೇನ ಖಾಜಿ ವಯಾ:45 ವರ್ಷ ಜಾ: ಮುಸ್ಲಿಂ ಉ: ಕಿರಾಣಿ ಅಂಗಡಿ ಸಾ: ತಾಜನಗರ ಗುಲಬರ್ಗಾ ನಾನು ರವರು ದಿನಾಂಕ, 24/10/2011 ರಂದು ಮದ್ಯಾಹ್ನ ಸುಮಾರಿಗೆ ಹುಮನಾಬಾದ ರಿಂಗ ರೋಡ ಮೇಲೆ ನನ್ನ ಮಗಳು ನಡೆದುಕೊಂಡು ಹೊರಟಾಗ ಹಿಂದಿನಿಂದ ಯಾವುದೊ ಒಂದು ವಾಹನದ ಚಾಲಕ ತನ್ನ ವಾಹನವನ್ನು ಅತೀವೇಗ ಅಲಕ್ಷತನ ದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಬಲಗಾಲಿಗೆ ಬಾರಿ ಗುಪ್ತಗಾಯ, ಬಲ ಮೇಲಕಿನ ಹತ್ತಿರ ಗುಪ್ತಗಾಯಗಳು ಪಡಿಸಿ ತನ್ನ ವಾಹನವನ್ನು ಹಾಗೇ ಒಡಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 313/11 ಕಲಂ 279 338 ಐಪಿಸಿ ಸಂ/ 187 ಐಎಂವಿ ಎಕ್ಟ್‌‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅನಧಿಕೃತವಾಗಿ ಅಕ್ಕಿ ಸಾಗಾಣೆ ಮಾಡುತ್ತಿದ್ದ ಬಗ್ಗೆ :

ಫರಹತಾಬಾದ ಠಾಣೆ : ಶ್ರೀ ಎ.ಟಿ ಜಯಪ್ಪಾ ಉಪ ನಿರ್ದೇಶಕರು ಆಹಾರ ನಾಗರಿಕ ಸರಬರಾಜು ಇಲಾಖೆ ಗುಲಬರ್ಗಾ ರವರು ನಾನು ಮತ್ತು ಸಿಬ್ಬಂದಿಯವರಾದ ವಿಜಯಾನಂದ, ಡಿ.ಬಿ ಪಾಟೀಲ, ರವಿ, ಹುಸೇನ ಭಾಷಾ ಇವರೊಂದಿಗೆ ಭಾತ್ಮಿ ಬಂದಿದ್ದ ಮೇರೆಗೆ ಹೋಗಿದ್ದು ಗುಲಬರ್ಗಾ – ಜೇವರ್ಗಿ ಹೆದ್ದಾರಿ ಮೇಲೆ ಫರಹತಾಬಾದ ಸಮೀಪ 7-00 ಪಿಎಮ್‌ಕ್ಕೆ ಲಾರಿ ನಂ: ಜಿಜೆ-25 ಟಿ- 5393 ನೇದ್ದನ್ನು ನಿಲ್ಲಿಸಿ ಚೆಕ್ ಮಾಡಲಾಗಿ ಚಾಲಕನ ಹೆಸರು ಕೃಷನಬಾಯಿ ತಂದೆ ಕಾನಾಬಾಯಿ ಸಾ: ರಾಸಾಬಾವು ತಾ:ಜಿ: ಪೂರಬಂದರ (ಗುಜರಾತ) ಅಂತಾ ತಿಳಿಸಿದ್ದು ಸದರಿ ಲಾರಿಯಲ್ಲಿ ಗುಲಬರ್ಗಾದ ಕೆ.ಎಮ್.ಜಿ ಟಾನ್ಸಪೋರ್ಟದಲ್ಲಿ 50 ಕೆ. ಜಿ ಯ 440 ಚೀಲಗಳ ಅಕ್ಕಿಯನ್ನು ಅಂದರೆ 220 ಕ್ವಿಂಟಾಲ ಪಡಿತರ ಅಕ್ಕಿಯ ಅ.ಕಿ. 2,06,800=00 ರೂ. ಯಾವುದೇ ದಾಖಲಾತಿ ಇಲ್ಲದೆ ಗುಲಬರ್ಗಾದಿಂದ ಜೇವರ್ಗಿ ಕಡೆಗೆ ಹೊರಟ್ಟಿದ್ದು ಅವುಗಳನ್ನು ಇಬ್ಬರ ಪಂಚರ ಸಮಕ್ಷಮದಲ್ಲಿ 7-30 ಪಿ.ಎಮ್‌ದಿಂದ 8-30 ಪಿಎಮ್‌ ದ ವರೆಗೆ ಪಂಚನಾಮೆ ಮಾಡಿಕೊಂಡು ಹೀಗೆ ಲಾರಿ ಸಮೇತ ಅ.ಕಿ. ಒಟ್ಟು 12,06,800=00 ರೂ. ನೇದ್ದು ಜಪ್ತಿ ಪಡಿಸಿಕೊಂಡಿಸಿರುತ್ತೆವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 200/2011 ಕಲಂ 3 & 7 ಇ.ಸಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.