POLICE BHAVAN KALABURAGI

POLICE BHAVAN KALABURAGI

29 June 2015

Kalaburagi District Reported Crimes

ಹಲ್ಲೆ ಪ್ರಕರಣಗಳು :
ಅಫಜಪೂರ ಠಾಣೆ : ಶ್ರೀ ಶರಣಪ್ಪ ತಂದೆ ಭಿಮಶಾ ಲಾಳಸಂಗಿ ಸಾ ಕರಜಗಿ ರವರ ತಮ್ಮನಿಗು ಮತ್ತು ನಮ್ಮೂರ ಈರಪ್ಪ ತಂದೆ ಗಂಗಾಧರ ನಾಯ್ಕೋಡಿ ರವರಿಗೆ ಬಸ್ಸ ನಿಲ್ದಾಣದಲ್ಲಿ ಕ್ರೋಜರಗಳು ಪಾಳಿ ನಿಲ್ಲಿಸುವ ವಿಚಾರದಲ್ಲಿ ತಕರಾರು ಆಗಿದ್ದು ಈರಪ್ಪ ಇವನು ನಮ್ಮ ತಮ್ಮನ ಮೇಲೆ ಹಗೆ ಸಾದಿಸುತ್ತಾ ಬಂದಿದ್ದು ದಿನಾಂಕ 28-06-2015 ರಂದು ಸಾಯಂಕಾಲ ನಾನು ಮತ್ತು ನಮ್ಮ ತಮ್ಮ ಸಿದ್ದಪ್ಪ ರವರು  ಕೂಡಿ ನಮ್ಮೂರ ಬಸ್ ನಿಲ್ದಾಣದ ಹತ್ತಿರ ಇದ್ದಾಗ ಅದೇ ಸಮಯಕ್ಕೆ ಅಲ್ಲಿ ನಮ್ಮೂರ ಈರಪ್ಪ ತಂದೆ ಗಂಗಾಧರ ನಾಯ್ಕೋಡಿ ರವರು ಸಹ ಇದ್ದರು, ಆಗ ನಾನು ಅವನ ಹತ್ತಿರ ಹೋಗಿ ಯಾಕ ನಮ್ಮ ತಮ್ಮನ ಜೋತೆ ಜಗಳ ತೆಗೆದಿದಿ, ಅಂತಾ ಕೇಳಿದಾಗ, ಈರಪ್ಪ ಇವನು ನನಗೆ ಏನೋ ಸುಳಿಮಗನಾ  ನನಗೇನ ಕೇಳತಿ ನಿಮ್ಮ ತಮ್ಮನಿಗೆ ಹೇಳು ಅಂತಾ ಅಂದನು ಆಗ ನಾನು ಸರಿಯಾಗಿ ಮಾತಾಡು ಯಾಕ ಬೈತಿ ಅಂತಾ ಅಂದಾಗ, ನನಗೆ ಎದುರು ಮಾತಾಡತಿಯಾ ಮಗನಾ ಅಂತಾ ಅಂದು ನನ್ನ ಎದೆ ಮೇಲಿನ ಅಂಗಿ ಹಿಡಿದು ನನಗೆ ಕಪಾಳ ಮೇಲೆ ಹೊಡೆದನು ಆಗ ಅಲ್ಲೆ ಇದ್ದ 1] ಸೋಮಶೇಖರ ತಂದೆ ಗಂಗಾಧರ ನಾಯ್ಕೋಡಿ, 2] ಲಕ್ಷ್ಮಣ ತಂದೆ ಗಂಗಾಧರ ನಾಯ್ಕೋಡಿ, 3] ಸಿದ್ದಾರ್ಥ ತಂದೆ ಚಂದ್ರಕಾಂತ ನಾವಿ, 4] ಚಂದ್ರಕಾಂತ ನಾವಿ ರವರು ಓಡುತ್ತಾ ನಮ್ಮ ಹತ್ತಿರ ಬಂದು, ನಮಗೆ ಯಾಕೋ ಸೂಳಿ ಮಕ್ಕಳ್ಯಾ ನಮ್ಮ ತಮ್ಮನ ಜೋತೆ ಜಗಳಾ ಮಾಡತಿರಾ ಅಂತಾ ಅಂದು ನಮಗೆ ಹೊಡೆಯಲು ಬಂದರು, ಆಗ ಈರಪ್ಪ ಇವನು ಅಲ್ಲೆ ಬಿದ್ದಿದ ಒಂದು ಕಲ್ಲು ತೆಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದನು, ನಂತರ ನನಗೆ ಕೆಳಗೆ ಕೆಡವಿ ಎಲ್ಲರು ಸೇರಿ ಕಾಲಿಲೆ ಒದ್ದಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಅಫಜಲಪೂರ ಠಾಣೆ : ಶ್ರೀ ಈರಪ್ಪಾ ತಂದೆ ಗಂಗಾಧರ ನಾಯ್ಕೊಡಿ ಸಾ : ಕರಜಗಿ ರವರು ನಮ್ಮೂರ ಬಸ್ ನಿಲ್ದಾಣದಲ್ಲಿ ನಮ್ಮೂರಿನ ಕ್ರೂಜರಗಳು ಪಾಳಿ ಪ್ರಕಾರ ಕರಜಗಿ ಅಫಜಲಪೂರ ಹಾಗೂ ಇನ್ನಿತರ ಊರುಗಳಿಗೆ ಜನರನ್ನು ಕೂಡಿಸಿಕೊಂಡು ಹೋಗುವುದು ಬರುವುದು ಮಾಡುತ್ತಿರುತ್ತೆವೆ. ಈಗ ಒಂದು ವಾರದ ಹಿಂದೆ ನಾನು ಮತ್ತು ನಮ್ಮೂರ ಸಿದ್ದು ತಂದೆ ಭಿಮಶಾ ಲಾಳಸಂಗಿ ಈತನು ಹಾಗೂ ಇನ್ನು ಕೆಲವು ಕ್ರೂಜರ ಚಾಲಕರು ಹಾಗೂ ಜೀಪ ಚಾಲಕರು ತಮ್ಮ ತಮ್ಮ ವಾಹನಗಳನ್ನು ಪಾಳಿ ಪ್ರಕಾರ ಪ್ಯಾಶೆಂಜರ ಬಾಡಿಗೆ ಹೊಡೆಯಲು ನಿಲ್ಲಿಸಿರುತ್ತೆವೆ. ನನ್ನ ಕ್ರೂಜರ ಪಾಳಿ ಬಂದಾಗ ಸಿದ್ದು ಲಾಳಸಂಗಿ ಈತನು ಮಗನೆ ನನ್ನ ಗಾಡಿಯ ಪಾಳಿ ಇರುತ್ತದೆ ನಿನ್ಯಾಕ ತಂದ ಹಚ್ಚಿದಿ ಮಗನಾ ಅಂತಾ ಅಂದು ನನ್ನ ಏದೆಯ ಮೇಲಿನ ಅಂಗಿ ಹಿಡಿದು ಹೋಡೆದನು, ಆಗ ನನಗೂ ಅವನಿಗೂ ಜಗಳ ಆಗುತ್ತಿದ್ದಾಗ ಅಲ್ಲೆ ಇದ್ದ ಕ್ರೂಜರ ಚಾಲಕರು ಮತ್ತು ಇನ್ನು ಕೆಲವು ಜನರು ಜಗಳ ಬಿಡಿಸಿದರು. ಆಗ ಸದರಿ ಸಿದ್ದು ಲಾಳಸಂಗಿ ಈತನು ಮಗನೆ ನಾವು 6 ಜನ ಅಣ್ಣ ತಮ್ಮರಿದ್ದಿವಿ, ನಿನ್ನ ಜೀವ ನಮ್ಮ ಕೈಯಲ್ಲೆ ಹೋಗೊದು, ನೋಡು ನಿನಗೆ ಒಂದು ವಾರದಲ್ಲಿ ಒಂದು ಗತಿ ಕಾಣಿಸುತ್ತೆವೆ ಅಂತಾ ಹೇಳಿ ನನ್ನ ಮೇಲೆ ಬಾರಿ ದ್ವೇಷ ಮಾಡಿಕೊಂಡು ಅಲ್ಲಿಂದ ಹೊದನು. ಅಂದಿನಿಂದ ಸಿದ್ದು ಲಾಳಸಂಗಿ ಮತ್ತು ಅವನ ಅಣ್ಣ ತಮ್ಮರಾದ ಶರಣಪ್ಪ, ಕೃಷ್ಣಪ್ಪ, ಪರಶುರಾಮ, ಪುಂಡಲಿಕ, ಶ್ರೀಶೈಲ ಇವರುಗಳು ಏನೊ ಮಗನೆ ನಮ್ಮ ಜೋತೆಗೆನೆ ಜಗಳ ತಗಿತಿಯಾ, ನಿನಗೆ ಒಂದು ಗತಿ ಕಾಣಿಸುತ್ತೆವೆ ಅಂತಾ ಹೇಳುತ್ತಾ ನನ್ನನ್ನು ಕೊಲೆ ಮಾಡಬೆಕಂದು ನನ್ನ ಮೇಲೆ ಹಗೆ ಸಾದಿಸುತ್ತಿದ್ದರು. ಇಂದು ದಿನಾಂಕ 28-06-2015 ರಂದು ಸಾಯಂಕಾಲ 5:30 ಗಂಟೆ ಸಮಯಕ್ಕೆ ನಾನು ನಮ್ಮ ಮನೆಯಿಂದ, ನಮ್ಮೂರಿನ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ, ನನ್ನ ಹಿಂದೆ ಹಿಂದೆಯೆ ನನ್ನ ಜೊತೆಗೆ ಜಗಳ ಮಾಡಿದ ಸಿದ್ದು ಲಾಳಸಂಗಿ ಈತನು ಪೋನಿನಲ್ಲಿ ಆ ಸೂಳಿ ಮಗಾ ಇಲ್ಲೆ ಹೊಂಟಾನ ಮನ್ಯಾಗ ಇರೊ ಮಚ್ಚು ತಗೆದುಕೊಂಡು ಎಲ್ಲರೂ ಬರ್ರಿ, ಈ ಸೂಳೆ ಮಗನಿಗೆ ಇವತ್ತು ಹೊಡೆದು ಕಲಾಸ ಮಾಡೋಣ ಅಂತಾ ಹೇಳಿದನು, ಅದನ್ನು ಕೇಳಿ ಅಲ್ಲಿಂದ ಓಡಿ ನಮ್ಮೂರಿನ ಬಸ್ ನಿಲ್ದಾಣದ ಹತ್ತಿರ ಬಂದು ಸದರಿ ವಿಷಯವನ್ನು ನನ್ನ ಗೆಳೆಯ ಶಿವಾನಂದ ನಾವಿ ಇವನಿಗೆ ಹೇಳುತ್ತಿದ್ದೆನು, ಅಷ್ಟರಲ್ಲಿ 1) ಸಿದ್ದು ತಂದೆ ಬೀಮಶಾ ಲಾಳಸಂಗಿ 2) ಶರಣಪ್ಪ ತಂದೆ ಬೀಮಶಾ ಲಾಳಸಂಗಿ 3) ಕೃಷ್ಣಪ್ಪ ತಂದೆ ಬೀಮಶಾ ಲಾಳಸಂಗಿ 4) ಪರಶುರಾಮ ತಂದೆ ಬೀಮಶಾ ಲಾಳಸಂಗಿ 5) ಪುಂಡಲಿಕ ತಂದೆ ಬೀಮಶಾ ಲಾಳಸಂಗಿ 6) ಶ್ರೀಶೈಲ ತಂದೆ ಬೀಮಶಾ ಲಾಳಸಂಗಿ ಇವರೆಲ್ಲರೂ ಸಿದ್ದು ಈತನು ತನ್ನ ಕೈಯಲ್ಲಿ ಮಚ್ಚನ್ನು ಹಾಗೂ ಶರಣಪ್ಪ ಈತನು ಒಂದು ಬಡಿಗೆಯನ್ನು ಮತ್ತು ಕೃಷ್ಣಪ್ಪಾ ಈತನು ಒಂದು ರಾಡನ್ನು ಹಿಡಿದುಕೊಂಡು ಓಡುತ್ತಾ  ನನ್ನ ಹತ್ತಿರ ಬರುತ್ತಿದ್ದರು, ಆಗ ನಾನು ಸದರಿಯವರನ್ನು ನೋಡಿ ಓಡುತ್ತಿದ್ದಾಗ ಎಲ್ಲರೂ ನನ್ನ ಬೆನ್ನಟ್ಟಿ ಬಂದು, ಬಸ್ ನಿಲ್ದಾಣದಲ್ಲಿರುವ ಪಾನಶಾಪ್ ಹತ್ತಿರ ಸುತ್ತುವರೆದು ಸಿದ್ದು ಲಾಳಸಂಗಿ ಈತನು ಮಗನೆ ನೀನು ಇವತ್ತು ಕಲಾಸ ಅಂತಾ ಹೇಳುತ್ತಾ ತನ್ನ ಕೈಯಲ್ಲಿದ್ದ ಮಚ್ಚಿನಿಂದ ನನ್ನ ತಲೆಯ ಮೇಲೆ ಹೊಡೆದನು, ಕೃಷ್ಣಪ್ಪಾ ಈತನು ರಾಡಿನಿಂದ ನನ್ನ ಬೆನ್ನಿನ ಮೇಲೆ ಹೊಡೆದನು. ಹಾಗೂ ಶರಣಪ್ಪ ಇವನು ಬಡಿಗೆಯಿಂದ ನನ್ನ ಕಾಲಿನ ಮೇಲೆ ಎಲ್ಲರೂ ಮನಸ್ಸೊ ಇಚ್ಚೆ ಹೊಡೆಯುತ್ತಿದ್ದಾಗ ನಾನು ಕೇಳಗೆ ಬಿದ್ದೆನು ಆಗ ಉಳಿದ ಪರಶುರಾಮ, ಪುಂಡಲಿಕ ಮತ್ತು ಶ್ರೀಶೈಲ ಇವರುಗಳು ಈ ಸೂಳಿ ಮಗನಿಗೆ ಕಲಾಸ ಮಾಡೋಣ ಅಂತಾ ಹೇಳುತ್ತಾ ಕಾಲಿನಿಂದ ಹೊಟ್ಟೆಯ ಮೇಲೆ ಒದ್ದು ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.