POLICE BHAVAN KALABURAGI

POLICE BHAVAN KALABURAGI

30 August 2012

GULBARGA DISTRICT

ಗುಲಬರ್ಗಾ ಜಿಲ್ಲಾ ಪೊಲೀಸರ್ ಯಶಸ್ವಿ ಕಾರ್ಯಚರಣೆ ,
ಕುಖ್ಯಾತ ದರೊಡೆಕೊರರು ಹಾಗು ಸರಗಳ್ಳರ ಬಂಧನ, ಸುಮಾರು 17 ಲಕ್ಷ ರೂಪಾಯಿ ಬೆಲೆ ಬಾಳುವ ಬಂಗಾರದ ಆಭರಣಗಳು, ವಾಹನ ಹಾಗೂ ಮಾರಕ ಆಯುಧಗಳು  ವಗೈರೆ ವಶ.
        ಖಚಿತ ಮಾಹಿತಿ ಆಧಾರದ ಅನ್ವಯ ಈ ದಿವಸ ಬೆಳಿಗಿನ ಜಾವ ಸಣ್ಣೂರ ಕ್ರಾಸದಿಂದ ಶಹಾಬಾದಗೆ ಹೋಗುವ ರೋಡಿನ ಬಳಿ ದಾಳಿ ಮಾಡಿದ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು 7 ಜನ ರಸ್ತೆ ದರೋಡೆಕೊರರನ್ನು ಹಾಗೂ ಸರಗಳ್ಳರನ್ನು ಬಂದಿಸಿ, ಸದರಿಯವರಿಂದ ರಸ್ತೆ ದರೋಡೆ ಮತ್ತು ಸರಗಳ್ಳತನ ಕಾಲಕ್ಕೆ ದೊಚಲ್ಪಟ್ಟ ಬಂಗಾರದ ಆಭರಣಗಳು, ನಗದು ಹಣ, ಮಹಿಂದ್ರಾ ಜೈಲೊ ಟರ್ಬೋ ಕಾರ, ಮಾರಕ ಆಯುಧಗಳು ಸರಗಳ್ಳತನ ಮಾಡಲು ಬಳಸಿದ ಮೋಟಾರ ಸೈಕಲಗಳು ವಗೈರೆ ಸುಮಾರು 17  ಲಕ್ಷ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದು ತನಿಖೆ ಮುಂದುವರೆದಿರುತ್ತದೆ. ಕಳೆದ 2-3 ತಿಂಗಳಿಂದ  ಗುಲಬರ್ಗಾ ನಗರದಲ್ಲಿ ನಡೆಯುತ್ತಿದ್ದ  ಸರಗಳ್ಳತನ ಪ್ರಕರಣಗಳು ಮತ್ತು  ಕೆರೂರ ತಾಂಡಾದ ಹತ್ತಿರ ಗುಲಬರ್ಗಾ ಉದ್ಯಮಿ ಗಗನ ಗಿಲ್ಡಾ ಮತ್ತು ಅವರ ಕುಟುಂಬದವರು ಪ್ರಯಾಣಿಸುತ್ತಿದ್ದ ಕಾರನ್ನು ತಡೆದು ದರೋಡೆ ಮಾಡಿದ್ದ ಪ್ರಕರಣದ ಪತ್ತೆ ಕುರಿತು ಮಾನ್ಯ ಮಹಮ್ಮದ ವಜೀರ ಅಹ್ಮದ ಐಜಿಪಿ ಸಾಹೇಬರು ಈಶಾನ್ಯ ವಲಯ ಗುಲಬರ್ಗಾ,  ಮಾನ್ಯ ಪ್ರವೀಣ ಮಧುಕರ ಪವಾರ  ಎಸ್.ಪಿ ಗುಲಬರ್ಗಾ, ಮಾನ್ಯ ಕಾಶಿನಾಥ ತಳಕೇರಿ ಹೆಚ್ಚುವರಿ ಎಸ್.ಪಿ ಗುಲಬರ್ಗಾರವರು  ಶ್ರೀ.ಭೂಷನ ಬೊರಸೆ  ಎ.ಎಸ್.ಪಿ ಎ ಉಪ ವಿಭಾಗ ಗುಲಬರ್ಗಾ ರವರ ನೇತ್ರತ್ವದಲ್ಲಿ ಶ್ರೀ. ಶರಣಬಸವೇಶ್ವರ ಪಿಐ ಬ್ರಹ್ಮಪೂರ, ಶ್ರೀ. ಜೆ.ಹೆಚ್ ಇನಾಮದಾರ ಪಿಐ ಸ್ಟೇಷನ ಬಜಾರ, ಶ್ರೀ. ಟಿ.ಹೆಚ್ ಕರಿಕಲ್ ಪಿಐ ಅಶೋಕ ನಗರ ಪೊಲೀಸ ಠಾಣೆ  ಹಾಗು ಸಿಬ್ಬಂದಿಯವರಾದ ಮಾರುತಿ ಎ.ಎಸ್.ಐ, ಭೀಮಾ ನಾಯ್ಕ, ಗುರುನಾಥ, ಮತ್ತು ಇನ್ನೊಂದು ತಂಡದಲ್ಲಿ  ಶ್ರೀ. ಬಿ.ಪಿ ಚಂದ್ರಶೇಖರ ಸಿಪಿಐ ಎಂ.ಬಿ ನಗರ  ರವರ ನೇತ್ರತ್ವದಲ್ಲಿ ಶ್ರೀಮತಿ ವಿಜಯಲಕ್ಷ್ಮಿ ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ  ಪಂಡಿತ ಸಗರ ಪಿ.ಎಸ್.ಐ  ವಿಶ್ವವಿದ್ಯಾಲಯ ಪೊಲೀಸ ಠಾಣೆ, ಸಂಜಿವಕುಮಾರ  ಪಿಎಸ್ಐ ಎಂ.ಬಿ ನಗರ ಪೊಲೀಸ ಠಾಣೆ,  ರಾಜಶೇಖರ ಹಳಿಗೊಧಿ ಪಿ.ಎಸ್.ಐ ಸೇಡಂ, ಬಸವರಾಜ ತೇಲಿ ಪಿ.ಎಸ್.ಐ ರಾಘವೆಂದ್ರ ನಗರ, ಆನಂದರಾವ ಪಿ.ಎಸ್.ಐ ಗ್ರಾಮೀಣ ಪೊಲೀಸ ಠಾಣೆ ಮತ್ತು ಸಿಬ್ಬಂಧಿಯವರಾದ ಶಿವಪುತ್ರ ಹೆಚ್.ಸಿ, ಪ್ರಭಾಕರ ಪಿಸಿ, ವೇದರತ್ನಂ ಪಿಸಿ,ಚಂದ್ರಕಾಂತ ಪಿಸಿ, ಅಶೋಕ ಪಿಸಿ, ಅಶೋಕ ಪಿಸಿ,ಅಣ್ಣಪ್ಪ ಪಿಸಿ ಅರ್ಜುನ ಎಪಿಸಿ   ಹೀಗೆ 2 ತಂಡಗಳನ್ನಾಗಿ ರಚನೆ ಮಾಡಿದ್ದು, ಸತತವಾಗಿ ಎರಡು ತಂಡದ ಅಧಿಕಾರಿ ಮತ್ತು ಸಿಬ್ಬಂಧಿಯವರು  ಕಳೆದ 15 ದಿವಸಗಳಿಂದ ಸರಗಳ್ಳತನ ಮತ್ತು ದರೊಡೆ ಪ್ರಕರಣವನ್ನು ಭೇಧಿಸಲು ಪ್ರಯತ್ನಿಸಿದ್ದು,  ಇಂದು ದಿನಾಂಕ:30-08-2012 ರಂದು ರಾತ್ರಿ 1-30 ಗಂಟೆ ಸುಮಾರಿಗೆ ಖಚಿತ ಭಾತ್ಮಿ ಮೇರೆಗೆ ಗುಲಬರ್ಗಾ ಹೊರವಲಯದ ಸಣ್ಣೂರ ಕ್ರಾಸ ಹತ್ತಿರ ಮಿಂಚಿನ ದಾಳಿ ನಡೆಯಿಸಿ ದರೊಡೆ ಮಾಡಲು ಮಾರಕ ಆಯುಧಗಳೊಂದಿಗೆ ಸಿದ್ದತೆಯಲ್ಲಿ ಹೊಂಚು ಹಾಕುತ್ತಿದ್ದ 7 ಜನ ಕುಖ್ಯಾತ ದರೊಡೆ, ಸುಲಿಗೆಕೊರರಾದ ಧನರಾಜ @ ಚಿನ್ಯಾ ತಂದೆ ಮೈಲಾರಿ ಶೇಳ್ಳಗಿ ಸಾ : ಓಂ ನಗರ ಗುಲಬರ್ಗಾ, ರಾಜಾ @ ಬಕ್ಕಾರಾಜಾ ತಂದೆ ಶರಣಪ್ಪ ತಾಡತೆಗನೂರ ಸಾ : ಕೆ.ಹೆಚ್.ಬಿ ಕಾಲೋನಿ ಗಣೇಶ ನಗರ ಹಳೆ ಜೇವರ್ಗಿ, ರಸ್ತೆ ಗುಲಬರ್ಗಾ,ಸೋಮು @ ಸೋಮಶೇಖರ ತಂದೆ ಅಜರ್ುನ ದೊಡ್ಡಮನಿ ಸಾ : ಕೊಟನೂರ (ಡಿ) ಗುಲಬರ್ಗಾ, ಅರವಿಂದ ತಂದೆ ಶಾಂತಪ್ಪ ಕೂಡಿ  ಸಾ : ಆಶ್ರಯ ಕಾಲೋನಿ ಆರ್.ಎನ್ ಶಾಲೆ ಹತ್ತಿರ ರಿಂಗ ರೋಡ ಗುಲಬರ್ಗಾ,ಬಸ್ಸು @ ಬಸವರಾಜ ತಂದೆ ನಾಗಯ್ಯ ಸೇಡಂ ಸಾ : ಕೆ.ಇ.ಬಿ ಕಾಲೋನಿ ಸೇಡಂ, ಹಣಮಂತ ತಂದೆ ರಾಮುಲು ಮೆಕಾನಿಕ್ ಸಾ : ದೊಡ್ಡ ಅಗಸಿ ಸೇಡಂ, ವಿಜಯ ತಂದೆ ರಾಮರಾವ ತರಗೆ  ಸಾ : ಕೆ.ಇ.ಬಿ ಕಾಲೋನಿ ಸೇಡಂ ರವರನ್ನು ದಾಳಿ ಮಾಡಿ ಹಿಡಿದು, ದರೊಡೆ ಮಾಡಲು ಉಪಯೋಗಿಸಿದ ಮಹಿಂದ್ರ ಝೈಲೊ ಕಾರ ನಂ. ಕೆಎ 32 ಎಮ್-8643, ನಾಲ್ಕು ತಲವಾರಗಳು,ಎರಡು ಚಾಕುಗಳು, ಕಪ್ಪು ಬಟ್ಟೆಯ ಮುಖವಾಡಗಳು , ಕಬ್ಬಿಣದ ರಾಡ, ಸೈಕಲ ಚೈನ,ಬಡಿಗೆ ಮತ್ತು ಹಗ್ಗ ಖಾರ ಪುಡಿ ಪಾಕೇಟಗಳು, ನಗದು ಹಣ ಮಹಾರಾಷ್ಟ್ರ & ಆಂದ್ರ ಪ್ರದೇಶ ರಾಜ್ಯದ ಪಾಸಿಂಗ ಇರುವ ಮೂರು ಜೊತೆ ನಂಬರ ಪ್ಲೇಟಿನ ರೇಡಿಯಂ ಸ್ಟಿಕರಗಳು ಹೀಗೆ ಬೆಲೆಬಾಳುವ ವಾಹನ ಮತ್ತು ವಸ್ತುಗಳನ್ನು ಜಪ್ತಿ ಮಾಡಿಕೊಂಡು ವಿಶ್ವವಿದ್ಯಾಲಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸದರಿ ಕಾರ್ಯಚರಣೆಯಲ್ಲಿ ಪ್ರೊಬೆಷನರ ಪಿ.ಎಸ್.ಐ ರವರಾದ  ಆನಂದ ಡೊಣಿ, ಶ್ರೀದೇವಿ ಬಿರಾದಾರ, ಮಂಜುಳಾ, ಮಲ್ಲಿಕಾರ್ಜುನ, ಸಾಗರ, ಉಮೇಶ ಬಾಬು, ಲಕ್ಕಪ್ಪ ಅಗ್ನಿ, ಗಣೇಶ, ಹುಸೇನ ಭಾಷಾ, ವಸಂತಕುಮಾರ, ನಾಗನಗೌಡ, ಮುಗ್ಗಳ್ಳಿ ಶಿವಕುಮಾರ ಮತ್ತು  ಪ್ರದೀಪ ವಗೈರರು ಭಾಗಿಯಾಗಿದ್ದರು.   ಸದರಿ ಆರೋಪಿತರು ತನಿಖೆ ಕಾಲಕ್ಕೆ ನೀಲೂರ ಗ್ರಾಮದ ಕೃಷ್ಣ ಇವರ ಕೊಲೆ ಮಾಡಲು ಸುಫಾರಿ ಪಡೆದ ಬಗ್ಗೆ ತಿಳಿಸಿರುತ್ತಾರೆ. ಹಾಗೂ ವಿಚಾರಣೆ ಕಾಲಕ್ಕೆ ಈ ಆರೋಪಿತರು ಸೇಡಂ ನಗರದ ಉದ್ಯಮಿ ಒಬ್ಬರನ್ನು ಅಪಹರಿಸಲು 10 ಲಕ್ಷ ರೂಪಾಯಿ ಸುಫಾರಿ ಬಗ್ಗೆ ವ್ಯವಹಾರ ಕುದರಿಸಿ ಈ ಬಗ್ಗೆ ಮುಂಗಡ ಹಣ ಪಡೆದು ಅಪಹರಿಸಲು ಪ್ರಯತ್ನಿಸಿದ ಬಗ್ಗೆ ತನಿಖೆ ಕಾಲಕ್ಕೆ ತಿಳಿದು ಬಂದಿರುತ್ತದೆ.  ಸೆರೆ ಸಿಕ್ಕ ದರೊಡೆಕೊರರನ್ನು ತಿವ್ರ ವಿಚಾರಣೆಗೆ ಒಳಪಡಿಸಿದಾಗ, ಗುಲಬರ್ಗಾ ನಗರದ ಉದ್ಯಮಿ ಗಗನ ಗಿಲ್ಡಾ ರವರ ಕುಟುಂಬದ ಸದಸ್ಯರು ಕಾರಿನಲ್ಲಿ ಹೈದ್ರಾಬಾದದಿಂದ ಪ್ರಯಾಣ ಮಾಡುತ್ತಿರುವ ವೇಳೆ ಕೆರೂರ ಬಳಿ ತಡೆದು ಮಾರಕ ಆಯುಧಗಳಿಂದ ಹೆದರಿಸಿ ಬಂಗಾರದ ಆಭರಣಗಳು ದೊಚಿದ್ದು ಅಲ್ಲದೆ ದರೊಡೆ ಕಾಲಕ್ಕೆ ದರೊಡೆಗೆ ಬಳಸಿದ ವಾಹನದ ಸಂಖ್ಯೆಯನ್ನು ಬದಲಾಯಿಸಿದ ಬಗ್ಗೆ ತಿಳಿಸಿರುತ್ತಾರೆ. ಅಲ್ಲದೆ ಸದರಿ ಆರೊಪಿತರು ತಮ್ಮ ಉಳಿದ ಸಹಚರರಾದ ಜೈಭೀಮ, ಉಮೇಶ, ಶ್ರೀಕಾಂತ @ ಗುಡ್ಯಾ ರವರೊಂದಿಗೆ ಸೇರಿ ಗುಲಬರ್ಗಾ ನಗರದ ಜಯ ನಗರ, ಸ್ವಸ್ತಿಕ ನಗರ, ರಾಜಾಪುರ ಹೌಸಿಂಗ್ ಬೊರ್ಡ ಕಾಲೋನಿ, ಗೊದುತಾಯಿ ಕಾಲೋನಿ , ಕೊರ್ಟ ರೋಡ್ , ಎಮ್.ಆರ್.ಎಮ್.ಸಿ ಕಾಲೇಜು, ವಸಂತ ನಗರ ವಗೈರೆ ಕಡೆಮೊಟಾರ ಸೈಕಲ ಬಳಸಿ ಸರಗಳ್ಳತನ ಮಾಡಿದ ಬಗ್ಗೆ ತನಿಖೆ ಕಾಲಕ್ಕೆ ತಿಳಿಸಿದ್ದು ಈ ಬಗ್ಗೆ ಗುಲಬರ್ಗಾ ನಗರದ ಬ್ರಹ್ಮಪುರ,  ಸ್ಟೆಷನ ಬಜಾರ, ಅಶೋಕ ನಗರ, ಎಮ್.ಬಿ ನಗರ ಪೊಲೀಸ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ. ಆರೊಪಿತರ ತಾಬಾದಿಂದ 8.5 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಬರಣಗಳು , ಸರಗಳ್ಳತನ ಮಾಡಲು ಬಳಸಿದ 2 ಮೋಟಾರ ಸೈಕಲಗಳು, ದರೊಡೆ ಮಾಡಲು ಬಳಸಿದ ಮಹೇಂದ್ರ ಝೈಲೊ ವಾಹನ ಹೀಗೆ ಒಟ್ಟು 17 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಮತ್ತು ಮಾರಕ ಆಯುಧಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಈ ತಂಡದವರು 8 ಸರಗಳ್ಳತನ , ಮೂರು ದರೋಡೆ, ಒಂದು ಅಪಹರಣದ ಯತ್ನ ಹಾಗೂ ಇನ್ನೊಂದು ಕೊಲೆ ಯತ್ನದ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿರುತ್ತದೆ. ಗುಲಬರ್ಗಾ ನಗರದ ಇನ್ನೂ ಕೆಲವು ಸರಗಳ್ಳತನ ಮಾಡುವವರ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಸರಗಳ್ಳರ ಪತ್ತೆಗೆ ಜಾಲ ಬೀಸಲಾಗಿದೆ. ಈ ವೃತ್ತಿ ಪರ ಅಪರಾದಿಗಳ ತಂಡವನ್ನು ಪತ್ತೆ ಹಚ್ಚಿದ ಅಧಿಕಾರಿ ಮತ್ತು ಸಿಬ್ಬಂದಿ ಜನರ ಕಾರ್ಯವನ್ನು ಮಾನ್ಯ ಎಸ್.ಪಿ ಸಾಹೇಬರು ಶ್ಲಾಘಿಸಿರುತ್ತಾರೆ. 

GULBARGA DISTRICT REPORTED CRIMES


ಮುಂಜಾಗ್ರತೆ ಕ್ರಮ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ದಿನಾಂಕ: 29/8/2012 ರಂದು  ಸಾಯಂಕಾಲ 5:45 ಗಂಟೆಯ ಸುಮಾರಿಗೆ ಹುಮನಾಬಾದ ರಿಂಗ ರೋಡದಲ್ಲಿ ನಮ್ಮನ್ನು ಸಮವಸ್ತ್ರದಲ್ಲಿ ನೋಡಿ ಮುಖ ಮರೆಮಾಚಿಕೊಂಡು ಬೇಕರಿ ಪಕ್ಕದಲ್ಲಿ ಓಡಿ ಹೋಗುತ್ತಿರುವಾಗ ಅವನ ಮೇಲೆ ಸಂಶಯ ಬಂದು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ ಸರಿಯಾದ ಉತ್ತರ ನೀಡಿರುವದಿಲ್ಲ. ಇವನನ್ನು ಹೀಗೆ ಬಿಟ್ಟಲ್ಲಿ ಠಾಣಾ ವ್ಯಾಪ್ತಿಯಲ್ಲಿ ಹಾಗೂ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸ್ವತ್ತಿನ ಗುನ್ನೆ ಮಾಡುವ ಸಾದ್ಯತೆ ಇರುವದರಿಂದ ಠಾಣೆ ಗುನ್ನೆ ನಂ: 276/2012 ಕಲಂ 109 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಅರ್. ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಅಬ್ದುಲ ಮಾಹಿಸ ತಂದೆ ಅಬ್ದುಲ ಲದೀಫ ಬೆಲೀಫ  ರವರು ನಾನು ಮತ್ತು ಮೃತ  ಅಬ್ದುಲ ರಹಿಸ್   ಇಬ್ಬರು ಅಣ್ಣ ತಮ್ಮಿಂದಿರು ಇದ್ದು, ಇಬ್ಬರು ಮದುವೆಯಾಗಿ ಹೆಂಡತಿ ಮಕ್ಕಳೊಂದಿಗೆ ಬೇರೆ ಬೇರೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದು, ದಿನಾಂಕ  28-08-2012 ಮಧ್ಯಾಹ್ನ 3.45 ಗಂಟೆ ಸುಮಾರಿಗೆ ನನ್ನ ಮೃತ ಅಣ್ಣ  ಅಬ್ದುಲ ರಹಿಸ ಈತನ  ಹೆಂಡತಿ ಆದ ಆರಿಫಾ ಇವಳು ನನ್ನ ಮೊಬಾಯಿಲ್ ಗೆ ಫೋನ್ ತಿಳಿಸಿದ್ದೇನೆಂದರೆ, ನನ್ನ ಗಂಡ ಅಬ್ದುಲ ರಹಿಸ ಈತನು ನಾವು ಇದ್ದ ಬಾಡಿಗೆ ಮನೆಯಲ್ಲಿ ಖಬ್ಬಿಣದ ಪೈಪಿಗೆ ಬಾಗಿಲು  ಪರದಾದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದರಿಂದ ನಾನು ಹೋಗಿ ನೋಡಲಾಗಿ ನನ್ನ ಅಣ್ಣನು ಮೃತಪಟ್ಟಿದ್ದು, ಅತ್ತಿಗೆ ಹಾಗೂ ಸದರಿ ಓಣಿಯ ಮೀರ ಅಲಿ ತಂದೆ ಸೈಯದ್  ಹುಸೇನ್  ಮತ್ತು ಮಮತಾಜ ಬೇಗಂ ಗಂಡ ಅಬ್ದುಲ ಹನೀಫ ಇವರೆಲ್ಲರೂ ಸೇರಿ ಕೆಳಗೆ ಇಳಿಸಿ ಅಂಗಾತಾಗಿ ಹಾಕಿರುತ್ತಾರೆ. ನನ್ನ ಮೃತ ಅಣ್ಣ ಅಬ್ದುಲ ರಹಿಸ್ ಆತನ ಬಲಕುತ್ತಿಗೆಯ ಮೇಲೆ ಸ್ವಲ್ಪ ಗಾಯ ಕಂಡು ಬಂದಿರುತ್ತದೆ. ಕಾರಣ ತನ್ನ ಅಣ್ಣನ ಸಾವಿನಲ್ಲಿ ಸಂಶಯ ಇದ್ದು ಮುಂದಿನ ಕ್ರಮ ಜರುಗಿಸಿರಿ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ 12/12 ಕಲಂ 174 (ಸಿ) ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. .

29 August 2012

GULBARGA DISTRICT REPORTED CRIME


ಮನುಷ್ಯ ಕಾಣೆಯಾದ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ; ಶ್ರೀ ನಾಗೇಂದ್ರ ತಂದೆ ಯಂಕಪ್ಪ ರಾಸೂರ ಸಾ|| ಮ.ನಂ.204 ಗೋದುತಾಯಿ ನಗರ ಗುಲಬರ್ಗಾ ರವರು ನನ್ನ ಅಣ್ಣನಾದ ದೇವೆಂದ್ರಪ್ಪಾ ತಂದೆ ಯಂಕಪ್ಪಾ ರಾಸೂರ ಇತನು ನಮ್ಮ ಜೊತೆಯಲ್ಲಿ ನಮ್ಮ ಮನೆಯಲ್ಲಿಯೇ  ಇರುತ್ತಿದ್ದರು.  ದಿನಾಂಕ :17/07/2012 ರಂದು ಸಾಯಂಕಾಲ 6-00 ಗಂಟೆಗೆ ಮನೆಯಿಂದ ಹೋರಗೆ ಹೋದವರು ಮರಳಿ ಮನೆಗೆ ಬಂದಿರುವುದಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಹುಡುಕಾಡಲಾಗಿ ಸಿಕ್ಕಿರುವದಿಲ್ಲ.ಕಾಣೆಯಾದ ನನ್ನ ಅಣ್ಣನ ಚಹರೆ ಪಟ್ಟಿ  ಎತ್ತರ 5 2 ,ವಯಸ್ಸು-65, ತೆಳ್ಳನೆಯ ಮೈಕಟ್ಟು, ಸಾದಕಪ್ಪು, ಎಡಕಿವಿಯ ಕೆಳಗಡೆ ಕಪ್ಪು ಗುಳ್ಳಿ, ಬಿಳಿ ಕೂದಲು, ಬಿಳಿ ಬಣ್ಣದ ಶರ್ಟ, ಬಿಳಿ ಬಣ್ಣದ ದೋತಿ ಧರಿಸಿರುತ್ತಾರೆ.  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.76/2012 ಕಲಂ ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.ಸದರಿ ಠಾಣಾಧಿಕಾರಿಗಳು ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ದೂರವಾಣಿ ಸಂ: 08472-263617, ಮೊಬಾಯಿಲ್ ಸಂ: 9480803545, ಕಂಟ್ರೋಲ್ ರೂಮ ನಂ: 08472-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.

28 August 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:ಪ್ರಕಾಶ ತಂದೆ ಸಂಗಪ್ಪ ಬೆಲ್ಲದ   ಸಾ|| ತಾಂಬಾ ತಾ|| ಇಂಡಿ ಜಿ|| ಬಿಜಾಪೂರ ಹಾ|| || ಚನ್ನಪ್ಪ ಬೆಲ್ಲದ ಇವರ ಹೊಲದ ಮೇಟಗಿಯಲ್ಲಿ ದೇಸಾಯಿ ಕಲ್ಲೂರ ರವರು ನಾನು ತಾಯಿಯಾದ ನೀಲಮ್ಮ ರವರು ದಿನಾಂಕ 27.08.12 ರಂದು ಅಫಜಲಪೂರಕ್ಕೆ ಬಂದು ಸಂತೆ ಮಾಡಿಕೊಂಡು ಮರಳಿ ಮೆಟಗಿಗೆ ಹೋಗಲು ಸಾಯಂಕಾಲ 4-30 ಗಂ     ಟೆಗೆ ಚನ್ನಪ್ಪ ಇವರ ಹೊಲದ ಹತ್ತಿರ ರೋಡಿನ ಮೇಲೆ  ನಡೆದುಕೊಂಡು ಹೋಗುತ್ತಿದ್ದಾಗ ದೇಸಾಯಿ ಕಲ್ಲೂರ ಕಡೆಯಿಂದ ಒಂದು ಕಮಾಂಡರ ಜೀಪ ನಂ ಕೆ ಎ-32 ಎಮ್ ಎ-1000 ನೇದ್ದರ ಚಾಲಕ ಅತೀವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನ್ನ ತಾಯಿ ನೀಲಮ್ಮಳಿಗೆ ಡಿಕ್ಕಿ ಪಡೆಸಿದ್ದು  ಅಫಘಾತದಲ್ಲಿ ನನ್ನ ತಾಯಿಗೆ ಎಡಗಾಲುಎಡಗೈಎಡಗಲ್ಲಕ್ಕೆ ಭಾರಿ ರಕ್ತಗಾಯವಾಗಿದ್ದು ಡಿಕ್ಕಿ ಪಡಿಸಿದ ಜೀಪಿನಲ್ಲಿಯೇ ಉಪಚಾರ ಕುರಿತು ನನ್ನ ತಾಯಿಗೆ ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ತಂದು ಸೇರಿಕೆ ಮಾಡಿರುತ್ತೇನೆ. ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ಎಂಬುಲೇನ್ಸನಲ್ಲಿ ಕರೆದುಕೊಂಡು ಹೋಗಿರುತ್ತೇನೆ. ಉಪಚಾರ ಫಲಕಾರಿಯಾಗದೆ ರಾತ್ರಿ  9-10 ಗಂಟೆಗೆ ಮೃತಪಟ್ಟಿರುತ್ತಾಳೆ.   ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 145/12 ಕಲಂ 279 304 (ಎ) ಐ ಪಿ ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ .
ಅಪಹರಣ  ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ : ಜೀನತ ಬೇಗಂ ಗಂಡ ಸೈಯದ ಸಲೀಂ ವ:38 ವರ್ಷ ಸಾ: ಗುಲಷನ್-ಏ-ಅರಾಫತ ಕಾಲನಿ ಪ್ರಿನ್ಸ್ ಫಂಕ್ಷನ ಹಾಲ್ ಹಾಗರಗಾ ರೋಡ ಗುಲಬರ್ಗಾ ರವರು ನನ್ನ  ಗಂಡ ಖಾಸಗಿ ವಾಹನ ಚಲಾಯಿಸುತ್ತಿದ್ದು, ನನಗೆ  ಸೈದಾ ನೆಹಾ ಎಂಬ ಅಂದಾಜು 15 ವರ್ಷ ಮಗಳಿದ್ದು, . ನನ್ನ ಮಗಳಾದ ಸೈದಾ ನೆಹಾ ಇವಳು 8 ನೇ ತರಗತಿಯಲ್ಲಿ ಜಾಸ್ಮೀನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುತ್ತಾಳೆ .ನನ್ನ ತಾಯಿಯಾದ ಅಮೀರ ಬೀ ಇವರ ಮನೆಯು ನಮ್ಮ ಓಣಿಯಲ್ಲಿಯೇ ಇದ್ದು, ನನ್ನ ತಾಯಿಯ ಮನೆಗೆ ನನ್ನ ಮಗಳು ಹೋಗಿ ಬರುವುದು ಮಾಡುತ್ತಿದಳು. ದಿನಾಂಕ 25.08.2012 ರಂದು ಎಂದಿನಂತೆ ನನ್ನ ಗಂಡ ಕೆಲಸಕ್ಕೆ ಮನೆಯಿಂದ ಬೆಳಿಗ್ಗೆ ಹೋದನು. ಅಂದಾಜು 3-00 ಪಿ.ಎಮ್. ಸುಮಾರಿಗೆ ನನ್ನ ಮಗಳಾದ ಸೈದಾ ನೆಹಾ ಇವಳು ಶಾಲೆಯ ಉಡುಪು ಹೋಲಿದುಕೊಂಡು ಬರುತ್ತೇನೆ ಎಂದು ನನ್ನ ತಾಯಿಯ ಮನೆಗೆ ಹೋದಳು. ಸಾಯಂಕಾಲ 7-00 ಗಂಟೆಯಾದರು ನನ್ನ ಮಗಳು ಮರಳಿ ಮನೆಗೆ ಬರಲ್ಲಿಲ್ಲಾ. ನಾನು ನನ್ನ ತಾಯಿಯ ಮನೆಗೆ ಹೋಗಿ ವಿಚಾರಿಸಲು ಸೈದಾ ನೆಹಾ ಇವಳು ಬಂದಿರುವುದಿಲ್ಲಾ  ಈ ಬಗ್ಗೆ ನನ್ನ ಸಂಬಂಧಿಕರಿರುವ ಕೆ.ಬಿ.ಎನ್.ದರ್ಗಾ, ಖಾಜಾ ಕಾಲನಿ, ನೂರಾನಿ ಮೋಹಲ್ಲಾ, ಗುಲಬರ್ಗಾ ಬಡಾವಣೆಗಳಲ್ಲಿ ನಾನು ನನ್ನ ಗಂಡ ಮತ್ತು ಸಂಬಂಧಿಕರು ತಿರುಗಾಡಿ ಹುಡುಕಾಡಿದರು, ಸಿಕ್ಕಿರುವುದಿಲ್ಲಾ.   ನನ್ನ ಮಗಳ ಬಗ್ಗೆ ವಿಚಾರಿಸಲು ಸಿಕ್ಕಿರುವದಿಲ್ಲ.  ನನ್ನ ಮಗಳ ಚಹರೆ ಪಟ್ಟಿ ಈ ಕೆಳಗಿನಂತಿರುತ್ತದೆ. ಹೆಸರು- ಸೈದಾ ನೆಹಾ ವಯಸ್ಸು- 15 ವರ್ಷ  ಮೈಬಣ್ಣ- ಸದಾಗಪ್ಪು , ಎತ್ತರ-  45 ಜಾತಿ: ಮುಸ್ಲೀಂ ಧರಿಸಿದ ಬಟ್ಟೆ- ಬಿಳಿ ನೀಲಿ ಬಣ್ಣದ ಶೆಟ್ಟ ಸೆಲವಾರ ಹಾಕಿಕೊಂಡು ಮೇಲೆ ಬುರ್ಖಾ ಧರಿಸಿರುತ್ತಾಳೆ. ಗುರುತು- ಗದ್ದದ ಮೇಲೆ ಕಪ್ಪು ಚಿಕ್ಕ ಮಚ್ಚೆ ಇದೆ ವಿದ್ಯಾಭ್ಯಾಸ: 8 ನೇ ತರಗತಿ. ಕಾರಣ ಈ ಮೇಲಿನ ಚಹರೆ ಪಟ್ಟಿಯುಳ್ಳ ನನ್ನ ಮಗಳಾದ ಸೈದಾ ನೇಹಾ ಇವಳಿಗೆ ಯಾರೊ ಅಪರಿಚಿತರು ಅಪಹರಿಸಿಕೊಂಡು ಹೋಗಿರಬಹುದು ಅಂತಾ  ದೂರು ಸಲ್ಲಿಸಿದ ಸಾರಂಶದ   ಮೇಲಿಂದ ಠಾಣೆ ಗುನ್ನೆ ನಂ. 190/2012 ಕಲಂ 366(ಎ) ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತಾರೆ. 

GULBARGA DISTRICT


ಯು.ಡಿ.ಅರ್. ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ಶ್ರೀಮತಿ ಸೈಯ್ಯದಾಭಾನು ಗಂಡ ಮಹ್ಮದ ರಿಯಾಜ ಶೇಕ ಸಾ|| ಎಂ.ಕೆ.ನಗರ ಮಾಲಗತ್ತಿ ಕ್ರಾಸ ಇಂಡಿಯನ ಇಸ್ಲಾಮಿಕ ಶಾಲೆ ಹತ್ತಿರ ಗುಲಬರ್ಗಾರವರು ನನ್ನ ಗಂಡನಾದ ಮಹಮದ ರಿಯಾಜ ಶೇಖ ಇತನು ದಿನಾಂಕ.23-8-2012 ರಂದು ಸಂಜೆ 5-30 ಪಿ.ಎಂ.ಕ್ಕೆ ಸುಮಾರಿಗೆ ನಾನು ಅವರ ತಾಯಿಗೆ ಮೆಹಂದಿ ಹಚ್ಚುತ್ತಿದ್ದನ್ನು ನೋಡಿ ತಾನೇ ಚಹಾ ಮಾಡಲು ಸ್ಟೋ ಹವಾ ಹಾಕಲು ಸೀಮೆ ಎಣ್ಣೆ ಬರದ ಕಾರಣ  ಮತ್ತೆ ಜೋರಾಗಿ ಹವಾ ಹಾಕಿದರೂ ಸೀಮೆ ಎಣ್ಣೆ ಬರದ ಕಾರಣ ಸ್ಟೋ ಪಿನ ಮಾಡಲು  ನವಜಲದಿಂದ ಸೀಮೆಎಣ್ಣೆ ಚಿಮ್ಮಿ ತಾನು ಧರಿಸಿದ ಷರ್ಟು ಮೇಲೆ ಬಿದ್ದಿದ್ದು ಇದನ್ನು ಗಮನಿಸದೇ ಬೆಂಕಿ ಕಡ್ಡಿ ಕೊರೆದು ಸ್ಟೋಗೆ ಹಚ್ಚಲು ಒಮ್ಮಿಂದ ಒಮ್ಮೇಲೆ  ಊರಿ ಹತ್ತಿ ಧರಿಸಿದ ಷರ್ಟಿಗೆ ಬೆಂಕಿ ಹತ್ತಿದ್ದು ನೋಡು ನೋಡುವಷ್ಟರಲ್ಲಿ ಎದೆ, ಹಣೆ, ಹೊಟ್ಟೆಗೆ ಹತ್ತಿರುತ್ತದೆ. ಉಪಚಾರ ಹೊಂದುತ್ತಾ ದಿನಾಂಕ: 27-08-2012 ರಂದು ಮಧ್ಯಾಹ್ನ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯು.ಡಿ.ಅರ್. ನಂ: 27/2012 ಕಲಂ 174 ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.  

26 August 2012

GULBARGA DISTRICT REPORTED CRIMES


ಹುಡಗಿ ಕಾಣೆಯಾದ ಪ್ರಕರಣ:
ಚಿತ್ತಾಪೂರ ಪೊಲೀಸ್ ಠಾಣೆ: ಶ್ರೀ ದೇವರಾಜ ತಂದೆ ತಿಮ್ಮೇಗೌಡ ಸಾ|| ಹಾಸನ ಜಿಲ್ಲಾ ಹಾವ|| ವೆಂಟಕೆಶ್ವರ ಕಾಲನಿ ಚಿತ್ತಾಪುರ ರವರು ನನ್ನ ಮಗಳಾದ ರಕ್ಷಿತಾ ವಯ-18 ಇವಳು ಚಿತ್ತಾಪುರದ  ಶಿವಲಿಂಗಪ್ಪಗೌಡ ಪಾಟೀಲ ನರಿಬೋಳಿ ಇವರ ಪ್ಯಾರಾ ಮೆಡಿಕಲ್ ಕಾಲೇಜದಲ್ಲಿ ಓದುತ್ತಿದ್ದಳು. ದಿನಾಲು ಮುಂಜಾನೆ 8-30 ಗಂಟೆಗೆ ಕಾಲೇಜಿಗೆ ಹೋಗಿ ಮಧ್ಯಾಹ್ನ 12-30 ಗಂಟೆಗೆ ಮನೆಗೆ ಬರುತ್ತಿದ್ದಳು. ನಿನ್ನೆ ದಿನಾಂಕ 24/8/2012 ರಂದು ಪ್ರತಿ ದಿವಸದಂತೆ ಮುಂಜಾನೆ 8-30 ಗಂಟೆಗೆ ಕಾಲೇಜಿಗೆ ಹೋಗಿದ್ದು, ಅವಳು ಪುನಃ ಮನೆಗೆ ಬರಲಿಲ್ಲಾ. ಅವಳ ಗೆಳತಿಯರ ಮನೆಗೆ ಹೋಗಿರಬಹುದು ಅಂತ ಸುಮ್ಮನಾದೆವು. ಮತ್ತು ನಮ್ಮ ಸಂಬಂದಿಕರ ಊರುಗಳಿಗೆ ಫೋನ ಮಾಡಿ ಅವಳ ಬಗ್ಗೆ ವಿಚಾರಿಸಲು ಅವರ ಹತ್ತಿರ ಬಂದಿರುವದಿಲ್ಲಾ ಅಂತ ಗೊತ್ತಾಗಿರುತ್ತದೆ. ಕಾಣೆಯಾದ ಹುಡಗಿಯ ಹೆಸರು: ರಕ್ಷಿತಾ, ವಯಸ್ಸು 18, ಎತ್ತರ: 5 ಪೀಟ , ದುಂಡು ಮುಖ, ಕೆಂಪು ಬಣ್ಣ , ಕಪ್ಪು ಕೂದಲು, ಕನ್ನಡ, ಹಿಂದಿ, ಇಂಗ್ಲೀಷ ಭಾಷೆ ಬಲ್ಲವಳಾಗಿರುತ್ತಾಳೆ. ಅವಳು ಧರಿಸಿರುವ ಬಟ್ಟೆ: ಕರಿ ಬಣ್ಣದ ಚೂಡಿದಾರ ಇರುತ್ತದೆ. ಅಂತ ಅವರ ತಂದೆಯವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 79/12 ಕಲಂ ಹುಡುಗಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಅನಿಲಕುಮಾರ ತಂದೆ ಬಾಬು ನಾಗನಳ್ಳಿ ಸಾ:ಹೆಚ್‌.ಎಮ್‌.ಪಿ ಕಾಲೋನಿ ಶಹಾಬಾದ ರವರು ನಾನು ದಿನಾಂಕ:24/08/2012 ರಂದು ರಾತ್ರಿ 10.00 ಗಂಟೆ ಸುಮಾರಿಗೆ ದಿವ್ಯಾ ಚೌಕ ರಸ್ತೆಯಿಂದ  ಮನೆಗೆ ಹೋಗುತ್ತಿರುವಾಗ ದಿದಾರಸಿಂಗ ಇತನು ನಿಲ್ಲಿಸಿ ತುಮ ಕಂಹಾ ಜಾರಹೀಹೆ ಅಂತಾ ಕೇಳಿದ್ದಕ್ಕೆ ನಾನು ಮನೆಗೆ ಹೋಗುತ್ತಿದ್ದೆನೆ ಅಂತಾ ಅಂದಿದ್ದಕ್ಕೆ ಸದರಿಯವನು ವಿನಾಕಾರಣ ಜಗಳ ತಗೆದು ಅವಾಚ್ಯವಾಗಿ ಬೈದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಬಿಡಿಸಲು ಬಂದ ನನ್ನ ತಾಯಿ ಪಾರ್ವತಿ ಇವಳಿಗೂ ಕೂಡಾ ಕೈಯಿಂದ ಹೊಡೆದಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 111/2012 ಕಲಂ: 341,323, 324,354 504 ಸಂ:34 ಐಪಿಸಿ ಮತ್ತು 3[1] [10]  ಎಸ್‌ಸಿ/ಎಸ್‌ಟಿ ಪಿಎ ಆಕ್ಟ್‌ 1989  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಎಸ್‌‌.ಎನ್‌.ಷಹಾ ನಿವೃತ್ತ ಮೇಜರ ಜನರಲ್‌ ಸೀನಿಯರ ವೈಸ ಪ್ರೇಸಿಡೆಂಟ (ಪಿ&ಎ) ಜೆ.ಪಿ ಶಹಾಬಾದ ಸಿಮೆಂಟ ಪ್ರಾಜೇಕ್ಟ್‌ ಪತ್ರ ನಂ.ಜೆಸಿಸಿಎಲ್‌/ಜೆಎಸ್‌ಸಿಪಿ/ಪಿ&ಎ/ಪೊಲೀಸ/2012 ದಿನಾಂಕ:25/08/2012 ನೇದ್ದು ಇಂಗ್ಲೀಷನಲ್ಲಿ ದೂರು ಸಲ್ಲಿಸಿದ್ದೆನೆಂದರೆ, ದಿನಾಂಕ:24/08/2012 ರಂದು ರಾತ್ರಿ 10.30 ಗಂಟೆಗೆ ನಮ್ಮ ಕಾಲೋನಿ ಮನೆ.ನಂ.ಇ-01/10 ರಲ್ಲಿ ವಾಸಿಸುವ ಶ್ರೀ ಅನೀಲ ತಂದೆ ಬಾಬು ಇತನು ಕುಡಿದ ಅಮಲಿನಲ್ಲಿ ಕೆಲವು ಜನರೊಂದಿಗೆ ನಮ್ಮ ಸಿಬ್ಬಂದಿ ರಾಜಬಹಾರ ಪಾಂಡೆ ವಾಸಿಸುವ ಮನೆ.ನಂ.ಸಿ-2/10 ಬಂದು ಬಾಗಿಲ ಒದ್ದು ಮುರಿದು ಒಳಗೆ ಬಂದು ಅವನಿಗೆ ಹೊಡೆದಿದ್ದು ಅಲ್ಲದೆ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಅಂಜಿಸುತ್ತಿರುವಾಗ ಈ ಸುದ್ದಿ ತಿಳಿದು ನಮ್ಮ ಕೆಲವು ಸೆಕ್ಯೂರಿಟಿ ಗಾರ್ಡದವರನ್ನು ಅಲ್ಲಿಗೆ ಕಳುಹಿಸಿ ಕೂಗಡುತ್ತಿರುವ ಆತನ ಮೇಲೆ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 112/2012 ಕಲಂ: 147,323,448,504,506 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

25 August 2012

GULBARGA DISTRICT REPORTED CRIMES


ಹೆಣ್ಣು ಮಗಳು ಕಾಣೆಯಾದ ಪ್ರಕರಣ:
ಮಹಿಳಾ ಪೊಲೀಸ ಠಾಣೆ : ಶ್ರೀ ಅಮಜದ ತಂದೆ ಮಹ್ಮದ ಖಾಸಿಂಸಾಬ ಸಾ||ಖುರೇಷಿ ಮಜೀದ ಹತ್ತಿರ ರೋಜಾ ಗುಲಬರ್ಗಾ ರವರು ನನ್ನ ಹೆಂಡತಿಯಾದ ಮಹೀರುನ್ನಿಸಾ ಇವಳು ದಿನಾಂಕ:22/08/2012 ರಂದು ರಾತ್ರಿ 1-00 ಗಂಟೆಯ ಸುಮಾರಿಗೆ ನಾವೇಲ್ಲರೂ ಮಲಗಿಕೊಂಡಾಗ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋಗಿರುತ್ತಾಳೆ ನಮ್ಮ ಸಂಬಂದಿಕರಲ್ಲಿ ಹಾಗೂ ನಮ್ಮ ಅತ್ತೆ ಮಾವನವರಿಗೆ ಪೋನ ಮಾಡಿ ವಿಷಯ ತಿಳಿಸಿರುತ್ತೆನೆ. ಕಾರಣ ಕಾಣೆಯಾದ ನನ್ನ ಹೆಂಡತಿ ಮಹರುನ್ನಿಸಾ ಇವಳಿಗೆ ಪತ್ತೆ ಮಾಡಿಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:61/2012 ಕಲಂ ಹೆಣ್ಣು ಮಗಳು ಕಾಣೆಯಾದ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ ಶರಣಪ್ಪ ತಂದೆ ಖತಲಪ್ಪ ಕೊಚಿ ಸಾ:ಝಳಕಿ (ಕೆ) ತಾ:ಆಳಂದ  ರವರು ನಾನು ದಿನಾಂಕ:23/08/2012 ರಂದು ಬೆಳ್ಳಿಗ್ಗೆ 9-00  ಗಂಟೆ ಸುಮಾರಿಗೆ ಕುರಿಗಳು ಮೇಯಿಸಲು ನನ್ನ ಕುರಿಗಳನ್ನು ಹೊಡೆದುಕೊಂಡು ಹೋಗಿದ್ದು, ನನ್ನ ಹೆಂಡತಿಯು ಸಹ  ಹೊಲದ ಕೆಲಸಕ್ಕೆ ಹೋಗಿರುತ್ತಾಳೆ. ನಾನು ಕುರಿಗಳು ಮೇಯಿಸಿಕೊಂಡು ಹೊಲದಿಂದ ಸಾಯಂಕಾಲ 6-00 ಗಂಟೆಯ ಸುಮಾರಿಗೆ ಮನೆಗೆ ಬಂದು, ಮನೆಯೂಳಗೆ ಹೋಗಬೇಕು ಅಂತಾ ಮನೆ ಬಾಗಿಲು ಹತ್ತಿರ ಹೋದಾಗ ಬಾಗಿಲು ಒಂದು ಫಲಕ ತೆರೆದು ಮುರಿದಿತ್ತು. ನಾನು ಮನೆಯೂಳಗೆ ಹೋಗಿ ನೋಡಲು ಬಟ್ಟೆಗಳು ,ಎಲ್.ಐ.ಸಿ ಪಾಲಸಿಗಳು ಹೊಲದ ಕಾಗದ ಪತ್ರಗಳು ಇತರೇ ಕಾಗದ ಪತ್ರಗಳು ಮನೆಯಲ್ಲಿ ಚೆಲ್ಲಾ ಪಿಲ್ಲಿಯಾಗಿ ಬಿದಿದ್ದವು ನನ್ನ ಮನೆಯಲ್ಲಿನ ಪೆಟ್ಟಿಗೆ ಮುರಿದಿದ್ದು ಅದರಲ್ಲಿದ್ದ ಬಂಗಾರದ ಆಭರಣ ಮತ್ತು ಬೆಳ್ಳಿಯ ಸಾಮಾನುಗಳು ಮತ್ತು ನಗದು 10,000/-ಸಾವಿರ ರೂಪಾಯಿಗಳು. ಹೀಗೆ ಒಟ್ಟು 1,00,150/- (ಒಂದು ಲಕ್ಷದ ಒಂದು ನೂರಾ ಐವತ್ತು ) ರೂಪಾಯಿ ಕಿಮ್ಮತ್ತಿನವುಗಳು ಕಳ್ಳತನವಾಗಿರುತ್ತದೆ. ನನ್ನ ಮನೆಯಲ್ಲಿ ಕಳ್ಳತನ ಆದ ಬಗ್ಗೆ ನಮ್ಮೂರ ಶಿವಪ್ಪ ತಾಯಿ ಗೌರಾಬಾಯಿ ಕೊಚಿ, ಗೌರಾಬಾಯಿ ತಂದೆ ಶಿವಪ್ಪ ಕೊಚಿ ಸಾ:ಝಳಕಿ(ಕೆ) ಇವರೆ ಕಳ್ಳತನ ಮಾಡಿರಬಹುದು ಅಂತಾ ಸಂಶಯ ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 44/2012 ಕಲಂ: 454,380  ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES

ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ ಮಲ್ಲಪ್ಪಾ ತಂದೆ ಬಂಡೆಪ್ಪಾ ಸಾ||ಅಂತಪನಾಳ ತಾ||ಜಿ||ಗುಲಬರ್ಗಾರವರು ನಾನು ಮತ್ತು ನನ್ನ ಹೆಂಡತಿ ಕಾಶಿಬಾಯಿ ಇಬ್ಬರು ಕೂಡಿಕೊಂಡು ದಿನಾಂಕ:23-08-2012 ರಂದು ಸಾಯಂಕಾಲ 5-45 ಗಂಟೆ ಸುಮಾರಿಗೆ ಹೊಲಕ್ಕೆ ಹೋಗಿ ಬಂದಾರಿಯಲ್ಲಿರುವ ಕಾಲುವೆಯಲ್ಲಿನ ಕಸ ತೆಗೆಯುತ್ತಿರುವಾಗ ಅಣ್ಣಪ್ಪಾ ಮತ್ತು ಆತನ ಮಗ ದಿಲೀಪ ಇಬ್ಬರು ಕೂಡಿಕೊಂಡು ಬಂದು ನಮ್ಮ ಮಧ್ಯ ಇರುವ ಬಂದಾರಿಯಲ್ಲಿ ನೀರು ಹೋಗುವದನ್ನು ಬಂದ ಮಾಡು ಅಂದರೆ ಕೇಳುತ್ತಿಲ್ಲಾ ಅಂತಾ ಮುಂದೆ ಹೋಗದಂತೆ ತೆಡೆದು ಗಟ್ಟಿಯಾಗಿ ಹಿಡಿದು ಅಲ್ಲೇ ಬಿದ್ದಿರುವ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಮತ್ತು ಕೈ ಮುಷ್ಠಿ ಮಾಡಿ, ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 95/2012 ಕಲಂ. 341, 323, 324, 447, 504, 506 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ, ಅಣ್ಣಪ್ಪಾ ತಂದೆ ಬಂಡೆಪ್ಪಾ ಸಾ||ಅಂತಪನಾಳ ತಾ||ಜಿ||ಗುಲಬರ್ಗಾರವರು ನಾನು ಮತ್ತು ನನ್ನ ಹೆಂಡತಿ ಶಾರದಾಬಾಯಿ ಇಬ್ಬರು ಕೂಡಿಕೊಂಡು ದಿನಾಂಕ:23/08/2012 ರಂದು ಬೆಳಿಗ್ಗೆ ಹೊಲಕ್ಕೆ ಹೋಗಿ ಹೊಲದಲ್ಲಿ ಕಸ ತೆಗೆದು ನಮ್ಮ ಬಂದಾರಿಯಲ್ಲಿ ಹಾಕುತ್ತಿರುವಾಗ ಸಾಯಂಕಾಲ 5-45 ಗಂಟೆಗೆ ನನ್ನ ತಮ್ಮ ಮಲ್ಲಪ್ಪಾ ಈತನು ಬಂದು ನನಗೆ ಅವಾಚ್ಯವಾಗಿ ಬೈದು ನಮ್ಮ ನೀರಿನ ಕಾಲುವೆಯಲ್ಲಿ ಕಸ ಹಾಕಿ ನೀರು ಹೋಗುವದನ್ನು ಬಂದ ಮಾಡುತ್ತಿದ್ದಿರಿ ಅಂತಾ ಅನ್ನುತ್ತಿದ್ದಾಗ ಆಗ ನಾನು ಈ ಬಂದಾರಿ ನಮಗೆ ಸೇರಿದ್ದು. ಪ್ರತಿ ವರ್ಷ ಬಂದಾರಿ ಕೇದರಿ ಹಾಳು ಮಾಡುತ್ತಿದ್ದಿರಿ ಅಂತಾ ಅಂದಿದಕ್ಕೆ ನನಗೆ ಎದುರು ಮಾತನಾಡುತ್ತಿ ಅಂತಾ ಅವಾಚ್ಯಾವಾಗಿ ಬೈದು ಎದೆಯ ಮೇಲಿನ ಅಂಗಿ ಹಿಡಿದು ನೆಲಕ್ಕೆ ಕೆಡುವಿ ಅಲ್ಲೇ ಬಿದ್ದಿರುವ ಬಡಿಗೆ ತೆಗೆದುಕೊಂಡು ನನ್ನ ಬಲಗಡೆ ಹೊಟ್ಟೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 96/2012 ಕಲಂ. 341, 323, 324, 447, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.