POLICE BHAVAN KALABURAGI

POLICE BHAVAN KALABURAGI

03 June 2016

Kalaburagi District Reported Crimes

ಕೊಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಶಾಂತಪ್ಪ ತಂದೆ ತುಕ್ಕಪ್ಪ ಡಾಲೇರ ಸಾ:ಯಡ್ರಾಮಿ ತಾಂಡಾ ಇವರು ದಿನಾಂಕ 27-05-2016 ರಂದು ನನ್ನ ತಮ್ಮ ಮಾನಸಿಂಗ ಈತನು ದಿನಾಂಕ 26-05-2016 ರಂದು ಕುರಿ ಕಾಯಲು ಹೋಗಿದ್ದು, ಅಂದೆ 12;00 ಗಂಟೆಯಿಂದ 4;00 ಗಂಟೆ ಮದ್ಯಧಲ್ಲಿ ನಮ್ಮ ತಮ್ಮ ನಮ್ಮೂರ ರುಕುಮ ಪಟೇಲ ಚಿಂಚೋಳಿ ರವರ ಬಾವಿಯಲ್ಲಿ ನೀರು ಕುಡಿಯಲು ಹೋಗಿ ಬಾವಿ ನೀರಲ್ಲಿ ಬಿದ್ದು ಪೃತ ಪಟ್ಟಿರಬಹುದು ಅಂತಾ ಸಂಶಯದ ಮೇಲೆ ಅರ್ಜಿ ಕೊಟ್ಟ ಮೇರೆಗೆ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು ಇರುತ್ತದೆ. ನಮ್ಮು 15 ಕುರಿಗಳು ಹಾಗು ಇನ್ನಿತರರ 25 ಕುರಿಗಳನ್ನು ನಾವು ಕಾಯುತ್ತಾ ಬಂದಿರುತ್ತೇವೆ. ಇಂದು ನಮ್ಮೂಣಿಯ ಸುಸಲಾಬಾಯಿ ಗಂಡ ಧರ್ಮು ಡಾಲೇರ ಮತ್ತು ರೇಣುಕಾ ಗಂಡ ಅನೀಲ ಡಾಲೇರ ರವರು ತಿಳಿಸಿದ್ದೇನೆಂದರೆ, ದಿನಾಂಕ 26-05-2016 ರಂದು ಮದ್ಯಾಹ್ನ 2;00 ಗಂಟೆ ಸುಮಾರಿಗೆ ನಾವು ರುಕುಮ ಪಟೇಲ ಚಿಂಚೋಳಿ ರವರ ಹೊಲದಲ್ಲಿ ಬಾವಿಯಿಂದ ಸ್ವಲ್ಪ ದೂರದಲ್ಲಿ ಕಟ್ಟಿಗೆ ಕಡಿಯುತ್ತಿದ್ದಾಗ ನಿಮ್ಮ ತಮ್ಮ ಮಾನಸಿಂಗನು ಸಹ ತನ್ನ ಕುರಿಗಳನ್ನು ಅಲ್ಲೆ ಬಾವಿ ಹತ್ತಿರ ಕಾಯುತ್ತಿದ್ದನು. ಆಗ ಅದೇ ಸಮಯಕ್ಕೆ ನಮ್ಮ ತಾಂಡಾದ ಲಕ್ಷ್ಮಣ@ಲಚ್ಯಾ ತಂದೆ ದೀಪಲು ರಾಠೋಡ ಹಾಗು ಅವನೊಂದಿಗೆ ಇನ್ನು 3 ಜನರಿದ್ದರು ಅವರು ಯಾರು ಅಂತಾ ಗೊತ್ತಿರುವುದಿಲ್ಲ, ನಂತರ ಅವರೆಲ್ಲರು ನಿಮ್ಮ ತಮ್ಮನ ಹತ್ತಿರ ಹೋಗಿ ಅವನಿಗೆ ಕೈಯಿಂದ ಹೊಡೆ ಬಡೆ ಮಾಡಿ ಬಾವಿ ನೀರಲ್ಲಿ ನೂಕಿ ಕೊಟ್ಟರು, ಆಗ ನಿಮ್ಮ ತಮ್ಮ ಚಿರಾಡುತ್ತಿದ್ದನು, ನಾವು ಹೆದರಿಕೊಂಡು ಅಲ್ಲೆ ಕಂಟಿಯಲ್ಲಿ ಅಡಗಿಕೊಂಡಿದೇವು. ನಂತರ ಅವರೆಲ್ಲರು ಎಲ್ಲಾ ಕುರಿಗಳನ್ನು ಹೊಡೆದುಕೊಂಡು ಸುಂಬಡ ಗ್ರಾಮದ ಕಡೆಗೆ ಹೋದರು. ಲಕ್ಷ್ಮಣ@ಲಚ್ಯಾ ಈತನ ಜೊತೆಗಿದ್ದ ಇನ್ನು 3 ಜನರನ್ನು ನೋಡಿದರೆ ಗುರುತಿಸುತ್ತೇವೆ. ನಾವು ಅವರನ್ನು ಹೆದರಿಕೊಂಡು ಮೊನ್ನೆಯಾದ ಘಟನೆಯನ್ನು ಹೇಳಿರುವುದಿಲ್ಲ. ಅಥಾ ತಿಳಿಸಿದ ಮೇರೆಗೆ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಜೇವರಗಿ ಠಾಣೆ : ದಿನಾಂಕ 01.06.2016 ರಂದು ಮದ್ಯಾಹ್ನ ಜೇವರಗಿ ಹೊರ ವಲಯದ ಗಡ್ಡಿ ಫೂಲ್‌ ಹತ್ತಿರ ರೋಡಿನಲ್ಲಿ ನಾನು ಮತ್ತು ಭಗವಂತ್ರಾಯ ತಂದೆ ಗುಂಡಪ್ಪ ಶಿವಣ್ಣನವರ್ ಈತನ ಮೊಟಾರು ಸೈಕಲ್‌ ನಂ ಕೆ.ಎ 32 ಇಹೆಚ್‌ 3406 ನೇದ್ದರ ಮೇಲೆ ಹೋಗುತ್ತಿದ್ದಾಗ ಭಗವಂತ್ರಾಯ ಈತನು ಮೋಟಾರು ಸೈಕಲ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ರೋಡಿನ ಪಕ್ಕದಲ್ಲಿ ಸತ್ತು ಬಿದ್ದ ಎಮ್ಮೆಗೆ ಡಿಕ್ಕಿ ಪಡಿಸಿದ್ದರಿಂದ ನಾವುಗಳು ಮೊಟಾರು ಸೈಕಲ್‌ದಿಂದ ಕೆಳಗೆ ಬಿದ್ದು ಗಾಯಪೆಟ್ಟುಗಳಾಗಿರುತ್ತವೆ ಅಂತಾ ಶ್ರೀ ವಿಶ್ವನಾಥ ತಂದೆ ಅಖಂಡೆಪ್ಪ ಕಲ್ಲಾ ಸಾ : ಲಕ್ಷ್ಮಿ ಚೌಕ್ ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜೇವರಗಿ ಠಾಣೆ : ದಿನಾಂಕ 01.06.2016 ರಂದು ಮದ್ಯಾಹ್ನ ಕೃಷಿ ಸಂಶೋಧನಾ ಕೇಂದ್ರದ ಹತ್ತಿರ ಜೇವರಗಿ ಕಲಬುರಗಿ ರಸ್ತೆಯ ಪಕ್ಕದಲ್ಲಿ ನಾನು ಮತ್ತು ನನ್ನ ತಾಯಿ ಸಕ್ಕಮ್ಮ ಹೆಂಡತಿ ಮಹಾನಂದ ಹಾಗು ಜೇವರಗಿ ಪಟ್ಟಣದ ಲಕ್ಷ್ಮಿ ಪುಜಾರಿ ನಾಗಮ್ಮ ಪುಜಾರಿ ಎಲ್ಲರು ಕೂಡಿಕೊಂಡು ನಡೆದುಕೊಂಡು ಜೇವರಗಿ ಕಡೆಗೆ ಬರುತ್ತಿದ್ದಾಗ ಅದೇ ಸಮಯಕ್ಕೆ ಕಲಬುರಗಿ ಕಡೆಯಿಂದ ಮೋಟಾರು ಸೈಕಲ್‌ ನಂ ಕೆ.ಎ 32 ವಿ 2853 ನೇದ್ದರ ಚಾಲಕನು ತನ್ನ ಮೋಟಾರು ಸೈಕಲ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ನಮ್ಮ ತಾಯಿಗೆ ಡಿಕ್ಕಿ ಹೊಡೆದು ಗಾಯ ಗೊಳಿಸಿ ತನ್ನ ಮೋಟಾರು ಸೈಕಲ್‌ದೊಂದಿಗೆ ಓಡಿ ಹೋಗಿರುತ್ತಾನೆ ಅಂತಾ ಶ್ರೀ ರವಿ ತಂದೆ ಶಂಕ್ರೆಪ್ಪ ಸಿರೂರ ಸಾ : ಶಾಸ್ತ್ರಿ ಚೌಕ್ ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ ೦1.06.2016 ರಂದು ಸಾಯಂಕಾಲದ ನಾನು ನನ್ನ ಖಾಸಗಿ ಕೆಲಸದ ಸಲುವಾಗಿ ಮೋಟಾರು ಸೈಕಲ್‌ ನಂ ಕೆಎ 36 ಜೆ 2759 ನೇದ್ದನ್ನು ತೆಗೆದುಕೊಂಡು ಜೇವರಗಿಗೆ ಬರುತ್ತಿದ್ದೆನು ಸಾಯಂಕಾಲ 05:15 ಗಂಟೆಯ ಸುಮಾರಿಗೆ ಜೇವರಗಿ ಪಟ್ಟಣದ ಹೊರವಲಯದ ಸತ್ತರ್‌ ಸಾಬ್‌ ಪೆಟ್ರೋಲ್‌ ಪಂಪ್ ಹತ್ತಿರ ಶಹಾಪುರ ಜೇವರಗಿ ರೋಡಿನಲ್ಲಿ ರೋಡಿನ ಸೈಡಿನಿಂದ ಜೇವರಗಿ ಕಡೆಗೆ ಬರುತ್ತಿದ್ದಾಗ ಅದೇ ವೇಳೆಗೆ ನನ್ನ ಹಿಂದಿನಿಂದ ಒಬ್ಬ ಮೋಟಾರು ಸೈಕಲ್‌ ಸವಾರನು ತನ್ನ ಮೋಟಾರು ಸೈಕಲ್‌ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ಮೋಟಾರು ಸೈಕಲ್‌ಗೆ ಮತ್ತು ನನ್ನ ಬಲಗಾಲಿಗೆ ಬಲವಾಗಿ ಡಿಕ್ಕಿಪಡಿಸಿದನು ಆಗ ನಾನು ಮೋಟಾರು ಸೈಕಲ್‌ದೊಂದಿಗೆ ಕೆಳಗೆ ಬಿದ್ದಾಗ ಅಲ್ಲೆ ರೋಡಿನಲ್ಲಿ ಬರುತ್ತಿದ್ದ ಲಕ್ಷ್ಮಿ ಗಂಡ ಆನಂದ ಬಾರಿಗಿಡ ಇವಳು ಬಂದು ನನಗೆ ಎಬ್ಬಿಸಿ ಕೂಡಿಸಿದಳು ಅಫಘಾತದಲ್ಲಿ ನನಗೆ ಬಲಗಾಲ ಮೋಳಕಾಲ ಕೆಳಗೆ ಭಾರಿ ರಕ್ತ ಗಾಯವಾಗಿದ್ದು. ನನಗೆ ಡಿಕ್ಕಿ ಪಡಿಸಿದ ಮೊಟಾರು ಸೈಕಲ್‌ ನಂ ನೋಡಲು ಅದು ಕೆ.ಎ 33 ಎಸ್ 7649 ನೇದ್ದು ಇದ್ದು ಅದರ ಸವಾರನಿಗೆ ಹೆಸರು ಕೇಳುತ್ತಿದ್ದಂತೆ ಅವನು ತನ್ನ ಮೋಟಾರು ಸೈಕಲ್‌ ದೊಂದಿಗೆ ಓಡಿ ಹೋರುತ್ತಾನೆ ಅಂತಾ ಶ್ರೀ ಅರ್ಜುನ್ ತಂದೆ ಯಮನಪ್ಪ ಕೊಂಬಿನ್‌ ಸಾ : ಯಾಳವಾರ್  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ವೆಂಕಟರಾವ ತಂದೆ ಚಂದ್ರಶೇಖರ ವಾಕೂಡೆ ಸಾ; ಜೀವಣಗಿ ತಾ;ಜಿ ಕಲಬುರಗಿ ಇವರು ದಿನಾಂಕ 29-05-2016 ರಂದು ರಾತ್ರಿ 10 ಗಂಟೆಯ ಸುಮಾರಿಗೆ ತನ್ನ  ಟಿ.ವಿ.ಎಸ್ ಮೋಟಾರ ಸೈಕಲ್ ನಂ ಕೆಎ-32-ಇಜೆ-9625 ನೇದ್ದು ಜೀವಣಗಿ ಗ್ರಾಮದ ಪಿರ್ಯಾದಿಯ ಮನೆಯ ಮುಂದೆ ನಿಲ್ಲಿಸಿದ ಟಿ .ವಿ.ಎಸ್ ಮೋಟಾರ ಸೈಕಲ್ ನಂ ಕೆಎ-32-ಇಜೆ-9625 ಇರಲಿಲ್ಲ,  ಸದರಿ ಮೋಟಾರ ಸೈಕಲ್ ಪತ್ತೆ ಕುರಿತು  ಪರಿಚಯಸ್ಥರಲ್ಲಿ  ವಿಚಾರಿಸಿದ್ದು ಪತ್ತೆಯಾಗಿರುವದಿಲ್ಲ. ದಿನಾಂಕ29-05-2016 ರಂದು ರಾತ್ರಿ 10 ಗಂಟೆಯಯಿಂದ  ದಿನಾಂಕ 30-05-2016 ರಂದು ಬೆಳಗ್ಗೆ 3 ಗಂಟೆಯ ಮಧ್ಯದಲ್ಲಿ ಯಾರೋ ಕಳ್ಳರು ಪಿರ್ಯಾದಿಯ ಮನೆಯ ಮುಂದೆ ನಿಲ್ಲಿಸಿದ ಟಿ.ವಿ.ಎಸ್ ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಹಸೀನಾ ಬೇಗಂ ಗಂಡ ಅಬ್ದುಲ್‌ ಕಂಕರ್‌ ಸಾ :ಗುಡುರ ಎಸ್.ಎ ಇವರ ಗಂಡ ಅಬ್ದುಲ್‌ ರಹೀಮ್ ಈತನು ಮೃತಪಟ್ಟಿದ್ದರಿಂದ ನನ್ನ ಗಂಡನ ಆಸ್ತಿಯಲ್ಲಿ ಪಾಲು ಪಡೆಯುವ ಸಲುವಾಗಿ ನನ್ನ ಮೈದುನರ ಮತ್ತು ಮಾವನವರ ವಿರುದ್ಧ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹಾಕಿದ್ದು ಅದರಂತೆ ನನ್ನ ಗಂಡನ ಆಸ್ತಿಯಲ್ಲಿ ನನಗೆ 20 ಎಕರೆ ಜಮೀನು ಬಂದಿದ್ದು ಇರುತ್ತದೆ. ನಮ್ಮೂರ ಪ್ರಮುಖರು ನನ್ನ ಗಂಡನ ಮೈದುನವರಿಗೆ ಅನ್ಯಾಯವಾಗುತ್ತದೆ ನೀನು 10 ಎಕರೆ ಜಮೀನು ಇಟ್ಟುಕೊಂಡು ಉಳಿದ 10 ಎಕರೆ ಜಮೀನನ್ನು ನಿನ್ನ ಮೈದುನರಿಗೆ ಬಿಟ್ಟು ಕೊಡು ಅಂತ ನ್ಯಾಯ ಪಂಚಾಯತಿ ಮಾಡಿದ್ದರಿಂದ ಅದಕ್ಕೆ ನಾನು ಒಪ್ಪಿಕೊಂಡಿದ್ದು ಅಲ್ಲದೆ ಕೊರ್ಟನಲ್ಲಿ ಹಾಕಿದ ಕೇಸು ಹಿಂಪಡೆಯುವಂತೆ ಹೇಳಿದ್ದರಿಂದ ಅದಕ್ಕುಕೂಡ ಒಪ್ಪಿಕೊಂಡಿರುತ್ತೆನೆ. ದಿನಾಂಕ 31.೦5.2016 ರಂದು ಮಧ್ಯಾಹ್ನ ಸಮಯದಲ್ಲಿ ನಾನು ಕಲಬುರಗಿಯಿಂದ ಜೇವರಗಿಗೆ ಬಂದು ಜೇವರಗಿಯ ನ್ಯಾಯಾಲಯದಲ್ಲಿ ಹಾಕಿದ ಕೇಸು ವಾಪಸ್‌ ಪಡೆಯುವ ಸಲುವಾಗಿ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಜೆ.ಎಮ್.ಎಫ್.ಸಿ ಕೋರ್ಟಎದುರುಗಡೆ ರೋಡಿನಲ್ಲಿ ಬರುತ್ತಿದ್ದಾಗ ಅದೇ ವೇಳೆಗೆ ನಮ್ಮೂರ ನಾಗಣ್ಣ ತಂದೆ ಸಿದ್ದಣ್ಣ ಹೆಗ್ಗಣಿ ಈತನು ತನ್ನ ಬುಲೇರೋ ವಾಹನದೊಂದಿಗೆ ಬಂದು ರೋಡಿನಲ್ಲಿ ವಾಹನ ನಿಲ್ಲಿಸಿ ನಡೆದುಕೊಂಡು ಹೋಗುತ್ತಿದ್ದ ನನಗೆ ತಡೆದು ನಿಲ್ಲಿಸಿ ನೀನು ಕೋರ್ಟ ನಲ್ಲಿನ ಕೇಸ ವಾಪಸ್‌ ತೆಗೆದುಕೊಳ್ಳುವದು ಬೇಡ ನಿನಗೆ ನಿನ್ನ ಗಂಡನ ಆಸ್ತಿ ಪೂರ್ತಿ ಬರುವಂತೆ ಮಾಡುತ್ತೆನೆ. ಆಮೇಲೆ ನಾವಿಬ್ಬರು ಮದುವೆ ಮಾಡಿಕೊಂಡಿದ್ದರಾಯಿತು ಅಂತ ಅಂದಾಗ ನಾನು ಮುಸ್ಲೀಂ ಜಾತಿಯವಳು ಇರುತ್ತೆನೆ. ಅಲ್ಲದೆ ನನಗೆ ಮದುವೆ ಕೂಡ ಆಗಿರುತ್ತದೆ ಹೀಗೆ ನನಗೆ ಮಾತನಾಡುವದು ಸರಿ ಅಲ್ಲ ಅಂತ ಅಂದಾಗ ರಂಡಿ ನಾನೇ ನಿನಗೆ ಕೋರ್ಟನಲ್ಲಿ ಕೇಸ್‌ ಹಾಕಿ ಕೇಸ್‌ ಗೆದಿಸಿ ಕೊಟ್ಟಿರುತ್ತೆನೆ ಮತ್ತು ತಹಶೀಲ ಆಫೀಸಿನಲ್ಲಿ ನಿನ್ನ ಹೆಸರಿಗೆ ಬರುವಂತೆ ಪಹಣಿ ಮಾಡಿಸಿರುತ್ತೆನೆ ಅಂತ ಅಂದಾಗ ನಾನು ಅವನಿಗೆ ನೀನು ಹೀಗೆ ಮಾಡಿದರೆ ನಿನ್ನ ಮೇಲೆ ಕೇಸ್‌ ಮಾಡಿಸುತ್ತೆನೆ ಅಂತ ಅಂದಾಗ ಅವನು ನಿನ್ನ ಬುಲೇರೋ ವಾಹನದಲ್ಲಿನ ರಾಡ್‌ ತೆಗೆದುಕೊಂಡು ಬಂದು ನನಗೆ ಕೂದಲು ಹಿಡಿದು ಜಗ್ಗಾಡಿ ಸೀರೆ ಹಿಡಿದು ಜಗ್ಗಾಡಿ ಮಾನಭಂಗ್ ಮಾಡಲು ಪ್ರಯತ್ನ ಮಾಡುತ್ತಿದ್ದಾಗ ನಾನು ತಪ್ಪಿಸಿಕೊಳ್ಳುತ್ತಿದ್ದಾಗ ತನ್ನ ಹತ್ತಿರ ಇದ್ದ ರಾಡಿನಿಂದ ನನ್ನ ಬೆನ್ನು ಮೇಲೆ ಭುಜದ ಮೇಲೆ ಬೆನ್ನ ಮೇಲೆ ಎರಡು ಹಸ್ತದ ಮೇಲೆ ರಾಡಿನಿಂದ ಜೋರಾಗಿ ಹೊಡೆದನು. ಅಸ್ಟರಲ್ಲಿ ಜೇವರಗಿ ಕಡೆಯಿಂದ ನಮ್ಮ ಮೈದುನರಾದ ಸಿಲಾರೋದ್ದಿನ್ ಕಂಕರ್‌, ಬಾಬಾ ಕಂಕರ್‌ ಹಾಗು ನೂರೋದ್ದಿನ್ ತಂದೆ ನಬಿಸಾಬ್‌ ತೇಲಿ ಇವರು ಬಂದು ಇವರು ಬಂದು ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ನಂತರ ಅವನು ರಂಡಿ ಇವತ್ತು ನೀನು ಉಳಿದಿದ್ದಿ, ಇನ್ನೊಮ್ಮೆ ನೀನು ಸಿಕ್ಕರೆ ನಿನಗೆ ಜೀವದ ಸಮೇತ ಬಿಡುವದಿಲ್ಲ ಅಂತ ಜೀವದ ಬೇದರಿಕೆ ಹಾಕಿ ತನ್ನ ವಾಹನದೊಂದಿಗೆ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.