ಎಂ.ಬಿ.ನಗರ ಠಾಣೆ: ಶ್ರೀಮತಿ ಜಗದೇವಿ ಗಂಡ ದಿ:ರಾಮಲಿಂಗ್ ವಯ:40 ವರ್ಷ ಜಾತಿಃ ಪೂಜಾರಿ ಉಃ ಕೂಲಿಕೆಲಸ ಸಾಃಜಿಡಿಎ ಕಾಲೋನಿ ಕೆ.ಎನ.ಜಡ್ಜ ಪಂಕ್ಷನ ಹಾಲ್ ಹಿಂದುಗಡೆ ಆದರ್ಶ ನಗರ ಗುಲಬರ್ಗಾರವರು ನಾನು ಇಂದು ಮುಂಜಾನೆ 9-30 ಗಂಟೆಗೆ ಮನೆಯಿಂದ ನಡೆದುಕೊಂಡು ಕೂಲಿ ಕೆಲಸಗೋಸ್ಕರ ಬಸವೇಶ್ವರ ಕಾಲೋನಿ ಹೋಸ ಬಡಾವಣೆಯ ಶಿವ ಮಂದಿರ ಹತ್ತಿರದ ಮನೆ ಕಟ್ಟಡದ ಕೆಲಸ ಮಾಡುವ ಸಲುವಾಗಿ ನಡೆದುಕೊಂಡು ಹೊಗುತ್ತಿರುವಾಗ ಬಸವೇಶ್ವರ ಕಾಲೋನಿಯ ಹೊಸ ಬಡಾವಣೆಯ ಶ್ರೀ ನಂದಿ ಇವರ ಮನೆಯ ಎದುರುಗಡೆ ರೊಡಿನ ಮೇಲೆ ಹೋಗುತ್ತಿರುವಾಗ ಎದುರಿನಿಂದ ಒಬ್ಬ ಹುಡುಗನು ಬಂದವನೆ ನನಗೆ ನೀನು ನನ್ನ ಮೋಬೈಲಿಗೆ ಏಕೆ ಮೇಸೇಜ್ ಕಳುಹಿಸಿದ್ದಿ ಅಂತ ಕೇಳಿದನು, ನಾನು, ನನಗೆ ಮೇಸೆಜ್ ಕಳಿಸಲಿಕ್ಕೆ ಬರಲ್ಲಾ ನಾನೆಕೆ ಮೇಸೆಜ್ ಕಳಿಸಲಿ ಅಂದೆ ಅಷ್ಟರಲ್ಲಿ ನನಗೆ ಬಲ ಕಪಾಳದ ಮೇಲೆ ಕೈಯಿಂದ ಹೊಡೆದನು. ನಾನು ಸಿಟ್ಟಿನಿಂದ ಆತನ ಎದೆಯ ಮೇಲಿನ ಅಂಗಿಹಿಡಿದೆನು ಆತನು ನನ್ನ ಕುತ್ತಿಗೆ ಹೀಡಿದು ಕುತ್ತಿಗೆಯಲ್ಲಿರುವ ಆರು ಗ್ರಾಂ ಬಂಗಾರದ ಜೀರಾ ಮಣಿ ಅ.ಕಿ.13,000/- ರೂ ಬೆಲೆಬಾಳುವದನ್ನು ಕಿತ್ತಿಕೊಂಡು ಹೋದನು ಸದರಿಯವನು ಅಂದಾಜು 20 ವರ್ಷದವನಾಗಿದ್ದು ತೆಳ್ಳಗೆ ಮೈಕಟ್ಟು, ಕಪ್ಪು ಮೈ ಬಣ್ಣ , ಜೀನ್ಸ್ ಪ್ಯಾಂಟ್, ನಾಸಿ ಬಣ್ಣದ ಶರ್ಟ್ ಧರಿಸಿರುತ್ತಾನೆ. ಬಲ ಕಿವಿಯಲ್ಲಿ ರಿಂಗ್ ಇರುತ್ತದೆ. ಸದರಿವನಿಗೆ ನೊಡಿದ್ದಲ್ಲಿ ಗುರುತಿಸುತ್ತನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 23/2012 ಕಲಂ. 392 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ : ಶ್ರೀ ಬಸಯ್ಯ ತಂದೆ ಶಂಕ್ರಯ್ಯ ಮಠಪತಿ ಸಾ ಹಸರಗುಂಡಗಿ ಗ್ರಾಮ ತಾ ಚಿಂಚೋಳಿ ಜಿ ಗುಲಬರ್ಗಾರವರು ನನ್ನದೊಂದು ಜೀಪ್ ಎಂ.ಹೆಚ್-10 ಸಿ-0408 ನೇದ್ದು 1,00,000/- ರೂ ಖರಿದಿಸಿದ್ದು ಸುಮಾರು 3 ತಿಂಗಳ ಹಿಂದೆ ರಮೇಶ ಮನ್ನಾಯಖೇಳ್ಳಿ ಇವರಿಗೆ ಮಾರಾಟ ಮಾಡಿದ್ದು ಪೈನಾನ್ಸ ಲೋನ ಇಲ್ಲದ ಕಾರಣ ಇನ್ನೂ ವರ್ಗಾವಣೆ ಕಾಗದ ಪತ್ರಗಳು ಮಾಡಿಕೊಟ್ಟಿರುವದಿಲ್ಲ ದಿನಾಂಕ: 26/02/2012 ರಂದು ನಾನು ಮತ್ತು ರಮೇಶ ಚಿಮ್ಮೊನ ಚೋಡದಲ್ಲಿರುವಾಗ ಒಬ್ಬ ವ್ಯಕ್ತಿ ಕೋಳಿ ಗೊಬ್ಬುರ ಪ್ರಚಾರ ಕುರಿತು ಬಾಡಿಗೆ ಜೀಪ ಕೇಳಿದ್ದು ಒಂದು ದಿನಕ್ಕೆ 400/- ರೂ ಡ್ರೈವರೆಗೆ 100/- ರೂ. ಭತ್ಯೆ ಡಿಸೇಲ ಹಾಕಿಕೊಳ್ಳುವ ಬಗ್ಗೆ ಮಾತಾಗಿ ಕೊಟ್ಟಿದ್ದು ದಿನಾಂಕ : 27/02/2012 ರಂದು ಬೆಳಿಗ್ಗೆ 8 ಗಂಟೆಗೆ ಮನ್ನಾಯಖೆಳ್ಳಿಗೆ ಹೋಗಿದ್ದು ಭೀಮಶಾ ಇತನು ಆರಾಮ ಇಲ್ಲದಕ್ಕೆ ಚಾಲಕ ಒಮನಾಥ ಎಂಬುವವರಿಗೆ ಕೊಟ್ಟಿದ್ದು ಕೆಲಸ ಮುಗಿಸಿಕೊಂಡು ರಾತ್ರಿ ಗುಲಬರ್ಗಾಕ್ಕೆ ಯಾತ್ರಿಕ ನಿವಾಸದಲ್ಲಿ ಬಂದು ಉಳಿದು ಜೀಪ ಪಾರ್ಕಿನಲ್ಲಿ ಇಟ್ಟಿದ್ದು ಅಪರಿಚಿತ ವ್ಯಕ್ತಿ ತನಗೆ ಮೀಟಿಂಗ ಇರುತ್ತದೆ ಅಂತಾ ಅಂದು ಸದರಿ ಜೀಪ್ ಕಳವು ಮಾಡಿಕೊಂಡು ಹೋಗಿರುತ್ತಾನೆ 1992 ನೇ ಸಾಲಿನ ಜೀಪ ಇದ್ದು 1,00,000/- ರೂ. ಬೆಲೆ ಬಾಳುತ್ತಿದ್ದು ಬೂದು ಬಣ್ಣದಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ. 18/2012 ಕಲಂ 379 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.