POLICE BHAVAN KALABURAGI

POLICE BHAVAN KALABURAGI

30 November 2016

KALABURAGI DISTRICT REPORTED CRIMES

ಕಳವು ಯತ್ನ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ :ದಿನಾಂಕ 26-11-2016 ರಂದು ಶ್ರೀ ಸಿದ್ದಣ್ಣ ತಂ ಹುಲಿಕಂಟರಾಯ ಮಂದ್ರವಾಡಕರ ಬಿಳವಾರ ಪ್ರಗತಿ ಕೃಷ್ಣಾ ಬ್ಯಾಂಕಿನ ವ್ಯವಸ್ಥಾಪಕರು ಠಾಣೆಗೆ ಹಾಜರಾಗಿ ದಿನಾಂಕ:25-11-16 ರಂದು ರಾತ್ರಿ 11 ಗಂಟೆಯಿಂದ ದಿನಾಂಕ: 26-11-16 ರಂದು ಬೆಳ್ಳಗ್ಗೆ 4 ಗಂಟೆಯ ಮಧ್ಯದಲ್ಲಿ ಬಿಳವಾರಗ್ರಾಮದಲ್ಲಿರುವ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ ನೇದ್ದರ ಶೆಟರ್ ಕೀಲಿಯನ್ನು ಯಾರೋ ಕಳ್ಳರು ಗ್ಯಾಸ ಕಟರ್ ದಿಂದ ಕಟ್ ಮಾಡಿ ಕಳ್ಳತನ ಮಾಡಲು ಪ್ರಯತ್ನಪಟ್ಟಿರುವ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ:ದಿನಾಂಕ 28.11.2016 ರಂದು ಶ್ರೀ  ರತನ್‌ಸಿಂಗ್ ತಂದೆ ಪ್ರತಾಪ್‌ ಸಿಂಗ್ ಸಾ: ವಿಧ್ಯಾ ನಗರ ಜೇವರಗಿ ಠಾಣೆಗೆ ಹಾಜರಾಗಿ ವಿದ್ಯಾನಗರದಲ್ಲಿ ನಮ್ಮದೊಂದು ಕಿರಾಣಿ ಅಂಗಡಿ ಇದ್ದು ದಿ. 27.11.2016 ರಂದು ಮುಂಜಾನೆ ನಾನು ಮತ್ತು ನನ್ನ ತಮ್ಮ ಅಜಯಸಿಂಗ್ ಇಬ್ಬರೂ ಅಂಗಡಿಯಲ್ಲಿದ್ದಾಗ ಮಹ್ಮದ್ ರಫೀಕ್ ತಂದೆ ಚಾಂದಪಾಸಾ ಜಮಾದಾರ ಸಾಃ ವಿದ್ಯಾನಗರ ಜೇವರಗಿ ಇತನು ನಮ್ಮ ಕಿರಾಣಿ ಅಂಗಡಿಗೆ ಬಂದು  20 ರೂಪಾಯಿ ಸೆಂಗಾ ಬೀಜ ಕೊಡು ಅಂತಾ ಅಂದಾಗ ನನ್ನ ತಮ್ಮ ಅಜಯಸಿಂಗ್ ಇತನು ಅವನಿಗೆ 20 ರೂ ಸೇಂಗಾ ಬರುವುದಿಲ್ಲಾ 25 ರೂ ಕೊಟ್ಟರೆ ಪಾವ ಕೆ.ಜಿ. ಸೇಂಗಾ ಕೊಡುತ್ತೆನೆ ಅಂತಾ ಅಂದಾಗ ಅವನು ಅವಾಚ್ಯ ಶಬ್ದಗಳಿಂದ ಬಯ್ದು 20 ರೂಪಾಯಿ ಸೇಂಗಾ ಕೊಡು ಅಂದರೆ ಬರುವುದಿಲ್ಲಾ ಅಂತಾ ಹೇಳುತಿ ಅಂತಾ ಅಂದು ನಮ್ಮ ಅಂಗಡಿಯೊಳಗೆ ಬಂದು ಅಲ್ಲಿಯೇ ಇದ್ದ  ತಕ್ಕಡಿ ತೆಗೆದುಕೊಂಡು ನನ್ನ ತಮ್ಮ ಅಜಯಸಿಂಗ್ ಇತನ ತಲೆಗೆ ಕಿವಿಯ ಹತ್ತಿರಕುತ್ತಿ ಹತ್ತಿರಮತ್ತು ಎಡ ಭುಜದ ಮೇಲೆ ಹೊಡೆದನು, ಆಗ ನಾನು ಬಿಡಿಸಲು ಹೊದಾಗ ನನ್ನ ಎಡಕೈ ಹೆಬ್ಬರಳಿನ ಹತ್ತಿರ ಕಚ್ಚಿರುತ್ತಾನೆಮತ್ತು ಬಡಿಗೆಯಿಂದ ತಲೆಯ ಮೇಲೆ ಹೊಡೆದಿದ್ದು.  ನನ್ನ ತಂದೆ ತಾಯಿಯವರು ಬಿಡಿಸಲು ಬಂದಾಗ ಅವರಿಗೊ ಸಹ ಬಡಿಗೆಯಿಂದ ಹೊಡೆದು. ಇವತ್ತು ನೀಮ್ಮ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿದ್ದು. ಅಷ್ಟರಲ್ಲಿ ದಶರಥಸಿಂಗ್ ರಜಪೂತ, ಶೇಖರ ಉಡುಪಿ ಇವರು ಬಂದು ಬಿಡಿಸಿದ್ದು. ನಮ್ಮ ಅಂಗಡಿಯೊಳಗೆ ಬಂದು ಜಗಳ ಮಾಡಿ ಅವಾಚ್ಯವಾಗಿ ಬೈದು ತಕ್ಕಡಿಯಿಂದ ಹೊಡೆದು ಬಡಿಗೆಯಿಂದ ಹೊಡೆದು ಜೀವದ ಬೇದರಿಕೆ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ವಾಡಿ ಪೊಲೀಸ್ ಠಾಣೆ: ದಿನಾಂಕ:29/11/2016 ರಂದು ಶ್ರೀಮತಿ ಆಸಿಯಾ ಬೇಗಂ ಗಂಡ ಶಬ್ಬಿರ ಪತೇಖಾನ ವ ಸಾ:ರಾವೂರ   ಇವರು ಫಿಯಾದಿಸಲ್ಲಿಸಿದ್ದೇನೆಂದರೆ   ತಾನು ತನ್ನ ಶಬ್ಬಿರ ತಂದೆ ಮಹ್ಮದ ಗೌಂಡಿ ಸಾ:ರಾವೂರ ಇತನೊಂದಿಗೆ ಮೊ/ಸೈ ನಂ: ಕೆ.ಎ-32/ಎಕ್ಸ್ 9469 ನೇದ್ದರ ಮೇಲೆ ಡು ಲಾಡ್ಲಾಪೂರ ಕ್ಕೆ ಹೋಗುವ ಸಲುವಾಗಿ ಬಲರಾಮ ಚೌಕ ಹತ್ತಿರ ಬಂದಾಗ ಎದರುಗಡೆಯಿಂದ ಟ್ಯಾಂಕರ ಲಾರಿ ನಂ: ಕೆ.ಎ-32/ಸಿ-4816 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಮೊ/ಸೈ ಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ತನಗೆ ತರಚಿದ ಗಾಯವಾಗಿ ಶಬ್ಬಿರ ಇತನ ಬಲಗಾಲ ತೊಡೆಯ ಹತ್ತಿರ ಮತ್ತು ಎಡಗಾಲ ಮೊಳಕಾಲ ಕೆಳಗೆ ಮುರಿದು ಭಾರಿ ರಕ್ತಗಾಯವಾಗಿ ಅಲ್ಲದೇ ಎರಡು ಕಾಲುಗಳಿಗೆ ಮತ್ತು ಪಾದಗಳಿಗೆ ತರಚಿದ ರಕ್ತಗಾಯವಾಗಿದ್ದು ಉಪಚಾರ ಕುರಿತು ಕಲಬರುಗಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ದಾರಿಯಲ್ಲಿ ಮೃತಪಟ್ಟಿದ್ದು. ಅಪಘಾತದ ನಂತರ ಲಾರಿ ಚಾಲಕನು ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು. ಸದರಿ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ:ದಿನಾಂಕ 28-11-2016 ರಂದು ಶ್ರೀ ಮಲ್ಲಿಕಾರ್ಜುನ ಮನ್ನಾಪೂರ ಸಾ: ಕಲಬುರಗಿ ರವರು ಜೇವರ್ಗಿ ರಸ್ತೆ ಮೂಲಕ ಸುರಪೂರಕ್ಕೆ ತನ್ನ ಕಾರ ನಂ ಕೆಎ32-ಎನ್7130 ನೇದ್ದರಲ್ಲಿ ಹೋಗುತ್ತಿರುವಾಗ ಹಸನಾಪೂರ ಕ್ರಾಸ್ನಲ್ಲಿ ಜೇವರ್ಗಿ ಕಡೆಯಿಂದ ಬರುತ್ತಿದ್ದ ಲಾರಿ ನಂ ಎಪಿ15-ವಿ0909 ನೇದ್ದರ ಚಾಲನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂಧ ಚಲಾಯಿಸುತ್ತಾ ನಮ್ಮ ಕಾರಿಗೆ ಅಪಘಾತಪಡಿಸಿ ನಮ್ಮ ಕಾರಿಗೆ ಜಖಂ ಪಡಿಸಿದ್ದು. ಸದರಿ ಲಾರಿ ಚಾಲಕನ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. 

29 November 2016

KALABURAGI DIST REPORTED CRIMES

ಹಲ್ಲೆ ಪ್ರಕರಣ:
ಜೇವರಗಿ ಪೊಲೀಸ್ ಠಾಣೆ : ದಿನಾಂಕ 28.11.2016 ರಂದು ಶ್ರೀ. ಮಹ್ಮದ್ ರಫೀಕ್‌ ಈತನು ತನ್ನ ಹೇಳಿಕೆ ಫಿರ್ಯಾದಿಯಲ್ಲಿ ದಿನಾಂಕ 27.11.2016 ರಂದು ಮುಂಜಾನೆ ತನಗೆ  ಮತ್ತು ಪ್ರತಾಪ್‌ಸಿಂಗ್ ನ ಮಕ್ಕಳ ಮಧ್ಯ 20 ರೂಪಾಯಿ ಸೆಂಗಾ ಕೊಡುವ ವಿಷಯದಲ್ಲಿ ಜಗಳ ಆಗಿದ್ದು ಅದೇ ವಿಷಯಕ್ಕೆ ನಾನು ಮನೆಯಲ್ಲಿ ಇರುವಾಗ ಪ್ರತಾಪ್‌ ಸಿಂಗ್ ಮತ್ತು ಆತನ ಹೆಂಡತಿ ಮತ್ತು ಮಕ್ಕಳು ಕೂಡಿಕೊಂಡು ನನ್ನ ಮನೆಗೆ ಬಂದು ನನಗೆ ಅವಾಚ್ಯವಾಗಿ ಬೈದು ಕೈಯಿಂದ, ಬಡಿಗೆಯಿಂದ, ರಾಡಿನಿಂದ ನನಗೆ ಹೊಡೆದು ರಕ್ತಗಾಯ ಗೊಳಿಸಿ ಜೀವದ ಬೆದರಿಕೆ ಹಾಕಿದ ಬ್ಗಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ:  ದಿನಾಂಕ:28/11/2016 ರಂದು ಶ್ರೀ ರಾವುತಪ್ಪ ತಂದೆ ನಿಂಗಪ್ಪ ಮುಗಳಿ ಸಾ: ಕವಲಗಾ(ಕೆ) ರವರು ಠಾಣೆಗೆ ಹಾಜರಾಗಿ ದಿನಾಂಕ 27/11/2016 ರಂದು ಸಾಯಂಕಾಲ ತನ್ನ ಮನೆಯಲ್ಲಿರುವಾಗ ಈ ಮೊದಲು ನಮ್ಮ ಮೇಲೆ ವೈಮನಸ್ಸು ಹೊಂದಿದ್ದ 1] ಸಿದ್ದಪ್ಪ ಗೋಟುರು 2) ಸಾಯಬಣ್ಣ ತಂದೆ ಶರಣಪ್ಪ ಗೋಟುರ 3) ಕಲ್ಲಪ್ಪ ತಂದೆ ಶರಣಪ್ಪ ಗೋಟುರ 4] ಶರಣಪ್ಪ ತಂದೆ ಸಾಯಬಣ್ಣ ಗೋಟುರ 5] ಸಿದ್ದಪ್ಪ ತಂದೆ ಅಯ್ಯಪ್ಪ ಹರವಾಳ 6] ಲಕ್ಷ್ಮಿ ಬಾಯಿ ಗಂಡ ಕಲ್ಲಪ್ಪ 7] ಭೀಮಬಾಯಿ ಗಂಡ ಸಾಯಬಣ್ಣ 8] ಮಲ್ಲಮ್ಮ ಗಂಡ ಯಲ್ಲಪ್ಪ 9] ಕಾವೇರಿ ಗಂಡ ಶರಣಪ್ಪ 10] ಯಲ್ಲಪ್ಪ ತಂದೆ ಸಾಯಬಣ್ಣ ಎಲ್ಲರೊ ಕೂಡಿಕೊಂಡು ದು ವಿನಾಳ ಕಾರಣ ನನಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಕೊಲೆ ಮಾಡುವ ಉದ್ದೇಶದಿಂದ ಬಡಿಗೆಯಿಂದ ಹೋಡೆಯುತ್ತಿರುವಾಗ ಬಿಡಿಸಲು ಬಂದ ನನ್ನ ತಾಯಿ ತಾಯಿ ಭಾಗಮ್ಮಳಿಗೆ ಒದ್ದು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಬಡಿಗೆಯಿಂದ ನನಗೆ ಹೊಡೆಯುತ್ತಿರುವಾಗ ನಾನು ತಪ್ಪಿಸಿಕೊಂಡಿದಕ್ಕೆ ನಮ್ಮ ತಾಯಿಯ ಬಲಗಾಲು ತೋಡೆಗೆ ಬಡಿಗೆ ಏಟು ಬಿದ್ದಿರುತ್ತದೆ. ನಮ್ಮ ಅಣ್ಣದಿರಾದ ಶಂಕರ ಮಾಳಪ್ಪ ನನ್ನ ಹೆಂಡತಿ ಲಕ್ಷ್ಮಿಬಾಯಿ ನಮ್ಮ ಅತ್ತಿಗೆ ನೀಲಮ್ಮ ಗಂಡ ಮಾಳಪ್ಪ ಬಿಡಿಸಲು ಬಂದಾಗ ಅವರಿಗೆ ಸಹ ಕೈಯಿಂದ ಮುಷ್ಠಿ ಮಾಡಿ ಹೋಡೆದು ಅವಾಚ್ಯ ಶಬ್ದಗಳಿಂದ ಬಯ್ಯುತ್ತಿರುವಾಗ ಅಲ್ಲಿಯೆ ಇದ್ದ ಹ್ರಾಮದ ಜನರು ಬಿಡಿಸಿದ್ದು ಇನ್ನೂ ಮುಂದೆ ನೀವು ಎಲ್ಲಿ ಸಿಕ್ಕರೂ ಜೀವ ಸಹಿತ ಇಡುವುದಿಲ್ಲಾ ಅಂತಾ ಹೆದರಿಸಿದ್ದು ಕಾರಣ ಸದರಿ ನನಗೆ ಕೊಲೆಗೆ ಯತ್ನಿಸಿ  ಬಡಿಗೆಯಿಂದ ಹೋಡೆದು ಬೈದು ರಕ್ತ ಗಾಯ, ಗುಪ್ತಗಾಯಗೊಳಿಸಿ ಜೀವದ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಫರಹತಾಬಾದ ಠಾಣೇಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ರೈತ ಆತ್ಮಹತ್ಯೆ :-

ಆಳಂದ ಪೊಲೀಸ್ ಠಾಣೆ: ದಿನಾಂಕ: 28/11/2016 ರಂದು ಶ್ರೀಮತಿ. ಹಿರಾಬಾಯಿ ಗಂಡ ಮಲ್ಲಿನಾಥ ಕೋರೆ ಮು:ನಿರಗುಡಿ ಇವರು ಠಾಣೆಗೆ ಹಾಜರಾಗಿ ತನಗೆ ನಾಲ್ಕು ಜನ ಮಕ್ಕಳಿದ್ದು ನಿರಗುಡಿ ಸೀಮಾಂತರದಲ್ಲಿ ನನ್ನ ಗಂಡನ ಹೆಸರಿನಲ್ಲಿ 5 ಎಕರೆ ಜಮೀನು ಇದ್ದು ಅದನ್ನು ನನ್ನ ಗಂಡ ಒಕ್ಕಲುತನ ಮಾಡುತ್ತಾ ಉಪಜೀವಿಸುತ್ತಿದ್ದೆವು ಆ ಹೊಲದ ಮೇಲೆ SBH ಬ್ಯಾಂಕ ನಿರಗುಡಿಯಲ್ಲಿ 80,000/- ಸಾವಿರ ಸಾಲ ಪಡೆದಿದ್ದು ಕಳೆದ ವರ್ಷ ಮಳೆ ಬರದಿದ್ದರಿಂದ ಬರಗಾಲ ಬಿದ್ದು ಬಿತ್ತನೆ ಮಾಡಿದ ಬೆಳೆ ಹಾನಿಯಾಗಿದ್ದರಿಂದ ಗ್ರಾಮದಲ್ಲಿ ಜನರಿಂದ ಕೈಗಡವಾಗಿ 04-05 ಲಕ್ಷ ರೂಪಾಯಿ ತಗೆದುಕೊಂಡಿದ್ದು ಇದನ್ನು ಹೇಗೆ ತಿರಿಸುವದು ಅಂತಾ ಆಗಾಗ ವಿಚಾರ ಮಾಡುತ್ತಾ ಕುಳಿತುಕೊಳ್ಳುತ್ತಿದ್ದರು ಹೇಗಾದರು ಮಾಡಿ ತಿರಿಸಿದರಾಯಿತು ಅಂತಾ ಅವರಿಗೆ ಸಮಾಧಾನದ ಮಾತು ಹೇಳುತ್ತಾ ಬಂದಿರುತ್ತೇನೆ. ಹೀಗಿದ್ದು ಇಂದು ದಿನಾಂಕ:28/11/2016 ರಂದು ಮದ್ಯಾಹ್ನ 02 ಗಂಟೆ ಸುಮಾರಿಗೆ ನನ್ನ ಗಂಡ ಮಲ್ಲಿನಾಥನು ಬೇಜಾರದಿಂದಲೆ ಹೊಲಕ್ಕೆ ಹೋಗುತ್ತೇನೆ ಅಂತಾ ಮನೆಯಿಂದ ಹೋಗಿದ್ದು. ಮಧ್ಯಾನ್ನ 3 ಗಂಟೆ ಸುಮಾರಿಗೆ ಸಿದ್ರಾಮಪ್ಪಾ ತಂದೆ ಶಿವರುದ್ರ ಕೋರೆ ಅವರು ನಮ್ಮ ಮನೆಗೆ ಬಂದು ನಮ್ಮ ಹೊಲದಲ್ಲಿ ನನ್ನ ಗಂಡ ಮಲ್ಲಿನಾಥ ಇವರು ನೇಣುಹಾಕಿಕೊಂಡು ಮೃತಪಟ್ಟಿರುವ ಬಗ್ಗೆ ತಿಳಿಸಿದಾಗ ನಾನು ಹಾಗೂ ಗ್ರಾಮದ ಜನರು ಹೊಲಕ್ಕೆ ಹೋಗಿ ನೋಡಲು ನನ್ನ ಗಂಡನು ತನಗಾದ ಸಾಲ ಹೇಗೆ ತಿರಿಸುವದು ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನಮ್ಮ ಹೊಲದಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು. ಮುಂದಿನ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

28 November 2016

KALABURAGI DISTRICT REPORTED CRIME

ಹಲ್ಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ :- ದಿನಾಂಕ 27/11/2016 ರಂದು ಶ್ರೀಮತಿ ಫಾಕಿಜಾ ಬೇಗಂ ಗಂಡ ಅಲಿಮುರ್ತುಜಾ ಮುಲ್ಲಾ ಸಾ:ಟಾಕಳಿ ಇವರು ಠಾಣೆಗೆ ಹಾಜರಾಗಿ ತನ್ನ ಗಂಡನ ಹೆಸರಿಗೆ 13.5 ಎಕರೆ ಜಮೀನು ಇದ್ದು ಗಂಡ ಅಲಿಮುರ್ತುಜಾರವರು  ಎರಡು ತಿಂಗಳ ಹಿಂದೆ ಮೃತಪಟ್ಟಿದ್ದು  ನನ್ನ ಗಂಡನ ಅಣ್ಣ ತಮ್ಮಂದಿರಾದ 1)ಮೀಟ್ಟುಸಾಬ ತಂದೆ ಮಹಿಬೂಬಸಾಬ ಮುಲ್ಲಾ 2) ಶಮಿಶೊದ್ದೀನ ತಂದೆ ಮಹಿಬೂಬಸಾಬ ಮುಲ್ಲಾ 3) ಅಬ್ದುಲಗನಿ ತಂದೆ ಮಹಿಬೂಬಸಾಬ ಮುಲ್ಲಾ ಹಾಗು ನಮ್ಮ ಅತ್ತೆಯಾದ 4)ರಾಬನಬೀ ಗಂಡ ಮಹಿಬೂಬಸಾಬ ಮುಲ್ಲಾ  ಇವರು ನನ್ನ ಗಂಡ ಹೆಸರಿನಲಿದ್ದ ಹೊಲದಲ್ಲಿ ತಮಗೊ ಪಾಲು ಬೇಕೆಂದು ನನ್ನ ಸಂಗಡ ಜಗಳ ಮಾಡುತ್ತಾ ಬಂದಿದ್ದು. ದಿನಾಂಕ 25/11/2016 ರಂದು ಬೆಳಿಗ್ಗೆ ನಾನು ಅಫಜಲಪೂರ ತಹಸೀಲ ಕಾರ್ಯಾಲಯ ಕ್ಕೆ ಬಂದು  ನನ್ನ ಗಂಡನ ಹೆಸರಿನಲಿದ್ದ ಹೊಲ ನನ್ನ ಹೆಸರಿಗೆ ಮಾಡಿಕೊಳ್ಳುವ ಕೆಲಸ ಮುಗಿಸಿಕೊಂಡು ಸಾಯಂಕಾಲ ಮರಳಿ  ಊರಿಗೆ ಹೋಗುವ ಸಲುವಾಗಿ ಅಫಜಲಪೂರದ ತಹಸಿಲ ಕಾರ್ಯಾಲಯದ ಮುಂದೆ ಬರುತಿದ್ದಾಗ ನನ್ನ ಗಂಡನ ಅಣ್ಣತಮ್ಮಂದಿರಾದ 1)ಮೀಟ್ಟುಸಾಬ ತಂದೆ ಮಹಿಬೂಬಸಾಬ ಮುಲ್ಲಾ 2) ಶಮಿಶೊದ್ದೀನ ತಂದೆ ಮಹಿಬೂಬಸಾಬ ಮುಲ್ಲಾ 3) ಅಬ್ದುಲಗನಿ ತಂದೆ ಮಹಿಬೂಬಸಾಬ ಮುಲ್ಲಾ ಹಾಗು ನಮ್ಮ ಅತ್ತೆಯಾದ 4)ರಾಬನಬೀ ಗಂಡ ಮಹಿಬೂಬಸಾಬ ಮುಲ್ಲಾ ಇವರು ಎದುರಿಗೆ ಬಂದು ನನಗೆ  ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ  ಹೊಲದಲ್ಲಿ ನಮಗೂ ಪಾಲ ಬರುತ್ತೆ ನಿನಗ ಖಲಾಸ ಮಾಡ್ತಿವಿ ಅನ್ನುತ್ತಾ ಮಿಟ್ಟುಸಾಬ , ಶಮಿಶೋದ್ದೀನ, ಅಬ್ದುಲಗನಿ ಇವರು ನನ್ನ ತೆಲೆ ಕೂದಲು ಹಿಡಿದು ಎಳೆದಾಡಿ ಕೇಳಗೆ ಕೆಡವಿ ತಮ್ಮ ಕಾಲಿನಿಂದ ನನ್ನ ಹೊಟ್ಟೆಗೆ ತಲೆಗೆ ಒದ್ದಿದ್ದು, ನಂತರ ಅಲ್ಲಿಯ ಜನ ಬಿಡಿಸಿರುತ್ತಾರೆ. ಸದರಿಯವರು ನನ್ನ ಹೊಟ್ಟೆಗೆ ತಲೆಗೆ ಒದ್ದಿದ್ದರಿಂದ ಒಳಪೆಟ್ಟಾಗಿದ್ದು.  ನನ್ನ ಗಂಡನ ಅಣ್ಣತಮ್ಮಂದಿರಾದ 1)ಮೀಟ್ಟುಸಾಬ ತಂದೆ ಮಹಿಬೂಬಸಾಬ ಮುಲ್ಲಾ 2) ಶಮಿಶೊದ್ದೀನ ತಂದೆ ಮಹಿಬೂಬಸಾಬ ಮುಲ್ಲಾ 3) ಅಬ್ದುಲಗನಿ ತಂದೆ ಮಹಿಬೂಬಸಾಬ ಮುಲ್ಲಾ ಹಾಗು ನಮ್ಮ ಅತ್ತೆಯಾದ 4)ರಾಬನಬೀ ಗಂಡ ಮಹಿಬೂಬಸಾಬ ಮುಲ್ಲಾ ಇವರು ನನ್ನ ಗಂಡನ ಆಸ್ತಿಯಲ್ಲಿ ಪಾಲ ಬೇಕೆಂದು ನನ್ನೊಂದಿಗೆ ಜಗಳ ತಗೆದು ನನಗೆ ತಡೆದು ನಿಲ್ಲಿಸಿ ಕುದಲು ಹಿಡಿದು ಜಗ್ಗಿ ಕಾಲಿನಿಂದ ಒದ್ದು ಅವಮಾನ ಮಾಡಿ ಜೀವ ಬೇದರಿಕೆ ಹಾಕಿದವರ ಮೇಲೆ ಕಾನೂನಿನ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳು ಸಾಗಾಟ ಪ್ರಕರಣ :
ಶಹಾಬಾದ ಪೊಲೀಸ್ ಠಾಣೆ: ದಿನಾಂಕಃ27.11.2016 ರಂದು ಪಿ.ಐ ಶಹಾಬಾದ ರವರು ಠಾಣೆಯ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊನಗುಂಟಾ ಗ್ರಾಮದ ಕಾಗಿಣಾ ನದಿ ಹತ್ತಿರ ದಾಳಿ ಮಾಡಿ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಾಟ ಮಾಡುತ್ತಿದ್ದ ಟಿಪ್ಪರ  ನಂ ಎಮ್.ಹೆಚ್.-06 ಎಕ್ಯೂ-546,  ಟಿಪ್ಪರ್ ಲಾರಿ ನಂಬರ್ - ಕೆ ಎ 32 ಸಿ 4533 , ಟಿಪ್ಪರ ನಂಬರ ಕೆ.ಎ. 32 ಸಿ 3331 ನೇದ್ದರಲ್ಲಿದ್ದ ಮರಳನ್ನು ಜಪ್ತಿ ಮಾಡಿ ಲಾರಿ  ಚಾಲಕ ಮತ್ತು ಮಾಲೀಕರ ಮೇಲೆ ಶಹಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ :    ದಿನಾಂಕ: 27/11/2016 ರಂದು ಶ್ರೀಮತಿ ಗಾಯತ್ರಿ ಗಂ. ಈರಬಸಪ್ಪ ಪತ್ತಾರ ಸಾ:ನೆಲೋಗಿ ಇವರು ಠಾಣೆಗೆ ಹಾಜರಾಗಿ ನ್ನ ಗಂಡ ಈರಬಸಪ್ಪ ಈತನು ಸೋನ್ನ ಆಸ್ಪತ್ರೆಯಲ್ಲಿ ಪಶು ವೈದ್ಯಾಧಿಕಾರಿ ಅಂತ ಕೆಲಸ ಮಾಡುತ್ತಿದ್ದು ಇಂದು ದಿನಾಂಕ: 27/11/2016 ರಂದು ಮುಂಜಾನೆ 10:00 ಗಂಟೆ ಸುಮಾರಿಗೆ ಮನೆಯಿಂದ ಅವರು ಕೆಲಸ ಮಾಡುತ್ತಿದ್ದ ಸೊನ್ನ ಗ್ರಾಮಕ್ಕೆ ಹೋಗಿ ನಂತರ ಜೇವರ್ಗಿ ಆಸ್ಪತ್ರೆಗೆ ಹೋಗಿ ಔಷಧ ತಗೆದುಕೊಂಡು ಜೇವರ್ಗಿ ಕಡೆಯಿಂದ ತನ್ನ ಸೈಕಲ ಮೋಟರ ನಂ: ಕೆಎ 32-ಎಸ್-4196 ಮೇಲೆ ಬರುತ್ತಿದ್ದಾಗ ಹರವಾಳ ಕ್ರಾಸ ಹತ್ತಿರ ಸಿಂದಗಿ ಕಡೆಯಿಂದ ಬರುತ್ತಿದ್ದ ಲಾರಿ ನಂ ಕೆಎ 32- ಸಿ-5260 ನೇದ್ದರ ಚಾಲಕನು ತನ್ನ ಲಾರಿವನ್ನು ಅತೀ ವೇಗ ಹಾಗೂ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ನನ್ನ ಗಂಡನ ಸೈಕಲ ಮೋಟರಕ್ಕೆ ಅಪಘಾತ ಪಡಿಸಿದ್ದರಿಂದ ನನ್ನ ಗಂಡನ  ತಲೆಯ ಹಿಂಬಾಗಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮಥಪಟ್ಟಿದ್ದು ಸದರಿ ಲಾರಿ ಚಾಲಕನ ಮೇಲೆ ಕಾನೂನಿನ ಕ್ರಮ ಜರಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:

ಜೇವರ್ಗಿ ಪೊಲೀಸ್ ಠಾಣೆ: ದಿನಾಂಕ 27.11.2016 ರಂದು ಶ್ರೀ ಅಬ್ದುಲ ರಜಾಕ ತಂದೆ ಲಾಲಅಹ್ಮದಿನ್ ಗಾಣಿಗೆರ ಸಾ: ಕಟ್ಟಿಸಂಗಾವಿ ಬೀಮಾ ಬ್ರಡ್ಜ ಠಾಣೆಗೆ ಹಾಜರಾಗಿ. ದಿ: 21.11.16 ರಂದು ಮದ್ಯಾಹ್ನ ನಾನು ಮತ್ತು ನನ್ನ ಮಗ ರಹಿಮಾನ ಇಬ್ಬರು ಹೊಟೆಲದಲ್ಲಿ ಕೆಲಸ ಮಾಡುತ್ತಿರುವಾಗ. ನನ್ನ ಮಗ ರಹಿಮಾನನು ಕಿರಾಣಿ ಸಾಮಾನುಗಳು ತೆಗೆದುಕೊಂಡು ಬರುವ ಕುರಿತು ನಮ್ಮ ಮೋಟಾರ ಸೈಕಲ ನಂ ಕೆಎ-32-ಇ.ಎಮ್-3990 ನೇದ್ದರ ಆತನ ಸ್ನೇಹಿತ ನಾಗರಾಜನ ನೊಂದಿಗೆ ಮೇಲೆ ಜೇವರ್ಗಿಗೆ ಹೋಗುವಾಗ ನಾಗರಾಜನು ಮೋ.ಸೈಕಲ್ ಚಲಾಯಿಸುತ್ತಾ  ಮಹ್ಮದಿಯ ದಾರೂಲಮ ಶಾಲೆ ಹತ್ತಿರ ಮೋ.ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಯತ್ತಾ ಒಮ್ಮಲೇ ಕಟ್ ಹೊಡೆದಾಗ ನನ್ನ ಮಗ ಮೋಟಾರ ಸೈಕಲ್ ಮೇಲಿಂದ ಕೆಳಗೆ ಬಿದ್ದು ಎಡಗಾಲ ಮತ್ತು ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ, ಬಲಗೈ ರಟ್ಟಿ ಹತ್ತಿರ ಭಾರಿ ರಕ್ತಗಾಯವಾಗಿ ಅಲ್ಲಲ್ಲಿ ತರಚಿದ ಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಈಗ ನನ್ನ ಮಗನು ಸ್ವಲ್ಪ ಚೇತರಿಸಿಕೊಂಡಿದ್ದು ಈಗ ನಾನು ತಡವಾಗಿ ಇಂದು ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು. ಮೇಲೆ ನಮೂದಿಸಿದ ನಾಗರಾಜನು ಮೊಟಾರ ಸೈಕಲ ನಂ ಕೆಎ-32-ಇ.ಎಮ್-3990 ನೇದ್ದರ ಹಿಂದೆ ನನ್ನ ಮಗನಿಗೆ ಕೂಡಿಸಿಕೊಂಡು ಮೊಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಒಮ್ಮಲೇ ಕಟ್ಟು ಹೊಡೆದುದಕ್ಕೆ ಈ ಘಟನೆ ಸಂಬವಿಸಿದ್ದು ಅವನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

25 November 2016

KALABURAGI DIST PRESS NOTE

BB ¥ÀwæPÁ ¥ÀæPÀluÉ BB 

 PÉÆ¯É ¥ÀæPÀgÀt gÀºÀ¸Àå §AiÀÄ®Ä, 2 d£ÀgÀ §AzsÀ£À, 
       ¢£ÁAPÀ 18/9/2016 gÀAzÀÄ ¨É½UÉÎ 9-30 UÀAmÉUÉ ¦üAiÀiÁ𢠲æÃ.«ÄxÀÄ£À vÀAzÉ ¥ÀgÀ±ÀÄgÁªÀÄ ZÀªÁít, ¸Á: ¥Àæ±ÁAvÀ £ÀUÀgÀ (©) PÀ®§ÄgÀV EªÀgÀÄ «±Àé«zÁå®AiÀÄ ¥ÉưøÀ oÁuÉUÉ ºÁdgÁV ¦üAiÀiÁð¢ zÀÆgÀ£ÀÄß ¸À°è¹zÀÄÝ, ¸ÁgÁA±ÀªÉãÉAzÀgÉ, vÀ£Àß vÀªÀÄä£ÁzÀ gÁºÀÄ® vÀAzÉ ¥ÀgÀ±ÀÄgÁªÀÄ ZÀªÁít, ªÀAiÀÄ: 26, G: «zÁåyð eÁw: ®A¨Át ¸Á: ¥Àæ±ÁAvÀ £ÀUÀgÀ (©) PÀ®§ÄgÀV EvÀ£À£ÀÄß ¢£ÁAPÀ: 17.09.2016 gÀAzÀÄ ¸ÁAiÀÄAPÁ® 7:00 UÀAmɬÄAzÀ EAzÀÄ ¢£ÁAPÀ:18.09.2016 gÀAzÀÄ ¨É½UÉÎ 7:00 UÀAmÉAiÀÄ ªÀÄzÀåzÀ°è ¹¢Ý¦æAiÀiÁ ºÉÆÃl®£À »AzÀÄUÀqÉ ªÉĺÀvÁ ¯ÉÃOl£À°è AiÀiÁgÉÆà zÀĵÀÌ«ÄðUÀ¼ÀÄ AiÀiÁªÀÅzÉÆà GzÉÝñÀPÁÌV ªÀiÁgÀPÁ¸ÀÛçUÀ½AzÀ JzÉUÉ ºÉÆqÉzÀÄ PÀÄwÛUÉ PÉƬÄzÀÄ PÉÆ¯É ªÀiÁr ±ÀªÀ ©¸ÁQgÀÄvÁÛgÉ CAvÁ ªÀUÉÊgÉ ¦üAiÀiÁ𢠪ÉÄðAzÀ ²æ f.J¸ï gÁWÀªÉÃAzÀæ ¦.J¸ï.L gÀªÀgÀÄ ¥ÀæPÀgÀt zÁR°¹PÉÆAqÀÄ ªÀÄÄA¢£À vÀ¤SÉUÁV ²æà eÉ.ºÉZï.E£ÁªÀizÁgÀ ¹¦L JA.© £ÀUÀgÀ ¥ÉÆ°Ã¸ï ªÀÈvÀÛ gÀªÀjUÉ ªÀ»¹zÀÄÝ EgÀÄvÀÛzÉ.

      F ¥ÀæPÀgÀtªÀ£ÀÄß ¥ÀvÉÛ ªÀiÁqÀ®Ä ²æà «dAiÀÄ CAa r.J¸ï.¦ UÁæ«Ät G¥À-«¨sÁUÀ PÀ®§ÄgÀV gÀªÀgÀ ªÀiÁUÀðzÀ±Àð£ÀzÀ°è  MAzÀÄ vÀ¤SÁ vÀAqÀ gÀa¹ ²æà eÉ. ºÉZï E£ÁªÀÄzÁgÀ ¹¦L JA. © £ÀUÀgÀ ªÀÈvÀÛ PÀ®§ÄgÀV gÀªÀgÀ £ÉÃvÀÈvÀézÀ°è  ²æà f.J¸ï gÁWÀªÉÃAzÀæ ¦.J¸ï.L «±Àé«zÁå®AiÀÄ ¥ÉưøÀ oÁuÉ, ºÁUÀÄ ¹§âA¢AiÀĪÀgÁzÀ ºÉZï.¹gÀªÀgÁzÀ ²æà ZÀAzÀæPÁAvÀ, ±ÀAPÀgÀ, ¦¹ gÀªÀgÁzÀ ªÀÄ°è£ÁxÀ, ©gÀtÚ, ¸ÀįÁÛ£À, ²æñÉÊ®, ªÀÄ£ÉÆÃd, ¸ÀÆAiÀÄðPÁAvÀ, PÁ²£ÁxÀ gÀªÀgÀÄ PÀÆrPÉÆAqÀÄ, ¥ÀgÁj EzÀÝ DgÉÆævÀgÀ §UÉÎ ªÀiÁ»w ¸ÀAUÀæºÀ ºÁUÀÄ ªÉƨÁ¬Ä¯ï PÀgÉUÀ¼À DzsÁgÀzÀ ªÉÄÃ¯É DgÉÆævÀgÀ£ÀÄß ¥ÀvÉÛ ºÀZÀÄѪÀ°è AiÀıÀ¹éAiÀiÁVgÀÄvÁÛgÉ. DgÉÆævÀgÁzÀ 1) zÀ±ÀªÀAvÀ vÀAzÉ §¸ÀªÀgÁd PÀtªÀÄĸÀPÀgÀ ªÀB 27 ªÀµÀð eÁB ¥À.eÁw GB SÁ¸ÀV PÉ®¸À ¸Á// PÀtªÀÄĸÀ vÁ// D¼ÀAzÀ f¯Áè// PÀ®§ÄgÀV ºÁ° ªÀ¹Û ¥Àæ±ÁAvÀ £ÀUÀgÀ (©) PÀ®§ÄgÀV  2) ªÀÄAdÄ£ÁxÀ vÀAzÉ gÀÄPÀäAiÀÄå UÀÄvÉÛzÁgÀ ªÀB 24 ªÀµÀð eÁB F½UÀ GB ®°vÀ UÁqÀð£À ºÉÆÃl®zÀ°è PÉ®¸À ¸Á// dªÀ¼ÀUÁ (eÉ) vÁ// D¼ÀAzÀ f¯Áè// PÀ®§ÄgÀV ºÁ° ªÀ¹Û DAiÀÄð F½UÀ ¸ÀªÀiÁd UÀÄ©â PÁ¯ÉÆä PÀ®§ÄgÀV EªÀgÀ£ÀÄß EAzÀÄ ¢£ÁAPÀ 24/11/2016 gÀAzÀÄ ¨É¼ÀV£À eÁªÀ D¼ÀAzÀ ¥ÀlÖtzÀ°è ªÀ±ÀPÉÌ vÉUÉzÀÄPÉÆArzÀÄÝ EgÀÄvÀÛzÉ. «ZÁgÀuÉ PÁ®PÉÌ DgÉÆæ zÀ±ÀªÀAvÀ EvÀ£ÀÄ PÉƯÉAiÀiÁzÀ gÁºÀÄ® ZÀªÁít EvÀ¤UÉ 4 ®PÀë gÀÆ ¸Á® PÉÆnÖzÀÄÝ ¸Á® ªÀÄgÀ½ PÉÆqÀĪÀAvÉ PÉýzÁUÀ gÁºÀÄ® EvÀ£ÀÄ FUÀ £À£Àß ºÀwÛgÀ ºÀt EgÀĪÀ¢®è ªÀÄvÀÄÛ ¸Á® ªÀÄgÀ½ PÉÆqÀĪÀ¢®è CAvÁ ºÉýzÀÝjAzÀ DgÉÆæ zÀ±ÀªÀAvÀ EvÀ£ÀÄ vÀ£Àß UɼÀAiÀÄ£ÁzÀ ªÀÄAdÄ£ÁxÀ EvÀ¤UÉ ¸ÀAUÀqÀ PÀgÉzÀÄPÉÆAqÀÄ gÁºÀÄ® EvÀ¤UÉ ¹¢Ý ¦æAiÀiÁ ºÉÆÃl® »AzÀÄUÀqÉ PÀgÉzÀÄPÉÆAqÀÄ ºÉÆÃV ºÉÆqɧqÉ ªÀiÁr C°èAzÀ ªÉÆmÁgÀ ¸ÉÊPÀ® ªÉÄÃ¯É PÀÆr¹PÉÆAqÀÄ ªÉÄúÀvÁ ¯ÉÃOlzÀ°è PÀgÉzÀÄPÉÆAqÀÄ ºÉÆÃV ªÀÄAdÄ£ÁxÀ EvÀ£ÀÄ gÁºÀÄ®¤UÉ UÀnÖAiÀiÁV »rzÀÄPÉÆArzÀÄÝ zÀ±ÀªÀAvÀ EvÀ£ÀÄ vÀ£Àß ºÀwÛgÀ EzÀÝ ZÁPÀÄ«¤AzÀ JzÉUÉ ºÁUÀÄ PÀÄwÛUÉ ºÉÆqÉzÀÄ PÉÆ¯É ªÀiÁr ±ÀªÀ ©¸ÁQ ºÉÆÃVgÀÄvÁÛgÉ CAvÁ «ZÁgÀuÉ PÁ®PÉÌ M¦àPÉÆArgÀÄvÁÛgÉ.  

     ¸ÀzÀj ¥ÀæPÀgÀtzÀ°è vÀ¤SÉ PÉÊPÉÆAqÀÄ DgÉÆævÀjAzÀ PÀÈvÀåPÉÌ G¥ÀAiÉÆÃV¹zÀ ZÁPÀÄ d¥ÀÄÛ ¥Àr¹PÉÆArzÀÄÝ EgÀÄvÀÛzÉ. DgÉÆævÀgÀ£ÀÄß £ÁåAiÀiÁAUÀ §AzsÀ£ÀPÉÌ PÀ¼ÀÄ»¹zÀÄÝ DgÉÆævÀgÀ£ÀÄß ¥ÀvÉÛ ªÀiÁr ¥ÀæPÀgÀt ¨sÉâ¹ PÉÆ¯É ªÀiÁrzÀ DgÉÆævÀgÀ£ÀÄß zÀ¸ÀÛVj ªÀiÁqÀĪÀ°è AiÀıÀ¹éAiÀiÁVgÀÄvÁÛgÉ. F vÀ¤SÁ vÀAqÀzÀ ¥ÀvÉÛ PÁAiÀÄðªÀ£ÀÄß ªÀiÁ£Àå ²æà J£ï ±À²PÀĪÀiÁgÀ. IPS f¯Áè ¥ÉÆ°Ã¸ï ªÀjµÁ×¢üPÁjUÀ¼ÀÄ PÀ®§ÄgÀV, ²æà dAiÀÄ¥ÀæPÁ±À, ºÉZÀÄѪÀj ¥ÉưøÀ C¢üÃPÀëPÀgÀÄ, PÀ®§ÄgÀVgÀªÀgÀÄ ±ÁèX¹gÀÄvÁÛgÉ.                  

24 November 2016

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ತೊಡಗಿದವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:23/11/2016 ರಂದು ಸಾಯಂಕಾಲ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬೋರಾಬಾಯಿ ನಗರ ಬಡಾವಣೆಯ ಆದಿ ಜಾಂಬವ ಶಾಲೆ ಮುಂದೆ  ಇಸ್ಪೀಟ್‌ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶ್ರೀ ಸಂಜೀವಕುಮಾರ‌ ಪಿ.ಎಸ್‌‌.ಐ ರಾಘವೇಂದ್ರ ನಗರ ಪೊಲೀಸ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬೋರಾಬಾಯಿ ನಗರದ ಆದಿ ಜಾಂಬವ ಶಾಲೆ ಧರ್ಮಶಾಲೆಯ ಕಂಪೌಂಡ ಮರೆಯಲ್ಲಿ ನಿಂತು ನೋಡಲು ಅಲ್ಲಿ ಖುಲ್ಲಾ ಸ್ಥಳದ  ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ್‌ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಅಂತಾ ಇಸ್ಪೀಟ್‌ ಜೂಜಾಟ ಆಡುತ್ತಿದ್ದು ಖಚಿತ ಪಡಿಸಿಕೊಂಡು ದಾಳಿಮಾಡಿ 4 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿದ್ದು ಅವರು ತಮ್ಮ ತಮ್ಮ ಹೆಸರು 1) ರಾಜು ತಂದೆ ತ್ರೀಮಲರಾವ ತೇಲಂಗಿ ಸಾ:ಬೋರಾಬಾಯಿ ನಗರ ಕಲಬುರಗಿ 2)ಸಂಜುಕುಮಾರ ತಂದೆ ಪರಶುರಾಮ ಹೋಳ್ಕರ ಸಾ:ವಿಜಯ ನಗರ ಕಾಲೋನಿ ಕಲಬುರಗಿ 3) ರಮೇಶ ತಂದೆ ಭೀಮಶಾ ಸಾ:ಬೋರಾಬಾಯಿ ನಗರ ಕಲಬುರಗಿ 4) ಸುಜೀತ ಕುಮಾರ ತಂದೆ ಬಾಬುರಾವ ಗೋಸ್ಲೆ ಸಾ:ಧನಗರಗಲ್ಲಿ ಬ್ರಹ್ಮಪೂರ ಕಲಬುರಗಿ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ ಒಟ್ಟು 4260=00 ರೂ ಮತ್ತು 52  ಇಸ್ಪೇಟ ಎಲೆಗಗಳುನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಶರಣಬಸಪ್ಪಾ ತಂದೆ ಶಂಕರ ಭಾವೇ ಸಾ: ಬೋರಾಬಾಯಿ ನಗರ ಬ್ರಹ್ಮಪೂರ ಕಲಬುರಗಿ ರವರ ತಂದೆಯವರು ಈ ಮೊದಲು ತಹಸೀಲ ಕಾರ್ಯಾಲಯದಲ್ಲಿ ಕಾರಕೂನ (ಪಿವ್ಯೂನ) ಅಂತಾ ಕೆಲಸ ನಿರ್ವಹಿಸುತ್ತಿದ್ದು. ಅವರು ಈ ಒಂದು ವರ್ಷದ ಹಿಂದೆ ನಿವೃತ್ತಿಯಾಗಿರುತ್ತಾರೆ. ನಮ್ಮ ತಂದೆಯವರು ಒಂದು ಟಿವಿಎಸ್‌ ಎಕ್ಸ್‌‌ಲ್ ಸೂಪರ ಹೆವಿ ಡ್ಯೂಟಿ ದ್ವೀ ಚಕ್ರ ವಾಹನ ನಂಬರ ಕೆಎ 32 ಈಡಿ-0331 ಯಿದ್ದು. ಅದನ್ನು ತಮ್ಮ ಕೆಲಸಕ್ಕೆ ಉಪಯೋಗಿಸುತ್ತಾ ಬಂದಿದ್ದು ದಿನಾಂಕ 23/11/2016 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ನಮ್ಮ ತಂದೆಯವರು ಖಾಸಗಿ ಕೆಲಸದ ನಿಮಿತ್ಯ ಉಪ ತಹಸೀಲ್ದಾರ ಕಚೇರಿ ಫರಹತಾಬಾದ ಗ್ರಾಮಕ್ಕೆ ಹೋಗಿ ಬರುವುದಾಗಿ ಹೇಳಿ  ಮನೆಯಿಂದ ತಮ್ಮ ದ್ವೀ ಚಕ್ರವಾಹನದ ಮೇಲೆ ಹೋದರು.ನಂತರ ಮದ್ಯಾಹ್ನ 3:38 ಗಂಟೆಯ ಸುಮಾರಿಗೆ ನಮ್ಮ ತಂದೆಯವರ ಮೋಬೈಲದಿಂದ ನನ್ನ ನಂಬರಿಗೆ ಯಾರೋ ಪೋನ ಮಾಡಿ ತಿಳಿಸಿದೆನೆಂದರೆ ಟಿವಿಎಸ್‌ ಎಕ್ಸ್‌ಲ್‌ ಹೇವಿ ಡ್ಯೂಟಿ ದ್ವೀ ಚಕ್ರ ವಾಹನ ನಂಬರ ಕೆಎ 32 ಈಡಿ-0331 ನೇದ್ದರ ಮೇಲೆ ಇದ್ದವರು ಫರಹತಾಬಾದ ರಿಂಗ ರೋಡ ಹತ್ತಿರ ಬಲಗಡೆ ಊರಲ್ಲಿ ಹೋಗಲು ತಮ್ಮ ವಾಹನ ತಿರುಗಿಸುತ್ತಿದ್ದತೆ ಎದುರಿನಿಂದ ಅಂದರೆ ಜೇವರ್ಗಿ ಕಡೆಯಿಂದ ಒಬ್ಬ ಅಶೋಕ ಲೈಲೆಂಡ್‌ ಮಿನಿ ಗೂಡ್ಸ್‌ ವಾಹನ ನಂಬರ ಕೆಎ 33 ಎ- 2675 ನೇದ್ದರ ಚಾಲಕ ತನ್ನ ವಾಹನ ಅತೀವೇಗದಿಂದ ಹಾಗೂ ಅಲಕ್ಷತನದಿಂದ ಓಡಿಸಿಕೊಂಡು ಬಂದು ನಮ್ಮ ತಂದೆಯ ದ್ವೀಚಕ್ರ ವಾಹನಕ್ಕೆ ಡಿಕ್ಕಿ ಪಡೆಯಿಸಿ ಪಲ್ಟಿಯಾಗಿದ್ದು ಅಫಘಾತ ಮಾಡಿದ್ದಾಗ ಮಿನಿ ಗೂಡ್ಸ್‌ ವಾಹನದ ಹಿಂದೆ ಅತೀವೇಗದಿಂದ ಹಾಗೂ ಅಲಕ್ಷತನದಿಂದ ಬಂದು ನಿಯಂತ್ರಣ ಕಳೆದುಕೊಂಡು ಸದರಿ ಗೂಡ್ಸ್‌ ವಾಹನದ ಹಿಂಭಾಗಕ್ಕೆ ಹುಡೈ ಕ್ರೇಟಾ ಟಿಪಿ ನಂ ಕೆಎ 32 ಟಿಪಿ ನಂ 020131 ಹಾಯಿಸಿ ಬಲಕ್ಕೆ ಡಿಗ್ರಿ ಕಾಲೇಜ ಸೈಡದಲ್ಲಿ ನಿಂತಿದ್ದು.. ಈ ಅಫಘಾತದಲ್ಲಿ ನಿಮ್ಮ ತಂದೆಯವರಿಗೆ ತಲೆಯ ಮೇಲೆ ಭಾರಿ ರಕ್ತಗಾಯ ಬಲಗಾಲಿಗೆ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಂಥಾ ತಿಳಿಸಿದ್ದು ನಾವು ಬಂದು ನೋಡಲಾಗಿ ಮೇಲಿನಂತೆ ಭಾರಿ ರಕ್ತಗಾಯವಾಗಿದ್ದರಿಂದ ಮೃತಪಟ್ಟಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಕಮಲಾಪೂರ ಠಾಣೆ :ಶ್ರೀಮತಿ ಕಲಾವತಿ ಗಂಡ ಬಂಡೇಪ್ಪ ರಾಜೇಶ್ವರ ಸಾ:ಡೊಂಗರಗಾಂವ ತಾ:ಜಿ:ಕಲಬುರಗಿ ರವರ ಗಂಡನಾದ ಬಂಡೇಪ್ಪ ತಂದೆ ಮಾಣಿಕಪ್ಪ ರಾಜೇಶ್ವರ ಇವರು ಸೂಮಾರು ದಿನಗಳಿಂದ ಮಾನಸಿಕವಾಗಿ ಅಶ್ವಸ್ಥನಾಗಿದ್ದು. ಒಬ್ಬಂಟಿಗನಾಗಿ ತಿರುಗಾಡುತ್ತ ಯಾವುದೋ ವಿಷಯದಲ್ಲಿ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡಂತೆ ಇರುತ್ತಿದ್ದು. ಇಂದು ದಿನಾಂಕ:23.11.2016 ರಂದು ಬೆಳಿಗ್ಗೆ 07 ಗಂಟೆಯ ಸೂಮಾರಿಗೆ ನನ್ನ ಗಂಡನು ನಮ್ಮ ಹೋಲದಲ್ಲಿ ಬೆಳೆದ ತೋಗರಿ ಬೆಳೆಗೆ ಹುಳ ಬಂದಿವೆ ಹೋಗಿನೋಡಿಕೊಂಡು ಬರುತ್ತೇನೆ ಅಂತಾ ಹೇಳಿ ಹೋಗಿದ್ದು. ಮದ್ಯಾಹ್ನ 12 ಗಂಟೆಯ ಸೂಮಾರಿಗೆ ಡೊಂಗರಗಾಂವ ಸೀಮಾಂತರದ ನಮ್ಮ ಹೋಲದ ಪಕ್ಕದಲ್ಲಿರುವ ಶ್ರೀ ರೇವಣಸಿದ್ದಪ್ಪ ರಾಂಪೂರೆ ಇವರ ಹೋಲದ ಬಂದಾರಿಯಲ್ಲಿ ಬೆವಿನ ಮರಕ್ಕೆ ಕಬ್ಬಿಣದ ತಂತಿ ಕಟ್ಟಿ ಆ ತಂತಿಗೆ ಟವಾಲ ಸುತ್ತಿಕೊಂಡು ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ 22-11-2016 ರಂದು  ಜೇವರಗಿ ಠಾಣಾ ವ್ಯಾಪ್ತಿಯ ಕೋಳಕೂರ ಗ್ರಾಮದ ಸಿದ್ದ ಬಸವೇಶ್ವರ ದೇವರ ಗುಡಿಯ ಹತ್ತಿರ ಖುಲ್ಲಾ ಜಾಗೆಯಲ್ಲಿ ಇಬ್ಬರು ಜನರು ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ಶ್ರೀ ನಾಗಬೂಷಣ ಎ.ಎಸ್.ಐ ಜೇವರಗಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೋಳಕೂರ ಗ್ರಾಮಕ್ಕೆ ಹೋಗಿ ಬಾತ್ಮಿ ಇರುವ  ಜಾಗ ಸ್ವಲ್ಪ ದೂರ ಗುಡಿಯ ಗೊಡೆಯ ಮರೆಯಾಗಿ ನಿಂತು ನೋಡಲು ಸಿದ್ದಬಸವೇಶ್ವರ ಗುಡಿಯ ಪಕ್ಕದ ಸಾರ್ವಜನಿಕ ರಸ್ತೆ ಮೇಲೆ ಇಬ್ಬರು ಮನುಷ್ಯರು ಹೋಗಿ ಬರುವ ಸಾರ್ವನಿಕರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುವದಾಗಿ ಹೇಳಿ ಅವರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದು ಕೊಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನಿಗೆ ಹೆಸರು ವಿಳಾಸ ಕೇಳಲು ಅವನು ತನ್ನ ಹೆಸರು ಸಿದ್ದಣ್ಣ ತಂದೆ ಶಿವಲಿಂಗಪ್ಪ ಕೂಡಿ ಸಾ: ಕೋಳಕೂರ ತಾ: ಜೇವರಗಿ ಅಂತ ಹೇಳಿದನು. ಅವನಿಗೆ ಅಂಗ ಶೋಧ ಮಾಡಲು ಅವನ ಹತ್ತಿರ ನಗದು ಹಣ 6,200=00 ರೂಪಾಯಿ ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು , ಒಂದು ಮೊಬೈಲ, ಒಂದು ಟಿ.ವ್ಹಿ.ಎಸ್ ಎಕ್ಸ ಎಲ್ ಮೊಟಾರ ಸೈಕಲ ನಂ ಕೆಎ-32-ಇ.ಎಮ್-4317 ಅ.ಕಿ 15,000/-ರೂ ಸಿಕ್ಕಿದು ಇನ್ನೊಬ್ಬನನ್ನು ವಿಚಾರಿಸಲು ಮಹಬೂಬಸಾಬ ತಂದೆ ಖಾಜಾಸಾಬ ಬುರಾನ ಸಾ: ಕೋಳಕೂರ ಅಂತಾ ತಿಳಿಸಿದ್ದು ಅವನ ಹತ್ತಿರ ನಗದು ಹಣ 5110=00 ರೂ ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು, ಒಂದು ಮೋಬೈಲ, ಅವರಿಗೆ ಮಟಾಕ ಚೀಟಿ ಮತ್ತು ಹಣ ಯಾರಿಗೆ ಕೊಡುವ ಬಗ್ಗೆ ಕೇಳಿದಾಗ ಅವರು ಅಪ್ಪಾಸಾಬ ತಂದೆ ಅಯ್ಯಪ್ಪ ಜಾತಿ: ಲಿಂಗಾಯತ ಸಾ: ಅವರಾದ ತಾ: ಕಲಬುರಗಿ ಅಂತ ಹೇಳಿದರು. ಅವರ ಹತ್ತಿರ  ಜಪ್ತ ಮಾಡಿದ ವಸ್ತುಗಳು  ಹೀಗೆ ಒಟ್ಟು ನಗದು ಹಣ 11,310=00 ರೂ, ಎರಡು ಬಾಲ ಪೆನ್ನು, ಎರಡು ಮಟಕಾ ಚೀಟಿಗಳು, ಒಂದು ಮೊಟಾರ ಸೈಕಲ, ಎರಡು ಮೊಬೈಲ ಫೋನ ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

22 November 2016

Kalaburagi District Press Note

ಪತ್ರಿಕಾ ಪ್ರಕರಟಣೆ
                 ದಿನಾಂಕ:21.11.2016 ರಂದು ಫಿರ್ಯಾದಿ ಶ್ರೀ ರಾಜಶೇಖರ ತಂದೆ ದೇವಿಂದ್ರಪ್ಪ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಅರ್ಜಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕ: 20.11.2016 ರಂದು ಎಂದಿನಂತೆ ಶನಿವಾರ ಸಾಯಂಕಾಲ 06:30 ಗಂಟೆಗೆ ಸಂಗೀತ ಪಾಠಕ್ಕಾಗಿ ನನ್ನ 3 ಜನ ಮಕ್ಕಳು ಮತ್ತು ಓಣಿಯಲ್ಲಿರುವ ಮಕ್ಕಳು ಕೂಡಿಕೊಂಡು ಸಾಯಿ ಮಂದಿರಕ್ಕೆ ಹೋಗಿದ್ದು ಇರುತ್ತದೆ. ಸಾಯಂಕಾಲ 07:30 ಗಂಟೆ ಸುಮಾರಿಗೆ ನಮ್ಮ ಪಕ್ಕದ ಮನೆಯ ಹುಡುಗನಾದ ಶಶಿಕಾಂತ ಇವರ ತಾಯಿಯವರಾದ ಜಗದೇವಿ ಇವರು ನಮ್ಮ ಮನೆಗೆ ಫೋನಮಾಡಿ ತಿಳಿಸಿದ್ದೆನೆಂದರೆ,  ಸಾಯಂಕಾಲ 07:00 ಗಂಟೆಗೆ ನಮ್ಮ ಮಗ ಶಶಿಕಾಂತ ಮತ್ತು ನಿಮ್ಮ ಮಗ ದೇವಕುಮಾರ ಇಬ್ಬರು ಕೂಡಿ ಸಂಗೀತ ಪಾಠಕ್ಕೆ ಹೋಗುತ್ತಿರುವಾಗ ಸಾಯಿ ಮಂದಿರ ಹತ್ತಿರ ಹೋಗುತ್ತಿದ್ದಂತೆ ಒಂದು ಆಟೋ ಬಂದಿದ್ದು, ಅದರಲ್ಲಿದ್ದ ಆಟೋ ಚಾಲಕ ಮತ್ತು ಆಟೋದಲ್ಲಿ ಕುಳಿತಿದ್ದ 3 ಜನರು ನಿಮ್ಮ ಹುಡುಗನಿಗೆ ಧನ್ವಂತರಿ ಆಸ್ಪತ್ರೆ ತೋರಿಸುವಂತೆ ಹೇಳಿ ಅವನನ್ನು ಆಟೋದಲ್ಲಿ ಕೂಡಿಸಿಕೊಂಡು ಹೋಗಿರುತ್ತಾರೆ ಇಲ್ಲಿಯ ವರೆಗೆ ದೇವಕುಮಾರ ಈತನು ಮರಳಿ ಬಂದಿರುವುದಿಲ್ಲ ಅಂತ ನನ್ನ ಮಗ ಶಶಿಕಾಂತ ತಿಳಿಸಿರುತ್ತಾನೆ ಅಂತ ಅವರು ನಮ್ಮ ಮನೆಗೆ ಫೋನಮಾಡಿ ವಿಷಯನ್ನು ತಿಳಿಸಿರುತ್ತಾರೆ.  ವಿಷಯನ್ನು ತಿಳಿದು ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಡಿ ಗಾಭರಿಯಾಗಿ ಸಾಯಿ ಮಂದಿರ ಹತ್ತಿರ ಧನ್ವಂತರಿ ಆಸ್ಪತ್ರೆ ಹತ್ತಿರ ಹೋಗಿ ನೋಡಲು ನಮ್ಮ ಮಗನು ಪತ್ತೆಯಾಗಿರುವುದಿಲ್ಲ. ಯಾರೋ ಅಪರಿಚಿತ 4 ಜನರು ನಿನ್ನೆ 07:00 ಪಿ.ಎಂ.ಕ್ಕೆ ನಮ್ಮ ಮಗನನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ.  ಮಗನನ್ನು ಅಪಹರಣ ಮಾಡಿಕೊಂಡು ಹೋದವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿ  ಮಗನನ್ನು ಪತ್ತೆಮಾಡಿಕೊಡಲು  ನೀಡಿದ ಮೇಲಿಂದ   ಅಶೋಕ ನಗರ ಪೊಲೀಸ  ಠಾಣೆ ಗುನ್ನೆ ನಂ. 254/2016 ಕಲಂ 363 ಐ.ಪಿ.ಸಿ.ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
             ದಿನಾಂಕ:21.11.2016 ರಂದು ಅಪಹರಣಕಾರರು ಫಿರ್ಯಾದಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ಮಗನನ್ನು ಬಿಡುಗಡೆ ಮಾಡುವ ಸಂಬಂಧ ರೂ. 20,00,000/- ಲಕ್ಷಗಳನ್ನು ನೀಡುವಂತೆ ಬೇಡಿಕೆ ಇಟ್ಟಿರುವದರಿಂದ  ಈ ಪ್ರಕರಣವನ್ನು  ಮಾನ್ಯ ಎಸ್.ಪಿ ಸಾಹೇಬರು ಗಂಭಿರವಾಗಿ ಪರಿಗಣಿಸಿ ಅಪಹಣಕಾರಿಂದ ಅಪಹರಣಕ್ಕೆ ಒಳಗಾದ ಮಗುವನ್ನು ರಕ್ಷಿಸುವ ಸಲುವಾಗಿ, ಮಾನ್ಯ ಆರಕ್ಷಕ ಅಧೀಕ್ಷಕು ಕಲಬುರಗಿ ಜಿಲ್ಲೆರರವರ ಮಾರ್ಗದರ್ಶನದಲ್ಲಿ, ಮಾನ್ಯ ಡಿ.ಎಸ್.ಪಿ. ಉಪ ವಿಭಾಗ ಕಲಬುರಗಿ ಮತ್ತು ಮಾನ್ಯ ಡಿ.ಎಸ್.ಪಿ. ಡಿ.ಸಿ.ಆರ್.ಬಿ. ಘಟಕ ಕಲಬುರಗಿ ರವರ ನೇತೃತ್ವದಲ್ಲಿ ಮತ್ತು ಪಿ.ಐ. ಅಶೋಕ ನಗರ, ಪಿ.ಐ.  ಚೌಕ, ಸ್ಟೇಷನ ಬಜಾರ, ಪಿ.ಐ. ಬ್ರಹ್ಮಪೂರ, ಪಿ.ಐ ರೋಜಾ, ಪಿ.ಐ. ಟ್ರಾಫೀಕ , ಪಿ..ಎಸ್.ಐ ಮಹಿಳಾ ಪೊಲೀಸ ಠಾಣೆರವರು ಮತ್ತು ಸಿಬ್ಬಂದಿ ಜನರನ್ನು ಕೂಡಿ 8 ತಂಡವನ್ನು ರಚಿಸಿದ್ದು, ತನಿಖಾ ತಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಜನರು ರಾಣಸಪೀರ ದರ್ಗಾ, ಆಶ್ರಯ ಕಾಲನಿ, ಡಬರಾಬಾದ. ಸಿಂದಗಿ, ಮಿಸಬಾ ನಗರ, ಇತ್ಯಾದಿ ಕಡೆ ಸಂಚರಿಸಿ ಸಾರ್ವಜನಿಕರಿಂದ ಹಾಗೂ ಪೊಲೀಸ ಬಾತ್ಮಿದಾರರಿಂದ ಅಪರಾಧಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು,  ಸಾರ್ವಜನಿಕರು ಮತ್ತು ಪೊಲೀಸ ಬಾತ್ಮಿದಾರು ಆರೋಪಿಗಳ ಬಗ್ಗೆ  ನೀಡಿರುವ ಮಾಹಿತಿಯನ್ನು ಆಧರಿಸಿ ಮತ್ತು ಆರೋಪಿತರು ಉಪಯೋಗಿಸಿದ ಮೊಬೈಲ್ ನಂಬರಗಳ ಟಾವರ ಲೊಕೇಶನ ಆಧರಿಸಿ  ದಿನಾಂಕ:21.11.2016 ರಂದು ರಾತ್ರಿ 11:00 ಗಂಟೆಗ ಕಪನೂರ ಇಂಡಸ್ಟ್ರೀಯಲ್ ಏರಿಯಾದ ಕಡೆಗೆ  ಓಡಿ ಹೋಗುತ್ತಿದ್ದಾಗ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ಬೆನ್ನಟ್ಟಿ ಅಪಹರಣಕಾರರಾದ 1)  ಶ್ರೀಧರ  ತಂದೆ ಶಿವಶರಣಪ್ಪ ಸಂಗೋಳಗಿ ಸಾಃ ಪಿ.& ಟಿ ಕಾಲನಿ ಕಲಬುರಗಿ 2) ವಿನೋದ ತಂದೆ  ಅಶೋಕಕೊಟಗಿಸಾಃ ಇಂದಿರಾನಗರ  ಕಲಬುರಗಿ 3)  ವಿಜಯ ತಂದೆ ದಶರಥ ಕೊಟಗಾ ಸಾಃ ಆಶ್ರಯ ಕಾಲನಿ ಕಲಬುರಗಿ 4) ತ್ರೀಮೂರ್ತಿ @ ಮೂರ್ತಿ ತಂದೆ  ಅಪ್ಪಾಸಾಬ  ಅವುಟಿ ಸಾಃ ತ ಸಂಪಿಗೆ ನಗರ ಪಿ& ಟಿ ಕ್ವಾಟರ್ಸ ಕಲಬುರಗಿ ಇವರನ್ನು  ಹೀಡಿದು ಅಪಹರಣಕ್ಕೆ ಒಳಗಾದ ಬಾಲಕ  ದೇವಕುಮಾರ ವಯಃ 12 ವರ್ಷ ಇತನ್ನನು ರಕ್ಷಿಸಿದ್ದು ಇರುತ್ತದೆ. ಈ ಕಾರ್ಯಾಚರಣೆಯಲ್ಲಿ ಮಗುವಿಗೆ ಯಾವುದೇ ರೀತಿಯ ತೊಂದರೆ ಆಗಿರುವುದಿಲ್ಲ. ಮಗುವನ್ನು ಸುರಕ್ಷಿತವಾಗಿ ತಂದೆ-ತಾಯಿಯವರ ಮಡಲಿಗೆ ಒಪ್ಪಿಸಿದ್ದು ಇರುತ್ತದೆ. 
           ಈ ಪ್ರಕರಣವು ಸುಖ್ಯಾಂತ ಕಾಣುವಲ್ಲಿ ಸಾರ್ವಜನಿಕರು, ಪೊಲೀಸ ಬಾತ್ಮಿದಾರರು ಮತ್ತು ಮಾದ್ಯಮದವರುಯ ಸಹಕರಿಸಿದಕ್ಕೆ ಅವರನ್ನು ಮಾನ್ಯ ಎಸ್.ಪಿ ಸಾಹೇಬರು ಕಲಬುರಗಿ ರವರು ಶ್ಲಾಘಿಸಿ  ಧನ್ಯವಾದಗಳನ್ನು  ತಿಳಿಸಿರುತ್ತಾರೆ ಮತ್ತು ತನಿಖಾ ತಂಡದ  ಅಧಿಕಾರಿ ಸಿಬ್ಬಂದಿಯವರಿಗೆ  ಪ್ರಸಂಶಿಸಿರುತ್ತಾರೆ.
            ಮಕ್ಕಳ ಹೆತ್ತವರು ಮತ್ತು ಪಾಲಕರು ಗಾಬರಿಯಾಗದೆ ಎಚ್ಚೆತಕೊಂಡು ಮಕ್ಕಳನ್ನು ಶಾಲೆಗೆ ,  ಟ್ಯೂಷನಗೆ, ಸಂಗಿತ ಶಾಲೆಗೆ ಕಳುಹಿಸುವ ಸಂಧರ್ಭದಲ್ಲಿ ಅಪರಿಚಿತರ ಬಗ್ಗೆ ಎಚ್ಚರಿಕೆ ವಹಿಸಬೇಕು ಹಾಗೂ ಅಪಹರಣ ಮಾಡುವವರು ಕಂಡು ಬಂದರೆ ಕೂಡಲೆ ಪೊಲೀಸ ರಿಗೆ  ತಿಳಿಸಬೇಕು ಎಂದು  ಮಾನ್ಯ ಎಸ್.ಪಿ ಸಾಹೇಬರು ಕಲಬುರಗಿ ರವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿರುತ್ತಾರೆ
ಅಪಘತಾ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಜಂಬಣ್ಣ ತಂದೆ ಶಂಕರೆಪ್ಪ ಅವಂಟಿ ಸಾ: ಅಸ್ಕಿ ತಾ: ಸಿಂದಗಿ ಜಿಲ್ಲಾ ವಿಜಯಪೂರ ರವರು ದಿನಾಂಕ: 21.11.2016 ರಂದು ಮುಂಜಾನೆ ನಮ್ಮ ಸಂಸ್ಥೆಯ ಮಾನೆಂಜರ ರವರು ನನಗೆ ಚಾಲಕ ಅಂತ ಮತ್ತು ಪ್ರಭು ತಂದೆ ದರ್ಮು ಕೋಲಕರ್ ಇವರಿಗೆ ಕಂಡಕ್ಟರ ಅಂತ ನೇಮಿಸಿದ ಪ್ರಕಾರ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ-28-ಎಫ್-2080 ನೇದ್ದನ್ನು ತಗೆದುಕೊಂಡು ವಿಜಯಪೂರದಿಂದ ಪ್ರಯಾಣಿಕರನ್ನು ಕೂಡಿಸಿಕೊಂಡು ಜೇವರಗಿ ಮಾರ್ಗವಾಗಿ ಕಲಬುರಗಿಗೆ ಬರುತ್ತಿದ್ದೇವು. ಮದ್ಯಾಹ್ನ 1.00 ಗಂಟೆ ಸುಮಾರಿಗೆ ಜೇವರಗಿ ಪಟ್ಟಣದ ಹೊರ ವಲಯದಲ್ಲಿರುವ ಬಸ್ ಡಿಪೋ ಹತ್ತಿರ ಹೋಗುತ್ತಿದ್ದಾಗ ನಮ್ಮ ಮುಂದೆ ಅಂದರೆ ಕಲಬುರಗಿ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅವನ ಮುಂದೆ ಬರುತ್ತಿದ್ದ ಡಿಸೆಲ ಟ್ಯಾಂಕರ ಲಾರಿಗೆ ಓವರಟೇಕ ಮಾಡಿ ಆ ಲಾರಿಯ ಮಗ್ಗಲಿಗೆ ಡಿಕ್ಕಿ ಪಡಿಸಿ ನಂತರ ನಮ್ಮ ಬಸ್ಸಿಗೆ ಎದುರಾಗಿ ಡಿಕ್ಕಿ ಪಡಿಸಿ ಬಸ್ ಜಖಂ ಗೊಳಿಸಿದನು. ನಾವು ಕೆಳಗೆ ಇಳಿದು ನೋಡಲು ನಮ್ಮ ಬಸ್ಸಿನ ಮುಂಭಾಗದ ಸೈಡಿನಲ್ಲಿ ಜಖಂಗೊಂಡಿದ್ದು ನನಗೆ ಬಲಗಾಲ ಹತ್ತಿರ ಒಳಪೆಟ್ಟು ಆಗಿರುತ್ತದೆ. ನಮ್ಮ ಕಂಡಕ್ಟರನಿಗೆ ಹಾಗೂ ಪ್ರಯಾಣಿಕರಿಗೆ ಯಾವುದೆ ಗಾಯ ಆಗಿರಲಿಲ್ಲಾ ಟ್ಯಾಂಕರ ಲಾರಿ ಚಾಲಕನಿಗೆ ಮತ್ತು ಕ್ಲೀನರನಿಗೆ ಯಾವುದೇ ಗಾಯ ಆಗಿರಲಿಲ್ಲಾ. ಅವರ ಹೆಸರು ಕೇಳಲು ಚಾಲಕನ ಹೆಸರು ಚಂದ್ರಕಾಂತ ಅಂತ ಕ್ಲೀನರನ ಹೆಸರು ಚಿದಾನಂದ ಅಂತ ಹೇಳಿದರು. ಟ್ಯಾಂಕರ ಲಾರಿ ನಂ ಕೆಎ-32-ಸಿ-4286 ಇತ್ತು. ನಮ್ಮ ಬಸ್ಸಿಗೆ ಮತ್ತು ಟ್ಯಾಂಕರ ಲಾರಿಗೆ ಡಿಕ್ಕಿ ಪಡಿಸಿದ ಲಾರಿ ನಂಬರ ನೋಡಲು ಅದು ಕೆಎ-32-ಬಿ-9332 ಇತ್ತು ಅದರ ಚಾಲಕನಿಗೆ ಹೆಸರು ಕೇಳುಲು ಚಂದ್ರಶೇಖರಯ್ಯಾ ತಂದೆ ಭೀಮಯ್ಯಾ ಸಾ: ಶಹಾಬಾದ ಅಂತ ಹೇಳಿದನು ಅವನು ಕುಡಿದ ಅಮಲಿನಲ್ಲಿದ್ದನು. ಸದರಿ ಚಾಲಕನಿಗೂ ಕೂಡಾ ಠಾಣೆಗೆ ಕರೆದುಕೊಂಡು ಬಂದಿರುತ್ತೇವೆ. ಕಾರಣ ಮೇಲೆ ನಮೂದಿಸಿದ ಲಾರಿ ನಂ ಕೆಎ-32-ಬಿ-9332 ನೇದ್ದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ ಬಸವರಾಜ ತಂದೆ ಮೈಲಾರಿ ನಾಟೀಕರ ವ: 29 ವರ್ಷ ಜಾ: ಕಬ್ಬಲಿಗ ಉ: ಒಕ್ಕಲುತನ ಸಾ: ಮಿಣಜಗಿ  ರವರು  ದಿನಾಂಕ 19/11/16 ರಂದು ಮಧ್ಯಾಹ್ನ ತನ್ನ ಮೋ. ಸೈಕಲ್ ನಂ. ಕೆಎ-32 ಇಡಿ-3321 ನೇದ್ದರ ಹಿಂದೆ ಶ್ರೀಕಾಂತನಿಗೆ ಕೂಡಿಸಿಕೊಂಡು ಕಲಬುರಗಿ ಕಡೆಗೆ ಹೋಗುವಾಗ ನಂದಿಕೂರ  ತಾಂಡಾ ದಾಟಿದಾಗ ಹಿಂದಿನಿಂದ ಕ್ರೂಜರ ಜೀಪ ನಂ. ಕೆಎ-40 ಎಮ್ 0605 ನೇದ್ದರ ಚಾಲಕ ಅತೀ ವೇಗ ಮತ್ತು ಅಲಕ್ಷತನದಿಂದ ಓಡಿಸುತ್ತ ಬಂದು ಸದರಿ ಮೋ. ಸೈ. ಹಿಂದುಗಡೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಸದರಿಯವರಿಗೆ ಗಾಯಗೊಳಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.