POLICE BHAVAN KALABURAGI

POLICE BHAVAN KALABURAGI

27 March 2017

Kalaburagi District Reported Crimes

ಅಪಘಾತ ಪ್ರಕರಣಗಳು :
ವಾಡಿ ಪೊಲೀಸ ಠಾಣೆ : ಶ್ರೀಮತಿ ಶಕುಂತಲಾ ಗಂಡ ಉಮೇಶ ಜೈಕರ ಸಾ: ಕೃಷ್ಟಾ ನಗರ ಕೂಸನೂರ ರೋಡ ಕಲಬುರಗಿ. ರವರ ಗಂಡ ಉಮೇಶ ತಂದೆ ರಾಮದಾಸ ಇವರು  ದಿನಾಂಕ:10/02/2017 ರಂದು ಬೆಳ್ಳಿಗ್ಗೆ ಯಾದಗಿರಗೆ ಹೋಗಿ ಬರುವದಾಗಿ ಹೇಳಿ ತನ್ನ ರಾಯಲ ಎನಪೀಲ್ಡ ಮೊ/ಸೈ ನಂ:ಕೆ.ಎ-32/ಇಎಮ್-5053 ನೇದ್ದರ ಮೇಲೆ ಹೊರಟು ಹೊದರು. ನಂತರ ರಾತ್ರಿ 8.30 ಗಂಟೆಯ ಸುಮಾರು ಯಾರೊ ಒಬ್ಬರೂ ನನ್ನ ಗಂಡನ ಮೊಬೈಲ ದಿಂದ  ನನಗೆ ಪೊನ ಮಾಡಿ ಈ ಮೊಬೈಲ ವ್ಯಕ್ತಿಯ ನಾಲವಾರ ಸ್ಷೇಷನ ಆಚೆಗೆ ಒಂದು ಪರ್ಲಾಂಗ ಅಂತರದ ಯಾದಗಿರ ಕಡೆಗೆ ಹೋಗುವ ರೋಡಿನ ಮೇಲೆ ಬಿದಿದ್ದು ಆತನ ಮುಖಕ್ಕೆ , ಕೈಕಾಲುಗಳಿಗೆ ತರಚಿದ ರಕ್ತಗಾಯವಾಗಿ ತಲೆಗೆ ರಕ್ತಗಾಯವಾಗಿ ಭಾರಿ ಒಳಪೆಟ್ಟಾಗಿದ್ದು  ಸದರಿಯವನಿಗೆ ಅಂಬುಲೇನ್ಸದಲ್ಲಿ ಹಾಕಿ ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಕಳಹಿಸಿಕೊಡಲಗಿದೆ ಅಂತಾ ಹೇಳಿದ್ದು ನಂತರ ನಾನು ಮತ್ತು ನನ್ನ ಅಳಿಯ ಬಸವವೇಶ್ವರ ಆಸ್ಪತ್ರೆಗೆ ಹೋಗಿ ದಾರಿ ಕಾಯುತ್ತಾ ಇದ್ದಾಗ ಅಂಬುಲೇನ್ಸ ಬಂದಿದ್ದು ಅದರಲ್ಲಿದ್ದ ನನ್ನ ಗಂಡನಿಗೆ ನೋಡಿ ಗುರ್ತಿಸಿ ಆತನಿಗೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಉಪಚರಿಸಿಕೊಂಡು ಹೆಚ್ಚಿನ ಉಪಚಾರ ಕುರಿತು ಯುನೈಟೆಡ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ನನ್ನ ಗಂಡನು ಯಾದಗಿರ ದಿಂದ ಕಲಬುರಗಿಗೆ ಬರುವ ಕಾಲಕ್ಕೆ ಮೊ/ಸೈ ನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಸ್ಕೀಡ ಆಗಿ ಬಿದ್ದಿದ್ದರ ಬಹುದು ಅಥವಾ ಯಾವುದೊ ವಾಹನ ಅಥವಾ  ಮೊ/ಸೈ ಡಿಕ್ಕಿ ಪಡಿಸಿ ಹೋಗಿರಬಹುದು ನನ್ನ ಗಂಡನಿಗೆ  ಪ್ರಜ್ಞೇ ಬಂದಾಗ ಅಥವಾ ಯಾರಾದರೂ ಘಟನೆ ನೋಡಿದವರು ಬಂದು ವಿಷಯ ತಿಳಿಸಿದಾಗ ನಿಜ ಸ್ಥೀತಿ ಗೊತ್ತಾಗುತ್ತದೆ  ಅಂತಾ ತಿಳಿಸಿದ್ದು ಗಾಯಾಳು ಉಮೇಶ ತಂದೆ ರಾಮದಾಸ ಜೈಕಾರ ಇತನು ಉಪಚಾರ ಕುರಿತು ಆಸ್ಪತ್ರೆಯಲ್ಲಿ ಸೇರಿಕೆ ಆಗಿ ಉಪಚಾರ ಪಡೆಯುತ್ತಿದ್ದು ಇರುತ್ತದೆ. ನಂತರ ನನ್ನ ಗಂಡ ಉಮೇಶ ಇತನು ಮೊ/ಸೈ ಮೇಲೆ ಯಾದಗಿರ ದಿಂದ ವಾಡಿ ಕಡೆಗೆ ಬರುವ ಕಾಲಕ್ಕೆ ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೊ/ಸೈ ಮೇಲಿಂದ ಬಿದ್ದು ತಲೆಗೆ ಭಾರಿ ಗಾಯವಾಗಿ ಅಲ್ಲದೇ ಮೈಕೈಗೆ ಅಲ್ಲಲ್ಲಿ ಗಾಯವಾಗಿದ್ದು ಉಪಚಾರ ಕುರಿತು ಆಸ್ಪತ್ರೆಯಲ್ಲಿ ದಾಖಲಾಗಿದ್ದು ದಿನಾಂಕ : 16/03/2017  ರಂದು ಕಲಬುರಿಯ ಯುನೈಟೆಡ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಅಲ್ಲಿಂದ ಜಿಲ್ಲಾ ಆಸ್ಪತ್ರೆ ಕಲಬುರಿಯಲ್ಲಿ ಸೇರಿಕೆ ಮಾಡಿ ಅಲ್ಲಿಯೂ ಸಹ ಉಪಚಾರ ಪಡಿಸಿಕೊಂಡು ದಿನಾಂಕ:22/03/2017 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಂಡು ಮನೆಗೆ ತಂದು ಮನೆಯಲ್ಲಿ ಉಪಚರಿಸುವ ಕಾಲಕ್ಕೆ ನಿನ್ನೆ ದಿನಾಂಕ;25/03/2017 ರಂದು ರಾತ್ರಿ 11.00 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಹುಸೇನ ಪಟೇಲ ತಂದೆ ಖಾದರ ಪಟೇಲ ಸಾ: ಮಾತೋಳ್ಳಿ ರವರು ದಿನಾಂಕ 25-03-2017 ರಂದು ನಾನು ಮತ್ತು ನನ್ನ ಕಾಕನ ಮಗನಾದ ಖಾದರಸಪಟೇಲ ತಂದೆ ಹಸನಪಟೇಲ ಇಬ್ಬರು ಕೂಡಿಕೊಂಡು ನಮ್ಮ ಮೋಟಾರ ಸೈಕಲ್ ನಂ  ಕೆಎ-32-.ಜೆ-2041 ನೇದ್ದರ ಮೇಲೆ ಕುಳಿತು ಕೊಂಡು ಖಾಸಗಿ ಕೇಲಸದ ನಿಮಿತ್ಯ ಅಫಜಲಪೂರಕ್ಕೆ ಹೋಗಿ ವಾಪಸ ಮಾತೋಳ್ಳಿ ಕಡೆಗೆ ಬರುತ್ತಿದ್ದೇವು ಮೋಟಾರ ಸೈಕಲ ಖಾದರಪಟೇಲ ನಡೆಸುತ್ತಿದ್ದನು ಸರಸಾಂಬಾ ರವರ ಹೊಲ ದಾಟಿ ಸ್ವಲ್ಪ ಮುಂದೆಕ್ಕೆ ಹೋಗುತ್ತಿದ್ದಾಗ ಹಿಂದೆ ಗಡೆಯಿಂದ ಒಂದು ಬಸ್ಸ ಚಾಲಕನು ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷತನದಿಂದ ಒಮ್ಮೆಲೆ ಬೇಜವಾಬ್ದಾರಿಯಿಂದ ಓವರ ಟೇಕ್ ಮಾಡಲು ಹೋಗಿ ನಮ್ಮ ಮೋಟಾರ ಸೈಕಲಗೆ ಹಿಂದಿನಿಂದ ಡಿಕ್ಕಿ ಪಡೆಸಿದ್ದು ನಾನು ಮತ್ತು ಖಾದರಪಟೇಲ ಕೆಳಗೆ ಬಿದ್ದೇವು ಬಸ್ಸ ಚಾಲಕನು ತನ್ನ ಬಸ್ಸನ್ನು ನಿಲ್ಲಿಸದ ಹಾಗೆ ಓಡಿಸಿಕೊಂಡು ಹೋಗುತ್ತಿರುವಾಗ ಹಿಂದಿನಿಂದ ಅದರ ನಂಬರ ನೋಡಲು ಕೆಎ-32-ಎಫ್-1728 ನೇದ್ದು ಇತ್ತು ನನಗೆ ತಲೆಗೆ ಒಳಪೆಟ್ಟು ಗಾಯವಾಗಿದ್ದು ಖಾದರ ಪಟೇಲನಿಗೆ ತಲೆಗೆ ಭಾರಿ ರಕ್ತ ಪೆಟ್ಟು ಗಾಯವಾಗಿದ್ದು ನಾನು ಹಿಂದುಗಡೆಯಿಂದ ಬರುತ್ತಿದ್ದ ಚಾಂದ ಪಟೇಲ ತಂದೆ ಸೈಯದ ಪಟೇಲ ಕೂಡಿಕೊಂಡು ಅಂಬುಲೇನ್ಸ ನಲ್ಲಿ ಹಾಕಿಕೊಂಡು ಸರಕಾರಿ ದವಾಖಾನೆ ಅಫಜಲಪೂರದಲ್ಲಿ ತೋರಿಸಿ ಹೆಚ್ಚಿನ ಉಪಚಾರ ಕುರಿತು ಯುನೈಟೇಡ್ ಆಸ್ಪತ್ರೆ ಕಲಬುರಗಿಗೆ ಒಯ್ಯೂತ್ತಿರುವಾಗ ಮಾರ್ಗಮಧ್ಯ 6 ಪಿ.ಎಮ್ ಕ್ಕೆ ಖಾದರ ಪಟೇಲ ನಿದನ ಹೊಂದಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಹಳ್ಳೆಪ್ಪ ತಂದೆ ಬೀಮಶ್ಯಾ ದಿವಂಟಗಿ ಸಾ: ಮಂದರವಾಡ ತಾ: ಜೇವರಗಿ ಇವರ ಹೊಲ ಸರ್ವೆ ನಂ 141 ಆಕಾರ 3 ಎಕರೆ ಇರುತ್ತದೆ. ನಮ್ಮ ಹೊಲವು ಬೀಮಾ ನದಿ ದಂಡೆಗೆ ಹತ್ತಿಕೊಂಡು ಇರುತ್ತದೆ. ಈಗ ಸುಮಾರು 6 ತಿಂಗಳಿಂದ ನಮ್ಮೂರ ಮಾಳಪ್ಪ ತಂದೆ ಬಸಪ್ಪ ಪೂಜಾರಿ, ಮುತ್ತಪ್ಪ ತಂದೆ ಶರಣಪ್ಪ ಪೂಜಾರಿ, ಶರಣಪ್ಪ ತಂದೆ ನಿಂಗಪ್ಪ ಪೂಜಾರಿ ಹಾಗೂ  ವಿಜಯಕುಮಾರ ತಂದೆ ಬಾಬುರಾಯ ಪೂಜಾರಿ ಇವರು ಕಳುವಿನಿಂದ ಟ್ರ್ಯಾಕ್ಟರಗಳ ಮೂಲಕ ರಾತ್ರಿ ವೇಳೆಯಲ್ಲಿ ಉಸುಕು ತೆಗೆದುಕೊಂಡು ಹೋಗುವದು ಮಾಡುತ್ತಿದ್ದರು ನಾನು ಮತ್ತು ನನ್ನ ಅಣ್ಣ ನಿಂಗಪ್ಪ ಇಬ್ಬರು ಅವರಿಗೆ ಇಲ್ಲಿಂದ ಉಸುಕು ತೆಗೆದುಕೊಂಡು ಹೋಗ ಬೇಡರಿ ಅಂತ ನಮ್ಮ ಹೊಲ ಹಾಳು ಆಗುತ್ತದೆ ಅಂತ ಸುಮಾರು ಸಲ ಹೇಳಿದರು ಹಾಗೆ ಮಾಡುತ್ತಿದ್ದರು ಅಲ್ಲದೇ ನಮ್ಮ ಸಂಗಡ ತಂಟೆ ತಕರಾರು ಕೂಡಾ ಮಾಡುತ್ತಾ ಬಂದಿರುತ್ತಾರೆ ಆದರೂ ನಾವು ಎಲ್ಲಿ ಆವರ ಸಂಗಡ ಜಗಳ ಮಾಡುವದು ಅಂತ ಸುಮ್ಮನಿದ್ದೇವು. ದಿನಾಂಕ: 24.03.2017 ರಂದು ರಾತ್ರಿ ನಾವು ಮನೆಯಲ್ಲಿದ್ದಾಗ ನನ್ನ ಅಣ್ಣ ನಿಂಗಪ್ಪ ಇತನು ನಮ್ಮ ಹೊಲದ ಕೆಳಗೆ ಇರುವ ಬೀಮಾ ನದಿಯಲ್ಲಿಂದ ನಮ್ಮೂರ ಮಾಳಪ್ಪ ತಂದೆ ಬಸಪ್ಪ ಪೂಜಾರಿ, ಮುತ್ತಪ್ಪ ತಂದೆ ಶರಣಪ್ಪ ಪೂಜಾರಿ, ಶರಣಪ್ಪ ತಂದೆ ನಿಂಗಪ್ಪ ಪೂಜಾರಿ ಹಾಗೂ  ವಿಜಯಕುಮಾರ ತಂದೆ ಬಾಬುರಾಯ ಪೂಜಾರಿ ಉಸುಕು ಟ್ರ್ಯಾಕ್ಟರಗಳಲ್ಲಿ ತುಂಬುತ್ತಿದ್ದಾರೆ ಅಂತ ನಾನು ಹೋಗಿ ಅವರಿಗೆ ತುಂಬುವದು ಬೇಡ ಅಂತ ಹೇಳುತ್ತೇನೆ ಅಂತ ಹೇಳಿ ಹೋದನು. ಅವನು ಹೋದ ಸ್ವಲ್ಪ ಹೊತ್ತಿನಲ್ಲಿ ನಾನು ಮತ್ತು ನನ್ನ ಹೆಂಡತಿ ಜಕ್ಕಮ್ಮ ಇಬರು ಕೂಡಿ ಅಲ್ಲಿಗೆ ಹೊದೆವು. ನಮ್ಮ ಹೊಲದ ಕೆಳಗೆ ನದಿಯ ಪಕ್ಕದಲ್ಲಿ ದಂಡೆಯಲ್ಲಿ ನಮ್ಮೂರ ಮಾಳಪ್ಪ ಪೂಜಾರಿ, ಮುತ್ತಪ್ಪ ಪೂಜಾರಿ, ಶರಣಪ್ಪ ಪೂಜಾರಿ ಹಾಗೂ ವಿಜಯಕುಮಾರ ಪೂಜಾರಿ ಇವರು ನನ್ನ ಅಣ್ಣ ನಿಂಗಪ್ಪನ ಸಂಗಡ ತಕರಾರು ಮಾಡುತ್ತಿದ್ದರು ನಾವು ಅವರಿಗೆ ಯಾಕೆ ಸುಮ್ಮನೆ ತಕರಾರು ಮಾಡುತ್ತಿದ್ದಿರಿ ಅಂತ ಅಂದಿದಕ್ಕೆ ಅವರು ರಂಡಿ ಮಗ ನಿಂಗ್ಯಾ ಮಾದಗ ಸೂಳ್ಯಾ ಮಗನದು ಬಹಳ ಆಗ್ಯಾದ ಊರಲ್ಲಿ ಯಾರು ನಮಗೆ ಕೇಳಲು ಇವನೆ ಬಹಳ ನಮ್ಮ ಸಂಗಡ ಗಂಟ ಬಿದ್ದಾನ ಅಂತ ಬೈದಾಗ ನನ್ನ ಅಣ್ಣ ನಿಂಗಪ್ಪನು ನಿವು ನನಗೆ ಬೈರಿ ಅದರೆ ಜಾತಿ ಎತ್ತಿ ಬೈದರೆ ಸುಮ್ಮನಿರುವದಿಲ್ಲಾ, ಅಂತ ಅಂದಿದಕ್ಕೆ ವಿಜಯಕುಮಾರನು ತನ್ನ ಕೈಯಲ್ಲಿದ್ದ ಸಲಕಿ ತುಂಬಿನಿಂದ ನನ್ನ ಅಣ್ಣನ ತಲೆ ಮೇಲೆ ಮತ್ತು ಬಲಗಾಲ ಮೊಳಕಾಲದ ಮೇಲೆ ಜೋರಾಗಿ ಹೋಡೆದಾಗ ಅವನು ಕೇಳಗೆ ಬಿದ್ದು ಬಿಟ್ಟನು ಆ ಉಳಿದ ಮೂರು ಜನರು ಅವನಿಗೆ ಬಿಡಬ್ಯಾಡ ಹೋಡಿರಿ ಅಂತ ಅನ್ನುತ್ತಿದ್ದಾಗ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿ ನಮ್ಮ ಅಣ್ಣನಿಗೆ ಹೊಡೆಯುವದನ್ನು ಬಿಡಿಸಿದೇನು ನಂತರ ಆ ನಾಲ್ಕು ರಂಡಿ ಮಗನೆ ನಿಂಗ್ಯಾ ಇವತ ಉಳಿದಿದ್ದಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲಾ ಅಂತ ಜೀವದ ಭಯ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.