POLICE BHAVAN KALABURAGI

POLICE BHAVAN KALABURAGI

24 September 2016

Kalaburagi District Reported Crimes

ಆತ್ಮ ಹತ್ಯೆ ಮಾಡಿಕೊಳ್ಳಲು ಪ್ರಚೋದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ನಿಂಗಮ್ಮ ಗಂ ಜಗದೇವಪ್ಪ ಹಚ್ಚಡ ಸಾ: ಕುಮ್ಮನಸಿರಸಗಿ ರವರ ಮಗಳಾದ ವಿಧ್ಯಾಶ್ರೀ ವ: 20 ವರ್ಷ ಇವಳಿಗೆ ಈಗ 11 ತಿಂಗಳುಗಳ ಹಿಂದೆ ಕುಕನೂರ ಗ್ರಾಮದ ಹುಲೆಪ್ಪ ತಂ ಗೊಲ್ಲಾಳಪ್ಪ ರಾಯಗೋಳ ರವರೊಂದಿಗೆ ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿ ಕೊಟ್ಟಿದ್ದು ಹುಲೆಪ್ಪನಿಗೆ 6 ಜನ ಅಣ್ಣತಮ್ಮಂದಿರಿದ್ದು, ಅವರಲ್ಲಿ ನಿಂಗಪ್ಪ ಎಂಬುವನು ತಿರಿಕೊಂಡಿರುತ್ತಾರೆ. ಅರಳಗುಂಡಗಿ ಸಿಮೆಯಲ್ಲಿ ಹುಲೆಪ್ಪನ ಪಿರ್ತಾರ್ಜಿತ ಆಸ್ತಿ ಇದ್ದು, ಅವರಿಗೆ ತಲಾ 7 ಎಕರೆ ಜಮೀನು ಬಂದಿರುತ್ತದೆ ನನ್ನ ಅಳಿಯ ಸ್ವಲ್ಪ ಎತಾರ್ಥನಿದ್ದು, ಅವನ ಹೆಸರಿಗೆ ಇದ್ದ ಆಸ್ತಿಯನ್ನು ಅವರ ತಮ್ಮಂದಿರರಾದ ಬೀಮಣ್ಣ ತಂದೆ ಗೊಲ್ಲಾಳಪ್ಪ, ಮಂಜೂನಾಥ ತಂ ಗೊಲ್ಲಾಳಪ್ಪ , ದೇವಿಂದ್ರ ತಂದೆ ಗೊಲ್ಲಾಳಪ್ಪ ಹಾಗೂ ಹುಲೆಪ್ಪನ ಅಕ್ಕ ಉಮಾಶ್ರೀ ತಂದೆ ಗೊಲ್ಲಾಳಪ್ಪ ರವರು ಹೇಗಾದರೂ ಮಾಡಿ ಆಸ್ತಿ ಹೊಡೆಯಬೇಕಂತ ಆಗಾಗ ಮನೆಯಲ್ಲಿ ಮಾತಾಡುತ್ತಿದ್ದನ್ನು ನನ್ನ ಮಗಳು ವಿಧ್ಯಾಶ್ರೀ ನನ್ನ ಮುಂದೆ ಹೇಳುತ್ತಿದ್ದಳು ಈ ವಿಷಯದ ಬಗ್ಗೆ ನನ್ನ ಮಗಳು ಅವರಿಗೆ ಎದುರು ಮಾತಾಡಿದಕ್ಕೆ ಕಿರುಕುಳ ಕೊಡುತ್ತಾ ಬಂದಿದ್ದು, ನನ್ನ ಮಗಳೂ ಆಗಾಗ ಹೆಳುತ್ತಿದ್ದಳು. ನನ್ನ ಮಗಳು ತಿಳಿದವಳಿದ್ದು, ಹುಲೆಪ್ಪನ ಹೆಸರಿಗಿದ್ದ ಹೊಲವನ್ನು ತನ್ನ ಹೆಸರಿಗೆ ಮಾಡಿಕೊಡಲು ಆಗುವದಿಲ್ಲ ಅದಕ್ಕೆ ನನ್ನ ಮಗಳಿಗೆ ಚಿತ್ರ ಹಿಂಸೆ ಕೊಟ್ಟರೆ ನಮ್ಮ ಮಾತು ಕೇಳುತ್ತಾಳೆ ಅಂತಾ ತಿಳಿದು ಅವಳಿಗೆ ದಿನಾಲು ಕಿರುಕುಳ ಕೊಡುತ್ತಿದ್ದರು. ದಿನಾಂಕ: 22-09-2016 ರಂದು 4 ಪಿ.ಎಂ ಸುಮಾರಿಗೆ ನಮ್ಮ ಸಂಬಂದಿಕನಾದ ಶರಣಪ್ಪ ಉಮ್ಮರಗಿ ರವರು ನನಗೆ ಪೋನ ಮಾಡಿ ನಿಮ್ಮ ಮಗಳು ವಿಧ್ಯಾಶ್ರೀ ತಮ್ಮ ಹೊಲದ ಬಾವಿಯಲ್ಲಿ ಬಿದ್ದು, ಮೃತಪಟ್ಟಿರುತ್ತಾಳೆ ಅಂತಾ ಹೇಳಿದರು. ನಂತರ ನಾನು ಮತ್ತು ನಮ್ಮ ಸಂಬಂದಿಕರಾದ ರಮೇಶ ಉಮಗರಗಿ , ಶಂಕಲಿಂಗ ಮೊರಟಗಿ, ಸಿದ್ದಲಿಂಗಪ್ಪ ಕೋಟೆ ರವರೆಲ್ಲರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ನನ್ನ ಮಗಳ ಶವ ಬಾವಿ ನಿರಿನಿಂದ ಶರಣಪ್ಪ ಉಮ್ಮರಗಿ ಮತ್ತು ರಮೇಶ ಮುದಾದಮ್ಮ ರವರ ಹೊರಗೆ ತೆಗೆದು ತಂಡೆಯ ಮೇಲೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ರವರು ದಿನಾಂಕ:22/09/2016 ರಂದು ಬೇಳಿಗ್ಗೆ 10:00 ಗಂಟೆ ಸುಮಾರಿಗೆ ಎಂದಿನಂತೆ ಮನೆಯಿಂದ ಕುರಿಗಳನ್ನು ತಗೆದುಕೊಂಡು ಕೇಶವ ಕೊರಳ್ಳಿ ಸಾಹುಕಾರರವರ ಹೊಲದ ಕಡೆಗೆ ಮೇಯಿಸಲು ಹೋಗಿದ್ದು ಸದರಿ ಹೊಲವನ್ನು ನಮ್ಮ ಗ್ರಾಮದ ಗುಲಾಬಸಾಬ ಮುಲ್ಲಾರವರು ಹೊಲ ಮಾಡಿದ್ದು ಮದ್ಯಾಹ್ನ 03:00 ಗಂಟೆ ಸುಮಾರಿಗೆ ಅವರ ಹೊಲದ ಬಂದಾರಿ ಹತ್ತಿರ ಕುರಿ ಮೇಯಿಸುತ್ತಿರುವಾಗ ಗುಲಾಬಸಾಬ ಮುಲ್ಲಾರವರ ಮಗನಾದ ಫಕ್ರೋದ್ದಿನ್ ಮುಲ್ಲಾ ಇತನು ನನ್ನ ಹತ್ತಿರ ಬಂದು ನನಗೆ ಮಾತನಾಡಿಸುತ್ತಾ ಒಮ್ಮಲೇ ನನ್ನ ಎರಡು ಕೈಗಳು ಹಿಡಿದು ನೆಲಕ್ಕೆ ನೂಕಿಸಿಕೊಟ್ಟಾಗ ನಾನು ಯಾಕೇ ನನ್ನ ಕೈಹಿಡಿದು ನೆಲಕ್ಕೆ ಕೆಡವಿದಿ ಎಂದು ಚೀರಾಡುತ್ತಿರುವಾಗ ಬಾಯಿಗೆ ಬಟ್ಟೆ ಒತ್ತಿ ಕುತ್ತಿಗೆ ಹಿಡಿದು ಚೀರಾಡಿದರೆ ಜೀವ ಖಲಾಸ ಮಾಡುತ್ತೇನೆ ಅಂತಾ ನನಗೆ ಜಬರದಸ್ತಿಯಿಂದ ಒಂದು ಬಾರಿ ಜಬರಿ ಸಂಭೋಗ ಮಾಡಿರುತ್ತಾನೆ. ನಂತರ ನಾನು ಕೆಡಸಿರುವ ವಿಷಯ ಯಾರಿಗಾದರೂ ತಿಳಿಸಿದರೆ ನಿನಗೆ ಖಲಾಸ ಮಾಡುತ್ತೇನೆ ಅಂದು ಅವನು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ನಾನು ಬೇಹೋಷಾಗಿ ಬಿದ್ದಾಗ ಪಕ್ಕದ ಹೊಲದ ನಾಗಣ್ಣಾ ಪುಜಾರಿ ಆತನ ಹೆಂಡತಿ ಮಲ್ಲಮ್ಮ ಪುಜಾರಿ ಹಾಗು ರವಿ ಕಲಶೇಟ್ಟಿ ರವರು ಬಂದು ನನಗೆ ಎಬ್ಬಿಸಿ ನಮ್ಮ ಮನೆಗೆ ಕರೆದುಕೊಂಡು ಬಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.